tag:blogger.com,1999:blog-5254102750204147054.post6877579482337040749..comments2013-01-25T07:46:37.117+05:30Comments on "ಬೆಂಕಿ ಕಡ್ಡಿ": ದುರ್ಗದ ಕವಿಗೋಷ್ಠಿ ಕೇಳಿ ಬಂದ ಮೇಲೆ.....ಡಿ.ಎಸ್.ರಾಮಸ್ವಾಮಿhttp://www.blogger.com/profile/13181705369161334860noreply@blogger.comBlogger1125tag:blogger.com,1999:blog-5254102750204147054.post-90366606549462859922009-03-16T07:40:00.000+05:302009-03-16T07:40:00.000+05:30ಮಾನ್ಯರೆ, ದುರ್ಗದ ಕವಿಗೋಷ್ಠಿಯ ಲೇಖನ ಚೆನ್ನಾಗಿದೆ. ನನ್ನದ...ಮಾನ್ಯರೆ, ದುರ್ಗದ ಕವಿಗೋಷ್ಠಿಯ ಲೇಖನ ಚೆನ್ನಾಗಿದೆ. ನನ್ನದೂ ಒಂದು ಗೊಣಗಿದೆ. ಅದಕ್ಕೆ ಕವಿತೆ ರೂಪ ಕೊಟ್ಟು ಇಲ್ಲಿಟ್ಟಿದ್ದೇನೆ. ಅನ್ಯಥಾ ತಿಳಿಯದಿರಿ.<BR/>http://bedrebaraha.blogspot.com/<BR/><BR/>ಮರುಹುಟ್ಟು <BR/><BR/>ಕಾವ್ಯ ಸತ್ತುಹೋಗಿದೆ! - ಘೋಷಿಸಿದರು<BR/>ನಾಡಿ ಹಿಡಿದ ನಾಡಿಗರು, ಕಾವ್ಯದ ಡಾಕ್ಟರರು<BR/>ಅಮೃತೋತ್ಸವ ವೇದಿಕೆಯಲ್ಲಿ<BR/>ಅಯ್ಯೋ! ಪ್ರೇತವಾದೆವೆ ನಾವೆಲ್ಲಾ<BR/>ಹಲುಬಿದವನು ವೇದಾತೀರದ ಕವಿ.<BR/>ಬುದ್ಧಿವಂತರ ಮರಡಿಯ ಕಣಿವೆಯಲ್ಲಿಮಲಗಿಸಿ<BR/>ಎತ್ತರೆತ್ತರದ ಸ್ಮಾರಕ ಕಟ್ಟೋಣ<BR/>ಆರಾಧನೆಯಲ್ಲಿ ಕಾವ್ಯಾಂಜಲಿ ಅರ್ಪಿಸೋಣ<BR/>ತೀರ್ಥಕ್ಕೆ ವ್ಯವಸ್ಥೆಯಾಗಿದೆ<BR/>ಪಾಸಾಯಿತು ಠರಾವು<BR/>ವೇದಿಕೆ ಏರಿತು ಜಾತ್ಯತೀತ ಶವಸಂಪುಟ<BR/>ಕಾವ್ಯಪುಷ್ಪಗಳಿಂದ ಸಿಂಗರಿತ ಕಳೇವರ<BR/>ಜಡಿಯಲು ಬಂಗಾರ, ಬೆಳ್ಳಿ, ಪ್ಲಾಟಿನಂ, ಹಿತ್ತಾಳೆ<BR/>ಇಂಗಳದಾಳಿನ ತಾಮ್ರದ ಉದ್ದುದ್ದ ಮೊಳೆಗಳು<BR/>ಕವಿಗೊಂದು ಮೊಳೆ, ಸುದೀರ್ಘ ಜಡಿತ<BR/>ಹುಗಿದುಬಿಡಿ ಬೇಗ, ತಡವಾದೀತು