<?xml version='1.0' encoding='UTF-8'?><?xml-stylesheet href="http://www.blogger.com/styles/atom.css" type="text/css"?><feed xmlns='http://www.w3.org/2005/Atom' xmlns:openSearch='http://a9.com/-/spec/opensearchrss/1.0/' xmlns:georss='http://www.georss.org/georss' xmlns:gd='http://schemas.google.com/g/2005' xmlns:thr='http://purl.org/syndication/thread/1.0'><id>tag:blogger.com,1999:blog-5254102750204147054</id><updated>2011-09-29T08:33:13.598+05:30</updated><title type='text'>"ಬೆಂಕಿ ಕಡ್ಡಿ"</title><subtitle type='html'>ಬೆಂಕಿ ಕಡ್ಡಿ- ಬೆಳಕು,ಶಾಖ ಮತ್ತು ಉರಿಯ ಚಿಕ್ಕತುಂಡು.ನಾವೆಲ್ಲರೂ ಈ ಲೌಕಿಕದ ಬೆಂಕಿಯಲ್ಲಿ ಬೇಯುತ್ತಲೇ ಮತ್ತೊಂದು ಬೆಳಕು, ಶಾಖ ಮತ್ತು ಉರಿಯನ್ನು ಸೃಜಿಸುತ್ತಿರುವವರು.ಅದಕ್ಕೆಂದೇ ಈ ಬರಹಗಳ ಶೀರ್ಷಿಕೆ "ಬೆಂಕಿಕಡ್ಡಿ". ಈಗಾಗಲೇ ಪ್ರಕಟಿಸಿರುವ ಸಂಕಲನಗಳಿಂದ ಮತ್ತು ಹೊಸ ಪದ್ಯ ಹಾಗೇ ಆಕಾಶವಾಣಿಯ ಚಿಂತನಕ್ಕೆ ಬರೆದ ಲೇಖನಗಳನ್ನೂ ಸೇರಿಸುವ ಇರಾದೆ ಈ ಬ್ಲಾಗಿಗನಿಗೆ.</subtitle><link rel='http://schemas.google.com/g/2005#feed' type='application/atom+xml' href='http://bemkikaddi.blogspot.com/feeds/posts/default'/><link rel='self' type='application/atom+xml' href='http://www.blogger.com/feeds/5254102750204147054/posts/default?max-results=100'/><link rel='alternate' type='text/html' href='http://bemkikaddi.blogspot.com/'/><link rel='hub' href='http://pubsubhubbub.appspot.com/'/><author><name>ಬೆಂಕಿಕಡ್ಡಿ</name><uri>http://www.blogger.com/profile/13181705369161334860</uri><email>noreply@blogger.com</email><gd:image rel='http://schemas.google.com/g/2005#thumbnail' width='21' height='32' src='http://4.bp.blogspot.com/_bUAIZF0Yo1g/TKdTK-6rv2I/AAAAAAAAAJY/QXUJAVKh9ps/S220/dsr4.jpg'/></author><generator version='7.00' uri='http://www.blogger.com'>Blogger</generator><openSearch:totalResults>45</openSearch:totalResults><openSearch:startIndex>1</openSearch:startIndex><openSearch:itemsPerPage>100</openSearch:itemsPerPage><entry><id>tag:blogger.com,1999:blog-5254102750204147054.post-4994332613672797162</id><published>2011-06-27T09:42:00.003+05:30</published><updated>2011-06-27T09:45:12.555+05:30</updated><title type='text'>ಅಂತರಂಗದ ಅಭ್ಯಾಸಕ್ಕೊಂದು ಪುಟ್ಟ ಟಿಪ್ಪಣಿ - ರಾಧಿಕಾ ನಡಹಳ್ಳಿ-ತುಂಬಿಕೊಳ್ಳುವ ತವಕ</title><content type='html'>&lt;div style="text-align: left;"&gt;ಅಂತರಂಗದ ಅಭ್ಯಾಸಕ್ಕೊಂದು ಪುಟ್ಟ ಟಿಪ್ಪಣಿ.&lt;br /&gt;ಸಮಕಾಲೀನ ಕನ್ನಡ ಕಾವ್ಯ ಕ್ರಿಯೆಯು ಇಷ್ಟೂ ದಿನ ಹರಿದು ಬಂದ ಕಾವ್ಯ ಪರಂಪರೆಯನ್ನೇ ಹೊರಳು ಹಾದಿಗೆ ತಂದು ನಿಲ್ಲಿಸಿರುವ ಸಂದರ್ಭವಿದು. ಕಾವ್ಯ ಕ್ರಿಯೆಗೆ ಪರಂಪರೆಯ ಅರಿವು ಮತ್ತು ಅನುಭವಗಳ ಪಾರಮ್ಯ ಬೇಕೆನ್ನುವ ಮೂಲ ಮಂತ್ರವನ್ನೇ ಧಿಕ್ಕರಿಸಿ ನುಡಿದುದೆಲ್ಲವನ್ನೂ ಕಾವ್ಯ ಸಂಭವವೆಂದು ತಮಗೊಲಿದ ಮಿತಿಯ ಐಕಾನುಗಳಲ್ಲಿ ಪರ್ಯಾಲೋಚಿಸುತ್ತಿರುವ ಆಧುನಿಕ ಕವಿತೆಗಳ ವಿಪುಲ ಸಾಮ್ರಾಜ್ಯ ಮುದ್ರಣಮಾಧ್ಯಮವನ್ನು ಮೀರಿ ನಿಂತು, ಅಂತರ್ಜಾಲದ ಸಾಮಾಜಿಕ ತಾಣಗಳಲ್ಲಿ, ವೆಬ್ ಪುಟಗಳಲ್ಲಿ, ಹಾಗೇ ಅನ್ನಿಸಿದ್ದೆಲ್ಲವನ್ನೂ ಬರೆದು ಬರೆದ ತಕ್ಷಣವೇ ಪ್ರಕಟಿಸಿಯೂ ಬಿಡುವ ಅವಕಾಶವಿರುವ ಬ್ಲಾಗುಗಳಲ್ಲಿ ತನ್ನ ವಿಸ್ತರತೆಯನ್ನು ಮೆರೆಯುತ್ತಿದೆ.&lt;br /&gt;&lt;br /&gt;ಕಾವ್ಯದ ವಿಪುಲ ಬೆಳೆಯಿರುವ ಹಸಿರುಕ್ರಾಂತಿಯಂತೇ ತೋರುವ ಕಾವ್ಯಕ್ರಾಂತಿಯ ಈ ದಿನಗಳಲ್ಲಿ ಯುವ ಬರಹಗಾರರ ಮೊದಲ ಪುಸ್ತಕಕ್ಕೆ ಪ್ರೋತ್ಸಾಹ ಧನ ನೀಡಿ ಪುಸ್ತಕ ಪ್ರಕಟಿಸುವುದಕ್ಕೆ ನೆರವಾಗುತ್ತಿರುವ ಪುಸ್ತಕ ಪ್ರಾಧಿಕಾರದ ಯೋಜನೆಯಡಿ ರಾಧಿಕಾ ಅವರ ಈ ಸಂಕಲನ ‘ತುಂಬಿಕೊಳ್ಳುವ ತವಕ’ ಪ್ರಕಟವಾಗುತ್ತಿದೆ. ರೂಪಕಗಳಿಗೂ ಪದ್ಯದ ಶೀರ್ಷಿಕೆಗಳಿಗೂ ಬರ ಬಂದಿರುವ ಕಾಲದಲ್ಲಿ ಚಿಂತನೆಗೆ ಹಚ್ಚಬಲ್ಲ ತಲೆಬರಹ ನೀಡಿರುವ ಕವಿಗೆ ಅಭಿನಂದನೆ.&lt;br /&gt;&lt;br /&gt;ಹೊಸ ಕವಿಯ ಮೊದಲ ಸಂಕಲನದ ಸಮಸ್ಯೆಗಳು ಸಂಕೀರ್ಣವಾಗಿರುತ್ತವೆ. ಎಷ್ಟು ಕವಿತೆಗಳನ್ನು ಸೇರಿಸಬೇಕೆನ್ನುವುದರಿಂದ ಹಿಡಿದು ಅವುಗಳ ಅನುಕ್ರಮಣಿಕೆಯ ಕ್ರಮ, ಪ್ರಕಾಶಕರ ಜೊತೆ ಮಾಡಿಕೊಳ್ಳಲೇ ಬೇಕಾದ ಒಡಂಬಡಿಕೆಗಳು, ಪ್ರಕಟಣೆಯ ಹಿಂದಿನ ಹಲವು ಹಂತಗಳನ್ನು ಸುಸೂತ್ರವಾಗಿ ನಿವಾರಿಸಿಕೊಳ್ಳುವ ಜಾಣತನ-ಇತ್ಯಾದಿ, ಇತ್ಯಾದಿ. ಅದೃಷ್ಟಕ್ಕೆ ಈ ಕವಿಯ ಪ್ರಸ್ತುತ ಸಂಕಲನದಲ್ಲಿ ಕಡಿಮೆ ಸಂಖ್ಯೆಯಲ್ಲಿ ಕವಿತೆಗಳಿರುವುದು, ‘ಸಂಚಯ’ ಇದನ್ನು ಪ್ರಕಟಿಸುತ್ತಿರುವುದು ಕವಿಯ ಕಾವ್ಯ ಪ್ರವೇಶದ ಹಾದಿಯನ್ನು ಸುಗಮಗೊಳಿಸಿವೆ. ಪುಸ್ತಕ ಪ್ರಕಟನೆಯ ಹಿಂದಿನ ಕರಾಳ ಹಸ್ತಗಳ ಹಿಡಿತದಿಂದಲೂ ಅವರು ಪಾರಾಗಿದ್ದಾರೆ.&lt;br /&gt;&lt;br /&gt;ಒಬ್ಬ ಕವಿ ತನ್ನ ಕಾವ್ಯ ಸೃಷ್ಟಿಗೆ ತನ್ನದೇ ಆದ ಮನೋಧರ್ಮವೊಂದನ್ನು ಸ್ಥಾಪಿಸಿಕೊಂಡಿರುತ್ತಾನೆ ಮತ್ತು ಸ್ಥಾಪಿಸಿಕೊಂಡಿರಲೇ ಬೇಕು. ಬದುಕಿನಲ್ಲಿ ನಿತ್ಯ ಕಾಡುತ್ತಲೇ ಇರುವ ಮೂಲಭೂತ ಸಮಸ್ಯೆಗಳಿಗೆ ಅವನು ನೀಡುವ ಪ್ರತಿಕ್ರಿಯೆ ಮತ್ತು ಅಂಥ ಸಮಸ್ಯೆಗಳು ಆ ಕವಿಯ ಭಾವಕೋಶದ ಮೇಲೆ ಕೆತ್ತಿದ ಸಾಮಾಜಿಕ ಮತ್ತು ಭಾವನಾತ್ಮಕ ಸ್ಥಿತ್ಯಂತರಗಳು ಅವನ ಕಾವ್ಯ ಕ್ರಿಯೆಗೆ ಪುಷ್ಟಿ ನೀಡುತ್ತವೆ. ವರ್ತಮಾನದ ಸಂಗತಿಗಳಿಗೆ ತಟ್ಟನೆ ನೀಡಿ ಬಿಡುವ ಪ್ರತಿಕ್ರಿಯೆಗಳು ಬರಿಯ ಹೇಳಿಕೆಗಳಾಗೇ ಉಳಿದುಬಿಡುತ್ತವೆ. ಹಾಗಾದಾಗ ಅಪ್ಪಟ ಕಾವ್ಯ ಹುಟ್ಟಲಾರದು. ಹೀಗೆ ಲೋಕದ ಸಂಗತಿಗಳಿಗೆ ಭಾವನಾತ್ಮಕ ಪ್ರತಿಕ್ರಿಯೆ ನೀಡುವಲ್ಲಿ ಇರುವ ಅತಿ ಸೂಕ್ಷ್ಮ ಸಂಗತಿಯೇ ಕಾವ್ಯವಾಗಿ ಅರಳುತ್ತದೆ. ಭಾಷೆಯನ್ನು ದುಡಿಸಿಕೊಳ್ಳುವ ಹಲವು ಸಾಧ್ಯತೆಗಳ ಅರಿವಿನ ಜೊತೆಗೇ ಖಾಸಗಿ ಅನುಭವವನ್ನು ಪರಂಪರೆಯ ತಟ್ಟೆಯಲ್ಲಿಟ್ಟು ತೂಗಿ ನೋಡುವ ವ್ಯವಧಾನವೂ ಕವಿಗೆ ಇರಬೇಕಾಗುತ್ತದೆ. ನಮ್ಮ ಅನೇಕ ಯುವ ಕವಿಗಳಿಗೆ ಈ ತಾಳ್ಮೆ ಮತ್ತು ಸಂಯಮಗಳು ಇಲ್ಲದಿರುವುದರಿಂದಲೇ ಅವರಿಗೆ ಆ ಕ್ಷಣದಲ್ಲಿ ಅನ್ನಿಸಿದ್ದನ್ನೂ ಓದುಗರೂ ಕಾವ್ಯವೆಂದು ಒಪ್ಪಿಕೊಳ್ಳಬೇಕಾದ ಅನಿವಾರ್ಯತೆ ಒದಗಿ ಬಿಟ್ಟಿದೆ. ಪ್ರಸ್ತುತ ಸಂಕಲನದಲ್ಲಿ ‘ನಾನು’ ಅನ್ನುವ ಆತ್ಮ ಪ್ರತ್ಯಯದಲ್ಲೇ ಬದುಕಿನ ವಿವಿಧ ಮಗ್ಗುಲಗಳನ್ನು ವಿಶಿಷ್ಟವಾಗಿ ಮತ್ತು ಪ್ರತಿರಮ್ಯತೆಯ ಸ್ಥಾಯಿಯಲ್ಲೇ ಹಿಡಿದಿರುವ ರಾಧಿಕಾ ನಡಹಳ್ಳಿಯವರ ಈ ಸಂಕಲನ ಆಧುನಿಕ ಬಿಕ್ಕಟ್ಟುಗಳಿಂದ ಪಾರಾಗಿದೆಯೆಂದು ಧೈರ್ಯವಾಗಿ ಹೇಳಬಹುದು.&lt;br /&gt;&lt;br /&gt;ಚಳಿಗಾಲ ಕವಿತೆ&lt;br /&gt;ಕೆಂಡದ ನೆನಪ ಅಗ್ಗಿಷ್ಟಿಕೆಯ ಮುಂದೆ&lt;br /&gt;ಬಿಸಿ ನೆನಪ ಹೊದ್ದು ಕೈ ಉಜ್ಜುತ್ತ ಕೂತಿದೆ&lt;br /&gt;ಅಗ್ಗಿಷ್ಟಿಕೆಯ ಕೆಂಡದ ಬಿಸಿಯ ತನ್ನೊಳಗೂ&lt;br /&gt;ಆವಾಹಿಸಿಕೊಳ್ಳಲು ಸಜ್ಜಾಗಿದೆ     (ಸಂಕೇತ)&lt;br /&gt;&lt;br /&gt;‘ಕವಿತೆ’ ಎಂದರೆ ಯಾವುದೆನ್ನುವ ನಿತ್ಯನೂತನ ಪ್ರಶ್ನೆ ಇವರ ಈ ಸಂಕಲನ್ದುದ್ದಕ್ಕೂ ಚಾಚಿಕೊಂಡಿದೆ. ವ್ಯಾಖ್ಯಾನ ಕವಿಯ ಕೆಲಸವಲ್ಲ. ಅದು ಓದುಗನ ಹಕ್ಕು. ಬರಿಯ ಹೇಳಿಕೆಗಳಾಗದ ಇಂಥ ಸಾಲುಗಳು ಅರ್ಥದ ಸಮುದ್ರದಲ್ಲಿ ಎದ್ದೆದ್ದು ಹಾರುವ ಅಲೆಗಳಂತೆ ಮೊದಲ ಓದಿನಲ್ಲೇ ವಿಸ್ಮಯಗೊಳಿಸುತ್ತವೆ, ತನ್ಮಯಗೊಳಿಸುತ್ತವೆ.&lt;br /&gt;&lt;br /&gt;ಮೌನದುರಿಯ ಮಾತಿನಲಾರಿಸಬಹುದೇ&lt;br /&gt;ಮಾತಿನುರಿಯ ಮೌನದಲಿ ಮರೆಸಬಹುದೇ&lt;br /&gt;ಮಾತ ಮರೆಸಲು ಮೌನದ ಮೊರೆಯೇ&lt;br /&gt;ಮೌನ ಮುಗಿಸಲು ಮಾತಿನ ಹೊಳೆಯೇ     (ವ್ಯತ್ಯಾಸ)&lt;br /&gt;&lt;br /&gt;ಶಬ್ದ ಮತ್ತು ಅದರೊಳಗಿನ ಲಯದ ಹದವರಿತ ಮನಸ್ಸು, ಆಶಯ ಮತ್ತು ಆಕೃತಿಗಳ ಅನನ್ಯ ಸಂಯೋಜನೆಯನ್ನು ನಿರ್ಮಿಸಬಲ್ಲುದು. ಹೀಗಾದಾಗಲೇ ಲಯ ವಿನ್ಯಾಸ ತನಗೆ ತಾನೇ ಏರ್ಪಡುತ್ತದೆ. ಈ ಕಾರಣಕ್ಕೆ ಇಲ್ಲಿನ ಬಹುತೇಕ ಪದ್ಯಗಳು ನಮ್ಮೊಳಗನ್ನು ಬೆಳಗುತ್ತವೆ.&lt;br /&gt;&lt;br /&gt;ಇರುಳು ಅರ್ಧ ಕಳೆದಿದೆ&lt;br /&gt;ಕೆಲ ತಾಸಿಗೆ ಹೊಸ ಬೆಳಕಿದೆ&lt;br /&gt;ಎದೆಯೊಳಗಿನ್ನೂ ಕತ್ತಲಿದೆ&lt;br /&gt;ನೀ ಬಂದ ಮೇಲಷ್ಟೇ ಬೆಳಗಲಿದೆ     (ಪ್ರಥಮ)&lt;br /&gt;&lt;br /&gt;ಎನ್ನುವುದು ಮೊದಲ ಓದಿಗೆ ಬರಿಯ ಅಂತ್ಯ ಪ್ರಾಸದ ಸರ್ಕಸ್ಸಿನಂತೆ ಕಂಡರೂ ಮರು ಓದಿಗೆ ಕವಿಯು ‘ಪ್ರಥಮ’ ಅನ್ನುವುದನ್ನು ಸಂಖ್ಯಾಸೂಚಕವಾಗಿ ಬಳಸಿದ್ದಾರೋ, ಪುರುಷ ವಾಚಕವಾಗಿ ಬಳಸಿದ್ದಾರೋ, ಅಥವ ಶ್ರೇಣೀಕರಣದ ವ್ಯಂಗ್ಯವಾಗಿ ಬಳಸಿದ್ದಾರೋ ಎನ್ನುವ ಕುತೂಹಲ ಹುಟ್ಟುತ್ತದೆ. ಪ್ರಯೋಗಗಳೇ ಕಡಿಮೆಯಾಗುತ್ತಿರುವ ಕಾಲದಲ್ಲಿ ಇದೂ ಉಚಿತವೇ!&lt;br /&gt;&lt;br /&gt;ಅವನುಸಿರು ಒಮ್ಮೆಯೂ&lt;br /&gt;ಸುಳಿಯದ ಗಾಳಿಯಲ್ಲೂ&lt;br /&gt;ಅದೇನೋ ಗಂಧ ತೇಲಿದಂತಾಗಿ&lt;br /&gt;ಹೃದಯ ಬಡಿತ ಏರಿ&lt;br /&gt;ಕೊಂಚ ಬೆವರಿದಳು         (ತಿಳಿ)&lt;br /&gt;&lt;br /&gt;ಹರೆಯದ ಪುಳಕಗಳನ್ನು ಸಮರ್ಥವಾಗಿ ತೆರೆದಿಡುವ ಈ ಸಾಲುಗಳು ಹೃದಯ ಬಡಿತ ಏರಿ/ ಕೊಂಚ ಬೆವರಿದಳು ಅನ್ನುವುದು ಆಧುನಿಕ ಮನೋಭಾವದವರಿಗೆ ವಿಶಿಷ್ಠವೆನ್ನಿಸದಿದ್ದರೂ _ ಏಕೆಂದರೆ ಆಧುನಿಕ ಬದುಕು ಬಗೆಯುತ್ತಿರುವ ಜೀವನ ಕ್ರಮದಲ್ಲಿ ಅಮೂರ್ತ ಭಾವನೆಗಳಿಗಿಂತಲೂ ಮೂರ್ತ ಅನುಭವದ್ದೇ ಮೇಲುಗೈಯ್ಯಾಗಿರುವ ಕಾರಣ- ಒಳ್ಳೆಯ ಸಾಲುಗಳಾಗಿ ಕಾಣುತ್ತವೆ. ಆದರೂ ಪದ್ಯ ಮುಂದುವರೆಸಿದ ಕವಿ&lt;br /&gt;&lt;br /&gt;ಬಣ್ಣ ತಿಳಿಯದ ಕಣ್ಣ ಕುರಿತು&lt;br /&gt;ಕನಸ ಕಟ್ಟದಿದ್ದರೂ&lt;br /&gt;ಇಂದಿನ ಮನಸ ಖುಷಿಯ&lt;br /&gt;ನೆನಪಿಗೊಂದು ಕಾವ್ಯ ಬರೆದಿಟ್ಟಳು   (ತಿಳಿ)&lt;br /&gt;&lt;br /&gt;ಅನ್ನುವುದು ವ್ಯರ್ಥ ಮುಂದುವರೆಸಿದ ಸಾಲುಗಳಾಗಿ ತೋರುತ್ತವೆ. ಅಮೂರ್ತವಾಗಿ ಹೊಳೆದುದನ್ನು ಮೂರ್ತವಾಗಿ ತೋರಿಸಲೇಬೇಕೆನ್ನುವ ಹಟ ಕಾವ್ಯವಾಗುವುದಿಲ್ಲ ಎನ್ನುವ ಅರಿವು ಕವಿಗೆ ಹುಟ್ಟಬೇಕು.&lt;br /&gt;&lt;br /&gt;ಅರರೇ ಇಲ್ಲೇ ಬಾಗಿಲಲ್ಲೇ ನಿಲ್ಲಿಸಿ ಏನಿದು ಯೋಚನೆ&lt;br /&gt;ಹೋಗು ಒಳಗೆ- ಇದೋ ಬಂದೆ&lt;br /&gt;ಇಟ್ತ ಚುಕ್ಕೆಯ ಎಳೆ ಸೇರಿಸಿ&lt;br /&gt;ಅಮ್ಮಾ ನೋಡಲ್ಲಿ ಯಾರು ಬಂದರು?!   (ಎಳೆ)&lt;br /&gt;&lt;br /&gt;ಎಲ್ಲೆಲ್ಲೋ ಬಿಡಿಸಿಟ್ಟಿರುವ ಚುಕ್ಕೆಗಳನ್ನು ಸೇರಿಸಿ ರಂಗವಲ್ಲಿ ಅರಳಿಸುವ ಹಾಗೇ ಬದುಕಿನ ಚುಕ್ಕೆಗಳಾಗಿರುವ ನಮ್ಮೊಳಗನ್ನೂ ಸಂಬಂಧದ ಎಳೆ ಸೇರಿಸಿ ಜೋಡಿಸಬೇಕಿದೆ. ಇಂಥ ಹಂಬಲ ಈ ಕವಿಗಿದೆ. ಸಂಬಂಧಗಳನ್ನೇ ನಿರಾಕರಿಸುವ ‘ಸ್ಟೇ ಟುಗೆದರ್’ ಕಾಲದಲ್ಲಿ ಇದೂ ಅಪರೂಪವೇ.&lt;br /&gt;&lt;br /&gt;ತಲ್ಲಣಗೊಳಿಸಿದ ಅನುಭವ&lt;br /&gt;ಒಳಗಿದ್ದರೆ ಕ್ಷಣ ಕ್ಷಣ&lt;br /&gt;ಅಣು ಅಣು ತಲ್ಲಣ&lt;br /&gt;ಹೊರಬಂದ ಕ್ಷಣ ನಿರಾಳ&lt;br /&gt;ಮರುಕ್ಷಣ ಅನುಮಾನ&lt;br /&gt;ಪ್ರಶ್ನೆಗಳ ಆಕ್ರಮಣ          (ಬರೆ)&lt;br /&gt;&lt;br /&gt;ಕಬ್ಬಿಣದ ಸಲಾಕೆಯನ್ನು ನಿಗಿ ನಿಗಿ ಬೆಂಕಿಯಲ್ಲಿ ಕಾಯಿಸಿ ಮೈ ಸುಡುವ ‘ಬರೆ’ಯ ಹಾಗೇ ಬರೆಯುವುದು ಕೂಡ ಮನಸ್ಸನ್ನು ಸುಟ್ಟು ಸುಟ್ಟು ಶೋಧಿಸಬೇಕಾದದ್ದು. ಬರೆ ಎನ್ನುವ ಪದವೇ ಅನುಭವದ ಅರ್ಥಕೋಶದಿಂದ ಕಾಣೆಯಾಗುತ್ತಿರುವ ದಿನಗಳಲ್ಲಿ ಆ ಶಬ್ದವನ್ನೇ ಶಬ್ದ ಗಾರುಡಿಯನ್ನಾಗಿಸಿಕೊಂಡಿರುವ ಕ್ರಮ ಅವರ ತಕ್ಕಮಟ್ಟಿನ ಸಾಧನೆಯ ಕುರುಹಾಗಿ ಕಾಣುತ್ತದೆ.&lt;br /&gt;&lt;br /&gt;ಹಗಲೆಲ್ಲ ಕವಿತೆ ಧ್ಯಾನ&lt;br /&gt;ಇರುಳು ಅದರದೇ ಸನ್ನಿಧಾನ   (ಪಾಠ)&lt;br /&gt;&lt;br /&gt;ಕವಿತೆಯನ್ನು ಮತ್ತು ಕವಿತೆ ಹುಟ್ಟುವ ರೀತಿಯನ್ನೂ ಈ ಕವಿ ತಮ್ಮ ಹಲವು ರಚನೆಗಳಲ್ಲಿ ಚಿಂತಿಸಿದ್ದಾರೆ. ಚಿಂತನೆಯ ಲವಲೇಷವೂ ಇರದ ದುರ್ಭರ ದಿನಗಳಲ್ಲಿ ಈಕೆಯ ಕಾವ್ಯ ಕನ್ನಿಕೆ ನಡೆಯುತ್ತಿರುವುದೂ ಸೋಜಿಗವೆನ್ನಿಸುತ್ತದೆ.&lt;br /&gt;&lt;br /&gt;ನಿನ್ನ ಕೊರಳ ಮೌನದ ನಕಲಿ&lt;br /&gt;ಆಭರಣ ಕಳಚಿ ನಿಲ್ಲು&lt;br /&gt;ಇಲ್ಲಿ ಸಂಭ್ರಮದಿಂದ ಕಾದಿದೆ&lt;br /&gt;ಅಸಲಿ ಮಾತಿನ ಮುತ್ತಿನ ಹಾರ   (ಹಾರದ ನಿರೀಕ್ಷೆ)&lt;br /&gt;&lt;br /&gt;ಅನ್ನುವಲ್ಲಿ ಕೂಡ ‘ಹಾರದ ನಿರೀಕ್ಷೆ’ ಎನ್ನುವುದು ಕೊರಳಿಗೆ ಹಾಕುವ ಹಾರವೋ ಅಥವ ಹಾಗೇ ಹಗುರಕ್ಕೆ ಹಾರದೇ ಭದ್ರವಾಗಿ ನಿಲ್ಲುವ ನಿರೀಕ್ಷೆಯೇ ಎನ್ನುವ ಪರಿ ಕೂಡ ಓದುಗನ ವಿಸ್ತರಣೆಗೆ  ಬಿಟ್ಟ ವಿಚಾರ. &lt;br /&gt;&lt;br /&gt;ಇಷ್ಟೆಲ್ಲ ಹೇಳಿದ ಮಾತ್ರಕ್ಕೆ ಈ ಸಂಕಲನದ ಉಳಿದ ಪದ್ಯಗಳಿಗೂ ಈ ಮಾತು ಅನ್ವಯಿಸುತ್ತದೆ ಎನ್ನುವಂತಿಲ್ಲ. ಏಕೆಂದರೆ ಬರಿಯ ನಿರೀಕ್ಷೆಗಳು, ಕನಸುಗಳು, ಹೇಳಿಕೆಗಳನ್ನು ಕೂಡ ಪದ್ಯವಾಗಿಸುವ ಧಾರಾಳ ವಾಚಾಳಿತನ ಉಳಿದ ಹಲವು ಪದ್ಯಗಲಲ್ಲಿ ಕಾಣುತ್ತದೆ. ಒಂದು ಸಂಕಲನವೆಂದರೆ ಗಟ್ಟಿ ಮತ್ತು ಜೊಳ್ಳು ಕಾಳುಗಳ ಮಿಶ್ರಣ. ಗಟ್ಟಿಕಾಳುಗಳು ಹೆಚ್ಚಿನ ಸಂಖ್ಯೆಯಲ್ಲಿದ್ದು ಜೊಳ್ಳು ಕಾಳುಗಳು ಕಡಿಮೆ ಇದ್ದರೆ ಓದುಗ ಬದುಕುತ್ತಾನೆ. ಇಲ್ಲಿ ಜೊಳ್ಳು ಕಾಳುಗಳು ವಿಪರೀತಾವಾಗದೇ ಇರುವುದು ಸಮಾಧಾನದ ಅಂಶ.&lt;br /&gt;&lt;br /&gt;ಸ್ವಮಗ್ನ ಸ್ಥಿತಿಗಳಲ್ಲಿ ಅನ್ನಿಸಿದ್ದನ್ನು ಕಾವ್ಯವೆನ್ನುವ ಆಧುನಿಕ ಕಾಲದಲ್ಲಿ ಹೃದಯೊಳಕ್ಕೂ ಇಳಿಯುವ ಸಾರ್ಥಕ ಸಾಲುಗಳನ್ನು ನೀಡಿರುವ ಕವಿಗೆ ಅಭಿನಂದನೆ ಸಲ್ಲಿಸುತ್ತಲೇ ಅವರು ಕನ್ನಡ ಕಾವ್ಯ ಪರಂಪರೆಯೊಂದಿಗೆ ತಮ್ಮ ಪುಟ್ಟ ಹೆಜ್ಜೆಗಳನ್ನೂ ಸೇರಿಸಬೇಕೆನ್ನುವ ತವಕವಿರುವುದನ್ನು ಗುರುತಿಸಿದ್ದೇನೆ. ಅದಕ್ಕೆ ತಯಾರಿಯಾಗಿ ಈಗಾಗಲೇ ತನಗೆ ದಕ್ಕಿರುವ ಸಂಗತಿಗಳಾಚೆಗಿನ ದಕ್ಕದ ಸಂಗತಿಗಳಿಗೂ ಕವಿ ಕಣ್ಣು ಕೈ ಕಿವಿಗಳನ್ನು ಚಾಚಬೇಕಿದೆ. ದೀರ್ಘ ಪರಂಪರೆಯ ಸವಿಸ್ತಾರ ಆಲಾಪಗಳನ್ನು ಅಭ್ಯಸಿಸುತ್ತಲೇ ಕಾಲಕ್ಕೆ ತಕ್ಕುದಾದ ಹ್ರಸ್ವ ಸ್ವರ ಪ್ರಸ್ತಾರವನ್ನೂ ಈಕೆ ದಕ್ಕಿಸಿಕೊಳ್ಳಲಿ ಎನ್ನುವ ಆಶಯದ ಜೊತೆಗೇ ನೀವೂ ಪದ್ಯಗಳನ್ನು ನಿಮ್ಮದಾಗಿಸಿಕೊಳ್ಳಿ ಎಂದು ಬಿನ್ನವಿಸಿಕೊಳ್ಳುತ್ತಾ ಸ್ನೇಹದ ಹೆಸರಲ್ಲಿ ಇಂಥ ಅಪ್ಪಟ ಜವಾಬ್ದಾರಿ ನೀಡಿದ ಪ್ರಕಾಶಕ ಮಿತ್ರ ಶ್ರೀ ಡಿ.ವಿ.ಪ್ರಹ್ಲಾದರನ್ನೂ ನೆನೆಯುತ್ತೇನೆ. ನಮಸ್ಕಾರ.&lt;br /&gt;&lt;br /&gt;&lt;br /&gt;&lt;br /&gt;&lt;br /&gt;&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/5254102750204147054-4994332613672797162?l=bemkikaddi.blogspot.com' alt='' /&gt;&lt;/div&gt;</content><link rel='replies' type='application/atom+xml' href='http://bemkikaddi.blogspot.com/feeds/4994332613672797162/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://www.blogger.com/comment.g?blogID=5254102750204147054&amp;postID=4994332613672797162' title='0 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/5254102750204147054/posts/default/4994332613672797162'/><link rel='self' type='application/atom+xml' href='http://www.blogger.com/feeds/5254102750204147054/posts/default/4994332613672797162'/><link rel='alternate' type='text/html' href='http://bemkikaddi.blogspot.com/2011/06/blog-post_27.html' title='ಅಂತರಂಗದ ಅಭ್ಯಾಸಕ್ಕೊಂದು ಪುಟ್ಟ ಟಿಪ್ಪಣಿ - ರಾಧಿಕಾ ನಡಹಳ್ಳಿ-ತುಂಬಿಕೊಳ್ಳುವ ತವಕ'/><author><name>ಬೆಂಕಿಕಡ್ಡಿ</name><uri>http://www.blogger.com/profile/13181705369161334860</uri><email>noreply@blogger.com</email><gd:image rel='http://schemas.google.com/g/2005#thumbnail' width='21' height='32' src='http://4.bp.blogspot.com/_bUAIZF0Yo1g/TKdTK-6rv2I/AAAAAAAAAJY/QXUJAVKh9ps/S220/dsr4.jpg'/></author><thr:total>0</thr:total></entry><entry><id>tag:blogger.com,1999:blog-5254102750204147054.post-4295193255396600629</id><published>2011-06-26T08:09:00.002+05:30</published><updated>2011-06-26T08:13:47.186+05:30</updated><title type='text'>ಬೆಂಗಳೂರು ಪದ್ಯಗಳು</title><content type='html'>೧&lt;br /&gt;&lt;br /&gt;ಬೆಂಗಳೂರೆಂಬ ಅಪ್ಪಟ ಸುಂದರಿಗೆ&lt;br /&gt;ಅದೆಷ್ಟೆಷ್ಟೋ ಮಿಂಡರು: ಕಣ್ಣು ಹೊಡೆದು&lt;br /&gt;ಬಳಿಗೆ ಕರೆಯುವವರ ಹಾಗೇ ಗೌರವವಾಗಿ&lt;br /&gt;ಕಾಣುವವರೂ ಕೂಡ ಬೆಚ್ಚಿಬೀಳುತ್ತಾರೆ-&lt;br /&gt;ಅವಳ ಉದ್ದೋಉದ್ದದ ಯೋನಿಗೆ&lt;br /&gt;ಬೊಗಸೆ ತುಂಬಿಯೂ ಉಳಿದು ಚೆಲ್ಲುವ ಮೊಲೆಗೆ&lt;br /&gt;ಯಾವತ್ತಿಗೂ ಯಾರೂ ಚಿತ್ತು ಮಾಡಲಾಗದ ಅವಳ ಧಗೆಗೆ!&lt;br /&gt;&lt;br /&gt;                   ೨&lt;br /&gt;&lt;br /&gt;ಬೆಂಗಳೂರೆಂಬ ಮಾಯದೇವತೆಗೆ&lt;br /&gt;ವರ ಕೊಡಲು ಅದೆಷ್ಟೆಷ್ಟೋ ಹಸ್ತಗಳು: ಸಲಹಲು&lt;br /&gt;ಥೇಟು ಅಮ್ಮನದೇ ಕೈಗಳು, ಜಾಡಿಸಿ ಒದೆಯಲು&lt;br /&gt;ಸಶಕ್ತ ಕಾಲುಗಳು, ಕರೆದು ಕೂರಿಸಿ ಹಸಿದ ಹೊಟ್ಟೆಗೆ&lt;br /&gt;ಹಿಟ್ಟು ಹಾಕುವ ಬೀದಿ ಬದಿಯ ಅಂಗಡಿಗಳು&lt;br /&gt;ಮೆಜೆಸ್ಟಿಕ್ಕಿನ ಸ್ಲಮ್ಮಿನಲ್ಲಿ ಆಡುವ ಬಡಕಲು ದೇಹಗಳು&lt;br /&gt;ಮತ್ತು ಆ ದೇಹಗಳನ್ನು ಸಾಕಲು ಒದಗುವ ದೇಹ ವ್ಯಾಪಾರಗಳು!&lt;br /&gt;&lt;br /&gt;                              ೩&lt;br /&gt;&lt;br /&gt;ಬೆಂಗಳೂರೆಂಬ ಮಾಯಾಮೋಹಿನಿಗೆ&lt;br /&gt;ಐಟಿ ಬೀಟಿಗಳೆಂಬ ಅವಳಿ ಮಕ್ಕಳುಗಳು&lt;br /&gt;ಕಷ್ಟ ಸುಖ ಅರಿಯದ ಅರಿವಳಿಕೆ ಕುಡಿದ ಜೀವ ಕುಡಿಗಳು&lt;br /&gt;ವೀಕೆಂಡಿನಲ್ಲಷ್ಟೇ ಸೂರ್ಯನ ಮುಖ ನೋಡುವ ದಂದುಗಗಳು&lt;br /&gt;ಪ್ಲಾಸ್ಟಿಕ್ಕ್ ಕಾರ‍್ಡಿಗೆ ಮನುಷ್ಯರಿಗಿಂತಲೂ ಮಿಗಿಲಾದ ಬೆಲೆಗಳು&lt;br /&gt;ಗಾಡಿಗೆ, ಮನೆಗೆ, ಮಜಾ, ಮೋಜವಾನಿಗೂ ಸಿಕ್ಕುವ ಸಾಲಗಳು&lt;br /&gt;ಪಡೆದು ತೀರಿಸಲಾಗದೇ ರೈಲಿನಡಿಗೆ ಬೀಳುವ ದೇಹಗಳು!&lt;br /&gt;&lt;br /&gt;                            ೪&lt;br /&gt;&lt;br /&gt;ಟ್ರಾಫಿಕ್ ಜಾಮಿನಲ್ಲಿ ಪೇಪರ್ ಮಾರುವ ಮಾನವಂತರು&lt;br /&gt;ಕಾರಿಗಡ್ದಡ್ಡ ನುಗ್ಗಿ ಕಾಸಿಗೆ ಕೈ ಚಾಚುವ ಖೋಜಾಗಳು&lt;br /&gt;ಸುಳ್ಳು ಸುಳ್ಳೇ ಭರ್ತಿಯಾಗುವ ಸರ್ಕಾರೀ ಆಸ್ಪತ್ರೆಗಳ ಬೆಡ್ಡುಗಳು&lt;br /&gt;ಪೀಕ್ ಅವರಿನಲ್ಲಿ ಸರ್ರನೆ ಸರಿದು ಹೋಗುವ ಗೂಟದ ಕಾರುಗಳು&lt;br /&gt;ಈ ಮೂಲೆಯಿಂದ ಆ ಮೂಲೆಗೆ ಸಾಗುವ ಬಿಗ್ ಸರ್ಕಲ್ ಬಸ್ಸುಗಳು&lt;br /&gt;ಸಾಯಿಬಾಬಾನ ದರ್ಶನಕ್ಕೆ ನಿಂತಷ್ಟೇ ನಿಷ್ಠೆಯಲ್ಲಿ ಗೋಭಿ ಮಂಚೂರಿಗೆ&lt;br /&gt;ಇನಾಕ್ಸ್ ಥಿಯೇಟರಿಗೆ, ಶವದ ದರ್ಶನಕ್ಕೆ ಕಾದಿರುವ ಕಡು ಮೋಹಿಗಳು!&lt;br /&gt;&lt;br /&gt;                                  ೫&lt;br /&gt;&lt;br /&gt;ಬೆಂಗಳೂರೆಂಬ ನಿಜಗಳು, ನಿಜದ ತಲೆಗೆ ಮೊಟಕುವ ಸುಳ್ಳುಗಳು&lt;br /&gt;ಸುಳ್ಳು ಸುಳ್ಳೇ ಬ್ರೇಕಿಂಗ್ ಸುದ್ದಿಯ ಸದ್ದು ಹೊರಡಿಸುವ ಚ್ಯಾನಲ್ಲುಗಳು&lt;br /&gt;ದುಃಖ ಮಡುಗಟ್ಟಿರುವಾಗಲೂ ಸಿನಿಮಾದ ಹಾಡು ಒದರುತ್ತಲೇ ಇರುವ ಎಫೆಮ್ಮುಗಳು&lt;br /&gt;ಶ್ರೀ ಸಾಮಾನ್ಯನ ಸಂಸಾರ ಸರಿಗಮದ ತರಾನಗಳು&lt;br /&gt;ಇಲ್ಲಿರಲೂ ಆಗದೇ ಓಡಿ ಹೋಗಲೂ ಆಗದ ಅಸಂಖ್ಯಾತ ಕನಸುಗಳು&lt;br /&gt;ರಂಗಶಂಕರ, ಕಲಾಕ್ಷೇತ್ರ, ಎಡಿಯೆಗಳಲ್ಲಷ್ಟೇ ಇಣುಕುವ ಮೌಲ್ಯಗಳು.&lt;br /&gt;ಬಿಟ್ಟೆನೆಂದರೂ ಬಿಡದ ಮಾಯಿಯ ಮುಖದ ಸುಕ್ಕುಗಳು!&lt;br /&gt;&lt;br /&gt;(ಇವತ್ತಿನ ವಿಜಯಕರ್ನಾಟಕದಲ್ಲಿ ಪ್ರಕಟಿತ)&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/5254102750204147054-4295193255396600629?l=bemkikaddi.blogspot.com' alt='' /&gt;&lt;/div&gt;</content><link rel='replies' type='application/atom+xml' href='http://bemkikaddi.blogspot.com/feeds/4295193255396600629/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://www.blogger.com/comment.g?blogID=5254102750204147054&amp;postID=4295193255396600629' title='0 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/5254102750204147054/posts/default/4295193255396600629'/><link rel='self' type='application/atom+xml' href='http://www.blogger.com/feeds/5254102750204147054/posts/default/4295193255396600629'/><link rel='alternate' type='text/html' href='http://bemkikaddi.blogspot.com/2011/06/blog-post_3438.html' title='ಬೆಂಗಳೂರು ಪದ್ಯಗಳು'/><author><name>ಬೆಂಕಿಕಡ್ಡಿ</name><uri>http://www.blogger.com/profile/13181705369161334860</uri><email>noreply@blogger.com</email><gd:image rel='http://schemas.google.com/g/2005#thumbnail' width='21' height='32' src='http://4.bp.blogspot.com/_bUAIZF0Yo1g/TKdTK-6rv2I/AAAAAAAAAJY/QXUJAVKh9ps/S220/dsr4.jpg'/></author><thr:total>0</thr:total></entry><entry><id>tag:blogger.com,1999:blog-5254102750204147054.post-6872750900160763500</id><published>2011-06-26T08:08:00.001+05:30</published><updated>2011-06-26T08:09:30.064+05:30</updated><title type='text'>ಪ್ರಾರ್ಥನೆ</title><content type='html'>ಪ್ರಾರ್ಥನೆ&lt;br /&gt;ಪ್ರಭೂ,&lt;br /&gt;ಸುಳ್ಳಿನ ಪುಗ್ಗೆಯನ್ನೂದಿ&lt;br /&gt;ಭ್ರಮೆಯ ಮತ್ತಿನಲ್ಲಿ ಮೈ ಮರೆತಿದ್ದೇನೆ&lt;br /&gt;ನಿಜದ ಸೂಜಿ ಮೊನೆ ತಾಗಿಸಬೇಡ&lt;br /&gt;ವಾಸ್ತವಕ್ಕಿಲ್ಲಿ ಕಿಮ್ಮತ್ತೇ ಇಲ್ಲ.&lt;br /&gt;&lt;br /&gt;ಪ್ರಭೂ,&lt;br /&gt;ಕೃತಕ ಹೂವಿನ ಹಾರತೊಡಿಸಿ&lt;br /&gt;ಸನ್ಮಾನ ಸಂಭ್ರಮದ ಮಾತೆತ್ತಿದ್ದೇನೆ&lt;br /&gt;ತಾಜಾ ಕುಸುಮದ ಉಸಿರಟ್ಟಬೇಡ&lt;br /&gt;ಸಹಜಕ್ಕಿಲ್ಲಿ ಅವಕಾಶವಿಲ್ಲ.&lt;br /&gt;&lt;br /&gt;ಪ್ರಭೂ,&lt;br /&gt;ನಿಸ್ತೇಜದ ಮುಖಕ್ಕಷ್ಟು ರಂಗು ಬಳಿದು&lt;br /&gt;ಮುಖವಾಡದೊಳಡಗಿಸಿಟ್ಟಿದ್ದೇನೆ &lt;br /&gt;ನಿಜದ ಮಾತೆತ್ತಿ ತತ್ತಿಗೆ ಕಾವಿಡಬೇಡ&lt;br /&gt;ಸಂತತಿಯ ಸಲಹುವುದಕ್ಕೆ ಸಮಯವಿಲ್ಲಿಲ್ಲ.&lt;br /&gt;&lt;br /&gt;ಪ್ರಭೂ,&lt;br /&gt;ಮೇಲ್ನೋಟದ ತಿಳುವಳಿಕೆಯನ್ನೇ&lt;br /&gt;ಜ್ಞಾನವೆಂದು ಬಿಂಬಿಸಿದ್ದೇನೆ&lt;br /&gt;ಪರಂಪರಾಗತ ಪರಾಮರ್ಶೆಗೊಡ್ಡಬೇಡ&lt;br /&gt;ಪೂರ್ಣಾವದಿಯ ಪಿಂಚಣಿಗಿನ್ನು ಕೆಲವೇ ನಿಮಿಷ!&lt;br /&gt;&lt;br /&gt;(ಇವತ್ತಿನ ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಪ್ರಕಟಿತ)&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/5254102750204147054-6872750900160763500?l=bemkikaddi.blogspot.com' alt='' /&gt;&lt;/div&gt;</content><link rel='replies' type='application/atom+xml' href='http://bemkikaddi.blogspot.com/feeds/6872750900160763500/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://www.blogger.com/comment.g?blogID=5254102750204147054&amp;postID=6872750900160763500' title='0 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/5254102750204147054/posts/default/6872750900160763500'/><link rel='self' type='application/atom+xml' href='http://www.blogger.com/feeds/5254102750204147054/posts/default/6872750900160763500'/><link rel='alternate' type='text/html' href='http://bemkikaddi.blogspot.com/2011/06/blog-post_26.html' title='ಪ್ರಾರ್ಥನೆ'/><author><name>ಬೆಂಕಿಕಡ್ಡಿ</name><uri>http://www.blogger.com/profile/13181705369161334860</uri><email>noreply@blogger.com</email><gd:image rel='http://schemas.google.com/g/2005#thumbnail' width='21' height='32' src='http://4.bp.blogspot.com/_bUAIZF0Yo1g/TKdTK-6rv2I/AAAAAAAAAJY/QXUJAVKh9ps/S220/dsr4.jpg'/></author><thr:total>0</thr:total></entry><entry><id>tag:blogger.com,1999:blog-5254102750204147054.post-8222461229631319631</id><published>2011-06-18T19:22:00.000+05:30</published><updated>2011-06-18T19:23:37.704+05:30</updated><title type='text'>ಕೆರೆ ಕೊಟ್ಟ ಕರೆ......</title><content type='html'>ಕೆರೆ ಕೊಟ್ಟ ಕರೆ.. ..&lt;br /&gt;ನನ್ನ ಹುಟ್ಟೂರು ತರೀಕೆರೆ. ಬದುಕಿನ ಬಹುಭಾಗ ಕಳೆದದ್ದು ಅಂದರೆ ಹೆಂಡತಿ, ಮಕ್ಕಳು ಮನೆ ಕಟ್ಟಿಸಿದ್ದು ಅರಸೀಕೆರೆ. ಈಗ ಕಾರ್ಯಾರ್ಥ ಇರುವುದು ಬೆಂಗಳೂರಿನ ಕೆರೆಯೊಂದನ್ನು ಅಚ್ಚುಕಟ್ಟು ಮಾಡಿ ನಿರ್ಮಿಸಲಾದ ಬಡಾವಣೆ ಚನ್ನಮ್ಮನ ಕೆರೆ. ನಿನ್ನ ಪ್ರವರ ಯಾರು ಕೇಳಿದ್ದು ಅಂತ ಗೊಣಗಿದಿರಾ? ಸ್ವಲ್ಪ ಇರಿ. ಕೆರೆ ಅನ್ನುವ ಅಂತ್ಯಪ್ರಾಸ ಇರುವ ಊರುಗಳು ಕೆರೆಯ ಹಂಗೇ ಇಲ್ಲದೆ ಹೇಗೆ ಈಗ ಬದುಕು ಕಳೆದುಕೊಳ್ಳುತ್ತಿವೆ ಅಂತ ಕೊಂಚ ಆಲೋಚಿಸುವುದು ಈ ಬರಹದ ಉದ್ದೇಶ.&lt;br /&gt;&lt;br /&gt;ಹಾಗೆ ನೋಡಿದರೆ ಎಲ್ಲ ಊರುಗಳಿಗೂ ಒಂದಲ್ಲ ಒಂದು ಕೆರೆಯ ಸಂಬಂಧ ಇರಲಿಕ್ಕೇ ಬೇಕು. ಕೃಷಿಗೆ, ನಿತ್ಯದ ಉಪಯೋಗಕ್ಕೆ, ಊರಿಗೊಂದು ನೀರಿನ ಮೂಲ ನೆಲೆ ಬೇಕೇ ಬೇಕು. ಬಯಲು ಸೀಮೆಯ ತರೀಕೆರೆ, ತುರುವೇಕೆರೆ, ನೊಣವಿನಕೆರೆ ಮುಂತಾದ ಸ್ಥಳ ನಾಮಗಳು ಆಯಾ ಊರುಗಳಲ್ಲಿರುವ ಕೆರೆಗಳಿಂದ ಬಂದದ್ದಾದರೆ, ತುಮಕೂರು ಪ್ರಾಂತ್ಯದ ಅಮ್ಮಸಂದ್ರ, ಬಾಣಸಂದ್ರ, ತಿಪ್ಪಸಂದ್ರ ಮುಂತಾದವು ಕೆರೆಗಿಂತಲೂ ದೊಡ್ಡದಾದ ನೀರಿನ ತಾಣ ಸಮುದ್ರ ಅನ್ನುವ ಅರ್ಥ ಸೂಸುವ ಸಂದ್ರಗಳ ಮೂಲಕ ಬಂದದ್ದು. ಎಮ್ಮೆಗಳು ಆರಾಮಾಗಿ ವಿಶ್ರಮಿಸಬಹುದಾದ ಜಾಗಕ್ಕೂ ಸಂದ್ರ ಅಂತ ಕರೆದಿರುವುದು ಆ ಜನ ಸಮುದ್ರವನ್ನು ಕಾಣದೇ ಇದ್ದುದ್ದಕ್ಕೇ ಇರಬಹುದೇನೋ? ಇನ್ನು ಹುಬ್ಬಳ್ಳಿಯ ಕಡೆ ಹೊಂಡ ಎನ್ನುವ ಅಂತ್ಯಪ್ರಾಸದ ಹಲವು ಹೆಸರುಗಳು ಸಿಕ್ಕುವಂತೆಯೇ ದಕ್ಷಿಣಕನ್ನಡದ ಬಹುತೇಕ ನೀರ ಝರಿಗಳಿಗೆ ತೀರ್ಥ ಅಂತ ಕರೆಯುವುದೂ ವಾಡಿಕೆ. ಈಗ ಹೆಸರಿಗಷ್ಟೇ ಕೆರೆ ಅಂತ ಅಂತ್ಯವಾಗುವ ಊರುಗಳಲ್ಲಿರಲಿ, ಬಹುತೇಕ ಎಲ್ಲ ಊರುಗಳಲ್ಲೂ ನಜೀರ್ ಸಾಬರ ದಯದಿಂದ ಹೆಜ್ಜೆಗೊಂದು ಕೊಳವೆ ಬಾವಿ ಬಂದ ಕಾರಣ ಆ ಊರುಗಳ ಕೆರೆಗಳೆಲ್ಲ ಸ್ಟೇಡಿಯಂಗಳಾಗಿ ಅಥವ ಹೊಸಬಡಾವಣೆಗಳಾಗಿ ಬದಲಾಗಿವೆ. ಕೆರೆ ಅನ್ನುವ ಪದಕ್ಕಿರುವ ನಿಘಂಟಿನರ್ಥಕ್ಕಿಂತಲೂ ಕೆರೆಗೆ ಹಾರವಾದ ಭಾಗೀರಥಿಯ ಕತೆಗೊತ್ತಿರುವವರಿಗೆ ಈ ಕೆರೆಗಳ ಜೊತೆಗಿರುವ ಭಾವನಾತ್ಮಕ ಸಂಬಂಧಗಳನ್ನು ಅರಿಯುವುದು ಸುಲಭ ಸಾಧ್ಯ.&lt;br /&gt;&lt;br /&gt;ಕುಕ್ಕರಹಳ್ಳಿಯ ಕೆರೆ ಮೈಸೂರಿನವರಿಗಷ್ಟೇ ಅಲ್ಲದೇ ಕುವೆಂಪು ಮೂಲಕ ಕನ್ನಡ ಬಲ್ಲ ಎಲ್ಲರಿಗೂ ಗೊತ್ತಾದ ಹಾಗೇ, ತರೀಕೆರೆ ಏರಿ ಮೇಲೆ ಮೂರು ಕರಿಕುರಿಮರಿ ಮೇಯ್ತಿತ್ತೂ ಅನ್ನುವ ನಾಲಿಗೆ ಹೊರಳಿಸುವ ಪದಗಳ ಮೂಲಕ ಗೊತ್ತಿದ್ದ ತರೀಕೆರೆ ಈಗ ವಿಮರ್ಶಕ ರಹಮತ್ ಹೆಸರಿಗೆ ಅಂಟಿಸಿಕೊಂಡ ಕಾರಣಕ್ಕೂ ಖ್ಯಾತಿಗೆ ಬಂದಿದೆ. ಕಳ್ಳರಸೀಕೆರೆ ಅಂತಲೇ ಖ್ಯಾತವಾದ ಅರಸೀಕೆರೆಯಲ್ಲೇ ನಟ ರಾಜಕುಮಾರ್‌ಗೆ ನಟಸಾರ್ವಭೌಮ ಅನ್ನುವ ಬಿರುದು ಬಂದದ್ದು ಅಂತ ಎಷ್ಟೋ ಜನರಿಗೆ ಗೊತ್ತೇ ಇಲ್ಲ! ಊರಿಗೆ ಬಂದವಳು ಕೆರೆಯ ನೀರಿಗೆ ಬಾರಳೇ ಅನ್ನುವ ಹಾಗೇ ಆ ಕೆರೇಲಿ ಹುಟ್ಟಿದಾಕೇನು, ಗೇಕೇನು, ಗೆಡ್ಡೇನು, ಗೆಣಸೇನು? ಅನ್ನುವ ಎಲ್ಲರ ಮಾನವನ್ನೂ ಕಳೆದು ಬಿಸಾಕುವ ಗಾದೆ ಮಾತೂ ಅಷ್ಟೇ ಪ್ರಖ್ಯಾತವಾದದ್ದು. ಕೆರೆಯ ನೀರನು ಕೆರೆಗೆ ಚೆಲ್ಲಿ ವರವ ಪಡೆದವರಂತೆ ಕಾಣಿರೋ ಅನ್ನುವ ದಾಸರ ಮಾತಿನ ಅಂತರಾರ್ಥ ಹಾಗೆಲ್ಲ ಲೌಕಿಕದ ಕೆಸರಲ್ಲಿ ಬಿದ್ದಿರುವ ನನ್ನಂಥ ಸಾಮಾನ್ಯರಿಗೆ ಅರ್ಥವಾಗದ್ದು.&lt;br /&gt;ತಮ್ಮ ಹೆಸರಿನ ಪಕ್ಕದಲ್ಲೇ ಕೆರೆ ಅನ್ನುವ ಅಭಿದಾನವಿದ್ದೂ ಕೃಷಿಗಿರಲಿ ನಿತ್ಯೋಪಯೋಗದ ನೀರಿಗೂ ತತ್ವಾರವಿರುವ ಹಲವು ಹತ್ತು ಊರುಗಳ ಪಟ್ಟಿ ಕ್ಷಣಾರ್ಧದಲ್ಲಿ ಸಿದ್ಧಪಡಿಸಿಕೊಡಬಹುದು. ಅಂಥ ಊರಿನ ಕೆರೆಗಳ ಪಕ್ಕದ ಜಮೀನು ತೋಟಗಳವರು ತಮ್ಮ ಜಾಗವನ್ನು ಒತ್ತರಿಸಿ ಒತ್ತರಿಸಿ ಕೆರೆಯ ಮೂಲ ಆಕಾರಕ್ಕೆ ಕುಂದು ತಂದಿರುವ ಘಟನೆಗಳು ಕೆರೆಯಿರುವ ಎಲ್ಲ ಊರುಗಳ ಮಾಮೂಲಿ ಕರ್ಮಕಾಂಡ. ಮೊದಲೆಲ್ಲ ಕೆರೆ ಎಂದರೆ ಕುಡಿಯುವ ನೀರಿನ ಆಕರ. ಸಂಜೆ ಸೂರ್ಯ ಕಂತುವ ಮೊದಲು ಹಾಗೇ ಬೆಳಗು ಹರಿದು ಸೂರ್ಯ ನೆತ್ತಿ ಮೇಲೆ ಏರುವ ಮೊದಲೂ ಸೊಂಟದಲ್ಲೊಂದು ತಲೆಯ ಮೇಲೊಂದು ಬಿಂದಿಗೆಯಿಟ್ಟುಕೊಂಡ ಚೆಲುವೆಯರು ನೀರಿಗೆ ಕೆರೆಯ ದಾರಿ ಹಿಡಿದು ಬರುತ್ತಿದ್ದರೆಂದರೆ ಆ ಹೆಂಗೆಳೆಯರ ಗುಂಪು ಕಲರವ ಮಾಡುತ್ತ ಕಾಲು ಕಾಲಿಗೆ ತೊಡರುವ ತಮ್ಮ ಕಂದಮ್ಮಗಳನ್ನು ನಿವಾರಿಸಿಕೊಳ್ಳುತ್ತ ಆ ದಾರಿಯುದ್ದಕ್ಕೂ ಜಗಲಿಗಳ ಮೇಲೆ ಸೊಪ್ಪು ಶೋಧಿಸುತ್ತಲೋ, ಹೂವು ಕಟ್ಟುತ್ತಲೋ ಕುಳಿತಿರುತ್ತಿದ್ದ ಅಜ್ಜಮ್ಮಗಳನ್ನು ಮಾತನಾಡಿಸುತ್ತ ಕಷ್ಟ-ಸುಖ ಹೇಳಿಕೊಳ್ಳುತ್ತ ಹೋಗುತ್ತಿದ್ದರೆಂದರೆ ಆ ಮೋಜನ್ನು ಈಗ ವರ್ಣಿಸಲೂ ಅಸಾಧ್ಯವಾಗಿದೆ. ದನಕರುಗಳನ್ನು ಮೇಯಿಸಲು ಕೆರೆಯ ಏರಿಯ ಮೇಲೇ ಅಟ್ಟಿಕೊಂಡು ಹೋದ ದನಗಾಹಿಗಳ ಹಿಂದೆಯೇ ಕತ್ತೆಗಳ ಬೆನ್ನ ಮೇಲೆ ಬಟ್ಟೆಗಳ ಹೊರೆ ಹೊರಿಸಿಕೊಂಡು ಅಗಸರ ಕ್ಯಾರವಾನು ಬರುತ್ತಿತ್ತು. ಕೆರೆಯ ಮುಂದಣ ಪಾವಟಿಕೆಗಳ ಬಳಿ ಕುಡಿಯುವ ನೀರಿನ ಘಟ್ಟಗಳಿದ್ದರೆ ಜಾತಿಗೊಂದೊಂದರಂತೆ ಇರುತ್ತಿದ್ದ ಸ್ನಾನಘಟ್ಟಗಳಲ್ಲಿ ಆಯಾ ಕುಲಕಸುಬು ಬಿಡುವು ಕೊಟ್ಟ ವಾರದ ದಿನಗಳಲ್ಲಿ ಆಯಾ ಜಾತಿಯವರು ಮಡಿಯಾಗುತ್ತಿದ್ದರು. ಕೋಡಿ ಹತ್ತಿರವಿದ್ದ ದೋಭಿಘಾಟಿನಲ್ಲಿ ಊರವರೆಲ್ಲರ ಬಟ್ಟೆಗಳೂ ಮಡಿಯಾಗಿ ಕೋಡಿ ಕಲ್ಲುಗಳಲ್ಲಿ ಒಗೆದು ಒಣಹಾಕಿದ ಬಟ್ಟೆಗಳು ಸೂರ್ಯನ ಪ್ರಖರತೆಯನ್ನೇ ತಗ್ಗಿಸಿಬಿಡುತ್ತಿದ್ದವು. ಬಟ್ಟೆಯೊಗೆದು ಹಿಂಡಿ ಕಲ್ಲಿನ ಮೇಲೆ ಒಣಹಾಕಿ ಅವು ಗಾಳಿಗೆ ಹಾರದಂತೆ ಅವುಗಳ ಮೇಲೊಂದು ಪುಟ್ಟಕಲ್ಲಿನ ಭಾರವನ್ನು ಇರಿಸಿ ಪಾದಗಳನ್ನು ತರಚು ಕಲ್ಲುಗಳ ಮೇಲೆ ಉಜ್ಜುತ್ತಿದ್ದಾಗ ಪಾದದ ಸೀಳಿದ ಸಂದುಗಳಲ್ಲಿದ್ದ ಕೊಳೆ ತಿನ್ನಲು ಪಾದ ಚುಂಬಿಸುತ್ತಿದ್ದ ಮೀನಿನ ನೆನಪು ಬಲು ಮೋಜು. ಬಟ್ಟೆಯೊಗೆದು ಮೆತ್ತಗಾಗಿದ್ದ ಬೆಳೆದ ಉಗುರುಗಳನ್ನು ಕತ್ತರಿಸಿಹಾಕುವುದೂ ಎಷ್ಟು ಸುಲಭದ ಕೆಲಸವಾಗಿತ್ತು. ನೈಲ್ ಕಟ್ಟರಿನಲ್ಲಿ ಗಂಟೆಗಟ್ಟಲೇ ಒದ್ದಾಡಿದರೂ ಸ್ವಚ್ಛವಾಗದ ಟ್ರಿಂ ಆಗದ ಬೆರಳ ಉಗುರುಗಳು ಕ್ಷಣಾರ್ಧದಲ್ಲಿ ಸುಲಭವಾಗಿ ಸಾಪುಗೊಳ್ಳುತ್ತಿದ್ದುದ್ದರ ಮಜವೇ ಬೇರೆ.&lt;br /&gt;&lt;br /&gt;ಊರಿನವರೆಲ್ಲರ ನೀರಿನ ಅಗತ್ಯತೆಯನ್ನೂ ಊರಿನಲ್ಲಿದ್ದ ಒಂದು ಕೆರೆಯೇ ಪೂರೈಸುತ್ತಿದ್ದದ್ದು ಈಗಲೂ ಆಶ್ಚರ್ಯದ ಮಾತೇ. ಜನ ಜಾನುವಾರುಗಳಿಗಾಗಿ ಮಿಕ್ಕುವಂತೆ ಆ ಕೆರೆಯನ್ನು ಪರಿಪೋಷಿಸುತ್ತಿದ್ದ ರೀತಿಯೂ ಸ್ತುತ್ಯಾರ್ಹವೇ. ತಳವಾರ ನೀರುಕಂಟಿ ಭದ್ರಯ್ಯ ಯಾವ ಜಲತಜ್ಞ ಇಂಜಿನಿಯರಿಗಿಂತಲೂ ಮಿಗಿಲಾಗಿ ಕೆರೆಯ ಮೇಲುಸ್ತುವಾರಿ ನೋಡಿಕೊಳ್ಳುತ್ತಿದ್ದನೆಂದರೆ ಸ್ವತಃ ಪಟೇಲರು, ಶ್ಯಾನುಭೋಗರು ಅಥವ ಒಮ್ಮೊಮ್ಮೆ ಅಮಲ್ದಾರರು ಉಸ್ತುವಾರಿಯ ಬಗ್ಗೆ ನಿಗಾ ವಹಿಸುವುದು ಹೆಚ್ಚುಕಡಿಮೆ ಮಾಡಿದರೂ ಅವನು ತಡೆದುಕೊಳ್ಳುತ್ತಿರಲಿಲ್ಲ. ಕೆರೆಯ ತೂಬೆತ್ತಿ ನೀರು ಬಿಡುವುದಕ್ಕೂ ಅವನ ಪಂಚಾಂಗವೇ ಬೇರೆಯದಿತ್ತು. ಯಾರ ಜಮೀನಲ್ಲಿ ಯಾವ ಯಾವ ಬೆಳೆ ಬೆಳೆದಿದ್ದಾರೆ, ಅದಕ್ಕೆ ಅಗತ್ಯವಿರುವ ನೀರೆಷ್ಟು ಎನ್ನುವುದರ ಸಂಪೂರ್ಣ ವಿವರ ಅವನಲ್ಲಿರುತ್ತಿತ್ತು. ಕೆರೆಯ ಸ್ವಚ್ಛತೆಗೆ ಕೊಂಚ ಭಂಗ ತಂದವರಿಗೂ ಅವನ ದಂಡದ ಭರಾಟೆ ಗೊತ್ತಿರುತ್ತಿತ್ತು. ಬೇಸಿಗೆಯ ಕಡೆಯಲ್ಲೊಮ್ಮೆ ಕೆರೆಯ ಹೂಳೆತ್ತಿ ಶುದ್ಧ ಮಾಡುವುದಕ್ಕೆ ಗಾಡಿಗಿಷ್ಟೆಂದು ಸುಂಕ ವಸೂಲಿಮಾಡಿ, ಆಬಾದು ಮಾಡುವವರಿಗೆ, ತೆಂಗಿನ ಸಸಿ ಹಾಕಿಸುವ ಉದ್ದೇಶವುಳ್ಳವರಿಗೆ ತಳವಾರರ ಮಾರ್ಗದರ್ಶನ ಇದ್ದೇ ಇರುತ್ತಿತ್ತು. ಜೊತೆಗೇ ಕೆರೆಗೆ ನೀರಿನ ಹರಿವು ಎಲ್ಲೆಲ್ಲಿಂದ ಬರಬೇಕೋ ಆಯಾ ಮಾರ್ಗಗಳನ್ನು ಸಾಪುಗೊಳಿಸಿ ಮಳೆಗಾಲಕ್ಕೆ ಪೂರ್ವದಲ್ಲೇ ಒಂದು ವಿಚಕ್ಷಣೆ ಕೂಡ ನಡೆದಿರುತ್ತಿತ್ತು. ಒಮ್ಮೊಮ್ಮೆ ಬಟಾಬೇಸಿಗೆಯಲ್ಲಿ ಕೆರೆಯನೀರೊಣಗಿ ಪರಿಸ್ಥಿತಿ ವಿಪರೀತಕ್ಕಿಟ್ಟುಕೊಂಡಾಗಲೂ ನೀರುಕಂಟಿಯ ಲೆಕ್ಕಾಚಾರವೇ ಬೇರೆಯಾಗಿರುತ್ತಿತ್ತು. ಪಂಚಾಯತಿನವರ ತಾಲ್ಲೂಕು ಅಮಲ್ದಾರರ ಸಹಾಯ ಪಡೆದು ಕುಡಿಯುವ ನೀರಿನ ಘಟ್ಟವಿದ್ದಲ್ಲಿ ತೋಡುಗುಂಡಿ ತೆಗೆದು ಒಸರುವ ನೀರಒರತೆಯನ್ನು ಇನಿತೂ ಹಾಳಾಗದಂತೆ ಕಾಪಾಡಿ ಜನಜಾನುವಾರುಗಳನ್ನು ಜಲಕ್ಷಾಮದಿಂದ ಪೊರೆಯುತ್ತಿದ್ದ ಆ ದಿನಗಳಲ್ಲಿನ ಸ್ವಾರ್ಥ ರಹಿತ ಜನಸೇವೆಯ ಕಿಲುಬೂ ಈ ಹೊತ್ತಿನ ನಮ್ಮ ಅಧಿಕಾರಷಾಹಿಗಳಿಗಿಲ್ಲದಿರುವುದು ನಮ್ಮ ದೌರ್ಭಾಗ್ಯ.  &lt;br /&gt;ಯಾವಾಗ ಕೊಳಾಯಿಗಳಲ್ಲಿ ನೀರು ಮನೆಯ ಅಂಗಳಕ್ಕೆ ಬರತೊಡಗಿತೋ ಆವತ್ತಿನ ದಿನದಿಂದಲೇ ಕೆರೆಗಳಿಗೆ ಶಾಪ ಹಿಡಿಯಿತೆನ್ನಬೇಕು. ಸ್ವಲ್ಪವೂ ಶ್ರಮ ಪಡದೇ ಕುಡಿದ ನೀರು ಅಲ್ಲಾಡದ ಹಾಗೆ ಅನುಕೂಲಗಳು ಸಿಕ್ಕುವಂತಾದರೆ ಮನುಷ್ಯ ಹೆಚ್ಚು ಹೆಚ್ಚು ಸ್ವಾರ್ಥಿಯಾಗುತ್ತಾನೆ ಅನ್ನುವುದು ಸತ್ಯ. ಯಾವಾಗ ಕೆರೆಯ ದಾರಿ ಜನ ಮರೆತರೋ ಪೋಲಿಪಟಾಲಮ್ಮುಗಳಿಗೆ, ದನಗಾಹಿಗಳಿಗೆ, ಬಹಿರ್ದೆಸೆಗೆಂದು ಕೋಡಿಯ ತುದಿಯವರೆಗೂ ಓಡಬೇಕಲ್ಲ ಎಂದು ಪರಿತಪಿಸುತ್ತಿದ್ದ ಶುದ್ಧ ಸೋಂಬೇರಿಗಳಿಗೆ ಈಗ ಸುಲಭವಾಯ್ತು. ಸುಂಕ ಕಟ್ಟದೇ ಬೇಕಾಬಿಟ್ಟಿ ಕೆರೆಯ ಮಣ್ಣನ್ನೆತ್ತಿಕೊಂಡು ಹೋಗುವವರಿಗೆ ಕಾಲ ನಡೆಸಿತು. ಕೆರೆಯ ಗೋಡು ಹೇಗೆಂದರೆ ಹಾಗೇ ತೋಡಿದ ಕಾರಣ ಸೊಳ್ಳೆಗಳಿಗೂ, ಹಂದಿಗಳಿಗೂ ಸಾಮ್ರಾಜ್ಯವನ್ನೇರ್ಪಡಿಸಿಕೊಳ್ಳಲು ತಾಂಬೂಲ ಕೊಟ್ಟಂತಾಯಿತು. ಕೆರೆಯ ಅಂಗಳದಲ್ಲಿ ಮಾತ್ರ ರಾರಾಜಿಸುತ್ತಿದ್ದ ಆಪಿನ ಜೊತೆಗೇ ಇತರ ಮುಳ್ಳುಕಂಟಿಗಳೂ, ಪೊದೆಗಳೂ ಬೆಳೆದ ಕಾರಣ ಕೆರೆಯ ಅಂಗಳವೇ ಸಾರ್ವಜನಿಕ ಶೌಚಾಲಯವಾಗಿ ಪರಿವರ್ತನೆಗೊಂಡು ಕೆರೆಯ ಏರಿಯ ಮೇಲಿನ ಸೊಗಾಸಾದ ಸಂಜೆಯ ಸುತ್ತಾಟ ಮರಣಾಂತಿಕ ಶಿಕ್ಷೆಯಾಗಿ ಬದಲಾಯಿತು, ಒತ್ತುವರಿ ಮಾಡುವವರಿಗೆ ಸಿಕ್ಕ ನಿಧಿಯೂ ಆಯಿತು. ಕಾಲ ಕಳೆದಂತೆ ನೀರಿನ ಒರತೆಗಳು ಅಕ್ಕಪಕ್ಕದ ಸ್ಥಳಗಳಲ್ಲಿ ತೋಡಿದ ಕೊಳವೆಬಾವಿಗಳಿಂದಾಗಿ ಮಾಯವಾಗಿ ಕೆರೆಯ ಅಂಗಳವೆಂಬುದು ಶೋಭೆಕಳೆದುಕೊಂಡು ಗಲೀಜಿನ ಗ್ಯಾರೇಜಾಯಿತು, ಮುನಿಸಿಪಾಲಿಟಿಯವರು ಕಸತಂದು ಹೊತ್ತು ಹಾಕುವ ತೊಟ್ಟಿಯಾಗಿಯೂ ಬದಲಾಯಿತು. ಕೋಡಿ ಹರಿಯುತ್ತಿದ್ದ ಅಕ್ಕಪಕ್ಕದ ಜಾಗ ವಸತಿಹೀನರ ಆಕ್ರಮಣಕ್ಕೆ ತುತ್ತಾಗಿ ಅಕ್ರಮ ಸಕ್ರಮದ ಅರ್ಜಿಗೆ ವಸ್ತುವಾಗಿ ಬದಲಾಯಿತು. ತಳವಾರ ತೋಟಿಗಳು ಕಾಲವಾಗಿ ಅವರ ಮಕ್ಕಳು ಅವರಿವರ ಬಾಯಿಂದ ಅವರ ಹಿರೀಕರ ಬದುಕನ್ನು ತಿಳಿಯುವ ಮಟ್ಟಿಗೆ ಕಾಲ ಓಡುತ್ತೋಡುತ್ತ ಇವತ್ತಿನ ಮಟ್ಟಿಗೆ ಬಂದು ನಿಂತಿದೆ.&lt;br /&gt;&lt;br /&gt;ಈಗ ಯಾವುದೇ ಊರಿಗೆ ಹೋಗಿ ನೋಡಿ. ವರ್ಷದ ಒಂದಲ್ಲ ಒಂದು ಕಾಲದಲ್ಲಿ ಕುಡಿಯುವ ನೀರಿಗೆ ತತ್ವಾರವಿದ್ದೇ ಇರುತ್ತದೆ. ಮಳೆಗಾಲ ಚೆನ್ನಾಗಿ ನಡೆಸಿದರೂ ಬಿದ್ದ ನೀರು ಅಂತರ್ಜಲವಾಗಿ ಬದಲಾಗದೇ ಹರಿದು ಹೋಗಿ ಕೆರೆಕಟ್ಟೆಗಳು ಪೋಷಿಸುವವರಿಲ್ಲದೇ ಒಣಗಿಹೋಗಿ ಎಲ್ಲ ಊರುಗಳವರೂ ಭೂಮಿಯ ಆಳದಾಳದಿಂದ ನೀರನ್ನೆತ್ತುವ ಕೊಳವೆಬಾವಿಗೆ ಶರಣು ಹೋಗಿದ್ದಾರೆ. ಸಹಜವಾಗಿ ನೈಸರ್ಗಿಕವಾಗಿ ಸಿಕ್ಕ ನೀರನ್ನು ಸರಿಯಾಗಿ ಹಿಡಿದಿಟ್ಟುಕೊಳ್ಳದ ಕಾರಣ ಕೊಳವೆಬಾವಿಗಳಿಂದ ಹೊರಬರುವ ಸಲ್ಫೇಟ್ ನೀರನ್ನೋ ಅಥವ ಇತರ ವಿಷಕಾರೀ ವಸ್ತುಗಳಿಂದ ಒಡಗೂಡಿದ ನೀರನ್ನೇ ಜನ ಜಾನುವರು ಉಪಯೋಗಿಸಲೇ ಬೇಕಾದ ಅನಿವಾರ್ಯತೆಯೊದಗಿದೆ. ನಮ್ಮನ್ನು ಪೊರೆಯಬೇಕಾದ ಸರ್ಕಾರಗಳೇ ನೆಲದ ಅದಿರನ್ನು ಕದ್ದು ತೆಗೆದು ಮಾರಾಟವಾಡುವವರ ಅಡುಂಬೊಲವಾಗಿರುವಾಗ ಕೆರೆಯ ನೀರಿಗೆ ಯಾವ ದೊಣ್ಣೆನಾಯಕನ ಅಪ್ಪಣೆ ಯಾರಿಗೆ ಬೇಕಾಗಿದೆ?&lt;br /&gt;&lt;br /&gt;ಇದೇನು ಕೆರೆಗಳ ಬಗ್ಗೆ ಹೇಳುತ್ತ ಇದ್ದವನು ಗಲೀಜು ರಾಜಕೀಯಕ್ಕೆ ವಿಷಯಾಂತರ ಮಾಡಿದೆ ಅಂತ ಗೊಣಗಿದಿರಾ? ಇವತ್ತು ರಾಜಕೀಯ ಇಲ್ಲದ ಒಂದೇ ಒಂದು ಸಣ್ಣ ಕ್ಷೇತ್ರ ತೋರಿಸಿ. ನಾವೆಲ್ಲರೂ ರಾಜಕೀಯ ಮಾಡಲೇಬೇಕು. ಅಂದರೆ ರಾಜನಿರಲಿ ಬಿಡಲಿ ನಮ್ಮ ಸವಲತ್ತುಗಳನ್ನು ಆಪೋಷನ ತೆಗೆದುಕೊಳ್ಳುವ ಯಾರದೇ ವಿರುದ್ಧವೂ ನಮ್ಮ ಬಂಡುತನ ತೋರಲೇಬೇಕು. ಯಾವ ಕೆರೆ ಅಭಿವೃದ್ಧಿಯ ಹೆಸರಲ್ಲಿ ಎಷ್ಟು ಕೋಟಿಗಳ ಸ್ವಾಹ ಆಗಿದೆ ಅಂತ ಬೇಕಾದರೆ ಆರ್.ಟಿ.ಐನಲ್ಲಿ ಅರ್ಜಿ ಸಲ್ಲಿಸಿ ಬರೇ ಹತ್ತು ರೂಪಾಯಿಯಲ್ಲಿ ಸಮಗ್ರ ವಿವರ ಪಡೀಬಹುದು. ವಿಷಯ ಯಾಕೆ ಎತ್ತಿದೆ ಅಂದರೆ ಇತ್ತೀಚೆಗೆ ಹಿಂದೆಲ್ಲ ತಳವಾರ ತೋಟಿಗಳು ಮಾಡುತ್ತ ಇದ್ದ ಕೆಲಸವನ್ನು ಅಂದರೆ ಕೆರೆ ಬಾವಿ ತೋಡುಗಳನ್ನು ನಿರ್ವಹಿಸಲು ಸರ್ಕಾರದ ಒಂದು ಇಲಾಖೆಯೇ ಇದೆಯಂತೆ. ಕೆರೆ ತೊರೆಗಳ ಹೂಳೆತ್ತಿಸಿ ಅಲ್ಲಿ ಮೀನುಗಾರಿಕೆಯನ್ನು ಅಭಿವೃದ್ಧಿಪಡಿಸಿ, ಅವರಿವರು ಒತ್ತರಿಸದಂತೆ ತಡೆಯಲು, ಶುದ್ಧ ನೀರನ್ನು ಜನ ಜಾನುವಾರಿಗೆ ನೀಡುವ ಸಲುವಾಗಿ ಆ ಇಲಾಖೆಗೆ ವರ್ಷೇ ವರ್ಷೇ ಬಜೆಟ್ಟಿನಲ್ಲಿ ಕೋಟಿಗಳ ಮೊತ್ತ ನಿಗದಿಮಾಡಲಾಗಿರುತ್ತದೆ. ಆದರೆ ಎಲ್ಲ ಊರುಗಳ ಕೆರೆಗಳ ಏರಿಯ ಕಲ್ಲುಗಳು ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿವೆ, ನಗರೀಕರಣದ ಕಾರಣ ಗಮನಿಸುವವರಿಲ್ಲದೇ ಗಲೀಜು ಗುಂಡಿಗಳಾಗುತ್ತಿವೆ.&lt;br /&gt;&lt;br /&gt;ಹೊತ್ತುಗೊತ್ತಿಲ್ಲದೇ ಬರುವ ನಲ್ಲಿ ನೀರಿಗೆ ತೆರಿಗೆ ಕಟ್ಟಿಯೂ ಶಬರಿಯೋಪಾದಿಯಲ್ಲಿ ಅದರ ಬರವಿಗೆ ಕಾಯುತ್ತಿರುವ ಜನಸಮುದಾಯದ ಸಾಮಾನ್ಯ ಸದಸ್ಯನಾದ ನನಗೂ ಈ ಸಾರಿಗೆ ಬಸ್ಸುಗಳ ಸಂಚಾರ, ನಗರ ಜೀವನದ ತಲ್ಲಣ-ತವಕಗಳು, ಏರುತ್ತಿರುವ ನಿತ್ಯಬಳಕೆಯ ವಸ್ತುಗಳ ಬೆಲೆ ಕನಿಷ್ಠ ಇಷ್ಟು ಹೊತ್ತಾದರೂ ಅವೆಲ್ಲ ತರಲೆ, ತಾಪತ್ರಯಗಳನ್ನು ಮರೆಸಿ, ಮಾಯವಾದ ಮದಗದಂಥ ಹಲವು ಕೆರೆಗಳ ಕುರಿತು ಆಲೋಚಿಸುವಂತೆ ಮಾಡಿತು. ಜಲದ ಕಣ್ಣುಗಳನ್ನು ತೆರಸುವ ಆ ಮೂಲಕ ಶುದ್ಧವಾದುದನ್ನು ಪಡೆಯುವ ಅವಕಾಶ ಆಧುನಿಕ ಮನೋಭೂಮಿಕೆಯಲ್ಲಿರುವ ನಮ್ಮಿಂದ ಸಾಧ್ಯವಿಲ್ಲದಿರುವುದೇ ಈ ಹೊತ್ತಿನ ನಮ್ಮ ಸಮಸ್ಯೆಗಳಿಗೆ ಮೂಲ. ಬಳಸುವ ನೀರಿನ ಮೂಲ ಯಾವುದು ಎಂದು ತಿಳಿಯುವ ಗೋಜಿಗೂ ಹೋಗದೇ ನಲ್ಲಿಯಲ್ಲಿ ಸುರಿಯುವ ನೀರನ್ನು ದಂಢಿಯಾಗಿ ಬಳಸುತ್ತಿರುವ ನಮ್ಮ ಕುರುಡು ಆ ನೀರು ನಿಲ್ಲುವವರೆಗೂ ಅನ್ಯರಿಗಿರಲಿ ನಮಗೇ ಗೊತ್ತಾಗುವುದಿಲ್ಲ ಅನ್ನುವುದು ಸದ್ಯದ ಸತ್ಯ. ಕೆರೆಯ ಶುದ್ಧಿಗೆ ಮೊದಲು ನಮ್ಮೊಳಗಿನ ಕರೆಗೆ ಓಗೊಡೋಣ, ನಂತರ ಕೆರೆ ಕಟ್ಟೆಗಳಿಗೆ ನೀರು ಹಾಯಿಸುವ ಮಾತನಾಡೋಣ. ಏನಂತೀರಿ?&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/5254102750204147054-8222461229631319631?l=bemkikaddi.blogspot.com' alt='' /&gt;&lt;/div&gt;</content><link rel='replies' type='application/atom+xml' href='http://bemkikaddi.blogspot.com/feeds/8222461229631319631/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://www.blogger.com/comment.g?blogID=5254102750204147054&amp;postID=8222461229631319631' title='0 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/5254102750204147054/posts/default/8222461229631319631'/><link rel='self' type='application/atom+xml' href='http://www.blogger.com/feeds/5254102750204147054/posts/default/8222461229631319631'/><link rel='alternate' type='text/html' href='http://bemkikaddi.blogspot.com/2011/06/blog-post.html' title='ಕೆರೆ ಕೊಟ್ಟ ಕರೆ......'/><author><name>ಬೆಂಕಿಕಡ್ಡಿ</name><uri>http://www.blogger.com/profile/13181705369161334860</uri><email>noreply@blogger.com</email><gd:image rel='http://schemas.google.com/g/2005#thumbnail' width='21' height='32' src='http://4.bp.blogspot.com/_bUAIZF0Yo1g/TKdTK-6rv2I/AAAAAAAAAJY/QXUJAVKh9ps/S220/dsr4.jpg'/></author><thr:total>0</thr:total></entry><entry><id>tag:blogger.com,1999:blog-5254102750204147054.post-5612987580294828146</id><published>2010-11-14T08:03:00.000+05:30</published><updated>2010-11-14T08:05:31.528+05:30</updated><title type='text'>ಮಕ್ಕಳ ದಿನಕ್ಕೆ ಹೀಗೊಂದು ಆಲೋಚನೆ.. .. .. .. ..</title><content type='html'>&lt;span style="font-weight: bold;"&gt;ಮಕ್ಕಳ ದಿನಕ್ಕೆ ಹೀಗೊಂದು ಆಲೋಚನೆ.. .. .. .. .. &lt;/span&gt;&lt;br /&gt;&lt;br /&gt;ನವಂಬರ್ ೧೪ರ ಈ ದಿನ ಮಕ್ಕಳ ದಿನಾಚರಣೆ. ಮಹಿಳೆಯರಿಗೆ, ಹೆತ್ತವರಿಗೆ, ಪ್ರೀತಿಯಲ್ಲಿ ಬಿದ್ದವರಿಗೆ, ಪರಿಸರಕ್ಕೆ, ಪಾಠ ಹೇಳುವ ಮಾಸ್ತರರಿಗೆ ಹೀಗೆ ಎಲ್ಲರಿಗೂ ದಿನಾಚರಣೆಗಳನ್ನು ಆಚರಿಸುವ ನಾವು ನಿಜದ ಅರ್ಥದಲ್ಲಿ ಈ ದಿನಾಚರಣೆಗಳಿಗಿರುವ ಮಹತ್ವವನ್ನು ಮರೆತುಬಿಟ್ಟಿದ್ದೇವೆ. ಮಾಧ್ಯಮಗಳಲ್ಲಿ ಬರುವ ವರದಿಗಳು, ಸಂಘ ಸಂಸ್ಥೆಗಳು ನಡೆಸುವ ಸನ್ಮಾನ, ಗೌರವರ್ಪಣೆಗಳಲ್ಲೇ ಬಹುತೇಕ ದಿನಾಚರಣೆಗಳು ಕಳೆದುಹೋಗಿಬಿಡುತ್ತಿವೆ. ಶಾಲಾ ಕಾಲೇಜುಗಳಂತೂ ಭಾಷಣ ಸ್ಪರ್ಧೆಯನ್ನೋ, ಲೇಖನಸ್ಪರ್ಧೆಯನ್ನೋ ನಡೆಸಿ ತಮ್ಮ ಜವಾಬ್ದಾರಿಯನ್ನು ಮುಗಿಸಿಕೊಳ್ಳುತ್ತಿವೆ. ಸಂಜೆಯ ಸಾಂಸ್ಕೃತಿಕ ಕಾರ್ಯಕ್ರಮಗಳಂತೂ ಸಿನಿಮಾ ಹಾಡುಗಳ ಸಿಡಿಗಳಿಗೆ ಕೈಕಾಲಾಡಿಸುವ ವ್ಯರ್ಥ ಉಪಕ್ರಮಗಳಾಗೇ ನಿಲ್ಲುತ್ತಿವೆ. &lt;br /&gt;&lt;br /&gt;ಉದಾಹರಣೆಗೆ ಮಕ್ಕಳದಿನಾಚರಣೆಯನ್ನು ನಾವು ನಡೆಸುತ್ತಿರುವ ಕ್ರಮವನ್ನೇ ನೋಡಿ. ಪಂಡಿತ ನೆಹರೂ ತಮ್ಮ ಜನ್ಮದಿನಾಚರಣೆಯನ್ನು ಮಕ್ಕಳ ದಿನವನ್ನಾಗಿ ಆಚರಿಸಲು ಹೇಳಿದ್ದನ್ನೇ ಮತ್ತೆ ಮತ್ತೆ ನೆನೆಯುತ್ತ, ಅವರು ಅಂದೆಂದೋ ಧರಿಸಿದ್ದ ದಿರಿಸನ್ನೋ, ಅವರು ಬರಹಗಾರರಾಗಿದ್ದನ್ನೋ ಅಥವಾ ಅವರು ಜಾರಿಗೆ ತಂದ ಪಂಚಶೀಲ ತತ್ವವನ್ನೋ ಪುನಃ ಪುನಃ ಹೇಳಿ ಅವರು ಕೋಟಿನ ಗುಂಡಿಗೆ ಸಿಕ್ಕಿಸಿಕೊಳ್ಳುತ್ತಿದ್ದ ಗುಲಾಬಿಯನ್ನು ನಾಚಿಸುತ್ತೇವೆ. ನೆಹರೂ ಯಾವಕಾರಣಕ್ಕೆ ಮಕ್ಕಳಿಗೆ ಇಷ್ಟು ಮಹತ್ವ ನೀಡಿದರು? ಅವರೇಕೆ ಎಲ್ಲ ಮಕ್ಕಳಿಗೂ ‘ಚಾಚಾ’ಆಗಿರಲು ಬಯಸಿದ್ದರು ಎಂದು ಬಹುತೇಕರು ಆಲೋಚಿಸುವುದೇ ಇಲ್ಲ.&lt;br /&gt;&lt;br /&gt;‘ಪ್ರತಿಯೊಂದು ಮಗುವೂ ಮನುಷ್ಯನೊಬ್ಬನ ತಂದೆ’ ಎನ್ನುವ ಆಂಗ್ಲ ಗಾದೆಯೊಂದಿದೆ. ಬಾಲ್ಯದಲ್ಲಿ ಕಲಿತ ಬುದ್ಧಿ-ಮನಸ್ಸುಗಳೇ ಮುಂದಿನ ದಿನಮಾನಗಳನ್ನು ರೂಪಿಸುವುದರಿಂದ ಎಲ್ಲರ ಬಾಲ್ಯವೂ ಪರಿಶುದ್ಧವಾಗಿರುತ್ತದೆ ಎನ್ನುವ ಮಾತೂ ಇದೆ. ಹಸಿವು, ನೀರಡಿಕೆ, ನಿದ್ದೆಗಳು ಮಾತ್ರ ಮಕ್ಕಳು ದೊಡ್ಡವರನ್ನು ಕಾಡುವಂತೆ ಮಾಡುತ್ತವೆ. ಉಳಿದಂತೆ ಮಕ್ಕಳ ಮನಸ್ಸು ಎಷ್ಟು ನಿರ್ಮಲವಾಗಿರುತ್ತದೆ ಅಂದರೆ ಅದಕ್ಕೆಂದೇ ನಮ್ಮ ಹಿರಿಯರು ಮಕ್ಕಳನ್ನೂ ದೇವರ ಸ್ವರೂಪ ಅಂತ ಕರೆದದ್ದು. ಕೂಡು ಕುಟುಂಬ ವ್ಯವಸ್ಥೆ ಇದ್ದಷ್ಟೂ ದಿನ ಮಕ್ಕಳು ಪಂಕ್ತಿಭೇದವಿಲ್ಲದೇ, ತರತಮಗಳ ಸೋಕಿಲ್ಲದೇ ಉಂಡು ಆಡಿ ನಲಿಯುತ್ತಿದ್ದವು. ಅಜ್ಜನೋ, ಅಜ್ಜಿಯೋ. ದೊಡ್ಡಮ್ಮ, ದೊಡ್ಡಪ್ಪನೋ ನೀತಿ ಕತೆಗಳನ್ನು ಹೇಳುವ ಮೂಲಕ ಒಳಿತು ಕೆಡುಕಗಳ ವ್ಯತ್ಯಾಸವನ್ನು ಮನದಟ್ಟು ಮಾಡಿ ಮಗುವಿನ ಮನಸ್ಸಿನಲ್ಲಿ ನೈತಿಕತೆಯ ಬೀಜನೆಟ್ಟು ಬೆಳಸಿರುತ್ತಿದ್ದರು. ಅವರು ಕಲಿಸುವ ಬಾಯಿಪಾಠ, ಮಗ್ಗಿ, ಶ್ಲೋಕ, ಅಮರಗಳಿಗೆ ಕಾದು ಉಳಿದ ಮಕ್ಕಳೊಂದಿಗೆ ಬೆರೆತು ಆಡಿ ನಲಿದು ಬಾಲ್ಯವೆಂಬ ಬೆಲ್ಲದ ರುಚಿ ನಿರಂತರ ಉಳಿಯುವಂತೆ ಅದನ್ನು ಸವಿಯುತ್ತಿದ್ದವು. ನಮ್ಮ ಜನಪದರು ಸೃಷ್ಟಿಸಿರುವ ಕತೆ ಹಾಡುಗಳಲ್ಲಂತೂ ಮಕ್ಕಳಿಗೆ ಇಷ್ಟವಾಗುವ ಗಿಡ,ಮರ,ಪಶು, ಪಕ್ಷಿಗಳೂ ಮಾತನಾಡಿ ಬದುಕಿನ ಸೂಕ್ಷ್ಮಗಳನ್ನು ಮಗುವಿನ ಮನಸ್ಸಿನೊಳಗಿಳಿಸಿ ಆ ಮಗು ತನ್ನ ಭಾವೀ ಜೀವನ ರೂಪಿಸಿಕೊಳ್ಳುವ ನಿಜದ ಯತ್ನವಾಗಿ  ಇರುತ್ತಿತ್ತು. ಊರೊಳಗಿನ ಉತ್ಸವ, ಜಾತ್ರೆ, ಹಬ್ಬಗಳಲ್ಲಿ ಮನೆಯವರೆಲ್ಲ ಭಾಗವಹಿಸುವ ಮೂಲಕ ಮನುಷ್ಯ ಸಂಬಂಧಗಳ ಅನಾವರಣವನ್ನು ತಮಗೆ ಗೊತ್ತಿಲ್ಲದೇ ಮಕ್ಕಳು ಅರಿಯುತ್ತಿದ್ದವು. ಶಾಲೆ ಮುಗಿದ ಮೇಲೆ ದೊಡ್ಡಬಯಲಲ್ಲಿ ಚಿನ್ನಿದಾಂಡು, ಕಬಡ್ಡಿಗಳನ್ನಾಡಿ ಊರ ಹೊರಗಿನ ತೋಪಿನಲ್ಲಿ ಮರಕೋತಿ ಆಟವಾಡಿ, ರಜಾ ದಿನಗಳಲ್ಲಿ ಹಳ್ಳದಲ್ಲಿ ಈಜಿ ದೈಹಿಕ ಸಾಮರ್ಥ್ಯದ ಜೊತೆಜೊತೆಗೇ ತಾರ್ಕಿಕ ಪ್ರಜ್ಞೆಯನ್ನೂ ಹಿಂದಿನ ಕಾಲದ ಮಕ್ಕಳು ಪಡೆಯುತ್ತಿದ್ದರು.&lt;br /&gt;&lt;br /&gt;ಮನೆತುಂಬ ಮಕ್ಕಳಿರುವ ಕಾಲ ಈಗ ಬದಲಾಗಿದೆ. ವಿಘಟಿತ ಕುಟುಂಬ ವ್ಯವಸ್ಥೆ ಎಲ್ಲ ಮನೆ ಊರುಗಳಲ್ಲೂ ವಿಸ್ತರಿಸಿ ನಗರೀಕರಣದ ನೆರಳು ಮನೆಗೊಂದೇ ಮಗುವೆಂಬ ಸೂತ್ರವನ್ನು ಪಠಿಸಿ,ಹೆತ್ತವರ ಹಣೆಯಲ್ಲಿ ಮಗುವಿನ ಭವಿಷ್ಯದ ಚಿಂತೆಯ ಗೆರೆಯನ್ನು ಢಾಳಾಗಿಸಿದೆ. ಬಾಲ್ಯದ ಆಟೋಟಗಳಿಗಿಂತಲೂ ಅರಿವಿರದ ಭಾಷೆಯ ರೈಮುಗಳನ್ನು ಮನಸ್ಸಿಗೊಗ್ಗದ ಶೈಲಿಯಲ್ಲಿ ಹಾಡಿಸುತ್ತ, ಕೃತಕತೆಯನ್ನೆ ಸಹಜವೆಂದುಕೊಳ್ಳುವ ಹಾಗೆ ಬೆಳಸುತ್ತ ನೈಸರ್ಗಿಕವಾಗಿ ಬಿಡುಗಡೆಯಾಗಬೇಕಿರುವ ಮುಗ್ಧತೆಯ ಆವರಣಕ್ಕೆ  ಕೌಶಲ್ಯದ ಹೆಸರಿನ ಮೇಲಾಟಗಳು ದಾಳಿ ಇಟ್ಟಿವೆ. ಸಹಜವಾದ ಬೇಕು ಬೇಡಗಳಿಗಿಂತಲೂ ಒತ್ತಾಯದ ಹೇರಿಕೆಗಳು ಮಕ್ಕಳ ಮುಗ್ಧತೆಯನ್ನೇ ಆಪೋಷನ ತೆಗೆದುಕೊಂಡಿವೆ. ‘ಇಂದಿನ ಮಕ್ಕಳೇ ನಾಳಿನ ಪ್ರಜೆಗಳು’ ಎಂದು ಹೇಳುತ್ತಲೇ ಆ ಮಕ್ಕಳನ್ನು ಇರುಳು ಕಂಡ ಬಾವಿಗೆ ಹಗಲಲ್ಲಿ ನೂಕುವ ಕಾಯಕ ದಿನದಿಂದ ದಿನಕ್ಕೆ ಹೆಚ್ಚು ಹೆಚ್ಚು ವ್ಯವಸ್ಥಿತವಾಗಿ ನಡೆಯುತ್ತಿದೆ, ಅಷ್ಟೆ.&lt;br /&gt;&lt;br /&gt;ಮಕ್ಕಳ ಶಿಕ್ಷಣ, ಅವರ ಹಕ್ಕುಗಳ ಕುರಿತಂತೆ ಇರುವ ನಮ್ಮ ಕಾನೂನುಗಳು, ಕಡ್ಡಾಯ ಶಿಕ್ಷಣದ ಮಹತ್ವ ಇತ್ಯಾದಿ ಬಹುಚರ್ಚಿತ ವಿಷಯಗಳನ್ನು ಬಿಟ್ಟು ಮೇಲ್ನೋಟಕ್ಕೆ ಸಿಗಬಹುದಾದ ಮಕ್ಕಳ ಸಾಹಿತ್ಯ ಮತ್ತು ಮಕ್ಕಳ ಸಿನಿಮಾಗಳನ್ನು ಕುರಿತು ಯೋಚಿಸಹೋದರೆ ಅಲ್ಲೂ ಇದೇ ಕತೆಯೇ! ಕನ್ನಡದಲ್ಲಿ ಮಕ್ಕಳ ಸಾಹಿತ್ಯ ಸಾಕಷ್ಟು ವಿಪುಲವಾಗಿಯೇ ಇದೆ. ಅನ್ಯದೇಶಗಳಿಂದ ಬಂದು ನಮ್ಮ ಮಕ್ಕಳ ಮನಸ್ಸಲ್ಲಿ ಕೂತುಬಿಟ್ಟಿರುವ ಡಾನ್ ಕ್ವಿಕ್ಸೋಟ, ಅಲೀಸ್ ಇನ್ ವಂಡರ್ ಲ್ಯಾಂಡ್, ಸಿಂಡ್ರೆಲ, ಡಿಸ್ನಿ ವರ್ಲ್ಡ್‌ನ ಟಾಮ್ ಅಂಡ್ ಜೆರ್ರಿ ಮತ್ತಿತರ ಕತೆಗಳು, ಕಾರ್ಟೂನ್ ನೆಟ್‌ವರ್ಕಿನ ಬಹುತೇಕ ತರ್ಕಾತೀತ ಸಶೇಷ ಧಾರಾವಾಹಿಗಳಿಗಿಂತಲೂ ಸಶಕ್ತವಾದ ಅವಕ್ಕಿಂತಲೂ ಕುತೂಹಲ ಮತ್ತು ನೈತಿಕತೆಯನ್ನು ಇನ್ನಷ್ಟು ವಿವರವಾಗಿ ಬಗೆಯಬಲ್ಲ ಸಾಹಿತ್ಯ ಕೃತಿಗಳು ನಮ್ಮಲ್ಲೇ ಇವೆ. ಆದರೆ ಅವನ್ನು ನಮ್ಮ ಭಾಷೆಗಿರುವ ಮಾರುಕಟ್ಟೆಯ ಮಿತಿಯಲ್ಲಿ ಪುನರ್ ನಿರ್ಮಿಸುವುದು ಸಾಧ್ಯವಿಲ್ಲವಾಗಿದೆ. ಪಂಚತಂತ್ರದ ಕತೆಗಳು, ರಾಮಾಯಣ ಮಹಾಭಾರತದ ಕತೆಗಳನ್ನು ಈಗಾಗಲೇ ವಿದೇಶೀ ಸಂಸ್ಥೆಗಳು ಪುನಃ ರೂಪಿಸುತ್ತಿರುವುದನ್ನೂ ಮರೆಯಬಾರದು. ಆದರೆ ಇದು ಹೇಳುವಷ್ಟು ಅಥವ ಬರೆಯುವಷ್ಟು ಸುಲಭದ್ದಲ್ಲ. ಏಕೆಂದರೆ ಮಕ್ಕಳ ಬಹುಮುಖ ಬೆಳವಣಿಗೆಗೆ ಅಂದರೆ ಅವರ ಮಾನಸಿಕ, ಬೌದ್ಧಿಕ, ಸಾಮಾಜಿಕ ಹಾಗೂ ಭಾಷಾ ಬೆಳವಣಿಗೆಯ ಸಹಕಾರಿಯಾಗಿಯೂ ಇವನ್ನೆಲ್ಲ ನಾವು ಉಪಯೋಗಿಸಿಕೊಳ್ಳಬೇಕು ಎಂಬ ವಾದ ಈ ಹಂತದಲ್ಲೇ ಹುಟ್ಟುತ್ತದೆ. ಮಕ್ಕಳ ಸಹಜ ಕುತೂಹಲವನ್ನು ತಣಿಸುವವೆನ್ನುವ ಏಕೈಕ ಕಾರಣ ಇಲ್ಲಿ ಸಾಕಾಗುವುದಿಲ್ಲ. ಇಂಥ ವಿಷಯಗಳಲ್ಲಿ ಸಂಶೋಧನೆ ಮತ್ತು ಪ್ರಯೋಗಗಳನ್ನು ನಡೆಸದ ಹೊರತೂ ಇವನ್ನೆಲ್ಲ ಬರಿಯ ಚರ್ಚೆಯ ವಸ್ತುವನ್ನಾಗಿಯಷ್ಟೇ ನಾವು ಪರಿಗಣಿಸಬೇಕು.&lt;br /&gt;&lt;br /&gt;ಮಕ್ಕಳ ಮನಸ್ಸಿಗೆ ಮುದ ನೀಡುವ ಸಾಹಿತ್ಯ ಹೇಗಿರಬೇಕು? ಅವರು ಯಾವ ರೀತಿಯ ಸಾಹಿತ್ಯ ಇಷ್ಟಪಡುತ್ತಾರೆ? ಅವರ ಬುದ್ಧಿ ಭಾವನೆಗಳ ಬೆಳವಣಿಗೆಗೆ ಇಂಬು ನೀಡಬಲ್ಲ ವಿಷಯ ವಿವೇಚನೆ ನಮ್ಮ ಸಾಹಿತಿಗಳಿಗಿದೆಯೇ? ಸಾಹಿತ್ಯದ ಯಾವ ಪ್ರಕಾರ ಮಕ್ಕಳಿಗೆ ಖುಷಿ ಕೊಡುತ್ತದೆ? ಇತ್ಯಾದಿ ಪ್ರಶ್ನೆಗಳಿಗೆ ಸಮಂಜಸ ಉತ್ತರಗಳು ನಮಗಿನ್ನೂ ದೊರೆತಿಲ್ಲ. ಈ ಪ್ರಶ್ನೆಗಳಿಗೆ ಉತ್ತರ ಹುಡುಕುವ ಪ್ರಯತ್ನವನ್ನೂ ನಾವು ಮಾಡಿಲ್ಲ. ಮುಂದುವರೆದ ದೇಶಗಳಲ್ಲಿ ಜಾರಿಯಲ್ಲಿರುವ ಮಕ್ಕಳ ಕಾನೂನುಗಳನ್ನು, ಅವರ ಹಕ್ಕುಗಳನ್ನೂ ಕೇಳಿ ತಿಳಿದು ಭಯಗೊಂಡಿರುವ ನಾವು ಈ ದೇಶದಲ್ಲಿ ಅಂಥದೊಂದು ಪ್ರಯತ್ನಕ್ಕೆ ಕೈಹಾಕುವ ಎದೆಗಾರಿಕೆ ಇಟ್ಟುಕೊಂಡಿದ್ದೇವೆಯೇ ಎನ್ನುವುದೂ ಇಲ್ಲಿ ಮುಖ್ಯ. ನಮ್ಮಲ್ಲಿ ವಿಪುಲವಾಗಿ ಲಭ್ಯವಿರುವ ನೀತಿ ಬೋಧಕ ಕೃತಿಗಳು ಇಂದಿನ ಮಕ್ಕಳಲ್ಲಿ ನೈತಿಕತೆಯನ್ನು ಉಳಿಸಿ ಬೆಳಸಬಲ್ಲವೇ ಎನ್ನುವುದೂ ಮುಖ್ಯಪ್ರಶ್ನೆ. ವೈಜ್ಞಾನಿಕವಾಗಿ ತುಂಬ ಮುಂದುವರೆದ ಕಾಲದಲ್ಲಿ ಪಾರ್ವತಿಯ ಮೈಯ ಬೆವರಿನಿಂದ ಗಣೇಶ ಹುಟ್ಟಿದ ಅಂತ ಹೇಳಹೋದರೆ ಅವಳೇನು ನಿತ್ಯವೂ ಸ್ನಾನ ಮಾಡುತ್ತಿರಲಿಲ್ಲವಾ ಅನ್ನುವ ಪ್ರಶ್ನೆ ಚಿಣ್ಣರಿಂದ ಹುಟ್ಟುತ್ತದೆ. ರಾಮ ಸೀತೆಯರು ಕಾಡಿಗೆ ಹೋದರು ಅಂದರೆ ಪಿಕ್‌ನಿಕ್‌ಗೆ ಹೋದರಾ ಅಂತ ಕೇಳುವ ಮಕ್ಕಳೂ ಇದ್ದಾರೆ. ಬಾಣ ಬಿರುಸುಗಳು, ಗದೆ, ತೋಮರಗಳು, ಗಜಾಶ್ವಗಳು ಅಣುಬಾಂಬಿನ ಕಾಲದಲ್ಲಿ ಓಬಿರಾಯನ ಕಾಲದ ವ್ಯರ್ಥ ಪರಿಕರಗಳಾಗಿ ಕಾಣುತ್ತವೆ. ಇದರ ಜೊತೆಜೊತೆಗೇ ಮಕ್ಕಳ ಸಾಹಸದ ಧಾರಾವಾಹಿಗಳನ್ನು ನೋಡಿ ಅದನ್ನು ಅನುಸರಿಸಲು ಹೋಗಿ ಅಪಾಯ ಎದುರಿಸಿದ ಮಕ್ಕಳೂ ಕಡಿಮೆ ಏನಿಲ್ಲ. ಅಲ್ಲದೇ ಈ ಕಾಲದ ಮಕ್ಕಳು ಓದುವುದಕ್ಕಿಂತಲೂ ನೋಡುವುದನ್ನೇ, ಅನುಸರಿಸುವುದನ್ನೇ ಹೆಚ್ಚು ಇಷ್ಟಪಡುವವರು. ಏಕೆಂದರೆ ಇಂದಿನ ಬಹುತೇಕ ಮಕ್ಕಳು ಕಲಿಯುತ್ತಿರುವುದು ಇಂಗ್ಲಿಷಿನಲ್ಲಿ. ಅವರ ಓದುವ ಸಾಮರ್ಥ್ಯವೇನಾದರೂ ಇದ್ದರೆ ಅದು ಅವರು ಕಲಿಯುತ್ತಿರುವ ಇಂಗ್ಲಿಷಿನಲ್ಲಿ ಮಾತ್ರ. ಮೂರನೆಯ ಭಾಷೆಯನ್ನಾಗಿ ಅವರು ಮಾತೃ ಭಾಷೆ ಕಲಿಯುವುದರಿಂದ ಜೊತೆಗೆ ಇಂಗ್ಲಿಷಿನಲ್ಲಿ ಮಾತನಾಡುವುದು ಬಹುತೇಕ ಶಾಲೆಗಳಲ್ಲಿ ಕಡ್ಡಾಯವೂ ಆಗಿರುವುದರಿಂದ ಈ ಮಕ್ಕಳು ಕನ್ನಡದ ಪತ್ರಿಕೆಗಳಲ್ಲಿ ಪ್ರಕಟವಾಗುವ ಸಾಹಿತ್ಯವನ್ನು ಓದುತ್ತಾರೆನ್ನುವುದು ಬರಿಯ ಊಹೆಯ ಮಾತು.&lt;br /&gt;&lt;br /&gt;ಸಂಶೋಧನಾ ಮಾಹಿತಿಯಿಲ್ಲದೇ ಮಕ್ಕಳ ಮನಸ್ಸನ್ನು ಉದ್ದೀಪಿಸಿ ಅವರಿಗೆ ಅಗತ್ಯವಿರುವ ಕಸುವನ್ನು ಕೊಡುತ್ತೇವೆನ್ನುವುದು ಉಢಾಫೆಯೇ ಆಗುತ್ತದೆ. ವಿವಿಧ ಪೇಯಗಳ ಜಾಹೀರಾತುಗಳಲ್ಲಿ ನಟಿಸುವ ಅಮ್ಮಂದಿರಿಗೆ ಮಾತ್ರ ಮಕ್ಕಳ ಅಗತ್ಯ ಗೊತ್ತಿರುವುದು ಈ ಕಾರಣಕ್ಕೇ! ಸೈದ್ಧಾಂತಿಕ ಅಡಿಪಾಯಗಳ ಮನಶಾಸ್ತ್ರೀಯ ಅಧ್ಯಯನ ಮಾತ್ರ ಇಂಥ ಸಮಸ್ಯೆಗಳನ್ನು ನೀಗಬಲ್ಲುದು. ನಾವೀಗ ಬದುಕುತ್ತಿರುವ ಸಮಾಜ, ಸನ್ನಿವೇಶ, ಆರ್ಥಿಕ ಸವಲತ್ತು, ವಿದ್ಯಾಭ್ಯಾಸದ ಮಟ್ಟ, ಅಂಧಶ್ರದ್ಧೆಗಳು, ಜಾತಿಯ ವಿಷಬೀಜಗಳು, ಲಿಂಗ ಭೇದಗಳು, ಮಕ್ಕಳ ಮನಸ್ಸಿಗೆ ನಿಲುಕದ ಹಾಗೆ ಬೆಳಸುತ್ತೇವೆನ್ನುವುದು ಮತ್ತೆ ಉಢಾಫೆಯೇ. ಇನ್ನು ಮಕ್ಕಳ ಆರೋಗ್ಯ ಮತ್ತು ದೈಹಿಕ ಬೆಳವಣಿಗೆಗಳ ಬಗ್ಗೆ ಸಾಕಷ್ಟು ಮಾಹಿತಿ ನಮಗಿದೆ ಎನ್ನುವುದು ಸಮಾಧಾನದ ವಿಚಾರ. ಪೋಲಿಯೋದಂಥ ಪಿಡುಗು, ಸಿಡುಬಿನಂಥ ಮಹಾಮಾರಿಗಳನ್ನು ನಾವು ಎದುರಿಸಿ ಗೆದ್ದಿದ್ದೇವೆ.&lt;br /&gt;&lt;br /&gt;ಆದರೆ ಮಕ್ಕಳ ಸಾಹಿತ್ಯವೆನ್ನುವುದು ದೊಡ್ದವರು ಮಕ್ಕಳಿಗೆಂದು ಬರೆದ ಸರಕಾಗೇ ಉಳಿಯುತ್ತಿದೆ. ಮಕ್ಕಳ ಮನಸ್ಸಿಗೆ ಇದು ಖುಷಿಕೊಡುತ್ತದೆ ಎನ್ನುವ ಊಹಾಪೋಹಗಳಲ್ಲೇ ದೊಡ್ಡವರು ಬರೆದೂ ಬರೆದೂ ಪ್ರಕಟಿಸುತ್ತಿದ್ದೇವೆ. ಪ್ರಾಥಮಿಕ ಶಾಲೆಯ ಪಾಠವೊಂದರಲ್ಲಿ ‘ಅವಳು ಕಮಲ ಇವನು ಬಸವ’ ಎಂದು ಲಿಂಗ ತಾರತಮ್ಯವನ್ನು ಮೆರೆಸುವ ನಾವು ‘ಕಮಲಳ ಲಂಗ ಝಳ ಝಳ’ ಎಂದು ಹೇಳಿ ಅವಳನ್ನು ಲಂಗಕ್ಕೇ ಮಿತಿಗೊಳಿಸುತ್ತೇವೆ. ಇನ್ನು ಮಕ್ಕಳಿಗೆಂದೇ ತಯಾರಾಗುವ ಚಲನಚಿತ್ರಗಳು ಮಕ್ಕಳಿಗೇನು ಬೇಕೋ ಅದನ್ನು ಬಿಟ್ಟು ಉಳಿದೆಲ್ಲ ಮಾರುಕಟ್ಟೆಯ ಮಸಾಲೆಗಳನ್ನು ಇಟ್ಟುಕೊಂಡಿರುತ್ತದೆ. ಕೋತಿ, ಹಾವು, ದೈವ ಮಹಿಮೆ ಇಲ್ಲದೇ ನಮ್ಮ ಮಕ್ಕಳ ಚಿತ್ರಗಳು ನಿರ್ಮಾಣವಾಗುವುದಿಲ್ಲ.ಮಕ್ಕಳ ಅಲೋಚನೆಗಳಿಗೆ ಗಗನದಗಲದ ವಿಶ್ವಾಸವನ್ನು ತುಂಬಿ ಅವರ ಮಾನಸಿಕ, ಬೌದ್ಧಿಕ ವಿಸ್ತರಣಕ್ಕೆ ಸಹಕರಿಸಿದ ಚಿತ್ರಗಳು ಬಂದಿರುವುದು ತೀರ ಅಪರೂಪಕ್ಕೆ. ವೈಜ್ಞಾನಿಕವಾಗಿ ತುಂಬ ಮುಂದುವರೆದಿರುವ ಈ ಕಾಲದಲ್ಲಿ ಮೌಢ್ಯ ಮತ್ತು ಅತಿಮಾನುಷ ಶಕ್ತಿಗಳನ್ನು ಕೊಂಡಾಡುವ ಮಕ್ಕಳ ಚಿತ್ರಗಳನ್ನು ಮೊದಲು ನಿಷೇದಿಸಬೇಕಿದೆ. ಬರಿಯ ಮನರಂಜನೆಯೊಂದೇ ಮಕ್ಕಳ ಚಿತ್ರಗಳ ಮುಖ್ಯ ಉದ್ದೇಶವಾಗಬಾರದು. ಮಕ್ಕಳ ಚಿತ್ರಗಳಲ್ಲೂ ನಾಯಕ-ನಾಯಕಿ ಡ್ಯುಯೆಟ್ ಹಾಡುವುದು, ಅವರ ಪ್ರೀತಿಗಾಗಿ ಮಕ್ಕಳು ಸೇತುವೆಯಾಗುವುದು ಮೊದಲು ನಿಲ್ಲಬೇಕು.&lt;br /&gt;&lt;br /&gt;ಈಗಲೂ ಪ್ರಸ್ತುತವಾಗುವ ಪಂಜೆಯವರ ಹಲವು ಕವಿತೆಗಳನ್ನು ನಮ್ಮ ಮಕ್ಕಳು ಕಲಿತಿಲ್ಲ ಎನ್ನುವುದರ ಅರಿವು ನಮಗಿಲ್ಲದಿರುವುದೂ ನೆನಪಾಗಬೇಕಿದೆ. ಪ್ರಾಥಮಿಕ ಶಿಕ್ಷಣದ ಪಠ್ಯಕ್ರಮ ನಿರೂಪಿಸುವ ಜವಾಬ್ದಾರಿ ಹೊತ್ತ ಹಲವರು ಶಿಕ್ಷಣ ಕ್ಷೇತ್ರಕ್ಕಿಂತಲೂ ರಾಜಕೀಯ ವರಸೆಗಳನ್ನು ಅರಿತವರಾಗಿರುತ್ತಾರೆ ಎನುವುದನ್ನು ಬಿಡಿಸಿ ಹೇಳಬೇಕಿಲ್ಲ.  ಕಾರಂತರು ಪ್ರಾಯೋಗಿಕವಾಗಿ ನಡೆಸಿದ್ದ ಬಾಲವನ, ಕೇಂದ್ರ ಸರ್ಕಾರ ರೂಪಿಸಿರುವ ಜವಾಹರ ನೆಹರು ವಿದ್ಯಾಲಯ, ಸರ್ಕಾರೀ ಶಾಲೆಗಳಲ್ಲಿ ಇರುವ ಪಠ್ಯಕ್ರಮ, ಅಲ್ಲಿ ವಿತರಿಸಲಾಗುತ್ತಿರುವ ಪಠ್ಯ ಪರಿಕರಗಳು,ಸಮವಸ್ತ್ರ ಸಂಹಿತೆ, ನಮ್ಮ ಮುಂದೇ ಇರುವ ಅವಕಾಶಗಳಾಗಿವೆ. ಖಾಸಗಿ ಶಾಲೆಗಳು ಬೋಧನೆಗೆ ಬಳಸುತ್ತಿರುವ ಅಪಾಯಕಾರೀ ಕ್ರಮಗಳನ್ನು, ಮಕ್ಕಳ ಮನಸ್ಸಿನ ಮೇಲೆ ಹೆಚ್ಚುತ್ತಿರುವ ಒತ್ತಡಗಳನ್ನೂ ಗಮನಿಸಬೇಕು. ಧಾರ್ಮಿಕ ಸಂಸ್ಥೆಗಳು ನಡೆಸುತ್ತಿರುವ ಶಿಕ್ಷಣ ಸಂಸ್ಥೆಗಳಲ್ಲಿ ಪ್ರಾರ್ಥನೆಯ ಹೆಸರಲ್ಲಿ ಎಳೆಯ ಮನಸ್ಸುಗಳ ಮೇಲೆ ಹೇರಲಾಗುತ್ತಿರುವ ಒತ್ತಡಗಳನ್ನು ನಾವು ಅರಿಯಬೇಕಿದೆ.  &lt;br /&gt;&lt;br /&gt;ಪ್ರಾಥಮಿಕ ಶಿಕ್ಷಣವನ್ನು ಎಲ್ಲ ಶಾಲೆಗಳಲ್ಲೂ ಏಕ ಸೂತ್ರದಡಿಯಲ್ಲಿ ಕೊಡದಿದ್ದರೆ ನಾವೇ ನಮ್ಮ ಮಕ್ಕಳಿಗೆ ಪ್ರಾಥಮಿಕ ಹಂತದಿಂದಲೇ ಸಾಮಾಜಿಕ ವೈರುಧ್ಯವನ್ನು ಕಲಿಸಿಕೊಟ್ಟಂತಾಗುತ್ತದೆ. ಮತ್ತು ಮೆಕಾಲೆಯಿಂದ ಬಳುವಳಿಯಾಗಿ ಬಂದಿರುವ ಗುಮಾಸ್ತೆಗಳನ್ನು ಸೃಷ್ಟಿಸುತ್ತಿರುವ ಶಿಕ್ಷಣ ಕ್ರಮ ಮುಂದುವರಿಕೆಯಾಗಿಯೇ ಉಳಿಯುತ್ತದೆ. ಇದಕ್ಕಿರುವ ಏಕೈಕ ಉಪಾಯವೆಂದರೆ ಪ್ರಾಥಮಿಕ ಶಿಕ್ಷಣವನ್ನು ಮಾತೃ ಭಾಷೆಯಲ್ಲಿ ಕಡ್ಡಾಯ ಮಾಡುವುದು. ಮತ್ತು ಪ್ರಾಥಮಿಕ ಶಿಕ್ಷಣವನ್ನು ಖಾಸಗೀ ಕಬಂಧ ಬಾಹುಗಳಿಂದ ತಪ್ಪಿಸಿ, ಸಾರ್ವಜನಿಕಗೊಳಿಸಿ  ಕಡ್ಡಾಯವಾಗಿಸಿ ಅದನ್ನು ಸರ್ಕಾರವೇ ನಿರ್ವಹಿಸುವುದು. ಮಕ್ಕಳಿಗೇನು ಬೇಕೆಂಬುದನ್ನು ಕಪೋಲಕಲ್ಪಿತ ಸಂಗತಿಯನ್ನಾಗಿಸದೇ ವಿಧಿವತ್ತಾದ ಸಂಶೋಧನೆಯಿಂದ ತಿಳಿದುಕೊಳ್ಳಬೇಕಿದೆ. ಆಗ ಮಾತ್ರ ಮಕ್ಕಳ ದಿನಾಚರಣೆಗೆ ಒಂದು ಅರ್ಥ ಬಂದೀತು. ಇಲ್ಲದೇ ಹೋದರೆ ಅದೂ ಸರ್ಕಾರ ನಡೆಸುವ ಇತರ ಉತ್ಸವಗಳ ಹಾಗೇ ನಮ್ಮ ರಾಷ್ಟ್ರೀಯ ಹಬ್ಬಗಳ ಹಾಗೇ ತೋರುಗಾಣಿಕೆಯ ಸಂಕೇತವಾದೀತು, ಅಷ್ಟೆ.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/5254102750204147054-5612987580294828146?l=bemkikaddi.blogspot.com' alt='' /&gt;&lt;/div&gt;</content><link rel='replies' type='application/atom+xml' href='http://bemkikaddi.blogspot.com/feeds/5612987580294828146/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://www.blogger.com/comment.g?blogID=5254102750204147054&amp;postID=5612987580294828146' title='1 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/5254102750204147054/posts/default/5612987580294828146'/><link rel='self' type='application/atom+xml' href='http://www.blogger.com/feeds/5254102750204147054/posts/default/5612987580294828146'/><link rel='alternate' type='text/html' href='http://bemkikaddi.blogspot.com/2010/11/blog-post.html' title='ಮಕ್ಕಳ ದಿನಕ್ಕೆ ಹೀಗೊಂದು ಆಲೋಚನೆ.. .. .. .. ..'/><author><name>ಬೆಂಕಿಕಡ್ಡಿ</name><uri>http://www.blogger.com/profile/13181705369161334860</uri><email>noreply@blogger.com</email><gd:image rel='http://schemas.google.com/g/2005#thumbnail' width='21' height='32' src='http://4.bp.blogspot.com/_bUAIZF0Yo1g/TKdTK-6rv2I/AAAAAAAAAJY/QXUJAVKh9ps/S220/dsr4.jpg'/></author><thr:total>1</thr:total></entry><entry><id>tag:blogger.com,1999:blog-5254102750204147054.post-89224997193639339</id><published>2010-10-16T21:51:00.000+05:30</published><updated>2010-10-16T21:53:53.432+05:30</updated><title type='text'>ಕರುಣಾಳು ಬಾ ಬೆಳಕೇ...</title><content type='html'>ಕರುಣಾಳು ಬಾ ಬೆಳಕೆ, ಮುಸುಕಿದೀ ಮಬ್ಬಿನಲಿ ಕೈ ಹಿಡಿದು ನಡೆಸೆನ್ನನು. . . .ಕವಿ ಬೆಳಕನ್ನು ಆರ್ತವಾಗಿ ಪ್ರಾರ್ಥಸಿದ್ದಾನೆ. ಬೆಳಕೆಂಬುದು ಭಗವಂತನ ನೆರಳು ಅಂದವನು ಗ್ರೀಕ್  ದಾರ್ಶನಿಕ ಪ್ಲೇಟೋ. ಭೌತಿಕ ವಸ್ತುಗಳ ನೆರಳು ಕಪ್ಪನೆಯ ಬಣ್ನದಲ್ಲಿದ್ದರೆ ಭಗವಂತನ ನೆರಳು ಬೆಳಕಿನ ರೂಪದಲ್ಲಿರುತ್ತದೆ ಎನ್ನುತ್ತ್ತಾನೆ ಒಬ್ಬ ಭಕ್ತಿ ಕವಿ. ಸ್ವಯಂ ಪ್ರಕಾಶನೆಂದು ವೇದಗಳು ಪ್ರಮಾಣಿಸಿರುವ ಭಗವಂತನ ನೆರಳೇ ಬೆಳಕಿನ ರೂಪದಲ್ಲಿ ಈ ಜಗತ್ತನ್ನು ಕಾಪಿಡುತ್ತಿದೆಯೆಂದು ನಂಬಿದವರೂ ಬಹಳ ಜನರಿದ್ದಾರೆ. ಲೋಕ ಜೀವನದ ಸಾತತ್ಯವನ್ನು ಕೆಡದಂತೆ ನಡೆಸಿಕೊಡುವುದೇ ಬೆಳಕಿನ ಮೂಲಸ್ವರೂಪನಾದ ಸೂರ್ಯನ ಕೆಲಸವೂ ಆಗಿರುವುದರಿಂದ ಸೂರ್ಯನನ್ನೇ ಭಗವಂತನೆಂದು ಕರೆಯಲೂ ಅಡ್ಡಿಯಿಲ್ಲ. ದೇವರ ಅಸ್ತಿತ್ವನ್ನು ನಂಬುವುದು ಅಥವ ಬಿಡುವುದೂ ಅವರವರ ಮನೋಧರ್ಮಕ್ಕೆ ಬಿಟ್ಟ ವಿಚಾರವಾದರೂ ಬೆಳಕೆಂಬುದು ಆಸ್ತಿಕರಿಗೂ ನಾಸ್ತಿಕರಿಗೂ ಸಮಾನವಾಗಿ ಜೀವನ ನಿರ್ವಹಣೆಯ ಮೂಲಸ್ರೋತವಾಗಿರುವುದನ್ನು ಅಲ್ಲಗಳೆಯಲಾಗದು. ಬೆಳಕಿನ ಉಪಯೋಗ ಸಂದೇಹಾತೀತವಾದುದು. ದ್ವಂದ್ವಾತೀತವಾದುದು. ಬೆಳಕಿಲ್ಲದೇ ಬದುಕು ಸಾಗುವುದಿಲ್ಲ. ಬದುಕನ್ನು ಅನುಭವಿಸಲು ಆಸ್ವಾದಿಸಲು ಬೆಳಕು ಬೇಕೇ ಬೇಕು.&lt;br /&gt;&lt;br /&gt;ಭಾರತೀಯ ದಾರ್ಶನಿಕ ವಿವೇಚನೆಯ ಪ್ರಕಾರ ಭಗವಂತನ ರೂಪವು ಇಂದ್ರಿಯ ಗೋಚರವಾಗಿರುವ ನಮ್ಮ ಸುತ್ತಮುತ್ತಲಿನ ಪ್ರಪಂಚವೇ ಆಗಿದೆ. ಅದು ಮುಮುಕ್ಷುವಿನ ಅನುಭವಕ್ಕೆ ಬರುವುದು ಆ ಮುಮುಕ್ಷು ಆ ಅರಿವನ್ನು ಪಡೆದಾಗ ಮಾತ್ರ. ಆದರೆ ತೀರ ಸಾಮನ್ಯರಾದ ನಮ್ಮೆಲ್ಲರಿಗೂ ಭಗವಂತನ ಕೃಪಾಶೀರ್ವಾದಗಳು ಬೆಳಕಿನ ಸ್ವರೂಪದಲ್ಲಿ ಕಾಪಾಡುತ್ತಿದೆ ಅಂದರೆ ತಪ್ಪಾಗಲಾರದು. ಬೆಳಕು ಅಂದರೆ ಶಕ್ತಿಯ ಮೂಲ, ಜ್ಞಾನದ ಆಕರ. ಅರಿವಿನ ಕೇಂದ್ರ,. ಚರಾಚರ ಪ್ರಕೃತಿಯ ವಿವಿಧ ರೂಪಗಳು ಕಾಣುವುದು ಬೆಳಕಿನ ಸಹಾಯದಿಂದ ಮಾತ್ರ ಸಾಧ್ಯವಿರುವ ಸಂಗತಿಯಾದ್ದರಿಂದ ಬೆಳಕನ್ನು ಬರಿಯ ಬೆಳಕಾಗಿ ನೋಡಲಾಗದು. ಹೊರ ಜಗತ್ತಿನ ಬೆಳಕಿಗೆ ಸಂವಾದಿಯಾಗಿ ನಮ್ಮೆಲ್ಲರೊಳಗೂ ಒಂದೊಂದು ಬೆಳಕಿನ ಗಣಿಯೇ ಇದೆ. ಆದರೆ ಆ ಗಣಿಯನ್ನು ಬಗೆದು ಒಳಗಿನ ಖನಿಜವನ್ನೆತ್ತಿ ತರುವುದು ಹಾಗೆ ತಂದ ಖನಿಜವನ್ನು ಶೋಧಿಸಿ, ಕಾಯಿಸಿ, ಲೋಹವನ್ನಾಗಿ ಪರಿವರ್ತಿಸಿ ಇಷ್ಟ ದೇವತೆಯ ವಿಗ್ರಹವನ್ನಾಗಿ ಕಟೆದು ನಿಲ್ಲಿಸುವುದು ಅಷ್ಟೇನೂ ಸುಲಭಕ್ಕೆ ದಕ್ಕದ ಸಂಗತಿ. ನಮ್ಮೊಳಗಿರುವ ವಿವೇಕವೆಂಬ ಬತ್ತಿಯನ್ನು ಅರಿವಿನ ತೈಲದೊಂದಿಗೆ ಸಮ್ಮೇಳಿಸಿ ಜ್ಞಾನದ ಬೆಳಕನ್ನು ಪಡೆಯಬಹುದೆಂದು ಸಮರ್ಥ ರಾಮದಾಸರು ಹೇಳಿದ್ದಾರೆ. ವಿವೇಕವೆಂಬ ಸಾಕ್ಷಿಪ್ರಜ್ಞೆ ಬೆಳಕನ್ನು ಮಂಕಾಗದಂತೆ ಕಾಯುವ ತವನಿಧಿ. ಬೆಳಕು ನಂದಿಹೋಗಿ ಕತ್ತಲಾವರಿಸದಂತೆ ಕಾಪಾಡಿಕೊಳ್ಳಬೇಕಾದ ನಿರಂತರ ಎಚ್ಚರ ಎಂಬ ಜವಾಬ್ದಾರಿ ನಮ್ಮೆಲ್ಲರದು. ನಮ್ಮೊಳಗಿನ ವ್ಯಕ್ತಿಗೆ ವ್ಯಕ್ತಿತ್ವ ಲಭಿಸಬೇಕಾದರೆ ನೈತಿಕ ವಿಕಸನವೆಂಬ ಬೆಳಕಿನ ಅನಿವಾರ್ಯತೆ ಇದ್ದೇ ಇದೆ.&lt;br /&gt;&lt;br /&gt;ಭೂಮಿಯ ಮೇಲಿನ ಸಕಲ ಜೀವಾತ್ಮ ಕೋಟಿಗಳಿಗೆ ಸೂರ್ಯನೇ ಆದಿಮೂಲವಾಗಿದ್ದಾನೆ. ವೈಜ್ಞಾನಿಕವಾಗಿಯೂ ಸೂರ್ಯನೇ ಈ ಲೋಕದ ಸಕಲ ಭೌತಿಕ, ಜೈವಿಕ, ಮಾನಸಿಕ ಚಟುವಟಿಕೆಗಳ ಪ್ರೇರಕ ಶಕ್ತಿಯಾಗಿದ್ದಾನೆ, ಪೋಷಕನಾಗಿದ್ದಾನೆ, ನಿಯಂತ್ರಕನೂ ಆಗಿ ಕಾಪಾಡುತ್ತಿದ್ದಾನೆ. ದ್ಯುತಿ ಸಂಷ್ಲೇಷಣೆಯ ಮೂಲಕ ಜೈವಿಕ ಚಟುವಟಿಕೆಗಳಿಗೆ ಪ್ರೇರಕ ಶಕ್ತಿಯಾಗಿರುವುದರ ಜೊತೆ ಜೊತೆಗೇ ನೀರು-ಆವಿ-ಮೋಡ-ಮಳೆಗಳ ಜಲಚಕ್ರವನ್ನು ಯಶಸ್ವಿಯಾಗಿ, ನಿರಂತರವಾಗಿ, ಬೇಸರಿಸದೇ ಮಾಡುತ್ತಿರುವವನೇ ಸೂರ್ಯನಾರಾಯಣ. ಹಾಗೆಂದೇ ಸಂಧ್ಯಾ ಸಮಯದಲ್ಲಿ ಅರ್ಘ್ಯವನ್ನು ನೀಡುವುದರ ಮೂಲಕ ನಮ್ಮ ಹಿರಿಯರು ಸೂರ್ಯನಿಗೆ ಸದಾ ಕೃತಜ್ಞತೆಯನ್ನು ಸೂಚಿಸುತ್ತಿದ್ದರು. ದಿನ,ರಾತ್ರಿ,ವಾರ,ಪಕ್ಷ,ಮಾಸ,ಸಂವತ್ಸರಗಳ ನಿಲ್ಲದ ಗಡಿಯಾರದ ಮೂಲ ಶಕ್ತಿ ಸೂರ್ಯನೆಂಬ ಬೆಳಕೇ ಆಗಿದೆ. ಸೂರ್ಯುನು ಸ್ಥಾವg. ಜಂಗಮ ಸ್ವರೂಪವಾದ ಸಮಸ್ತ ಜಗತ್ತಿನ ಆತ್ಮವೇ ಅವನಾಗಿದ್ದಾನೆ.&lt;br /&gt;&lt;br /&gt;ಬೆಳಕೆಂದರೆ ಬದುಕು. ಕತ್ತಲೆಂದರೆ ಸಾವು. ಬದುಕಿನಲ್ಲಿ ಕತ್ತಲು ಅನಿವಾರ್ಯ. ಕತ್ತಲ ಬಿಡುಗಡೆಗೆ ಬೆಳಕೊಂದೇ ಆಧಾರ. ಹಾಗಾಗಿಯೆ ಕವಿ ಹಾಡಿಯೇ ಹಾಡುತ್ತಾನೆ- ಕರುಣಾಳು ಬಾ ಬೆಳಕೆ, ಮುಸುಕಿದೀ ಮಬ್ಬಿನಲಿ ಕೈ ಹಿಡಿದು ನಡೆಸೆನ್ನನು... ... ...&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/5254102750204147054-89224997193639339?l=bemkikaddi.blogspot.com' alt='' /&gt;&lt;/div&gt;</content><link rel='replies' type='application/atom+xml' href='http://bemkikaddi.blogspot.com/feeds/89224997193639339/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://www.blogger.com/comment.g?blogID=5254102750204147054&amp;postID=89224997193639339' title='0 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/5254102750204147054/posts/default/89224997193639339'/><link rel='self' type='application/atom+xml' href='http://www.blogger.com/feeds/5254102750204147054/posts/default/89224997193639339'/><link rel='alternate' type='text/html' href='http://bemkikaddi.blogspot.com/2010/10/blog-post_2148.html' title='ಕರುಣಾಳು ಬಾ ಬೆಳಕೇ...'/><author><name>ಬೆಂಕಿಕಡ್ಡಿ</name><uri>http://www.blogger.com/profile/13181705369161334860</uri><email>noreply@blogger.com</email><gd:image rel='http://schemas.google.com/g/2005#thumbnail' width='21' height='32' src='http://4.bp.blogspot.com/_bUAIZF0Yo1g/TKdTK-6rv2I/AAAAAAAAAJY/QXUJAVKh9ps/S220/dsr4.jpg'/></author><thr:total>0</thr:total></entry><entry><id>tag:blogger.com,1999:blog-5254102750204147054.post-3688705564947931015</id><published>2010-10-16T21:48:00.003+05:30</published><updated>2010-10-16T21:50:40.065+05:30</updated><title type='text'>ಮೌನವೆಂಬ ಮಹಾನಿಧಿ</title><content type='html'>ಮೌನವನ್ನು ಕುರಿತು ಮಾತನಾಡಿದರೆ ಅಥವ ಅದನ್ನು ಕುರಿತು ಬರೆಯುತ್ತ ಹೋದರೆ ಅದು ವಿರೋಧಾಭಾಸವೇ ಆಗುತ್ತದೆ. ಏಕೆಂದರೆ ಮೌನವೆನ್ನುವುದು ಅದರ ಶುದ್ಧ ಸ್ವರೂಪದಲ್ಲಿ ಒಂದು ಅನಿರ್ವಚನೀಯ ಸ್ಥಿತಿ. ಅಂದರೆ ಮಾತುಗಳೆಲ್ಲವನ್ನೂ ನಿರಾಕರಿಸಿದ ಮತ್ತು ಕೇವಲ ಅನುಭವದ ಮೂಲಕವೇ ಸಕಲಕ್ಕೂ ಉತ್ತರಕೊಡಬಲ್ಲ ತಾಕತ್ತು ಮೌನಕ್ಕಿದೆ. ಸರಿಯಾದ ಮಾತುಗಳು ಹುಟ್ಟುವುದೂ ಮೌನದ ಗರ್ಭದಲ್ಲೇ!&lt;br /&gt;&lt;br /&gt;ಸದಾ ಮಾತನಾಡುತ್ತಲೇ ಇರುವುದು ಶಕ್ತಿಯ ಅಪವ್ಯಯ ಅನ್ನುತ್ತಾರೆ ತಿಳಿದವರು. ಅವರ ಪ್ರಕಾರ ಮೌನವೆನ್ನುವುದು ಶಕ್ತಿ ಸಂಚಯನದ ಒಂದು ಸಾಧನ. ಜನರಿಂದ ಬಹಳ ದೂರವೇ ಉಳಿಯುವ ಯೋಗಿಗಳೂ, ಸಿದ್ಧಪುರಷರೂ ಮೌನಿಗಳಾಗಿದ್ದರೂ ಜನರ ಒಳದನಿಗಳನ್ನು ಆಲಿಸಿ ಸಮಾಧಾನಕಾರವಾದ ಉತ್ತರವನ್ನು ನೀಡಬಲ್ಲವರು. ಪರಿಪೂರ್ಣ ಮೌನ ಎಂಥವರಲ್ಲೇ ಆಗಲಿ ನಿರ್ಮಲ ಭಾವಗಳನ್ನು ಉದ್ದೀಪಿಸಬಲ್ಲುದು. ಎಮರ್ಸನ್ ‘ಭಗವಂತನಾಡುವ ಪಿಸುಮಾತುಗಳನ್ನು ಆಲಿಸಲು ಮೌನವೊಂದೇ ಸಾಧನ’ ಎನ್ನುತ್ತಾನೆ. ಮೌನದ ಮೂಲಕವೇ ಜಿಜ್ಞಾಸುಗಳೊಂದಿಗೆ ಭಗವಾನ್ ರಮಣರು ಮಾತನಾಡುತ್ತಿದ್ದರೆಂಬ ಪ್ರತೀತಿಯೂ ಇದೆ. ರಮಣರು ಹೇಳುವ ಹಾಗೆ ಮೌನವೆಂಬುದೇ ಅನಂತವಾದ ಮಾತು.