ತೀರ್ಥಕ್ಕೆ<BR/>ಕವಿ, ಕಿವಿ, ಕಾವ್ಯೋದ್ಧಾರಕರ ಅವಸರ<BR/>ಅಯ್ಯಯ್ಯೋ! ಸ್ವಲ್ಪ ತಾಳಿರಪ್ಪ. ಬರಹೇಳಿದ್ದೇವೆ<BR/>ದೂರದೂರದ ಬಂಧು ಬಾಂಧವರೆಲ್ಲರಿಗೆ<BR/>ಕವಿಗಳ ಜೊತೆ ಕಾವಿಗಳೂ ಭೋರಿಟ್ಟರು<BR/>ದಾರದ ಪೌರೋಹಿತ್ಯ, ಭಾರದ ಪಾರುಪತ್ಯ!<BR/>ಯಬ್ಬೇ! ನನ್ನವ್ವಾ! ಇಷ್ಟು ಬೇಗ ಹೊರಟೆಯಲ್ಲೇ<BR/>ಗೋಳಾಡಿದ ಹೂಗೊಂಚಲು ತಂದ ತಾಳ್ಯದಯ್ಯ<BR/>ಮೊಳೆ ಎಬ್ಬಲು ಸಲಾಕೆ ತಂದ ಮುತ್ತೆತ್ತಿರಾಯ!<BR/>ಜಂಗುಳಿಯ ಸರಿಸಿ, ಒಂದೊಂದೇ ಮೊಳೆ ಎಬ್ಬಿಸಿ<BR/>ಪ್ರೀತಿ ಅಮೃತ ಸವರಿ, ತುಟಿ ಹಚ್ಚಿ, ಉಸಿರು ತುಂಬಿ<BR/>ಎದೆ ಭಾರವನಿಳಿಸಿ, ಪುಪ್ಪುಸಗಳ ಒತ್ತಿ, ಅಪ್ಪಿ ಹಿಡಿದೆತ್ತಿ<BR/>ಮರು ಜೀವ ನೀಡಿ ಪವಾಡವನ್ನೇ ಸೃಷ್ಟಿಸಿದ ಶಾಂತೇಶ<BR/>ಕವಿಗೋಷ್ಠಿಯ ಕೂರಂಬು ಸಾಲುಗಳ, ಖಡ್ಗದಾರ್ಭಟಕೆ<BR/>ಬವಳಿಬಂದು ಬಿದ್ದಿದ್ದ ಕಾವ್ಯ ಕನ್ನಿಕೆ ಧಿಗ್ಗನೆದ್ದವಳೇ<BR/>ಧನ್ಯ ಕವಿಯೇ, ಧನ್ಯ. ಹುಗಿದು ಬಿಡುತ್ತಿದ್ದರುನನ್ನನಿವರು,<BR/>ನೀ ಬರುವುದು ಸ್ವಲ್ಪ ತಡವಾಗಿದ್ದರು<BR/>ಹೂಗೊಂಚಲು ಬಿಡಿಸಿ, ಮುಡಿಗೇರಿಸಿ<BR/>ಕಾವ್ಯಾಂಬರದ ರೇಶಿಮೆ ನಡೆಮುಡಿಯ ಮೇಲೆ<BR/>ಹೂ ಹೆಜ್ಜೆ ಹಾಕಿ, ಬೆಳದಿಂಗಳ ನಗೆ ಚೆಲ್ಲಿ<BR/>ಅಂತರ್ಧಾನಳಾದಳು ಕವಿಯ ಎದೆಯಲ್ಲಿ<BR/>ಕಾವ್ಯ ಕನ್ನಿಕೆ ಸತ್ತಿಲ್ಲ, ಸಾಯುವುದೂ ಇಲ್ಲ<BR/>ಅಮೃತದ ಸಾಲುಗಳಿರುವವರೆಗೂ ಅಮರ ಜೀವಿ<BR/>ಅಮೃತೋಪಮ ಕಾವ್ಯಧಾರೆ ಸುರಿಯುತಿದೆ, ಎಲ್ಲೆಲ್ಲೂ<BR/>ಬನ್ನಿರಿ! ಹಿಡಿಯಿರಿ! ಸವಿಯಿರಿ! ಹಂಚಿರಿ!<BR/>(ಚಿತ್ರದುರ್ಗದಲ್ಲಿ ನಡೆದ ಅಮೃತ ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಯ ಸ್ಪೂರ್ತಿಯಿಂದ.)<BR/>ಬೇದ್ರೆ ಮಂಜುನಾಥBedre Manjunathhttps://www.blogger.com/profile/16459928003813120437noreply@blogger.com