&lt;br /&gt;&lt;br /&gt;ಸಾತ್ವಿಕ ಮೌನವು ಅಂತರಂಗದ ಕೊಳೆಯನ್ನು ಗುಡಿಸಿಹಾಕುವ ಪೊರಕೆಯಾಗಿದೆ. ಅಂತರಂಗವು ಶುಚಿಯಾಗಿ ವಿವೇಕ, ಆರ್ದ್ರತೆ, ಸಹೃದಯತೆ, ಸಹಸ್ಪಂದನ ಇತ್ಯಾದಿ ದೈವೀಗುಣಗಳು ವ್ಯಕ್ತಿತ್ವದಲ್ಲಿ ಪಡಿಮೂಡಿ ಬರಬೇಕಾದರೆ ಮೌನದ ವ್ರತ ಹಿಡಿಯಲೇ ಬೇಕಾಗುತ್ತದೆ. ಯೋಚನೆಗಳಿಗೆ ಸರಿಯಾದ ದಿಕ್ಕು ದೆಶೆ, ಭಾವನೆಗಳಿಗೆ ಗಟ್ಟಿ ಬುನಾದಿ ಬರುವುದು ಮೌನದಿಂದ ಮಾತ್ರ ಸಾಧ್ಯವಿರುವ ಸಂಗತಿಗಳು. ಆಡುವ ಮಾತಿಗೆ ತೂಕ, ಘನತೆ, ಅರ್ಥವಂತಿಕೆಗಳೆಲ್ಲ ಬೇಕಾದರೆ ಮಾತನ್ನು ಅಪರೂಪಕ್ಕೆ ಮಾತ್ರ ಆಡಬೇಕಾಗುತ್ತದೆ. ಅದೇ ವಾಚಾಳಿಯ ಮಾತು ಯಾವತ್ತೂ ಹಗುರಾಗಿ ನಗಣ್ಯವೆನ್ನಿಸುಕೊಳ್ಳುತ್ತಲೇ ಇರುತ್ತದೆ.&lt;br /&gt;&lt;br /&gt;ಮೌನವೆಂದರೆ ಮಾತನಾಡದೇ ಸುಮ್ಮನಿರುವುದು ಎಂದಲ್ಲ. ಹೊರಗೆ ಮಾತಲ್ಲಿ ತೋರಿಸದಿದ್ದರೂ ಒಳಗೇ ಸದಾ ಕಾಡುವ ಚಿಂತೆ, ಬಯಕೆ, ಭಯ, ಗೊಂದಲ ಮುಂತಾದುವಕ್ಕೆ ಕುದಿಯುತ್ತಲೇ ಇರುವ ಸಂದರ್ಭಗಳು ಸಾಮಾನ್ಯ ಮನುಷ್ಯನ ಜೀವನದಲ್ಲಿ ಇದ್ದೇಇರುವ ಸಂಗತಿಗಳು. ಅವುಗಳನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದೇ ಮೌನದ ಸಾಧನೆ. ಮನಸ್ಸಿನೊಳಗಿನ ಎಲ್ಲ ಚಲನೆಗಳನ್ನೂ ಹಿಡಿತದಲ್ಲಿಟ್ಟುಕೊಂಡು ಬುದ್ಧಿಯನ್ನು ಯಾವುದೋ ಶ್ರದ್ಧಾಕೇಂದ್ರವೊಂದರಲ್ಲಿ ನಿಲ್ಲಿಸುವುದು ವಾಚಾಳಿಯಿಂದ ಸಾಧ್ಯವಿಲ್ಲದ ಸಂಗತಿ. ಮೌನೋಪಾಸನೆಯಿಂದ ಮಾತ್ರ ಶ್ರದ್ಧ್ಧೆಯ ವಿವೇಕ ಹೆಚ್ಚುತ್ತದೆ.&lt;br /&gt;&lt;br /&gt;ಬದುಕಿನ ಹಲವು ಸ್ತರಗಳಲ್ಲಿ ಮಾತು ಸೋತು ಹೋದಾಗ ಮೌನ ಗೆದ್ದಿರುವ ಸಂದರ್ಭಗಳಿದ್ದೇ ಇರುತ್ತವೆ. ಅತ್ಯಂತ ನವಿರು ಭಾವಗಳನ್ನು ಮಾತು ಸ್ಪಷ್ಟವಾಗಿ ಹೊರಹಾಕದೇ ಹೋದ ನಿದರ್ಶನಗಳೂ ಇರುತ್ತವೆ. ಆದರೆ ವಾತ್ಸಲ್ಯ, ಕರುಣೆ, ಅನುರಾಗ ಮುಂತಾದ ಸ್ನಿಗ್ಧ ಭಾವಗಳನ್ನು ಮೌನ ಯಶಸ್ವಿಯಾಗಿ ಅಭಿವ್ಯಕ್ತಿಸಿ ಹೃದಯ ಸಂವಾದವನ್ನು ಆರಂಭಿಸಿಬಿಡುತ್ತದೆ.&lt;br /&gt;ಮೌನದ ದೇಗುಲದಲ್ಲಿ ಮಾತೇ ಜ್ಯೋತಿರ್ಲಿಂಗವಾಗಿ ಬದಲಾಗುತ್ತದೆ. ಮೌನದ ಮಣ್ಣಿನಲ್ಲಿ ಮಾತಿನ ಬೀಜ ಬೆಳಕೇ ಆಗಿ ಕುಡಿಯೊಡೆಯುತ್ತದೆ. ಮೌನದ ಚಿಪ್ಪೊಡೆದು ಬಂದ ಮಾತಿಗೆ ಮುತ್ತಿನ ಬೆಲೆ ಬರುತ್ತದೆ.&lt;br /&gt;&lt;br /&gt;ಪು.ತಿ.ನ ತಮ್ಮ ಕವಿತೆಯೊಂದರಲ್ಲಿ ಹಾಡಿದ ಹಾಗೆ- ಭಾವನೆ ಕಾಯುವ ನಾಂತಿಹ ಮೌನ, ಮೋಕ್ಷಾನಂದದ ಜೀವನ್ ಮೌನ, ಓ ಕಡು ಸೋಜಿಗವೀ ಮೌನ! ಚಿನ್ಮೌನ!&lt;br /&gt;&lt;br /&gt;ಶಬ್ದ ಮಾಲಿನ್ಯದಿಂದ ಆವೃತವಾಗಿರುವ ಪ್ರಸ್ತುತ ವರ್ತಮಾನದಲ್ಲಿ ಶುದ್ಧ ಮೌನದ ದಾರಿ ಸುಲಭಕ್ಕೆ ಸರಳಕ್ಕೆ ಸಿಕ್ಕಲಾರದು. ಮಾತು ಮತ್ತು ಮೌನದ ನಡುವೆ ಇರುವುದು ಸೇತುವೆಯಲ್ಲ, ಬದಲಿಗೆ ಅದು ಇರುವ ಇಲ್ಲದಿರುವ ತೆಳ್ಳನೆಯ, ಅಳಿಸಿಬಿಡಬಹುದಾದ ಬದಲಿಸಿಬಿಡಬಹುದಾದ ಬಹುಶೃತ ಧಾರೆ. ಅದರ ವ್ಯತ್ಯಾಸ ಸಾಧನೆಯಿಂದಷ್ಟೇ ಗುರ್ತಿಸಲು ಸಾಧ್ಯವಿರುವಂತಹುದು.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/5254102750204147054-3688705564947931015?l=bemkikaddi.blogspot.com' alt='' /&gt;&lt;/div&gt;</content><link rel='replies' type='application/atom+xml' href='http://bemkikaddi.blogspot.com/feeds/3688705564947931015/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://www.blogger.com/comment.g?blogID=5254102750204147054&amp;postID=3688705564947931015' title='0 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/5254102750204147054/posts/default/3688705564947931015'/><link rel='self' type='application/atom+xml' href='http://www.blogger.com/feeds/5254102750204147054/posts/default/3688705564947931015'/><link rel='alternate' type='text/html' href='http://bemkikaddi.blogspot.com/2010/10/blog-post_694.html' title='ಮೌನವೆಂಬ ಮಹಾನಿಧಿ'/><author><name>ಬೆಂಕಿಕಡ್ಡಿ</name><uri>http://www.blogger.com/profile/13181705369161334860</uri><email>noreply@blogger.com</email><gd:image rel='http://schemas.google.com/g/2005#thumbnail' width='21' height='32' src='http://4.bp.blogspot.com/_bUAIZF0Yo1g/TKdTK-6rv2I/AAAAAAAAAJY/QXUJAVKh9ps/S220/dsr4.jpg'/></author><thr:total>0</thr:total></entry><entry><id>tag:blogger.com,1999:blog-5254102750204147054.post-5011541776722404620</id><published>2010-10-03T16:30:00.000+05:30</published><updated>2010-10-03T16:31:25.441+05:30</updated><title type='text'>ಅಂಗಿ</title><content type='html'>ಅಂಗಿ&lt;br /&gt;&lt;br /&gt;ಇಷ್ಟೂ ದಿನ ತೊಟ್ಟು, ಬಣ್ಣ ಮಾಸಿರುವ &lt;br /&gt;ಮೇಲಂಗಿಯನ್ನು ಕಳಚಿ ಹ್ಯಾಂಗರಿಗೆ ಹಾಕುವಾಗ &lt;br /&gt;ಅಥವ &lt;br /&gt;ಹಾಗೇ ಅಲ್ಲಿಂದ ತೆಗೆದು ತೊಟ್ಟುಕೊಳ್ಳುವಾಗ&lt;br /&gt;ಮೂಗಿಗಡರುವ ಬೆವರ ವಾಸನೆ&lt;br /&gt;ಮತ್ಯಾವುದೋ ಸ್ಮೃತಿಗೆ ದಬ್ಬುತ್ತದೆ&lt;br /&gt;ಯಾವ ಯಾವುದೋ ಘಟನೆಗಳನ್ನು ತಬ್ಬುತ್ತದೆ.&lt;br /&gt;&lt;br /&gt;ಹಾಗೆ ನೋಡಿದರೆ&lt;br /&gt;ಹೊಸ ಅಂಗಿಗಳಿಗೆ ವಾಸನೆ&lt;br /&gt;ಅಷ್ಟು ಸುಲಭಕ್ಕೆ ಹತ್ತಿಕೊಳ್ಳುವುದಿಲ್ಲ&lt;br /&gt;ವಾದರೂ,&lt;br /&gt;ತೊಟ್ಟು, ಕೊಳೆಯಾಗಿ ಮಡಿಮಾಡುವ ಹೊತ್ತಲ್ಲಿ&lt;br /&gt;ಎಲ್ಲಿ ಬಣ್ಣ ಬಿಡುತ್ತದೋ ಎಂಬ ಜಿಜ್ಞಾಸೆ&lt;br /&gt;ಯ ಜೊತೆ ಜೊತೆಗೇ ತೊಳೆಯುವ ಕಾಲಕ್ಕೆಲ್ಲಿ&lt;br /&gt;ಉಳಿದ ಬಟ್ಟೆಗಳಿಗೂ&lt;br /&gt;ಬಣ್ಣವಂಟಿಸಿಬಿಡುತ್ತದೋ ಎಂಬ ಆತಂಕ.&lt;br /&gt;&lt;br /&gt;ಅಜ್ಜನ ಕಾಲವೇ ವಾಸಿ,&lt;br /&gt;ಅಂಗಿ ತೊಡದೇ ಹಾಗೇ ತೆರೆದೆದೆಯಲ್ಲಿ&lt;br /&gt;ದ್ದರೂ, ಅಂಗವಸ್ತ್ರದ ಮರೆ&lt;br /&gt;ನೆಪಕ್ಕೆ, ಕೂತಾಗಲೂ ಜಪಕ್ಕೆ.&lt;br /&gt;&lt;br /&gt;ವಾರ್ಡ್‌ರೋಬಿನ ತುಂಬ &lt;br /&gt;ಲೆಕ್ಕಕ್ಕೆ  ಸಿಕ್ಕದ ಅಷ್ಟೊಂದು ಅಂಗಿಗಳಿರುವಾಗಲೂ&lt;br /&gt;ತೊಟ್ಟು ಮೆರದದ್ದಕ್ಕಿಂತ ಅನ್ಯರ ಮೈಮೇಲಿರುವ&lt;br /&gt;ಅಂಗಿಗಳ ರಂಗು, ವಿನ್ಯಾಸ&lt;br /&gt;ಕಾಡುತ್ತಲೇ ಇರುತ್ತವೆ-&lt;br /&gt;ಬೆನ್ನಿಗಂಟಿದ ಬೇತಾಳದಂತೆ.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/5254102750204147054-5011541776722404620?l=bemkikaddi.blogspot.com' alt='' /&gt;&lt;/div&gt;</content><link rel='replies' type='application/atom+xml' href='http://bemkikaddi.blogspot.com/feeds/5011541776722404620/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://www.blogger.com/comment.g?blogID=5254102750204147054&amp;postID=5011541776722404620' title='1 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/5254102750204147054/posts/default/5011541776722404620'/><link rel='self' type='application/atom+xml' href='http://www.blogger.com/feeds/5254102750204147054/posts/default/5011541776722404620'/><link rel='alternate' type='text/html' href='http://bemkikaddi.blogspot.com/2010/10/blog-post.html' title='ಅಂಗಿ'/><author><name>ಬೆಂಕಿಕಡ್ಡಿ</name><uri>http://www.blogger.com/profile/13181705369161334860</uri><email>noreply@blogger.com</email><gd:image rel='http://schemas.google.com/g/2005#thumbnail' width='21' height='32' src='http://4.bp.blogspot.com/_bUAIZF0Yo1g/TKdTK-6rv2I/AAAAAAAAAJY/QXUJAVKh9ps/S220/dsr4.jpg'/></author><thr:total>1</thr:total></entry><entry><id>tag:blogger.com,1999:blog-5254102750204147054.post-1795566555726245222</id><published>2010-08-08T14:44:00.001+05:30</published><updated>2010-08-08T14:48:38.169+05:30</updated><title type='text'>ಸಹಜ ಸ್ವರದಲ್ಲೇ ಮನಸ್ಸು ಸೆಳೆಯುವ ‘ನೆಲದ ಕರುಣೆಯ ದನಿ’</title><content type='html'>ಸಹಜ ಸ್ವರದಲ್ಲೇ ಮನಸ್ಸು ಸೆಳೆಯುವ ‘ನೆಲದ ಕರುಣೆಯ ದನಿ’&lt;br /&gt;   &lt;br /&gt;&lt;br /&gt;‘ಗಾಯದ ತುಟಿಗಳಿಂದ ಮುರಿದ ಕೊಳಲನೂದಬೇಕಿದೆ’-ಎಂದು ವಾಸ್ತವದ ಸಂಕಟಗಳನ್ನು ತೆರೆದಿಡುವ ಶ್ರೀ ವೀರಣ್ಣ ಮಡಿವಾಳರ ತಮ್ಮ ಮೊದಲ ಕವನ ಸಂಕಲನ ‘ನೆಲದ ಕರುಣೆಯ ದನಿ’ ಯ ಮೂಲಕ ಸಾರಸ್ವತ ಲೋಕಕ್ಕೆ ಅಧಿಕೃತವಾಗಿ ಸೇರ್ಪಡೆಗೊಂಡಿದ್ದಾರೆ. ಮೊದಲ ಸಂಕಲನ ತರುವ ಎಲ್ಲ ಕವಿಗಳಿಗೂ ಇರುವ ಹಾಗೇ ವೀರಣ್ಣನವರಿಗೂ ಇಲ್ಲಿನ ಕವಿತೆಗಳ ಆಯ್ಕೆಯಲ್ಲಿ ದ್ವಂದ್ವಗಳು ಕಾಡಿರುವ ಕುರುಹುಗಳಿವೆ. ಮೊದಲ ಸಂಕಲನ ಪ್ರಕಟಿಸುವ ಕವಿಗೆ ಕಾಡುವ ವಿಚಿತ್ರ ಸಮಸ್ಯೆಯೆಂದರೆ ಎಲ್ಲವನ್ನೂ ಮೊಗೆ ಮೊಗೆದು ಹೇಳಬೇಕು ಎಂಬ ಉತ್ಸಾಹ ಮತ್ತು ಅಂಥ ಉತ್ಸಾಹದ ಜೊತೆಗೇ ಹೇಳುವ ರೀತಿಯಲ್ಲಿ ಬಳಸಬೇಕಾದ ಮಾರ್ಗದ ಅನುಸೂಚಿ. &lt;br /&gt;&lt;br /&gt;ಕವಿಯೂ ಒಬ್ಬ ಸಾಮಾಜಿಕನೇ ಆಗಿರುವುದರಿಂದ ಅವನಿಗೂ ಎಲ್ಲರ ಹಾಗೇ ಬದುಕಿನ ಪರಿಕರಗಳು, ಅದಕ್ಕಾಗಿ ಮಾಡಬೇಕಿರುವ ತ್ಯಾಗ ಮತ್ತು ಸವಾಲುಗಳು ಹಾಗೇ ಬದುಕಿನ ಆಸೆ-ವಿಷಾದಗಳು,ಆಕರ್ಷಣ-ವಿಕರ್ಷಣಗಳು, ಭೋಗ ಭಾಗ್ಯಗಳು ಕಾಡಿಯೇ ಕಾಡುತ್ತವೆ. ಒಬ್ಬ ಸಹಜ ಕವಿ ಅಂಥ ಸವಾಲುಗಳನ್ನೆದುರಿಸುತ್ತಲೇ ಸಮಾಜಕ್ಕೆ ಮುಖಾಮುಖಿಯಾಗುತ್ತಾನೆ ಮತ್ತು ತನ್ನ ಅನುಭವದ ಮೂಲಕವೇ ನಗ್ನ ಸತ್ಯಗಳಲ್ಲಿ ಅಡಗಿರುವ ಉತ್ತರಗಳನ್ನು ಪಡೆಯುತ್ತಾನೆ. ತನ್ನ ಅನುಭವಗಳನ್ನು ಅವನು ಹೇಗೆ ಮತ್ತು ಯಾವ ನೆಲೆಗಳಲ್ಲಿ ಅಭಿವ್ಯಕ್ತಿಸುತ್ತಾನೆ ಎನ್ನುವುದರ ಮೇಲೆ ಅವನ ಕವಿತೆಗಳ ಅಳಿವು-ಉಳಿವುಗಳು ನಿಂತಿರುತ್ತವೆ. &lt;br /&gt;&lt;br /&gt;ವೀರಣ್ಣ ಮಡಿವಾಳರ ಕಾವ್ಯ ನಿಜ ಬದುಕಿನ ಅಗ್ನಿದಿವ್ಯದಿಂದೆದ್ದು ಬಂದಿರುವುದರಿಂದ ಈ ಸಂಕಲನದ ಬಹುತೇಕ ಕವಿತೆಗಳು ಬರಿಯ ಕವಿತೆಗಳಾಗದೇ ಅನುಭವದ ಪಾರಮ್ಯವನ್ನು ಚಿತ್ರಿಸಿದ ಕುರುಹುಗಳಾಗಿವೆ, ದಮನಿತನೊಬ್ಬನ ಆತ್ಮಕತೆಯ ನೆಲೆಯಾಗಿವೆ, ಮತ್ತು ಯಾವ ಘೋಷಣೆ, ಸಿದ್ಧಾಂತಗಳ ನೆರವಿಲ್ಲದ ವಿನಮ್ರ ಹೇಳಿಕೆಗಳ ಬಿಕ್ಕುಗಳಾಗಿವೆ.&lt;br /&gt;&lt;br /&gt;‘ನವಿಲು ನಲಿವ ನೆಲವ ತೊರೆದು, ಇಲ್ಲೇ ಎಲ್ಲೋ ಹಾಳಾಗಿ ಹೋಗಿರುವ ವಸಂತನನ್ನು ಹುಡುಕಲು ಹೊರಟ ನನ್ನ ಮೊದ ಮೊದಲ ತಪ್ಪು ಹೆಜ್ಜೆಗಳಿವು......’ ಎಂದು ಮೊದಲಲ್ಲೇ ಆತಂಕ ಮತ್ತು ಸಹಜ ಆಕ್ರೋಶದಿಂದ ಈ ಸಮಾಜದ ಕ್ರೌರ್ಯವನ್ನು ಪ್ರಶ್ನಿಸುತ್ತಾರಾದರೂ ಎಲ್ಲೂ ಅವರು ಸಾಮಾಜಿಕ ತಪ್ಪುಗಳಿಗೆ ಘೊರ ಶಿಕ್ಷೆಯ ತೀರ್ಪು ನೀಡುವುದಿಲ್ಲ. ಈ ಕವಿಗೆ ಅವನ ನಿಲುವುಗಳಲ್ಲಿ ಜಗಳವಿದೆ, ದುಃಖದ ಹನಿಗಳಾಗಿ ಮಡುಗಟ್ಟಿರುವ ಕವಿತೆಗಳ ಬಗ್ಗೆ ಒಲವಿದೆ, ಸಂಕಟವೇ ಸ್ಥಾಯಿಯಾಗಿ ನಿಂತ ಎದೆಯಾಳದ ಮಾತುಗಳ ನಿಜ ದರುಶನವೂ ಇದೆ. &lt;br /&gt;&lt;br /&gt;ಹಸಿವೆಂದು ಊರಿಗೇ ಬೊಬ್ಬಿಟ್ಟರೂ/ಕಾಳು ಹಾಕುವ ಅಜ್ಜ ಮಲಗಿದ್ದಾನೆ/ರೊಟ್ಟಿ ನೀಡುವ ಹುಡುಗ ಹಸಿದಿದ್ದಾನೆ.. ..(ನೆಲದ ಕರುಣೆಯ ದನಿ) ಹೀಗೆ ಗಂಭೀರವಾಗಿ ನೆಲದ ಕರುಣೆಯ ದನಿಯನ್ನೂ, ಅದರ ಕರುಣಾಜನಕ ದನಿಯನ್ನೂ  ಒಟ್ಟೊಟ್ಟಿಗೇ ವ್ಯಂಗ್ಯ ಮತ್ತು ವಿಷಾದಗಳೆರಡರಲ್ಲೂ ಸಮರ್ಥವಾಗಿ ಚಿತ್ರಿಸುವ ವೀರಣ್ಣ, ‘ಭೀತ ನಿರ್ಭೀತಗಳಿಲ್ಲದ ಅನವರತ ಏಕಾಂತ/ ವಿಶಾಲ ಬಯಲ ದಟ್ಟ ಕತ್ತಲಲಿ ಏಕಾಂಗಿ ಹಣತೆಯ ಮೈ ಬಸಿತ’ ಎನ್ನುವ ಚಿತ್ರಾತ್ಮಕ ನಿಲುವಿನಲ್ಲಿ ನಿಲ್ಲಿಸಿ, ‘ಏರುತ್ತಿರುವ ನಿಮ್ಮ ದನಿ/ನನ್ನದು ನನ್ನದು ನನ್ನದೇ’ ಎನ್ನುವಲ್ಲಿ ಸಮುದಾಯದ ಒಗ್ಗಟ್ಟನ್ನು ಬಯಸುತ್ತಲೇ ಶೋಷಣೆಯ ವಿರುದ್ಧ ಒಂದಾಗಬೇಕಾದ ಅನಿವಾರ್ಯತೆಯನ್ನು ಒತ್ತಿ ಹೇಳುತ್ತಾರೆ.  &lt;br /&gt;&lt;br /&gt;&lt;br /&gt;ಊರ ದೇವರ ದಿಬ್ಬಣ/ಬೀದಿಯಲಿ ಬರುವಾಗ/ ನಾವೇ ಹಡದಿ ಹಾಸಿಗೆಯಾಗಿ ಬಿದ್ದುಕೊಂಡೆವು&lt;br /&gt;ಮಣ್ಣನಪ್ಪಿದ ಮಡಿಬಟ್ಟೆಯನು/ ಪಲ್ಲಕ್ಕಿ ಹೊತ್ತ ನೀವು ತುಳಿದಿರಿ/ &lt;br /&gt;ನಾವು ಎಷ್ಟೇ ನಲುಗಿದರೂ/ದೇವರು ನಮ್ಮನ್ನು ಮುಟ್ಟಲೇ ಇಲ್ಲ. (ಹಡದಿ ಹಾಸುವವರ ಹಾಡು)&lt;br /&gt;ವ್ಯವಸ್ಥೆಯ ಕರಾಳ ಮುಖವನ್ನು ಸೂಕ್ಷ್ಮಗ್ರಾಹೀ ಕವಿಯೊಬ್ಬ ನೋವಿನ ದನಿಯಲ್ಲೇ ವ್ಯಂಗ್ಯ ಮತ್ತು ವಿಷಾದಗಳ ಮೂಲಕ ಸಾರ್ಥಕವಾಗಿ ಚಿತ್ರಿಸಬಲ್ಲ ಎಂದು ಪುರಾವೆ ನೀಡುವ ಸಾಲುಗಳಿವು.&lt;br /&gt;&lt;br /&gt;ಕೊಕ್ಕನ್ನೇ ಕತ್ತಿಯಾಗಿಸಿ ವಚನ ಬಂಡಾಯದ ಕವಲು ಕಾದ ಹಕ್ಕಿ/ ಅಲ್ಲಮನ ಬಯಲಲಿ ಬಿದ್ದಿದೆ/&lt;br /&gt;ತುತ್ತು ಕೂಳಿಗೂ ತತ್ವಾರ/ .. .. ದೇಹಿ ಎನ್ನಲು ಮನಸಿಲ್ಲದ ಸ್ವಾಭಿಮಾನಿ ಹಕ್ಕಿ (ಮಡಿವಾಳ ಹಕ್ಕಿ) &lt;br /&gt;ತಾನು ಹೇಳಬೇಕಿರುವುದೆಲ್ಲಿ ಓದುಗನಿಗೆ ತಲುಪುವುದಿಲ್ಲವೋ ಎಂದು ಸಂಕಟವನ್ನು ಒತ್ತಿ ಹೇಳಬೇಕೆಂದು ಕವಿ ಈ ಸಾಲುಗಳನ್ನು ಬರೆದರೂ ‘ದೇಹಿ ಎನ್ನಲು ಮನಸಿಲ್ಲದ’ ಅಂದಮೇಲೆ ‘ಸ್ವಾಭಿಮಾನಿ ಹಕ್ಕಿ’ ಅಂತ ಕರೆಯುವುದು ದ್ವಿರುಕ್ತಿಯಾಗಿ ಬದಲಾಗಿ ಇಡೀ ಪದ್ಯ ಏರುತ್ತಿದ್ದ ಎತ್ತರದಿಂದ ಗಕ್ಕನೇ ಇಳಿಯತೊಡಗಿಬಿಡುತ್ತದೆ.&lt;br /&gt;&lt;br /&gt;ಗಿಡುಗನ ಸುಳಿವು ಕಂಡರೂ ಹಕ್ಕಿ/ ಜತನದಿಂದ ಹೊರಬರಲೇ ಬೇಕು/ ಮರಿಗಳ ಹಸಿವ ನೀಗುವ ಸವಾಲಿದೆ (ಸವಾಲು) &lt;br /&gt;ಎನ್ನುವಲ್ಲಿಈ ಕವಿ, ಬದುಕಿನ ಆತಂಕಗಳನ್ನೇ ಸವಾಲಾಗಿ ಸ್ವೀಕರಿಸಿದ ಮನಸ್ಥಿತಿಯನ್ನು ಬಿಚ್ಚಿಡುತ್ತಾರೆ.&lt;br /&gt;ಅಡವಿಯಲಿ ನೀರಡಿಸಿ ನಡೆವಾಗ/ ಕಂಡ ಬಾವಿಯ ಇಣುಕಿದರೆ/ ಬಾವಿ ಮಣ್ಣು ಹೊತ್ತ/ ಅವ್ವನ ಋಣದ ಚಿತ್ರ ಬಾವಿ ತುಂಬ&lt;br /&gt;ದಾಹ ನಾಪತ್ತೆ  ( ಹರಕು ಅಂಗಿಯ ರೇಖಾ ಚಿತ್ರ) ಸರಳವಾಗಿ, ನೇರವಾಗಿ ಎದೆಗಿಳಿವ ಪ್ರತಿಮೆಗಳಲ್ಲಿ ಇಡೀ ಪದ್ಯವೇ ಮಾತನಾಡುತ್ತದೆ.&lt;br /&gt;&lt;br /&gt;ನಲವತ್ತೇಳು ಕವಿತೆಗಳ  ಜೊತೆಗೆ ಇಪ್ಪತ್ತನಾಲ್ಕು ಬಿಡಿ ಬಿಡಿ ಪದ್ಯಗಳನ್ನೂ ಸಂಕಲನದಲ್ಲಿ ಅಡಕಿರಿಸಿದ ಕಾರಣ ದೀರ್ಘ ಪದ್ಯಗಳಲ್ಲಿರುವ ವಿಷಾದ, ಆತಂಕ ಮತ್ತು ಉದ್ವಿಗ್ನತೆಯ ಬಿಸಿಗಳು ಬಿಡಿ ಬಿಡಿ ಪದ್ಯಗಳಲ್ಲಿರುವ, ಸಹಜ ಪ್ರೀತಿಯನ್ನು ಓದಿಗೆ ದಕ್ಕಿಸಲು ಅನನುಕೂಲವಾಗಿದೆ.  ಉದಾಹರಣೆಗೆ&lt;br /&gt;ನನ್ನ ಈ ಕಾಲು ಶತಮಾನದ/ ಬದುಕಿನ ಮೇಲಾಣೆ/ ಇದುವರೆಗೂ ಕಂಡಿರದ/ ನವ ನವೀನ ವಿಸ್ಮಯಗಳನ್ನು/ ನೀನು ಸೃಷ್ಟಿಸುತ್ತಿರುವೆ ಎಂದು ಓದಿಕೊಂಡಾಗ  ಸಹಜವಾಗಿ ಆಗಬೇಕಾದ ರೋಮಾಂಚನ ಹುಟ್ಟದೇ ಬರಿಯ ನಿಸೂರು ಸ್ವರವೊಂದೇ ಉಳಿದುಬಿಡುತ್ತದೆ.&lt;br /&gt;&lt;br /&gt;ಹೊಸ ಹೊಸ ಅನಿಭವಗಳನ್ನು ಓದುಗನಿಗೆ ಯಶಸ್ವಿಯಾಗಿ ದಾಟಿಸಬಲ್ಲ ವೀರಣ್ಣ ಮಡಿವಾಳರ, ತಮ್ಮ ಹೆಗಲ ಮೇಲೆ ಯಾತನೆಯ ಭಾರವನ್ನೇ ಹೊತ್ತಿದ್ದಾರೆ. ಈ ಕವಿತೆಗಳನ್ನು ಬರೆದಾದ ಮೇಲೆ ಅವರ ಭಾರದ ಅರಿವು ಓದುಗನಿಗೂ ದಾಟಿದೆ. ಸಂಕಲನದ ತುಂಬ ಅಸಹಾಯಕತೆಯ ಗಟ್ಟಿ ಬಿಕ್ಕುಗಳು ಕೇಳಿಸುತ್ತಿದ್ದರೂ, ಅದೆಲ್ಲೂ ವೃಥಾ ಕರುಣೆಯನ್ನು ಹಂಬಲಿಸುವ ದನಿಯಾಗದೇ, ಒಡಲಾಳವನ್ನು ಸಮರ್ಥವಾಗಿ ತೆರೆದಿಟ್ಟ ಅಳುವಿನ ಸೆಲೆಯೇ ಆಗಿದೆ. ಅವರು ತಮ್ಮ ಮಿತಿಯನ್ನೂ ಬಲ್ಲವರಾದ್ದರಿಂದಲೇ ಇಲ್ಲಿನೆಲ್ಲ ಕವಿತೆಗಳೂ ಕವಿತೆಗಳಾಗೇ ಅರಳಿವೆ, ಕವಿತೆಯಾಗದೇ ಉಳಿದವು ಅವರ ಸ್ವಗತವಾಗಿಯೂ ಓದುಗನನ್ನು ಕಾಡಿದೆ.&lt;br /&gt;&lt;br /&gt;ಯಾರು ಬುದ್ಧಿ ಹೇಳಬೇಕು ಈ ಹುಂಬ ಹುಡುಗನಿಗೆ/ ಕೋಟಿ ವರುಷ ಬಾಳಿದ ಹೆಮ್ಮರದ ತುದಿಯನೇರಿ/&lt;br /&gt;ಸಕಲ ಜೀವಕೂ ಕೇಳಿಸುವ ಹಾಗೆ/ ಮನುಕುಲದ ಉದ್ಧಾರ ಸೂತ್ರ ಪಠಿಸುತ್ತಾನಂತೆ (ಈ ಮಣ್ಣ ಚರಿತ್ರೆ) &lt;br /&gt;ಕೃತಿ: ನೆಲದ ಕರುಣೆಯ ದನಿ (ಕವನ ಸಂಕಲನ)  ಕವಿ: ವೀರಣ್ಣ ಮಡಿವಾಳರ&lt;br /&gt;ಪ್ರಕಾಶಕರು: ಕೆಂಗುಲಾಬಿ ಪ್ರಕಾಶನ, ಕೂಡ್ಲಿಗಿ   ವರ್ಷ: ೨೦೧೦   ಪುಟಗಳು ೧೧೬  ಬೆಲೆ: ರೂ. ೫೦/-&lt;br /&gt;(ಕನ್ನಡಪ್ರಭದ ಇಂದಿನ ಸಾಪ್ತಾಹಿಕ ಪ್ರಭದಲ್ಲಿ ಪ್ರಕಟವಾಗಿರುವ ಲೇಖನ)&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/5254102750204147054-1795566555726245222?l=bemkikaddi.blogspot.com' alt='' /&gt;&lt;/div&gt;</content><link rel='replies' type='application/atom+xml' href='http://bemkikaddi.blogspot.com/feeds/1795566555726245222/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://www.blogger.com/comment.g?blogID=5254102750204147054&amp;postID=1795566555726245222' title='1 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/5254102750204147054/posts/default/1795566555726245222'/><link rel='self' type='application/atom+xml' href='http://www.blogger.com/feeds/5254102750204147054/posts/default/1795566555726245222'/><link rel='alternate' type='text/html' href='http://bemkikaddi.blogspot.com/2010/08/blog-post.html' title='ಸಹಜ ಸ್ವರದಲ್ಲೇ ಮನಸ್ಸು ಸೆಳೆಯುವ ‘ನೆಲದ ಕರುಣೆಯ ದನಿ’'/><author><name>ಬೆಂಕಿಕಡ್ಡಿ</name><uri>http://www.blogger.com/profile/13181705369161334860</uri><email>noreply@blogger.com</email><gd:image rel='http://schemas.google.com/g/2005#thumbnail' width='21' height='32' src='http://4.bp.blogspot.com/_bUAIZF0Yo1g/TKdTK-6rv2I/AAAAAAAAAJY/QXUJAVKh9ps/S220/dsr4.jpg'/></author><thr:total>1</thr:total></entry><entry><id>tag:blogger.com,1999:blog-5254102750204147054.post-1136995159404420871</id><published>2010-07-22T17:04:00.005+05:30</published><updated>2010-07-22T17:11:40.484+05:30</updated><title type='text'>ಕಡಲ ತುಂಬಾ ಅವಿಶ್ರಾಂತ ಅಲೆಗಳು-</title><content type='html'>&lt;span style="font-weight:bold;"&gt;ಈ ಕಡಲ ತುಂಬ ಅವಿಶ್ರಾಂತ ಅಲೆಗಳು. . . . . .  &lt;/span&gt;                           &lt;br /&gt;       &lt;br /&gt;‘ಕಡಲಿಗೆಷ್ಟೊಂದು ಬಾಗಿಲು’ ರೂಪ ಹಾಸನ ಅವರ ನಲವತ್ತು ಪದ್ಯಗಳ ಮೂರನೆಯ ಸಂಕಲನ. ‘ಒಂದಷ್ಟು ಹಸಿಮಣ್ಣು’ ‘ಬಾಗಿಲಾಚೆಯ ಮೌನ’ ಸಂಕಲನಗಳಿಂದ ಸಾರಸ್ವತ ಲೋಕದ ಹೆಬ್ಬಾಗಿಲು ಬಡಿದು ಅಲ್ಲಿ ಈಗಾಗಲೇ ಪ್ರತಿಷ್ಠಾಪನೆಗೊಂಡ ಕೆಲ ಹೆಸರುಗಳಲ್ಲಿ ರೂಪ ಅವರೂ ಒಬ್ಬರು. ವಿವಿಧ ಕವಿಗೋಷ್ಠಿಗಳ ಖಾಯಂ ಹೆಸರುಗಳಲ್ಲಿ ಒಬ್ಬರಾಗಿರುವ ರೂಪ, ಪದ್ಯ ಬರೆಯುವದರ ಜೊತೆಜೊತೆಗೆ ನಾಡಿನ ಬಹುತೇಕ ಯುವ ಬರಹಗಾರರೊಂದಿಗೆ ಸಾಹಿತ್ಯಕ ಒಡನಾಟಗಳನ್ನಿಟ್ಟುಕೊಂಡಿರುವ ಕಾರಣಕ್ಕೂ ವರ್ತಮಾನದ ತವಕ ತಲ್ಲಣಗಳ ಅಭಿವ್ಯಕ್ತಿಯನ್ನು ಪದ್ಯಗಳ ಮೂಲಕ ಸಹಜವಾಗಿ ಮತ್ತು ಕೃತ್ರಿಮತೆಯಿಲ್ಲದೇ ಪ್ರದರ್ಶಿಸಬಲ್ಲರು. ಸ.ಉಷಾ, ಪ್ರತಿಭಾ, ಸುನಂದಾ ಕಡಮೆ ಮುಂತಾದವರು ಸೃಷ್ಟಿಸಿಕೊಂಡಿರುವ ಪ್ರತ್ಯೇಕ ಲೋಕ ರೂಪ ಅವರ ಜಗತ್ತಿಗೆ ಹತ್ತಿರದ್ದು. ಅಂದರೆ ‘ಮಹಿಳೆ’ ಎಂಬ ಮೀಸಲಾತಿ ಬೇಡದೇ ಸಹಜ ಕವಿತೆಗಳನ್ನು ಅನುದಿನದ ವರ್ತಮಾನದ ಪಲುಕುಗಳಿಂದ ಆಯ್ದು ಪೋಣಿಸುವ ಕೆಲಸ ಇಲ್ಲೂ ಮುಂದುವರೆದಿದೆ. &lt;br /&gt;ರೂಪಕಗಳನ್ನು  ಗೃಹೀತದ ಅಡುಗೆಮನೆಯಿಂದಲೇ ನೇರ ತಂದು ಮುಂದಿಟ್ಟುಬಿಡುವುದು ಇವರಿಗೆ ಸಿದ್ಧಿಸಿದೆ. ದೋಸೆ, ಹಂಚು, ಸೂಜಿ, ಮಸಾಲೆ ಡಬ್ಬಿಗಳನ್ನೇ ತಮ್ಮ ರೂಪಕಗಳನ್ನಾಗಿ ಹಿಂದಿನ ಸಂಕಲನಗಳಲ್ಲಿ ಬಳಸಿದ್ದ ಕವಯತ್ರಿ ಈ ಸಂಕಲನದಲ್ಲಿ ಬಾಗಿಲೇ ಇಲ್ಲದ ಸದಾ ತೆರೆದೇ ಇರುವ ಕಡಲಿಗೂ ಬಾಗಿಲುಗಳನ್ನಿಟ್ಟು ಆ ಬಾಗಿಲುಗಳ ಮೂಲಕ ಒಳಬರುವ-ಹೊರಹೋಗುವ ಕ್ರಿಯೆಗಳನ್ನು ಧ್ಯಾನಿಸಿದ್ದಾರೆ. ಆದರೆ ಬಾಗಿಲುಗಳನ್ನೆಂದಿಗೂ ಜೋಡಿಸಲಾಗದ ಕಡಲಿನ ಅಗಾಧತೆಗೆ ಬಾಗಿಲನ್ನಿಡುವುದರ ಮೂಲಕ ಬೇರೆಯದೇ ಸಂದೇಶವನ್ನೇನಾದರೂ ಈಕೆ  ಕೊಡಹೊರಟಿದ್ದಾರಾ ಎಂದು ಪರಿಶೀಲಿಸಬೇಕಾಗುತ್ತದೆ. ಕಡಲ ತುಂಬಿರುವ ಅವಿಶ್ರಾಂತ ಅಲೆಗಳ ಮೂಲಕವೂ ಕವಿತೆಯ ವಿದ್ಯುತ್ತನ್ನು ತಯಾರಿಸಿ ಕೊಡಬಹುದೆನ್ನುವ ಕನಸೇ ಈ ಸಂಕಲನದ ಹಿಂದಿರುವ ಕಣ್ಣಾಗಿದೆ.  &lt;br /&gt;‘ಕ್ಷಮಿಸಿ ಬಿಡು ಪ್ರಭುವೆ/ ನಾವು ಅವರಂತಲ್ಲ/ ಅವರಂತಿಲ್ಲದ್ದಕ್ಕೆ ಖೇದವೂ ಇಲ್ಲ’ ಎಂದು ಆರಂಭವಾಗುವ  ‘ನಾವು ಅವರಂತಲ್ಲ’ ಎಂಬ ಕವಿತೆ ಉಳಿದ ಮಹಿಳೆಯರ ಕಾವ್ಯದ ಥರ ಯಥಾಪ್ರಕಾರ ಗಂಡಸರನ್ನು ಇಕ್ಕಳಕ್ಕೆ ಸಿಕ್ಕಿಸದೇ, ತಂತ್ರಕ್ಕೆ ಪ್ರತಿತಂತ್ರ ರೂಪಿಸುವ ಬದುಕಿನ  ಚದುರಂಗದಾಟದ ಮೋಸಕ್ಕೆ ತಾನು ಬಲಿ ಬೀಳುವುದಿಲ್ಲವೆಂಬ ಶಪಥದ ಜೊತೆಜೊತೆಗೇ ‘ನಮ್ಮೆದೆಯ ನೋವು ಹಾಡಲು ಬಿಡು’ ಎಂದು ಪ್ರಾರ್ಥಿಸುತ್ತಲೇ ‘ನಾವು ಹೀಗೆಯೇ ನೋವ ಹಾಡುತ್ತೇವೆ/ಆಟವಾಡದೆಯೂ ಜೀವಂತವಿರುತ್ತೇವೆ/ಚರಿತ್ರೆಯಾಗದೆಯೂ ವರ್ತಮಾನದಲ್ಲಿರುತ್ತೇವೆ’ ಎಂಬ ನಿಲುವು ತಾಳುತ್ತದೆ. ಇಂಥದೇ ಆಶಯ ಇಲ್ಲಿನ ಹಲವು ಕವಿತೆಗಳಲ್ಲಿ ಬೇರೆ ಬೇರೆಯದೇ ರೂಪಗಳಲ್ಲಿ ಕಾಣಿಸಿಕೊಳ್ಳುತ್ತವೆ. ಬದುಕಿನ ಒಳಹೊರಗುಗಳನ್ನು, ಜೀವನದ ಅರ್ಥಾನರ್ಥಗಳನ್ನು, ಗಂಡು-ಹೆಣ್ಣಿನ ಸ್ಥಾನಮಾನಗಳನ್ನು ಸಂಕಲನದುದ್ದಕ್ಕೂ ರೂಪ ಪ್ರಶ್ನಿಸುತ್ತಲೇ ಇಂಥ ಪ್ರಶ್ನೆಗಳಿಗೆಲ್ಲ ತೀರ ಖಾಸಗಿಯದಾದರೂ ಸಾರ್ವಜನಿಕವೂ ಆಗಬಹುದಾದ ಉತ್ತರಗಳನ್ನು ಪಡೆದಿದ್ದಾರೆ. ಕವಿತೆಯೊಂದರ ವಸ್ತುವನ್ನು ವ್ಯಾಪ್ತಿಯಾಚೆಗೂ ಅರಳಿಸಬಲ್ಲರಾದರೂ ಅದೇಕೋ ಪ್ರಾಸಗಳ ತ್ರಾಸಿಗೆ ಬಿದ್ದಾಗಲೆಲ್ಲ ಅವರ ಚುರುಕುತನ, ಸಹಜ ನಡಿಗೆ ಅಲ್ಲೇ ನಿಂತಂತೆ ಭಾಸವಾಗುತ್ತದೆ. &lt;br /&gt;‘ಆ ಹಾಳು ಅಸಮ ಪುರಾಣದ / ಕಥೆ ಮುಗಿದು/ ಯಾವುದೋ ಕಾಲವಾಯ್ತಲ್ಲ/ನನ್ನೊಳಗಿನವಳೇ/ನಿನಗಿನ್ನೂ ಅದರದೇ ಕನವರಿಕೆ’ ಎಂದು ಆರಂಭವಾಗುವ ಮೊದಲ ಪದ್ಯದಿಂದ ‘ಇಷ್ಟೇ ಹೀಗೇ ಎಂಬ ನಿರ್ಧಾರವಿಲ್ಲ/ ಕೊನೆ ಇಲ್ಲ ಮೊದಲೂ ಇಲ್ಲ/ ಎಲ್ಲೆಗಳ ದಾಟಿಯೂ ಉತ್ತರಗಳಿಲ್ಲ/ ಎಂದು ಕೊನೆಯಾಗುವ ಕಡೆಯ ಕವಿತೆಯವರೆಗೂ ಎಲ್ಲೂ ತನ್ನದೇ ಎಂಬ ಹಟವಾಗಲೀ, ಇದೇ ಇದೊಂದೇ ಬಿಡುಗಡೆಯ ದಾರಿ ಎಂಬ ಅಂತಿಮ ತೀರ್ಪಿಗೆ ಈಕೆ ಬೀಳದ ಕಾರಣಕ್ಕೆ ಎಲ್ಲ ಪದ್ಯಗಳಲ್ಲೂ ಸಹಜ ಜೈವಿಕತೆ ಇದೆ. &lt;br /&gt;ಬೆಣ್ಣೆ ತುಪ್ಪವಾಗುವ ರೂಪಾಂತರದ ಹದವನ್ನು ‘ಅಮ್ಮನಾಗುವುದೆಂದರೆ’ ಕವಿತೆಯಲ್ಲಿ ಹೀಗೆ ಹೇಳುತ್ತಾರೆ-‘ಸಿದ್ಧಿಸಿದಂತೆಲ್ಲಾ, ಬೆಣ್ಣೆ ಉಕ್ಕುವುದಿಲ್ಲ/ ಮಾಗುವ ಸದ್ದಿಗೆ ಧ್ಯಾನಿಸಿ/ ಸ್ಥಿರಗೊಳ್ಳುತ್ತದೆ ಮನ. ಕರಟುವುದಿಲ್ಲ/ ಹಸಕಲಾಗುವುದಿಲ್ಲ,. ಸದಾ ಹದ ತುಪ್ಪ.’ ‘ನಿರಾಕರಣ’ ಎನ್ನುವ ಕವಿತೆ ಧ್ಯಾನಿಸುವ ಹದ ಎಲ್ಲರಿಗೂ ನಿಲುಕಿದರೆ ಪ್ರಾಯಶಃ ಸಮಾಜದ ಮೇಲು-ಕೀಳುಗಳೆಲ್ಲ ಕ್ಷಣದೊಳಗೇ ಅಳಿಯಬಹುದು. ಆದರೆ ಸ್ಪರ್ಧೆಗಿಳಿಯದೇ, ಗೋಲು ಹೊಡೆಯದೇ ಸುಮ್ಮನಿದ್ದೇ ವರ್ತಮಾನಕ್ಕೆ ಉತ್ತರಿಸುವುದು ಎಲ್ಲರಿಂದಲೂ ಸಾಧ್ಯವಿರುವ ಸಂಗತಿಗಳಲ್ಲವಲ್ಲ.&lt;br /&gt;ಅದಲ್ಲ ಅದಲ್ಲ, ಒಂದು ಅಗುಳಿನ ಸತ್ಯ, ಅನಾಗತ ಹುಡುಕುತ್ತ, ಪರ್ಯಾಯ ಮುಂತಾದ ಕವಿತೆಗಳಲ್ಲಿ ಇತ್ತೀಚೆಗೆ ಕನ್ನಡ ಕಾವ್ಯವು ಅಧ್ಯಾತ್ಮಕ್ಕೆ ತೆರೆದುಕೊಳ್ಳುತ್ತಿರುವ ರೀತಿಯನ್ನು ತೆರೆದಿಟ್ಟರೆ, ಕವಿತೆಯನ್ನೇ ಕುರಿತ ಪದ್ಯಗಳಾದ ಅಂತರ ನಿರಂತರ, ಕಾಲಾಂತರ, ದಾರಿಗುಂಟ ಕವಿತೆ ನಿರಾಸೆಯನ್ನೇನೂ ಮಾಡುವುದಿಲ್ಲ. ಆದರೂ ಎಲ್ಲಿ ಎಲ್ಲಿ ಈ ಕವಿ ಪ್ರಾಸದ ಜೊತೆ ಏಗಲು ಹೋಗುತ್ತಾರೋ ಅಲ್ಲೆಲ್ಲ ಇವರ ಕವಿತೆಗಳೂ ಏದುಸಿರು ಬಿಟ್ಟಿವೆ, ಸಹಜ ನಡಿಗೆಯಿಂದ ಆಮೆ ವೇಗಕ್ಕೆ ಜರುಗಿವೆ. &lt;br /&gt;ಮೊದಲ ಓದಿಗೆ, ಪತ್ರಿಕೆಗಳಲ್ಲಿ ಚಿತ್ರಗಳೊಂದಿಗೆ ಅಚ್ಚಾದ ಗಳಿಗೆಗಳಲ್ಲಿ ಇಲ್ಲಿನೆಲ್ಲ ಕವಿತೆಗಳೂ ಚಂದವಾಗಿ ಕಾಣುವುವಾದರೂ ಎರಡನೆಯ, ಮೂರನೆಯ ಮರು ಓದುಗಳಿಗೂ ಈ ಕವಿತೆಗಳು ಉಳಿಯಬಲ್ಲವೇ ಎಂಬುದು ಪ್ರಶ್ನೆ. ಹೊಸ ರೂಪಕಗಳನ್ನು ಸೃಷ್ಟಿಸದೇ, ಈಗಾಗಲೇ ತಮಗೊಲಿದು ಬಂದಿರುವ ಭಾಷೆ, ವಸ್ತು ವಿನ್ಯಾಸಗಳಲ್ಲೇ ಉಳಿದು, ಹೇಳಿದ್ದನ್ನೇ ಹೇಳುತ್ತಿರುವ ಇತರ ಕವಿಗಳ ನಿಂತಲ್ಲೇ ನಿಂತುಬಿಟ್ಟಿರುವ ಕಾವ್ಯದ ಬಂಡಿಗಳನ್ನೂ ಈಕೆ ಧ್ಯಾನಸ್ಥಸ್ಥಿತಿಯಲ್ಲಿ ಅಧ್ಯಯನ ಮಾಡಿದರೆ ತಾವೇ ನಿರ್ಮಿಸಿಕೊಂಡಿರುವ ಕೋಟೆಯಾಚೆಗೂ ಇಣುಕಬಲ್ಲರು. ಹೇಳದೇ ಉಳಿದ ಮಾತುಗಳನ್ನು, ಹೊಸ ಪ್ರಯೋಗಗಳನ್ನು, ಹೊಸ ರೂಪಕಗಳನ್ನೂ ಸೃಸ್ಟಿಸಬಲ್ಲರು.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/5254102750204147054-1136995159404420871?l=bemkikaddi.blogspot.com' alt='' /&gt;&lt;/div&gt;</content><link rel='replies' type='application/atom+xml' href='http://bemkikaddi.blogspot.com/feeds/1136995159404420871/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://www.blogger.com/comment.g?blogID=5254102750204147054&amp;postID=1136995159404420871' title='0 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/5254102750204147054/posts/default/1136995159404420871'/><link rel='self' type='application/atom+xml' href='http://www.blogger.com/feeds/5254102750204147054/posts/default/1136995159404420871'/><link rel='alternate' type='text/html' href='http://bemkikaddi.blogspot.com/2010/07/blog-post_9328.html' title='ಕಡಲ ತುಂಬಾ ಅವಿಶ್ರಾಂತ ಅಲೆಗಳು-'/><author><name>ಬೆಂಕಿಕಡ್ಡಿ</name><uri>http://www.blogger.com/profile/13181705369161334860</uri><email>noreply@blogger.com</email><gd:image rel='http://schemas.google.com/g/2005#thumbnail' width='21' height='32' src='http://4.bp.blogspot.com/_bUAIZF0Yo1g/TKdTK-6rv2I/AAAAAAAAAJY/QXUJAVKh9ps/S220/dsr4.jpg'/></author><thr:total>0</thr:total></entry><entry><id>tag:blogger.com,1999:blog-5254102750204147054.post-1810856890753447153</id><published>2010-07-22T08:50:00.002+05:30</published><updated>2010-07-22T08:53:27.787+05:30</updated><title type='text'>ಎಚ್ಚೆಸ್ವಿ- ೬೭ರಲ್ಲೂ ಯುವಕ</title><content type='html'>ಎಚೆಸ್ವಿಗೆ ಅರವತ್ತೇಳು-ಅವರಿಗೊಂದು ನಮಸ್ಕಾರ ಮಾಡೇಳು. . . . &lt;br /&gt;ಇದೇ ಜೂನ್ ೨೩ಕ್ಕೆ ಅರವತ್ತಾರು ತುಂಬಿ ಅರವತ್ತೇಳಕ್ಕೆ ಕಾಲಿಡುತ್ತಿರುವ ಡಾ.ಎಚ್.ಎಸ್.ವೆಂಕಟೇಶ ಮೂರ್ತಿ (೨೩.೦೬.೧೯೪೪) ನವ್ಯೋತ್ತರ ಕನ್ನಡ ಕಾವ್ಯದ ಮುಖ್ಯ ವಾಹಿನಿಗಳಲ್ಲಿ ಖಂಡಿತವಾಗಿ ಗಮನಿಸಲೇಬೇಕಾದ ಪ್ರಮುಖ ಹೆಸರು. ಅವರ  ಕಾವ್ಯ ಮಾರ್ಗ ಕೇವಲ ತೀವ್ರತೆಯೊಂದನ್ನೇ ಅಲ್ಲದೇ ಪ್ರಮಾಣದ ಕಾರಣದಿಂದಲೂ ಮಹತ್ವದ್ದಾಗಿದೆ. ೧೯೬೮ರಲ್ಲಿ ತಮ್ಮ ಮೊದಲ ಕವನ ಸಂಕಲನ ‘ಪರಿವೃತ್ತ’  ಪ್ರಕಟಿಸಿದ ಅವರು ೨೦೦೮ರಲ್ಲಿ ‘ಉತ್ತರಾಯಣ ಮತ್ತು. . .’ ಸಂಕಲನ ಪ್ರಕಟಿಸಿದಾಗ ಅದು ಅವರ ೬೪ನೇ ಕೃತಿಯಾಗಿತ್ತು, ಅಂದರೆ ಅವರ ಒಟ್ಟೂ ಬರವಣಿಗೆಯ ಗಾತ್ರ ಕನ್ನಡ ಸಾಹಿತ್ಯವನ್ನು ಎಷ್ಟು ಶ್ರೀಮಂತಗೊಳಿಸಿದೆ ಎಂದು ಮನಗಾಣಬಹುದು. ಪರಂಪರೆಯ ಸತ್ವದೊಡನೆ ಸ್ವಂತದ ಅನುಭವಗಳನ್ನು ಅನುಸಂಧಾನ ಮಾಡುತ್ತ ಪ್ರಾಚೀನ ಮತ್ತು ವರ್ತಮಾನಗಳ ಸಹಯೋಗವನ್ನು ಅವರು ಸಾಧಿಸುತ್ತಲೇ ಬಂದಿದ್ದಾರೆ. ನಾಟಕಗಳನ್ನು, ಅನುವಾದಗಳನ್ನು, ಮಕ್ಕಳ ಕಾದಂಬರಿ ಮತ್ತು ವಿಮರ್ಶೆಗಳನ್ನು ಹಾಗೇ ಕವನ ಸಂಕಲನಗಳನ್ನು ಕಾಲದಿಂದ ಕಾಲಕ್ಕೆ ಪ್ರಕಟಿಸುತ್ತ ಬಂದಿರುವ ಎಚೆಸ್ವಿ, ‘ಆ ಮುಖೇನ’ ಎಂಬ ಅಂಕಣಬರಹವನ್ನು ಉದಯವಾಣಿಗೆ ಬರೆಯುತ್ತಿದ್ದುದನ್ನೂ ಮರೆಯುವ ಹಾಗಿಲ್ಲ. ಇತ್ತೀಚೆಗೆ ‘ಅವದಿ’ಯಲ್ಲಿ ಅವರು ಬರೆದುಕೊಳ್ಳುತ್ತಿರುವ ಆತ್ಮಕತೆಯ ಪುಟಗಳು ಅವರ ಜೀವನದ ಹಲವು ವಿವರಗಳನ್ನು ನಮ್ಮ ಮುಂದಿಡುತ್ತಿದೆ. ಜೊತೆಗೇ ‘ಮುಕ್ತ ಮುಕ್ತ’ ಧಾರಾವಾಹಿಯ ಟೈಟ್ಲ್ ಸಾಂಗ್ ಅವರದೇ ಕಾಂಪೊಸಿಷನ್ನು ಎನ್ನುವುದು ಕೂಡ ಇಲ್ಲಿ ಬಹಳ ಮುಖ್ಯ. ಏಕೆಂದರೆ ಕಮರ್ಷಿಯಲ್ ಸೂತ್ರದ ಟೀವಿ ಧಾರಾವಾಹಿಯೊಂದರ ಶೀರ್ಷಿಕೆ ಗೀತೆಗೂ ಸಾಹಿತ್ಯದ ಸ್ಪರ್ಶ ಕೊಟ್ಟು ಅದನ್ನು ಮತ್ತೆ ಮತ್ತೆ ಕೇಳುವಂತೆ ಮಾಡಿರುವ ಮೋಡಿಗಾರರು ಅವರು. ‘ಪರಸ್ಪರ’ಎನ್ನುವ ಬ್ಲಾಗನ್ನು ನಿರ್ವಹಿಸುತ್ತಿರುವ ಅವರು ಹೊಸಕಾಲಮಾನದ ಎಲ್ಲ ಅನುಕೂಲಗಳ ಪ್ರಯೋಜನವನ್ನು ಪಡೆದಿದ್ದಾರೆ. ಮತ್ತೆ ಆ ಕಾರಣಕ್ಕೇ ವರ್ತಮಾನದ ತಲ್ಲಣಗಳನ್ನು ತಕ್ಕಮಟ್ಟಿಗಾದರೂ ಅರಿತು ಹೊಸ ಬರಹಗಾರರಿಗೆ ಮುನ್ನುಡಿ ಬೆನ್ನುಡಿಗಳ ಆಶೀರ್ವಚನವನ್ನೂ ನಡೆಸಿಕೊಡುತ್ತಿದ್ದಾರೆ. ‘ಚಿನ್ನಾರಿ ಮುತ್ತ’ ಚಲನಚಿತ್ರ ಕೂಡ ಅವರ ಕೊಡುಗೆಯೇ. ಭಾಷೆಯ ಲವಲವಿಕೆ, ಜೀವಂತಿಕೆ, ಸಹಜೋಲ್ಲಾಸ, ಚಿತ್ರಕಶಕ್ತಿ, ಲಾಲಿತ್ಯ, ವಸ್ತು ನಿರ್ವಹಣೆಯ ನಾವೀನ್ಯ, ಹೀಗೆ ಅವರ ಕಾವ್ಯೋದ್ಯೋಗವನ್ನು ಬೇರೆ ಬೇರೆ ನೆಲೆಗಳಿಂದ ವಿಷ್ಲೇಷಿಸಬಹುದಾದರೂ, ಅವರು ತಮ್ಮ ಹೊಸ ಸಂಕಲನಗಳ ಮೂಲಕ ಹುಡುಕುತ್ತಿರುವ ಕಾವ್ಯದ ಹಾದಿಯನ್ನು ಗಮನಿಸುವುದೇ ಒಂದು ಸೊಗಸು. &lt;br /&gt;ತಮ್ಮ ಇತ್ತೀಚಿನ ಸಂಕಲನ ‘ಉತ್ತರಾಯಣ’ದ ಹಲವು ಕವಿತೆಗಳಲ್ಲಿ ಅವರು ಧ್ಯಾನಿಸಿರುವ ರೀತಿ ಕನ್ನಡ ಕಾವ್ಯ ಪರಂಪರೆಗೆ ಮತ್ತೊಂದು ಮಜಲನ್ನು ಜೋಡಿಸಿದೆ. ಅನೇಕಾನೇಕ ಕೃತಿಗಳನ್ನು ಈವರೆಗೆ ತಂದಿದ್ದರೂ, ಅವರ ಕಾವ್ಯದ ಮೂಲಕೇಂದ್ರ ಯಾವುದೆಂದು ಮೇಲ್ನೋಟಕ್ಕೆ ದಕ್ಕದಿರುವುದೂ ಒಂದು ಹೆಗ್ಗಳಿಕೆಯೇ. ಬರಿಯ ಕನ್ನಡಕ್ಕಷ್ಟೇ ಅಲ್ಲದೆ ವಸಾಹತೋತ್ತರ ಭಾರತೀಯ ಕಾವ್ಯ ಸಂದರ್ಭಕ್ಕೇ ಅವರು ಮಾದರಿಯಾಗಿದ್ದಾರೆ. ಮೂಲಸ್ವರೂಪದ ಅಭಿಜ್ಞಾನದಲ್ಲೇ ಅವರ ಸಾಹಿತ್ಯ ಯಾತ್ರೆ ನಡೆಯುತ್ತಿರುತ್ತದೆ. ಬರಿಯ ಛಂದೋವಿನ್ಯಾಸಗಳಲ್ಲಲ್ಲದೇ ತಾತ್ವಿಕ ಕಾರಣಗಳಿಂದಲೂ ಅವರ ಕಾವ್ಯಕೃಷಿ ಮಹತ್ವದ್ದಾಗಿದೆ. ತಮ್ಮ ಕಾವ್ಯೋದ್ಯೋಗದುದ್ದಕ್ಕೂ ಕಾವ್ಯದ ಸ್ವದೇಶೀಕರಣಕ್ಕೆ ಬದ್ಧರಾಗಿರುವ ಅವರು, ಕಾವ್ಯವನ್ನು ಅಮೂರ್ತದ ಆಗಸದಿಂದ ಮಣ್ಣ ನೆಲಕ್ಕೆ, ತಾತ್ವಿಕತೆಯ ಒಗಟಿನಿಂದ ಅನುಭವದ ನಿಜಕ್ಕೆ, ಕನಸಿನಾದರ್ಶಗಳನ್ನು ಕಥನಕಾವ್ಯದ ಅನುಸರಣದ ಕೆಲಸದಿಂದ ಅರಿವಿನಂಗಳಕ್ಕೆ ತಂದು ನಿಲ್ಲಿಸಿದ್ದಾರೆ. ಹಾಗೆಯೇ ಪುರಾಣದ ಪಾತ್ರಗಳಿಗೆ ಹೊಸ ಪೋಷಾಕು ತೊಡಿಸಿ ಬೆಚ್ಚಿಬೀಳಿಸಿದ್ದಾರೆ. ಶ್ರೀಸಂಸಾರಿ ಮತ್ತು ಆಪ್ತಗೀತೆ ಎಂಬ ಪದ್ಯಗಳಲ್ಲಿ ಅವರು ದೈವತ್ವಕ್ಕೆ ನೀಡಿದ ಮರುವ್ಯಾಖ್ಯಾನ ಕೂಡ ಗಮನೀಯವೇ ಆಗಿದೆ. ‘ಹರಿವ ಇರುವೆ ಕೂಡ ನೋಯದ ಹಾಗೆ, ಪಂಚಮದ ಇಂಚರ ಎಷ್ಟು ಮಾತ್ರಕ್ಕೂ ಒಡೆಯದ ಹಾಗೆ ಕಾಪಿಡಬೇಕೆನ್ನುವುದು’ ಅವರ ಕವಿಮನಸ್ಸಿನ ವೈಚಾರಿಕತೆಯಾಗಿದೆ. ಪೌರಾಣಿಕ ಸ್ಮೃತಿಯ ಮಂಥನದ ಮೂಲಕ ಆಧುನಿಕ ಕಾಲಕ್ಕೂ ಪ್ರಸ್ತುತವಾಗುವ ವೈಚಾರಿಕ ನವನೀತವನ್ನು ಹಂಚುತ್ತಿರುವ ಎಚೆಸ್ವಿ ಆಧುನಿಕ ಮನೋಭೂಮಿಕೆಯಲ್ಲಿರುವ ನಮ್ಮನ್ನೆಲ್ಲ ಪರಂಪರೆಯ ಆಗಸದವಕಾಶಕ್ಕೆ ಜೋಡಿಸಿ ಹೊಸ ಚಿಂತನೆಗಳು ಸಾಧ್ಯವಿದೆಯೆಂದು ಮನಗಾಣಿಸಿದ್ದಾರೆ.  &lt;br /&gt;ಎಚೆಸ್ವಿಯವರ ಕವಿತೆಗಳು ಸರಳವಾಗಿವೆಯೆನ್ನಿಸಿದರೂ ಅವು ಓದುಗನಲ್ಲಿ ಉಳಿಸುವ ಪ್ರಶ್ನೆಗಳು ದೊಡ್ಡವು. ಅವುಗಳ ಆಶಯವೂ ದೊಡ್ಡದೇ. ಕಾವ್ಯವೆಂದರೇನೆಂದು ಮತ್ತೆ ಮತ್ತೆ ಆಲೋಚಿಸುವ ಹಾಗೆ ಮಾಡುವ ಅವರ ಕಾವ್ಯಕ್ರಿಯೆಗೆ ಶರಣೆನ್ನಲೇ ಬೇಕಾಗುತ್ತದೆ. ಏಕೆಂದರೆ ವೈಚಾರಿಕತೆಗೆ ಪೂರ್ವ-ಪಶ್ಚಿಮ, ಎಡ-ಬಲ, ಇತ್ಯಾದಿ ಆಕೃತಿಗಳ ಪ್ರತ್ಯೇಕ ಅಸ್ತಿತ್ವವನ್ನೇ ಅವರ ಕಾವ್ಯ ನಿರಾಕರಿಸುತ್ತ ಬಂದಿದೆ. ಅನುಭವದ ಪಾತಳಿಯಲ್ಲೇ ಅರಿವಿನ ಆವಿಷ್ಕಾರ ಆಗಬೇಕೆನ್ನುವುದು ಈ ಕವಿ ಮೊದಲಿಂದಲೂ ಮಂಡಿಸುತ್ತ ಬಂದ ಗಂಧವಾಗಿದೆ, ಮತ್ತು ಅವರ ಕಾವ್ಯದುದ್ದಕ್ಕೂ ಅಂಟಿ ನಿಂತ ಪರಿಮಳವೂ ಅದೇ ಆಗಿದೆ. ಸಹನೌ, ಸೌಗಂಧಿಕಾ, ಮುಂತಾದ ಪದ್ಯಗಳಲ್ಲಿ ಅವರು ಕಟೆದು ನಿಲ್ಲಿಸುವ ಸಾಮಾಜಿಕ ಕಳಕಳಿ ಅವುಗಳನ್ನು ಓದಿಯೇ ಅನುಭವಿಸಬೇಕಾದ ಪಾರಮ್ಯಗಳು. ಸ್ಮೃತಿ ಮತ್ತು ಪುರಾಣಗಳನ್ನು ಗರಿಷ್ಠ ಪ್ರಮಾಣದಲ್ಲಿ ಬಳಸಿಕೊಳ್ಳುವ ಅವರು ಅವನ್ನು ತಮ್ಮ ಕಾವ್ಯದ ಅಲಂಕರಣಕ್ಕೆ ಬಳಸದೇ ಅವುಗಳ ತಳಹದಿಯಲ್ಲೇ ಹೊಸ ಆಲೋಚನೆಗಳ ಪಟ್ಟಕವನ್ನಾಗಿ ರೂಪಿಸಿ, ವರ್ತಮಾನದ ತಹತಹಿಕೆಗಳಿಗೆ ಉತ್ತರವನ್ನಾಗಿಸಿ ಆಶ್ಚರ್ಯ ಹುಟ್ಟಿಸುತ್ತಾರೆ. ‘ಭೂಮಿಯೂ ಒಂದು ಆಕಾಶ’ ಕವಿತೆಯಲ್ಲಿ ಸಂಬಂಧಗಳ ಅನಿವಾರ್ಯತೆಯನ್ನೂ, ಜೊತೆಗೇ ಅವೆಲ್ಲ ಹೇಗೆ ಅಪ್ರಾಕೃತ ಎಂದೂ ಹೇಳಿದ್ದಾರೆ. ಅಂದರೆ ಪುರಾಣ ಪ್ರತಿಮೆಯ ಮೂಲಕ ಸಮಕಾಲೀನ ತೊಡಕುಗಳನ್ನೂ, (ವಿಮುಕ್ತಿ) ಜೊತೆಗೆ ಸಮಕಾಲೀನ ಬದುಕನ್ನು ಪುರಾಣವಾಗಿಸುವ ಮೂಲಕವೂ (ಹರಿಗೋಲು, ಬಸವ ಪುರಾಣ ಥರದ ಕವಿತೆಗಳು) ಅವರು ಈಗಾಗಲೇ ಕಾವ್ಯಾಸಕ್ತರ ಗಮನವನ್ನೂ ಮನವನ್ನೂ ಸೆಳೆದಿದ್ದಾರೆ. ಕಥನ ಕಲೆ ಕೂಡ ಅವರಿಗೆ ಸಿದ್ಧಿಸಿದ ಕಲೆಯಾಗಿದ್ದರಿಂದಲೇ ಕಥನ ಕವನಗಳಲ್ಲೂ ಅವರ ಮುದ್ರೆ ಇದ್ದೇ ಇದೆ. ‘ಕಂಡದ್ದು’ ಕವಿತೆ ಓದುಗನನ್ನು ಬರಿಯ ಕವಿತೆಯಾಗಿ ಕಾಡದೇ ಅವನ ಸ್ವಂತ ಅನುಭವವಾಗಿಯೇ ಉಳಿದು ಬಿಡುತ್ತದೆ. ಹೀಗೆ ಕಾವ್ಯೋದ್ಯೋಗವೆಂಬ ಮಥನದಿಂದ ತಾತ್ವಿಕತೆಯ ಎಳೆಗಳನ್ನು ನೇಯ್ದು ಬೆಚ್ಚನೆಯ ಅರಿವಿನ ಹೊದಿಕೆಗಳನ್ನು ತಯಾರಿಸಿ ಕೊಡುತ್ತಿರುವ ಎಚೆಸ್ವಿ ಒಂದು ರೀತಿಯಲಿ ಕಬೀರನೇ ಆಗಿದ್ದಾರೆ. ಮಡಿವಂತಿಕೆಯ ಸೋಂಕಿಲ್ಲದ, ಸಾಮಾಜಿಕ ನ್ಯಾಯಕ್ಕೆ ಪರಿತಪಿಸುವ ಅವರೊಳಗಿನ ಕವಿ ಜಾಗತೀಕರಣ ಕಾಲದಲ್ಲೂ ಸ್ವದೇಶೀಕರಣದಲ್ಲಿ ನಿರತನಾಗಿದ್ದಾನೆ. ಸಮಕಾಲೀನ ಸಂದರ್ಭವನ್ನು ಪಾರಂಪರಿಕ ಕಾವ್ಯದೊಂದಿಗೆ ವಾದಿ-ಸಂವಾದಿಗಳ ಸ್ವರೂಪದಲ್ಲಿ ಮುಖಾಮುಖಿಯಾಗಿಸುತ್ತಲೇ ಗೇಯತೆಯನ್ನೂ ಅವರು ಉಳಿಸಿ ಬೆಳೆಸಿದ್ದಾರೆ. &lt;br /&gt;ಆದರೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಶತಮಾನದ ಕನ್ನಡ ಕಾವ್ಯದ ಸಂಪಾದಕರಾಗಿ ಅವರು ಎಡವಟ್ಟು ಮಾಡಿಕೊಂಡಿದ್ದೂ ಇದೆ. ನೂರು ವರ್ಷಗಳ ಕಾವ್ಯ ಪರಂಪರೆಯ ಪ್ರಾತಿನಿಧಿಕ ಸಂಕಲನವಾಗಬೇಕಿದ್ದ ಅದು ಅವರ ಆಯ್ಕೆಯ ದ್ವಂದ್ವಗಳ ಕಾರಣ ಪೇಲವವಾದದ್ದೂ ಈಗ ಇತಿಹಾಸ. ಜೊತೆಗೇ ಸುಮ್ಮಸುಮ್ಮನೇ ಮುಲಾಜಿಗೆ ಸಿಕ್ಕಿಕೊಳ್ಳುವ ಅವರ ಮುಗ್ಢತೆ ಸಹ ಅವರನ್ನು ತೊಂದರೆಗಿಳಿಸಿದೆ. ಉದಾಹರಣೆಗೆ ಮುಕ್ತ ಮುಕ್ತ ಸೀರಿಯಲ್ಲಿನ ಅವರ ಜಡ್ಜು ಪಾತ್ರವನ್ನೇ ನೋಡಿ. ಪಾಪ ಪದ್ಯ ಬರೆದುಕೊಂಡಿದ್ದ ಅವರಿಗೆ ಗೌನು ಹಾಕಿ ಕೂರಿಸಿ ಸೀತಾರಾಂ ಮಜಾ ತೆಗೆದುಕೊಳ್ಳುತ್ತಿದ್ದಾರೆ. &lt;br /&gt;ಎಂಭತ್ತರ ದಶಕದಲ್ಲಿ ಕ್ಯಾಸೆಟ್ಟು ಕವಿಗಳ ಒಂದು ದಂಡೇ ಸಾಂಸ್ಕೃತಿಕ ಲೋಕವನ್ನು ಗುತ್ತಿಗೆ ಹಿಡಿದಂತೆ ವರ್ತಿಸಿದ್ದು ಈಗ ಇತಿಹಾಸ. ದಾಸಪಂಥದವರೆಂದು ರಾಮಚಂದ್ರಶರ್ಮರಿಂದ ಮೂತಿಗೆ ಇಕ್ಕಿಸಿಕೊಂಡವರ ಪೈಕಿ ಎಚೆಸ್ವಿ ಕೂಡ ಒಬ್ಬರು. ಸಿ.ಅಶ್ವಥ್ ರಾಗಸಂಯೋಜನೆಯಲ್ಲಿ ಕ್ಯಾಸೆಟ್ಟುಗಳ ಸುಗ್ಗಿಯೋ ಸುಗ್ಗಿಯ ಕಾಲದಲ್ಲಿ ಪದ್ಯ ಬರೆಯುವ ಹುಕ್ಕಿಯಿದ್ದವರೆಲ್ಲ ರಾತ್ರಿ ಕಳೆದು ಬೆಳಗಾಗುವುದರಲ್ಲಿ ಖ್ಯಾತರಾಗಿಬಿಟ್ಟರು. ಈಗ ಆ ಸಾಲಿನಲ್ಲಿ ಉಳಿದಿರುವ ಏಕೈಕ ಹೆಸರೆಂದರೆ ಎಚೆಸ್ವಿಯವರದ್ದು ಮಾತ್ರ, ಏಕೆಂದರೆ ಬರೀಹಾಡುಗಳನ್ನಷ್ಟೇ ಅಲ್ಲದೇ ನಿಜ ಕವಿತೆಗಳನ್ನು ಬರೆಯುವ ತಾಕತ್ತಿದ್ದುದು ಅವರೊಬ್ಬರಿಗೆ ಮಾತ್ರ. ಉಳಿದವರೆಲ್ಲ ಯಾವ ಯಾವ ನಿಗೂಢ ಜಗತ್ತಿಗೆ ಸೇರಿಬಿಟ್ಟರೋ ಅರಿತವರಿಲ್ಲ.&lt;br /&gt;ಜೊತೆಗೆ ಎಚೆಸ್ವಿಯವರ ವರ್ಷಕ್ಕೊಂದು ಪುಸ್ತಕ ತರಲೇಬೇಕೆನ್ನುವ ಛಲ ಕೂಡ ಅವರನ್ನು ಇನ್ನೂ ಸಾಹಿತ್ಯ ಲೋಕದ ಹೊಳೆಯುವ ತಾರೆಯಾಗಿಸಿದೆ. ನವ್ಯರ ಕಾಲದ ‘ಕ್ವಾಲಿಟಿ’ಯ ವಾದವನ್ನು ಧಿಕ್ಕರಿಸಿ ‘ಕ್ವಾಂಟಿಟಿ’ಯ ಮೂಲಕ ನವ್ಯೋತ್ತರರ ಅಜೆಂಡಾವನ್ನು ವಿಸ್ತರಿಸಿದ್ದು ಕೂಡ ಅವರೇ. ಇದರ ಜೊತೆಗೆ ಬರಹಗಾರನಾಗಿರುವವನಿಗೆ ಮಾಧ್ಯಮದ ಅಡೆತಡೆಗಳಿರಬಾರದೆಂಬ ಸೂತ್ರ ಕೂಡ ಅವರಲ್ಲಿರುವುದರಿಂದಲೇ ಬರೀ ಕಾವ್ಯಕ್ಕಂಟಿಕೊಳ್ಳದೇ ಅಭಿಜಾತ ಬರಹಗಾರರು ಮಾತ್ರ ಕೈ ಇಡಬಹುದಾದ ನಾಟಕ ರಚನೆಗೂ ಅವರು ಕೈ ಹಾಕಿದ್ದಾರೆ. ‘ಊರ್ಮಿಳೆ’ ಇದಕ್ಕೊಂದು ಅಪ್ಪಟ ಉದಾಹರಣೆ. ಮಕ್ಕಳ ಪದ್ಯಗಳೆಂದರೆ ಉತ್ತರಕರ್ನಾಟಕದವರೆಂಬ ಮಾತನ್ನು ಅಳಿಸಿದ್ದೂ ಎಚೆಸ್ವಿಯವರೇ! ಹೀಗೆ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಬರೆದೂ ಆ ಎಲ್ಲ ಪ್ರಕಾರಗಳಲ್ಲೂ ಏಕಮುಖೀ ಯಶಸ್ಸು ಗಳಿಸಿದವರು ಕು.ವೆಂ.ಪು ನಂತರ ಎಚೆಸ್ವಿಯವರೊಬ್ಬರೇ ಇರಬೇಕು. &lt;br /&gt;೨೦೦೦ರಲ್ಲಿ ಪ್ರಕಟವಾದ ಅವರ ‘ಭೂಮಿಯೂ ಒಂದು ಆಕಾಶ’ ಸಂಕಲನದ ಬಗ್ಗೆ ಪ್ರೊ.ಸಿ.ಎನ್.ರಾಮಚಂದ್ರನ್ ಹೇಳಿದ್ದ ಮಾತುಗಳನ್ನಿಲ್ಲಿ ಉಲ್ಲೇಖಿಸಲೇಬೇಕು: ಅಡಿಗರ ನಂತರ ವೆಂಕಟೇಶಮೂರ್ತಿಗಳಷ್ಟು ಸಮರ್ಥವಾಗಿ ರೂಪಕಗಳನ್ನು ಬಳಸುವ ಕನ್ನಡ ಕವಿಗಳು ಅಪರೂಪ. ನಿದರ್ಶನವಾಗಿ, ಮೊದಲ ಓದಿಗೇ ನಮ್ಮನ್ನು ಚಕಿತಗೊಳಿಸುವ,ಬೆಚ್ಚಿಸುವ,ಇಡಿಯಾಗಿ ಆವರಿಸುವ ಈ ರೂಪಕಗಳನ್ನು ಪರಿಗಣಿಸಬಹುದು. ‘ಮರಗಳು ನೆರಳ ಹಾಸಿದ್ದೇ ಹಾಸಿದ್ದು’, ‘ಹೇಳಿ ಕೇಳಿ ಹಗಲ ಕೊನೆ-ಹೊಗೆ ಬತ್ತಿಯ ತುಕಡಾ’, ‘ಕನ್ನಡಿ ಒಂದು ಅಲೆಯಿಲ್ಲದ ಕೊಳ’, ‘ಒಲೆಯಲ್ಲಿ ಬೂದು ಬಣ್ಣದ ಶಾಲು ಹೊದ್ದ ಕೆಂಡ’, ‘ಎಣ್ಣೆ ಕೊಳಗದೊಳಕ್ಕೆ ಬಿತ್ತೆ ಒಣಗಿದ ನಗೆಯ ಬಿದಿಗೆ ಚಕ್ಕೆ’, ‘ಅನಾದಿ ಕಾಲದಿಂದ ಪ್ರವಾಸಿಗಳ ಮುಂದೆ ಮೊಂಡು ಕೈಯೊಡ್ಡಿ ಕೂತಿರೋ ಕುಷ್ಠ ಹಿಡಿದ ತಿರುಕ’ (ಮುಕ್ಕಾದ ಉಗ್ರ ನರಸಿಂಹ..ಹಂಪೆಯಲ್ಲಿ) ಇತ್ಯಾದಿ,,. ಇಲ್ಲಿ ಗಮನಿಸಬೇಕಾದ ಮತ್ತೊಂದು ಅಂಶವೆಂದರೆ ಇಂಥ ಬಿಡಿ ರೂಪಕಳಾಚೆಗೂ ಕೆಲವೊಮ್ಮೆ ಇಡೀ ಕವನವೇ ರೂಪಕವಾಗಿಬಿಡುವ -‘ಮೀನು ಬುಟ್ಟಿಯಲ್ಲಿ ಅಂಟಿಕೊಂಡಿರುವ ಕಿರು ಮೀನಂತೆ’ ಹಾಗೆಯೇ ದೀರ್ಘ ಕಥಾನಕಗಳಲ್ಲಿ ಕೇಂದ್ರ ಪಾತ್ರವೇ ರೂಪಾಕಗವಾಗಿ ಮಾರ್ಪಡಬಹುದು ‘ವಿಮುಕಿ’ಯ ಗರುಡನಂತೆ.&lt;br /&gt;ಖಾಸಗೀ ಬದುಕಿನ ಸುಖ, ದುಃಖಗಳನ್ನು, ನೋವು ನಲಿವುಗಳನ್ನು, ಹೇಳಿಕೊಳ್ಳಲಾರದ ಆದರೆ ಹೇಳಿಕೊಳ್ಳಲೇಬೇಕಾದ ಯಾತನೆಗಳನ್ನು ವೈಯುಕ್ತಿಕ ಪರಿಧಿಯಿಂದ ಬೇರ್ಪಡಿಸಿ ಅರ್ಥಪೂರ್ಣ ಸಾರ್ವತ್ರಿಕ ಪ್ರತಿಮೆಯನ್ನಾಗಿಸುವ ಕವಿಶ್ರದ್ಧೆ ಅವರಿಗಿರುವುದರಿಂದಲೇ ಶ್ರೀರಾಮನೂ ಅವರ ಕೈಯಲ್ಲಿ ಶ್ರೀಸಂಸಾರಿಯಾಗುತ್ತಾನೆ, ಉಡುಪಿಯ ಕೃಷ್ಣ ಕನಕನಿಗಾಗಿ ಕಿಂಡಿಯಲ್ಲಿ ಕಣ್ಣಿಟ್ಟು ಕಾಯುತ್ತಾನೆ. ಅವರ ಹುಟ್ಟುಹಬ್ಬದ ದಿನಕ್ಕೆ ಅವರದೇ ಮೂರು ಕವಿತೆಗಳನ್ನು ಆರಿಸಿ ಪೋಣಿಸಿದ್ದೇನೆ: ಅವರ ವೈಚಾರಿಕತೆಯ ರೀತಿ ಮೇಲ್ನೋಟಕ್ಕೆ ಸರಳವಾಗಿದ್ದರೂ ಹೇಗೆ ಗಾಢವಾಗಿದೆ ಅಂತ ತೋರಿಸಲು;&lt;br /&gt;                                                                             &lt;br /&gt;&lt;span style="font-weight:bold;"&gt;ಎಚ್.ಎಸ್.ವೆಂಕಟೇಶ ಮೂರ್ತಿ ಅವರ ಮೂರು ಕವಿತೆಗಳು&lt;/span&gt;&lt;br /&gt;ಭೂಮಿಯೂ ಒಂದು ಆಕಾಶ&lt;br /&gt;ಆಕಾಶದಲ್ಲಿ ಗ್ರಹ ತಾರೆಗಳು ಚಲ್ಲಾಪಿಲ್ಲಿ ಚೆಲ್ಲಿ ಬಿದ್ದಿದ್ದಾವೆ&lt;br /&gt;ಅದು ವಶಿಷ್ಠ, ಅದು ಅರುಂಧತಿ&lt;br /&gt;ಅವರು ಬೆಳಕಿನ ಕೈಚಾಚಿ ಪರಸ್ಪರ ವರಿಸಿದ್ದಾರೆ&lt;br /&gt;ನವದಂಪತಿಗಳೇ... ಅವರಂತಿರಬೇಕು ಸತಿ-ಪತಿ.&lt;br /&gt;&lt;br /&gt;ಆಕಾಶದಲ್ಲಿ ಗ್ರಹತಾರೆಗಳು ಚಲ್ಲಾಪಿಲ್ಲಿ ಚೆಲ್ಲಿ ಬಿದ್ದಿದ್ದಾವೆ&lt;br /&gt;ಅದು ಸಪ್ತರ್ಷಿ ಮಂಡಲ, ಅವು ಭತ್ತದ ಅರಳು&lt;br /&gt;ಸಪ್ತರ್ಷಿಗಳು ಅಗ್ನಿಕುಂಡದ ಸುತ್ತ ಕೂತಿದ್ದಾರೆ&lt;br /&gt;ಹೋಮಾಗ್ನಿ ಉರಿಸಿ ಅಂತರತಮ ಕೆದಕುತ್ತ&lt;br /&gt;&lt;br /&gt;ಆಕಾಶದಲ್ಲಿ ಗ್ರಹತಾರೆಗಳು ಚಲ್ಲಾಪಿಲ್ಲಿ ಚೆಲ್ಲಿ ಬಿದ್ದಿದ್ದಾವೆ&lt;br /&gt;ಅವನು ಚಂದ್ರ ಅವಳು ತಾರೆ ಅವನು ಬುಧ&lt;br /&gt;ಅವರದ್ದು ಚಿಕ್ಕ ಚೊಕ್ಕ ಸಂಸಾರ&lt;br /&gt;ಒಡಕು ಮರೆತು ಒಡನಿರುವುದೇ ಸಂಸಾರದ ಹದ&lt;br /&gt;&lt;br /&gt;ಆಕಾಶದಲ್ಲಿ ಗ್ರಹತಾರೆಗಳು ಚಲ್ಲಾಪಿಲ್ಲಿ ಚೆಲ್ಲಿ ಬಿದ್ದಿದ್ದಾವೆ&lt;br /&gt;ಆಗಾಗ ಇವರ ಮನೆಗೆ ಅವರು ಅವರ ಮನೆಗೆ ಇವರು&lt;br /&gt;ಇದು ಕುಟುಂಬ ಧರ್ಮ; ಇದು ಮಾನವತ್ವದ ಮಾರ್ಗ&lt;br /&gt;ಆದರೆ ನಿಷ್ಠುರ ಸತ್ಯ: ಆಳದಲ್ಲಿ ಅವರೆಲ್ಲ ಏಕಾಂಗಿಗಳು&lt;br /&gt;&lt;br /&gt;ಆಕಾಶದಲ್ಲಿ ಗ್ರಹತಾರೆಗಳು ಚಲ್ಲಾಪಿಲ್ಲಿ ಚೆಲ್ಲಿ ಬಿದ್ದಿದ್ದಾವೆ&lt;br /&gt;ನಕಾಷೆ ಬಿಡಿಸಿದ್ದು ನಾವು-ಎಳೆದು ಅವರ ನಡುವೆ ಸಂಬಂಧದ ಗೆರೆ&lt;br /&gt;ಅಂತರ್ಜಾಲ ಹೆಣೆದಿದ್ದೇವೆ,ವಿಶ್ವ ಕುಟುಂಬ ಕನಸಿದ್ದೇವೆ&lt;br /&gt;ಆದರೂ ನಮಗೆ ಗೊತ್ತು-ಭೂಮಿಯೂ ಒಂದು ಆಕಾಶ, ಇಲ್ಲಿ&lt;br /&gt;ನಾವೆಲ್ಲ ಗ್ರಹ ತಾರೆಗಳು.&lt;br /&gt;&lt;br /&gt;ಕಂಡದ್ದು&lt;br /&gt;&lt;br /&gt;ರಾತ್ರಿ ಮಳೆ ಮಿಂಚು, ವಿದ್ಯುತ್ತು ಹೋಗಿದೆ. ನೀವು&lt;br /&gt;ಬಂದಾಗ ಮನೆಗೆ ಏನೇನೂ ಕಾಣುತ್ತಿಲ್ಲ&lt;br /&gt;ಹೇಗೋ ಬಾಗಿಲು ತೆಗೆದು ಒಳಗೆ ಬರುವಿರಿ. ಬಂದು&lt;br /&gt;ಕಡ್ಡಿಪೆಟ್ಟಿಗೆಗಾಗಿ ತಡವರಿಸುವಿರಿ, ಇಲ್ಲ.&lt;br /&gt;ಸಿಗಲಿಲ್ಲ.ಸಿಡಿಮಿಡಿ.ಮನೆಯೊಡತಿ ಸಂಜೆಯೇ&lt;br /&gt;ರಜ ಎಂದು ಮಗನೊಡನೆ ತಾಯಿಯೂರಿಗೆ. ನೀವು&lt;br /&gt;ಚಡಪಡಿಸುವಿರಿ ಈಗ, ಅಡುಗೆ ಮನೆಯಲ್ಲಾಕೆ&lt;br /&gt;ಕಿಟಕಿಯಲ್ಲಿಡುತ್ತಿದ್ದಳಲ್ಲವೆ ಹಣತೆಯನು?&lt;br /&gt;ಹಣತೆ ಸಿಕ್ಕಿತು. ಅಲ್ಲೆ... ಅಲ್ಲೆ... ಕೆಳಗಡೆ ಹುಡುಕಿ&lt;br /&gt;ಇದ್ದೀತು ಕಡ್ಡಿಪೆಟ್ಟಿಗೆ. ಹೌದು ಅಲ್ಲೆ ಇದೆ.&lt;br /&gt;ಈಗ ಕಡ್ದಿಯ ಗೀರಿ ಮಣಿದೀಪ ಹೊತ್ತಿಸಿ.&lt;br /&gt;ದೀಪವಷ್ಟೇ ಮೊದಲು ಕಾಣುವುದು. ಅಮೇಲೆ...&lt;br /&gt;ಕಾಣುವುವು ಫ್ಲಾಸ್ಕು...ಬಿಸಿಯಡುಗೆ...ಕಾಸಿದ ಹಾಲು&lt;br /&gt;ಪ್ರೀತಿ...ಕಳಕಳಿ...ಅಕರಾಸ್ತೆ...ಕವಿತೆಯ ಸಾಲು &lt;br /&gt;&lt;br /&gt;ಹೀಗೇ ಒಂದು ರಾತ್ರಿ&lt;br /&gt;ಬಿದಿಗೆ &lt;br /&gt;ರಾತ್ರಿ&lt;br /&gt;ಹಸಿರು ಸೀರೆ ಉಟ್ಟ&lt;br /&gt;ಯಶೋದೆ&lt;br /&gt;ಅಂಗಾತ ಮಲಗಿದ್ದಾಳೆ&lt;br /&gt;&lt;br /&gt;ನೀಲ ಮೇಘ ಶ್ಯಾಮ&lt;br /&gt;ಅವಳ &lt;br /&gt;ಮೊಲೆತೊಟ್ಟಿಗೆ ತುಟಿ ಹಚ್ಚಿ&lt;br /&gt;ಚೀಪುತ್ತಿದ್ದಾನೆ&lt;br /&gt;&lt;br /&gt;ಡೊಂಕಾದ&lt;br /&gt;ಅವನ ಕೆಳದುಟಿಗೆ ಬೆಳ್ಳಗೆ&lt;br /&gt;ಹಾಲು ಮೆತ್ತಿದೆ.&lt;br /&gt;&lt;br /&gt;ಅವನ ಚಂಡಿಕೆ ಹಾರಿ ಸೂಜಿಮಲ್ಲೆ&lt;br /&gt;ಎಲ್ಲೆಲ್ಲೂ ಚೆಲ್ಲಿವೆ.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/5254102750204147054-1810856890753447153?l=bemkikaddi.blogspot.com' alt='' /&gt;&lt;/div&gt;</content><link rel='replies' type='application/atom+xml' href='http://bemkikaddi.blogspot.com/feeds/1810856890753447153/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://www.blogger.com/comment.g?blogID=5254102750204147054&amp;postID=1810856890753447153' title='0 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/5254102750204147054/posts/default/1810856890753447153'/><link rel='self' type='application/atom+xml' href='http://www.blogger.com/feeds/5254102750204147054/posts/default/1810856890753447153'/><link rel='alternate' type='text/html' href='http://bemkikaddi.blogspot.com/2010/07/blog-post_22.html' title='ಎಚ್ಚೆಸ್ವಿ- ೬೭ರಲ್ಲೂ ಯುವಕ'/><author><name>ಬೆಂಕಿಕಡ್ಡಿ</name><uri>http://www.blogger.com/profile/13181705369161334860</uri><email>noreply@blogger.com</email><gd:image rel='http://schemas.google.com/g/2005#thumbnail' width='21' height='32' src='http://4.bp.blogspot.com/_bUAIZF0Yo1g/TKdTK-6rv2I/AAAAAAAAAJY/QXUJAVKh9ps/S220/dsr4.jpg'/></author><thr:total>0</thr:total></entry><entry><id>tag:blogger.com,1999:blog-5254102750204147054.post-3441237445455369061</id><published>2010-07-22T08:45:00.002+05:30</published><updated>2010-07-22T08:48:34.535+05:30</updated><title type='text'>ಅರುಣ ಜೋಳದ ಕೂಡ್ಲಿಗಿ ಅವರ 'ಅವ್ವನ ಅಂಗನವಾಡಿ'</title><content type='html'>ವಾಚ್ಯವಾಗಿಯೇ ಉಳಿವ ಅಂಗನವಾಡಿಯ ಪದ್ಯಗಳು.&lt;br /&gt; &lt;br /&gt;ಡಾ.ಅರುಣ ಜೋಳದಕೂಡ್ಲಿಗಿ ವಾಚಕರವಾಣಿ ಮತ್ತು ಓದುಗರ ಪತ್ರದ ಮೂಲಕ ನಿರಂತರವಾಗಿ ತಮ್ಮ ಸುತ್ತಲಿನ ಅನ್ಯಾಯಗಳನ್ನು ಕುಂದುಕೊರತೆಗಳನ್ನೂ ಅವರಿವರ ಕತೆ-ಕವಿತೆಗಳಿಗೆ ಪ್ರತಿಕ್ರಿಯೆಗಳನ್ನು  ಬರೆಯುತ್ತಲೇ ಕವಿಯಾಗಿ ಅರಳಿದವರು. ಕಾವ್ಯ ಸ್ಪರ್ಧೆಗಳಲ್ಲೂ ತಮ್ಮ ಕವಿತೆಗಳಿಗೆ ಬಹುಮಾನಗಳನ್ನು ಪಡೆಯುವ ಮೂಲಕ ಎಡ ಪಂಥೀಯ ಆಶಯಗಳನ್ನು, ಸಮಾನತೆಯ ಕನಸುಗಳನ್ನೂ ತಮ್ಮ ಬರಗಳುದ್ದಕ್ಕೂ ಕಾಣಿಸುತ್ತಲೇ ಬಂದವರು. ಈಗಾಗಲೇ ‘ನೆರಳು ಮಾತಾಡುವ ಹೊತ್ತು’ (೨೦೦೪) ಕವನ ಸಂಕಲನವನ್ನೂ, ಮತ್ತು ‘ಸೊಂಡೂರಿನ ಭೂ ಹೋರಾಟಗಳು’ (೨೦೦೮) ಅಧ್ಯಯನ ಕೃತಿಯನ್ನೂ  ಪ್ರಕಟಿಸಿ ಸಾರಸ್ವತ ಲೋಕದಲ್ಲಿ ದಾಖಲಾಗಿರುವವರು. ಅವರ ಎರಡನೇ ಕವನ ಸಂಕಲನ ‘ಅವ್ವನ ಅಂಗನವಾಡಿ’.&lt;br /&gt;&lt;br /&gt;ಒಟ್ಟು ೪೧ ಪದ್ಯಗಳೆಂದು ಕರೆದಿರುವ ರಚನೆಗಳು ಈ ಸಂಕಲನದಲ್ಲಿವೆ. ಕಾವ್ಯ ಪರಂಪರೆಯ ಬೆರಗು ಹುಟ್ಟಿಸುವ ದನಿಗಳನ್ನು ಅಭ್ಯಸಿಸಿ ಆ ಮೂಲಕ ಅದನ್ನು ಪಡೆದ ಕವಿ, ಹಾಗೆ ತನಗೊಲಿದ ತನ್ನದೇ ದನಿಯಲ್ಲಿ ಕವಿತೆ ಕಟ್ಟಬೇಕೆಂಬ ಮತ್ತು ಪ್ರತಿಮೆ/ರೂಪಕಗಳ ಜೊತೆಗೇ ಕವಿಯು ಅನುಸಂಧಾನ ಮಾಡಬೇಕೆನ್ನುವ ‘ಪುರಾತನ’ ಮಾತುಗಳನ್ನೂ ಈ ಕವಿ ನೇರವಾಗಿ ಮತ್ತು ನಯವಾಗಿ ತಿರಸ್ಕರಿಸಿರುವುದು ಮೊದಲ ಓದಿಗೇ ಶೃತವಾಗುವ ಅಂಶಗಳು. ಏಕೆಂದರೆ ಕವಿತೆಯ ಕಟ್ಟುವಿಕೆಗೆ ಕವಿಯಾದವನಿಗೆ ಇರಲೇಬೇಕೆಂದು ಬಹುತೇಕರು ನಂಬಿರುವ ‘ಕವಿಸಮಯ’ ಮತ್ತು ಕಾವ್ಯಾನ್ವೇಷಣೆಯ ದೀರ್ಘಪಥವನ್ನು ಬೇಕೆಂತಲೇ ಬಿಟ್ಟುಕೊಟ್ಟು  ತನಗೊಲಿದ ಕಾಲುದಾರಿಯಲ್ಲೇ ಇಲ್ಲಿನ ಎಲ್ಲ ಕವಿತೆಗಳನ್ನೂ ಅರುಣ ಅರಳಿಸಿದ್ದಾರೆ.&lt;br /&gt;&lt;br /&gt;ಮುನ್ನುಡಿಕಾರ ಕೆ.ವಿ.ನಾರಾಯಣರವರು  ಗುರ್ತಿಸಿರುವಂತೆ ಈ ಕಾಲದ ಹೊಸ ಬರಹಗಾರ ಹಳೆಯ ಕಾಲದವರ ಹಳಹಳಿಕೆಯ ಮಾತುಗಳು ನುಸುಳದಂತೆ ಇಲ್ಲವೇ ಎಲ್ಲರೂ ಮೆಚ್ಚಿದಂತೆ, ಯಾರಿಗೂ ಗೊತ್ತಾಗದಂತೆ ಬರೆಯುವ ಬಗೆಯಿಂದ  ಇಲ್ಲಿನ ಪದ್ಯಗಳು ತಪ್ಪಿಸಿಕೊಂಡಿವೆ. ಅರುಣ ವಯಸ್ಸು ಮತ್ತು ಅನುಭವದಲ್ಲಿ ಇನ್ನೂ ಚಿಕ್ಕವರು. ಅವರು ಬೆಳೆದು ಬಂದ ವಾತಾವರಣದಲ್ಲಿ ಅವರು ಕಂಡುಂಡ ನೋವು, ಹತಾಶೆ ನಿರಾಶೆಗಳನ್ನು ತಮಗೊಲಿದ ಕಾವ್ಯಮಾರ್ಗದಲ್ಲಿ ಹೇಳಬಯಸಿದ್ದಾರೆ. ಇಲ್ಲಿನ ಎಲ್ಲ ಕವಿತೆಗಳಲ್ಲೂ ಸಂತಸದ ಸುಳಿವಾಗಲೀ, ಆನಂದದ ಕ್ಷಣಗಳಾಗಲೀ ಇಲ್ಲವೇ ಇಲ್ಲ. ಎಲ್ಲ ರಚನೆಗಳ ಹಿಂದೂ ನೋವು ನಿಟ್ಟುಸಿರು ಮತ್ತದಕ್ಕೆ ಮರುಗುವ ಹೃದಯದ ಹಾಡುಗಳಿವೆ. ಆದರೆ ಎಂತಹುದೇ ಕಷ್ಟಕಾರ್ಪಣ್ಯದಲ್ಲಿರುವ ವ್ಯಕ್ತಿಗೂ ಕ್ಷಣಕಾಲದವರೆಗಾದರೂ ಸಂತಸದ ಘಳಿಗೆಗಳಿದ್ದೇ ಇರುವುದರಿಂದ ಈ ಕವಿ ಬೇಕೆಂತಲೇ ಅವನ್ನು ನಿರಾಕರಿಸಿದ್ದಾರೋ ಅಥವ ಪ್ರಯತ್ನಪೂರ್ವಕವಾಗಿ ಬೇಕೆಂತಲೇ ನೋವು-ವಿಷಾದಗಳನ್ನೇ ತಮ್ಮ ಕಾವ್ಯಾಭಿವ್ಯಕ್ತಿಯ ಮಾಧ್ಯಮವನ್ನಾಗಿಸಿಕೊಂಡಿದ್ದಾರೋ ಎಂಬುದನ್ನು ಕವಿತೆಗಳ ಓದಿನಿಂದಲೇ ಮನಗಾಣಬಹುದು.&lt;br /&gt;&lt;br /&gt;ಅವ್ವನ ರಂಗೋಲಿ-ಹೆಸರಿನ ಸಂಕಲನದ ಮೊದಲ ಪದ್ಯದಲ್ಲಿ ತನ್ನವ್ವ ಎಳೆದ ರಂಗೋಲಿಯ ಗೆರೆಗಳನ್ನೇ ದಾರವಾಗಿ ಮಾಡಿಕೊಂಡು ಗಾಳಿಪಟ ಹಾರಿಸುವ ಕವಿ ಫ್ಯಾಂಟಸಿಯ ಲೋಕವೊಂದನ್ನು ಕಟ್ಟಿಕೊಡುತ್ತಲೇ ಆ ದಾರವನ್ನೇ ಹಗ್ಗವನ್ನಾಗಿ ಮಾಡಿಕೊಂಡು ಅವ್ವನನ್ನು ಬಯ್ಯುವ ತನ್ನಪ್ಪನನ್ನು ಹೆಡೆಮುರಿ ಕಟ್ಟುತ್ತಾನೆ. ಚಿತ್ರಪಟದ ಗಾಂಧಿಗೆ ನೂಲುವ ದಾರ ಖಾಲಿಯಾಗಿದೆಯೆಂದು ರಂಗೋಲಿಯಿಂದ ಪಡೆದ ದಾರವನ್ನೇ ನೀಡುವಾಗ ಅವ್ವನಿಗೊಂದು ಸೀರೆ ನೇಯ್ದು ಕೊಡಬೇಕೆಂಬ ಷರತ್ತು ಹಾಕುತ್ತಾನೆ. ಪದ್ಯ ಇಂಥ ರಮ್ಯ ಕಲ್ಪನೆಯಿಂದ ತೆರೆದುಕೊಳ್ಳುವುದಾದರೂ ಮೊದಲೇ ನಿರ್ಧರಿಸಿದ ಅಂತ್ಯ ಪದ್ಯಕ್ಕೆ ಬಂದೆದಗುವುದರಿಂದ, ಪದ್ಯ ಎದೆಗಿಳಿಯದೇ ಬರಿಯ ಫ್ಯಾಂಟಸಿಯ ಲೋಕವೊಂದನ್ನು ಮಾತ್ರ ಕಾಣಿಸಿಬಿಡುತ್ತದೆ.&lt;br /&gt;&lt;br /&gt;ವ್ಯಂಗ್ಯದ ಮೊನಚನ್ನು ತಮ್ಮ ಕವಿತೆಗಳಿಗೆ ಆಯುಧವನ್ನಾಗಿ ಮಾಡಿಕೊಂಡಿರುವ ಈ ಕವಿ ‘ವಿಶ್ವ ವಿದ್ಯಾಲಯದ ಸೆಮಿನಾರಿನಲ್ಲಿ’, ‘ರೆಕ್ಕೆಗಳೇ ತ್ರಿಶೂಲವಾದ ದೇಶದಲ್ಲಿ’, ‘ಬಯಲ ಬಸಿರಿನ ಕನವರಿಕೆ’, ಪದ್ಯಗಳಲ್ಲಿ ವ್ಯಂಗ್ಯದ ಮೂಲಕವೇ ಈ ಸಮಾಜ ಅನೂಚಾನವಾಗಿ ನಡೆಸಿಕೊಂಡು ಬರುತ್ತಿರುವ ಆಚರಣೆಗಳಿಗೆ ಉತ್ತರವನ್ನು ನೀಡುತ್ತಾರಾದರೂ, ಏಕೋ ಈ ಉತ್ತರಗಳೆಲ್ಲ ಚಳವಳಿಗಾರರ ಒಣ ಭಾಷಣದಂತೆ ಶುಷ್ಕವಾಗಿವೆಯೇ ವಿನಾ ಕವಿತೆಯಾಗುವಲ್ಲಿ ಸೋತಿವೆ.&lt;br /&gt;&lt;br /&gt;ನೆಲದ ನೆತ್ತಿಯ ಮೇಲೆ, ಬಯಲೆಂದರೆ ಬರೀ ಬಯಲಲ್ಲ ಪ್ರಭುವೇ ಪದ್ಯಗಳು ಈ ಕವಿ ಮುಂದೆ ಬೆಳೆಯಬಹುದಾದ ಸಾಧ್ಯತೆಗಳನ್ನು ಹೇಳಿದರೆ ಬಿಡುಗಡೆಯ ಬಿಡಿ ಪದ್ಯಗಳು, ಮುಖವಿರದ ಚಿತ್ರಗಳು, ಮಾತುಗಳ ಸುಟ್ಟವರು ಕವಿತೆಗಳಲ್ಲಿ ಅನೇಕ ಸಾಧ್ಯತೆಗಳನ್ನು ಕಾಣಿಸುತ್ತಾರೆ. ಹುಲಿಯಾಗಲು ಬಣ್ಣ ಹಚ್ಚಿದವರು ಥರದ ಮೂರು ನಾಲ್ಕು ಪದ್ಯಗಳು ಬೇಕೆಂತಲೇ ವ್ಯವಸ್ಥೆಯನ್ನು ಅಣಕಿಸುವ ಸಲುವಾಗಿ ಬರೆದಂತೆ ಭಾಸವಾಗುತ್ತವೆ. &lt;br /&gt;&lt;br /&gt;ತನ್ನ ಸ್ವಂತ ಅವ್ವನ ಬದುಕಿನ ಪುಟಗಳನ್ನೇ ಅವ್ವನ ಅಂಗನವಾಡಿ ಶೀರ್ಷಿಕೆಯಲ್ಲಿ ಪದ್ಯವಾಗಿಸಿರುವ ಕವಿ, ಇತ್ತ ಲಯಗಾರಿಕೆಯೂ ಇಲ್ಲದ ಅತ್ತ ಕಥನ ಕವನಗಳಲ್ಲಿರುವ ಕುತೂಹಲದ ಅಂಶಗಳನ್ನೂ ಹಿಡಿದಿಡದೇ ತನ್ನವ್ವನ ಬದುಕನ್ನು ನೆನೆಯುತ್ತಾರೆ. ಅವರ ಮಹತ್ವಾಕಾಂಕ್ಷೆಯ ಪದ್ಯ ಇದಾಗಿದೆಯೆಂಬುದು ಸಂಕಲನವನ್ನು ಇದೇ ಹೆಸರಿನಿಂದ ಕರೆದಿರುವುದು ಕಾರಣವಾಗಿದೆ. &lt;br /&gt;&lt;br /&gt;ತಮ್ಮ ಆಶಯಗಳನ್ನು ವೈಭವೀಕರಿಸಲು ಮತ್ತು ತಾವು ನಂಬಿದ ಸಿದ್ಧಾಂತಗಳನ್ನು ಪ್ರತಿಪಾದಿಸಲು ಅರುಣ ಸಂಕಲನದ ರಚನೆಗಳಿಗೆ ಕೈ ಹಾಕಿದ್ದಾರೆ. ವಾಚ್ಯವಾಗಿಯೇ ಉಳಿದುಬಿಡುವ ಇಲ್ಲಿನ ಹಲವು ರಚನೆಗಳ ವಿನ್ಯಾಸ ಓದಿನ ಕ್ಷಣದಲ್ಲಿ ಕಾಡುವುವಾದರೂ ಮರು ಓದಿಗೆ ನಮ್ಮನ್ನು ಹಿಡಿದಿಡುವುದರಲ್ಲಿ ಸೋತಿವೆ. ಅಕಾರಣ ಎಲ್ಲ ತೊಂದರೆಗಳಿಗೂ ಅನ್ಯರನ್ನೇ ಸಂಶಯಿಸುವ/ಹೊಣೆಗಾರರನ್ನಾಗಿಸುವ ಮತ್ತು ಸಾಮಾಜಿಕ ಅಸಮಾನತೆಗೆ ಪ್ರಭುತ್ವವನ್ನೇ ಗುರಿಮಾಡುವ ಬಹುತೇಕರು ಇಂಥ ಸಮಸ್ಯೆಗಳಿಗೆ ಪರ್ಯಾಯವನ್ನು ಹುಡುಕದೇ/ಕಟ್ಟಿಕೊಡದೇ ಬರಿಯ ಸಂಕಟದ ಪ್ರದರ್ಶನಗಳಿಂದಲೇ ಸಮಾಧಾನಗೊಂಡರೆ/ಗೊಳ್ಳುತ್ತಲೇ ಹೋದರೆ, ‘ಕಾವ್ಯ’ ಮುಂದಿನ ದಿನಗಳಲ್ಲಿ ಸಾಗಬೇಕಾದ ಹೊರಳುದಾರಿಗಳ ಬಗ್ಗೆ ಆತಂಕಗಳೂ ಉಂಟಾಗುತ್ತವೆ. &lt;br /&gt;&lt;br /&gt;ಕೃತಿ: ಅವ್ವನ ಅಂಗನವಾಡಿ ಕವಿ: ಅರುಣ್ ಜೋಳದ ಕೂಡ್ಲಿಗಿ ವರ್ಷ: ೨೦೧೦&lt;br /&gt;ಪ್ರಕಾಶಕರು: ಅಹರ್ನಿಶಿ, ಶಿವಮೊಗ್ಗ ಪುಟಗಳು ೧೦೪, ಬೆಲೆ ರೂ ೬೦/-&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/5254102750204147054-3441237445455369061?l=bemkikaddi.blogspot.com' alt='' /&gt;&lt;/div&gt;</content><link rel='replies' type='application/atom+xml' href='http://bemkikaddi.blogspot.com/feeds/3441237445455369061/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://www.blogger.com/comment.g?blogID=5254102750204147054&amp;postID=3441237445455369061' title='0 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/5254102750204147054/posts/default/3441237445455369061'/><link rel='self' type='application/atom+xml' href='http://www.blogger.com/feeds/5254102750204147054/posts/default/3441237445455369061'/><link rel='alternate' type='text/html' href='http://bemkikaddi.blogspot.com/2010/07/blog-post.html' title='ಅರುಣ ಜೋಳದ ಕೂಡ್ಲಿಗಿ ಅವರ &apos;ಅವ್ವನ ಅಂಗನವಾಡಿ&apos;'/><author><name>ಬೆಂಕಿಕಡ್ಡಿ</name><uri>http://www.blogger.com/profile/13181705369161334860</uri><email>noreply@blogger.com</email><gd:image rel='http://schemas.google.com/g/2005#thumbnail' width='21' height='32' src='http://4.bp.blogspot.com/_bUAIZF0Yo1g/TKdTK-6rv2I/AAAAAAAAAJY/QXUJAVKh9ps/S220/dsr4.jpg'/></author><thr:total>0</thr:total></entry><entry><id>tag:blogger.com,1999:blog-5254102750204147054.post-2253222025349626299</id><published>2010-05-22T17:44:00.002+05:30</published><updated>2010-05-22T17:55:16.500+05:30</updated><title type='text'>ಮಲೆಗಳಲ್ಲಿ ಮದುಮಗಳು-ಯಶಸ್ವಿ ರಂಗಪ್ರಯೋಗ</title><content type='html'>‘ಮಲೆಗಳಲ್ಲಿ ಮದುಮಗಳು’ ಈ ಶತಮಾನದ ಅತ್ಯುತ್ತಮ ಗದ್ಯ ಕೃತಿಗಳಲ್ಲೊಂದು.ಕನ್ನಡ ಕಾದಂಬರಿಪರಂಪರೆಗೆ ಹೊಸ ವ್ಯಾಖ್ಯೆಯನ್ನು ತನ್ನ ವಿಶಿಷ್ಠ ರಚನಾಕ್ರಮದಿಂದ ಮತ್ತು ಅನುಭವ ಸಾಂಧ್ರತೆಯ ಪಾರಮ್ಯದಿಂದ ಹಾಗೂ ಕಲಾತ್ಮಕ ಪ್ರಯೋಗಗಳಿಂದಲೂ ಬೆಳಗಿಸಿದ ಕೃತಿ. ಪ್ರತಿ ಓದಿನಲ್ಲೂ ಹೊಸ ಹೊಸ ವಿಸ್ತರಣಕ್ಕೆ ಕೊಂಡೊಯ್ಯುವ ಕು.ವೆಂ.ಪುರವರ ಈ ಕಾದಂಬರಿ ಈಗಾಗಲೇ ದೂರದರ್ಶನ ಧಾರಾವಾಹಿಯ ಕೆಲವು ಕಂತುಗಳಿಗೇ ನಿಂತು ಇದನ್ನು ಪುನರ್ಸುಷ್ಟಿಸುವವರ ಎದೆಗಾರಿಕೆಯನ್ನು ಪ್ರಶ್ನಿಸುತ್ತಲೇ ಇದೆ. ಇಡೀ ಕಾದಂಬರಿಯುದ್ದಕ್ಕೂ ಹಲವು ಕಥಾನಕದ ಝರಿಗಳು ಏಕಕಾಲಕ್ಕೆ ಓಡುತ್ತೋಡುತ್ತಲೇ ಒಮ್ಮೆ ಒಂದಾಗುತ್ತ ಮತ್ತೆ ಬೇರೆಯಾಗುತ್ತಲೇ ದರ್ಶನವೊಂದನ್ನು ನೀಡುತ್ತಲೇ ಸಾಗುತ್ತದೆ. ಕಾದಂಬರಿಯ ಪ್ರಸ್ತಾವನೆಯ ‘ಇಲ್ಲಿ ಯಾರೂ ಮುಖ್ಯರಲ್ಲ; ಇಲ್ಲಿ ಯಾರೂ ಅಮುಖ್ಯರಲ್ಲ; ಇಲ್ಲಿ ಯಾವುದು ಯಃಕಶ್ಚಿತವಲ್ಲ’ ಎಂಬ ದಾರ್ಶನಿಕ ಹೇಳಿಕೆಗಳೇ ಈ ಕೃತಿಯನ್ನು ಅರಗಿಸಿಕೊಳ್ಳಲು ಇರುವ ತೋರುಬೆರಳಾಗಿದೆ.  ಅದರ ಜೊತೆಗೇ ಕುಸುಮ ಬಾಲೆಯಂಥ ಕಬ್ಬಿಣದ ಕಡಲೆಯನ್ನೇ ರಂಗಕೃತಿಯನ್ನಾಗಿಸಿದ ಸಿ.ಬಸವಲಿಂಗಯ್ಯನವರು ಮದುಮಗಳನ್ನು ರಂಗಕ್ಕೆ ತಂದಿರುವ ಪರಿಯನ್ನು ಅರಿಯಲೂ ಈ ನಾಟಕವನ್ನು ನೋಡಲೇ ಬೇಕೆಂಬ ಆಸೆಗೆ ನೀರೆರೆಯುತ್ತವೆ. ಮೈಸೂರಿನ ರಂಗಾಯಣದಲ್ಲಿ ಪ್ರದರ್ಶಿತವಾಗುತ್ತಿರುವ ನಾಲ್ಕು ವಿರಾಮಗಳ ಜೊತೆಗೆ ನಾಲ್ಕು ಬೇರೆ ಬೇರೆ ರಂಗಸ್ಥಳಗಳಲ್ಲಿ ಒಂಭತ್ತು ಗಂಟೆಗಳ ದೀರ್ಘ ಪ್ರಯೋಗದ ನಾಟಕ ಇದೆಂಬ ಮಾಧ್ಯಮಗಳ ವರದಿ ಕೂಡ ಸಹಜ ಕುತೂಹಲವನ್ನು ರಂಗಾಸಕ್ತರಲ್ಲೂ, ಸಾಹಿತ್ಯಾಸಕ್ತರಲ್ಲೂ ಹುಟ್ಟುಹಾಕಿಬಿಟ್ಟಿದೆ, &lt;br /&gt;ಕನ್ನಡ ಕಾದಂಬರಿ ಲೋಕದಲ್ಲಿ ಕಳೆದ ನಲವತ್ತಮೂರು ವರ್ಷಗಳಿಂದಲೂ ಆಯಾ ಕಾಲದ ವಿಮರ್ಶಕ ಸೂತ್ರಗಳ ವಿವಿಧ ಮಹಜರುಗಳನ್ನು ಯಶಸ್ವಿಯಾಗಿ ಬೇಧಿಸುತ್ತಲೇ ಓದುಗನಲ್ಲಿ ಹೊಸ ಹೊಸ ಕಾಣ್ಕೆಗಳನ್ನು ಕಾಣಿಸುತ್ತಿರುವ ಮದುಮಗಳನ್ನು ರೂಪಾಂತರಿಸಿ ಮರು ಸೃಷ್ಟಿಸುವುದು ಆಲೋಚಿಸಿದಷ್ಟು ಸುಲಭವಾದ ಕೆಲಸವೇನೂ ಅಲ್ಲ. ಕಾದಂಬರಿಯ ತುಂಬ ತುಂಬಿಕೊಂಡಿರುವ ಒಂದೇ ಎನಿಸಿದರೂ ಹಲವು ಕೊಂಬೆಗಳಾಗಿ ಚಾಚಿಕೊಂಡಿರುವ ಇಲ್ಲಿನ ಕಥಾನಕವನ್ನು ವರ್ತಮಾನದಲ್ಲೂ ಸಾಧುವೆನ್ನಿಸುವಂತೆ ಘಟನಾಕ್ರಮದಲ್ಲಿ ಹೇಳುತ್ತಲೇ ಅದನ್ನು ಪ್ರೇಕ್ಷಕ ಅನುಸರಿಸುವಂತೆ ಮಾಡುವುದಕ್ಕೆ ರೂಪಾಂತರಕಾರರು ಅರ್ಜುನ ಜೋಗಿಗಳನ್ನು ನಂತರ ಸುಡುಗಾಡು ಸಿದ್ಧರನ್ನೂ ಹಾಗೇ ಹೆಳವರನ್ನೂ ಕರೆತಂದಿದ್ದಾರೆ. ಕೊರವಂಜಿಗಳೂ ಮಧ್ಯೆ ಬಂದು ಹೋಗುತ್ತಾರೆ. ಅತಿ ವಿಸ್ತಾರದ ಕತೆಯನ್ನು ಹೀಗೆ ಹೇಳಿಸದೇ ಹೋಗಿದ್ದರೆ ಕಥೆಯ ಕೊಂಡಿ ತಪ್ಪಿಹೋಗಿ, ಕಾದಂಬರಿಯನ್ನು ಓದದೇ ನೇರ ನಾಟಕಕ್ಕೆ ಬಂದ ಪ್ರೇಕ್ಷಕ ಗಲಿಬಿಲಿಗೊಳ್ಳುತ್ತಿದ್ದ. ಯಾವತ್ತೂ ಕಾಡುವ ಕಾಳಿದಾಸನ ಅಭಿಜ್ಞಾನ ಶಾಕುಂತಲದ ಉಂಗುರದಂತೇ ಇಲ್ಲಿ ಕೂಡ ಚುಕ್ಕೆಯುಂಗುರದ ಮೂಲಕ ಕಥೆಯನ್ನು ನಿರೂಪಿಸಹೊರಟಿರುವುದು ರೂಪಾಂತರಕಾರರು ಏಕಕಾಲಕ್ಕೆ, ಉಂಗುರದ ಮೂಲಕ ಕ್ಲಾಸಿಕ್ ಕೃತಿಯನ್ನೂ, ಜೋಗಿ, ಸಿದ್ಧರ ಮೂಲಕ ಜನಪದೀಯ ನಂಬುಗೆಗಳನ್ನೂ  ಅನಾವರಣಗೊಳಿಸುತ್ತಲೇ ಹೊಸತೊಂದು ಲೋಕಕ್ಕೆ ನೋಡುಗರನ್ನು ಕರೆದೊಯ್ಯುತ್ತಾರೆ.&lt;br /&gt;ಮೂಲತಃ ಕಾದಂಬರಿಯ ಓದಿನ ಸುಖವನ್ನು ನಾಟಕರೂಪದಲ್ಲೂ ಬಯಸುವುದು ಹಾಗೇ ನಾಟಕವನ್ನು ನೋಡು ನೋಡುತ್ತಲೇ ಅಲ್ಲಿ ಕಾದಂಬರಿಯ ಅಥೆಂಟಿಕೇಷನ್ ಬಗ್ಗೆ ಆಲೋಚಿಸುವುದು ನಾವು ಮಾಡಿಕೊಂಡೇ ಬರುತ್ತಿರುವ ಕೆಲಸವಾಗಿರುವುದರಿಂದಲೋ ಏನೋ ಇಂಥ ಅದ್ಭುತ ಕೆಲಸಗಳಲ್ಲಿ ಕೂಡ ನಮ್ಮ ಅಕೆಡಿಮಿಕ್ ವಿಮರ್ಶಾ ಬುದ್ಧಿ ಎರಡೂ ಸೃಜನಶೀಲ ಚಟುವಟಿಕೆಗಳನ್ನು ಅನುಮಾನಿಸಿ ತನಗೆ ಹಿತವೆನ್ನಿಸಿದ ಮಾಧ್ಯಮಕ್ಕೆ ಜೈ ಎನ್ನುತ್ತಿರುವ ಕಾರಣಕ್ಕೋ ಏನೋ ನಾಟಕವನ್ನು ನೋಡುತ್ತ ಸುಖಿಸುತ್ತಿರುವಾಗಲೂ ಹಗುರಕ್ಕೆ ತೇಲಿ ಬರುತ್ತಲೇ ಇದ್ದ ಪ್ರೇಕ್ಷಕರ ಮಾತುಗಳು ಕಾದಂಬರಿಯನ್ನು ಧೇನಿಸುತ್ತಲೇ ನಾಟಕವನ್ನೂ ಜಾಲಾಡುತ್ತಿದ್ದ ಪರಿ ಮೋಜು ತರುತ್ತಿತ್ತು. ಬೆಂಗಳೂರು ವಿ.ವಿ.ಯ ಕನ್ನಡ ವಿಭಾಗದ ವಿದ್ಯಾರ್ಥಿಗಳ ಮಧ್ಯೆ ನಾನು ಸೇರಿಕೊಂಡಿದ್ದ ಕಾರಣ ಹೊಸ ತಲೆಮಾರಿನ ನೋಡುಗರ ವೀಕ್ಷಕ ವಿವರಣೆ ಕೂಡ ಮಧ್ಯೆ ಮಧ್ಯೆ ದಕ್ಕುತ್ತಿತ್ತು. ಆ ವಿದ್ಯಾರ್ಥಿಗಳಲ್ಲೇ ಕೆಲವರು,  ಸರಿಯಾಗಿ ಅಭ್ಯಸಿಸದವರಿಗೆ ಕಥೆಯನ್ನು ಜೋಡಿಸಿಕೊಡುತ್ತಿದ್ದರು. ಜೊತೆಗೇ ನೂರೈವತ್ತಕ್ಕೂ ಹೆಚ್ಚು ಪಾತ್ರಗಳು ಬಂದುಹೋಗುವ ವಿಸ್ತೃತ ಕಥಾಹಂದರವಿರುವ ಕಾರಣ ನಿರ್ದೇಶಕರು ಒಬ್ಬೊಬ್ಬ ನಟನಿಂದಲೇ ಎರಡು ಮೂರು ಪಾತ್ರ ಮಾಡಿಸಿರುವುದರಿಂದ  ಕೆಲವೊಮ್ಮೆ ಗೊಂದಲವಾಗುತಿದ್ದುದೂ ಸಹಜವಾಗಿತ್ತು. ಅದರಲ್ಲಂತೂ ಜೋಗಪ್ಪಗಳೇ ಪಾತ್ರಗಳಾಗಿ ಬದಲಾದಾಗಲಂತೂ ಇಡೀ ಪ್ರೇಕ್ಷಕ ಸಮುದಾಯವೇ ಒಂದು ಮ್ಯಾಜಿಕ್ಕಿಗೆ ಒಳಗಾದ ಅನುಭವದಲ್ಲಿತ್ತು. &lt;br /&gt;ಒಟ್ಟು ನಾಲ್ಕು ರಂಗಸಜ್ಜಿಕೆಗಳು. ಒಂದೊಂದರಲ್ಲೂ ಎರಡು ಗಂಟೆಗಳ ಪ್ರದರ್ಶನ. ಪ್ರದರ್ಶನದ ನಡುವಿನ ವಿರಾಮದಲ್ಲಿ ಪ್ರೇಕ್ಷಕನೇ ಬೇರೆಯ ರಂಗಸ್ಥಳಕ್ಕೆ ತನ್ನ ಸ್ಥಳವನ್ನು ತಾನೇ ಬದಲಿಸಿಕೊಂಡು ಬೇರೆಯದೇ ಆದ ರಂಗಸ್ಥಳಕ್ಕೆ ಹೊಂದಿಕೊಳ್ಳಬೇಕಾದ ಪರಿ. ನಿಜಕ್ಕೂ ರಂಗದ ಮೇಲೆಯೇ ಸಿದ್ಧಗೊಂಡ ರಸ್ತೆ, ಮನೆ, ಉಬ್ಬು,ಇಳಿಜಾರು. ಮೇಗರವಳ್ಳಿಯ ಶಾಲೆ, ಬೈಸಿಕಲ್ ಪುರಾಣ ಎಲ್ಲವನ್ನೂ ಎಲ್ಲೂ ಕೊಂಚವೂ ಅತಿ ಎನ್ನಿಸದಷ್ಟು ಸಾವಧಾನವಾಗಿ ಎಳೆ ಎಳೆಯಾಗಿ ರಂಗದ ಮೇಲೆ ತೆರೆಸಿದ ಕಲಾ ನಿರ್ದೇಶಕರ ಕೈ ಚಳಕ,(ಪ್ರಮೋದ ಶಿಗ್ಗಾಂವ್) ನಲವತ್ತಕ್ಕೂ ಹೆಚ್ಚು ಹಾಡುಗಳನ್ನು ಸಹ್ಯವೆನ್ನಿಸುವಂತೆ ರಾಗಸಂಯೋಜಿಸಿರುವ ಸಂಗೀತ ನಿರ್ದೇಶಕ,(ಹಂಸಲೇಖ) ಅದನ್ನು ಬರೆದ ಕವಿ(ಡಾ.ಕೆ.ವೈ.ಎನ್) ಒಬ್ಬಿಬರೇ ಈ ಮದುಮಗಳ ತಯ್ಯಾರಿಯಲ್ಲಿ ಕೈಹಾಕಿದವರು? ಎಲ್ಲರೂ ಒಬ್ಬರಿಗಿಂತ ಮತ್ತೊಬ್ಬರು ತಮ್ಮ ಕೈ ಮೇಲಾಗಿಸಿರುವುದರಿಂದಲೇ ಇಂಥದೊಂದು ಪ್ರಯೋಗ ಕನ್ನಡ ರಂಗಭೂಮಿಗೆ ದಕ್ಕಿದೆ, ಆ ಪ್ರಯತ್ನ ಸಾರ್ಥಕವೂ ಆಗಿದೆ.  &lt;br /&gt;ರಾತ್ರಿ ಒಂಭತ್ತರಿಂದ ಮಾರನೇ ಬೆಳಗು ಆರೂಕಾಲರವರೆಗೂ ನಾಟಕವನ್ನು ವೀಕ್ಷಿಸಿ, ವಿರಾಮದ ಬಿಡುವಲ್ಲಿ ಸಿಕ್ಕ ಗೆಳೆಯರೊಂದಿಗೆ ಚರ್ಚಿಸಿ, ಮದುಮಗಳ ಮದುವೆಯ ನಾನೂರಕ್ಕೂ ಹೆಚ್ಚು ಚಿತ್ರಗಳನ್ನು ಸೆರೆಹಿಡಿದ ಗೆಳೆಯ ಶ್ರೀರಾಮ ಜಮದಗ್ನಿಯ ಕೆಲಸಕ್ಕೆ ಸಂಭ್ರಮಿಸಿ, ಅದನ್ನು ಸಿಕ್ಕಸಿಕ್ಕವರಿಗೆ ತೋರಿಸಿ, ಮತ್ಯಾವುದೋ ವೆಬ್ ಪೇಜುಗಳಲ್ಲಿ ಲಿಂಕಿಸಿ ಈ ಲೇಖನವನ್ನು ನೇರ ಕೀಲಿಮಣೆಯಲ್ಲಿ ಟಂಕಿಸುತ್ತಿರುವಾಗಲೂ ಅನುಮಾನದ ಸಣ್ಣದೊಂದು ಎಳೆ. ಕಲೆ ಎಂಬ ಮ್ಯಾಜಿಕ್ಕಿಗೆ ಇಂಥ ಪ್ರಯತ್ನಗಳು ಹೊಸ ರೂಪ ತರುವುದು ಸತ್ಯವಾದರೂ ಒಂಭತ್ತು ಗಂಟೆಗಳ ದೀರ್ಘಾವಧಿಯ ಪ್ರದರ್ಶನಕ್ಕೆ ಹೊಸಕಾಲದ, ಅದರಲ್ಲೂ ಸಾಹಿತ್ಯ, ಸಂಗೀತಗಳ ಮೇಲಣ ಅಭಿರುಚಿಯನ್ನೇ ಕಳಕೊಂಡ ಆಧುನಿಕ ಮನೋಭೂಮಿಕೆಯ ಜನ ಸ್ಪಂದಿಸುತ್ತಾರೆಯೇ? ಹಾಗೆ ಸ್ಪಂದಿಸುವ ಗುಣವನ್ನೇ ಕಳಕೊಂಡ ವರ್ತಮಾನಕ್ಕೆ ಇಂಥೆಲ್ಲ ಪ್ರಯತ್ನಗಳೂ ಹೊಳೆಯಲ್ಲಿ ತೇಲಿಬಿಟ್ಟ ಹುಣಿಸೆಯಲ್ಲವೇ?- ಅನ್ನುವ ಅನುಮಾನಗಳೆದ್ದರೂ ಮತ್ತೆ ಮತ್ತೆ ಮಲೆನಾಡಿನ ರಮ್ಯ ಪರಿಸರಕ್ಕೊಯ್ಯುವ ಕಾದಂಬರಿಯನ್ನು ರಂಗರೂಪಕ್ಕೆ ತಂದವರ ಅಪ್ರತಿಮ ಸಾಮರ್ಥ್ಯವನ್ನು ನಾಟಕ ನೋಡಿದವರೆಲ್ಲ ಅನುಭವಿಸಿಯೇ ಅನುಭವಿಸುತ್ತಾರೆನ್ನುವುದು ಮಾತ್ರ ಅಪ್ಪಟ ಸತ್ಯ.&lt;br /&gt;ನಾಟಕವು ಪ್ರಾರಂಭವಾಗುವ ರಂಗಸ್ಥಳವಂತೂ ಒಟ್ಟೊಟ್ಟಿಗೆ ನಾಲ್ಕೈದು ಪಾತ್ರಗಳು ಬೇರೆ ಬೇರೆ ಕಡೆ ಚಲಿಸಬಹುದಾದಷ್ಟು ವಿಶಾಲವಾಗಿರುವುದರಿಂದ ಪಾದರಿ ಜೀವರತ್ನಯ್ಯನ ಬೀಸೋಕಲ್ಲು ಸವಾರಿಯ ಮಜದೊಟ್ಟಿಗೇ, ಹಂದಿ ಶಿಕಾರಿಯ ಕೋಲಾಹಲವನ್ನು ಇನ್ನಿಲ್ಲದಂತೆ ಪ್ರೇಕ್ಷಕನ ಮನಸ್ಸಿನೊಳಕ್ಕೆ ಬಿತ್ತಿಬಿಡುತ್ತದೆ. ಮೊದಲ ವಿರಾಮದವರೆಗೂ ಅಂದರೆ ಮೊದಲ ರಂಗಸ್ಥಳದ ಆಟದವರೆಗೂ ಅತ್ಯಂತ ವೇಗವಾಗಿ ಮತ್ತು ಸಹಜವಾಗಿ ಬಿಚ್ಚಿಕೊಳ್ಳುತ್ತ ಹೋಗುವ ನಾಟಕ ಎರಡನೇಯ ರಂಗಸ್ಥಳದಲ್ಲಿ ಹಂದಿಯೂಟದ ನಂತರ ನಾಗಿಯನ್ನು ವೆಂಕಟಣ್ಣ ಕೂಡುವ ಪ್ಲಾಷ್ ಬ್ಯಾಕ್‌ನಲ್ಲಿ ಸಮ್ಮೋಹನಗೊಳಿಸಿ, ತಿಮ್ಮಿ ಮನೆ ಬಿಟ್ಟು ಹೋದ ಕಾರಣಕ್ಕೆ ಅವಳ ತಾಯಿಯ ಮೇಲೆ ಬರುವ ದೈವದ ಚಿತ್ರಣವಂತೂ ಸೆಲ್ಯುಲಾಯಿಡ್ ಮಾಧ್ಯಮಕ್ಕಿಂತಲೂ ಶಕ್ತಿಶಾಲಿಯಾಗಿ ಮೂಡಿಬರುತ್ತದೆ. ಆದರೆ ನಂತರ ಡ್ರಾಗ್ ಆಗುವ ನಿರೂಪಣೆ ಮೂರನೆಯ ರಂಗಮಂಚದ ಪೂರಾ ಬೋರ್ ಹೊಡೆಸುವಷ್ಟು ಅಶಕ್ತವಾಗಿದೆ. ಮತ್ತು ಕಾವೇರಿಯ ಸಾವು ಹಾಗೂ ದೊಡ್ಡಣ್ಣಹೆಗಡೆಯ ಸಾವಿನ ಸೂತಕ ಇಡೀ ನಾಟಕಕ್ಕೇ ಆವರಿಸುವುದರಿಂದಲೋ ಏನೋ ಅದೂ ಬೆಳಗಿನ ಝಾವದ ಸಮಯ ಅಲ್ಲೊಬ್ಬರು ಇಲ್ಲೊಬ್ಬರು ತೂಕಡಿಸುತ್ತಿರುವಾಗ ನಾಟಕ ನಾಲ್ಕನೆಯ ಕಡೆಯ ರಂಗಸ್ಥಳಕ್ಕೆ ಬದಲಾಗುತ್ತದೆ. ಚಿನ್ನಮ್ಮನನ್ನು ಓಡಿಸಿಕೊಂಡು ಹೋಗುವ ಪೀಂಚಲು ತಿಮ್ಮಿ-ಗುತ್ತಿಗಳು ಹಿಂದೆ ತಂಗಿದ್ದ ಕೋಡುಗಲ್ಲಿನಲ್ಲೇ ಮುಕುಂದಯ್ಯನನ್ನೂ ಚಿನ್ನಮ್ಮರನ್ನೂ ಒಂದಾಗಿಸುತ್ತಾಳೆ. ಈ ಐದನೆಯ ರಂಗಸ್ಥಳ ಕೂಡ ಮೊದಲ ರಂಗಸ್ಥಳದ ಹಾಗೇ ವಿಶಾಲವಾಗಿದ್ದು ಮದುವೆ ಮನೆಯ ಜೊತೆಜೊತೆಗೇ ಕೋಡುಗಲ್ಲು ಬಂಡೆಯನ್ನೂ ಹಾಗೇ ಗುತ್ತಿ ನದಿ ದಾಟುವಾಗ ಅವನ ನಾಯಿ ಸಾಯುವದನ್ನೂ ನಾಟಕದ ಕಡೆಯ ದೃಶ್ಯಗಳನ್ನೂ ಉಣಬಡಿಸುತ್ತದೆ. ಇನ್ನೇನು ಮುಗಿಯಿತೆಂದು ಪ್ರೇಕ್ಷಕ ಚಪ್ಪಾಳೆ ತಟ್ಟಿದರೂ ಮುಂದುವರೆಯುವ ನಾಟಕ ದೇವಯ್ಯನ ಮತಾಂತರವನ್ನು ಭಗ್ನಗೊಳಿಸುವ ಮುಕುಂದಯ್ಯನ ನಂತರವೂ ಮುಂದುವರೆದು ಮತ್ತೆ ಜೋಗಯ್ಯಗಳು ಪ್ರವೇಶಿಸಿ ಉಂಗುರವನ್ನು ಮಂಜುನಾಥನ ಸನ್ನಿಧಿಗೆ ಅರ್ಪಿಸುವ ಮೂಲಕ ಮುಕ್ತಾಯವಾಗುತ್ತದೆ. &lt;br /&gt;ಇಡೀ ನಾಟಕವನ್ನು ಸುಡುಗಾಡು ಸಿದ್ಧರು, ಕೊರವಂಜಿಗಳೂ, ಜೋಗಪ್ಪಗಳೂ ನೆರೇಟ್ ಮಾಡುವ ರೀತಿ ಸೊಗಸಾಗಿ ಬಂದಿದೆ. ಎಲ್ಲೆಲ್ಲಿ ನಾಟಕ ಎಳೆಯುಲ್ಪಟ್ಟಿದೆ ಅನ್ನಿಸುತ್ತದೋ ಅಲ್ಲೆಲ್ಲ ಇವರಿಲ್ಲದಿರುವುದೂ, ಪ್ರಾಯಶಃ ನಾಟಕದ ಪ್ರಸ್ತುತಿಗೆ ಈ ಪಾತ್ರಗಳ ಪೋಷಣೆಯ ಹೊಣೆ ಹೊತ್ತವರೇ ಉತ್ತರ ಹೇಳಬೇಕು. ಕತೆಯ ಎಳೆಗಳಲ್ಲಿ ಬರುವ ಸಾಬರ ಪಾತ್ರಗಳು, ಅವರ ಕುದುರೆ ಮೂಲಕ್ಕಿಂತ ಭಿನ್ನವಾಗಿ ಹಾಸ್ಯದ ಸ್ವರೂಪ ಪಡೆದಿವೆ. ಗುತ್ತಿ ಕಾದಂಬರಿಯಲ್ಲಿ ನಾಯಕನಾದರೆ ಸುಬ್ಬಣ್ಣ ಹೆಗಡೆಯೇ ನಾಟಕದ ತುಂಬ ತುಂಬಿಕೊಳ್ಳುತ್ತಾನೆ. ಪಾದರಿ ಜೀವರತ್ನಯ್ಯ, ನಾಯಿ ಗುತ್ತಿ, ಕುಂಟ ವೆಂಕಟಣ್ಣರ ಪಾತ್ರಧಾರಿಗಳು ಹಲಕಾಲ ನೆನಪಲ್ಲುಳಿಯುತ್ತಾರೆ. ಕಾದಂಬರಿಯ ಮೂಲ ಸ್ವರೂಪವನ್ನು ತಮಗೆ ಬೇಕಾದಂತೆ ತಿರುಚದ ನಿರ್ದೇಶಕರು ಅದರ ವಿವರವನ್ನು ಈ ದೀರ್ಘ ಅವಧಿಯ ನಾಟಕದ ತುಂಬ ಶ್ರಮಪಟ್ಟು ಹಿಡಿದಿರುವ ಅನೇಕ ಕುರುಹುಗಳು ನಾಟಕದುದ್ದಕ್ಕೂ ಸಿಗುತ್ತವೆ. ಅವರೇ ತಮ್ಮದೊಂದು ಸಂದರ್ಶನದಲ್ಲಿ ಹೇಳಿಕೊಂಡಂತೆ ಪುನಃ ಕು.ವೆಂ.ಪು ಅವರನ್ನು ಓದಿಸತೊಡಗುವ ಲಕ್ಷಣಗಳಂತೂ ಇವೆ, ಅವರು ತಮ್ಮ ಈ ಯತ್ನದಲ್ಲಿ ಯಶಸ್ವಿಯೂ ಆಗಿದ್ದಾರೆ.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/5254102750204147054-2253222025349626299?l=bemkikaddi.blogspot.com' alt='' /&gt;&lt;/div&gt;</content><link rel='replies' type='application/atom+xml' href='http://bemkikaddi.blogspot.com/feeds/2253222025349626299/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://www.blogger.com/comment.g?blogID=5254102750204147054&amp;postID=2253222025349626299' title='0 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/5254102750204147054/posts/default/2253222025349626299'/><link rel='self' type='application/atom+xml' href='http://www.blogger.com/feeds/5254102750204147054/posts/default/2253222025349626299'/><link rel='alternate' type='text/html' href='http://bemkikaddi.blogspot.com/2010/05/blog-post_22.html' title='ಮಲೆಗಳಲ್ಲಿ ಮದುಮಗಳು-ಯಶಸ್ವಿ ರಂಗಪ್ರಯೋಗ'/><author><name>ಬೆಂಕಿಕಡ್ಡಿ</name><uri>http://www.blogger.com/profile/13181705369161334860</uri><email>noreply@blogger.com</email><gd:image rel='http://schemas.google.com/g/2005#thumbnail' width='21' height='32' src='http://4.bp.blogspot.com/_bUAIZF0Yo1g/TKdTK-6rv2I/AAAAAAAAAJY/QXUJAVKh9ps/S220/dsr4.jpg'/></author><thr:total>0</thr:total></entry><entry><id>tag:blogger.com,1999:blog-5254102750204147054.post-498639474804015280</id><published>2010-05-09T21:56:00.000+05:30</published><updated>2010-05-09T21:57:43.854+05:30</updated><title type='text'>ಗೆರೆ .... ಚುಕ್ಕಿ...ಸೊನ್ನೆ....</title><content type='html'>ಮನೆಯೊಳಗಿನ ಗೋಡೆಗಳಲ್ಲೆಲ್ಲ&lt;br /&gt;ಮಗ ಬರೆದ ಚಿತ್ರಗಳ ದರಬಾರು&lt;br /&gt;ಅಲ್ಲಿರುವ ಅಷ್ಟೊಂದು ಪಾತ್ರಗಳು&lt;br /&gt;ಅವನೇ ಪರಿಚಯಿಸದ ಹೊರತು&lt;br /&gt;ಸುಲಭಕ್ಕೆ ಅರ್ಥವಾಗುವುದಿಲ್ಲ- ನಂಟು ನೂರಾರು.&lt;br /&gt;&lt;br /&gt;ಎಲ್ಲಿಂದ ಹೇಗೆ ಬಂತವನಿಗಿಂಥ ಉಮೇದು?&lt;br /&gt;ಮನೆಗೆ ಬಂದವರೆಲ್ಲ ಕೇಳಿಯೇ ಕೇಳುತ್ತಾರೆ-&lt;br /&gt;ಪೆನ್ನು, ಪೆನ್ಸಿಲು ಕೈಗೆಟುಕದ ಹಾಗೆ&lt;br /&gt;ನೀವಿಡದೇ ಇದ್ದುದಕ್ಕೆ, ಬೇಕಾಬಿಟ್ಟಿ ಗೀಚಿಬಿಟ್ಟಿದ್ದಾನೆ&lt;br /&gt;ಟೀ ಕುಡಿಯುತ್ತಲೇ-ಷರಾ ಬರೆಯುತ್ತಾರೆ.&lt;br /&gt;&lt;br /&gt;ನಿದ್ರೆ ಬಾರದ ರಾತ್ರಿಗಳಲ್ಲೆಲ್ಲ&lt;br /&gt;ಕವಿತೆಗಳಿಗೆ  ಮೊರೆ ಹೋಗುವ ನಾನು&lt;br /&gt;ಸಂಕೀರ್ಣಸಾಲುಗಳನ್ನೋದಿ ಗೋಡೆ ದಿಟ್ಟಿಸುತ್ತೇನೆ&lt;br /&gt;ಉದ್ದೇಶವಿಲ್ಲದೇ ಪುಟ್ಟನೆಳೆದ ಗೆರೆ, ಚುಕ್ಕಿ, ಸೊನ್ನೆಗಳು&lt;br /&gt;ಅನುರಣಿಸುತ್ತವೆ ಯಾವುದೋ ಕವಿಯ ಭಾವ ಲೋಕವನ್ನು.&lt;br /&gt;&lt;br /&gt;ಹೀಗೆ ಧೇನಿಸಿದೊಡನೆ ನಮ್ಮ ಕಣ್ಣಳತೆಗೇ ತೆರೆವ&lt;br /&gt;ಚಿದ್ವಿಲಾಸದ ಈ ಸಂಕೇತ ವ್ಯಾಖ್ಯೆಗಳು&lt;br /&gt;ವರ್ತಮಾನದ ಮಿತಿ ಮೀರಿ ಹೊಳೆದರೂ&lt;br /&gt;ಮತ್ತೆ ಇಹದಲ್ಲೇ ಉಳಿದು ಸೆಣಸುವ &lt;br /&gt;ಮನುಷ್ಯಮಾತ್ರರ ಕನಸ ಕಿಲುಬುಗಳು?&lt;br /&gt;&lt;br /&gt;ಚಿತ್ತದೊಳಗಿದ್ದುದೆಲ್ಲವನೂ ಮಥಿಸಿ&lt;br /&gt;ಚಿತ್ರವನ್ನಾಗಿಸಿ ಒಂದರ್ಥಕ್ಕೆ ಬಗ್ಗಿಸಿದರೆ,ಅರೆ,&lt;br /&gt;ನಿರರ್ಥಕದ ಕಲ್ಲು ಮಣ್ಣಿನ ವ್ಯರ್ಥದೊಳಗೇ ಸಿಗುವ&lt;br /&gt;ಈ ಅಮೂಲ್ಯ ಪರುಷ ಮಣಿಯ ಸ್ಪರ್ಶ-&lt;br /&gt;ಕ್ಕೆ ಸಿಕ್ಕಿದ್ದೆಲ್ಲವೂ ಬಂಗಾರವಾಗುವುದು ಖರೆ&lt;br /&gt;&lt;br /&gt;ಅಂತ ಒಳಗಿಂದ ಅನ್ನಿಸಿದ ಕೂಡಲೇ&lt;br /&gt;ಅವರಿವರ ಒತ್ತಾಯಕ್ಕೆ ಮಣಿದು&lt;br /&gt;ಗೋಡೆಗೆ ಹೊಸ ಬಣ್ಣ ಹೊಡೆಸಬೇಕೆಂದಿದ್ದ ನಿರ್ಧಾರ&lt;br /&gt;ಕೈ ಬಿಟ್ಟೆ. ಕಣ್ಣಳತೆಯ ಕ್ಷಿತಿಜದಲ್ಲೇ ಈಜುವುದಿನ್ನು   &lt;br /&gt;ಗುರಿ-ಅನುದಿನದ ಅಂತರಗಂಗೆ ದಾಟುವುದು.&lt;br /&gt;&lt;br /&gt;&lt;br /&gt;(ದೇಶ ಕಾಲ ವಿಶೇಷ ಸಂಚಿಕೆಯಲ್ಲಿ ಪ್ರಕಟಿತ ಕವಿತೆ)&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/5254102750204147054-498639474804015280?l=bemkikaddi.blogspot.com' alt='' /&gt;&lt;/div&gt;</content><link rel='replies' type='application/atom+xml' href='http://bemkikaddi.blogspot.com/feeds/498639474804015280/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://www.blogger.com/comment.g?blogID=5254102750204147054&amp;postID=498639474804015280' title='0 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/5254102750204147054/posts/default/498639474804015280'/><link rel='self' type='application/atom+xml' href='http://www.blogger.com/feeds/5254102750204147054/posts/default/498639474804015280'/><link rel='alternate' type='text/html' href='http://bemkikaddi.blogspot.com/2010/05/blog-post.html' title='ಗೆರೆ .... ಚುಕ್ಕಿ...ಸೊನ್ನೆ....'/><author><name>ಬೆಂಕಿಕಡ್ಡಿ</name><uri>http://www.blogger.com/profile/13181705369161334860</uri><email>noreply@blogger.com</email><gd:image rel='http://schemas.google.com/g/2005#thumbnail' width='21' height='32' src='http://4.bp.blogspot.com/_bUAIZF0Yo1g/TKdTK-6rv2I/AAAAAAAAAJY/QXUJAVKh9ps/S220/dsr4.jpg'/></author><thr:total>0</thr:total></entry><entry><id>tag:blogger.com,1999:blog-5254102750204147054.post-1583283153054926441</id><published>2010-04-16T22:55:00.000+05:30</published><updated>2010-04-16T22:56:55.441+05:30</updated><title type='text'>ದೇಹವೆಂಬ ದೇವಾಲಯ</title><content type='html'>‘ದೇಹೋ ದೇವಾಲಯಃ ಪ್ರೋಕ್ತೋ, ಜೀವೋ ಹಂಸಃ ಸನಾತನಃ&lt;br /&gt;ತ್ಯಜೇದಜ್ಞಾನ ನಿರ್ಮಾಲ್ಯಂ ಸೋಹಂ ಭಾವೇನ ಪೂಜಯೇತ್.’&lt;br /&gt;&lt;br /&gt;ನಮ್ಮ ಹಿರಿಯರು ಕಂಡುಕೊಂಡಿದ್ದ ಆತ್ಮಾರಾಧನೆಯನ್ನು ವಿವರಿಸುವ ಈ ಶ್ಲೋಕ ದೇಹವನ್ನೇ ದೇವಾಲಯವೆಂದು ಭಾವಿಸು ಎಂದು ಹೇಳುತ್ತದೆ. ದೇಹವೆಂಬ ದೇವಾಲಯದಲ್ಲಿ ನೆಲೆಗೊಂಡಿರುವ ಜೀವಾತ್ಮವೆಂಬ ಹಂಸವೇ ಭಗವಂತ ಸ್ವರೂಪಿ. ಅಜ್ಞಾನವೆಂಬ ನಿರ್ಮಾಲ್ಯವನ್ನು ತೆಗೆದುಹಾಕಿ ಅವನೇ ನಾನೆಂಬ ಭಾವದಿಂದ ಪೂಜಿಸಬೇಕು ಎನ್ನುವುದು ತಾತ್ಪರ್ಯ.&lt;br /&gt;&lt;br /&gt;ಬಸವಣ್ಣ ಹೇಳಿದ ಉಳ್ಳವರು ಶಿವಾಲಯ ಮಾಡುವರು, ನಾನೇನು ಮಾಡಲಿ ಬಡವನಯ್ಯಾ ಎಂಬುದು ಕೂಡ ದೇಹವನ್ನೇ ದೇವಾಲಯವೆಂದು ಬಣ್ಣಿಸಿದ ಒಂದು ವಚನ. ಶಿರವನ್ನು ಹೊನ್ನ ಕಳಸವೆಂದು ಪರಿಭಾವಿಸಿ ಶರೀರವನ್ನು ದೈವ ಪ್ರಭೆಯ ಪ್ರತೀಕವೆಂದು ಭಾವಿಸುವುದು ಉದಾತ್ತ ದೃಷ್ಟಿಕೋನ. ಮೂರು ದಿನ ಬದುಕಿ ಮಣ್ಣ ಪಾಲಾಗುವ ಈ ದೇಹವನ್ನು ಭಗವಂತನ ಆವಾಸ ಸ್ಥಾನವೆಂಬ ಔನ್ನತ್ಯಕ್ಕೇರಿಸುವುದು ಜೀವನ್ಮುಖಿ ಪರಿಕಲ್ಪನೆ ಮತ್ತು ಅದ್ವೈತ ದರ್ಶನದ ಸಹಜ ತಾತ್ಪರ್ಯವೂ ಆಗಿದೆ.&lt;br /&gt;&lt;br /&gt;ಹೀಗೆ ದೇಹಕ್ಕೊಂದು ದೇವಾಲಯದ ಕಲ್ಪನೆಯನ್ನಿರಿಸಿಕೊಂಡು, ಅದನ್ನೊಂದು ಆರಾಧನಾ ಮಂದಿರವನ್ನಾಗಿ ಪರಿಭಾವಿಸುವುದು ಮೋಹದ ಜೊತೆಗೇ ಮಮಕಾರವನ್ನೂ ಉಳಿಸುತ್ತದೆ ಎನ್ನುವವರೂ ಇದ್ದಾರೆ. ಆದರೆ ದೇಹವನ್ನೆ ದೇಗುಲವನ್ನಾಗಿ ಪರಿಭಾವಿಸುವವನು ತನ್ನ ಕರ್ತವ್ಯದ ಅರಿವನ್ನೂ ಕಾಣುತ್ತಾನೆ. ಕೇವಲ ದೈಹಿಕ ಸ್ತರದಲ್ಲೇ ಬದುಕಲಾರದ ಮನುಷ್ಯ ಮನಸ್ಸೆಂಬ ಸೇತುವೆಯನ್ನೂ ಈ ದೇಹದೊಂದಿಗೇ ಕಲ್ಪಿಸಿಕೊಂಡಿದ್ದಾನೆ. ಒಬ್ಬರ ಬದುಕಿನುದ್ದಕ್ಕೂ ಚೈತನ್ಯದ ಆಶ್ರಯ ಸ್ಥಾನವಾದ ದೇಹವು ಅದನ್ನು ನಿಯಂತ್ರಿಸುವ ಬುದ್ಧಿ ಮತ್ತು ಶರೀರದ ಕ್ರಿಯೆಗಳಿಗೆ ಭಾವಸ್ಪಂದನದವೊದಗಿಸುವ ಮನಸ್ಸಿಗೂ ಆಧಾರವಾಗಿರುವುದನ್ನು ಗಮನಿಸಬೇಕು. ಹಾಗಾಗಿಯೇ ದೇಹ-ಮನಸ್ಸು-ಬುದ್ಧಿ ಭಾವಗಳ ಸಮ್ಮಿಲನವನ್ನು ದೇಗುಲವೆನ್ನಲೇ ಬೇಕಾಗುತ್ತದೆ. ಈ ದೇವಾಲಯ ಒಂದು ಪೂಜಾಮಂದಿರವಾಗಬೇಕೆಂದರೆ ಅಲ್ಲಿಯೂ ದೈಹಿಕ ಮತ್ತು ಮಾನಸಿಕ ಸ್ವಾಸ್ಥ್ಯಗಳ ಶೃಂಗವಾಗಲೇಬೇಕು. ಮನಸ್ಸು ಮತ್ತು ಶರೀರಗಳ ಹತೋಟಿ ಇದ್ದಲ್ಲಿ ಮಾತ್ರ ಲೌಕಿಕದ ಬದುಕೂ ಸಹನೀಯವಾಗಿರುತ್ತದೆ ಇಲ್ಲದೆ ಹೋದರೆ ಅದು ನರಕಸದೃಶವಾಗುತ್ತದೆ, ಪಾಪ ಯಾತ್ರೆಯ ಅಂಕಿತವಾಗುತ್ತದೆ. &lt;br /&gt;&lt;br /&gt;ದೈಹಿಕ ಆರೋಗ್ಯ ಮತ್ತು ಮಾನಸಿಕ ಸೌಖ್ಯ ನಮ್ಮ ಅಸ್ತಿತ್ವವನ್ನು ತೋರ್ಪಡಿಸಲು ಅಗತ್ಯವಾಗಿ ಬೇಕಾದ ಮೂಲದ್ರವ್ಯಗಳಾಗಿವೆ. ಅಂದರೆ ದೈಹಿಕ ಆರೋಗ್ಯದ ಜೊತೆಜೊತೆಗೇ ಮಾನಸಿಕ ಸ್ವಾಸ್ಥ್ಯವೂ ದೇಹವನ್ನು ದೇಗುಲವನ್ನಾಗಿಸಿಕೊಳ್ಳಲು ಸಹಕರಿಯಾದ ಅಂಶವಾಗಿದೆ. ಯಾವಾಗ ಮನುಷ್ಯ ಸಮಂಜಸವಾಗಿ ಬುದ್ಧಿ ಭಾವಗಳನ್ನೂ, ದೈಹಿಕ ಕಾಮನೆಗಳನ್ನೂ ನಿಯಂತ್ರಿಸುವುದನ್ನು ಮರೆಯುತ್ತಾನೆಯೋ, ಆ ಕ್ಷಣದಿಂದಲೇ ದೇಹ ದೇಗುಲವು ಕುಸಿಯಲು ಪ್ರಾರಂಭವಾಗುತ್ತದೆ. ಆಹಾರ, ಪಾನೀಯ, ಜೀವನ ಶೈಲಿಗಳಲ್ಲಿ ಸ್ವೇಚ್ಛೆಯ ಕೈ ಮೇಲಾದರೆ ಮೈ ಮನಸ್ಸುಗಳ ಆರೋಗ್ಯ ಕೆಡುತ್ತದೆ. ಬದುಕು ಅಸಹನೀಯವಾಗುತ್ತದೆ. &lt;br /&gt;&lt;br /&gt;ಶಿವಾಲಯವಾಗಬೇಕಿದ್ದ ದೇಹ ಶವಾಲಯ ಸೇರಿಸುವ ಲೌಕಿಕದ ಆಕರ್ಷಣೆಗಳನ್ನು ಮೀರಿ ನಿಲ್ಲುವ ತಾಕತ್ತು ಸುಲಭವಾಗಿ ಸಿಗುವಂಥಹುದೇನೂ ಅಲ್ಲ. ಅದೂ ಒಂದು ತಪಸ್ಸು. ದೇಹ ಮನಸ್ಸುಗಳ ಮೇಲಣ ಸುಲಭಕ್ಕೆ ದಕ್ಕದ ನಿರಂತರ ಗೆಲುವು ಅದು. &lt;br /&gt;&lt;br /&gt;ಇಂದ್ರಿಯಗಳ ದಾಸನಾಗದೇ ರಾಗದ್ವೇಷಗಳನ್ನು ನಿಯಂತ್ರಿಸಿದರೆ ಮನಸ್ಸಿಗೆ ಕ್ಲೇಷವೊದಗದೇ ಅಂತಃಕರಣ ಶುದ್ಧಿ ಸಾಧ್ಯವಾಗುತ್ತದೆ ಎನ್ನುತ್ತದೆ ಭಗವದ್ಗೀತೆ. ಶರೀರ ಮತ್ತು ಬುದ್ಧಿ ಮನಸ್ಸುಗಳ ಮೇಲೆ ನಿಯಂತ್ರಣ ಸಾಧಿಸಿ, ದೇಹವನ್ನು ಕಾಯಕಕ್ಕೆ ಸಮರ್ಪಿಸಿಕೊಂಡರೆ ಮುಕ್ತಿ ಸಿಗುತ್ತದೆ ಎನ್ನುತ್ತದೆ ಕರ್ಮಯೋಗ. ಹೀಗೆ ತಮ್ಮ ದೇಹದ ಮೇಲೆ ಸ್ವನಿಯಂತ್ರಣ ಹೇರಿಕೊಂಡು, ಬುದ್ಧಿ ಭಾವಗಳನ್ನು ಮನಸ್ಸನ್ನೂ ಅಂಕಿತದಲಿಟ್ಟುಕೊಂಡವರ ದೇಹ ದೇಗುಲವೇ ಆಗುತ್ತದೆ. ಅವರಿಗೆ ಅಲ್ಲೆಲ್ಲೋ ಇರುವ ಶಿವಾಲಯಕ್ಕಿಂತಲೂ ತಮ್ಮೊಳಗಿರುವ ಅಂತರಾತ್ಮವೇ ದೇವರಾಗಿ ಕಾಣುತ್ತದೆ. ಅಂಥವರು ಹೊರಗಣ ಬಯಲಿಗೆ ಹೋಗದೆಯೂ ಒಡಲಲ್ಲೆ ಗುಡಿಯನ್ನು ಕಾಣುತ್ತಾರೆ. ಅಂಥವರು ಅಳಿಯುವ ಸ್ಥಾವರಕ್ಕಿಂತಲೂ ಮುಖ್ಯವಾದ ಜಂಗಮ ದೇಗುಲದ ಒಡೆಯರಾಗುತ್ತಾರೆ. ಅಂಥವರಿಗಷ್ಟೇ ದೇಹೋ ದೇವಾಲಯಃ ಪ್ರೋಕ್ತೋ ಎನ್ನುವ ಶ್ಲೋಕದ ಅಂತರಾರ್ಥ ತಿಳಿಯುತ್ತದೆ.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/5254102750204147054-1583283153054926441?l=bemkikaddi.blogspot.com' alt='' /&gt;&lt;/div&gt;</content><link rel='replies' type='application/atom+xml' href='http://bemkikaddi.blogspot.com/feeds/1583283153054926441/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://www.blogger.com/comment.g?blogID=5254102750204147054&amp;postID=1583283153054926441' title='1 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/5254102750204147054/posts/default/1583283153054926441'/><link rel='self' type='application/atom+xml' href='http://www.blogger.com/feeds/5254102750204147054/posts/default/1583283153054926441'/><link rel='alternate' type='text/html' href='http://bemkikaddi.blogspot.com/2010/04/blog-post_16.html' title='ದೇಹವೆಂಬ ದೇವಾಲಯ'/><author><name>ಬೆಂಕಿಕಡ್ಡಿ</name><uri>http://www.blogger.com/profile/13181705369161334860</uri><email>noreply@blogger.com</email><gd:image rel='http://schemas.google.com/g/2005#thumbnail' width='21' height='32' src='http://4.bp.blogspot.com/_bUAIZF0Yo1g/TKdTK-6rv2I/AAAAAAAAAJY/QXUJAVKh9ps/S220/dsr4.jpg'/></author><thr:total>1</thr:total></entry><entry><id>tag:blogger.com,1999:blog-5254102750204147054.post-5554470317391427287</id><published>2010-04-14T15:56:00.002+05:30</published><updated>2010-04-14T16:04:09.406+05:30</updated><title type='text'>ಸಂಚಲನ ಹುಟ್ಟಿಸಿದ ಶಿವಸಂಚಾರದ ನಾಟಕಗಳು</title><content type='html'>ಕಳೆದ ಹದಿಮೂರು ವರ್ಷಗಳಿಂದ, ಸಾಣೇಹಳ್ಳಿಯ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳ ಕನಸು ನನಸು ಮಾಡಲು ಖ್ಯಾತ ರಂಗಕರ್ಮಿಗಳ ಸಹಕಾರದಿಂದ ಹೊಸ ಹೊಸ ನಾಟಕಗಳನ್ನು , ತಂಡಗಳನ್ನು ತಯಾರು ಮಾಡಿ ಆ ನಾಟಕಗಳನ್ನು ನಾಡಿನಾದ್ಯಂತ ಪ್ರದರ್ಶಿಸುತ್ತಿರುವ  ‘ಶಿವಸಂಚಾರ’ ರಾಜ್ಯದ ಮುಖ್ಯ ರಂಗ ರೆಪರ್ಟರಿಗಳಲ್ಲೊಂದು. ನೀನಾಸಂ ಮತ್ತು ಶಿವಸಂಚಾರ ತಂಡಗಳು ಕನ್ನಡ ರಂಗಭೂಮಿಯ ಹೊಸ ಆವಿಷ್ಕಾರಗಳನ್ನು ಪ್ರಯೋಗಗಳನ್ನು ಗ್ರಾಮೀಣ ಜನತೆಗೂ ತಿರುಗಾಟದ ಹೆಸರಲ್ಲಿ ಸಿಗುವಂತೆ ಮಾಡಿರುವುದು ಶ್ಲಾಘನೀಯ ಕೆಲಸವೇ ಆಗಿದೆ. ಇಂಥದೇ ಪ್ರಯತ್ನಗಳನ್ನು ಈ ಹಿಂದೆ ಮಾಡಿದ್ದ ಕೊಡಗು ರಂಗ ಮತ್ತು ಧೃವ ರಂಗಗಳು ಹಾಗೇ ತುಮರಿಯ ಕಿನ್ನರ ತಂಡಗಳ ಪ್ರಯತ್ನಗಳನ್ನೂ ನೆನಪಿಸಿಕೊಳ್ಳಲೇಬೇಕು.&lt;br /&gt;&lt;br /&gt;ಸಾಂಸ್ಕೃತಿಕ ಚಟುವಟಿಕೆಗಳಿಲ್ಲದ ಸಣ್ಣ ಊರುಗಳಲ್ಲಿ ಟೀವಿಯೊಂದೇ ಸುಲಭ ಮನರಂಜನಾ ಮಾಧ್ಯಮವಾಗಿರುವ ಕಾರಣ ಅಂಥ ಊರುಗಳಲ್ಲಿರುವ ಸಾಹಿತ್ಯ ಸಾಂಸ್ಕೃತಿಕಾಸಕ್ತರು ಇಂಥ ತಂಡಗಳ ಬರವನ್ನೇ ಕಾಯುತ್ತಿರುತ್ತಾರೆ. ಅರಸೀಕೆರೆಯ ಶ್ರೀ ಶಿವಕುಮಾರ ಬಳಗ ಮತ್ತು ತರಳಬಾಳು ಯುವ ವೇದಿಕೆಗಳ ಸಂಯುಕ್ತಾಶ್ರಯದಲ್ಲಿ ಹೊಯ್ಸಳೇಶ್ವರ ಕಾಲೇಜಿನಲ್ಲಿ ನಡೆದ ಮೂರುದಿನಗಳ ನಾಟಕೋತ್ಸವ ‘ಶಿವಸಂಚಾರ’ ೨೦೦೯ರ ನಾಟಕಗಳನ್ನು ಆಸಕ್ತರಿಗೆ ಪ್ರದರ್ಶಿಸಿತು.&lt;br /&gt;&lt;br /&gt;ಪ್ರತಿವರ್ಷ ಒಂದು ನಿರ್ದಿಷ್ಟ ವಿಷಯದಲ್ಲಿ  ನಾಟಕಗಳನ್ನು ಆಯ್ದು ಅವನ್ನು ಖ್ಯಾತನಾಮರಿಂದ ನಿರ್ಮಿಸುವ  ‘ಶಿವಸಂಚಾರ’ದ ಈ ವರ್ಷದ ಆಶಯ ‘ಸ್ವಾತಂತ್ರ್ಯ- ಸಮಾನತೆಯತ್ತ’ ಪರಿಕಲ್ಪನೆಯಲ್ಲಿ ಉರ್ದು ನಾಟಕಕಾರ ಆಗಾ ಹಶ್ರ ಕಶ್ಮೀರಿಯವರ ಯಹೂದಿ ಕೀ ಲಡ್ಕೀ ಆಧರಿಸಿದ ‘ಯಹೂದಿ ಹುಡುಗಿ’ (ಸವಿತಾ, ಬೆಂಗಳೂರು) ಇಟಲಿಯ ನೋಬಲ್ ಪ್ರಶಸ್ತಿ ವಿಜೇತ ದಾರಿಯೋ ಫೋನ can’t pay, won’t pay ಆಧರಿಸಿದ ‘ಕೊಡಲ್ಲ ಕೊಡಕ್ಕಿರಲ್ಲ’(ಮಲ್ಲಿಕಾ ಪ್ರಸಾದ್) ಹಾಗೂ ನಲವಡಿ ಶ್ರೀಕಂಠ ಶಾಸ್ತ್ರಿಗಳ ಮೂಲ ರಂಗನಾಟಕ ಆಧರಿಸಿದ  ‘ಹೇಮರೆಡ್ಡಿ ಮಲ್ಲಮ್ಮ’,(ಭಾಗೀರಥಿ ಬಾಯಿ ಕದಂ) ನಾಟಕಗಳನ್ನು ನಿರ್ಮಿಸಿದೆ. ಮಹಿಳಾ ಕೇಂದ್ರಿತ ವಸ್ತು ಹೊಂದಿರುವ ಈ ಮೂರೂ ನಾಟಕಗಳ ನಿರ್ದೇಶಕರು ಮಹಿಳೆಯರೇ ಆಗಿರುವುದು ವಿಶೇಷ.&lt;br /&gt;&lt;br /&gt;ಧರ್ಮಾಂಧತೆ, ಹಿಂಸೆ, ಕ್ರೌರ್ಯ, ಅಹಂಕಾರ, ಅಟ್ಟಹಾಸಗಳೇ ಈ ಹೊತ್ತಿನ ವರ್ತಮಾನವನ್ನು ಕಾಡುತ್ತಿರುವ ಜ್ವಲಂತ ಸಮಸ್ಯೆಗಳಾಗಿರುವಾಗ ಅವೆಲ್ಲವನ್ನೂ ಮೀರಿಸುವ ಗಂಡು ಹೆಣ್ಣಿನ ನಡುವಣ ಪ್ರೀತಿ, ಮತ್ತು ಸಹಜ  ಮಾನವೀಯ ಮೌಲ್ಯದ ಶ್ರೇಷ್ಠತೆಯನ್ನು ಎತ್ತಿ ತೋರಿಸುವ ಮನೋಜ್ಞ ನಾಟಕ ‘ಯಹೂದಿ ಹುಡುಗಿ’. ಪ್ರೀತಿಯ ನಡುವೆ ಅಡ್ಡ ನಿಲ್ಲುವ ಧರ್ಮದ ಕೃತಕ ಗೋಡೆ ಕ್ರಮೇಣ ನಾಶವಾಗುವ ರೀತಿಯನ್ನು ಅತ್ಯಂತ ಪರಿಣಾಮಕಾರಿಯಾಗಿ  ರಂಗದ ಮೇಲೆ ತರಲಾಗಿದೆ. ಉರ್ದುವಿನ ಮೂಲ ನಾಟಕವು ಶಾಯಿರಿಯ ಕವಿ ಇಟಗಿ ಈರಣ್ಣನವರ ಪ್ರಾಸ ಬದ್ಧ ಸಂಭಾಷಣೆ ಮತ್ತು ಅವರ ಕುಸುರಿ ಕೆಲಸದಿಂದ ಹೊಸ ರೂಪು ತಳೆದಿದೆ. ಸಂಭಾಷಣೆಯ ಬಿಗಿ ಬಂಧ, ಶಾಯಿರಿಗಳ ಸಮಯೋಚಿತ ಬಳಕೆ ನಾಟಕದ ವಿಶೇಷತೆ ಹೆಚ್ಚಿಸಿವೆ. ಕೊನೆವರೆಗೂ ಕುತೂಹಲವನ್ನು ಕಾಯ್ದುಕೊಳ್ಳುವ ಕತೆಯ ಅಂತ್ಯ ನೋಡುಗರನ್ನು ವಾಸ್ತವದತ್ತ ಆಲೋಚಿಸಲು ಪ್ರೇರೇಪಿಸುತ್ತದೆ. &lt;br /&gt;&lt;br /&gt;ಮೇಲು ನೋಟಕ್ಕೆ ಒಬ್ಬ ಕರ್ಮಠ ಯಹೂದಿಯಂತೆ ತೋರುವ ಅಜರಾನ ಕಲ್ಲು ಹೃದಯವು, ಅನ್ಯ ಧರ್ಮದ ಹಾಗೂ ತನ್ನ ಹೆಂಡತಿ- ಮಗುವನ್ನು ಕೊಂದ ವೈರಿಯ ಮಗು ಬೆಂಕಿಯಲ್ಲಿ ಬೆಂದು ಹೋಗಲಿರುವುದನ್ನು ನೋಡುತ್ತಿದ್ದಂತೆ, ಕರಗಿ ಹೋಗಿ  ಆ ಮಗುವನ್ನೇ ನಜರಾ  ರಕ್ಷಿಸಿ, ಪೋಷಿಸಿ ತನ್ನ ಸಾಕು ಮಗಳಾಗಿ (ರಾಹೀಲ್) ಬೆಳೆಸಿದ ರೀತಿಯು, ಹುಸಿ ಧರ್ಮಕ್ಕಿಂತ ಮನುಷ್ಯ ಪ್ರೀತಿ ದೊಡ್ಡದು ಎಂಬುದನ್ನು ಸಾಬೀತುಪಡಿಸುತ್ತದೆ. ಅಜರಾ, ಮಾರ್ಕಸ್ ಆಗಿ ಅರುಣ್ ಜಿ ಚಿಕ್ಕಾನಂಗಲ ಮತ್ತು ದಿನೇಶ್ ಚಮ್ಮಾಳಿಗೆ ಅವರ ಅಭಿನಯ ಬಹುಕಾಲ ಮನಸ್ಸಲ್ಲುಳಿಯುತ್ತದೆ. &lt;br /&gt;&lt;br /&gt;‘ಕೊಡಲ್ಲ ಕೊಡಕ್ಕಿರಲ್ಲ’ ಮೇಲು ನೋಟಕ್ಕೆ ಪ್ರಹಸನವಾಗಿ ಕಾಣುವ ಅಸಂಗತ ನಾಟಕದಂತೆ ಕಂಡರೂ ಈ ಹೊತ್ತಿನ ಅರಾಜಕ ಜಾಗತೀಕರಣದ ಗೊದಲಗಳನ್ನು ಬಿಂಬಿಸಿದ ಪ್ರಸ್ತುತ ಸಮಾಜದ ಪ್ರತಿಬಿಂಬವೆಂದೇ ಭಾವಿಸಬೇಕು. &lt;br /&gt;&lt;br /&gt;ನಿರುದ್ಯೋಗ, ನಗರದ ಆಕರ್ಷಣೆ ಮತ್ತು ಹಸಿವಿನ ಮುಂದೆ ಆದರ್ಶಗಳು ಹೇಗೆ ಮೂಲೆಗುಂಪಾಗುತ್ತವೆ, ಜನಸಾಮಾನ್ಯರ ಬದುಕು ಯಾಕೆ ಮೂರಾಬಟ್ಟೆಯಾಗುತ್ತದೆಂಬುದನ್ನು ಸಮರ್ಥವಾಗಲ್ಲದಿದ್ದರೂ ಚೋದ್ಯವಾಗಿ ನಾಟಕ ದ್ವನಿಸುತ್ತದೆ.  ಶ್ರಮಿಕ ವರ್ಗದ ಹೋರಾಟದ ಎಳೆಗಳನ್ನು ಬಿಚ್ಚಿಡುತ್ತಲೇ ವಾಸ್ತವವನ್ನು ವಿಡಂಬಿಸುತ್ತಲೇ  ಹೊಟ್ಟೆ ಹುಣ್ಣಾಗುವಂತೆ ನಗಿಸುವ ಶಕ್ತಿಯನ್ನೂ ಇಟ್ಟುಕೊಂಡಿರುವುದು ಇದರ ವೈಶಿಷ್ಟ್ಯ. ಅಭಿಜಾತ ಕಲಾವಿದ ಚಾರ್ಲಿ ಚಾಪ್ಲಿನ್‌ನನ್ನು ನೆನಪಿಸುವಲ್ಲಿ ಪೊಲೀಸ್ ಇನ್ಸ್‌ಪೆಕ್ಟರ್ ಪಾತ್ರಧಾರಿ ಅರುಣ್ ಜಿ. ಚಿಕ್ಕಾನಂಗಲ ಸಶಕ್ತರಗಿದ್ದಾರೆ. ಹಾಗೂ  ಧಾರಾಳವಾಗಿ ನಗೆ ಬುಗ್ಗೆ ಚಿಮ್ಮಿಸುತ್ತಾರೆ. ಪೊಲೀಸ್ ಬಟ್ಟೆ ಧರಿಸುವಾಗ, ಕದ್ದು ತಂದ ವಸ್ತುಗಳನ್ನು ಗರ್ಭಿಣಿ ಹೆಂಗಸಿನ ಹೊಟ್ಟೆಯಿಂದ ಹೊರ ತೆಗೆಯುವಾಗ ಪ್ರೇಕ್ಷಕರು ಬಿದ್ದುಬಿದ್ದು ನಗುತ್ತಾರೆ. ರಂಗಸಜ್ಜಿಕೆ ಗಮನ ಸೆಳೆಯುತ್ತದೆ. ನಿರ್ದೇಶಕರು ಜಾಗತೀಕರಣದ ಪ್ರಭಾವದಿಂದ ಈಗಾಗಲೇ ಕಾರ್ಖಾನೆಗಳು ಮುಚ್ಚಿಹೋಗಿರುವುದನ್ನು, ಸಾಮಾನ್ಯ ಜನತೆ ಆದರ್ಶ ಮೌಲ್ಯಗಳನ್ನು ಸಿನಿಮಾ ನಾಟಕಗಳಲ್ಲಷ್ಟೇ ನೋಡಬಯಸುವುದನ್ನೂ ಗಮನಿಸದ ಕಾರಣ ಅಸಂಗತವಾಗಿ ಮುಕ್ತಾಯವಾಗುತ್ತದೆ. ಈ ಬಗೆಯ ನಾಟಕಗಳನ್ನು ಗ್ರಾಮಾಂತರದ ಮಂದಿ ಅಷ್ಟಾಗಿ ಇಷ್ಟಪಡುವುದಿಲ್ಲ ಎಂಬ ಅಂಶವನ್ನೂ ತಂಡ ಅರಿಯಬೇಕಿದೆ. ಅಲ್ಲದೇ ಅಗತ್ಯವಿಲ್ಲದೆಯೂ ಅಶ್ಲೀಲ ಸಂಭಾಷಣೆ ಸೇರಿಸಿದ ಉದ್ದೇಶವೂ ಅರ್ಥವಾಗುವುದಿಲ್ಲ. &lt;br /&gt;&lt;br /&gt;ಜನಪ್ರಿಯ ಕಂಪೆನಿ ನಾಟಕವಾದ ‘ಹೇಮರೆಡ್ಡಿ ಮಲ್ಲಮ್ಮ’ ಹಳ್ಳಿಯ ಅವಿಭಕ್ತ ಕುಟುಂಬದ ಕಷ್ಟ ಕೋಟಲೆಗಳ ನಡುವೆಯೇ, ಜೀವಸೆಲೆ ಉಕ್ಕಿಸಿ ಅಧ್ಯಾತ್ಮದ ಔನ್ನತ್ಯದಲ್ಲಿ ಪರ್ಯವಸಾನಗೊಳ್ಳುವ ಕೃತಿ. ಅಸ್ಸಾಂ ಮತ್ತು ಕನ್ನಡ ರಂಗಭೂಮಿಗಳ ನಡುವೆ ಸೇತುವೆಯಾಗಿರುವ ಭಾಗೀರಥಿ ಬಾಯಿ ಕದಂ ಅವರ ನಿರ್ದೇಶನದಲ್ಲಿ ಈ ಹಳೆಯ ರಂಗ ನಾಟಕ ಹೊಸುಹುಟ್ಟು ಪಡೆದಿದೆ. ಪ್ರಬುದ್ಧ ಅಭಿನಯ, ಸುಶ್ರಾವ್ಯ ಸಂಗೀತ, ಉತ್ತಮ ಬೆಳಕಿನ ಸಂಯೋಜನೆ ನಾಟಕದ ಯಶಸ್ಸಿಗೆ ಕಾರಣವಾಗಿವೆ. ಅರೆಬರೆ ತಿಳುವಳಿಕೆಯ ಹೇಮರೆಡ್ಡಿಯಾಗಿ ಅಮೋಘ ಬಿರಾದಾರ್ ಅಭಿನಯ ಮನಸೆಳೆಯುತ್ತದೆ. &lt;br /&gt; &lt;br /&gt;ನಾಟಕದ ಕ್ಲೈಮ್ಯಾಕ್ಸ್‌ನಲ್ಲಿ ಆಧ್ಯಾತ್ಮದತ್ತ ವಾಲುವ ವೇಮಣ್ಣನ ಪಾತ್ರಕ್ಕೆ ಜೀವನ ನೀನಾಸಂ ಕಾಯಕಲ್ಪ ತುಂಬಿ ನಟಿಸುತ್ತಾರೆ. ಮಲ್ಲಮ್ಮ ಹಾಗೂ ಮಲ್ಲಯ್ಯನ ಪಾತ್ರಧಾರಿಗಳಾದ ವಿ. ಲಕ್ಷ್ಮಿ ಹಾಗೂ ದಿನೇಶ ಚಮ್ಮಾಳಿಗೆ ಬಹುಕಾಲ ಮನಸ್ಸಲ್ಲುಳಿಯುತ್ತಾರೆ. ಮನ ಸೆಳೆಯುವ ಸಂಗೀತಕ್ಕೆ ವಚನಗಳನ್ನು ಬಳಸಿಕೊಂಡಿರುವುದು ಸಮಯೋಚಿತವಗಿ ಬಳಸಿಕೊಂಡಿರುವ ನಿರ್ದೇಶಕರ ಪ್ರಯತ್ನ ಯಶಸ್ವಿಯೂ ಆಗಿದೆ. (ಗುರುವಾದೊಡೆ ಕಾಯಕದಿಂದಲೇ ಜೀವನ್ಮುಕ್ತಿ ಇತ್ಯಾದಿ). ಸಿದ್ಧವೀರಿಯ ಪಾತ್ರಧಾರಿ ಅದೇಕೆ ಸಂಭಾಷಣೆಯನ್ನು ಅವಸರಕ್ಕೆ ಬಿದ್ದಂತೆ ಒಪ್ಪಿಸುತ್ತಾರೋ (ಎಲ್ಲ ಪ್ರದರ್ಶನಗಳ ಅವರ ಎಲ್ಲ ಪಾತ್ರಗಳೂ ಹೀಗೆ ಅವಸರದಲ್ಲೇ ಇದ್ದವು) ಸಂಚಾಲಕರೇ ಉತ್ತರ ಹೇಳಬೇಕು.&lt;br /&gt;&lt;br /&gt;ಟೀವಿಯ ಧಾರಾವಾಹಿಗಳಿಂದ ಮೂರು ದಿನ ಮುಕ್ತಿ ಕೊಟ್ಟು ನಮ್ಮೆಲ್ಲರನ್ನೂ ಕಾಡುತ್ತಿರುವ ವರ್ತಮಾನದ ಬೇಗುದಿಗೆ ಸಹಜ ಉತ್ತರವನ್ನೀಯುವ ‘ಶಿವಸಂಚಾರ’ ತಂಡ ಹೀಗೆ ಊರೂರುಗಳಲ್ಲಿ ಭರವಸೆಯ ಬೆಳಕು ಮೂಡಿಸಿದರೆ ಪಂಡಿತಾರಾಧ್ಯರ ಕನಸು ನನಸಾದೀತು, ಅನುಭವ ಮಂಟಪದ ಮೂಲ ಉದ್ದೇಶವೂ ಈಡೇರೀತು.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/5254102750204147054-5554470317391427287?l=bemkikaddi.blogspot.com' alt='' /&gt;&lt;/div&gt;</content><link rel='replies' type='application/atom+xml' href='http://bemkikaddi.blogspot.com/feeds/5554470317391427287/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://www.blogger.com/comment.g?blogID=5254102750204147054&amp;postID=5554470317391427287' title='0 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/5254102750204147054/posts/default/5554470317391427287'/><link rel='self' type='application/atom+xml' href='http://www.blogger.com/feeds/5254102750204147054/posts/default/5554470317391427287'/><link rel='alternate' type='text/html' href='http://bemkikaddi.blogspot.com/2010/04/blog-post.html' title='ಸಂಚಲನ ಹುಟ್ಟಿಸಿದ ಶಿವಸಂಚಾರದ ನಾಟಕಗಳು'/><author><name>ಬೆಂಕಿಕಡ್ಡಿ</name><uri>http://www.blogger.com/profile/13181705369161334860</uri><email>noreply@blogger.com</email><gd:image rel='http://schemas.google.com/g/2005#thumbnail' width='21' height='32' src='http://4.bp.blogspot.com/_bUAIZF0Yo1g/TKdTK-6rv2I/AAAAAAAAAJY/QXUJAVKh9ps/S220/dsr4.jpg'/></author><thr:total>0</thr:total></entry><entry><id>tag:blogger.com,1999:blog-5254102750204147054.post-3000134379689976842</id><published>2010-03-02T22:55:00.001+05:30</published><updated>2010-03-02T22:57:31.370+05:30</updated><title type='text'>ಏನ್ ಕೌಂಟರ್</title><content type='html'>ಭಾನುವಾರ ಬೆಳ್ಳಂಬೆಳಿಗ್ಗೆಯೇ ಮೊಬೈಲ್ ಹೊಡಕೊಳ್ಳತೊಡಗಿದಾಗ ಹಿಂದಿನ ದಿನದ ಪಾರ್ಟಿಯ ಹ್ಯಾಂಗೋವರಿನಲ್ಲಿನ್ನೂ ಜೂಗರಿಸುತ್ತಿದ್ದ ನಾನು, ಅಂತೂ ಇಂತೂ ಸಾವರಿಸಿಕೊಂಡು ಎದ್ದು ಕೂರುವ ಹೊತ್ತಿಗೆ ಕರೆ ನಿಂತೇ ಹೋಯಿತು. ಪಾತಾಳಕ್ಕೆಲ್ಲೋ ಜಾರಿಹೋಗುತ್ತಿದ್ದೇನೆನಿಸಿ ಮತ್ತೆ ಮುದುರಿ ಮಲಗಿಕೊಂಡೆ. ಬೆಳಗಿನ ವಾಕಿಂಗ್‌ಗೆ ಹೋಗಿದ್ದ ಹೆಂಡತಿ ರತ್ನ ಬೀಗ ತೆಗೆದು ಒಳಬರುವುದಕ್ಕೂ ಮತ್ತೆ ಮೊಬೈಲ್ ರಿಂಗಾಗುವುದಕ್ಕೂ ಸರಿ ಹೋಯ್ತು. ಅವಳೇ ಮೊಬೈಲೆತ್ತಿಕೊಂಡು ‘ಇಲ್ಲ, ಅವರಿನ್ನೂ ಮಲಗಿದ್ದಾರೆ’.... .  ‘ಅರ್ಜೆಂಟಾ? ಎದ್ದ ಮೇಲೆ ಇದೇ ನಂಬರಿಗೆ ಫೋನ್ ಮಾಡಲು ಹೇಳುತ್ತೇನೆ’. .. ‘ಸರಿ., ಎಬ್ಬಿಸಿ ಫೋನು ಅವರಿಗೇ ಕೊಡುತ್ತೇನೆ’ ಅಂದವಳೇ ನನ್ನ ಭುಜ ಅಲುಗಿಸಿ ‘ನೋಡಿ, ಯಾರೋ ಏನೋ ತುಂಬಾ ಅರ್ಜೆಂಟು ಅಂತಿದಾರೆ. ಏನಾದ್ರೂ ಹೇಳ್ಕೊಳ್ಳಿ..’ ಅಂದು ಮೊಬೈಲನ್ನು ನನ್ನ ಕಿವಿಗೆ ಹಿಡಿದಳು. ಸಾವರಿಸಿಕೊಂಡು ನಾನು ‘ಹ. . .ಲೋ..’ ಅಂದ ಕೂಡಲೇ ಆ ಕಡೆಯಿಂದ ‘ಸಾ..ರ್, ..ನಿನ್ನೆ ಸಂಜೆ ಕಾಮ್ರೇಡ್ ಸೂರಿಯವರನ್ನು ಪೋಲೀಸ್ ನಾಯಿಗಳು ಎತ್ತಿಹಾಕಿಕೊಂಡು ಹೋಗಿವೆ.  ನಮಗೆಲ್ಲ ಏನು ಮಾಡಬೇಕೋ ತಿಳೀತಾ ಇಲ್ಲ.’ ಅನ್ನುವ ಅಪರಿಚಿತ ಧ್ವನಿ ಕೇಳಿತು. ‘ಯಾರು? ಯಾರು ಮಾತಾಡ್ತಾ ಇರೋದು?’ ನನ್ನ ಪ್ರಶ್ನೆ ಮುಗಿಯುವ ಮೊದಲೇ ಕರೆ ನಿಂತಿತು. ವಾಸ್ತವದ ಬಿಸಿ ಮುಟ್ಟಿದ್ದೇ ತಡ, ಹ್ಯಾಂಗೋವರು ತಕ್ಷಣ ಇಳಿದು ಹೋಗಿ ಧಿಗ್ಗನೆದ್ದು ಕೂತೆ. ಸೂರಿ ಯಾವತ್ತೋ ಅರೆಸ್ಟ್ ಆಗಬೇಕಾಗಿದ್ದವನು ಈಗ ಸಿಕ್ಕಿಬಿದ್ದಿದ್ದಾನೆ. ಆದರೂ ಅವನ ಬಿಡುಗಡೆಯ ಪ್ರಯತ್ನ ನನ್ನಂಥವನಿಂದ ಸಾಧ್ಯವಾ? ಬೇರೆ ಯಾರ ಸಹಾಯ ಈಗ ಅತ್ಯಗತ್ಯ ಅಂತ ಯೋಚಿಸುತ್ತಲೇ ಬೇಗ ಬ್ರಷ್ ಮಾಡಿಕೊಂಡು ಕಾಫಿ ಕುಡಿಯುತ್ತಲೇ ಗೆಳೆಯ ಪತ್ರಕರ್ತ ದಿವಾಕರನಿಗೆ ಫೋನ್ ಮಾಡಿದೆ. ‘ನೀವು ಕರೆ ಮಾಡಿರುವ ಚಂದಾದಾರರು ವ್ಯಾಪ್ತಿ ಪ್ರದೇಶದ ಹೊರಗೆ ಇದ್ದಾರೆ ಅಥವ ಈ ತಕ್ಷಣ ತಮ್ಮ ಕರೆಗೆ ಅವರು ಪ್ರತಿಕ್ರಯಿಸುತ್ತಿಲ್ಲ’ ಅನ್ನುವ ಉತ್ತರ ಬಂತು. ಸೀದಾ ಪ್ರೆಸ್ ಕ್ಲಬ್ಬಿಗೆ ಹೋಗಿ ಯಾರನ್ನಾದರೂ ಕೇಳೋದು ವಾಸಿ ಅಂತ ಅನ್ನಿಸಿ ನಿಂತ ನಿಲುವಿನಲ್ಲೇ ಸ್ಕೂಟರು ಹತ್ತಿದೆ.  &lt;br /&gt;ದಿವಾಕರ ಮನಸ್ಸು ಮಾಡಿದರೆ ಒಬ್ಬ ಸೂರಿಯನ್ನೇನು ವಾರಂಟ್ ಇಲ್ಲದೇ ಬರೀ ವಿಚಾರಣೆಗೆಂದು ಪೋಲೀಸರು ಎತ್ತಿಹಾಕಿಕೊಂಡು ಹೋದವರನ್ನೆಲ್ಲ ಬರೀ ಫೋನಿನ ಮೂಲಕವೇ ಬಿಡಿಸಬಲ್ಲ. ಬರೀ ಅಧಿಕಾರಿಗಳನ್ನದೇ ಸರ್ಕಾರ ನಡೆಸುವವರನ್ನೂ ಬಲ್ಲ ಅವನು ನನ್ನ ಹಾಗೇ ಸೂರಿಗೂ ಒಳ್ಳ್ಳೆಯ ಸ್ನೇಹಿತನೇ. ನಾವು ಮೂವರೂ ಒಂದೇ ಕಾಲೇಜಿನಲ್ಲಿ ಓದಿದವರು. ಸೂರಿ ನಮಗಿಂತ ಒಂದು ವರ್ಷ ದೊಡ್ಡವನು. ಅವನು ಲಾ ಮೊದಲವರ್ಷದಲ್ಲಿದ್ದಾಗ ನಾನೂ ದಿವಾಕರನೂ ಡಿಗ್ರಿಯ ಕಡೇ ವರ್ಷದಲ್ಲಿದ್ದೆವು. ನವ್ಯ ಕವಿತೆ, ಹುಡುಗಿಯರು, ಕಮ್ಯೂನಿಸಂ, ಸಿಗರೇಟು ಹೀಗೆ ನಮ್ಮೊಳಗಿನ ಸಮಾನಾಸಕ್ತಿ ನಮ್ಮನ್ನು ಒಂದುಗೂಡಿಸಿತ್ತು. ಸದಾ ಕುದಿಯುತ್ತಲೇ ಇರುತ್ತಿದ್ದ ಸೂರಿ ನಮಗೆಲ್ಲರಿಗೂ ಹೀರೋ. ಅವನು ಅರೆತೆರೆದ ಕಣ್ಣಲ್ಲಿ ಮಾತಾಡಲು ಶುರುಮಾಡಿದನೆಂದರೆ ಅದರಲ್ಲೂ ವರವರರಾವ್, ದಿಗಂಬರ ಕಾವ್ಯ, ಅಲ್ಲಿಂದ ಮಾರ್ಕ್ಸ್, ಅಸ್ತಿತ್ವವಾದ ಇತ್ಯಾದಿ ಎಲ್ಲಿಂದೆಲ್ಲಿಗೋ ಜಿಗಿದು ತನ್ನ ಪ್ರಚಂಡ ವಾಕ್ ಚಾತುರ್ಯ ತೋರಿಸುತ್ತಿದ್ದ. ಮೂಲತಃ ಬಲಪಂಥದೆಡೆಗೆ ಆಕರ್ಷಿತನಾಗಿದ್ದ ದಿವಾಕರ ಮಾರ್ಕ್ಸಿಸಂನ ಮಿತಿ ಅದರ ಸೋಲುಗಳನ್ನು ನೆನಪಿಸುತ್ತ ಸೂರಿಯ ವಾದವನ್ನು ಕೊಂಚ ಮಸಕುಮಾಡುತ್ತಿದ್ದ. ಸೌಮ್ಯವಾದದ ಮಧ್ಯಮಮಾರ್ಗವೇ ಸೇಫ್ ಅಂತ ಭಾವಿಸಿದ್ದ ನಾನು ಎಂಎ ಮುಗಿಸಿ ಕಾಲೇಜು ಮಾಸ್ತರನಾದರೆ ದಿವಾಕರ ಮತ್ತೇನೇನೋ ಆಗಹೋಗಿ ಕಡೆಗೆ ಬದುಕಿನ ನಿರ್ವಹಣೆಗೆ ಪತ್ರಕರ್ತನಾದ. ಸೂರಿಗೆ ಕಾನೂನು ಪದವಿಗಿಂತಲೂ ಎಡಪಂಥದ ಚಟುವಟಿಕೆಗಳೇ ಹೆಚ್ಚು ಮುಖ್ಯವೆನಿಸಿದ್ದರಿಂದ ಅದೆಲ್ಲಿಗೋ ಸಂಘಟನೆಗೆಂದು ಹೋಗಿದ್ದವನು ಈಗೊಂದೆರಡು ವರ್ಷಗಳಿಂದೀಚೆಗೆ ಅಪರೂಪಕ್ಕೆಂಬಂತೆ ಈ ಊರಿಗೆ ಬರುತ್ತಿರುತ್ತಾನೆ. ಅವನೇನು ಮಾಡುತ್ತಾನೋ, ಅವನ ಬದುಕು ಹೇಗೆ ನಡೆಯುತ್ತಿದೆಯೋ ನನಗಂತೂ ಗೊತ್ತಿಲ್ಲ. ಈಗಲೂ ಕೆಳವರ್ಗದ ಜನರ ಪರವಾಗಿ, ಕೊಳಚೆ ನಿವಾಸಿಗಳ ಪರವಾಗಿ, ಬೀಡಿಕಟ್ಟುವವರ, ಹಮಾಲಿಗಳ ಪರವಾಗಿ ಅವನು ಮೆರವಣಿಗೆ ನಡೆಸಿದ್ದನ್ನು, ಸಭೆ ನಡೆಸಿದ್ದನ್ನು ಸರ್ಕಾರದ ವಿರುದ್ಧ ಧರಣಿ ನಡೆಸಿದ್ದನ್ನು ಪತ್ರಿಕೆಗಳಲ್ಲಿ ಓದಿ ತಿಳಿಯುತ್ತಿರುತ್ತೇನೆ. ಈ ಊರಿಗೆ ಬಂದಾಗಲೆಲ್ಲ ನನ್ನನ್ನೂ ದಿವಾಕರನನ್ನೂ ಅವನು ಮಾತಾಡಿಸದೇ ಹೋದದ್ದೇ ಇಲ್ಲ. ಪಾರ್ಟಿಗೆಂದು ಹಲವು ಸಂಜೆಗಳನ್ನು ಒಟ್ಟಾಗಿ ನಾವು ಕಳೆದಿದ್ದೇವಾದರೂ ಪರಸ್ಪರರ ತೀರ ಖಾಸಗಿ ವಿಚಾರಗಳೆಂದೂ ನಮ್ಮ ನಡುವೆ ಅದಲುಬದಲಾಗಿಲ್ಲ. ಅಲ್ಲದೇ ಸಂಸಾರಸ್ತರ ಮನೆಗೆಂದೂ ಬರಲು ಇಷ್ಟಪಡದ ಸೂರಿಗೆ ನನ್ನ ಮನೆ ಎಲ್ಲಿದೆ ಅಂತ ಕೂಡ ಗೊತ್ತಿಲ್ಲ. ಇನ್ನು ದಿವಾಕರ ಸದಾ ಬ್ಯುಸಿ ಮನುಷ್ಯ. ಅವನ ಪತ್ರಿಕೆಗೆ ಅವನೇ ಜಿಲ್ಲಾ ವರದಿಗಾರನಾಗಿರುವುದರಿಂದ ಅವನಿಗೆ ಕೈ ತುಂಬ ಕೆಲಸ. ಅಪರೂಪಕ್ಕೆ ಸಿಕ್ಕಾಗಷ್ಟು ಶಿಷ್ಟಾಚಾರದ ಮಾತೆಷ್ಟೋ ಅಷ್ಟೇ. ಹಿಂದಿನ ಹಾಗೆ ನೆಲ ಗುದ್ದಿ ನೀರು ತೆಗೆಯುವ ಉತ್ಸಾಹ ನಮ್ಮಲ್ಲಿ ಯಾರಿಗೂ ಉಳಿದೇ ಇಲ್ಲ. &lt;br /&gt;ಪ್ರೆಸ್ ಕ್ಲಬ್ಬಿನ ಕಾಂಪೋಂಡೊಳಗೆ ನನ್ನ ಸ್ಕೂಟರು ನಿಲ್ಲುವುದಕ್ಕೂ ಪೋಲೀಸು ಜೀಪೊಂದು ಆ ಆವರಣದಿಂದ ಹೊರಡುವುದಕ್ಕೂ ಸರಿ ಹೋಯ್ತು. ಪ್ರಾಯಶಃ ಪೋಲಿಸ್ ಇಲಾಖೆಯ ಪ್ರೆಸ್ ಮೀಟ್‌ಗೆ ಹೋಗಿದ್ದ ಪತ್ರಕರ್ತರನ್ನು ಬಿಡಲು ಬಂದ ವಾಹನವಿರಬೇಕು ಅದು. ‘ಒಂದು ನಿಮಿಷ ಅಲ್ಲೆ ಇರಯ್ಯ’ ಎನ್ನುವ ಹಾಗೆ ಕೈ ತೋರಿಸಿ ಮೂತ್ರ ಮಾಡಿಬರುತ್ತೇನೆನ್ನುವ ಸನ್ನೆ ಮಾಡಿದ ದಿವಾಕರ ಐದು ನಿಮಿಷದ ನಂತರ ಬಂದವನು ಕ್ಯಾಂಟೀನಿಗೆ ಕರೆದೊಯ್ದ. ಸಿಗರೇಟಿಗೆ ಬೆಂಕಿ ತಾಗಿಸಿ ಕಾಫಿ ಗುಟುಕರಿಸುತ್ತ ‘ನೀನು ಯಾಕೆ ಇಲ್ಲಿಯವರೆಗೆ ಬಂದೆ ಅಂತ ನನಗ್ಗೊತ್ತು’ ಅಂದ. ಸ್ನಾನ ತಿಂಡಿಗಳಿಲ್ಲದೇ ಬೆಳಗ್ಗಿನಿಂದ ಇದ್ದ ಒತ್ತಡ ಸ್ವಲ್ಪ ಕಮ್ಮಿಯಾದಂತೆನಿಸಿತು. ಆರಿ ಹೋಗಿದ್ದ ಕಾಫಿಯನ್ನು ಒಂದೇ ಗುಟುಕಿಗೆ ಹೀರಿ ‘just I want to know how he is…’ ಅಂತ ಹೇಳುವಷ್ಟರಲ್ಲೇ ಧ್ವನಿ ಭಾರವಾಗಿ ಮಾತು ತುಂಡಾಗಿ ನಿಂತು ಬಿಟ್ಟಿತು. ದಿವಾಕರ ಹೇಳಿದ ‘ಸರಿಯಾಗಿ ಕೇಳಿಸ್ಕೋ ಮಗನೇ... ನೀನೇನಾದರೂ ಅವನ ಬಗ್ಗೆ ವಿಚಾರಿಸ ಹೋದ್ರೆ.. ..ನೀನ್ಯಾಕೆ ಅವನ ಬಗ್ಗೆ ಆಸಕ್ತಿ ತೋರಿಸ್ತಿದೀಯ ಅನ್ನೋ ಆಸಕ್ತಿ ಪೋಲೀಸರಿಗೆ ಬರುತ್ತೆ. ..ನಿನಗೆ ಅವನ ಪರಿಚಯ ಇದೆ ಅಂದ್ರೆ.. . ಅವನ ಎಲ್ಲ ಕೆಲಸ ಕಾರ್ಯಗಳಲ್ಲಿ ನೀನೂ ಸಹಕರಿಸಿದ್ದೀ ಅಂತ ವ್ಯವಸ್ಥೆ ನಂಬುತ್ತೆ. ನೀನು ಅವನಿಗೆ ಹ್ಯಾಗೆ ಪರಿಚಯ ಅಂತ ತಿಳ್ಕೊಳ್ಳೋಕೆ ಅವರು ಯಾವ ಮಾರ್ಗನಾದರೂ... .. ರೋಲರಿನಿಂದ ಹಿಡಿದು ಏರೋಪ್ಲೇನ್‌ವರೆಗೂ ..’ ದಿವಾಕರ ತೀರ ಇಷ್ಟು ಅಸ್ತಿತ್ವವಾದೀ ಮನುಷ್ಯ ಅಂತ ನನಗೆ ಗೊತ್ತಿರಲಿಲ್ಲ. ಗೆಳೆಯರು ಅಂದ್ರೆ ಪಾರ್ಟಿಗೆ ಬಾಯಿ ಬಿಡೋ ದರಿದ್ರರು ಅಂತ ತಿಳ್ಕೊಂಡಿದಾನೆ. ಚೀಪ್ ಗೈ. ಸಿಟ್ಟು ಒತ್ತರಿಸಿ ಬಂತು. ಎಲ್ಲೋ ಕಷ್ಟದಲ್ಲಿರುವ ಸ್ನೇಹಿತನಿಗೆ ಸಹಾಯ ಮಾಡುವ ಬದಲು ಸಹಾಯ ಹಸ್ತ ಚಾಚಿರುವವರನ್ನೇ ಬಾವಿಗೆ ದೂಡುವ ದುಷ್ಟತನ. ಥೂ ಅಂತ ಉಗಿದು ಹೊರಟು ಬಿಡಬೇಕೆಂದು ನಿಂತುಕೊಂಡವನನ್ನು ಕೈಹಿಡಿದು ಕೂರಿಸಿ ಹೇಳಿದ ‘ನೋಡು ಮರಿ. ಇವರೆಲ್ಲ ವ್ಯವಸ್ಥೇನ ಹಾಳುಮಾಡೋ ಜನ. ಆಂಟಿ ಸೋಶಿಯಲ್ ಎಲಿಮೆಂಟ್ಸ್. ದಿನವಿಡೀ ದುಡಿಮೆ ಮಾಡಿ ಹೊತ್ತು ಹೊತ್ತಿಗೆ ಗಂಜಿ ಹೊಂಚಿಕೊಳ್ಳಬೇಕಾದ ಜನರಿಗೆ ಅವರ ಬಡತನ ಈ ಸಮಾಜ ಕಟ್ಟಿಕೊಟ್ಟದ್ದು ಅನ್ನುವ ಹಾಗೆ ಅವರ ಬ್ರೇನ್ ವಾಷ್ ಮಾಡಿ ದಂಗೆ ಏಳಿಸ್ತಾರೆ. ನಾವೆಲ್ಲ ಭರವಸೆಯಿಂದ ಆರಿಸಿರೋ ಸರ್ಕಾರದ ವಿರುದ್ಧ ಕೆಲಸ ಮಾಡುತ್ತಾನೆಂದರೆ ಅವನೂ, ಅವನ ಸ್ನೇಹಿತರೆಲ್ಲರೂ ದೇಶದ್ರೋಹಿಗಳು ಅಂತಾನೆ ಸರ್ಕಾರ ಭಾವಿಸುತ್ತೆ. ನೀನು ಸರ್ಕಾರೀ ಅನುದಾನ ಪಡೆಯುವ ಸಂಸ್ಥೆಯ ನೌಕರ. ಸಸ್ಪೆಂಡು ಮಾಡೋದು ಸುಲಭ.’ ಅವನ ಮಾತು ಹೀಗೇ ಮುಂದುವರೆಯಿತು. ‘ಹಾಗಾದರೆ ಅವನನ್ನು ಬಿಡಿಸುವ ದಾರಿ ಯಾವುದೂ ಇಲ್ಲವಾ?’ ನನ್ನ ಮಾತು ಸಾಕೆನ್ನುವಂತೆ ಕೈ ಮಾಡಿ ‘ಮಧ್ಯಾಹ್ನದವರೆಗೂ ಇಲ್ಲೆ ಕೂತಿರು. ಈಗಷ್ಟೇ ಪ್ರೆಸ್ ಮೀಟಿನಲ್ಲಿ ಪೋಲೀಸ್ ಇಲಾಖೆ ಹೇಳಿದ್ದನ್ನು ಹೈಲೈಟ್ ಮಾಡಿ ಒಂದು ಸ್ಕೂಪ್ ವರದಿ ಕಳಿಸಿಬಿಡುತ್ತೇನೆ. ಭಾನುವಾರ. ನಿಂಗೂ ರಜೆ. ಚರ್ಚೆ ಮಾಡ ಮಾಡುತ್ತ ತಣ್ಣಗಿನ ಬಿಯರ್ ಹೀರುವ’ ಅಂತಂದು ಒಳಗೆದ್ದುಹೋದ. ಸ್ನೇಹಿತನ ಜೀವಕ್ಕಿಂತ ಕರ್ತವ್ಯವೇ ಮಿಗಿಲೆಂದು ಭಾವಿಸಿದ ಸ್ನೇಹಿತನನ್ನು ಅಲ್ಲೇ ಬೀಳ್ಕೊಟ್ಟು ಮತ್ತೆ ಸ್ಕೂಟರೇರಿ ಪೋಲೀಸ್ ಸ್ಟೇಷನ್ನಿನ ಕಡೆಗೆ ಹೊರಟೆ.&lt;br /&gt;ಅರೆ, ಏನಾಶ್ಚರ್ಯ? ಸ್ಟೇಷನ್ನಿನ ಮುಂದೆ ನೂರಾರು ಜನ ಜಮಾಯಿಸಿ ಕಾಮ್ರೇಡ್ ಸೂರಿಗೆ ಜೈ ಅಂತಿದಾರೆ. ಅಲ್ಲಿದ್ದ ಜನರೆಲ್ಲ ಸ್ವತಃ ತಮ್ಮ ವಿಷಯವನ್ನು ತಾವೇ ಇತ್ಯರ್ಥ ಪಡಿಸಿಕೊಳ್ಳಲು ಬಂದವರ  ಹಾಗೆ ಕಾಣುತ್ತಿದ್ದಾರೆ. ಎಲ್ಲರ ಮುಖದಲ್ಲೂ ದುಗುಡ ಹೆಪ್ಪುಗಟ್ಟಿದೆ. ಯಾವ ಕ್ಷಣ ಏನಾಗುತ್ತೋ ಅನ್ನುವ ಭಯ ಕೂಡ ಅವರ ಮುಖದಲ್ಲಿ ಎದ್ದು ಕಾಣುತ್ತಿದೆ. ಯಾವ ಪುಡಿ ರಾಜಕಾರಣಿಯನ್ನೂ ಮುಂದಿಟ್ಟುಕೊಳ್ಳದೆಯೇ ಅವರೆಲ್ಲ ತಮ್ಮ ಪ್ರತಿಭಟನೆ ವ್ಯಕ್ತಪಡಿಸುತ್ತಿದ್ದಾರೆ. ಅವರ ನೂಕುನುಗ್ಗಲು ತಡೆಯಲಾರದೇ ಸ್ಟೇಷನ್ನಿನ ಹೊರಗೆ ಕಾವಲಿರುವ ಪೋಲೀಸು ಸಿಬ್ಬಂದಿ ಗಾಳಿಗೆ ತಮ್ಮ ಲಾಠಿ ಬೀಸಿ, ಬಾಯಿಗೆ ಬಂದ ಬೈಯ್ಗಳೆಲ್ಲವನ್ನೂ ಪ್ರಯೋಗಿಸುತ್ತಿದೆ. ಕಾಲೇಜಿನಲ್ಲಿ ನನ್ನ ಪಾಠವನ್ನು ಅತ್ಯಂತ ಶ್ರದ್ಧೆಯಿಂದ ಕೇಳುವ ಸ್ಲಮ್ಮಿನ ಬಹುತೇಕ ಹುಡುಗ ಹುಡುಗಿಯರೂ ಗುಂಪಿನಲ್ಲಿದ್ದಾರೆ. ನನ್ನನ್ನು ಅಲ್ಲಿ ಕಂಡೊಡನೆಯೇ ಯಾರೊಬ್ಬರನ್ನೂ ಒಳಬಿಟ್ಟುಕೊಳ್ಳದೆಯೇ  ದರ್ಪತೋರಿಸುತ್ತ ಕೂತಿದ್ದ ಇನ್ಸ್‌ಪೆಕ್ಟರ್ ಜೊತೆ ನಾನು ಮಾತಾಡುವಂತೆ ಕೈ ಜೋಡಿಸುತ್ತಾರೆ. ಅವರೆಲ್ಲರ ಆರಾಧ್ಯ ದೈವದಂತಿರುವ ಸೂರಿ ಅವರಿಗೆ ಯಾವ ಬಗೆಯ ಮೋಡಿ ಹಾಕಿರಬಹುದೆಂದು ಅಂದಾಜಿಸುತ್ತಲೇ ಹೊಡೆದುಕೊಳ್ಳುತ್ತಿರುವ ಎದೆಯ ಮೇಲೆ ಕೈ ಇಟ್ಟುಕೊಂಡ ನಾನು ಇನ್‌ಸ್ಪೆಕ್ಟರ ಛೇಂಬರಿನೊಳಕ್ಕೆ ನುಗ್ಗಿದೆ. &lt;br /&gt;‘... ..ಪಾಠ ಮಾಡೋದು ಬಿಟ್ಟು ಕಾಲೇಜು ಮಕ್ಕಳಿಗೆ ಕಮ್ಯೂನಿಸಂ ಬೋಧಿಸೋ ಮೇಸ್ಟರೇ. . .ಬರಬೇಕು.. ಬರಬೇಕು. ಬರೀ ಅದರ್ಶ ಬದುಕಿಗೆ ಸಾಕಾಗಲ್ಲ. ಸ್ವಲ್ಪ ವಾಸ್ತವ ಕೂಡ ನಿಮಗೂ ಅರ್ಥವಾಗಬೇಕು.’ ನನ್ನನ್ನು ನೋಡಿದೊಡನೆಯೇ ಹಿಂದಿನ  ಪರಿಚಯ ಇರದಿದ್ದರೂ ವ್ಯಂಗ್ಯದ ಮಾತಲ್ಲಿ ಸ್ವಾಗತಿಸಿದ ಇನ್ಸ್‌ಪೆಕ್ಟರಿಗೆ ನಮಸ್ಕಾರ ಹೇಳಿದೆ. ನಾನು ಬಂದ ವಿಚಾರ ಯಾವುದೆಂದು ಕೇಳದೇ ಕುರ್ಚಿ ತೋರಿಸುವ ಸೌಜನ್ಯವನ್ನೂ ಮಾಡದೇ ಆತ ನೇರವಾಗಿ ಹೇಳಿದ-“ನೋಡಿ, ಇಲ್ಲಿ ಸೇರಿದಾರಲ್ಲ, ಅವರಲ್ಲಿ ಯಾರಿಗೂ ಕಾನೂನಿನ ಭಯ ಇಲ್ಲ. ಸಮಾಜ, ಮಾನ , ಮರ್ಯಾದೆ ಯಾವುದಕ್ಕೂ ಅವರು ಕ್ಯಾರೇ ಅನ್ನಲ್ಲ. ಈ ಇವರ ಚಿತಾವಣೇಲಿ ಅಪ್ಪರ್ ಕ್ಲಾಸ್ ಜನ ಮರ್ಯಾದೆಯಾಗಿ ಬದುಕಲಾಗುತ್ತಿಲ್ಲ. ಇಂಥವರ ಲೀಡರ್ ಇನ್ನು ಹ್ಯಾಗೆ ಇರಕ್ಕೆ ಸಾಧ್ಯ? ಅದೆಷ್ಟು ಹುಡುಗಿಯರನ್ನು ಅವನು ಪಟಾಯಿಸಿದ್ದಾನೆ ಅನ್ನೋದು ನಮ್ಗೆ ಮಾತ್ರ ಗೊತ್ತು. ಯಾರ ಹತ್ರ ಹ್ಯಾಗೆ ಹ್ಯಾಗೆ ದುಡ್ಡು ಕೀಳಬೇಕೋ ಹಾಗೆಲ್ಲ ಅವನು ಕಿತ್ತಿದ್ದಾನೆ. ಬ್ಲಾಕ್ ಮೇಲ್, ಜೀವ ಭಯ, ಅವನ ಅಸ್ತ್ರಗಳು. ಅವನ ಪರವಾಗಿ ನೀವು ಇಲ್ಲಿಗೆ ಬಂದ್ರಲ್ಲ ಅಂತ ಬೇಜಾರಾಗುತ್ತೆ. ನಿಮಗೂ ಹೇಂಡತಿ ಮಕ್ಕಳು ಇದ್ದಾರೆ. ನಿಮ್ಮ ಮನೆ, ನಿಮ್ಮ ಕೆಲಸ ಎಲ್ಲ ನಮಗೆ ಗೊತ್ತು. ಜೋಪಾನ. ಕ್ರಾಂತಿಯ ಭ್ರಾಂತಿ ಕಿತ್ತುಹಾಕಿ ಮನೆ ಸೇರ್ಕಳಿ. ಖುದ್ದು ಗೃಹಮಂತ್ರಿಗಳ ಆದೇಶದ ಮೇಲೆ ನಾವವನನ್ನು ಅರೆಸ್ಟ್ ಮಾಡಿರೋದು. ನಿಮ್ಮಂಥವರಾರೂ ಅವನಿಗೆ ಕಾನೂನಿನ ಸಹಾಯ ಮಾಡಬಾರದು ಅಂತಾನೇ ನಾವು ಅವನನ್ನು ಶನಿವಾರ ಸಂಜೆ ಒಳಗೆ ಹಾಕಿ ಎತ್ತುತ್ತಿರೋದು. ನಾಳೆ ಕೂಡ ಸರ್ಕಾರಿ ರಜೆ. ಯಾವ ಕೋರ‍್ಟೂ ಏನೂ ಮಾಡಕ್ಕಾಗಲ್ಲ.” ಸುಮ್ಮನೆ ನಿಂತು ಅವನ ಮಾತು ಕೇಳುತ್ತ ಉಗುಳು ನುಂಗಲೂ ಕಷ್ಟ ಪಡುತ್ತಿದ್ದ ನನ್ನತ್ತ ಒಂದು ಹೆಜ್ಜೆ ಮುಂದಿಟ್ಟು ಬಂದು ಹೆಗಲ ಮೇಲೆ ಕೈ ಇಟ್ಟು ಹೇಳಿದ-“ಇಂಥವರಿಗೆ ಕೊಂಚವೂ ಜೀವನ ಪ್ರೀತಿ ಇರಲ್ಲ ಸಾರ್. ಬರೀ ಸ್ಯಾಡಿಸ್ಟ್. ಅವರಿಗೆ ಸಿಕ್ಕದಿರುವುದು ಬೇರೆ ಯಾರಿಗೂ ದಕ್ಕದೇ ಇರಲಿ ಅಂತ ಈರೀತಿ ಜನರನ್ನ ಎತ್ತಿ ಕಟ್ಟುತ್ತಾರೆ. ನೀವು ಪಾಠ ಚೆನ್ನಾಗಿ ಮಾಡ್ತೀರ ಅಂತ ನನ್ನ ಮಗಳು ಹೇಳಿದ್ದು ಕೇಳಿ ನಾನಿಷ್ಟು ಕೂಲಾಗಿ ನಿಮಗೆ ಹೇಳ್ತಿದೀನಿ. ದಯವಿಟ್ಟು ಈ ವಿಚಾರ ಬಿಟ್ಟು ಮನೆಗೆ ಹೋಗಿ ಹೆಂಡತಿ ಮಕ್ಕಳ ಜೊತೆ ಸಿನಿಮಾ ನೋಡಿ.. .. ಇಲ್ಲಾಂದ್ರೆ ಜೀವನ ಪೂರ್ತಿ ಅವರು ನಿಮ್ಮನ್ನು ನೋಡ್ಕೋ ಬೇಕಾಗುತ್ತೆ.. ..ನಿಮಗೆ ನಮ್ಮ ಇಲಾಖೆ ಕೊಡೋ ಮರ್ಯಾದೆ ಗೊತ್ತಿಲ್ಲ ಅಂತ ಕಾಣುತ್ತೆ” ಅಂದವನೇ ೩೩೦ ಅಂತ ಕೂಗಿದ. ಒಳಕ್ಕೆ ಬಂದು ಸೆಲ್ಯೂಟ್ ಹೊಡೆದ ಪಿಸಿಯೊಬ್ಬನಿಗೆ ನನ್ನನ್ನು ಜೀಪಲ್ಲಿ ಮನೆಗೆ ಬಿಟ್ಟು ಬರಲು ಹೇಳಿ ಅರಚುತ್ತಿದ್ದ ವಾಕಿಟಾಕಿಯಲ್ಲಿ ಏನೋ ಗಹನವಾಗಿ ಮಾತನಾಡತೊಡಗಿದ.   &lt;br /&gt;‘ನನ್ನ ಸ್ಕೂಟರು ಇಲ್ಲೇ ಇದೇರಿ’ ಅಂತ ನಾನು ಅಲವತ್ತುಕೊಳ್ಳುತ್ತಿದ್ದರೂ ಬಿಡದೆ ಸ್ಟೇಷನ್ನಿನ ಹಿಂಬಾಗಿಲ ಮೂಲಕ ನನ್ನನ್ನು ದಬ್ಬಿಕೊಂಡೇ ಗೌರವವಾಗಿ ಜೀಪಿಗೆ ತಳ್ಳಿದ ೩೩೦ ನಂಬರಿನ ಪಿಸಿ ಕೂಡ ದಾರಿಯುದ್ದಕ್ಕೂ ನಕ್ಸಲೈಟುಗಳನ್ನು, ಕಮ್ಯುನಿಸ್ಟರನ್ನು ದೇಶದ್ರೋಹಿಗಳು ಅಂತ ಬಯ್ಯುತ್ತಲೇ ಇದ್ದ. ನನ್ನ ಮನೆಯ ದಾರಿ ಬಿಟ್ಟು ಬೇರೆ ದಾರಿ ಹಿಡಿದ ಜೀಪು ಸೀದಾ ನಮ್ಮ ಕಾಲೇಜಿನ ಆಡಳಿತ ಮಂಡಲಿಯ ಅಧ್ಯಕ್ಷರೂ, ನಮ್ಮ ಕ್ಷೇತ್ರದ ಶಾಸಕರೂ,ವಿರೋಧ ಪಕ್ಷದಲ್ಲಿದ್ದರೂ ಗೃಹ ಮಂತ್ರಿಗಳ ಆಪ್ತರೂ ಆದವರ ಮನೆಯ ಮುಂದೆ ನಿಂತಿತು. ಬೆಳಿಗ್ಗೆಯಿಂದ ಹೊಟ್ಟೆಗೆ ಏನೂ ಬೀಳದಿರುವುದೂ, ಜೊತೆಗೆ ಮೇಲಿಂದ ಮೇಲೆ ಕೇಳಿದ ಉಪದೇಶಗಳ ಪ್ರಭಾವವೋ ಏನೋ ತಲೆ ಗಿರ್ ಎನ್ನತೊಡಗಿತು. ೩೩೦ ನಂಬರಿನ ಪೋಲೀಸ್ ಕಾನ್‌ಸ್ಟೇಬಲ್ ನನ್ನನ್ನು ಎಳೆದುಕೊಂಡೇ ಮನೆಯೊಳಗೆ ಕಾಲಿಟ್ಟ. ವೆರಾಂಡದ ಸ್ಟೂಲಿನ ಮೇಲೆ ನನ್ನನ್ನು ಕುಕ್ಕರಿಸಿ ತಾನು ತೀರ ಪರಿಚಿತ ಎನ್ನುವಂತೆ ಹಲ್ಲು ಕಿಸಿಯುತ್ತ ನಿಂತ. ಅರೆಬರೆ ಎಚ್ಚರದಲ್ಲಿ ಅಲ್ಲಿದ್ದವರನ್ನು ಗಮನಿಸಿದೆ. ಪತ್ರಕರ್ತ,ಗೆಳೆಯ ದಿವಾಕರ ಶಾಸಕರ ಕಿವಿಯಲ್ಲಿ ಏನನ್ನೋ ಹೇಳುತ್ತಿದ್ದ. ನಮ್ಮ ಪ್ರಿನ್ಸಿಪಾಲರು ವಿಧೇಯರಾಗಿ ನಿಂತಿದ್ದರು. ನಾನು ಫೋಟೊದಲ್ಲಿ ಮಾತ್ರ ನೋಡಿದ್ದ ನಮ್ಮ ಡಿ.ವೈ.ಎಸ್ಪಿ ಶಾಸಕರ ಪಕ್ಕದಲ್ಲೇ ವಿರಾಜಮಾನರಾಗಿದ್ದರು. ಇನ್ನೂ ಯಾರೋ ನಾಲ್ಕೈದು ಜನ ಖಾದೀಧಾರಿಗಳು ನನ್ನತ್ತಲೇ ನೋಡುತ್ತ ಹುಸಿನಗೆ ನಕ್ಕಂತಾಯ್ತು. ನಾನು ಕುಸಿದು ಬಿದ್ದೆ.&lt;br /&gt;ಎಚ್ಚರವಾದಾಗ ಆಸ್ಪತ್ರೆಯ ಹಾಸಿಗೆಯಲ್ಲಿ ಮಲಗಿದ್ದೆ. ಹೆಂಡತಿ ರತ್ನ ದಿಕ್ಕುತೋಚದವಳಂತೆ ಕಾಲ ಬಳಿ ತೂಕಡಿಸುತ್ತಿದ್ದಳು. ಸಾವರಿಸಿ ಕೊಂಡು ಇಲ್ಲಿಗೆ ಯಾವಾಗ ನನ್ನನ್ನು ಅಡ್ಮಿಟ್ ಮಾಡಿರಬಹುದೆಂದು ಆಲೋಚಿಸುತ್ತ ಸುತ್ತ ಮುತ್ತ ನೋಡುತ್ತಿರುವಾಗ, ಆ ಸ್ಪೆಷಲ್ ವಾರ್ಡಿನ ಬಾಗಿಲು ತೆರೆದುಕೊಂಡು ನಮ್ಮ ಕಾಲೇಜಿನ ಆಡಳಿತ ಮಂಡಲಿಯ ಅಧ್ಯಕ್ಷರ ಜೊತೆ ದಿವಾಕರ ಒಳಬಂದ. ‘ಏನೂ ತೊಂದರೆ ಇಲ್ಲವಂತಯ್ಯ. ಸುಮ್ಮನೆ ಗಾಬರಿ ಮಾಡಿಕೊಂಡು ನಮಗೂ ಗಾಬರಿ ಹುಟ್ಟಿಸಿದೆ. ನೋಡು ಸ್ವತಃ ಶಾಸಕರೇ ನಿನ್ನ ಆರೋಗ್ಯದ ಬಗ್ಗೆ ಕಾಳಜಿ ಇಟ್ಟುಕೊಂಡು ಇಲ್ಲಿಯವರೆಗೂ ಬಂದಿದ್ದಾರೆ’ ಅಂದ. ಅವರ ಕೈಯಲ್ಲಿದ್ದ ಬುಟ್ಟಿಯ ತುಂಬ ವಿವಿಧ ರೀತಿಯ ಹಣ್ಣುಗಳು ತುಂಬಿದ್ದವು. ಆಯಾಸವಾದವನಂತೆ ಕಣ್ಣುಮುಚ್ಚಿದೆ. ‘ರೆಸ್ಟ್ ತಗೋಳಿ. ನಿಮಗೆ ಸಂಬಂಧಿಸಿಲ್ಲದ ವಿಷಯದಲ್ಲಿ ತಲೆ ಹಾಕುವುದು ತಪ್ಪು ತಾನೆ? ಪರೀಕ್ಷೆಗಳು ಬೇರೆ ಹತ್ತಿರಕ್ಕೆ ಬರುತ್ತಿವೆ. ನಮ್ಮ ಕಾಲೇಜಿನ ರಿಸಲ್ಟ್ ನಿಮ್ಮಂಥವರ ಕೈಯಲ್ಲೇ ಇರುವುದು’ ಅಂತ ಅವರು ಹೇಳುತ್ತಲೇ ನಿರ್ಗಮಿಸಿದರು. ಅವರನ್ನು ಕಳಿಸಿಕೊಡಲು ರತ್ನ ಕೂಡ ಅವರ ಜೊತೆಯೇ ಹೊರಗೆ ಹೋದಳು. ದಿವಾಕರ (ಬೇಕೆಂತಲೇ?) ನನ್ನ ಹಾಸಿಗೆಯ ಮೇಲೆ ಬಿಟ್ಟುಹೋದ ಅವತ್ತಿನ ಪೇಪರನ್ನು ಎತ್ತಿಕೊಂಡು ನೋಡಿದೆ. “ಸೂರ್ಯನಾರಾಯಣ ಎಂಬ ಶಂಕಿತ ನಕ್ಸಲ್ ಬಂಧನದಿಂದ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಪೋಲೀಸರು ಅನಿವಾರ್ಯವಾಗಿ ಸಿಡಿಸಿದ ಗುಂಡಿಗೆ ಬಲಿಯಾದ. ಅವನ ಬಿಡುಗಡೆಗೆ ಅಗ್ರಹಿಸಿ ಪೋಲಿಸ್ ಠಾಣೆಗೆ ಮುತ್ತಿಗೆ ಹಾಕಿದ್ದ ಕೆಲವರು ಹಿಂಸಾಚಾರಕ್ಕಿಳಿದಾಗ ಕೆಲವು ಪೋಲೀಸರು ಗಾಯಗೊಂಡರಲ್ಲದೆ, ಹಿಂಸೆಯನ್ನು ನಿಯಂತ್ರಿಸಲು ಪೋಲೀಸರು ನಡೆಸಿದ ಗೋಲೀಬಾರಿನಲ್ಲಿ ಸತ್ತವರ ಸಂಖ್ಯೆ ಮೂರಕ್ಕೇರಿದೆ.”  ನಾಲ್ಕು ಸಾಲಿನ ಸುದ್ದಿಯ ಜೊತೆಗೇ ನಮ್ಮ ಶಾಸಕರ ಶೋಕ ಸಂದೇಶ ಜೊತೆಗೆ ಯುವಕರನ್ನು ಹಾದಿ ತಪ್ಪಿಸುತ್ತಿರುವ ಸಮಾಜ ವಿರೋಧೀ ವ್ಯಕ್ತಿಗಳ ಬಗ್ಗೆ ಎಚ್ಚರದಿಂದಿರಬೇಕೆಂಬ ಅವರ ಕಳಕಳಿಯ ಮನವಿಯೂ ಪ್ರಕಟವಾಗಿತ್ತು. ಹೊರಗೆ ಗಲಾಟೆ ಕೇಳಿದಂತಾಗಿ ಮೆಲ್ಲನೆ ನಡೆದು ಕಿಟಕಿಯಿಂದ ಬಗ್ಗಿ ನೋಡಿದೆ. ಎದೆ ಎದೆ ಬಡಿದುಕೊಂಡು ಅಳುತ್ತಿದ್ದವರಿಗೆ ಶಾಸಕರು ಸಮಾಧಾನ ಹೇಳುತ್ತಲೇ ಕಾರು ಹತ್ತಿದರು. ಅವರ ಕಾರನ್ನು ಎರಡು ಪೋಲೀಸ್ ಜೀಪುಗಳು ಹಿಂಬಾಲಿಸಿದವು. ದಿವಾಕರ ಶಾಸಕರ ಕಾರಿನಲ್ಲಿದ್ದನೋ ಪೋಲೀಸರ ಜೀಪಿನಲ್ಲಿದ್ದನೋ ದೂರದಿಂದ ಕಂಡದ್ದು ಅಸ್ಪಷ್ಟವಾಗಿಯೇ ಉಳಿಯಿತು. &lt;br /&gt;      (ಕನ್ನಡಪ್ರಭ ಸಂಕ್ರಾತಿ ಕಥಾಸ್ಪರ್ಧೆಯಲ್ಲಿ ಬಹುಮಾನಿತ ಕಥೆ)&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/5254102750204147054-3000134379689976842?l=bemkikaddi.blogspot.com' alt='' /&gt;&lt;/div&gt;</content><link rel='replies' type='application/atom+xml' href='http://bemkikaddi.blogspot.com/feeds/3000134379689976842/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://www.blogger.com/comment.g?blogID=5254102750204147054&amp;postID=3000134379689976842' title='2 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/5254102750204147054/posts/default/3000134379689976842'/><link rel='self' type='application/atom+xml' href='http://www.blogger.com/feeds/5254102750204147054/posts/default/3000134379689976842'/><link rel='alternate' type='text/html' href='http://bemkikaddi.blogspot.com/2010/03/blog-post.html' title='ಏನ್ ಕೌಂಟರ್'/><author><name>ಬೆಂಕಿಕಡ್ಡಿ</name><uri>http://www.blogger.com/profile/13181705369161334860</uri><email>noreply@blogger.com</email><gd:image rel='http://schemas.google.com/g/2005#thumbnail' width='21' height='32' src='http://4.bp.blogspot.com/_bUAIZF0Yo1g/TKdTK-6rv2I/AAAAAAAAAJY/QXUJAVKh9ps/S220/dsr4.jpg'/></author><thr:total>2</thr:total></entry><entry><id>tag:blogger.com,1999:blog-5254102750204147054.post-1141931230816145103</id><published>2010-02-05T21:53:00.000+05:30</published><updated>2010-02-05T21:57:16.275+05:30</updated><title type='text'>ಅಭಾವದಿಂದ ಅನುವಾದಗಳವರೆಗೆ....</title><content type='html'>ಒಂದು ಭಾಷೆಯಲ್ಲಿ, ಒಂದು ನಿರ್ದಿಷ್ಟ ಅವಧಿಯಲ್ಲಿ ಪ್ರಕಟವಾಗುವ ಕೃತಿಗಳ ಅವಲೋಕನವು ಆ ಭಾಷೆಯ ಬರಹಗಾರರು ಆ ಅವಧಿಯಲ್ಲಿ ಕಂಡುಂಡ ಆ ಭಾಷೆಯ ಸಾಮಾಜಿಕ ಸಾಂಸ್ಕೃತಿಕ ಸಂಗತಿಗಳ ಅನಾವರಣವೂ ಆಗಿರುವುದರಿಂದ ಸಾಹಿತ್ಯ ಚರಿತ್ರೆಯ ದಾಖಲೆಯೆಂದೇ ಭಾವಿಸಬೇಕಾಗುತ್ತದೆ. ಆದರೂ ಕಾವೇರಿಯಿಂದ ಕೃಷ್ಣೆಯವರೆಗೂ ವ್ಯಾಪಿಸಿರುವ ಕನ್ನಡದ ಎಲ್ಲ  ಕೃತಿಗಳೂ ಒಂದು ಅವಲೋಕನಕ್ಕೆ ಸಿಕ್ಕುವ ಸಾಧ್ಯತೆಗಳೂ ಕಡಿಮೆಯೇ. ಅದರಲ್ಲೂ ಪ್ರತಿವರ್ಷ ಪ್ರಕಟವಾಗುವ ಪುಸ್ತಕಗಳಲ್ಲಿ ಕಾವ್ಯಸಂಕಲನಗಳ ಸಂಖ್ಯೆಯೇ ಅಧಿಕವಿರುವುದು ಎಲ್ಲರೂ ಬಲ್ಲ ಸಂಗತಿ. ಈಗಾಗಲೇ ತಮ್ಮ ಕೃತಿಗಳಿಂದ ಪ್ರಸಿದ್ಧರಾಗಿರುವ ಲೇಖಕರಿಂದ ಹಿಡಿದು ಇನ್ನೂ ಈಗಷ್ಟೇ ಬರೆಯುವ ತುಡಿತಕ್ಕೆ ಸಿಕ್ಕ ಎಳೆಯರವರೆಗೂ ಕವನ ಸಂಕಲನಗಳ ಹರಹು ಇರುವುದರಿಂದ ಈ ಸಮೀಕ್ಷೆ ಪರಿಪೂರ್ಣವಾಗಿರುತ್ತದೆ ಎಂದೇನೂ ಭಾವಿಸಬೇಕಿಲ್ಲ. ಈ ಬರಹಗಾರ ತನ್ನಲ್ಲಿ ಲಭ್ಯವಿದ್ದ ಸಂಕಲನಗಳ ಆಧಾರದ ಮೇಲೆ ಈ ಸಮೀಕ್ಷೆ ನಡೆಸಿದ್ದಾನೆ.&lt;br /&gt;೨೦೦೯ರಲ್ಲಿ ಇಬ್ಬರು ಹಿರಿಯರು ಕಂಬಾರ ಮತ್ತು ಅನಂತಮೂರ್ತಿಗಳ ಸಂಕಲನಗಳ ಜೊತೆಗೆ ಈಗಾಗಲೇ ಕಾವ್ಯ ಕೃಷಿಯಲ್ಲಿ ಹೆಸರು ಮಾಡಿರುವ ಕೆ.ಬಿ.ಸಿದ್ದಯ್ಯ, ಎಸ್.ಮಂಜುನಾಥ್, ಸವಿತಾ ನಾಗಭೂಷಣ ಮತ್ತು ಎಚ್.ಎಲ್.ಪುಷ್ಪ ಅವರ ಸಂಕಲನಗಳೊಟ್ಟಿಗೆ ಜ್ಯೋತಿ ಗುರುಪ್ರಸಾದ, ಸಂತೋಷ ಚೊಕ್ಕಾಡಿ, ಸ್ವಾಮಿನಾಥ, ಚಂ.ಸು.ಪಾಟೀಲ, ಆಲೂರು ದೊಡ್ಡನಿಂಗಪ್ಪ ಮತ್ತು ಎಚ್.ಆರ್.ರಮೇಶರ ಸಂಕಲನಗಳೂ ಸ್ಪರ್ಧೆಗಿಳಿದಿವೆ. ಇವಲ್ಲದೇ ಇದೇ ಪ್ರಥಮ ಬಾರಿಗೆ ಸಂಕಲನ ಪ್ರಕಟಿಸಿರುವ ಕತೆಗಾರ್ತಿ ಸುನಂದಾ ಪ್ರಕಾಶ ಕಡಮೆ, ಸಂತೆಬೆನ್ನೂರು ಫೈಜ್ನಟ್ರಾಜ್, ಆರಿಫ್ ರಾಜ, ಕೆ.ಎಸ್.ಶ್ರೀನಿವಾಸ ಮೂರ್ತಿ, ಎಂ.ಎಸ್.ರುದ್ರೇಶ್ವರ ಸ್ವಾಮಿ, ಶ್ರೀದೇವಿ ಕೆರೆಮನೆ, ಛಾಯಾ ಭಗವತಿ, ಸಿದ್ದು ದೇವರಮನಿ, ಡಾ.ಸಿ.ರವೀಂದ್ರನಾಥ, ರಶ್ಮಿ ಹೆಗಡೆ ಕನ್ನಡ ಕಾವ್ಯ ಶ್ರೀಮಂತಿಕೆಗೆ ತಮ್ಮ ಛಾಪು ಸೇರಿಸಿದ್ದಾರೆ. ಇಷ್ಟಲ್ಲದೇ ರಿಲ್ಕೆ (ಅನಂತಮೂರ್ತಿ), ಪಾಬ್ಲೊ ನೆರೂದ (ಜ.ನಾ.ತೇಜಶ್ರೀ),ಕೈಫಿ ಆಜ್ಮಿ (ವಿಭಾ) ಮಿರ್ಜಾ ಗಾಲಿಬ್ (ಡಾ.ಎನ್.ಜಗದೀಶ್ ಕೊಪ್ಪ) ಕೂಡ ಕನ್ನಡಕ್ಕೆ ಬಂದಿದ್ದಾರೆ. &lt;br /&gt;ಯು.ಆರ್.ಅನಂತಮೂರ್ತಿಗಳ ‘ಅಭಾವ’ ಕಾವ್ಯಾಸಕ್ತರನ್ನು ಖುಷಿಗೊಳಿಸುತ್ತದೆ. ವರ್ಷದ ಕಡೆಯಲ್ಲಿ ಚಂದ್ರಶೇಖರ ಕಂಬಾರರ ‘ಎಲ್ಲಿದೆ ಶಿವಾಪುರ’ ಪ್ರಕಟವಾಗಿದೆ. (೨೦೧೦ರ ಜನವರಿ ೨ರಂದು ವಿದ್ಯುಕ್ತ ಬಿಡುಗಡೆಯಾಗಿದೆ), ೨೦೦೨ರ ‘ಇಲ್ಲಿಯವರೆಗಿನ ಕವಿತೆಗಳು’ ನಂತರ ಇದೀಗ ಕೇವಲ ೧೮ ಕವಿತೆಗಳ ಸಂಕಲನ ‘ಅಭಾವ’ವನ್ನು ಪ್ರಕಟಿಸಿರುವ ಅನಂತಮೂರ್ತಿಗಳು ಅವರ ಗದ್ಯದಷ್ಟು ಸರಾಗವಾಗಿ ಓದುಗರನ್ನು ತೃಪ್ತಿಪಡಿಸಲಾರರಾದರೂ ಅವರು ಸೃಷ್ಟಿಸುವ ರೂಪಕಗಳಿಂದ ಪ್ರಿಯರಾಗುತ್ತಾರೆ. ‘ಉತ್ತುವ ಮನಸ್ಸಿಗೆ ಫಲವಾತ್ತಾಗುತ್ತ.’ ಎನ್ನುವ ಸಾಲುಗಳ ಮೂಲಕ ಬದುಕಿನ ಮಾಗುವಿಕೆಯ ಮತ್ತು ವಿನಯ ಹಾಗೂ ಮಾರ್ದವತೆಯ ಪ್ರತಿನಿಧಿಯಂತೆ ಕಾಣಿಸುತ್ತಾರೆ. ‘ಕಾವ್ಯದ ಆತ್ಮಾನುಸಂಧಾನ’ ಅನ್ನುವ ಪದ್ಯವಂತೂ ಅದರ ಶೀರ್ಷಿಕೆ ಸೂಚಿಸುವ ಹಾಗೇ ಅನುಭವವೊಂದು ಪದ್ಯವಾಗಿ ಬೆಳೆಯುವ ಮತ್ತು ಚಿರಕಾಲ ಮನಸ್ಸೊಳಗೆ ನಿಲ್ಲುವ ಸಂಗತಿಯಾಗಿ ‘ಕಷ್ಟ; ಸಂಕಲ್ಪ ಸಾಲದು; ಅದೃಷ್ಟ ಬೇಕು’ ಅನ್ನುವ ಕವಿಯ ಮಾತಿಗೆ ಓದುಗ ಸಂಭ್ರಮ ಪಡುತ್ತಲೇ ತನ್ನೊಳಗಿನ ಅನುಭವಗಳನ್ನು ನೆನೆಯುವಂತೆ ಮಾಡುತ್ತದೆ. ‘ಈ ನಮ್ಮ ಕಾಲದಲ್ಲಿ ಏನೇನು ಚಂದ?’ ತುಂಟತನವನ್ನೂ ಕವಿತೆಯಾಗಿಸಬಹುದೆನ್ನುವುದರ ಸೂಚನೆಯಾದರೆ, ‘ಸಾವಿನ ಸನ್ನೆ’ ಸಂಕಲನದ ಯಶಸ್ವಿ ಪದ್ಯಗಳಲ್ಲೊಂದು. ‘ಓದುತ್ತ ಹೋದುದನ್ನು ಓದುತ್ತಲೇ ಮರೆಯುತ್ತ/ ಮೈಮುರಿಯುತ್ತ ಎದ್ದು ನಿಲ್ಲುವಾಗ/ ಏನದು ಮತ್ತೆ ಹೊಳೆದಂತಾಗುತ್ತದೆ?’ ಎಂದು ನಿರಂತರ ಕಾಡುವ ಸಾವಿನ ಸನ್ನೆಯನ್ನು ಅನಾವರಣಗೊಳಿಸುತ್ತಾರೆ. ಕಂಬಾರರ ‘ಎಲ್ಲಿದೆ ಶಿವಾಪುರ?’ ಎಂದಿನಂತೆ ಅವರಿಗೆ ಪ್ರಿಯವಾದ ಶಿವಾಪುರದಲ್ಲಿ ಕವಿಯ ಹುಡುಕಾಟವನ್ನೇ ವಸ್ತುವಾಗುಳ್ಳದ್ದು. ದೇಶಗಳಳಿದರೂ ಶಿವಾಪುರ ಉಳಿದೇ ಉಳಿಯುತ್ತದೆ ಎಂಬ ಕವಿಯ ಗಾಢ ನಂಬಿಕೆ ಇಲ್ಲಿನ ಎಲ್ಲ ಪದ್ಯಗಳಲ್ಲೂ ತುಂಬಿ ತುಳುಕಿದೆ. ಕಂಬಾರರಿಗಷ್ಟೇ ಒಲಿದಿರುವ ಜಡೆಮುನಿ,ವಿಶಾಲ ಮರ, ಹರಿಯುವ ನೀರು, ಚಂದ್ರಾಮ ಚುಕ್ಕಿಗಳು ಇಲ್ಲಿನ ಪದ್ಯಗಳಲ್ಲಿ ಕಂಬಾರ ಮುದ್ರೆಗೆ ಸಾಥ್ ನೀಡಿವೆ. ನಾವು ಆಡಿದ್ದು ಮಾಡಿದ್ದು/ಹರಿದು ಹೋಗಿದೆ ನದಿಯ ತೆರೆಗಳೊಡನೆ/ನಿನ್ನೆಯ ಸತ್ಯ ಇಂದಿನ ಚೇಷ್ಟೆಯಾಗಿ/ಕೂಸು ಜೋಗುಳ ಹಾಡಿ ನಮ್ಮನ್ನು ಮಲಗಿಸುತ್ತಿದೆ!-ಎನ್ನುವಷ್ಟೇ ಸಲೀಸಾಗಿ ಕಾಲನಿಗಿಂತ ತರುಣವಾದ ಕಾವ್ಯವಿದೆಯೆಂದು/ನನ್ನಂಥವರ ಮುನ್ನಡೆಸಿ ಹೊಸ ಕ್ಷಿತಿಜ ತೋರಿದವರು (ಅಡಿಗರಿಗೆ)  ಎಂದೂ ನೆನೆಯುತ್ತಾರೆ. ಒಂದು ಓದಿಗೆ ದಕ್ಕಲಾರದ, ಪ್ರಬಂಧವೇನೋ ಎನ್ನುವಷ್ಟು ಸವಿವರಗಳ, ಸಾರಾಂಶ ಇಷ್ಟೇ ಎಂದು ಹೇಳಲಾಗದ ಸಂವೇದನಾಶೀಲತೆ ಮತ್ತು ಅನುಭವದೆರಕದ ಈ ಸಂಕಲನ ಬಹಳ ಕಾಲ ಕಾಡುತ್ತದೆ. &lt;br /&gt;‘ಗಲ್ಲೆಬಾನಿ’ ಅಧ್ಯಾತ್ಮವನ್ನು ವಿವಿಧ ನೆಲೆಗಳಲ್ಲಿ ಶೋಧಿಸುತ್ತಿರುವ ಹಾಗೆಯೇ ಸಿದ್ಧಮಾದರಿಗಳನ್ನು ನಿರಾಕರಿಸಿ ಸ್ವಾನುಭವ ಮತ್ತು ಚಳವಳಿಗಳ ಮೂಲಕ ಕಂಡುಕೊಂಡ ತಾತ್ವಿಕತೆಯನ್ನೇ ಬಸಿದು ಕಾವ್ಯ ಕಟ್ಟುತ್ತಿರುವ ಸಿದ್ದಯ್ಯನವರ ನಾಲ್ಕನೇ ಖಂಡಕಾವ್ಯ. ‘ಇಡೀ ದೇಹ ಭವದ ಸಾಲ’ ಎನ್ನುವ ಕವಿ ‘ಕಟ್ಟಕಡೆಗೆ ಸುಲಿದು ಸುಲಿದು ಸುಲಿದು ಚರ್ಮ ಸುಲಿದು ಮೆಟ್ಟು ಹೊಲೆದು ಮೆಟ್ಟೀ ಮೆಟ್ಟೀ ಮೆಟ್ಟೀ ಬಿಟ್ಟುಬಿಟ್ಟೆ ಮೆಟ್ಟು ಬಿಡುವ ಜಾಗದಲ್ಲಿ’ ಎನ್ನುತ್ತಾರೆ. ಕಾಜಗದ ದೋಣಿ ಈಜುವ ಸೋಜಿಗವನ್ನು ಕಾಣಿಸುವ ಸಿದ್ದಯ್ಯನವರ ಈ ಕಾವ್ಯಾಭಿವ್ಯಕ್ತಿ ಒಂದು ರೀತಿಯಲ್ಲಿ ಆತ್ಮಚರಿತ್ರೆಯೇ ಆಗಿದೆ. ಚಮ್ಮಾರನ ನಿತ್ಯ ಕಾಯಕಕ್ಕೆ ಸಹಕಾರಿಯಾಗಿ ತನ್ನೊಡಲ ತುಂಬ ನೀರು ತುಂಬಿಕೊಂಡಿರುವ ಕಲ್ಲಬಾನಿ ಈ ಗಲ್ಲೆಬಾನಿ. ಸಾಮಾಜಿಕ ನಡೆಯನ್ನು ‘ಸಮಾಜೋ ಅಧ್ಯಾತ್ಮ ಪ್ರಯಾಣ’ವೆಂದು ನಂಬಿರುವ ಸಿದ್ದಯ್ಯನವರ ಈ ಕಾವ್ಯ ದಮನಿತ ವರ್ಗದ ಸಾಂಸ್ಕೃತಿಕ ಸಂಗತಿಯನ್ನು ಅನಾವರಣಗೊಳಿಸುತ್ತಲೇ ಕವಿಯೊಳಗಿರುವ ಜೀವಸೆಲೆಯಾಗಿ ಬಹುಕಾಲ ಓದುಗನನ್ನು ಕಾಡುತ್ತದೆ. ಕಳೆದ ವರ್ಷವಷ್ಟೇ ‘ಮಗಳು ಸೃಜಿಸಿದ ಸಮುದ್ರ’ ಹೆಸರಿನ ಸಂಕಲನ ಪ್ರಕಟಿಸಿ ಹೆಸರು ಖ್ಯಾತಿ ಗಳಿಸಿದ್ದ ಎಸ್.ಮಂಜುನಾಥ್ ಮತ್ತೊಂದು ಸಂಕಲನ ‘ಜೀವಯಾನ’ ಪ್ರಕಟಿಸಿದ್ದಾರೆ. ಹೀಗೆ ವರ್ಷಕ್ಕೊಂದು ಸಂಕಲನ ತರುವ ಯಾರೇ ಇರಲಿ, ಈಗಾಗಲೇ ಅವರು ಗಳಿಸಿದ ಖ್ಯಾತಿ ಮತ್ತು ಅವರಿಗಂಟಿದ ಪ್ರ್ರಭಾವಳಿಯ ಮೂಲಕವೇ ಸಾರಸ್ವತ ಲೋಕದ ಬಾಗಿಲು ತಟ್ಟುವುದರಿಂದ ಇಂಥವರು ಸೃಷ್ಟಿಸಿದ ಮಾಯೆಯ ಬಲೆಯನ್ನೇ ವಿಸ್ಮಿತರಾಗಿ ಸಲಹುವ ನಮ್ಮ ಮಾಧ್ಯಮಗಳು ಮತ್ತು ವಿದ್ವಾಂಸರೆಂಬ ವಿಮರ್ಶಕರು ಹಳಬರ ಈ ಆಟಗಳಿಗೆ ಚಪ್ಪಾಳೆ ತಟ್ಟುವ ಭರದಲ್ಲಿ ಇವರೊಟ್ಟಿಗೇ ನಿಂತಿರುವ ಇತರರ ಪ್ರಯತ್ನಗಳನ್ನು ಗಮನಿಸುವ ಗೋಜಿಗೂ ಹೋಗದೇ ಸುಮ್ಮನಿರುವ ಸುಮ್ಮಾನಕ್ಕೆ ಶರಣಾಗಿಬಿಡುತ್ತಾರೇನೋ ಎಂಬ ಅನುಮಾನಗಳೂ ಕಾಡುತ್ತವೆ. ‘ಜೀವಯಾನ’ ಆತ್ಮ ಚರಿತ್ರೆಯ ಪುಟಗಳಂತೆ ನಮ್ಮ ಮುಂದೆ ಬಿಚ್ಚಿಕೊಳ್ಳುತ್ತ ಹೋಗುವುದಾದರೂ ಇದುವರೆಗೆ ರೂಪಕಗಳಲ್ಲೇ ಮಾತನಾಡುತ್ತಿದ್ದ ಮಂಜುನಾಥ್, ಹೊಸ ಪ್ರಮೇಯವೊಂದನ್ನು ಸೃಷ್ಟಿಸಿದ್ದಾರೆಂದೇನೂ ಅನ್ನಿಸುವುದಿಲ್ಲ. ಅವರು ಪುಸ್ತಕದ ಕಡೆಯಲ್ಲಿ ಪ್ರಕಟಿಸಿರುವ ಟಿಪ್ಪಣಿಯಂತೂ-ಅದರಲ್ಲೂ ‘ಒಡಲಾಳ’ಕ್ಕೆ ತಮ್ಮ ಕೃತಿಯನ್ನು ತಾವೇ ಸ್ವತಃ ಹೋಲಿಸಿಕೊಳ್ಳುತ್ತಿರುವುದು ಅಷ್ಟೇನೂ ಆರೋಗ್ಯಕರವಾದುದಲ್ಲ. ಪ್ರಾಯಶಃ ಬೇರೊಬ್ಬರು ಮುನ್ನುಡಿಯ ಮೂಲಕ ಇದೇ ಮಾತುಗಳನ್ನು ಬರೆದಿದ್ದರೆ ಆಗ ಅದು ಬೇರೆಯ ಮಾತು.(ಅನಂತಮೂರ್ತಿ, ಸಿದ್ದಯ್ಯ, ತಮ್ಮ ಸಂಕಲನಗಳಿಗೆ ಬರೆದುಕೊಂಡಿರುವ ಸಾಲುಗಳನ್ನು ಗಮನಿಸಿ). ಆದರೂ ಮಂಜುನಾಥ್ ಇವತ್ತು ಬರೆಯುತ್ತಿರುವ ಕವಿಗಳಲ್ಲೇ ಭಿನ್ನವಾಗಿ ನಿಲ್ಲುತ್ತಾರೆ ಮತ್ತು ನಿರಂತರ ಕಾವ್ಯ ಪ್ರಯೋಗಕ್ಕೆ ತಮ್ಮನ್ನು ಒಪ್ಪಿಸಿಕೊಂಡಿದ್ದಾರೆ ಅನ್ನುವುದರಲ್ಲಿ ಯಾವ ಅನುಮಾನಗಳೂ ಇಲ್ಲ.ಒಂದು ಬಗೆಯ ವಿಷಾದ ಇಲ್ಲಿನ ಪದ್ಯಗಳಿಗೆ ಶೃತಿಯಾಗಿದೆ. ಮರಾಠಿಯಲ್ಲಿ ಕಳೆದ ದಶಕದಲ್ಲಿ ಆತ್ಮ ಚರಿತ್ರೆಗಳು ಸುದ್ದಿ ಮಾಡಿದ ಹಾಗೇ ಈ ಬಗೆಯ ಪದ್ಯಗಳು (ಎಚ್.ಎಸ್.ವಿ ಯವರ ಉತ್ತರಾಯಣ ನಾ.ಮೊಗಸಾಲೆಯವರ ಇಹಪರದ ಕೊಳ) ಪ್ರ್ರಾಯಶಃ ಇನ್ನು ಮುಂದೆ ಹೆಚ್ಚುಹೆಚ್ಚಾಗಿ ಪ್ರಕಟವಾಗಲಿವೆಯಾ ಎಂಬ ಅನುಮಾನವೂ ಕಾಡುತ್ತಿದೆ. ಮನದ ಬನದಲ್ಲಿ ಹೆಜ್ಜೆಯಿಕ್ಕಿದ ನವಿಲೆ (ಮಗಳಿಗೆ) ಅಂಜಿ ನಡುಗಿರಬೇಕು ಪಟದ ದೇವರುಗಳೆಲ್ಲ (ಅಣ್ಣನ ರೋಷಾವೇಷ) ಅಂಗಾಲ ಮುದ್ದಿಸಿದ ಮಳೆ ಬಿದ್ದ ಹೂಮಣ್ಣು (ಊರಿದ ಬೇರಿನ ಗುಂಟ) ಅಂಗೈಯ ಆಕಾಶದಲಿ ಹೊಳೆವ ನಕ್ಷತ್ರ (ಆ ಮುದ್ದು ಕವಚ)ದಂಥ ಸಾಲುಗಳು  ಹಾಗೂ ೩೩ ಮತ್ತು ೩೪ನೆ ಪದ್ಯಗಳು ಕವಿ-ಪತ್ನಿ ಮತ್ತು ಮಗಳ ಕುರಿತು ಬರೆದದ್ದು ಖುಷಿಗೊಳಿಸುತ್ತವೆ. ಮಂಜುನಾಥರ ಪ್ರತಿಭೆಗೆ ತಲೆದೂಗಿಸುತ್ತವೆ. &lt;br /&gt;‘ಜಾತ್ರೆಯಲ್ಲಿ ಶಿವ’ ಸಂಕಲನದಲ್ಲಿ ತಮ್ಮ ಕಾವ್ಯ ಮಾರ್ಗವನ್ನು ತಾವೇ ಮೀರಿದ ಸವಿತಾ ನಾಗಭೂಷಣ ಇದೀಗ ‘ದರುಶನ’ ಪ್ರಕಟಿಸಿದ್ದಾರೆ. ಉದ್ದುದ್ದದ ಭಾಷಣಕ್ಕೋ, ಕಂಡರಿಯದ ಆಧ್ಯಾತ್ಮಕ್ಕೋ ತೆಕ್ಕೆಬೀಳದೇ ಸಹಜ ಲಯ ಮತ್ತು ವಾಸ್ತವದ ಸಣ್ಣ ಪುಟ್ಟ ಪ್ರತಿಮೆಗಳಲ್ಲೇ ತಮ್ಮ ಕಾವ್ಯವನ್ನು ಕಟ್ಟುತ್ತಾರೆ. ಬಾಲ್ಯ, ಅಮ್ಮನ ನೆನಪು, ಪ್ರೀತಿ ಇವುಗಳ ನಡುವೆಯೇ ಬುದ್ಧ, ಗಾಂಧಿ ಕೂಡ ನಸುನಗುವುದು ಈ ಸಂಕಲನದ ವಿಶೇಷ. ಕೆಲವು ಪದ್ಯಗಳು ನೀತಿಪಾಠವಾಗಿ ಬದಲಾಗುವುದು ಏಕೋ ಕವಿಯೇ ಉತ್ತರಿಸಬೇಕು. ‘ಗುಜರಾತ್‌ಗೆ ಕವಿ ಸ್ಪಂದನ’ ಈ ಸಂಕಲನದ ಹೈಲೈಟ್. ಸಂಕಲನಕ್ಕಾಗುವಷ್ಟು ಪದ್ಯಗಳಾದೊಡನೆಯೇ ಪ್ರಕಟಿಸಿಬಿಟ್ಟರೆ ಜೊಳ್ಳು-ಕಾಳು ಎರಡರ ಮಿಶ್ರಣವೂ ಆಗುತ್ತೆ ಅನ್ನುವುದಕ್ಕೆ ಕೂಡ ಈ ಸಂಕಲನ ಸಹಜ ಉದಾಹರಣೆ. &lt;br /&gt;ಅಮೃತಮತಿಯ ಸ್ವಗತವನ್ನು ಗಾಜುಗೋಳದ ಮೂಲಕ ಹಾಯಿಸಿದ್ದ ಎಚ್.ಎಲ್.ಪುಷ್ಪ ‘ಲೋಹದ ಕಣ್ಣು’ ತೆರೆದು ಹೊಸ ಕವಿತೆಗಳನ್ನು ಬರೆದಿದ್ದಾರೆ. ಅಲ್ಲಮನ ಪ್ರಭಾವಲಯದ ರೂಪಕಗಳಲ್ಲೇ ಬದುಕನ್ನು ಚಿತ್ರಿಸುವ ಪರಿ ಬೆರಗಾಗಿಸುತ್ತದೆ. ಈಗಾಗಲೇ ತಮಗೆ ಸಿದ್ಧಿಸಿದ ಮಾರ್ಗಗಳಲ್ಲೇ ಅನ್ಯ ಕವಯತ್ರಿಯರು ದಾಪುಗಾಲಿಡುತ್ತಿರುವಾಗ ಈಗಲೂ ಪುಷ್ಪ ಆತಂಕದಲ್ಲಿ ಆಧ್ಯಾತ್ಮವನ್ನರಸುತ್ತಿರುವುದು ವಿಶೇಷವೆನ್ನಿಸುತ್ತದೆ. ಸಂಕಲನದ ತುಂಬ ಸಾರ್ಥಕ ಕವಿತೆಗಳಿರುವುದು, ಒಂದು ಪಾತಳಿಗೆ ಸಿಲುಕದೇ ಆ ಎಲ್ಲ ಕವಿತೆಗಳೂ ತಮಗಿರದ ನೆಲೆಯನ್ನು ಕುರಿತೇ ಶೋಧಿಸುತ್ತಿರುವುದೂ ಹೆಚ್ಚುಗಾರಿಕೆ. ‘ಮಳೆಯ ಜಾಡಿನಲ್ಲಿ ಡಾಂಟೆ ಇತ್ಯಾದಿ’ ನಿಜದ  ಪ್ರಯೋಗ. ಜಂಭದ ಗಾಳಿಕುದುರೆಗೆ ತಿಳಿದಿರಲಿ/ಬಯಲಿಗೆ ಬಯಲು ಎಂದೂ ಜೊತೆಯಲ್ಲವೆಂದು ಎನ್ನುವ ಅರಿವಿರುವ ಕವಿ ಕರುಣೆಯ ಕಣ್ಣು ತೆರೆದಲ್ಲದೆ/ಈ ತನು, ತನುವಿನ ಭವ ಹಿಂಗದು ಎನ್ನುತ್ತಾರೆ. ಅಪ್ಪಳಿಸುವ ಅಲೆಯೆದುರು/ವಿಳಾಸವಿಲ್ಲದ ನಾನು ತಬ್ಬಿಬ್ಬಾಗಿದ್ದೇನೆ/.. ../ಮಾರ್ದನಿಯಿಲ್ಲದ ಪುಟ್ಟ ಹಕ್ಕಿ ಎಂದೂ ಸಂತೈಸಿಕೊಳ್ಳುತ್ತಾರೆ. ಕನ್ನಡ ಕಾವ್ಯದಲ್ಲಿ ಇತ್ತೀಚೆಗೆ ಹೆಚ್ಚಾಗುತ್ತಿರುವ ಆಧ್ಯಾತ್ಮದ ಹುಡುಕುವಿಕೆ ಇಲ್ಲಿನ ಪದ್ಯಗಳ ಮೂಲಕೇಂದ್ರ. ಆತ್ಮ ಸಂಗಾತಕ್ಕೆ ನೀನುಂಟು, ಏಕಲವ್ಯನೆಂಬ ಗುರುವಿಗೆ, ದಾರಿ ಕಳಕೊಂಡಿದೆ ಕವಿತೆ, ನದೀಮುಖ, ಕುಣಿವ ನವಿಲುಗಳು ಮುಂತಾದ ಪದ್ಯಗಳು ಪುಷ್ಪ ಅವರು ಶೋಧಿಸುತ್ತಿರುವ ಲೋಕದ ದಾರಿಗೆ ಇಡುತ್ತಿರುವ ಹೆಜ್ಜೆಗಳ ಕುರುಹಾಗಿ ತೋರುತ್ತವೆ.&lt;br /&gt;‘ಚಂದ್ರಮತಿಯ ಮಾಂಗಲ್ಯ’ ಎನ್ನುವ ಅದ್ಭುತ ರೂಪಕವನ್ನೇ ಹೆಸರಾಗಿಸಿರುವ ಸ್ವಾಮಿನಾಥರ ನಾಲ್ಕನೇ ಸಂಕಲನದಲ್ಲಿರುವ ೪೮ ಪದ್ಯಗಳಲ್ಲಿ ನವೋದಯ, ನವ್ಯ ಮತ್ತು ಬಂಡಾಯದ ಮಿಶ್ರಣವಿದೆ. ‘ಪಂಚಭೂತ’ದಂಥ ಸರಳ ಲಯದೊಟ್ಟಿಗೇ ‘ರಕ್ಕಸ ಮತ್ತು ರಾಜಕುಮಾರಿ’ಯಂಥ ಕಥನ ಕವನಗಳನ್ನೂ ಅವರು  ಬರೆಯಬಲ್ಲರು. ಬಿ.ಸಿ.ರಾಮಚಂದ್ರ ಶರ್ಮ ಹಾಗೂ ಜಿ.ಎಸ್.ಶಿವರುದ್ರಪ್ಪನವರ ಕವಿತೆಗಳ ಓದು ಈ ಕವಿಯ ಹಲವು ರಚನೆಗಳಿಗೆ ಸ್ಪೂರ್ತಿ ನೀಡಿವೆ. ತಕ್ಷಣಕ್ಕೇ ಕತ್ತಲಲ್ಲಿ ಫಳಫಳ ಹೊಳೆಯುವ ತಾಳಿ/ಕೊಳೆತಿತ್ತು ಕಾಲನ ಕಾಲು/ನಕ್ಕಿತ್ತು ಕಾಮನ ಬಿಲ್ಲು/ನುಡಿದಿತ್ತು ಕೊರಳು ಕಾಲದಷ್ಟೇ ಸತ್ಯ-ಕಾವ್ಯ ಸತ್ಯವನ್ನು ನವ್ಯದ ಪ್ರತಿಮೆಗಳಲ್ಲಿ ಹಿಡಿದಿಡುವ ಕವಿಗೆ ಭೇಷ್ ಅನ್ನಲೇಬೇಕಾಗುತ್ತದೆ.&lt;br /&gt;‘ಎಡವಟ್ಟು ಬದುಕಿನ ಲಯಗಳು’ ಎನ್ನುವ ಕ್ಯಾಚೀ ಹೆಸರಿನ ಸಂಕಲನದ ಮೂಲಕ ಕಾವ್ಯಲೋಕ ಪ್ರವೇಶಿಸಿದ್ದ ಎಚ್.ಆರ್.ರಮೇಶ ‘ಸಾಸುವೆ ಹೂವ ಚರಿತ’ ಎನ್ನುವ ಸಾಮಾನ್ಯ ಹೆಸರಿಗೇಕೆ ಸೋತರೋ ಗೊತ್ತಾಗುತ್ತಿಲ್ಲ. ಸಾಸುವೆ ಅಂದ ಕೂಡಲೇ ನೆನಪಾಗುವ ಬುದ್ಧ ಈ ಸಂಕಲನದ ತುಂಬೆಲ್ಲ ಓಡಾಡಿದ್ದಾನೆ. ಎಲ್ಲ ಹೊಸತು ಎನ್ನುವ ಹಾಗೆ ಬರೆಯುತ್ತಿರುವವರಲ್ಲಿ ಎಚ್.ಆರ್.ರಮೇಶ ಒಬ್ಬರು.   ಕವಿತೆ ಅರ್ಥಪೂರ್ಣವಾಗಿದ್ದರೆ ಮಾತ್ರ ಕಾಲದೇಶವನ್ನು ಮೀರಿ ನಿಲ್ಲುತ್ತೆ ಎನ್ನುವ ಅರಿವಿರುವ ಕವಿ ಹಳೆಯ ರೂಪಕಗಳನ್ನು ಫ್ರಿಜ್ಜಲ್ಲಿಟ್ಟು/ಫ್ರೆಶ್ ಆಗಿ ಅರ್ಪಿಸಲಾರೆ/ಇದೋ ಇಲ್ಲಿ ಬಿದ್ದಿರುವ ಕಲ್ಲನ್ನೇ ಎತ್ತಿ/ಕೊಡುವೆ ಅಂತ ಮೊದಲ ಪದ್ಯದಲ್ಲೇ ಕುತೂಹಲ ಹುಟ್ಟಿಸುತ್ತಾರೆ. ಸಂಕಲನದ ತುಂಬ ಒಟ್ಟಂದಕ್ಕಂಟದೇ ಅಲ್ಲಿಲ್ಲಿ ಚದುರಿ ಹೋಗಿರುವ ಪದ್ಯದ ವಸ್ತುಗಳು ವಿಕ್ಷಿಪ್ತಮನಸ್ಸನ್ನೇ ಎತ್ತಿ ತೋರುತ್ತವೆ. ಜೈವಿಕ ವಿವರಗಳನ್ನು ಒದಗಿಸುತ್ತಲೇ ಕಾವ್ಯವನ್ನು ಧೇನಿಸುವುದು ಈ ಕವಿಗೆ ಒಗ್ಗಿರುವ ಸಂಗತಿ.ಕವಿಯೊಬ್ಬ ತನಗೆ ತಾನೇ ಆಡಿಕೊಂಡ ಮಾತುಗಳು ಓದುಗನ ಮಾತುಗಳೂ ಆದಾಗ ಕಾವ್ಯ ಯಶಸ್ವಿಯಾಗುತ್ತೆ. ಅಂಥ ಯಶಸ್ಸಿನಲ್ಲೀಗ ರಮೇಶ ಇದ್ದಾರೆ. ಅನಂತಮೂರ್ತಿಯವರ ಮುನ್ನುಡಿ ಕೂಡ ರಮೇಶರ ಕಾವ್ಯಕಸುಬನ್ನು ಉದ್ದೀಪಿಸಿದೆ. &lt;br /&gt;ಸಂತೋಷ ಚೊಕ್ಕಾಡಿಯವರ ‘ನಿನ್ನ ರಾಗವ ಹುಡುಕು’ ಅವರ ಕಾವ್ಯ ಯಾತ್ರೆಯ ಮೂರನೆಯ ಕುಸುಮ. ಹೊಸ ಪ್ರಯೋಗಗಳಿಗೆ ಹೋಗದೇ ಸಹಜ ಸರಳ ಲಯಗಳಲ್ಲೇ ತಮ್ಮ ಕವಿತೆಗಳನ್ನು ಆಗಿಸುವ ಚೊಕ್ಕಾಡಿಯವರ ಹಲವು ರಚನೆಗಳು ಸುನೀತದ ರೂಪದಲ್ಲಿವೆ. ಮಗಳಿಗೆ ಅನ್ನುವ ಪದ್ಯ ಜಗದ ಎಲ್ಲ ಅಪ್ಪಂದಿರ ಬಯಾಗ್ರಫಿಯಂತಿದೆ ಎನ್ನುವುದು ಉತ್ಪ್ರೇಕ್ಷೆಯಲ್ಲ. ಕಾಯಬೇಕು ಕವಿತೆಗೆ, ಕವಿತೆಯ ಹಾದಿ, ಕವಿತೆ, ನಿನ್ನ ರಾಗವ ಹುಡುಕು, ದಿನದ ಯಾತ್ರೆ ಈ ಕವಿ ಕಾವ್ಯಕ್ಕೆ ಬರೆದ ಭಾಷ್ಯದಂತಿವೆ. ಸ್ವರ್ಗ ಕಾಮ, ಗಾಢ ಮೌನದ ಇರುಳು  ಬಹಳ ಕಾಲ ಮನಸ್ಸಲ್ಲುಳಿಯುವ ರಚನೆಗಳು. ಸಂಕಲನದ  ಪರಿವಿಡಿಯಲ್ಲಿ ಪುಟ ಸಂಖ್ಯೆ ಇರದಿರುವುದು, ಸಗಟು ಖರೀದಿಗಾಗಿ ಪ್ರಕಟಣೆಯ ವರ್ಷವನ್ನೇ ಹಿಂದಕ್ಕೋ-ಮುಂದಕ್ಕೋ ಬದಲಾಯಿಸಿರುವುದೂ, ಕವನಸಂಕಲನಗಳಿಗೆ ಇರುವ ಪ್ರಕಾಶಕರ ಬರವನ್ನು ಸಾಬೀತು ಪಡಿಸುತ್ತದೆ.&lt;br /&gt;‘ಚುಕ್ಕಿ’ ಸಂಕಲನದ ಮೂಲಕ ಹೆಸರು ಮತ್ತು ಖ್ಯಾತಿಗಳನ್ನು ಕಂಡುಕೊಂಡ ಜ್ಯೋತಿ ಗುರುಪ್ರಸಾದ್ ತಮ್ಮ ಎರಡನೆಯ ಸಂಕಲನ ‘ಮಾಯಾ ಪೆಟ್ಟಿಗೆ’ ತೆರೆದಿಟ್ಟಿದ್ದಾರೆ. ೯೦ ಪದ್ಯಗಳನ್ನು ಈ ಸಂಕಲನದಲ್ಲಿ ಅಡಕಿರಿದಿದ್ದರೂ ಬಹು ಕಾಲ ಮನಸ್ಸಲ್ಲಿ ನಿಲ್ಲುವ ರಚನೆಗಳು ಬಹಳ ಕಡಿಮೆ. ಹೆಸರಿಗಷ್ಟೇ ಮಾಯಾಪೆಟ್ಟಿಗೆ ತೆರೆದರೆ ಅವೇ ಅವೇ ಹಳೆಯ ಹಲುಬಿಕೆಗಳ ಆಗರ. ಜೊತೆಗೆ ಕವನ ರಚನೆ ಇಷ್ಟು ಸಲೀಸಾದ ಕೆಲಸವಾಗಿಬಿಟ್ಟರೆ, ಕೂತಲ್ಲಿ ನಿಂತಲ್ಲಿ ಅಧ್ಯಾತ್ಮದ ಹೊಳಹು ಮಿಂಚಿದರೆ, ಕಾವ್ಯ ಕ್ರಿಯೆಯ ಮೇಲೇ ಸಂಶಯಗಳು ಹುಟ್ಟುತ್ತವೆ. ಜೊತೆಗೆ ಸರಳವಾಗಿರುತ್ತವೆ ಎಂಬ ಕಾರಣಕ್ಕೆ ಎಲ್ಲ ಪತ್ರಿಕೆಗಳಲ್ಲೂ ಇಂಥ ರಚನೆಗಳೇ ವಿಜೃಂಭಿಸುತ್ತಿರುವುದನ್ನೂ ವಿಷಾದದಿಂದಲೇ ನೋಡಬೇಕಾಗಿದೆ. ಈಗಂತೂ ಪತ್ರಿಕೆಗಳ ಸಾಪ್ತಾಹಿಕಗಳಲ್ಲಿ, ಮಾಸಿಕ, ವಾರಪತ್ರಿಕೆಗಳಲ್ಲಿ ಮೇಲಿಂದ ಮೇಲೆ ಕಾಣಿಸಿಕೊಳ್ಳುವ ಕೆಲವು ಹೆಸರುಗಳು ಬೇಕೆಂತಲೇ ಆಧ್ಯಾತ್ಮಿಕ ತುಡಿತ, ಬುದ್ಧ ಅಲ್ಲಮ ಜೋಗಿ ಫಕೀರ ಜಂಗಮ ಸೂಫಿ ಮೊದಲಾದವರ ಜೊತೆಗಿನ ಅನುಸಂಧಾನವೆಂಬಂತೆ ತಮ್ಮ ಕವಿತೆಗಳನ್ನು ನೇಯುತ್ತಿದ್ದರೂ, ಮೇಲ್ನೋಟಕ್ಕೆ ಅವು ಸಾಧುವೆಂದೆನಿಸಿದರೂ, ಇವರೆಲ್ಲ ವರ್ತಮಾನದಲ್ಲಿ ಕಾಡುತ್ತಿರುವ ಸಮಸ್ಯೆಗಳಿಂದ ಪಲಾಯನ ಮಾಡಿರುವುದರ ಕುರುಹಾಗಿ ತೋರುತ್ತದೆ. ನಗರ ಕೇಂದ್ರಿತ ಸಮಸ್ಯೆಗಳು, ನಿಲ್ಲದ ವರ್ಗ ವರ್ಣಗಳ ಮೇಲಾಟಗಳು, ಹಿಂಸೆಯ ಬದಲಾಗುತ್ತಿರುವ ಮುಖಗಳು ನಮ್ಮ ಕವಿಗಳನ್ನು ಕಾಡದೇ ಇದೆಯೇ ಅಥವ ಅವರೆಲ್ಲ ಲೌಕಿಕದಿಂದ ದಿವಂಗತರಾಗಿದ್ದಾರೆಯೇ ಎನ್ನುವುದೂ ಇಲ್ಲಿ ಮುಖ್ಯ ಪ್ರಶ್ನೆಯಾಗಿದೆ. &lt;br /&gt;ಆದರೂ ಮುನ್ನುಡಿಯ ಮೂಲಕ ಹೊಸಬರ ಬಗ್ಗೆ ತುಂಬು ಭರವಸೆಯ ಮಾತುಗಳನ್ನಾಡುವವರಂತೆ ಅನಂತಮೂರ್ತಿ ಕಂಡರೂ ಇಂಥ ಬರಹಗಳಲ್ಲೂ ಅವರೇ ಮುಂಚೂಣಿಗೆ ನಿಂತು ಹೊಸಬರ ಬಗ್ಗೆಯ ಮಾತೂ ಅವರಿಗೆ- ಅವರೊಪ್ಪಿದ ಸಿದ್ಧಾಂತ ಮತ್ತು ಮೌಲ್ಯಗಳ ಪ್ರತಿಪಾದನೆಯ ಸ್ವತ್ತಾಗುತ್ತದೇ ವಿನಾ ಮುನ್ನುಡಿ ಬಯಸಿದವರ ಕಾವ್ಯ ಪ್ರಖರತೆಯನ್ನಳೆಯುವ ಸಾಧನವಾಗುವುದಿಲ್ಲವೆಂಬುದನ್ನೂ ಗಮನಿಸಬೇಕು. ಜೊತೆಗೇ ಅನಂತಮೂರ್ತಿಯವರಂಥ ಹಿರಿಯರು ಕಿರಿಯರನ್ನು ಪ್ರೋತ್ಸಾಹಿಸಬೇಕೆನ್ನುವ ಏಕೈಕ ಉದ್ದೇಶದಿಂದ ತೀರ ಧಾರಾಳವಾಗಿಬಿಟ್ಟರೂ ಸೂಕ್ಷ್ಮವನ್ನಿರಿಯದ ಈ ಕಿರಿಯರು ತಾವೇ ‘ಕವಿಶ್ರೇಷ್ಠ’ರೆಂದು ಭಾವಿಸುವ ಅಪಾಯವೂ ಇರುತ್ತದೆ. ವ್ಯಕ್ತಿಗತ ಪರಿಚಯಗಳನ್ನೇ ಮುನ್ನುಡಿಯ ಮಾನದಂಡಗಳನ್ನಾಗಿಸಿಕೊಳ್ಳಬೇಡಿ ಅಂತ ಹಿರಿಯರಿಗೆ ಹೇಳುವುದೂ ಅಸಾಧ್ಯದ ಮಾತು! ಸಂಧ್ಯಾದೇವಿಯವರ ಅದ್ಭುತ ಸಂಕಲನ ಪ್ರಕಟಿಸಿದ್ದ ‘ಕಾವ್ಯಮಂಡಲ’ ಮಾಯಾಪೆಟ್ಟಿಗೆಯಲ್ಲಿ ಏನು ವಿಶೇಷ ಕಂಡುಕೊಡಿತೋ ಆ ಸಂಸ್ಥೆಯೇ ಹೇಳಬೇಕು.&lt;br /&gt;‘ಕವಿತೆಗೆ ಬೆಂಕಿ ಬಿತ್ತು’ ವಿಲಕ್ಷಣ ಹೆಸರಿನ  ಸಂಕಲನ ಪ್ರಕಟಿಸಿದ್ದ ಚಂ.ಸು.ಪಾಟೀಲ ‘ಅದಕ್ಕೇ ಇರಬೇಕು’ ಅನ್ನುವ ಸಾಮಾನ್ಯ ಹೆಸರನ್ನು ತಮ್ಮ ಹೊಸಸಂಕಲನಕ್ಕಿಟ್ಟಿದ್ದಾರೆ. ಪುಸ್ತಕವನ್ನು ಬೇಕಾಬಿಟ್ಟಿ ಪ್ರಕಟಿಸುವ ಪ್ರಕಾಶಕರಿಗೆ ಉದಾಹರಣೆ ಈ ಪುಸ್ತಕ. ಪದ್ಯಗಳಿಗೆ ಪರಿವಿಡಿಯೇ ಇಲ್ಲದಂತೆ ಪ್ರಕಟಿಸಿರುವುದು ಅಕ್ಷಮ್ಯ. ಮುನ್ನುಡಿ ಇಲ್ಲದೇ ಪುಸ್ತಕಗಳನ್ನು ಪ್ರಕಟಿಸುವುದು ಕೆಲವರ ಶೈಲಿಯಾದರೆ ತಮ್ಮ ಸಮಕಾಲೀನರಿಂದ ಒಳ್ಳೆಯ ಮಾತು ಬರೆಸುವ ಸುಲಭೋಪಾಯ ಕೆಲವರದು. ಇಲ್ಲೂ ಹಾಗೇ ಹೆಚ್ಚು ನಿಕಷಕ್ಕೊಡ್ಡದೇ ಪಿ.ಚಂದ್ರಿಕಾ ತಮ್ಮ ಕೆಲಸವನ್ನು ನಿಭಾಯಿಸಿದ್ದಾರೆ. ಹಲವು ಹೇಳಿಕೆಗಳಲ್ಲೇ ಕವಿತೆಗಳನ್ನು ಆಗಿಸುವ ಪಾಟೀಲರು ಪ್ರಾಸಕ್ಕೇ ಗಂಟುಬೀಳುತ್ತಾರೆ. ‘ಅದಕ್ಕೇ ಇರಬೇಕು’ ಅನ್ನುವ ಪದ್ಯ ಹೊಸ ವಿಸ್ತರಣಕ್ಕೆ ಕೈ ಇಟ್ಟಿರುವುದರ ಭರವಸೆಯ ಸಂಕೇತ.&lt;br /&gt;‘ನೇಕಾರ’ ಎನ್ನುವ ಕಾಯಕದ ದೀಕ್ಷೆ ಹಿಡಿದು ಕವನ ಸಂಕಲನವಾಗಿಸಿದ್ದ ಆಲೂರು ದೊಡ್ಡನಿಂಗಪ್ಪ ಹೊಸ ಸಂಕಲನ ‘ಮುಟ್ಟು’ ತಂದಿದ್ದಾರೆ. ಅಲ್ಲಮನ ಬೆಡಗಿನ ವಚನಗಳನ್ನು ತಮ್ಮ ಕಾವ್ಯಾಭಿವ್ಯಕ್ತಿಯ ಅನುಕೂಲಕ್ಕೆ ಬಳಸಿಕೊಳ್ಳುವ ಆಲೂರು ರಂಗಭೂಮಿಯೊಂದಿಗಿನ ತಮ್ಮ ಸಂಬಂಧವನ್ನೂ ಕವಿತೆಯಾಗಿಸುತ್ತಾರೆ. ತತ್ವಪದಕಾರರೂ ಆಗೀಗ ಇವರ ಕವಿತೆಗಳೊಳಕ್ಕೆ ಇಳಿಯುವುದು ಹಾಗೇ ಕವಿ ಓದುಗನನ್ನು ತನ್ನೊಳಗನ್ನು ಮುಟ್ಟು ಎಂದು ಪ್ರಾರ್ಥಿಸುತ್ತಿರುವುದೂ ಮೊದಲ ಓದಿಗೇ ಶೃತವಾಗುತ್ತದೆ. ಮೊದಲ ಓದಿಗೆ ಥಟ್ಟನೆ ಅರ್ಥವಾಗದ ಆದರೆ ಆಕರ್ಷಣೆ ಕಳೆದುಕೊಳ್ಳದ ರಚನೆಗಳ ಬಗ್ಗೆ ಕವಿ ಯೋಚಿಸುವುದು ಒಳಿತು. ಸಮುದ್ರವೇ ಉರಿಯುತಿಹುದು/ಮೀನು ಮೊಸಳೆ ಮರ ಏರಿಹುದ ಕಂಡೆ/ಉರಿವ ಬೆಂಕಿ ನಂದಿಸಲು/ನೆಲ್ಲುಲ್ಲು ಭಾದೆ ಖಾಲಿ ಖಾಲಿ ಸಾಲುಗಳಲ್ಲಿ ಅಲ್ಲಮನನ್ನು ಮೈಮೇಲೇರಿಸಿಕೊಂಡಂತೆ ಕವಿ ಕಾಣುತ್ತಾರೆ.&lt;br /&gt;ಈ ವರ್ಷ ಮೊದಲ ಸಂಕಲನ ಪ್ರಕಟಿಸಿದವರಲ್ಲಿ ಹಿರಿಯರು ಕಿರಿಯರೂ ಇದ್ದಾರೆ. ಕತೆಗಾರ್ತಿಯಾಗಿ ಈಗಾಗಲೇ ಪ್ರಸಿದ್ಧರಾಗಿರುವ ಸುನಂದಾ ಪ್ರಕಾಶ ಕಡಮೆಯವರ ‘ಸೀಳುದಾರಿ’, ಅವರ ಕತೆಗಳಂತೆಯೇ ನವಿರುತನ ಮತ್ತು ಖಾಸಗಿ ಅನುಭವಗಳ ಅನಾವರಣದ ಕಾರಣದಿಂದಾಗಿ ಮನಸೆಳೆಯುತ್ತದೆ. ಬೆಂಗಳೂರು ಬಿಟ್ಟು ಉಳಿದ ಕಡೆ ಮುದ್ರಣಗೊಂಡ ಪುಸ್ತಕಗಳಲ್ಲಿ ಕಣ್ಣಿಗೆ ಹಿತವಾದ ಫೋಂಟ್‌ಗಳನ್ನು ಬಳಸದ ಮತ್ತು ವಿನ್ಯಾಸದಲ್ಲಿ ಹೊಸತನ ಕಾಣಿಸದ  ಕಾರಣ ಆ ಪುಸ್ತಕಗಳ ಓದಿಗೆ ಸ್ವಲ್ಪ ಕಷ್ಟಪಡಲೇಬೇಕಾಗುತ್ತದೆ. ಈ ಸಂಕಲನಕ್ಕೂ ಈ ತೊಂದರೆ ಬಾಧಿಸಿದೆ. ‘ಏಣಿ ಗೀಣಿ ಮುಟ್ಟದೇನೇ/ನಿಲುಕಬೇಕು ನಕ್ಷತ್ರ ಇಲ್ಲೇ’ ಎನ್ನುವ ಕವಿಗೆ ಪುಟ್ಟರೆಕ್ಕೆಗಿರುವ ಭಾರ ಜೀವದ ಅರಿವು ಇರುವದರಿಂದಲೇ ಸಂಕಲನದ ಕವಿತೆಗಳು ಅಪ್ಪಟ ವೈಯುಕ್ತಿಕ ಅನ್ನಿಸಿಕೆಗಳಾಗಿದ್ದೂ ಕವಿತೆಗಳಾಗುವಲ್ಲಿ ಯಶಸ್ವಿಯಾಗಿವೆ.   ಎಂ.ಎಸ್.ರುದ್ರೇಶ್ವರ ಸ್ವಾಮಿ ‘ಪ್ರೀತಿ ಮತ್ತು ನೀರು’ ಅವರ ಮೊದಲ ಸಂಕಲನ ಹೌದೋ ಅಲ್ಲವೋ ಅನ್ನುವ ಅನುಮಾನ ಹುಟ್ಟಿಸುತ್ತಾರೆ. ಬೆಳಕಿನಲ್ಲಿ ಕಂಡದ್ದೆಲ್ಲ ಅರ್ಥವಾಗುವುದಿಲ್ಲ ಅನ್ನುವ ಮಾರ್ಮಿಕ ಹೇಳಿಕೆಯಲ್ಲಿ ಕವಿತೆಯನ್ನರಳಿಸಿ ಸೋಜಿಗ ಹುಟ್ಟಿಸುವ ಈ ಸಂಕಲನದಲ್ಲಿ ಕಲಾವಿದ ಮನೋಹರ್‌ರ ಚಿತ್ರಗಳನ್ನು ಹಿತವಾಗಿ ಬಳಸಿಕೊಂಡಿರುವುದು ಖುಷಿ ತರುತ್ತದೆ. ಮೊದಲನೆಯ ಓದಿಗೆ ಹಿತವೆನ್ನಿಸಿದರೂ ಮರು ಓದಿನಲ್ಲಿ ಸಂಕಲನದ ಕವಿತೆಗಳು ಶೋಕೇಸಿನ ಬೊಂಬೆಗಳಂತೆ ಕಾಣತೊಡಗುತ್ತವೆ.&lt;br /&gt;ಬಹಳ ತಡವಾಗಿ ಸಂಕಲನ ತಂದಿರುವ ಕೆ.ಎಸ್.ಶ್ರೀನಿವಾಸಮೂರ್ತಿ ತಮ್ಮ ‘ಸೈಟಾದರೂ ಬೇಡವೇ ಸ್ವಾಮಿ ನಮಗೆ’ಎನ್ನುವ ಹೆಸರಿನ ಸಂಕಲನದ ತುಂಬ ಅಯೋವಾವನ್ನು, ಅಲ್ಲಿನ ಬದುಕನ್ನೂ ಚಿತ್ರಿಸಿದ್ದಾರೆ. ರಾಮಾನುಜನ್ ಅವರ ಕೆಲವು ಕವಿತೆಗಳನ್ನು ನೆನಪಿಸುವ ಶಕ್ತಿ ಇಲ್ಲಿನ ಪದ್ಯಗಳಿಗಿದ್ದರೂ, ಹೊಸ ಪರಿಭಾಷೆಯಲ್ಲಿ ಕನ್ನಡ ಕಾವ್ಯವನ್ನು ಕಟ್ಟುತ್ತಿರುವ ಪ್ರಸ್ತುತ  ಸಂದರ್ಭದಲ್ಲಿ ಪ್ರಾಯಶಃ ಶ್ರೀನಿವಾಸಮೂರ್ತಿಯಂಥವರ ಪ್ರಯೋಗಗಳು ಗಮನಿಸುವವರಿಲ್ಲದಂತಾಗುವ ಅವಸ್ಥೆ ಇಂದಿನದು.&lt;br /&gt;ಪತ್ರಿಕೆಗಳಲ್ಲಿ ಪ್ರಕಟವಾಗುವ ತಮ್ಮ ಕವಿತೆಗಳ ಮೂಲಕ ಈಗಾಗಲೇ ಪರಿಚಿತರಾಗಿರುವ ಆರಿಫ್ ರಾಜರ ‘ಜಂಗಮ ಫಕೀರನ ಜೋಳಿಗೆ’ ಸಂಕಲನದ ಮುನ್ನುಡಿಯಲ್ಲಿ ಎಚ್.ಎಸ್.ಶಿವಪ್ರಕಾಶ್ ಇವತ್ತಿನ ಕವಿಗಳ ಮಿತಿಗಳನ್ನು ವಿಶ್ಲೇಷಿಸುತ್ತಲೇ ಆರಿಫ್ ಮುಸ್ಲಿಂತನವನ್ನು ಕವಿತೆಯಾಗಿಸುತ್ತಿದ್ದಾರೇ ಹೊರತು ಕಾವ್ಯವನ್ನು ಇಸ್ಲಾಂ ಧರ್ಮಕ್ಕೆ ಸೇರಿಸುತ್ತಿಲ್ಲ ಎನ್ನುವ ಎಚ್ಚರಿಕೆಯ ಮಾತುಗಳನ್ನಾಡಿದ್ದಾರೆ. ಕಾವ್ಯ ಬರೆಯುವವರಿಗೆ ಅತ್ಯಗತ್ಯ ಬೇಕಿರುವ ಇರುವುದರ ಮೋಹ ಮತ್ತು ಇರದುದುರ ದಾಹ ಕುರಿತ ಅವರ ಮಾತುಗಳು ಕೇವಲ ಆರಿಫ್‌ಗೆ ಮಾತ್ರವಲ್ಲದೆ ಪದ್ಯ ಬರೆಯ ಹೊರಟ ಹೊಸ ತಲೆಮಾರಿನ ಎಲ್ಲ ಕವಿಗಳಿಗೂ ಹೇಳಿದಂತಿದೆ. ದೇವರು ದೊಡ್ಡವನು/ನಿತ್ಯದ ನೀರಸದಲ್ಲೂ ನಮಗೆ ಗೊತ್ತಿಲ್ಲದಂತೆ ಆಗಾಗ/ಬಹುಮಾನಗಳನ್ನಿಟ್ಟಿರುತ್ತಾನೆ/ಆ ಅಳು ಆಲಿಸಲು ಕೆಲವೊಬ್ಬರಿಗಾದರೂ/ಕಿವಿಗಳನ್ನು ಕೊಟ್ಟಿರುತ್ತಾನೆ (ಆ ಅಳು ಈಗಲೂ ಅಲ್ಲಿ) ಸಾಲುಗಳಲ್ಲಿ ತಮ್ಮ ಮೇಲೆ ಭರವಸೆ ಇಟ್ಟುಕೊಳ್ಳಬಹುದೆಂಬ ವಿಶ್ವಾಸವನ್ನು ಆರಿಫ್ ರಾಜ ಮೂಡಿಸುತ್ತಾರೆ. ಕವಿತೆಗಳ ಶೀರ್ಷಿಕೆಗೂ ಕವಿತೆಗಳಿಗೂ ಬಳಸಿರುವ ಫಾಂಟ್‌ಗಳ ಅಳತೆಗಳಲ್ಲಿ ಹೆಚ್ಚು ವ್ಯತ್ಯಾಸವಿಲ್ಲದಿರುವುದು ಓದಿಗೆ ತೊಡಕಾಗಿದೆ. ಬದುಕಿನ ದುರಂತದ ಮುಖಗಳ ಜೊತೆಜೊತೆಗೇ ಪುಳಕದ ಕ್ಷಣಗಳನ್ನೂ ಕವಿ ದಾಖಲಿಸಿದ್ದಾರೆ. &lt;br /&gt;ತುಂಬ ಅಚ್ಚುಕಟ್ಟಾದ ಮುದ್ರಣ, ಹಿತವಾದ ಮುಖಚಿತ್ರವಿರುವ ‘ಪುಟಾಣಿ ಕೆಂಪು ಶೂ’ ಛಾಯಾ ಭಗವತಿಯವರ ಮೊದಲ ಸಂಕಲನ. ವ್ಯಕ್ತಿ ಸಂಬಂಧಗಳು ಮತ್ತು ಲಯ ಪ್ರಾಸಗಳಲ್ಲೇ ಕವಿತೆಗಳನ್ನು ನೇಯುವ ಕವಿಗೆ ಆ ಪ್ರಾಸಗಳೇ ಮಿತಿಯೊದಗಿಸಿವೆ. ಬಹುತೇಕ ಕವಿತೆಗಳ ವಸ್ತುವಾಗಿ ಕವಿಯನ್ನು ಕಾಡಿರುವ ಹೆಣ್ಣು ಮತ್ತು ಕೂಸು ಇಲ್ಲಿನ ಪದ್ಯಗಳಿಗೆ ಸುಲಭ ದಾರಿಯೊದಗಿಸಿವೆ ಅಷ್ಟೆ. ಸಂಕಲನದ ಯಶಸ್ವೀ ಪದ್ಯ ಶೀರ್ಷಿಕೆಯ ಪದ್ಯವೇ ಆಗಿದೆ, ಮತ್ತು ಬಹುಕಾಲ ಕಾಡುತ್ತದೆ ಕೂಡ.&lt;br /&gt;‘ನನಗೀಗ ಬೆಳಕಿನದೇ ಧ್ಯಾನ’ ಎಂದು ಪರಿತಪಿಸುವ ಸಿದ್ದು ದೇವರಮನಿ ‘ಬರುವ ನಾಳೆಗಳಿಗೆ ರಾತ್ರಿಗಳೇ ಇರುವುದಿಲ್ಲ’ ಎಂಬ ದೀರ್ಘ ಶೀರ್ಷಿಕೆಯ ಸಂಕಲನ ಪ್ರಕಟಿಸಿ ಪ್ರಖರ ಓಪನಿಂಗ್ ಪಡೆದುಕೊಂಡಿದ್ದಾರೆ. ಆರ್ತಗೊಂಡ ಮನಸ್ಸಿನ ಸಹಜ ಲಯದಲ್ಲಿ ಇಲ್ಲಿನ ಪದ್ಯಗಳು ಬೆಳೆದಿವೆ. ಷರೀಫಜ್ಜನನ್ನು ಗೋರಿಯಿಂದೇಳಿಸಿ ಯುದ್ಧಕ್ಕೆ ಸಿದ್ಧಗೊಂಡ ದೇಶಕ್ಕೆ ಕರೆದೊಯ್ಯುವ ಬಯಕೆಯ ಈ ಕವಿ ಅನ್ನಿಸಿದ್ದನ್ನೆಲ್ಲ ಕಾಗದಕ್ಕಿಳಿಸದೇ ಅವು ಸಾಂಧ್ರವಾಗುವವರೆಗೂ ಕಾದು ಬರೆದರೆ ಭವಿಷ್ಯದಲ್ಲಿ ಉತ್ತಮ ಕವಿತೆಗಳನ್ನು ಕೊಡಬಲ್ಲ ತಾಕತ್ತಿರುವವನು. &lt;br /&gt;ಈಗಾಗಲೇ ಸಾರಸ್ವತ ಲೋಕಕ್ಕೆ ಚಿರಪರಿಚಿತರಾಗಿರುವ ಸಂತೆಬೆನ್ನೂರು ಫೈಜ್ನಟ್ರಾಜ್ ‘ಎದೆಯೊಳಗಿನ ತಲ್ಲಣ’ಗಳನ್ನೇ ಸಂಕಲಿಸಿ ಮೊದಲ ಕೃತಿ ಹೊರತಂದಿದ್ದಾರೆ. ಹುಡುಗೀ ನಿನ್ನ ಕಣ್ಣು ಕೊಳ/ಈಜುವಾಸೆ... ಮುಳುಗುವ ಭಯ ಎಂದು ಬರೆಯುವ ಕವಿ ಕವಿತೆಯಾಗು ಎಂದಿಗೂ ಕಥೆಯಾಗಬೇಡ ಎಂಬ ಎಚ್ಚರವನ್ನು ಇಟ್ಟುಕೊಂಡವರೂ ಆಗಿರುವದರಿಂದ ಮೊದಲ ಸಂಕಲನದ ಎಲ್ಲ ಪರಿಮಿತಿಗಳ ಜೊತೆಗೇ ಸಹ್ಯವೆನ್ನಿಸುತ್ತಾರೆ. ತೋಚಿದ್ದನ್ನೆಲ್ಲ ಗೀಚದೇ ಧ್ಯಾನಿಸಿದರೆ ತಲ್ಲಣಗಳಿಗೆ  ತಹಬಂದಿ ನೀಡುವ ಉತ್ತರ ಈ ಕವಿಗೆ ಸಿಕ್ಕಾವು. ಆಗ ಅವರ ಪದ್ಯಗಳ ರೀತಿಯೂ ಬದಲಿಸೀತು.&lt;br /&gt;‘ನಿಜಕ್ಕೂ ನಿನ್ನ ಕಾಡಿದ್ದು, ನೀ ಬೇಡಿದ್ದು ಅವನೊಬ್ಬನೇನೆ?/ನಿಜ ಹೇಳು ಮುಟ್ಟು ಮೈಲಿಗೆ ಬಸಿರು ಬಾಣಂತನ ಕಾಡಲಿಲ್ಲವೇ ನಿನ್ನ?/ನಿಜದ ಅರ್ಜುನರ ರಗಳೆ ದಾಟಲಿಕ್ಕೆ ಈ ‘ಚೆನ್ನ’ನೆಂಬೋ ಅರ್ಜುನ ನೀ ತಬ್ಬಿದ ದೋಣಿ ಮಾತ್ರವೇ?’ ಎಂದು ಕೇಳುವ ಧೈರ್ಯವಿರುವ ರಶ್ಮಿ ಹೆಗಡೆ ‘ಲೆಕ್ಕಕ್ಕೆ ಸಿಗದವರು’ ಸಂಕಲನದಲ್ಲಿ ‘ಒಳಗಿನ ಸದ್ದುಗಳು ಕಾಲನೆದುರು ಶೀಲ ಕಳೆದುಕೊಳ್ಳದಿರಲಿ’ ಎಂದೂ ಪ್ರಾರ್ಥಿಸುತ್ತಾರೆ. ‘ಎಷ್ಟು ಬೇಗ ಬಣ್ಣ ಬದಲಾಯಿಸುತ್ತವೆ-ಇಲ್ಲಿ ನಂಬುಗೆಗಳು/ಜಾತ್ರೆಯಿಂದ ಆಶೆಪಟ್ಟು ತಂದ-ಬಣ್ಣದ ಗೊಂಬೆಗಳು’ ಎಂಬ ವಾಸ್ತವ ಅರಿತಿರುವವರೂ ಆಗಿರುವುದರಿಂದ ಇವರ ಮುಂದಿನ ಕವಿತೆಗಳ ಬಗ್ಗೆ ಸಹಜ ಕುತೂಹಲ ಮತ್ತು ವಿಶ್ವಾಸವಿಟ್ಟುಕೊಳ್ಳಬಹುದೆಂದು ಅವರೇ ವಿಶ್ವಾಸ ಮೂಡಿಸುತ್ತಾರೆ.&lt;br /&gt;‘ನಾನು ಗೆಲ್ಲುತ್ತೇನೆ’ ಎನ್ನುವ ಹೆಸರಿನ ಸಂಕಲನ ತಂದಿರುವ ಶ್ರೀದೇವಿ ಕೆರೆಮನೆ ಸಾಮಾನ್ಯ ಲಯ ಮತ್ತು ಪ್ರಾಸಗಳಲ್ಲೇ ಕವಿತೆಗಳನ್ನರಸುವವರು. ಹಾಗಾಗಿ ಅವರ ಪದ್ಯಗಳೆಲ್ಲ ಪ್ರಾಸದ ತ್ರಾಸದಲ್ಲಿ ಮೇಲುಸಿರು ಬಿಡುತ್ತವೆ. ದ್ರೌಪದಿ, ಮಂಥರೆ, ಗಾಂಧಾರಿ,ಊರ್ಮಿಳೆ, ಮಾಧವಿ .. . ಇವರ ಪದ್ಯಗಳಲ್ಲಿ ಬರುತ್ತಾರಾದರೂ, ಹಿರಿಯ ಕವಿಗಳ ಓದು ಮತ್ತು ಸುಲಭದಲ್ಲಿ ಪದ್ಯ ಬರೆಯಬಹುದೆನ್ನುವ ಭಾವ ಬದಲಾದರೆ ಇವರು ನಿಜದಕವಿತೆಗಳನ್ನೂ ಬರೆದಾರು. &lt;br /&gt;ಮೂರೇ ಮೂರು ಸಾಲುಗಳಲ್ಲಿ ಅನುಭವವನ್ನು ಓದುಗನಿಗೆ ಹೇಗೆ ಯಶಸ್ವಿಯಾಗಿ ದಾಟಿಸಬಹುದೆಂಬುದಕ್ಕೆ ಹಾಯ್ಕುಗಳು ಪ್ರಕಾರ ಒಂದು ಉದಾಹರಣೆ. ಆದರೆ ಈಗಾಗಲೇ ಮಿನಿ-ಮಿಡಿಗಳ ಭರಾಟೆಯಲ್ಲಿ ಕನ್ನಡ ಕಾವ್ಯ ದೊರಕಿಸಿಕೊಂಡದ್ದಕ್ಕಿಂತ ಕಳೆದುಕೊಂಡದ್ದೇ ಹೆಚ್ಚು. ಟ್ಯಾಬ್ಲಾಯಿಡ್ ಹಾಗು ಗಂಭೀರ ಸಾಹಿತ್ಯ ಪ್ರೊಮೋಟ್ ಮಾಡಲು ಇಷ್ಟವಿಲ್ಲದ ಪತ್ರಿಕೆಗಳು ಮಿನಿ-ಮಿಡಿಗಳನ್ನು ಹಾಗೇ ಹಾಯ್ಕು ಎನ್ನುವ ಮೂರು ಸಾಲಿನ ಭಗವದ್ಗೀತೆಯನ್ನು ಪ್ರಕಟಿಸಿ ಅದನ್ನೊಂದು ಸಾಹಿತ್ಯ ಪ್ರಕಾರವಾಗಿ ಪೋಷಿಸುತ್ತಿವೆ. ಉಳಿದ ಜಾಗೆ ಭರ್ತಿಮಾಡಲಷ್ಟೇ ಬಳಸಬಹುದಾದ ಆ ಕ್ಷಣಕ್ಕೆ ಹಾಯ್ ಎನ್ನಿಸುವ ಇವು ಗಂಭೀರ ಓದಿಗೆ ರುಚಿಸುವುದಿಲ್ಲ. ‘ಮೂರು ಸಾಲು ಮರ’ ಎನ್ನುವ ಹಾಯ್ಕು ಸಂಕಲನ ಪ್ರಕಟಿಸಿರುವ ಡಾ.ಸಿ.ರವೀಂದ್ರನಾಥ್ ಒಟ್ಟುಗೂಡಿಸಿದ್ದರ ಅರ್ಧದಷ್ಟು ರಚನೆಗಳನ್ನು ಕೈ ಬಿಟ್ಟಿದ್ದಿದ್ದರೂ ಸಂಕಲನದ ಮೌಲ್ಯವೇನೂ ಕಡಿಮೆಯಾಗುತ್ತಿರಲಿಲ್ಲ.  &lt;br /&gt;ಇನ್ನು ಈ ವರ್ಷ ಪ್ರಕಟವಾದ ಅನುವಾದಗಳನ್ನು ಕುರಿತಂತೆ ಎರಡು ಮಾತು: ಮಿರ್ಜಾಗಾಲಿಬನನ್ನು ಕನ್ನಡಕ್ಕೆ ಬಗ್ಗಿಸಿ ಕೊಟ್ಟಿರುವ ಡಾ.ಎನ್.ಜಗದೀಶ್, ಕೊಪ್ಪ ಪುಸ್ತಕದ ಆಕೃತಿಗೆ ಕೊಟ್ಟ ಗಮನವನ್ನು ತರ್ಜುಮೆಗೆ ಕೊಡದ ಕಾರಣ (ಅವರು ಇಂಗ್ಲಿಷ್ ಮೂಲಕ ಅನುವಾದಿಸಿದ್ದಾರೆ) ಈಗಾಗಲೇ ಪರಿಚಿತನಾಗಿರುವ ಗಾಲೀಬ್ ಹೊಸದೇನನ್ನೂ ಇಲ್ಲಿ ಹೇಳುತ್ತಿಲ್ಲ. ಆದರೂ ಗಾಲೀಬ ಮತ್ತು ಅಂದಿನ ಸಾಮಾಜಿಕ ಸ್ಥಿತಿಗತಿಗಳ ಕುರಿತಂತೆ ಅವರು ಕೊಟ್ಟಿರುವ ಟಿಪ್ಪಣಿ ಗಾಲೀಬನ ಗಜಲುಗಳ ಕನ್ನಡ ಅವತರಿಣಿಕೆಗೆ ಮೂಲ ಉರ್ದುವನ್ನೇ ಆಶ್ರಯಿಸಿದರೆ ಒಳ್ಳೆಯದೊಂದು ಕೆಲಸ ಮಾಡಬಹುದೆಂಬುದರ ಸೂಚನೆಯಾಗಿದೆ.&lt;br /&gt;ಸ್ಪ್ಯಾನಿಷ್ ಭಾಷೆಯಲ್ಲಿ ತನ್ನ ಪದ್ಯಗಳನ್ನು ಪ್ರಕಟಿಸಿದ್ದ ಪಾಬ್ಲೊ ನೆರೂದ ಜಗತ್ತಿನ ಬಹುತೇಕ ಎಲ್ಲ ಭಾಷೆಗಳಿಗೂ ಅನುವಾದಗೊಂಡಿದ್ದಾನೆ. ಸ್ಪ್ಯಾನಿಶ್‌ನಿಂದ ಇಂಗ್ಲಿಷ್‌ಗೆ ಆಮೇಲೆ ಇತರೆ ಭಾಷೆಗಳಿಗೆ ಇವು ಬರುವುದರಿಂದಾಗಿ ಮೂಲ ಸಾಂಸ್ಕೃತಿಕ ಒತ್ತಡಗಳು ಅನುವಾದಕನ ಅಭೀಪ್ಸೆಗೆ ತಕ್ಕಂತೆ ಬದಲಾಗುತ್ತಲೇ ಹೋಗುತ್ತದೆ. ಇದು ಎಲ್ಲ ಅನುವಾದಕರನ್ನೂ ಕಾಡಿದ ಕಷ್ಟ ಮತ್ತು ಸವಾಲು. ಜ.ನಾ.ತೇಜಶ್ರೀ ‘ಕಡಲ ತಡಿಯ ಗುಡಾರ’ಅನುವಾದಿಸಿದ್ದಾರೆ ಅನ್ನುವುದಕ್ಕಿಂತ ರೂಪಾಂತರಕ್ಕೆ ಪ್ರಯತ್ನಿಸಿದ್ದಾರೆ ಎನ್ನುವುದು ಸೂಕ್ತ. ನೆರೂದನ ರಾಜಕೀಯ ಮತ್ತು ಕ್ರಾಂತಿ ಕುರಿತ ಪದ್ಯಗಳನ್ನು ಬಿಟ್ಟು ಅವನ ಸಾನೆಟ್ಟುಗಳನ್ನು ಮತ್ತು ಪ್ರೇಮ ಕವಿತೆಗಳನ್ನು ಅನುವಾದಕಿ ಆಯ್ಕೆಮಾಡಿಕೊಂಡ ರೀತಿ ಸೊಗಸೆನ್ನಿಸುತ್ತದೆ. ಪುಸ್ತಕ ವಿನ್ಯಾಸವೂ ಹಿತವಾಗಿದೆ. ಕನ್ನಡದಲ್ಲಿ ಬೆರಳೆಣಿಕೆಗೆ ಸಿಗುತ್ತಿದ್ದ ಪ್ರಕಾಶಕರ ಸಂಖ್ಯೆ ಗಣನೀಯವಾಗಿ ಏರಿರುವುದನ್ನು ಗಮನಿಸಲೇಬೇಕು.&lt;br /&gt;ಹಿಂದಿ ಸಿನಿಮಾದ ಹಾಡುಗಳನ್ನೂ ಸೇರಿದಂತೆ ಕೈಫಿ ಆಜ್ಮಿಯವರ ಗಜಲುಗಳು ಮತ್ತು ಕವಿತೆಗಳನ್ನು ‘ಬೆತ್ತಲೆ ರಸ್ತೆಯ ಕನಸಿನ ದೀಪ’ ಎನ್ನುವ ಹೆಸರಲ್ಲಿ ದಿ.ವಿಭಾ ತಿರಕಪಡಿ ಅನುವಾದಿಸಿದ್ದನ್ನು ಇದೀಗ ಲಡಾಯಿ ಪ್ರಕಾಶನ ಪ್ರಕಟಿಸಿ ಅನುವಾದಕಿಗೆ ಹಾಗೇ ಮೂಲಕ್ಕೆ ಗೌರವ ತಂದಿದೆ. ಅಪ್ಪಟ ಕನ್ನಡದವೇ ಅನ್ನಿಸುವ ಇಲ್ಲಿನ ಪದ್ಯಗಳು ಗತಿಸಿದ ಅನುವಾದಕಿಯ ನೆನಪನ್ನು ಹಾಗೂ ಆಕೆಯ ಆಯ್ಕೆಯ ರುಚಿಯನ್ನೂ ತೆರೆದಿಡುತ್ತವೆ. &lt;br /&gt;ಅನಂತಮೂರ್ತಿ ಏನು ಮಾಡಿದರೂ ಸುದ್ದಿಯಾಗುವುದಷ್ಟೇ ಅಲ್ಲ ಅಲ್ಲೊಂದು ಹೊಸತನ ಇರುತ್ತದೆ. ಅವರ ‘ಶತಮಾನದ ಕವಿ ರಿಲ್ಕೆ’ ಪುಸ್ತಕ ಕೂಡ ಈ ಮಾತಿಗೆ ನಿದರ್ಶನ. ಈಗಾಗಲೇ ಬ್ರೆಕ್ಟ್, ಯೇಟ್ಸ್ ಮುಂತಾದವರನ್ನು ಕನ್ನಡಕ್ಕೆ ಸಮರ್ಥವಾಗಿ ಪರಿಚಯಿಸಿರುವ ಅವರು ಈ ಸಂಕಲನದಲ್ಲಿ ಬರಿಯ ರಿಲ್ಕೆ ಕವಿತೆಗಳನ್ನಲ್ಲದೇ ರಿಲ್ಕೆಯ ತಂತುಗಳನ್ನು ತಮ್ಮ ಸ್ವಂತದ ಕವಿತೆಗಳಲ್ಲೂ ಕಾಣಿಸಿದ್ದಾರೆ. ಜೊತೆಗೆ ಅನುವಾದವೆನ್ನುವ ಮಹಾಯಜ್ಞದಲ್ಲಿ ಅವರು ಅನುಸರಿಸಿದ ವಿಧಾನವನ್ನು ಟಿಪ್ಪಣಿಸಿ (ಓ.ಎಲ್.ಎನ್ ಅವರ ಟಿಪ್ಪಣಿಯೂ ಸೇರಿದಂತೆ ಪ್ರಕಟಿಸಿ) ಇತರ ಅನುವಾದಕರಿಗೆ ಮಾದರಿಯೂ ಆಗಿದ್ದಾರೆ. &lt;br /&gt;ಹೃದಯ ಬುದ್ಧಿಗಳನ್ನು ಏಕಕಾಲದಲ್ಲಿ ಆವರಿಸಿಕೊಳ್ಳುವ ‘ಕವಿ ಸಮಯ’ ಈ ಹೊತ್ತಿನ  ದಂದುಗಗಳಲ್ಲಿ ಸಿಕ್ಕದಿರುವಂಥದು. ಹಳಬರೆಲ್ಲ ತಮಗೆ ಸಿದ್ಧಿಸಿದ ಹಾದಿಯಲ್ಲಿ ಅಲ್ಲೇ ಗಿರಕಿ ಹೊಡೆಯುತ್ತ, ಮತ್ತೆ ಮತ್ತೆ ಅವವೇ ಪ್ರತಿಮೆ ರೂಪಕಗಳಲ್ಲಿ ಅವರದೇ ಮಾದರಿಗಳಲ್ಲಿ ಮುಂದುವರೆಯುತ್ತಿರುವಾಗ ಹೊಸಬರಂತೂ ನಿಶ್ಯಕ್ತ ಸಾಲುಗಳಲ್ಲಿ ನಿಲ್ಲಲೂ ಆಗದಂಥ ಸ್ಥಿತಿಯಲ್ಲಿದ್ದಾರೆ. ತತ್ವ ಸಿದ್ಧಾಂತಗಳ ಚಾಣಾಕ್ಷ ಹೆಣಿಗೆಯನ್ನೇ ಕಾವ್ಯವೆಂದು ನಂಬಿರುವ ಕವಿಗಳ ಸಂಖ್ಯೆಯೂ ಹೆಚ್ಚುತ್ತಿದೆ. ಈ ವರ್ಷ ಪ್ರಕಟವಾದ ಕವನ ಸಂಕಲನಗಳ ಜೊತೆಗೇ ಪ್ರಕಟವಾದ ಅನುವಾದಗಳು ಹೇಗೆ ನಮ್ಮನ್ನು ಶ್ರೀಮಂತಗೊಳಿಸಿವೆ ಎನ್ನುವ ಬೆರಗನ್ನಷ್ಟೇ ನಿಮ್ಮೊಂದಿಗೆ ಹಂಚಿಕೊಳ್ಳುತ್ತ (ಈ ವರ್ಷ ಪ್ರಕಟವಾದ ಸಂಕಲನಗಳ ಪ್ರಾತಿನಿಧಿಕ ಅಂಶಗಳನ್ನಿಟ್ಟುಕೊಂಡು ಆಲೋಚಿಸಹೋದರೆ ಅದೇ ಒಂದು ಪ್ರೌಢ ಪ್ರಬಂಧಕ್ಕಾಗುವ ವಸ್ತು ಎನ್ನಿಸಿದ್ದರಿಂದ ಪುಟಮಿತಿಯ ಕಾರಣದಿಂದಾಗಿ ಇದಕ್ಕಿಂತ ಹೆಚ್ಚು ಹೇಳುವುದು ಸಾಧ್ಯವಾಗುತ್ತಿಲ್ಲ) ಈ ಲೇಖನವನ್ನು ಪರಿಸಮಾಪ್ತಿಗೊಳಿಸುತ್ತಿದ್ದೇನೆ. &lt;br /&gt;(ಋಣ: ಸಂಚಯ ಸಾಂಸ್ಕೃತಿಕ ಪತ್ರಿಕೆ ಸಂಚಿಕೆ ೮೪)&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/5254102750204147054-1141931230816145103?l=bemkikaddi.blogspot.com' alt='' /&gt;&lt;/div&gt;</content><link rel='replies' type='application/atom+xml' href='http://bemkikaddi.blogspot.com/feeds/1141931230816145103/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://www.blogger.com/comment.g?blogID=5254102750204147054&amp;postID=1141931230816145103' title='0 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/5254102750204147054/posts/default/1141931230816145103'/><link rel='self' type='application/atom+xml' href='http://www.blogger.com/feeds/5254102750204147054/posts/default/1141931230816145103'/><link rel='alternate' type='text/html' href='http://bemkikaddi.blogspot.com/2010/02/blog-post.html' title='ಅಭಾವದಿಂದ ಅನುವಾದಗಳವರೆಗೆ....'/><author><name>ಬೆಂಕಿಕಡ್ಡಿ</name><uri>http://www.blogger.com/profile/13181705369161334860</uri><email>noreply@blogger.com</email><gd:image rel='http://schemas.google.com/g/2005#thumbnail' width='21' height='32' src='http://4.bp.blogspot.com/_bUAIZF0Yo1g/TKdTK-6rv2I/AAAAAAAAAJY/QXUJAVKh9ps/S220/dsr4.jpg'/></author><thr:total>0</thr:total></entry><entry><id>tag:blogger.com,1999:blog-5254102750204147054.post-7110158855511150062</id><published>2009-11-19T12:20:00.000+05:30</published><updated>2009-11-19T12:21:08.816+05:30</updated><title type='text'>ಮಣ್ಣಿನ ವಾಸನೆ ಉಳಿಸಿಕೊಂಡ ಗೋಡೆಗೆ ಬರೆದ ನವಿಲು</title><content type='html'>ಅತ್ಯಂತ ಜನಪ್ರಿಯ ಸಾಹಿತ್ಯ ಪ್ರಕಾರವಾದ ಸಣ್ಣಕತೆ ಕಾಲದಿಂದ ಕಾಲಕ್ಕೆ ತನ್ನೊಳಗಿನ ಆಂತರಿಕ ಶಿಸ್ತನ್ನು ಬದಲಿಸಿಕೊಳ್ಳದೆಯೂ ಮೇಲ್ನೋಟದ ಬದಲಾವಣೆಗಳಿಗೆ ಪಕ್ಕಾಗುತ್ತಲೇ ಬಂದಿದೆ. ಆಧುನಿಕ ಕನ್ನಡ ಕಥಾಜಗತ್ತಂತೂ ವರ್ತಮಾನದ ಬದುಕಿನ ಎಲ್ಲ ಮುಖಗಳನ್ನು ಒಳಗೊಳ್ಳುತ್ತಲೇ ಸ್ಥಿತ್ಯಂತರದ ಸಾಕ್ಷಿಯಾಗಿ ದಾಖಲಾಗುತ್ತಲೇ ಇದೆ. ಒಂದು ಸಿದ್ಧ ಚೌಕಟ್ಟನ್ನು, ‘ಕತೆ’ ಇರಲೇಬೇಕೆಂಬ ನಿಯಮವನ್ನೂ ಮೀರಿ ಈ ಹೊತ್ತಿನ ಕಥೆಗಾರರು ಬರೆಯತೊಡಗಿದ್ದಾರೆ. ಬಂಡಾಯ ಮತ್ತು ಹೋರಾಟದ ಹಾದಿಗಳನ್ನು ಮೇಲ್ನೋಟಕ್ಕೆ ಬಿಟ್ಟುಕೊಟ್ಟಂತಿದ್ದರೂ, ಬದುಕಿನ  ಒಂದು ಸಣ್ಣ ಘಟನೆಯನ್ನೂ ವಿಸ್ತರಿಸಿ ಅದನ್ನು  ಮಾನವೀಯ ನೆಲೆಯ ಮೂಲಕ ಕತೆಕಟ್ಟಿಕೊಡುವ ಪ್ರಯತ್ನ ಢಾಳಾಗಿ ಕಾಣಸಿಗುತ್ತಿದೆ.&lt;br /&gt;ಇದಕ್ಕೆ ಇತ್ತಿಚಿನ ಉದಾಹರಣೆಯೆಂದರೆ ಸಂದೀಪ ನಾಯಕರ ‘ಗೋಡೆಗೆ ಬರೆದ ನವಿಲು’. 2009ನೇ ಸಾಲಿನ ಛಂದ ಪುಸ್ತಕ ಬಹುಮಾನ ಪಡೆದ ಈ ಕಥಾಸಂಕಲನದಲ್ಲಿ ಇರುವ ಒಂದು ಡಜನ್ ಕತೆಗಳೆಲ್ಲವೂ ಇದುವರೆಗೂ  ನಾವು ಕತೆ ಎಂದು ನಂಬಿರುವ ರೀತಿಯಿಂದ ಭಿನ್ನವಾಗಿ, ಆದರೆ ಬದುಕಿನ ಸಣ್ಣ ಸಣ್ಣ ಘಟನೆಗಳನ್ನೇ ಮೂಲವಾಗಿಟ್ಟುಕೊಂಡು ಹೆಣೆದಿರುವ ಬದುಕಿನ ಮೌಲ್ಯ ಮಾಪನದಂತಿವೆ. ಇಲ್ಲಿನ ಎಲ್ಲ ಕಥೆಗಳ ಮೂಲ ಉತ್ತರಕನ್ನಡದ ನೆಲ ಮತ್ತು ಅಲ್ಲಿನ ಸಂಸ್ಕೃತಿಗಳನ್ನು ಆಧರಿಸಿದುವೇ ಆಗಿರುವುದೂ ವಿಶೇಷವಾಗಿದೆ. ಸಂಕಲನದ ಕತೆಗಳ ಕೆಲಪಾತ್ರಗಳು ಹಲವು ಕತೆಗಳಲ್ಲಿ ಮತ್ತೆ ಮತ್ತೆ ಕಾಣಿಸಿಕೊಳ್ಳುವುದೂ ಒಂದು ಬಗೆಯಲ್ಲಿ ಕತೆಗಾರ ಆ ಮೂಲಕ ಹಳೆಯ ಕತೆಗಳ ಕೊಂಡಿಯನ್ನು ಬೇರೆ ಬೇರೆ ಕತೆಗಳ ಕೇಂದ್ರ ಪಾತ್ರಗಳನ್ನು ವಿಮರ್ಶಿಸಲು, ಉದ್ದೀಪಿಸಲು ಬಳಸಿಕೊಂಡ ತಂತ್ರವೆಂದೇ ನನಗನಿಸುತ್ತಿದೆ. ನಗರ ಕೇಂದ್ರಿತ ಸಮಸ್ಯೆಗಳಿಲ್ಲದಿದ್ದರೂ ಇಲ್ಲಿನ ಬಹುತೇಕ ಕತೆಗಳ ಪಾತ್ರಗಳು ನಗರದಲ್ಲಿದ್ದೂ ಊರಿನ ಧ್ಯಾನದಲ್ಲಿ ನಿರತವಾಗಿರುವುದು ಮತ್ತು ಒಂದಲ್ಲ ಒಂದು ವಿಧದಿಂದ ಮತ್ತೆ ಊರಿನ ತೆಕ್ಕೆಗೆ ಬೀಳುವುದೂ ನಡೆದಿದೆ. ಜಾತಿಯ ಸಮಸ್ಯೆ, ಪರಿಸರ ಹಾನಿಯ ಎಚ್ಚರ, ಶೋಷಣೆಯೇ ಮುಂತಾದ ಸಾಮಾಜಿಕ ಅನಿಷ್ಟಗಳೂ ಇಲ್ಲಿನ ಕತೆಗಳಲ್ಲಿ ಇದ್ದರೂ ಅವನ್ನು ದೊಡ್ಡ ಭೂತವಾಗಿಸಿ ಅಥವ ಅವುಗಳ ವಿರುದ್ಧದ ಬಂಡಾಯದ ಕೂಗಾಗಲೀ ಇಲ್ಲದಿರುವುದೂ ಗಮನಿಸಬೇಕಾದ ವಿಷಯವೇ ಆಗಿದೆ. ಸಂಯಮ ಮೀರದ ಹದವಾದ ಭಾಷೆ ಇಲ್ಲಿನ ಕತೆಗಳ ಮುಖ್ಯ ಬಂಡವಾಳ. ಕೆಲವೇ ಕೆಲವು ಪಾತ್ರಗಳಲ್ಲೇ ಕತೆಯನ್ನು ಬೆಳೆಸಿ ಮುಗಿಸುವ ರೀತಿ ಕೂಡ ಗಮನಿಸಬೇಕಾದ ಸಂಗತಿಯಾಗಿದೆ. ಏಕೆಂದರೆ ಸಣ್ಣಕತೆಯೊಂದರಲ್ಲೇ ಕಾದಂಬರಿಗಾಗುವಷ್ಟು ಪಾತ್ರಗಳನ್ನು ಸೃಷ್ಟಿಸಿ ಅವುಗಳ ಪೋಷಣೆಗೆ ಗಮನ ಕೊಡದೇ ಬರೀ ಉದ್ದೋಉದ್ದುದದ  ಕತೆಗಳನ್ನು ಬರೆಯುತ್ತಿರುವವರ ನಡುವೆ ಸಂದೀಪ ನಾಯಕರ ಕತೆಗಳೆಲ್ಲವೂ ಹೆಚ್ಚೆಂದರೆ ಹತ್ತುಪುಟಗಳ ಮಿತಿಯಲ್ಲೇ ಮುಗಿದುಬಿಡುವುದೂ ಮತ್ತೊಂದು ಅಂಶ. ಪ್ರಾಯಶಃ ಸಂದೀಪರು ಸಾಪ್ತಾಹಿಕವೊಂದರ ಉಸ್ತುವಾರಿ ನೋಡುತ್ತಿರುವ ಕಾರಣ ಉಳಿದ ಬರಹಗಾರರ ಬರಹಗಳನ್ನು ಪುಟಮಿತಿ, ಪದಮಿತಿಗಳ ಲೆಕ್ಕಾಚಾರದಲ್ಲಿ ‘ಕತ್ತರಿಸುತ್ತಿರುವ’ ಅನುಭವ ಇಲ್ಲಿನ ಕತೆಗಳು ಉದ್ದವಾಗದಂತೆ ನಿಯಂತ್ರಣ ಹೇರಿದೆಯೋ ಎಂಬ ಅನುಮಾನವೂ ಹುಟ್ಟುತ್ತದೆ. ಉದಾಹರಣೆಗೆ ‘ಬಾಗಿಲ ಮುಂದೆ’ ಎನ್ನುವ ಕತೆಯಂತೂ ಸುರುವಾಗುವ ಮೊದಲೇ ಮುಗಿದುಬಿಡುತ್ತದೆ. ಓದುಗನನ್ನು ಥಟ್ಟನೆ, ಹಟಾತ್ತನೆ ಸರಳ ಸಂಗತಿಯ ಅನಾವರಣದ ಮೂಲಕ ಖುಷಿಗೊಳಿಸಬಹುದೆಂಬ ಲೆಕ್ಕಾಚಾರ ಇಲ್ಲೆಲ್ಲ ಕೆಲಸ ಮಾಡಿದಂತಿದೆ. &lt;br /&gt;ಸ್ವಗತದ ನಿರೂಪಣೆ ಮತ್ತು ಉತ್ತಮಪುರುಷದ ಗೊಂದಲಗಳಿಲ್ಲದೇ ಕತೆಗಳನ್ನು ಕಟ್ಟುವುದರಲ್ಲಿ ಕತೆಗಾರರು ಗೆದ್ದಿದ್ದಾರಾದರೂ ಒಂದು ಓದಿನ ನಂತರ ಮರು ಓದು ಬಯಸುವ ವಸ್ತುಗಳು ಇಲ್ಲಿನ ಕತೆಗಳಲ್ಲಿದ್ದರೂ ತೀರ ಸರಳೀಕೃತ ಕಥನ ವಿಧಾನದಿಂದಾಗಿ ಆ ಅವಕಾಶವನ್ನು ಕತೆಗಾರರೇ ಕಳೆದುಕೊಂಡಿದ್ದಾರೆ.  ಬಾಗಿಲ ಮುಂದೆ, ಕಂಡಷ್ಟೇ ಆಕಾಶ ಮತ್ತು ಸಹಿ ಕತೆಗಳು ಇನ್ನೂ ವಿಸ್ತರಿಸಬಹುದಾದ ಅವಕಾಶವನ್ನು ಕಳೆದುಕೊಂಡ ಕಾರಣಕ್ಕೆ ಬರಿಯ ತುಟಿತುದಿಯ ಅನುಕಂಪವನ್ನಷ್ಟೇ ಹುಟ್ಟಿಸುತ್ತವೆ. ಪ್ರಾಯಶಃ ಕತೆಗಾರರು ಉದ್ದನೆಯ ಕತೆಗಳನ್ನು ಓದುಗರು ಇಷ್ಟಪಡಲಾರರೆಂಬ ತಮ್ಮದೇ ನಿರ್ಧಾರದಲ್ಲಿ ಎಡವಿದರೇನೋ ಅನ್ನಿಸುತ್ತದೆ. ಈ ಮೂರೂ ಕತೆಗಳೂ ಸ್ವಲ್ಪ ಪರಿಶ್ರಮ ಪಟ್ಟಿದ್ದರೆ ಬಹಳ ಕಾಲ ಕಾಡುವ ವಸ್ತುವನ್ನಿಟ್ಟುಕೊಂಡಿದ್ದೂ ಅವಸರದಲ್ಲಿ ಮುಗಿಸಿಬಿಟ್ಟ ಕಾರಣ ಬರಿಯ ಹಳಹಳಿಕೆಗಳಾಗೇ ಉಳಿದುಬಿಡುತ್ತವೆ. ‘ಆನೆ ಸಾಕಿದ ಮನೆಗೆ ಎರಡು ಹೂ ದಂಡೆ’ ಇಂಥ ಮಿತಿಗಳನ್ನು ಮೀರಿದ ಕಾರಣ ಸಂಕಲನದ ಯಶಸ್ವೀ ಕತೆಗಳಲ್ಲೊಂದಾಗಿದೆ. ‘ಕರೆ’ಯ ಮೋನಪ್ಪ ಮತ್ತು ‘ಮರೆತು ಹೋದ ಒಂದು ಸಂಬಂಧ’ದ ವೆಂಕಟಣ್ಣ ವರ್ತಮಾನದಲ್ಲಿ ಚಲಾವಣೆ ಕಳಕೊಂಡ ನಾಣ್ಯಗಳಾಗಿ ಕಾಡುತ್ತಾರೆ. ಹಾಗೆಯೇ ಹಿರಿಯರು ಆಧುನಿಕ ಜೀವನದಲ್ಲಿ ಹೇಗೆ ಮೂಲೆಗುಂಪಾಗುತ್ತಿದ್ದಾರೆ ಮತ್ತವರ ಪ್ರಸ್ತುತತೆಯನ್ನೇ ಕಳಕೊಳ್ಳುತ್ತಿದ್ದಾರೆ ಅನ್ನುವುದನ್ನೂ ದಟ್ಟವಾಗಿ ದಾಖಲಿಸಿವೆ. ‘ಉರುಳಿತೊಂದು ಮರ’ ಕತೆಗಾರರು ತಮಗೂ ಪರಿಸರ ಪ್ರಜ್ಞೆ ಕಾಡುತ್ತಿದೆ ಎನ್ನುವ ಕಾರಣಕ್ಕೆ ಬರೆದಂತೆ ಕಾಣುತ್ತದೆ. ಉಳಿದ ಕತೆಗಳಲ್ಲಿರುವ ‘ಓಟ’ ಮತ್ತು ಹಿಡಿತ ಸಿಗದ ಕಾರಣ ಹಾಗೂ ನಾಯಕನನ್ನು ಉದ್ಧಾಮನನ್ನಾಗಿ ಚಿತ್ರಿಸಲೇಬೇಕೆಂಬ ಹಟ ಇಲ್ಲಿ ಕೆಲಸ ಮಾಡಿರುವ ಕಾರಣ ‘ಉರುಳಿತೊಂದು ಕತೆ’ಯಾಗಿಬಿಟ್ಟಿದೆ. ‘ಇಲ್ಲಿ ಬಂದೆವು ಸುಮ್ಮನೆ’ ಮನುಷ್ಯನ ಆಸೆಗಳ ಮತ್ತು ಲಂಪಟತನದ ಅನಾವರಣವಾಗಿರುವುದರಿಂದ ಹಾಗೂ ಒಂದಲ್ಲ ಒಂದು ಕಾರಣಕ್ಕೆ ಬೇಸ್ತು ಬೀಳಲೇಬೇಕಾದ ಅನಿವಾರ್ಯತೆಗಳು ಎಲ್ಲರ ಬದುಕಿನಲ್ಲೂ ಘಟಿಸುವುದರಿಂದ ಓದುವಾಗ ಹಾಯೆನ್ನಿಸುತ್ತದೆ. ಅವರಿವರ ನಡುವಿನ  ಆಟದ ದಾಳವಾದ ಮೋಹನನಂಥ ಪಾತ್ರಗಳನ್ನು ಕತೆಗಾರರು ಏಕೋ ಪೋಷಿಸಲು ಮನಸ್ಸು ಮಾಡದ್ದರಿಂದ ಪಾಪ ಈ ಕತೆಯ ಮೋಹನ ಮತ್ತು ‘ಒಂಭತ್ತು, ಎಂಟು, ಎಂಟು’ ಕತೆಯ ಮಂಕಾಳಜ್ಜಿ ಬಡವಾಗಿದ್ದಾರೆ. ಹಾಗೆ ನೋಡಿದರೆ ಹೇಳಹೊರಟದ್ದು ಒಂದಾದರೆ ಆಗುವುದು ಮತ್ತೊಂದಾಗುವ ಕಾರಣದಿಂದಾಗಿ ‘ಒಂಭತ್ತು, ಎಂಟು, ಎಂಟು’ ಮತ್ತು‘ಬೊಂಬೆಗೊಂದು ಸೀರೆ’ ಗಮನ ಸೆಳೆಯುತ್ತವೆ. ದಾರಿ ತಪ್ಪಿದ ಅಕ್ಕನ ಹುಡುಕಾಟದಲ್ಲಿನ ದೇವಿ ಮತ್ತು ಮನೆ ಬಿಟ್ಟು ಓಡಿ ಬಂದ ಶರಣ್ ಕಡೆಗೂ ವ್ಯವಸ್ಥೆಯ ಕೈಯಲ್ಲಿನ ಗೊಂಬೆಗಳಾಗುತ್ತಾರೆ. ಮೂಲತಃ ಅಲ್ಪತೃಪ್ತಿಯ ಈ ಎರಡೂ ಪಾತ್ರಗಳನ್ನೂ ಅವರ ಯತ್ನದಲ್ಲಿ ಉತ್ತೀರ್ಣರನ್ನಾಗಿಸದ ಕತೆಗಾರರು ಆ ಕಾರಣಕ್ಕೇ ಮೆಚ್ಚುಗೆ ಗಳಿಸುತ್ತಾರೆ. ಇದಕ್ಕೆ ತದ್ವಿರುದ್ಧವಾಗಿ ‘ಇನ್ನೊಂದೇ ಕಥೆ’ಯ ಶಶಕ್ಕ ಮತ್ತು ‘ನಿನ್ನಲ್ಲೇ ಇರಲಿ’ಯ ಮುಕುಂದರನ್ನು ದಡ ಸೇರಿಸುವ ಕತೆಗಾರರು ಆಶ್ಚರ್ಯ ಹುಟ್ಟಿಸುತ್ತಾರೆ.  &lt;br /&gt;ವ್ಯಕ್ತಿಯ ಒಳತುಮುಲಗಳನ್ನು, ಆ ವ್ಯಕ್ತಿ ಲೌಕಿಕದ ವ್ಯವಹಾರಗಳಲ್ಲಿ ಕಾಯ್ದುಕೊಳ್ಳಬೇಕಾದ ಎಚ್ಚರವನ್ನೂ ಜೊತೆಜೊತೆಯಾಗಿ ನಿರ್ವಹಿಸುವುದು ಕತೆಗಾರರಿಂದ ಸಾಧ್ಯವಾಗಿರುವುದು ಒಟ್ಟೂ ಸಂಕಲನದ ಧನಾತ್ಮಕ ಯತ್ನವಾಗಿದೆ. ಆದರೆ ದುರಂತಗಳಲ್ಲೇ ಅಂತ್ಯವಾಗುವ ಇಲ್ಲಿನ ಬಹುತೇಕ ಕತೆಗಳು ನಿರಾಶವಾದವನ್ನು ಪುಷ್ಟೀಕರಿಸುವುದು ಅಷ್ಟೇ ಋಣಾತ್ನಕವಾಗಿದೆ. ನಿರಾಶೆ, ವಿಷಾದ, ಸೋಲುಗಳಲ್ಲೇ ಉಳಿಯುವ ಇಲ್ಲಿನ ಬಹುತೇಕ ಪಾತ್ರಗಳು ಇರುವುದೇ ಸೀಮಿತ ಚೌಕಟ್ಟಿನ ಸರಳ ಸಮಸ್ಯೆಗಳಲ್ಲಿ. ಈ ಪಾತ್ರಗಳು ಸೀಮಿತ ಪ್ರದೇಶದ ಸರಳ ಸಮಸ್ಯೆಗಳಲ್ಲಿ ಒದ್ದಾಡುತ್ತಿದ್ದರೂ ಅವನ್ನು ಉತ್ಪ್ರೇಕ್ಷಿಸದ ಕಥನ ಕ್ರಮ ಮತ್ತು ಅಂಥ ಸನ್ನಿವೇಶ ನಿರ್ಮಾಣದ ಕಾರಣ ಸಣ್ಣ ಚೌಕಟ್ಟಿನಲ್ಲಿ ಬಿಡಿಸಿಟ್ಟ ಚಿತ್ರಗಳಾಗಿವೆ. ಇಲ್ಲಿನ ಎಲ್ಲ ಕತೆಗಳ ಪಾತ್ರಗಳೂ ಅರೆಶಿಕ್ಷಿತರಾಗಿರುವುದು ಮತ್ತು ಕೆಳಸ್ತರದ ಸಮಾಜದಿಂದ ಬಂದವರಾಗಿರುವುದೂ ಸಂಕಲನದ ವಿಶೇಷಗಳಲ್ಲೊಂದಾಗಿದೆ. ಜೊತೆಗೇ ಬರಿಯ ಮುಜುಗರದ ಕಾರಣದಿಂದಾಗಿ ವಿನಮ್ರರಂತಿರಬೇಕಾದ ಪಾತ್ರಗಳ ಅನಿವಾರ್ಯತೆಯನ್ನೂ ಚಿತ್ರಿಸಿದೆ.  &lt;br /&gt;‘ಗೋಡೆಗೆ ಬರೆದ ನವಿಲು’ ಹೆಸರಿನ ಕತೆ ಸಂಕಲನದಲ್ಲಿಲ್ಲದೇ ಹೋದರೂ ಒಟ್ಟು ಸಂಕಲನ ಮನೆಯ ಮುಂದಿನ ಗೋಡೆಯ ಅಲಂಕಾರಕ್ಕೆ ಬರೆದ ನವಿಲಿನ ಚಿತ್ರದ ಹಾಗೆ ಕತೆಗಾರರು ಅವರ ಕುಶಲ ಕತೆಗಾರಿಕೆಗೆ ತಾವೇ ಕೊಟ್ಟುಕೊಂಡ ಹೆಸರಾಗಿದೆ.  ‘ಅಗಣಿತ ಚಹರೆ’ ಸಂದೀಪ ನಾಯಕರ ಮೊದಲ ಪ್ರಕಟಿತ ಕವನ ಸಂಕಲನ. ಕವಿಯಾಗಿ ಅವರಿಗಿದ್ದ ಭರವಸೆಗಳು ಕತೆಗಾರರಾದ ಕೂಡಲೇ ಏಕೆ ಹೊರಟುಹೋದವೋ ತಿಳಿಯದಾಗಿದೆ. ಆದರೆ ಕವಿತೆಗಳ ಜೊತೆಯಲ್ಲಿದ್ದ ಯಕ್ಷಗಾನ, ತಾಜಾ ಮೀನು, ಬಸ್ ಸ್ಟಾಂಡು, ಬಂಡಿಹಬ್ಬ ಇಲ್ಲಿನ ಕತೆಗಳಿಗೂ ವಿಸ್ತರಿಸಿರುವ ಕಾರಣಕ್ಕೆ ‘ಮಣ್ಣಿನ ವಾಸನೆ’ಉಳಿಸಿಕೊಂಡ ಕತೆಗಾರರಾಗಿಯೂ ಉಳಿಯುತ್ತಾರೆ.&lt;br /&gt;ಪುಸ್ತಕ: ಗೋಡೆಗೆ ಬರೆದ ನವಿಲು. (ಕಥಾ ಸಂಕಲನ)&lt;br /&gt;ಕತೆಗಾರ: ಸಂದೀಪ ನಾಯಕ&lt;br /&gt;ಪ್ರಕಾಶಕರು: ಛಂದ ಪುಸ್ತಕ, ಬೆಂಗಳೂರು ಬೆಲೆ:ರೂ ೬೦/-&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/5254102750204147054-7110158855511150062?l=bemkikaddi.blogspot.com' alt='' /&gt;&lt;/div&gt;</content><link rel='replies' type='application/atom+xml' href='http://bemkikaddi.blogspot.com/feeds/7110158855511150062/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://www.blogger.com/comment.g?blogID=5254102750204147054&amp;postID=7110158855511150062' title='0 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/5254102750204147054/posts/default/7110158855511150062'/><link rel='self' type='application/atom+xml' href='http://www.blogger.com/feeds/5254102750204147054/posts/default/7110158855511150062'/><link rel='alternate' type='text/html' href='http://bemkikaddi.blogspot.com/2009/11/blog-post_19.html' title='ಮಣ್ಣಿನ ವಾಸನೆ ಉಳಿಸಿಕೊಂಡ ಗೋಡೆಗೆ ಬರೆದ ನವಿಲು'/><author><name>ಬೆಂಕಿಕಡ್ಡಿ</name><uri>http://www.blogger.com/profile/13181705369161334860</uri><email>noreply@blogger.com</email><gd:image rel='http://schemas.google.com/g/2005#thumbnail' width='21' height='32' src='http://4.bp.blogspot.com/_bUAIZF0Yo1g/TKdTK-6rv2I/AAAAAAAAAJY/QXUJAVKh9ps/S220/dsr4.jpg'/></author><thr:total>0</thr:total></entry><entry><id>tag:blogger.com,1999:blog-5254102750204147054.post-3265709052141762611</id><published>2009-11-19T12:11:00.002+05:30</published><updated>2009-11-19T12:14:06.003+05:30</updated><title type='text'>ನುಡಿಸಿರಿ- ಸಾಹಿತ್ಯ ಮತ್ತು ಸಂಸ್ಕೃತಿಗಳ ಭವ್ಯ ಮಿಲನ</title><content type='html'>ಕನ್ನಡ ನಾಡು ನುಡಿಯ ರಾಷ್ಟ್ರೀಯ ಸಮ್ಮೇಳನ ‘ನುಡಿಸಿರಿ-೨೦೦೯’ರಲ್ಲಿ ಭಾಗವಹಿಸಿದ ಸಂಭ್ರಮ, ಖುಷಿ ಮತ್ತು ಸಮ್ಮೇಳನವನ್ನು ಆಯೋಜಕರು ರೂಪಿಸಿದ್ದ ರೀತಿಗಳನ್ನು ಹಂಚಿಕೊಳ್ಳುವ ಯತ್ನ ಈ ಲೇಖನದ್ದು. &lt;br /&gt;ನಮ್ಮಲ್ಲಿ ಬಹಳ ಜನ ಸಾಹಿತ್ಯ ಸಮ್ಮೇಳನಗಳನ್ನು ‘ಸಂತೆ’ ಎಂದು ಕರೆದಿದ್ದೇವೆ/ಭಾವಿಸಿದ್ದೇವೆ. ಆಯೋಜಕರ ಮರ್ಜಿಗನುಗುಣವಾಗಿ, ಆಳುವ ಸರ್ಕಾರದ ನೀತಿಗನುಗುಣವಾಗಿ ಸಮ್ಮೇಳನಗಳ ಕಾರ್ಯಕ್ರಮಗಳು ರೂಪುಗೊಳ್ಳುವುದರಿಂದಾಗಿ ಇಂಥ ಅಪವಾದಗಳು ತಪ್ಪಿದ್ದಲ್ಲ. ಅದರಲ್ಲೂ ಕನ್ನಡ ಸಾಹಿತ್ಯ ಸಮ್ಮೇಳನಗಳಂತೂ ‘ಸಾಹಿತ್ಯ’ವೊಂದನ್ನು ಬಿಟ್ಟು ಉಳಿದೆಲ್ಲ ಚಟುವಟಿಕೆಗಳನ್ನೂ ನಡೆಸಿರುತ್ತವೆ. ಹಲವು ಕಾರಣಗಳಿಂದಾಗಿ ಪದೇ ಪದೇ ಮುಂದೂಡಲ್ಪಡುವ ಈ ಸಮ್ಮೇಳನಗಳು ಸ್ವಾಗತ ಸಮಿತಿಯ ಅಧ್ಯಕ್ಷರ ಮತ್ತು ಎಲ್ಲಿ ಸಮ್ಮೇಳನ ನಡೆಯಲು ಆಯೋಜಿಸಲಾಗಿದೆಯೋ ಆ ಸ್ಥಳದ ಸಚಿವ/ಶಾಸಕ/ಸಂಸದರ ಕೃಪಾಶೀರ್ವಾದದಿಂದ ನಡೆಯಬೇಕಿರುವ ಕಾರಣ ರಾಜಕೀಯ ಬದಲಾವಣೆಗಳೂ ಇಂಥ ಸಮ್ಮೇಳನಗಳ ಹಣೆಯ ಬರಹವನ್ನೇ ಬದಲಾಯಿಸಿಬಿಡುತ್ತವೆ. ಊಟ-ತಿಂಡಿಗಳ ವಿತರಣೆ, ಪ್ರದೇಶವಾರು ಭೋಜನ ವಿಶೇಷತೆಯನ್ನು ಪ್ರದರ್ಶಿಸುವ ಸಲುವಾಗಿ ಮಠ, ಮಾನ್ಯಗಳನ್ನೂ ಓಲೈಸಿಲಾಗಿರುತ್ತದೆ. ಹೀಗೆ ಸಾಹಿತ್ಯ ಸಂಗತಿಗಳಿಗಿಂತಲೂ ಸಾಹಿತ್ಯೇತರ ಸಂಗತಿಗಳೇ ಮುಖ್ಯವಾಗಿ ಸಮ್ಮೇಳನಾಧ್ಯಕ್ಷರ ಆಯ್ಕೆಯಿಂದಲೂ ಕಸರತ್ತುಗಳ ಮೇಲೆ ಕಸರತ್ತುಗಳು ನಡೆದು ಅದು ಇಡೀ ಸಮ್ಮೇಳನದ ಸ್ವರೂಪವನ್ನೇ ಬದಲಿಸಿಬಿಡುವುದೂ ಸರ್ವೇ ಸಾಮಾನ್ಯವಾದ ವಿಷಯವಾಗಿದೆ. ಸಮ್ಮೇಳನಗಳಲ್ಲಿ ಮಂಡಿಸಲಾಗುವ ನಿರ್ಣಯಗಳಂತೂ ಹನುಮಂತನ ಬಾಲದಂತೆ ಬೆಳೆದೂ, ಬೆಳೆದೂ ಬೆಳೆಯುತ್ತವೇ ವಿನಾ ಅವುಗಳ ಅನುಷ್ಠಾನ ಎಂಬುದಂತೂ ಯಾವ ಸರ್ಕಾರಗಳಿಂದಲೂ ಸಾಧ್ಯವಾಗದಿರುವುದೂ ಇಂಥ ನಿರ್ಣಯಗಳ ಮೇಲಿನ ವಿಶ್ವಾಸಾರ್ಹತೆಯನ್ನೇ ಪ್ರಶ್ನಿಸುವಂತಿದೆ. ಸಮ್ಮೇಳನದ ವೆಚ್ಚಕ್ಕಾಗಿ ಸರ್ಕಾರ ಕೊಡಮಾಡುವ ಅನುದಾನ, ಈಗಂತೂ ಅದು ಒಂದು ಕೋಟಿ ರೂಪಾಯಿ, ಅದರ ಮೇಲೆ ಸರ್ಕಾರೀ ನೌಕರರ ಒಂದು ದಿನದ ವೇತನ, ಸ್ಥಳೀಯ ಸಂಸ್ಥೆಗಳ ಹಣಕಾಸಿನ ಬೆಂಬಲ, ಮಠ ಮಾನ್ಯಗಳ ಸಹಾಯ ಹೀಗೆ ಒಟ್ಟೂ ಸೇರುವ ಹತ್ತಿರ ಹತ್ತಿರ ನಾಲ್ಕು ಕೋಟಿ ರೂಪಾಯಿ ಒಂದು ಸಮ್ಮೇಳನಕ್ಕೆ ಬಳಸಲಾಗುತ್ತದೆ. &lt;br /&gt;ಮೂರು ದಿನಗಳ ನುಡಿಜಾತ್ರೆಗೆ ಅದ್ದೂರಿ ಖರ್ಚು ಅನಿವಾರ್ಯವೆಂದು ಒಪ್ಪಿಕೊಳ್ಳಬಹುದಾದರೂ ಇಂಥ ಸಮ್ಮೇಳನಗಳ ಫಲಶೃತಿ ಎಷ್ಟರ ಮಟ್ಟಿಗೆ ನಾಡು-ನುಡಿಗಳ ಬೆಳವಣಿಗೆಗೆ ಪೂರಕವಾಗಿದೆ ಮತ್ತು ಸಫಲವಾಗಿದೆ ಎಂಬ ಪ್ರಶ್ನೆ ನಿರುತ್ತರವಾಗಿಯೇ ಉಳಿಯುತ್ತದೆ. ಒಂದು ನಿರ್ದಿಷ್ಟ ವಿಚಾರದ ಮೇಲೆಂದೂ ಚರ್ಚೆ ನಡೆಸದ ಈ ಸಮ್ಮೇಳನಗಳಲ್ಲಿ ಪಾಲ್ಗೊಳ್ಳುವ ವಿಷಯ  ತಜ್ಞರ ಉಪನ್ಯಾಸಗಳಿಗಿಂತಲೂ ಮುಖ್ಯಮಂತ್ರಿಗಳ/ರಾಜಕಾರಣಿಗಳ ರಾಜಕೀಯ ಭಾಷಣಗಳೇ ನಮ್ಮ ಮಾಧ್ಯಮಗಳಲ್ಲಿ ಸಿಂಹ ಪಾಲು ಪಡೆಯುತ್ತವೆ. ಇದುವರೆಗೂ ನಾಲ್ಕೈದು ಸಮ್ಮೇಳನಗಳಲ್ಲಿ ಪ್ರತಿನಿಧಿಯಾಗಿ/ಆಹ್ವಾನಿತನಾಗಿ ಭಾಗವಹಿಸಿರುವ ನಾನು ಯಾವ ಕಾರ್ಯಕ್ರಮವೂ ನಿಗದಿತ ಸಮಯಕ್ಕೆ ಪ್ರಾರಂಭವಾಗಿ ನಿಗದಿತ ಸಮಯಕ್ಕೆ ಮುಕ್ತಾಯವಾದುದನ್ನು ಕಂಡೇ ಇಲ್ಲ. ವಿಷಯವನ್ನು ಪ್ರವೇಶಿಸದೆಯೇ ‘ವಿಚಾರ ಪೂರ್ಣ’ ಭಾಷಣವನ್ನು ನೀಡಿದ ಅಪ್ರತಿಮರನ್ನೂ ಇಂಥ ಸಮ್ಮೇಳನಗಳಲ್ಲಿ ಕಂಡಿದ್ದೇನೆ. ತಮ್ಮ ಹೆಸರು ಒಂದಲ್ಲ ಒಂದು ಗೋಷ್ಠಿಯಲ್ಲಿ ಕನಿಷ್ಠ ಪ್ರತಿಕ್ರಿಯೆಯಲ್ಲಾದರೂ ಇರದಿದ್ದಲ್ಲಿ ಅಂಥ ಸಮ್ಮೇಳನಗಳಿಂದ ದೂರ ಉಳಿಯುವ ‘ಗಣ್ಯ ಸಾಹಿತಿ’ಗಳನ್ನೂ ಕಂಡಿದ್ದೇನೆ. ಇಷ್ಟೆಲ್ಲ ಪೀಠಿಕೆ ಇಲ್ಲದೇ ಮೂಡುಬಿದರೆಯ ‘ನುಡಿಸಿರಿ’ಯನ್ನು, ಅಲ್ಲಿ ನಡೆದ ನಿಜ ಸಾಹಿತ್ಯ ಸಮಾರಾಧನೆಯನ್ನೂ ವರ್ಣಿಸಲಾಗುವುದಿಲ್ಲವಲ್ಲ!&lt;br /&gt;ನುಡಿಸಿರಿ- ಡಾ.ಮೋಹನ ಆಳ್ವ ತಾವು ಕಂಡ ಕನಸನ್ನು ನನಸು ಮಾಡಿದ ಬಗೆ. ೨೦೦೩ರ ಸಾಹಿತ್ಯ ಸಮ್ಮೇಳನವನ್ನು ಮೂಡುಬಿದರೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಸಹಯೋಗದಲ್ಲಿ ನಡೆಸಿ ಬಂದ ಅನುಭವ ಕೂಡ ಅವರ ಈ ಕನಸಿನ ಹಿಂದೆ ಕೆಲಸ ಮಾಡಿದೆ. ಸರ್ಕಾರದ ಅನುದಾನ ಪಡೆದ ಮೇಲೆ ಅದರ ಋಣಕ್ಕೆ ಬಿದ್ದ ಕಾರಣದಿಂದಾಗಿ ಪಾಲಿಸಲೇ ಬೇಕಾದ ಶಿಷ್ಟಾಚಾರವೆಂಬ ಸೋಗು ಕೂಡ ಅವರ ಮನಸ್ಸಿನ ಮೇಲೆ ಇನ್ನಿಲ್ಲದ ಪ್ರಭಾವ ಬೀರಿರಬೇಕು. ಹಾಗೆಂತಲೇ ೨೦೦೪ರಿಂದ ಈವರೆಗೆ  ನಡೆಸಿರುವ ಆರು ನುಡಿಸಿರಿ ಸಮ್ಮೇಳನಗಳನ್ನು  ಸರ್ಕಾರದ ಅಥವಾ ಸಾರ್ವಜನಿಕರ ವಂತಿಗೆ ಪಡೆಯದೇ ಅವರು ಯಶಸ್ವಿಯಾಗಿ ನಡೆಸಿದ್ದಾರೆ. ಸಾಹಿತ್ಯ ಸಮ್ಮೇಳನಗಳಿಗೆ ಹೋಲಿಸಿದರೆ- ಹೋಲಿಸಬಾರದು ಬಿಡಿ. ಏಕೆಂದರೆ ಸರ್ಕಾರದ/ ಆಳುವವರ ಹಂಗಿನಲ್ಲಿ ನಡೆಯುವ ಎಲ್ಲ ಕಾರ್ಯಕ್ರಮಗಳೂ ಗೊತ್ತಿದ್ದೋ/ಗೊತ್ತಿಲ್ಲದೆಯೋ ಕಾಣದ ಕೈಗಳ ಸೂತ್ರಕ್ಕೆ ಕುಣಿದಿರುತ್ತವೆ. ಆದರೆ ನುಡಿಸಿರಿ ಸಂಪೂರ್ಣವಾಗಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಪ್ರಾಯೋಜಕತ್ವದಲ್ಲಿ ಮತ್ತು ಅದರ ಎಲ್ಲ ನೌಕರ ವರ್ಗದವರ ಸಹಕಾರದಲ್ಲಿ ನಡೆಯುತ್ತಿರುವುದರಿಂದ ಎಲ್ಲ ವಿಚಾರಗಳಲ್ಲೂ ಅತ್ಯಂತ ಕರಾರುವಾಕ್ಕಾಗಿ, ಗೌಜು ಗೋಜಲುಗಳಿಲ್ಲದ ನಿರ್ದಿಷ್ಠ ಪ್ರಯತ್ನವಾಗಿ ರೂಪುಗೊಳ್ಳುತ್ತಿದೆ. ಕಳೆದ ಆರು ಸಮ್ಮೇಳನಗಳಲ್ಲಿ ನುಡಿಸಿರಿ ಚರ್ಚಿಸಿದ ವಿಷಯಗಳನ್ನೇ ಗಮನಿಸಿ: ಪ್ರೊ.ಬರಗೂರು ರಾಮಚಂದ್ರಪ್ಪನವರ ಅಧ್ಯಕ್ಷತೆಯಲ್ಲಿ ೨೦೦೪ರಲ್ಲಿ ‘ಕನ್ನಡ ಮನಸ್ಸು:ಸಾಹಿತ್ಯಕ-ಸಾಂಸ್ಕೃತಿಕ ಜವಾಬ್ದಾರಿಗಳು’ ೨೦೦೫ರಲ್ಲಿ ಎಸ್.ಎಲ್.ಭೈರಪ್ಪನವರ ಅಧ್ಯಕ್ಷತೆಯಲ್ಲಿ ‘ಕನ್ನಡ ಮನಸ್ಸು: ಬೌದ್ಧಿಕ ಸ್ವಾತಂತ್ರ್ಯ’ ೨೦೦೬ರಲ್ಲಿ ಡಾ.ಚಂದ್ರಶೇಖರ ಕಂಬಾರರ ಅಧ್ಯಕ್ಷತೆಯಲ್ಲಿ ‘ಕನ್ನಡ ಮನಸ್ಸು:ಪ್ರಚಲಿತ ಪ್ರಶ್ನೆಗಳು’, ೨೦೦೭ರಲ್ಲಿ ಪ್ರೊ.ಜಿ.ವೆಂಕಟಸುಬ್ಬಯ್ಯನವರ ಗುರುತ್ವದಲ್ಲಿ ‘ಕನ್ನಡ ಮನಸ್ಸು: ಸಾಹಿತಿಯ ಜವಾಬ್ದಾರಿಗಳು’, ೨೦೦೮ರಲ್ಲಿ ಡಾ.ಚನ್ನವೀರ ಕಣವಿಯವರ ಅಧ್ಯಕ್ಷತೆಯಲ್ಲಿ ‘ಕನ್ನಡ ಮನಸ್ಸು:ಶಕ್ತಿ ಮತ್ತು ವ್ಯಾಪ್ತಿ’ ಹಾಗೂ ಮೊನ್ನೆ ಸಂಪನ್ನಗೊಂಡ ೨೦೦೯ರ ಪ್ರೊ.ಹಂ.ಪ.ನಾ ಅವರ ಅಧ್ಯಕ್ಷತೆಯಲ್ಲಿ ನಡೆದ ‘ಕನ್ನಡ ಮನಸ್ಸು:ಸಮನ್ವಯದೆಡೆಗೆ’. ಈ ಎಲ್ಲ ನುಡಿಹಬ್ಬಗಳೂ ಒಂದು ವಿಷಯವನ್ನು ಕೇಂದ್ರವನ್ನಾಗಿಟ್ಟುಕೊಂಡು ಅದರ ಸುತ್ತ ನಾಡಿನ ಹಲವು ಚಿಂತಕರ/ವಾಗ್ಮಿಗಳ/ವಿದ್ವಾಂಸರ ಅಭಿಪ್ರಾಯಗಳನ್ನು ಕ್ರೋಢೀಕರಿಸಿಕೊಂಡು ನಮ್ಮೆಲ್ಲರ ಚಿಂತನಶೀಲತೆಗೆ ಹೊಸ ಪರಿಕಲ್ಪನೆ ಮತ್ತು ಸಾಧ್ಯತೆಗಳನ್ನು ವಿಸ್ತರಿಸಿರುವುದನ್ನು ಹೇಗೆ ತಾನೆ ಅಲ್ಲಗಳೆಯಲು ಸಾಧ್ಯ? ಇದರ ಜೊತೆಗೇ ೨೦೦೪ರ ಸಮ್ಮೇಳನವೊಂದನ್ನು ಬಿಟ್ಟು ಉಳಿದೆಲ್ಲ ಸಮ್ಮೇಳನಗಳಲ್ಲಿ ಆಹ್ವಾನಿತ ಗಣ್ಯರೆಲ್ಲರ ಉಪನ್ಯಾಸಗಳನ್ನು ದ್ವನಿಸುರುಳಿಗಳಿಂದ ಸಂಗ್ರಹಿಸಿ ಅಕ್ಷರರೂಪಕ್ಕಿಳಿಸಿ ಪುಸ್ತಕವನ್ನಾಗಿಸಿ ಪ್ರಕಟಿಸಿರುವುದಂತೂ ಅಕ್ಷರಮೋಹ ಇರುವವರೆಲ್ಲ ಮೋಹನ ಆಳ್ವರನ್ನು ಭೇಷ್ ಅನ್ನುವಂತೆ ಮಾಡುತ್ತವೆ. &lt;br /&gt;ಸಮ್ಮೇಳನದ ಉದ್ಘಾಟನೆಯಿಂದ ಅದು ಸಮರೋಪ ಕಾಣುವವರೆಗೂ ಎಲ್ಲ ಕಡೆಯೂ ಸಮಯವನ್ನು ಅತ್ಯಂತ ಕಟ್ಟುನಿಟ್ಟಾಗಿ ಪರಿಪಾಲಿಸುವುದಲ್ಲದೇ ಉದ್ದೇಶಿತ ವಿಷಯದಡಿಯಲ್ಲೇ ಎಲ್ಲ ಚರ್ಚೆಗಳನ್ನು ಕೇಂದ್ರೀಕರಿಸುವುದು ಗೋಷ್ಠಿಗಳ ನಡುವಿನ ಕೆಲವೇ ನಿಮಿಷಗಳನ್ನೂ ಸ್ಥಳೀಯ ಶಾಲೆಗಳ ಮಕ್ಕಳ ಮೂಲಕ ಗಾದೆ ಮಾತುಗಳನ್ನೂ, ಕೃಷಿ ಸಂಬಂಧೀ ಮಾತುಗಳನ್ನೂ, ಕನ್ನಡ ಸಾಹಿತ್ಯದ ಮರೆಯಬಾರದ ಮಾತುಗಳನ್ನೂ ಹೇಳಿಸುವ ಮೂಲಕ ಆ ಮಕ್ಕಳಿಗೂ ಅವಕಾಶಕೊಡುವುದೂ, ಅವರಿಗೆ ಸಾಹಿತ್ಯ ಸಾಂಸ್ಕೃತಿಕ ಲೋಕವನ್ನು ಪರಿಚಯಿಸಿಕೊಡುವುದೂ ಕೇವಲ ದೂರದೃಷ್ಟಿಯುಳ್ಳ ಮಹನೀಯರು ಮಾತ್ರ ಮಾಡಬಹುದಾದ ಅಪರೂಪದ ಹಾಗೂ ಅತಿ ಜರೂರಾಗಿ ಎಲ್ಲರೂ ಅನುಕರಿಸಲೇ ಬೇಕಾದುದೂ ಆಗಿದೆ. &lt;br /&gt;ಬರಿಯ ಸಾಹಿತ್ಯವನ್ನಷ್ಟೇ ಅಲ್ಲದೇ ಸಾಂಸ್ಕೃತಿಕ ಚಟುವಟಿಕೆಗಳಿಗೂ ನುಡಿಸಿರಿ ಅಪಾರ ಅವಕಾಶವನ್ನು ಒದಗಿಸಿಕೊಡುತ್ತದೆ. ಸಂಜೆ ಒಟ್ಟೊಟ್ಟಿಗೇ ನಾಲ್ಕು ಬೇರೆ ಬೇರೆ ವೇದಿಕೆಗಳಲ್ಲಿ ವಿವಿಧ ಕಾರ್ಯಕ್ರಮಗಳು ಜರುಗುತ್ತವೆ. ಯಾರಿಗೆ ಏನು ಇಷ್ಟವೋ ಅವರು ಅದನ್ನು ಸವಿಯಲು/ಆಸ್ವಾದಿಸಲು ಇದಕ್ಕಿಂತ ಹೆಚ್ಚಿನ ಅವಕಾಶ ಬೇಕೆ? ಬೆಳಿಗ್ಗೆ ಆರಕ್ಕೇ ಶಾಸ್ತ್ರೀಯ ಸಂಗೀತ ಮುಖ್ಯ ವೇದಿಕೆಯಲ್ಲಿ. ಗೋಷ್ಠಿಗಳ ನಡುನಡುವೆಯೇ ಮಾತಿನ ಮಂಟಪ-ನಗೆ ಚಟಾಕಿಗಳನ್ನು ಸಿಡಿಸಿದರೆ, ಕವಿ ಸಮಯ-ಕವಿನಮನ, ಕವಿಯ ಮಾತಿನ ಜೊತೆಗೇ ಕವಿತೆಗೆ ರಾಗ ಸಂಯೋಜಿಸಿ ಅದನ್ನು ಕೇಳಿಸುವ ಉತ್ಸಾಹ. ಕಥಾಸಮಯದಲ್ಲಿ ಕತೆಗಾರರು ತಮ್ಮ ಅನನ್ಯ ಅನುಭವಗಳನ್ನು ಹಂಚಿಕೊಳ್ಳುತ್ತಲೇ ತಮ್ಮ ಕತೆಯೊಂದನ್ನು ಓದುವ ಅವಕಾಶ. ಇದರ ಜೊತೆಗೇ ನಾಡು-ನುಡಿಗೆ ಸಂದುಹೋದವರ ನೆನಪಿಗೆ ಮಾತಿನ ಶ್ರದ್ಧಾಂಜಲಿ. &lt;br /&gt;ಬರಿಯ ಬೌದ್ಧಿಕ ಹಸಿವಲ್ಲ ಹೊಟ್ಟೆಯ ಹಸಿವಿಗೂ ಏಕಕಾಲದಲ್ಲಿ ದಾಸೋಹ. ಮುಖ್ಯರಿಗೆ ಬಡಿಸಿದ ಭಕ್ಷ್ಯ ಭೋಜ್ಯಗಳೇ ಪ್ರತಿನಿಧಿಗಳಿಗೂ. ಯಾರಿಗೂ ಯಾವುದರಲ್ಲೂ ವ್ಯತ್ಯಾಸದ ಭಾವವಿಲ್ಲ. ಎಲ್ಲರನ್ನೂ ಏಕತ್ರಗೊಳಿಸಿ ಧನ್ಯರನ್ನಾಗಿಸಿದ ಅಪೂರ್ವ ಕ್ಷಣಗಳು. &lt;br /&gt;ಕನ್ನಡದ ಕೆಲಸಗಳನ್ನು ಬರಿಯ ಸರ್ಕಾರೀ ಸಂಸ್ಥೆಗಳು, ಅಕಾಡೆಮಿ, ಪರಿಷತ್ತಿನಂಥ ಪರತಂತ್ರ ಸಂಸ್ಥೆಗಳು ಮಾತ್ರ ಮಾಡಬೇಕೆನ್ನುವ ಸಾಮಾನ್ಯ ಅಭಿಪ್ರಾಯವನ್ನು ಹುಸಿಗೊಳಿಸಿ ಅದನ್ನು ಈ ನಾಡಿನ ಸಾಹಿತ್ಯ ಸಂಸ್ಕೃತಿಗಳನ್ನು ಗೌರವಿಸುವ ಯಾರೂ ಮಾಡಬಹುದೆನ್ನುವ ಸತ್ಯವನ್ನೂ ಡಾ.ಮೋಹನ ಆಳ್ವ ಮಾಡಿತೋರಿಸುತ್ತಿದ್ದಾರೆ. ಭಾಷೆ ಮತ್ತು ಸಂಸ್ಕೃತಿಗಳನ್ನು ರೂಪಿಸುವ, ನಿರ್ವಚಿಸುವ, ನಿರ್ಧರಿಸುವ ಮತ್ತು ನಿರ್ವಹಿಸುವ ಅವಕಾಶ ಮತ್ತು ಜವಾಬ್ದಾರಿಗಳನ್ನು ಪ್ರಭುತ್ವಗಳ ಮೂಲಕ ಮಾಡಿಸದೇ ಅದನ್ನು ಸಮುದಾಯದ ಮೂಲಕ ಸಾಧಿಸುವ ಪ್ರಯತ್ನ ನುಡಿಸಿರಿಯದ್ದಾಗಿದೆ. ಅದು ಈ ನೆಲದ ಬಹುರೂಪೀ ಸಂಸ್ಕೃತಿಯನ್ನು ಅರ್ಥಮಾಡಿಕೊಳ್ಳುತ್ತಿರುವ ಪುರಾವೆಯಾಗಿಯೂ ಕಾಣುತ್ತಿದೆ. ರಾಜಕೀಯ ಒತ್ತಡಗಳಿಗೆ ಮಣಿಯದೇ, ಧಾರ್ಮಿಕ ಬಣ್ಣಗಳಿಗೂ ಅವಕಾಶ ನೀಡದೇ ಕೇವಲ ಋಜುಮಾರ್ಗದಲ್ಲಿ ನಡೆಸಲೇಬೇಕೆಂಬುದು ಇಡೀ ವ್ಯವಸ್ಥಾಪನಾ ಸಮಿತಿಯ ಕನಸು ನನಸಾದ ಬಗೆ ಇದು. ಅನ್ಯರ ಹಣಕಾಸು ಮುಟ್ಟದೇ ಇರುವ ಕಾರಣಕ್ಕೇ ಇಂಥ ಶಕ್ತಿ ಮತ್ತು ವ್ಯಾಪ್ತಿ ನುಡಿಸಿರಿಗೆ ಸಾಧಿಸಿದೆ. &lt;br /&gt;ನಮ್ಮ ಸರ್ಕಾರ ವಿಶ್ವ ಕನ್ನಡ ಸಮ್ಮೇಳನ ನಡೆಸುತ್ತೇನೆಂದು ಹೇಳುತ್ತಲೇ ಇದೆ. ಹಲವು ಕಾರಣಗಳಿಂದ ಹಲವು ರಾಜಕೀಯ/ಸಾಮಾಜಿಕ ಒತ್ತಡಗಳನ್ನು ಮುಂದುಮಾಡಿ ಅದರ ನೆವದಿಂದ ವಿಶ್ವ ಕನ್ನಡ ಸಮ್ಮೇಳನ ಮುಂದು ಮುಂದಕ್ಕೆ ಹೋಗುತ್ತಲೇ ಇದೆ. ಪಕ್ಕದ ಮಹಾರಾಷ್ಟ್ರದಲ್ಲಿ ನಡೆಯುವ ಸಾಹಿತ್ಯ ಸಮ್ಮೇಳನಕ್ಕೆ ಅಲ್ಲಿನ ಸರ್ಕಾರ ಹಣ ನೀಡಿದರೂ ಅದರಲ್ಲಿ ಭಾಗವಹಿಸಲು ಅದಕ್ಕೆ ಅವಕಾಶ ಇಲ್ಲವಂತೆ. ಆ ನಾಡಿನ ಚಿಂತಕರೂ, ಬುದ್ಧಿಜೀವಿಗಳೂ, ಸಾಹಿತಿಗಳೂ ಹಾಗೂ ಸಾಹಿತ್ಯಾಸಕ್ತರು ಮಾತ್ರ ಭಾಗವಹಿಸುವ ಸಮ್ಮೇಳನ ಅದಂತೆ. ನಮಗೂ ಅಂಥ ಸದವಕಾಶ ಬಂದೀತೆ? ಮುಖ್ಯ ಮಂತ್ರಿಗಳು ಬಂದೇ ಸಮ್ಮೇಳನವನ್ನು ಉದ್ಘಾಟಿಸಬೇಕೆನ್ನುವ ಮನೋಭಾವನೆ ದೂರವಾಗಬೇಕಾದರೆ ಅತ್ಯಗತ್ಯವಾಗಿ ನುಡಿಸಿರಿಯಲ್ಲಿ ಭಾಗವಹಿಸಿ ಅಲ್ಲಿನ ಚರ್ಚೆಗಳಲ್ಲಿ ಭಾಗವಹಿಸಿ ಕಲಿಯಬೇಕು.   &lt;br /&gt;ಮೂರೂ ದಿನ ಅಲ್ಲಿನ ಸಂಭ್ರಮ, ಸಂತೋಷಗಳಲ್ಲಿ ಭಾಗವಹಿಸಿ ಬರುವಾಗ ಕೇವಲ ಕುತೂಹಲಕ್ಕೆ ವ್ಯವಸ್ಥಾಪನಾ ಸಮಿತಿಯಲ್ಲಿರುವ ಒಬ್ಬರನ್ನು ಖರ್ಚು ವೆಚ್ಚಗಳ ಬಗ್ಗೆ ಕೇಳಿದೆ. ನುಡಿಸಿರಿಗೆ ನಲವತ್ತು ಲಕ್ಷ, ವಿರಾಸತ್ ಉತ್ಸವಕ್ಕೆ (ಶಾಸ್ತ್ರೀಯ ಸಂಗೀತ ನೃತ್ಯಗಳ ಹಬ್ಬ) ಅರವತ್ತು ಲಕ್ಷ ನಮ್ಮ ಅಂದಾಜು ವೆಚ್ಚ. ಸ್ವಲ್ಪ ಏರಿಳಿತ ಆಗಬಹುದು ಎಂದರವರು. ಕೇವಲ ನಲವತ್ತು ಐವತ್ತು ಲಕ್ಷಗಳಲ್ಲಿ ಇಷ್ಟು ಅಚ್ಚುಕಟ್ಟಾಗಿ ಸಂಭ್ರಮವಾಗಿ ನುಡಿಹಬ್ಬವನ್ನು ನಡೆಸಬಹುದಾದಲ್ಲಿ ನಮ್ಮ ಸಾಹಿತ್ಯ ಸಮ್ಮೇಳನಗಳಿಗೇಕೆ ನಾಲ್ಕೈದು ಕೋಟಿ ಸುರಿಯುತ್ತಿದ್ದೇವೆ/ಸಾರ್ವಜನಿಕರ ದುಡ್ಡನ್ನು ದುಂದು ಮಾಡುತ್ತಿದ್ದೇವೆ ಅನ್ನುವ ಪ್ರಶ್ನೆಗಳನ್ನು ನಿಮ್ಮಲ್ಲಿಯೂ ಹುಟ್ಟಿಸಿ ಈ ಲೇಖನವನ್ನು ಪರಿಸಮಾಪ್ತಿಗೊಳಿಸುತ್ತಿದ್ದೇನೆ.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/5254102750204147054-3265709052141762611?l=bemkikaddi.blogspot.com' alt='' /&gt;&lt;/div&gt;</content><link rel='replies' type='application/atom+xml' href='http://bemkikaddi.blogspot.com/feeds/3265709052141762611/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://www.blogger.com/comment.g?blogID=5254102750204147054&amp;postID=3265709052141762611' title='0 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/5254102750204147054/posts/default/3265709052141762611'/><link rel='self' type='application/atom+xml' href='http://www.blogger.com/feeds/5254102750204147054/posts/default/3265709052141762611'/><link rel='alternate' type='text/html' href='http://bemkikaddi.blogspot.com/2009/11/blog-post.html' title='ನುಡಿಸಿರಿ- ಸಾಹಿತ್ಯ ಮತ್ತು ಸಂಸ್ಕೃತಿಗಳ ಭವ್ಯ ಮಿಲನ'/><author><name>ಬೆಂಕಿಕಡ್ಡಿ</name><uri>http://www.blogger.com/profile/13181705369161334860</uri><email>noreply@blogger.com</email><gd:image rel='http://schemas.google.com/g/2005#thumbnail' width='21' height='32' src='http://4.bp.blogspot.com/_bUAIZF0Yo1g/TKdTK-6rv2I/AAAAAAAAAJY/QXUJAVKh9ps/S220/dsr4.jpg'/></author><thr:total>0</thr:total></entry><entry><id>tag:blogger.com,1999:blog-5254102750204147054.post-7182203628146538868</id><published>2009-10-30T22:02:00.001+05:30</published><updated>2009-10-30T22:06:42.244+05:30</updated><title type='text'>ರಾಜ್ಯೋತ್ಸವ ವಿಶೇಷ</title><content type='html'>ವಿಜಯನಗರ ಸಾಮ್ರಾಜ್ಯ ೧೫೨೬ಕ್ಕೆ ಪತನಗೊಂಡ ನಂತರ ಕನ್ನಡಿಗರಿಗೆ ಒಂದು ಅಖಂಡ ರಾಜ್ಯ ಇಲ್ಲವಾಯಿತು. ಕಾವೇರಿಯಿಂದ ಕೃಷ್ಣಾನದಿ ಮತ್ತು ಪಶ್ಚಿಮ ಘಟ್ಟದ-ಕರಾವಳಿಯಿಂದ ಆಂಧ್ರದ ತೆಲಂಗಾಣದವರೆಗೂ ಕನ್ನಡಿಗರ ನಾಡು ಅಖಂಡವಾಗಿ ಉಳಿದಿತ್ತು. ಚಾಲುಕ್ಯರು ರಾಷ್ಟ್ರಕೂಟರುಕಟ್ಟಿದ ಕರ್ನಾಟಕ ಸಾಮ್ರಾಜ್ಯ ಕನ್ನಡ ಭಾಷೆ, ಸಾಹಿತ್ಯ, ಕಲೆ, ತತ್ವಜ್ಞಾನ ಜನಪದಗಳ ಸುಂದರ ನೆಲೆಯಾಗಿತ್ತು. ಕನ್ನಡಿಗರಿಗೆ ಹೆಮ್ಮೆ ತರುವ ವಾತಾವರಣ ಇತ್ತು. ಮುಂದೆ ನಾನಾ ಅನ್ಯ ಅರಸರ ಆಳಿಕೆ ಸುರುವಾಗಿ ಕನ್ನಡನಾಡು ಅಖಂಡವಾಗಿ ಬೆಳೆಯುವ ಅವಕಾಶ ಕಳಚಿಕೊಂಡು, ಕೆಲವು ಭಾಗಗಳು ಅನಾಥವಾದುವು;ಹಿಂದುಳಿದುವು;ಸ್ವಂತಿಕೆಯ ಲಕ್ಷಣಗಲು ಮಾಯವಾದುವು.&lt;br /&gt;ಈ ಪರಿಸ್ಥಿತಿ ೧೯೫೬ರವರೆಗೂ ಇತ್ತು. ಅಂದರೆ ಮೈಸೂರು ರಾಜ್ಯ ಎಂದು ಪುನರ್ನಿಮಾಣವಾಗುವವರೆಗೆ ಕನ್ನಡಿಗರು ಚದುರಿಹೋಗಿದ್ದರು. ೧೯೨೦ರಲ್ಲಿ  ಭಾರತದಲ್ಲಿ ಸ್ವಾತಂತ್ರ್ಯ ಚಳವಳಿ ವೇಗದಿಂದ ಮುನ್ನಡೆಯತೊಡಗಿತೋ ಆಗ, ಹೊಸ ಶಿಕ್ಷಣದ ಅರಿವಿನಿಂದ ಗತ ವೈಭವದ ನೆನಪಿನಿಂದ ಕನ್ನಡಿಗರು ಎಚ್ಚೆತ್ತರು. ಬೇರೆ ಬೇರೆ ಭಾಗಗಳಲ್ಲಿ ಒಡೆದು ಹೋಗಿದ್ದ ನಾಡನ್ನು ಒಂದುಗೂಡಿಸುವ ಸಂಕಲ್ಪ ಹುಟ್ಟಿತು. ಇದಕ್ಕೆ ನಾಂದಿ ಹಾಡಿದವರು ಆಲೂರು ವೆಂಕಟರಾಯರು. ಏಕೀಕರಣದ ಮಂತ್ರ ಹೇಳಿ, ನಾಡಿಗರನ್ನು ಎಚ್ಚರಿಸಿದ ಆಲೂರರು ‘ಕರ್ನಾಟಕ ಕುಲ ಪುರೋಹಿತ’ರೆನಿಸಿದ್ದಾರೆ.&lt;br /&gt;೧೯೦೭ರಿಂದ ಏಕೀಕರಣ ಚಳವಳಿ ಆರಂಭವಾಯಿತು. ರಾಷ್ಟ್ರೀಯ ಚಳವಳಿ ನಡೆದದ್ದು ಬ್ರಿಟಿಷರ ವಿರುದ್ಧ. ಅದರ ಜತೆಗೇ ನಡೆದ ಏಕೀಕರಣ ಚಳವಳಿ ಯಾರ ವಿರುದ್ಧವೂ ಆಗಿರದೆ ಕನ್ನಡದ ‘ನವೋದಯ’ದಪರವಾಗಿ. ಕನ್ನಡಿಗರಲ್ಲಿ ಸ್ವಂತಿಕೆಯನ್ನು ರೂಢಿಸಿಕೊಳ್ಳುವ ಅಗತ್ಯವಿತ್ತು. ಹಳೆಯದನ್ನು ಹೊಸಬೆಳಕಿನೊಂದಿಗೆ ಮುಂದುವರೆಸಿಕೊಂಡು, ಕನ್ನಡದ ದಾರಿ ನಿರ್ಮಿಸಿಕೊಳ್ಳುವ ಅಗತ್ಯವಿತ್ತು.&lt;br /&gt;ಕನ್ನಡದ ದಾರಿ ಎಂದರೆ, ನಮ್ಮತನವನ್ನು ಉಳಿಸಿಕೊಂಡು ಬೆಳೆಸಿಕೊಂಡು ಜ್ಞಾನ-ವಿಜ್ಞಾನದ ಸಹಕಾರದಿಂದ ಹೊಸತನವನ್ನು ಸಾಧಿಸುವುದು. ಕನ್ನಡಗಳು ಕರ್ನಾಟಕದಲ್ಲಿವೆ. ಅವುಗಳ ನಡುವೆ ಇರುವ ವ್ಯತ್ಯಾಸಗಳು ಉಚ್ಚಾರಣಾಕ್ರಮದ್ದು. ಆದರೆ ಶಿಷ್ಟ ಕನ್ನಡ ಎಂಬುದು ಒಂದಿದೆ. ಅದರಲ್ಲಿ ಈ ನಾಡಿನ ಭಾವೈಕ್ಯದ  ಬೀಜಗಳಿವೆ. ಭಾವೈಕ್ಯವೇ ಸಹಕಾರದ ಮೂಲ. ಕನ್ನಡ ಜ್ಞಾನದಿಂದ ರಾಜ್ಯವನ್ನು ಕಟ್ಟಿದಾಗ ಪರಂಪರೆಯ ಸೊಗಸು ಬರುತ್ತದೆ. ಭಾವ ಪರಂಪರೆಗೆ ಕಾರಣವಾದ ಹಳೆಯ ಅಂಶಗಳೆಂದರೆ ಸಾಹಿತ್ಯದಲ್ಲಿ ದಾಖಲಾಗಿರುವ ಕನ್ನಡಿಗರ ಚರಿತ್ರೆ. ಕವಿರಾಜ ಮಾರ್ಗಕಾರನು ೧,೧೫೦ ವರ್ಷಗಳ ಹಿಂದೆ ಇದನ್ನೇ ಹೇಳಿದ್ದ: ನಾಡವರ್ಗಗಳು ವಿವಿಧ. ಬಣ್ಣಗಳು ಹಲವು. ಆದರೆ ವಿವೇಕ ಒಂದೇ. ರಾಜಕೀಯ ದೌರ್ಬಲ್ಯಗಳಿಂದಾಗಿ ವಿವೇಕ ಮರೆತಿತ್ತು. ಕನ್ನಡದ ವಿವೇಕ ಸಾಹಿತ್ಯದಲ್ಲಿ, ಸಂಗೀತದಲ್ಲಿ ರಕ್ತಗತವಾಗಿದೆ. ಅದನ್ನು ಎಲ್ಲರೂ ಸಾಮೂಹಿಕವಾಗಿ ಗಮನಕ್ಕೆ ತಂದುಕೊಂಡು, ಭಾಷಿಕ ಏಕಾತ್ಮ ಭಾವ ಅನುಭವಿಸಬೇಕು. ಆದರೆ ಪರಕೀಯ ಆಡಲಿತದಲ್ಲಿ ಅದು ಸಾಧ್ಯವಾಗಲಿಲ್ಲ. ೩೦ ವರ್ಷಗಳ ಚಳುವಳಿಯ ನಂತರ ಗಾಂಧೀಜಿಯ ಭಾಷಾವಾರು ಪ್ರಾಂತ ರಚನೆ ತತ್ವದ ಮೇರೆಗೆ ಕನ್ನಡಿಗರಿಗೆ ಅಖಂಡ-ಸಂಯುಕ್ತ ರಾಜ್ಯ ಆಡಲಿತಕ್ಕೆ ಸಿಕ್ಕಿತು-ಅದೇ ರಾಜ್ಯೋದಯ.&lt;br /&gt;ಕನ್ನಡದ ಶಕ್ತಿಯುಕ್ತಿಗೆ ಐತಿಹಾಸಿಕ ಪರಂಪರೆ ಇದೆ. ಅದನ್ನು ಮರೆಯದಂತೆ, ಹೊರಗಿನ ಕೆಟ್ಟ ಪ್ರಭಾವಗಳಿಗೆ ಸಿಗದಂತೆ ಕನ್ನಡವನ್ನು ಮಾತಿನಲ್ಲಿ, ಆಡಳಿತದಲ್ಲಿ, ಬರಹದಲ್ಲಿ ಬಳಸಿ ಉಳಿಸಿಕೊಳ್ಳಬೇಕಾಗಿದೆ. ‘ಕನ್ನಡ’ ಭಾರತದಲ್ಲಿ ಶಾಸ್ತ್ರೀಯ ಸ್ಥಾನ ಪಡೆದ ಮೂರನೇಯ ಭಾಷೆ. ಇದರ ಹೆಮ್ಮೆ, ಅಭಿಮಾನ ಸಾಮೂಹಿಕವಾಗಿ ಇದ್ದಾಗ-ಕನ್ನಡ-ಕನ್ನಡಿಗ-ಕರ್ನಾಟಕ-ಮೂರಕ್ಕೂ ನೆಲೆ,ಬೆಲೆ.&lt;br /&gt;-ಸರ್ವಜಿತ, ಹುಬ್ಬಳ್ಳಿ&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/5254102750204147054-7182203628146538868?l=bemkikaddi.blogspot.com' alt='' /&gt;&lt;/div&gt;</content><link rel='replies' type='application/atom+xml' href='http://bemkikaddi.blogspot.com/feeds/7182203628146538868/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://www.blogger.com/comment.g?blogID=5254102750204147054&amp;postID=7182203628146538868' title='0 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/5254102750204147054/posts/default/7182203628146538868'/><link rel='self' type='application/atom+xml' href='http://www.blogger.com/feeds/5254102750204147054/posts/default/7182203628146538868'/><link rel='alternate' type='text/html' href='http://bemkikaddi.blogspot.com/2009/10/blog-post.html' title='ರಾಜ್ಯೋತ್ಸವ ವಿಶೇಷ'/><author><name>ಬೆಂಕಿಕಡ್ಡಿ</name><uri>http://www.blogger.com/profile/13181705369161334860</uri><email>noreply@blogger.com</email><gd:image rel='http://schemas.google.com/g/2005#thumbnail' width='21' height='32' src='http://4.bp.blogspot.com/_bUAIZF0Yo1g/TKdTK-6rv2I/AAAAAAAAAJY/QXUJAVKh9ps/S220/dsr4.jpg'/></author><thr:total>0</thr:total></entry><entry><id>tag:blogger.com,1999:blog-5254102750204147054.post-3054009849842242376</id><published>2009-09-04T08:44:00.001+05:30</published><updated>2009-09-04T08:49:12.059+05:30</updated><title type='text'>ವಿಘ್ನ ವಿನಾಶಕ ವಿನಾಯಕ</title><content type='html'>ಆಷಾಡದ ಗಾಳಿಮಳೆಗಳು ಶ್ರಾವಣದ ಕುಂಭದ್ರೋಣ ಕಡಿಮೆಯಾಗಿ ಭಾದ್ರಪದ ಕಾಲಿಟ್ಟಿದೆ. ಚರಾಚರ ಪ್ರಕೃತಿಯಲ್ಲಿ ಮೇಳೈಸಿದ್ದ ಜಡತನ ಹಿಂದೆ ಸರಿದು ಜೀವನೋತ್ಸಾಹ ಪುಟಿದೇಳುವ ಕಾಲವಿದು ಎಂದು ಆಯುರ್ವೇದ ಹೇಳುತ್ತದೆ. ಮಳೆ ಕಡಿಮೆಯಾದ ಕಾರಣ ರೈತಾಪಿ ಜನರೂ ಬರುವ ದಿನಗಳ ನಿರೀಕ್ಷೆಯಲ್ಲಿ ಇರುತ್ತಾರೆ. ಭಾದ್ರಪದ ಶುಕ್ಲದ ಚೌತಿ ವಿನಾಯಕನ ಹಬ್ಬ. ಗೌರಿ ಮತ್ತು ಗಣೇಶರ ಹಬ್ಬ ಜನಸಮುದಾಯದಲ್ಲಿ ಹರ್ಷ-ಸಂಭ್ರಮಗಳನ್ನು ಅರಳಿಸುತ್ತದೆ. &lt;br /&gt;ಭಾರತೀಯ ದೇವತೆಗಳಲ್ಲಿ ಅತ್ಯಂತ ಲೋಕ ಖ್ಯಾತನಾದವನು ಗಣೇಶನೇ. ಅವನು ಕೇವಲ ವಿಘ್ನ ನಾಶಕನಷ್ಟೇ ಅಲ್ಲ, ಸಿದ್ಧಿ ಪ್ರದಾಯಕನೆಂದೂ ಪೂಜಿಸಲ್ಪಡುತ್ತಾನೆ. ಎಲ್ಲ ಕೆಲಸಗಳ ಆರಂಭದಲ್ಲೂ ಗಣೇಶನನ್ನು ಪ್ರಾರ್ಥಿಸುವುದು ಪಾರಂಪರಿಕವಾಗಿ ನಡೆದು ಬಂದ ಆಚರಣೆ. ಹೀಗೆ ಅಗ್ರಪೂಜೆಗೂ ಮೊದಲ ನಮಸ್ಕಾರದ ಮನ್ನಣೆಗೂ ಪಾತ್ರನಾಗುವ ವಿನಾಯಕ ಭಕ್ತರ ಸಂಕಲ್ಪ ಶಕ್ತಿಗೆ ಬಲದುಂಬಿ ಕಾರ್ಯಸಿದ್ಧಿಯಾಗುವಂತೆ ಹರಸುತ್ತಾನೆಂಬ ನಂಬಿಕೆ ಇದೆ. ಮಹರ್ಷಿ ವೇದವ್ಯಾಸರು ರಚಿಸಿದ ಮಹಾಭಾರತ ಕೃತಿಗೆ ಗಣಪತಿಯೇ ಲಿಪಿಕಾರನೆಂಬ ಹೇಳಿಕೆಯೂ ಪ್ರಸಿದ್ಧವಾದುದೇ ಆಗಿದೆ. ನಮ್ಮ ಪ್ರಾಚೀನ ಕಾವ್ಯಗಳ ಆರಂಭವಂತೂ ಗಣಪತಿಯನ್ನು ನಮಿಸದೇ ಮುಂದೆ ಹೋಗುವುದೇ ಇಲ್ಲ. ಕವಿ, ಕಲಾವಿದ, ಪಂಡಿತ, ಪಾಮರರೆಲ್ಲರಿಗೂ ಗಣೇಶ ಪರಮಪ್ರಿಯ ದೇವರು.&lt;br /&gt;ಮುಂಜಾನೆ ಮೂಡಣದ ಅಂಚಿನಲ್ಲಿ ನಿಧಾನವಾಗಿ ಸಣ್ಣವನಾಗಿ ಕಾಣಿಸಿಕೊಂಡು ನಂತರ ಭೂಮ್ಯಾಕಾಶಗಳನ್ನೆಲ್ಲ ಆವರಿಸಿಕೊಳ್ಳುವ ಸೂರ್ಯನಂತೆ ಸಿದ್ಧಿಪ್ರದ ವಿನಾಯಕನು ಭೂಮ್ಯಾಕಾಶಗಳನ್ನೆಲ್ಲ ವ್ಯಾಪಿಸಿರುವನೆಂದು ಲಕ್ಷೀಶ ಕವಿ ತನ್ನ ಜೈಮಿನಿ ಭಾರತದಲ್ಲಿ ವರ್ಣಿಸಿದ್ದಾನೆ. ಭಾವಜಗತ್ತನ್ನೂ, ಬೌಧ್ಧಿಕ ಜಗತ್ತನ್ನೂ, ವಿಜ್ಞಾನ ಜಗತ್ತನ್ನೂ ಸರಿಸಮನಾಗಿ ವ್ಯಾಪಿಸಿರುವ ಗಣೇಶನನ್ನು ಕುರಿತ ದಂತ ಕತೆಗಳೂ ಲೆಕ್ಕಕ್ಕೇ ಸಿಕ್ಕದಷ್ಟು ಹೇರಳವಾಗಿವೆ. ಶಿವ ಪುರಾಣದಲ್ಲಿ ವರ್ಣಿತನಾಗಿರುವಂತೆ -ಮತ್ತ ಮಾತಂಗ ವದನೋ, ಗಂಗೋಮಾ ಶಂಕರಾತ್ಮಜಃ, ಆಕಾಶದೇಹೋ, ದಿಗ್ಬಾಹುಃ, ಸೋಮಃ ಸೂರ್ಯಾಗ್ನಿಲೋಚನಃ- ಮದಿಸಿರುವ ಆನೆಯ ವದನವಿರುವ ವಿನಾಯಕ ಗಂಗೆ,ಉಮೆ ಮತ್ತು ಶಂಕರರ ಮುದ್ದಿನ ಮಗ. ಆಕಾಶವೇ ಅವನ ಶರೀರವಾದರೆ, ದಿಕ್ಕುಗಳವನ ತೋಳುಗಳು. ಸೂರ್ಯ ಚಂದ್ರರೇ ಅವನ ಕಣ್ಣುಗಳು.- ಈ ವಿಭೂತಿ ರೂಪವನ್ನು ಕಲ್ಪಿಸಿಕೊಂಡ ಮನಸ್ಸಿನ ಹಿಂದೆ ಇರುವ ಭೂಮ ಕಲ್ಪನೆ ಅದ್ಭುತವಾದುದು. &lt;br /&gt;ಪೌರಾಣಿಕ ಮತ್ತು ಜಾನಪದ ಕಥೆಗಳಂತೂ ಗಣೇಶನ ಹುಟ್ಟು ಅವನ ಲೀಲೆ ಮತ್ತು ಮಹಿಮೆಗಳನ್ನು ಹಾಡಿಹೊಗಳಿವೆ. ಆ ಕಥೆಗಳ ಹಿಂದಿರುವ ರೋಚಕ ಕಲ್ಪನೆಯಂತೂ ರಮ್ಯಲೋಕವನ್ನು ಕೇಳುಗನಲ್ಲಿ ಮೂಡಿಸುತ್ತವೆ. ಈ ಕಲ್ಪಿತ ಆವರಣಗಳಿಂದ ಅವನನ್ನು ಬೇರ್ಪಡಿಸಿ ಸಾಕ್ಷಾತ್ ಪರಬ್ರಹ್ಮ ಸ್ವರೂಪನೆಂಬ ಎತ್ತರದ ನೆಲೆಯಲ್ಲಿ ಪರಿಭಾವಿಸಿದ ದಾರ್ಶನಿಕ ಚಿಂತನೆಯೂ ನಮಗೆ ಗೊತ್ತಿದೆ. ಇಡೀ ಬ್ರಹ್ಮಾಂಡದ ಆದಿ, ಮಧ್ಯ, ಅಂತ್ಯಗಳಲ್ಲಷ್ಟೇ ಅಲ್ಲದೆ ಸೃಷ್ಟಿಯ ಎಲ್ಲ ವ್ಯಾಪಾರಗಳಲ್ಲೂ ಗಣಪತಿಯ ಪಾರಮ್ಯವನ್ನೇ ಕಂಡ ಚಿಂತನೆಯೂ ನಮ್ಮ ಪ್ರಾಚೀನ ಚಿಂತನಗಳಲ್ಲಿವೆ. ಅಥರ್ವಶೀರ್ಷದಲ್ಲಿ ಅವನನ್ನು ಹೀಗೆ ವರ್ಣಿಸಲಾಗಿದೆ. - ಸರ್ವಂ ಜಗದಿದಂ ತ್ವತ್ತಸ್ತಿಷ್ಟತಿ, ಸರ್ವಂ ಜಗದಿದಂ ತ್ವಯಿಲಯಮೇಷ್ಯತಿ. ಸರ್ವಂ ಜಗದಿದಂ ತ್ವಯಿಪ್ರತ್ಯೇತಿ, ತ್ವಂ ಭೂಮಿರಾಪೋನಲೋನಿಲೋ ನಭಃ -ಈ ಜಗತ್ತು ನಿನ್ನ ಕಾರಣದಿಂದಲೇ ಉಂಟಾಗಿದೆ. ನಿನ್ನಾಧಾರದ ಮೇಲೇ ನಿಂತಿದೆ. ಕಡೆಗೂ ನಿನ್ನಲ್ಲಿಯೇ ಲೀನವಾಗುವುದು ಈ ಜಗತ್ತು. ಭೂಮಿ, ನೀರು, ಗಾಳಿ, ಬೆಂಕಿ, ಆಕಾಶ ಪಂಚಭೂತಗಳಲ್ಲೂ ನೀನೇ ತುಂಬಿದ್ದೀ-&lt;br /&gt;ಇಂಥ ಉನ್ನತ ನೆಲೆಯಲ್ಲಿ ನಮ್ಮ ಹಿರಿಯರು ಕಂಡಿದ್ದ ಗಣೇಶ ಇವತ್ತು ಬೀದಿಬೀದಿಗಳ ಪೆಂಡಾಲುಗಳಲ್ಲಿ, ಶಾಲೆ ಕಾಲೇಜುಗಳ ಅಂಗಳದಲ್ಲಿ ಅಷ್ಟೇ ಏಕೆ ಸಂತೆ ಮಾಳಗಳ ಜನಸಾಗರದ ಮಧ್ಯದಲ್ಲೂ ವಿಜೃಂಭಿಸುತ್ತಿದ್ದಾನೆ. ಭಕ್ತಿಗೋ ಭಾವಕ್ಕೋ ಅಥವ ವಸೂಲಿ ದಂಧೆಯ ವ್ಯಾಪರಕ್ಕೋ ಪಕ್ಕಾಗುತ್ತಿದ್ದಾನೆ. ಸಿನಿಮಾ ಸಂಗೀತಗಳ ಭರಾಟೆಯಲ್ಲಿ, ಡಿಸ್ಕೋ ಹಾಡುಗಳ ದರಬಾರಿನಲ್ಲಿ ಕೂಡ ಗಣೇಶನ ಮೂರ್ತಿ ಇರುವುದು ಪರಿಸ್ಥಿತಿಯ ವ್ಯಂಗ್ಯವಾಗಿದೆ. &lt;br /&gt;ಉನ್ನತ ನೆಲೆಯಲ್ಲಿ ವಿದ್ಯಾಧಿದೇವತೆಯೆಂದೂ ಪರಿಗಣಿಸಿರುವ ಗಣೇಶ ನಮ್ಮೆಲ್ಲರಲ್ಲೂ ನಾಳಿನ ಒಳ್ಳೆಯದಕ್ಕಾಗಿ ಇಂದು ನಾವು ಕೈಗೆತ್ತಿಕೊಳ್ಳಬೇಕಾದ ಕೆಲಸಕಾರ್ಯಗಳನ್ನು ನಿರ್ವಿಘ್ನವಾಗಿ ನಡೆಸಿಕೊಡಲಿ ಎಂಬುದು ಗಣೇಶ ಚೌತಿಯ ಪ್ರಾರ್ಥನೆಯಾಗಿದೆ. ಇನ್ನು ಗಣೇಶನ ತಾಯಿ ಗೌರಿಯಂತೂ ಸಾಕ್ಷಾತ್ ಪರಶಿವನ ಮಡದಿಯಾಗಿಯೂ ಲೌಕಿಕದ ಎಲ್ಲ ಹೆಣ್ಣುಮಕ್ಕಳ ಹಾಗೆ ಕಷ್ಟ-ಸುಖಗಳನ್ನು ಕಂಡವಳು. ದಾಕ್ಷಾಯಣಿಯಾಗಿ ಅವತರಿಸಿ ಶಿವನನ್ನೇ ವರಿಸಿದ ಛಲವಂತೆ ಅವಳು. ಹೀಗೆ ಗೌರಿ-ಗಣೇಶರ ಹಬ್ಬ ತಾಯಿ-ಮಗುವಿನ ಬಾಂಧವ್ಯದ ಸಂಕೇತವಾಗಿ ನಮಗೆಲ್ಲ ಪಾಠ ಹೇಳುತ್ತಲೇ ಇರುವುದನ್ನೂ ನಾವು ಗಮನಿಸಲೇಬೇಕು.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/5254102750204147054-3054009849842242376?l=bemkikaddi.blogspot.com' alt='' /&gt;&lt;/div&gt;</content><link rel='replies' type='application/atom+xml' href='http://bemkikaddi.blogspot.com/feeds/3054009849842242376/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://www.blogger.com/comment.g?blogID=5254102750204147054&amp;postID=3054009849842242376' title='0 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/5254102750204147054/posts/default/3054009849842242376'/><link rel='self' type='application/atom+xml' href='http://www.blogger.com/feeds/5254102750204147054/posts/default/3054009849842242376'/><link rel='alternate' type='text/html' href='http://bemkikaddi.blogspot.com/2009/09/blog-post_04.html' title='ವಿಘ್ನ ವಿನಾಶಕ ವಿನಾಯಕ'/><author><name>ಬೆಂಕಿಕಡ್ಡಿ</name><uri>http://www.blogger.com/profile/13181705369161334860</uri><email>noreply@blogger.com</email><gd:image rel='http://schemas.google.com/g/2005#thumbnail' width='21' height='32' src='http://4.bp.blogspot.com/_bUAIZF0Yo1g/TKdTK-6rv2I/AAAAAAAAAJY/QXUJAVKh9ps/S220/dsr4.jpg'/></author><thr:total>0</thr:total></entry><entry><id>tag:blogger.com,1999:blog-5254102750204147054.post-760743281968182118</id><published>2009-09-02T22:44:00.001+05:30</published><updated>2009-09-02T22:48:45.264+05:30</updated><title type='text'>ಕೃಷ್ಣನೆಂಬ ಮನೋಚಿಕಿತ್ಸಕ</title><content type='html'>ಗೀತಾಚಾರ್ಯನಾದ ಶ್ರೀ ಕೃಷ್ಣ ಭಾರತೀಯ ಚಿಂತನೆ ಮತ್ತು ಜೀವನ ತತ್ವಗಳ ಮೇಲೆ ಅದ್ಭುತ ಪ್ರಭಾವ ಬೀರಿದವನು. ಅತ್ಯಂತ ಆಳವಾಗಿ ಮತ್ತು ವಿಸ್ತಾರವಾಗಿ ಅವನ ಪ್ರಭಾವಳಿ ಇದೆ. ನಮ್ಮ ಮತಧರ್ಮ- ತತ್ವ ದೃಷ್ಟಿ, ಅಧ್ಯಾತ್ಮ- ಯೋಗ, ಕಾವ್ಯ- ಶಿಲ್ಪ, ಸಂಗೀತ-ನರ್ತನ, ಸಂಸ್ಕೃತಿ-ನಾಗರೀಕತೆ ಹೀಗೆ ಜೀವನದ ವೈವಿಧ್ಯತೆಗೆ ಸಂಬಂಧಿಸಿದ ಎಲ್ಲ ಕ್ಷೇತ್ರಗಳಲ್ಲಿಯೂ ಅವನು ಇದ್ದಾನೆ. ಅಂದರೆ ಈ ಎಲ್ಲ ಕ್ಷೇತ್ರಗಳ ಪರಿಣಿತರಿಗೂ ಕೃಷ್ಣನ ಪ್ರಭಾವಲಯ ತಟ್ಟಿದೆ. ಅವನು ನಮ್ಮೆಲ್ಲರ ಹೃದಯ-ಬುದ್ಧಿಗಳನ್ನು ಆಕರ್ಷಿಸಿದ ಸರ್ವಕಾಲಿಕ ಕಿಂದರಜೋಗಿಯೆಂದೇ ಖ್ಯಾತನಾಗಿದ್ದಾನೆ. ಯುವಕ-ಯುವತಿಯರು, ಋಷಿ-ಮುನಿಗಳು, ಪಂಡಿತ-ಪಾಮರರು, ವ್ಯವಹಾರ ಚತುರರು-ರಾಜಕೀಯ ನಿಪುಣರೂ ಅವನ ಮಾಂತ್ರಿಕ ಶಕ್ತಿಗೆ ತಲೆದೂಗಿದ್ದಾರೆ.&lt;br /&gt;&lt;br /&gt;ಭಾಗವತ ಮತ್ತು ಭಾರತದ ಕತೆಗಳಂತೆಯೇ ನಮ್ಮ ಜಾನಪದರೂ ಕೃಷ್ಣನನ್ನು ಪೋಷಿಸಿ ಬೆಳಸಿದ್ದಾರೆ. ಅವನ ಜೀವನದ ಘಟನೆಗಳಿಗೆ ಲೌಕಿಕದ ಆಸೆ-ಆಮಿಷಗಳನ್ನೂ ತಳುಕು ಹಾಕಿ ಸಂಭ್ರಮಿಸಿದ್ದಾರೆ. ಶೈಶವದಿಂದಲೂ ಗಾರುಡಿಗನೆಂದೇ ಬಿಂಬಿಸಲ್ಪಟ್ಟ ಅವನು ಬಾಲ್ಯದಲ್ಲಿ ಬೆಣ್ಣೆ ಕದ್ದ ಬಾಲಕೃಷ್ಣ, ಯೌವನದಲ್ಲಿ ಗೋಪಿಯರ ಮನಸ್ಸು ಕದ್ದ ಗೋಪೀ ಕೃಷ್ಣ, ದ್ವಾರಕೆಯನ್ನು ಕಟ್ಟಿದ ನಿರ್ಮಾತೃ ಶ್ರೀ ಕೃಷ್ಣ, ಪಾಂಡವರ ಪರವಾಗಿ ನಿಂತ ಧರ್ಮೋದ್ಧಾರಕ, ಯುದ್ಧದ ಗೊಂದಲದ ನಡುವೆಯೇ  ಗೀತೆಯನ್ನು ಬೋಧಿಸಿದ ಗೀತಾಚಾರ್ಯ. &lt;br /&gt;&lt;br /&gt;ಹೀಗೆ ಸಲಹೆಗಾರನಾಗಿ, ರಾಯಭಾರಿಯಾಗಿ, ಸದಾ ಧರ್ಮದ ಪರವಾಗಿ, ಸದ್ಗುಣಿಗಳ ಪರವಾಗಿ, ದಿಕ್ಕಿಲ್ಲದವರ ಪರವಾಗಿ ಅವನು ನಿಂತಿದ್ದಾನೆ. ರಾಜಕೀಯವಾಗಿ ಪ್ರಮುಖ ಸ್ಥಾನವನ್ನು ಪಡೆಯದೆಯೂ ರಾಜನಿರ್ಮಾತೃವಾಗಿಯೇ ಅವನು ಉಳಿದಿದ್ದಾನೆ. ತನ್ನ ತಂತ್ರ, ಪ್ರತಿತಂತ್ರಗಳಿಂದ ರಾಜಕಾರಣವನ್ನು ನಿಯಂತ್ರಿಸಿದ ಕೃಷ್ಣ ಸದಾ ಸುಚೇತನ ಸ್ವರೂಪಿ. ಕುರುಕ್ಷೇತ್ರದ ಯುದ್ಧಭೂಮಿಯಲ್ಲಿ ಶಸ್ತ್ರ ಸನ್ಯಾಸ ಮಾಡಿದ್ದ ಅರ್ಜುನನಿಗೆ ಸಾರಥಿಯಾಗಿ, ವಿಷಾದ ಭರಿತನಾಗಿದ್ದ ಪಾರ್ಥನಿಗೆ ಬುದ್ಧಿ-ಮನಸ್ಸುಗಳ ಸ್ಥಿಮಿತತೆಯನ್ನು ಬೋಧಿಸಿದವನು. ಗೀತೆಯ ಒಂದೊಂದು ಸಾಲೂ ಸೋಲಿನ ಭಯದಲ್ಲಿರುವವರಿಗೆ ಗೆಲುವಿನ ಸಂಜೀವಿನಿ ಕೊಡುವಂಥದು. &lt;br /&gt;&lt;br /&gt;ಭಗವದ್ಗೀತೆಯಲ್ಲಿ ಪ್ರತಿಪಾದಿತವಾಗಿರುವ ಜೀವನ ತತ್ವವು ಸ್ವತಃ ಆ ತತ್ವಗಳಿಗೆ ಬದ್ಧನಾಗಿದ್ದ ಗುರುವಿನ ನಿಶ್ಚಿತ ಅಭಿಪ್ರಾಯಗಳನ್ನು ತಿಳಿಸುತ್ತದೆ. ಜೀವನೋತ್ಸಾಹವನ್ನು ತಗ್ಗಿಸದ, ಜ್ಞಾನದ ನಿಧಿಯೇ ಆಗಿರುವ ತತ್ವವಾಗಿದೆ. ಮನುಷ್ಯ ಹೇಗೆ ತನ್ನ ಜೀವಿತವನ್ನು ಶ್ರೇಷ್ಠವಾಗಿಸಿಕೊಳ್ಳಬಹುದೆಂಬುದರ ದಾರಿದೀವಿಗೆಯೂ ಆಗಿದೆ.&lt;br /&gt;&lt;br /&gt;ಸಾಮಾನ್ಯ ಜೀವನದಲ್ಲಿ ನಾವು  ತೋರುವ ಉತ್ಸಾಹ ಸ್ವಾರ್ಥಕ್ಕೆ ನೇರವಾಗಿ ಸಂಬಂಧಿಸಿರುತ್ತದೆ. ನಮ್ಮೆಲ್ಲರ ಕಾರ್ಯಕಲಾಪಗಳನ್ನು ಕಳವಳಗಳಿಂದ, ಭಾವೋದ್ರೇಕಗಳಿಂದ, ಅನುಕಂಪ-ದುಃಖಗಳಿಂದ ಇವೇ ಮೊದಲಾದ  ಉಪಕರಣಗಳಿಂದ ನಮ್ಮ ಸ್ವಾರ್ಥಕ್ಕೆ ಲಾಭ ತರುವಂತೆ ಹೆಣೆದು ಕೊಂಡಿರುತ್ತೇವೆ. ಹಾಗೆ ಲಾಭ ಬಾರದಾದಾಗ ಜೀವನೋತ್ಸಾಹವೇ ಉಡುಗಿಹೋಗುತ್ತದೆ. ನಮ್ಮ ನೀತಿ ನಡವಳಿಕೆಗಳ ಹಿಂದಿನ ಚಾಲಕ ಶಕ್ತಿಯನ್ನೇ ಕಳೆದುಕೊಂಡು ಅಂತರಂಗದಲ್ಲಿ ಕಳವಳವೂ, ಬಹಿರಂಗದಲ್ಲಿ ಜಡತನವೂ ಸೇರಿದ ಉದಾಸೀನದೆಡೆಗೆ ನಾವು ಸಾಗುತ್ತೇವೆ. ಇಂತಹುದೇ ಸ್ಥಿತಿಯಲ್ಲಿದ್ದ ಅರ್ಜುನನಿಗೆ- ಅನಾಸಕ್ತನಾಗಿದ್ದಾಗಲೂ ಉತ್ಸಾಹ ಕಳೆದುಕೊಳ್ಳದ, ಕಳವಳಗೊಳ್ಳದೆಯೂ ಕಾರ್ಯಮಗ್ನನಾಗುವ ಸಾಧ್ಯತೆಯನ್ನು ಶ್ರೀಕೃಷ್ಣ ತನ್ನ ತತ್ವಬೋಧೆಯ ಮೂಲಕ ತಿಳಿಸಿ ಹೇಳಿದ. ಸ್ವಾರ್ಥ ಮೂಲವಾದ ಆಸೆ ಮತ್ತು ಭಾವೋದ್ರೇಕಗಳಿಂದ ಮುಕ್ತರಾದಾಗ ಮಾತ್ರ ಸರ್ವೋತ್ಕೃಷ್ಟತೆ ಸಾಧ್ಯವೆಂದು ಮನಗಾಣಿಸಿದ.&lt;br /&gt;&lt;br /&gt;ಅವನು ನಮಗೆ ಬರಿಯ ಪುರಾಣದ ಪಾತ್ರವಲ್ಲ. ಕೇವಕ ಇತಿಹಾಸದ ನೆನಪೂ ಅಲ್ಲ. ಅವನೆಂದರೆ ಸದಾ ನಮ್ಮೊಂದಿಗಿರುವ ಸತ್ಯದ ಸಂಗತಿ. ಎಂದಿಗೂ ಬರೆದು ಮುಗಿಸಲಾಗದ ಕವಿತೆಯ ಪ್ರತಿಮೆ. ಜೊತೆಗಾತಿಯ ಕಾಲಂದುಗೆಗಳ ಝಲುರು. ಕಾಲ ಕಳೆದಂತೆಲ್ಲ ಅವನ ಧ್ವನಿ ಮತ್ತು ಆಕಾರಗಳಿಗೆ ಹೊಸ ರೂಪ ಮತ್ತು ಮಹತ್ವಗಳು ಜೊತೆಯಾಗುತ್ತಲೇ ನಡೆದಿವೆ. ಪ್ರಾಚೀನ ಆದರ್ಶದೊಡನೆ ಸಮಕಾಲೀನ ವ್ಯಸನಗಳನ್ನು ಸಮೀಕರಿಸಿಕೊಳ್ಳುವುದಕ್ಕೆ,ತತ್ವ ಜ್ಞಾನದೊಂದಿಗೆ ಆಧುನಿಕ ಪಡಿಪಾಟಲುಗಳನ್ನು ಅರ್ಥೈಸಿಕೊಳ್ಳುವುದಕ್ಕೆ ಕೃಷ್ಣ ತೋರಿಸಿರುವ ದಾರಿ ಸಮನ್ವಯದ ಕೊರತೆಯಿಂದ ನಲುಗುತ್ತಿರುವ ನಮಗೆ ಸಿದ್ಧೌಷಧವಾಗಿದೆ.&lt;br /&gt;&lt;br /&gt;ಶ್ರೀಕೃಷ್ಣನ ಕತೆ ನಮ್ಮೆಲ್ಲರನ್ನೂ ಬೃಂದಾವನದ ಚಕ್ಕಂದಕ್ಕೆ, ದ್ವಾರಕೆಯ ಸೌಂದರ್ಯಕ್ಕೆ, ವ್ರಜದ ಕಷ್ಟ-ನಿಷ್ಟುರಗಳಿಗಷ್ಟೇ ಕರೆದೊಯ್ಯುವುದಿಲ್ಲ. ಬದಲಿಗೆ ಅವನ ಕತೆ ನಮ್ಮ ನಮ್ಮ ಪಯಣದ  ಜೊತೆ ಜೊತೆಗೇ ಸಾಥಿಯಾಗುವ ಗೆಲುವಿನ ದಾರಿಗಿರುವ ಕಂಟಕಗಳನ್ನು ನಿವಾರಿಸುವ ಸುಲಭಕ್ಕೆ ದಕ್ಕುವ ಸಾಧನವೂ ಆಗಿದೆ. &lt;br /&gt;&lt;br /&gt;ಇಷ್ಟೆಲ್ಲ ಪ್ರಭಾವ, ಪರಿಣಾಮಗಳು ನಮ್ಮ ಮೇಲಿದ್ದರೂ, ವಾಸುದೇವ ಕೃಷ್ಣನ  ಅಸೀಮ ವ್ಯಕ್ತಿತ್ವದ ಎಲ್ಲ ಮಜಲುಗಳನ್ನೂ ವಿಮರ್ಶಿಸಿ, ಇದಮಿತ್ಥಂ ಎನ್ನುವ ವಿಶ್ಲೇಷಣೆ ಯಾರಿಂದಲೂ ಇದುವರೆಗೂ ಸಾಧ್ಯವಾಗಿಲ್ಲ. ವೇದವ್ಯಾಸರಿಂದಲೇ ಈ ಕೆಲಸ ಆಗದಿರುವಾಗ, ಅದಕ್ಕೆ ಕೈ ಹಾಕುವುದೆಂದರೆ ತಿಳಿಗೇಡಿತನದ್ದೇ ಆಗಿಬಿಡುತ್ತದೆ.&lt;br /&gt;&lt;br /&gt;ಅವನ ರಾಜನೀತಿ ಮತ್ತು ಧರ್ಮ ಸೂಕ್ಷ್ಮಗಳು ಆಧುನಿಕ ಕಾಲದಲ್ಲೂ ಅನುಸರಿಸಲು ಯೋಗ್ಯವಾದುದೇ ಆಗಿದೆ. ತಾತ್ವಿಕತೆ, ಸ್ಥಿತಪ್ರಜ್ಞತೆ, ಸೌಂದರ್ಯ ಪ್ರಜ್ಞೆ, ಸಂಗೀತ, ನೃತ್ಯಗಳ ಮೇಲಣ ಅಪೂರ್ವ ಹಿಡಿತ, ವೀರೋಚಿತ ಸಹೃದಯತೆ ಕೃಷ್ಣನ ಆಸ್ತಿಗಳು. ನಮ್ಮೆಲ್ಲರಿಗೆ ಹಂಚಿಯೂ ಇನ್ನೂ ಉಳಿಯಬಹುದಾದ ಅಪ್ರತಿಮ ಖಣಿಯವನು. &lt;br /&gt;&lt;br /&gt;ಆದರ್ಶವ್ಯಕ್ತಿಯೊಬ್ಬನಿಗಿರಬೇಕಾದ ಸಕಲ ಗುಣಗಳನ್ನು ಸ್ವತಃ ಹೊಂದಿದ್ದರೂ, ಅನ್ಯರ ಆದರ್ಶಗಳನ್ನೆಂದಿಗೂ ಲಘುವಾಗಿ ಕಾಣದ ಕೃಷ್ಣ ಈ ಕಾರಣದಿಂದಲೇ ಎಲ್ಲರಲ್ಲೂ ವಿಶ್ವಾಸ ಗಳಿಸುತ್ತಾನೆ. ಅತ್ಯಾಧುನಿಕ ಮನಶಾಸ್ತ್ರಜ್ಞನಿಗಿರಬೇಕಿರುವ ಸಕಲ ಸಂಯಮಗಳನ್ನು ಆವಿರ್ಭವಿಸಿಕೊಂಡಿದ್ದ ಅವನು ಸರ್ವಕಾಲದ ನಾಯಕ. ಮನುಕುಲದ ಮುಖ್ಯ ಪ್ರಾಣ. ದುರ್ಬಲರ, ದೀನರ ಪರಮಾಪ್ತ ಸಖ. ಅವನಿಗಿದ್ದ ಮನೋವಿಶ್ಲೇಷಣಾ ಸಾಮರ್ಥ್ಯ, ಚಿಕಿತ್ಸಕ ಗುಣ, ಅಪ್ಪಟ ದೇಶೀಯವಾದದ ಪ್ರಜ್ಞೆ, ಆಧುನಿಕ ಮನೋಭೂಮಿಕೆಯಲ್ಲಿ ಅರ್ಥೈಸಿಕೊಂಡರೆ ಕಾಣುವುದು ಬರೀ ಗೋಪಾಲಕನದಲ್ಲ, ಬದಲಿಗೆ ಅದು ಒಬ್ಬ ದೊಡ್ಡ ಮನೋಚಿಕಿತ್ಸಕನದು.&lt;br /&gt;&lt;br /&gt;ಖಿನ್ನತೆಯಲ್ಲಿ ಬಳಲುತ್ತಲೇ ಇರುವ ಈ ದಿನಮಾನದ ನಮಗೆ ಅವನ ತತ್ವಬೋಧೆಗಳು ಕೊಡಬಹುದಾದ ಔಷಧ ಬಹು ಮೌಲ್ಯದ್ದು. ಬದುಕಿನ ಯುದ್ಧ ಭೂಮಿಯ ಮುಂದೆ ಪೈಪೋಟಿಯ ಅಕ್ಷೋಹಿಣೀ ಸೈನ್ಯಗಳು ಜಮಾಯಿಸಿರುವ ವರ್ತಮಾನದ ಸಂಕಟಗಳಲ್ಲಿ ವ್ಯಕ್ತಿತ್ವಗಳು ನಾಶವಾಗಿ, ಉಳಿಯಬಹುದಾದ ವ್ಯಕ್ತಿಗಳೂ ಮತ್ತಾರಿಂದಲೋ ಆಳಿಸಿಕೊಳ್ಳಬಹುದಾದ ಸೀಮಾತೀತ ದುರ್ವಿಧಿಗಳೇ ಕಾಡುತ್ತಿರುವ ಪ್ರಸ್ತುತದಲ್ಲಿ ಕೃಷ್ಣ ಕೊಡಬಹುದಾದ ನೆರವು, ಅವನ ಗೀತಾಬೋಧೆಯ ನೇರವೂ, ಸರಳವೂ ಮತ್ತು ಸುಲಭದಲ್ಲಿ ಅಳವಡಿಸಿಕೊಳ್ಳಲೂಬಹುದಾದ ನಿರ್ಮಮಕಾರತ್ವದ ಗುಣ. &lt;br /&gt;&lt;br /&gt;ಆಧುನಿಕ ಮನಶಾಸ್ತ್ರಜ್ಞನೊಬ್ಬ ಚಿಕಿತ್ಸೆಗೆಂದು ತನ್ನಲ್ಲಿಗೆ  ಬರುವ ಖಿನ್ನತೆಯಿಂದ ಬಳಲುತ್ತಿರುವ ರೋಗಿಯನ್ನು ಹೇಗೆ ಸಂತೈಸುತ್ತಾನೆಯೋ ಅಂಥದೇ ಭಾವಗುಣ ಶ್ರೀಕೃಷ್ಣನಲ್ಲಿದೆ. ದೂತನಾಗಿ ಬಂದಾಗ ವಿದುರನಮನೆಯಲ್ಲಿಯೇ ಉಳಿಯುವ ಕೃಷ್ಣ, ಬಾಲ್ಯಸಖ ಮಕರಂದ ಮತ್ತು ಕುಚೇಲರ ಪ್ರಸಂಗಗಳಲ್ಲಿ ವರ್ತಿಸುವ ರೀತಿಯೇ ಸದಾ ಸ್ಮರಣೆಯಲ್ಲಿ ಉಳಿಯುವಂಥದು. ಖಿನ್ನತೆಗಿರುವ ಏಕೈಕ ದಿವ್ಯೌಷಧವಾದ ಆಪ್ತಸಂಭಾಷಣೆಯನ್ನು ಕೈಗೊಳ್ಳುತ್ತಿದ್ದ ಕೃಷ್ಣ ಕರ್ಣನನ್ನೂ, ಕುಂತಿಯನ್ನೂ ಒಂದೇ ರೀತಿಯ ಮಾತಿನ ಅಸ್ತ್ರದಿಂದ ಬಂಧಿಸುತ್ತಾನೆ. ಸ್ವಂತ ತಂಗಿ ಸುಭದ್ರೆಗಿಂತಲೂ ನಂಬಿದ ದ್ರೌಪದಿಯನ್ನೇ ಸದಾ ಕಾಯುತ್ತಾನೆ. ಯಾರು ತಮಗೆ ಬೇರಾರೂ ಇಲ್ಲವೆಂದು ಭಾವಿಸಿ ಕೃಷ್ಣನಲ್ಲಿ ಮೊರೆಹೋಗುತ್ತಾರೋ ಅವರೆಲ್ಲರಿಗೆ ಕೃಷ್ಣ ಸಹಾಯ ಹಸ್ತ ಚಾಚುತ್ತಾನೆ, ಮುಕ್ತಿಯ ಹಾದಿಯನ್ನೂ ದಯಪಾಲಿಸುತ್ತಾನೆ. ಮನುಷ್ಯನ ಮೂಲ ವಾಂಛೆಯನ್ನೇ ಉದ್ದೀಪಿಸಿ ಅದನ್ನೇ ಚಿಕಿತ್ಸೆಯ ಸೌಲಭ್ಯವನ್ನಾಗಿಸಿಕೊಳ್ಳುವ ಕೃಷ್ಣ ಪೌರಾಣಿಕ ಪಾತ್ರವಾಗುವುದಕ್ಕಿಂತಲೂ ಮನೋಚಿಕಿತ್ಸಕ ವೈದ್ಯ ನಾರಾಯಣನಂತೆಯೇ ಆಪತ್ತಿಗೆ ಒದಗುತ್ತಾನೆ, ನಿಷ್ಕಾಮ ಭಕ್ತಿಗೆ ಒಲಿಯುತ್ತಾನೆ.&lt;br /&gt;&lt;br /&gt;ಎಲ್ಲ ಸಮಸ್ಯೆಗಳ ಮೂಲ ಸ್ವತಃ ಆ ವ್ಯಕ್ತಿಯೇ ಆಗಿರುತ್ತಾನೆಂಬ ಸತ್ಯವನ್ನು ಮರೆಮಾಚದೇ ಶೃತಪಡಿಸುವ ಅವನು ಯಾರು ಯಾವುದರಲ್ಲಿ ನಂಬಿಕೆ ಇಟ್ಟಲ್ಲಿ ಹೆಚ್ಚು ಲಾಭ ಬರಬಹುದೆಂದು ಊಹಿಸುತ್ತಾನೆ. ಮನುಷ್ಯ ವ್ಯಾಪಾರಗಳನ್ನೇ ವಿಶ್ಲೇಷಿಸುವ ಅಪಾರ ಅನುಭವ ಅವನ ಜೊತೆಗಿರುವುದರಿಂದ ಅವನ ಊಹೆಗಳೇ ಸತ್ಯವಾಗಿ ಹೊರಹೊಮ್ಮಿ ಅವನೇ ಸತ್ಯವಾಗಿ ಉಳಿದುದೆಲ್ಲ ಮಿಥ್ಯವಾಗಿರುವ ಹಲವು ನಿದರ್ಶನಗಳನ್ನು ಕಾಣಬಹುದು.&lt;br /&gt;&lt;br /&gt;ಬದುಕಲು ರಾಜಿ ಮುಖ್ಯವಾದರೂ ಎಲ್ಲರನ್ನೂ, ಎಲ್ಲವನ್ನೂ ಎಲ್ಲ ಕಾಲದಲ್ಲಿಯೂ ತೃಪ್ತಿಗೊಳಿಸಿಕೊಂಡಿರಲು ಅಸಾಧ್ಯವಾಗಿರುವುದರಿಂದಲೇ, ಕೆಲವು ಸಂದರ್ಭಗಳಲ್ಲಿ ಕೆಲವರೊಂದಿಗೆ ದ್ವೇಷ, ಮನಸ್ತಾಪಗಳು ಅನಿವಾರ್ಯ ಆಗಿಯೇ ಆಗುತ್ತದೆಂಬುದನ್ನೂ ಅವನು ವಿವರಿಸಿ ಹೇಳಬಲ್ಲ. ಆತ್ಮ ಸಂಭಾಷಣೆಯ ಪರಮಸ್ಥಿಯಲ್ಲಿ ಖಿನ್ನತೆಯೆಂಬುದೂ ಬದುಕನ್ನೆದುರಿಸಲು ಆ ವ್ಯಕ್ತಿ ಬಳಸಿದ ಮತ್ತೊಂದು ಸಾಧನವೆಂದು ಸ್ವತಃ ಆ ವ್ಯಕ್ತಿಗೇ ಮನದಟ್ಟು ಮಾಡಿಕೊಡುವ ಅವನು, ಈ ಸೈಕೋ ಥೆರಪಿಯ ಕಟ್ಟ ಕಡೆಯ ಹಂತದಲ್ಲಿ ಜಾಗೃತಗೊಳ್ಳುವ ಆತ್ಮವಿಶ್ವಾಸವನ್ನು ಉಛ್ರಾಯ ಸ್ಥಿತಿಗೆ ತಂದು ಬಿಟ್ಟುಬಿಡುತ್ತಾನೆ. ಮತ್ತು ಹೀಗೆ ಆತ್ಮ ವಿಶ್ವಾಸವನ್ನು ರೀಛಾರ್ಜ್ ಮಾಡಿಕೊಂಡ ವ್ಯಕ್ತಿ ಸಹಜವಾಗಿ ಸೋಲಿನ ಭಯದಿಂದ ಹೊರ ಬರುತ್ತಾನೆ ಮತ್ತು ತನ್ನ ಹೋರಾಟದಲ್ಲಿ ಮಾಡು ಇಲ್ಲವೇ ಮಡಿ ಎನ್ನುವ ಸೂತ್ರಕ್ಕೆ ಒಳಪಡುತ್ತಾನೆ. &lt;br /&gt;&lt;br /&gt;ದುರ್ಯೋಧನನೊಡನೆ ಕೃಷ್ಣ ದೂತನಾಗಿ ವ್ಯವಹರಿಸಿದ್ದನ್ನು, ಕಂಸನನ್ನು ವಧಿಸಿದೊಡನೆ ಉಗ್ರಸೇನನನ್ನೇ ರಾಜನಾಗಿ ಮುಂದುವರೆಸಿದ್ದನ್ನು, ಯಾದವರ ಕುಲ ಕಸುಬು ಹೈನುಗಾರಿಕೆಯನ್ನು ವಿಸ್ತರಿಸಿದ್ದನ್ನು, ದ್ವಾರಕೆಯನ್ನು ನಿರ್ಮಿಸಿ ಶತ್ರುಗಳಿಂದ ದೂರ ಉಳಿದದ್ದನ್ನು, ಈ ಮನೋ ಬಲದ ಹಿಂದಿರುವ ಅನಿವಾರ್ಯ ಸೂತ್ರಗಳನ್ನೂ ನಾವು ಅರಿಯಬೇಕು. ಸೋಲೆಂಬುದು ಖಂಡಿತವಾದಾಗ ಸದ್ಯಕ್ಕೆ ತಪ್ಪಿಸಿಕೊಂಡು ಹೋಗುವುದು ನಂತರ ಸಂದರ್ಭ ಬಂದಾಗ ದಂಡೆತ್ತಿ ಬಂದು ಶತ್ರು ದಮನ ಮಾಡುವುದೂ ಕೃಷ್ಣನ ಕಲೆ. ಅದು ನಮೊಗೊಲಿದರೆ ನಾವೆಲ್ಲ ವಿಪರೀತಮತಿಯ ಚತುರ ರಾಯಭೇರಿಗಳಾದೇವು, ರಾಜ ನಿರ್ಮಾತೃಗಳೂ ಆದೇವು.&lt;br /&gt;&lt;br /&gt;ಶಿಷ್ಟ ರಕ್ಷಣೆ, ದುಷ್ಟ ನಿಗ್ರಹಣೆಯೇ ತನ್ನ ಗುರಿಯೆನ್ನುವ, ಧರ್ಮಸಂಸ್ಥಾಪನೆಯೇ ತನ್ನ ಉದ್ದೇಶವೆನ್ನುವ ಕೃಷ್ಣ ಯುಗಯುಗಗಳಲ್ಲೂ ಈ ಅಭಯ ವಾಕ್ಯ ಪರಿಪಾಲನೆಗೆ ಬಳಸುವುದೆಂದರೆ ತನ್ನನ್ನು ನಂಬಿದವರ ಮನಃ ಪ್ರಚೋದನೆ. ಸಾಧು, ಸಜ್ಜನರ ರಕ್ಷಣೆಗೆ ಅವನು ಅವತರಿಸುತ್ತಾನೆಂದರೆ, ಈ ಲೋಕದ ವ್ಯವಹಾರದಲ್ಲಿ ದುರ್ಜನರ ಪಾಲೂ ಮುಂದುವರೆಯುತ್ತಲೇ ಇರಬೇಕು. ಇಲ್ಲವಾದರೆ ಅವನು ಅವತರಿಸುವ ಪ್ರಮೇಯವೇ ಬರುವುದಿಲ್ಲವಲ್ಲ! ಇಂಥ ಸಂದರ್ಭದಲ್ಲಿ ನಮಗುಳಿಯುವ ದಾರಿಯೆಂದರೆ ಒಂದೋ ಸಜ್ಜನರಾಗಿ ಅವನ ನಾಮಸ್ಮರಣೆಯಲ್ಲಿ ಅವನ ಹಾದಿ ಕಾಯುವುದು ಅಥವ ನಮ್ಮ ದುಷ್ಟತನವನ್ನು ಪ್ರದರ್ಶಿಸುತ್ತ ಅವನು ನಮ್ಮ ಸಂಹಾರಕ್ಕೆಂದು ಅವತರಿಸುವ ದಿನಗಳಿಗೆ ಕಾಯುವುದು.&lt;br /&gt;&lt;br /&gt;ಈ ಆಪ್ತ ಸಲಹಾ ಕೇಂದ್ರ ಕೇವಲ ಮೊರೆಹೋದವರಿಗಷ್ಟೇ ಅಲ್ಲ, ಮದ ಹರಿಯದೇ ನಿಂತ ದುರ್ಯೋಧನರಿಗೂ ಸದಾ ತನ್ನ ಬಾಗಿಲು ತೆಗೆದಿರಿಸಿದೆ. ಈ ಕೇಂದ್ರದ ಮಹಾಪ್ರಬಂಧಕರ ಅಪ್ಪಣೆ ಚೀಟಿ ಸಿಗುವುದಕ್ಕೆ ಮಾತ್ರ ನಿರಂತರ ಕಾಯುವಿಕೆಯ ಕುಚೇಲ ನಿಷ್ಠೆ ಇರಬೇಕು ಅಥವ ಅವಮಾನದ ಭಯ, ಸಂಶಯದ ಜೊತೆಗೇ ಅಂಟಿಸಿಕೊಂಡ ಲೋಭ, ಬಾಹುಬಲದ ಮೇಲಿನ ಅತೀವ ನಂಬಿಕೆಗಳ ಮೇಲೇ ನಿಂತು, ವಿಜೃಂಭಿಸುತ್ತಲೇ  ಎದುರಿನವರು ಕರೆದರೆಂದು ದ್ವಂದ್ವ ಯುದ್ಧಕ್ಕೆ ಧುಮುಕುವ  ಜರಾಸಂಧನ, ಕಂಸನ ಮನಃಸ್ಥಿತಿ ನಮಗಿರಬೇಕು. ಇಬ್ಬರನ್ನೂ ಶ್ರೀಕೃಷ್ಣ ಸಲಹುತ್ತಾನೆ, ಸಂಭಾಳಿಸುತ್ತಾನೆ. ಪಾತ್ರವನ್ನು ಒಪ್ಪಿಕೊಳ್ಳುವ ಎದೆಗಾರಿಕೆ ನಮಗೆ ಬೇಕು ಅಷ್ಟೆ!&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/5254102750204147054-760743281968182118?l=bemkikaddi.blogspot.com' alt='' /&gt;&lt;/div&gt;</content><link rel='replies' type='application/atom+xml' href='http://bemkikaddi.blogspot.com/feeds/760743281968182118/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://www.blogger.com/comment.g?blogID=5254102750204147054&amp;postID=760743281968182118' title='1 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/5254102750204147054/posts/default/760743281968182118'/><link rel='self' type='application/atom+xml' href='http://www.blogger.com/feeds/5254102750204147054/posts/default/760743281968182118'/><link rel='alternate' type='text/html' href='http://bemkikaddi.blogspot.com/2009/09/blog-post_02.html' title='ಕೃಷ್ಣನೆಂಬ ಮನೋಚಿಕಿತ್ಸಕ'/><author><name>ಬೆಂಕಿಕಡ್ಡಿ</name><uri>http://www.blogger.com/profile/13181705369161334860</uri><email>noreply@blogger.com</email><gd:image rel='http://schemas.google.com/g/2005#thumbnail' width='21' height='32' src='http://4.bp.blogspot.com/_bUAIZF0Yo1g/TKdTK-6rv2I/AAAAAAAAAJY/QXUJAVKh9ps/S220/dsr4.jpg'/></author><thr:total>1</thr:total></entry><entry><id>tag:blogger.com,1999:blog-5254102750204147054.post-5827573570627301168</id><published>2009-09-02T22:35:00.002+05:30</published><updated>2009-09-02T22:43:55.942+05:30</updated><title type='text'>ಯುದ್ಧ ಭಯ</title><content type='html'>ಚರಿತ್ರೆಯುದ್ದಕ್ಕೂ ಯುದ್ಧಗಳು ನಡೆಯುತ್ತಲೇ ಬಂದಿವೆ. ಅದರಲ್ಲೂ ಧರ್ಮದ ನೆವದಲ್ಲಿ ನಡೆದ ಯುದ್ಧಗಳಂತೂ ಹೆಚ್ಚು. ಹಾಗೇ  ಸಾಮ್ರಾಜ್ಯ ವಿಸ್ತರಣೆ, ಲೂಟಿ-ಕೊಳ್ಳೆಗಳಿಗಾಗಿಯೇ ನಡೆದ ಯುದ್ಧಗಳೂ ಸಾಕಷ್ಟಿವೆ. ಯುದ್ಧಾನಂತರ ಯುದ್ಧಪರಿಣಾಮಗಳಿಂದ ಉಂಟಾದ ರೋಗ-ರುಜಿನಗಳು, ಆರ್ಥಿಕ ಸಂಕಷ್ಟಗಳೂ, ತತ್ತರಿಸಿದ ಜನಸಾಮಾನ್ಯರ ಬದುಕುಗಳೂ ಯುದ್ಧ ಪಿಪಾಸುಗಳ ಬುದ್ಧಿಗೆ ಸಾಣೆ ಹಿಡಿಯದ ಕಾರಣ ಈ ಆಧುನಿಕ ಯುಗದಲ್ಲೂ ಪ್ರಪಂಚದ ಬೇರೆ ಬೇರೆ ಭಾಗಗಳಲ್ಲಿ ಈಗಲೂ ಯುದ್ಧಗಳು ನಡೆಯುತ್ತಲೇ ಇರುವುದು ಮನುಕುಲಕ್ಕೇ ಹಿಡಿದ ಗ್ರಹಣವಾಗಿದೆ.&lt;br /&gt;&lt;br /&gt;ಯುದ್ಧವೆಂದರೆ ನರಮೇಧ. ಸಂಪತ್ತಿನ ವಿನಾಕಾರಣ ನಾಶ. ಅಲೆಕ್ಸಾಂಡರ್, ಅಶೋಕನಂಥ ಯುದ್ಧಪಿಪಾಸುಗಳು ಯುದ್ಧಾನಂತರ ಪಶ್ಚಾತ್ತಾಪ ಪಟ್ಟದ್ದು ಇತಿಹಾಸಕ್ಕೆ ಸೇರಿತೇ ವಿನಾ ಅದು ಪಾಠವಾಗಲೇ ಇಲ್ಲ. ಬರೀ ಸೈನಿಕರ ನಡುವೆ ನಡೆಯುತ್ತಿದ್ದ ಸಾಮ್ರಾಜ್ಯಶಾಹೀ ಯುದ್ಧಗಳಿಗಿಂತ ಆಧುನಿಕ ಯುಗದ ಯುದ್ಧ ಪರಿಣಾಮಗಳು ಅಪಾಯಕಾರಿಯಾಗಿವೆ. ಹಿಂದೆಲ್ಲ ಯುದ್ಧವೆಂದರೆ ಬರಿಯ ಸೈನಿಕರ, ರಾಜ ಸಾಮಂತರುಗಳ ಸೋಲು-ಗೆಲುವಿನಲ್ಲಿ ಮುಗಿಯುತ್ತಿದ್ದವು. ಸಾಮಾನ್ಯ ಜನರಿಗೆ ತೆರಿಗೆಯ ಹೊರೆ ಬಿಟ್ಟರೆ ಉಳಿದಂತೆ ಜನಜೀವನದ ಮೇಲೆ ಪರಿಣಾಮ ಇರುತ್ತಿರಲಿಲ್ಲ. ಆದರೆ ಆಧುನಿಕ ಯುಗದ ಯುದ್ಧಗಳಲ್ಲಿ ಬಳಸಲಾಗುತ್ತಿರುವ ಆಪಾಯಕಾರೀ ಪರಮಾಣು ಶಸ್ತ್ರಾಸ್ತ್ರಗಳು ಜನಸಾಮಾನ್ಯರ ಬದುಕನ್ನು ಮೂರಾಬಟ್ಟೆಯಾಗಿಸುವುದಷ್ಟೇ ಅಲ್ಲದೆ ನೆಮ್ಮದಿಯನ್ನು ನಾಶಮಾಡಿ ಹತಾಶ ಸ್ಥಿತಿಗೆ ಒಯ್ಯುತ್ತವೆ. ಧರ್ಮದ ಹೆಸರಲ್ಲಿ ನಡೆಯುತ್ತಲೇ ಇರುವ ದಾಳಿಗಳಂತೂ ಮನುಷ್ಯನ ಕ್ರೂರ ಮನಸ್ಸಿನ ಪ್ರದರ್ಶನದಂತಿದೆ. ಹಿಂದೆಲ್ಲ ಯುದ್ಧಗಳಲ್ಲೂ ನೀತಿ,ನಿಯಮ, ಕಟ್ಟುಪಾಡುಗಳಿದ್ದುವಂತೆ. ಅವನ್ನು ಮೀರುವ ಅನೈತಿಕ ನಡವಳಿಕೆ ಹಿಂದಿನವರಿಗೆ ಇರಲಿಲ್ಲ. ಆದರೆ ಆಧುನಿಕರಾದಷ್ಟೂ ಮೋಸಕಪಟಗಳಿಗೂ ಆಧುನಿಕತೆಯ ಮೊಹರು ಬೀಳುತ್ತಿದೆ. ಕಟ್ಟುಪಾಡುಗಳನ್ನು ಮೀರಿ ವ್ಯವಸ್ಥೆಗೆ ಸಡ್ಡು ಹೊಡೆಯುವುದೇ ಗೆಲುವಿನ ಮಜಲಾಗುತ್ತಿದೆ. &lt;br /&gt;&lt;br /&gt;ಇತ್ತೀಚೆಗಂತೂ ಧರ್ಮಾಂಧತೆ ಹೆಚ್ಚಿ ಮತಮೋಹವನ್ನು ಜಾಗೃತಗೊಳಿಸಿ ಶ್ರೇಷ್ಟತೆಯ ಭ್ರಮೆ ಹುಟ್ಟಿಸಿ ಅನ್ಯರನ್ನು ಕೀಳಾಗಿ ಕಾಣಿಸುವ ಪ್ರವೃತ್ತಿ ಹೆಚ್ಚಾಗುತ್ತಿದೆ. ವ್ಯಕ್ತಿಯ ಇಂಥ ದುಷ್ಟತನವನ್ನು ನಿಗ್ರಹಿಸಬೇಕಾದ ವ್ಯವಸ್ಥೆಯನ್ನೇ ಕತ್ತಲಿನಲ್ಲಿಟ್ಟಿರುವ ಧರ್ಮ ಮತ್ತು ಧರ್ಮಾಧಾರಿತ ಸೀಮಿತ ಚೌಕಟ್ಟಿನ ಧೋರಣೆಗಳು ಆ ವ್ಯಕ್ತಿಯನ್ನು ಬೆಂಬಲಿಸುತ್ತವೆ. ಧರ್ಮ ಪ್ರಚಾರ ಮತ್ತು ವಿಸ್ತರಣೆಯ ಹೆಸರಲ್ಲಿ ನಡೆಯುವ ಪುಂಡಾಟಿಕೆಗಳನ್ನು ಸತ್ಕ್ರಿಯೆ ಎಂದು ಬಿಂಬಿಸುವುದರಿಂದಾಗಿ ಜನಸಾಮಾನ್ಯರ ಮೇಲೆ ಅದರ ಪರಿಣಾಮ ಘೋರವಾಗುತ್ತದೆ. ವ್ಯಕ್ತಿಯೊಬ್ಬನ ನಂಬಿಕೆಗಳನ್ನು, ಆಚರಣೆಗಳನ್ನು ಪ್ರಶ್ನಿಸುವ ಮತ್ತು ಅಧಿಕಾರಯುತವಾಗಿ ಹೀಗೇ ಮಾಡಿ ಎಂದು ಆದೇಶಿಸುವ ಮೂಲಕ ಅವನ ಮೂಲಭೂತ ಹಕ್ಕುಗಳನ್ನೇ ಕಸಿದುಕೊಂಡಂತಾಗುತ್ತದೆ. ಧರ್ಮ ನೆಲೆಯಲ್ಲಿ ನಡೆಯುವ ಯುದ್ಧ ಮತ್ತು ದಂಗೆಗಳು ಹಾಗೇ ಪುಂಡಾಟಿಕೆಗಳು ಅತ್ಯಂತ ಅಮಾನವೀಯವೂ ಕ್ರೂರವೂ ಆಗಿರುತ್ತವೆಂದು ವಿವರಿಸಿ ಹೇಳಬೇಕಿಲ್ಲ. &lt;br /&gt;&lt;br /&gt;ಧರ್ಮದ ನೆಲೆಗಟ್ಟಿನ ಹಾಗೆಯೇ ಜನಾಂಗೀಯ ನೆಲೆಗಳ ಆದಾರದ ಮೇಲೆ ನಡೆಯುವ ಹಲ್ಲೆ ಮತ್ತು ಗಲಭೆಗಳೂ ಜನಾಂಗೀಯ ವಾದಿಗಳ ಅಹಂಕಾರ ಮತ್ತು ಅವರ ಶ್ರೇಷ್ಠತೆಯ ಪರಿಕಲ್ಪನೆಯನ್ನೂ ಆಧರಿಸಿರುತ್ತವೆ. ಬಿಳಿಯರು ಕರಿಯರ ಮೇಲೆ ನಡೆಸುತ್ತಿರುವ ದುರಾಚಾರ, ಒಂದು ದೇಶದಲ್ಲಿ ತಲೆತಲಾಂತರದಿಂದ ನೆಲೆಸಿರುವವರನ್ನು ಅವರ ಮೂಲ ನೆಲೆಯ ಕಾರಣದಿಂದಾಗಿ ವಿದೇಶಿಯರಂತೆ ಕಾಣುವುದೂ ಹೆಚ್ಚಾಗುತ್ತಿದೆ. ಹಿಟ್ಲರ್ ಮತ್ತು ಮುಸಲೋನಿ ಇನ್ನೂ ಜೀವಂತವಾಗಿರುವುದು ನಮ್ಮೆಲ್ಲರ ದುರದೃಷ್ಟ.&lt;br /&gt;&lt;br /&gt;ಮೂಲತಃ ಯುದ್ಧವೆನ್ನುವುದೇ ಮನುಕುಲದ ವಿರೋಧಿ. ಜೀವಪಿಪಾಸುಗಳ ಅಂತಿಮ ಆಯ್ಕೆ. ಅದು ಯಾವತ್ತೂ ಸಹಿಸಲಸಾಧ್ಯವಾದ ಅತ್ಯಂತ ಕ್ರೂರ ಕೆಲಸವೆಂಬುದನ್ನು ಮತ್ತೆ ಮತ್ತೆ ಒತ್ತಿ ಹೇಳಬೇಕಾದ ಅಗತ್ಯತೆ ಇಲ್ಲ. ಪರಸ್ಪರ ವಿದ್ವೇಷ, ಪೂರ್ವಾಗ್ರಹ ಪೀಡಿತ ನಂಬಿಕೆ ಎಂಬ ಭ್ರಾಂತುಗಳು ಈ ಅಮಾನವೀಯ ಕೃತ್ಯದ ಹಿಂದಿರುವ ಶಕ್ತಿಗಳು. &lt;br /&gt;ಬುದ್ಧನ ಬದ್ಧತೆ, ಗಾಂಧೀಜಿಯ ಅಹಿಂಸಾತತ್ವ ಯಾವಕಾಲಕ್ಕೂ ಇಂಥ ಯುದ್ಧಗಳ ಪಾಶಗಳಿಂದ ನಮ್ಮನ್ನು ಬಿಡಿಸಿ ತರಬಲ್ಲ ಅಸ್ತ್ರಗಳು. ಸೋದರತ್ವ ಮತ್ತು ಸ್ನೇಹ ಸಂಬಂಧಗಳು ಮಾತ್ರ ಜಗತ್ತಿನ ಯುದ್ಧಗಳನ್ನು ನಿವಾರಿಸಬಲ್ಲವು. ಬುದ್ಧ ಮತ್ತು ಗಾಂಧಿ ಆ ಕಾರಣಕ್ಕೇ ಸರ್ವಕಾಲಿಕ ನಾಯಕರಾಗುತ್ತಾರೆ. ಶಾಂತಿ ಮಂತ್ರದ ಹರಿಕಾರರಾಗಿ ಗೋಚರಿಸುತ್ತಾರೆ.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/5254102750204147054-5827573570627301168?l=bemkikaddi.blogspot.com' alt='' /&gt;&lt;/div&gt;</content><link rel='replies' type='application/atom+xml' href='http://bemkikaddi.blogspot.com/feeds/5827573570627301168/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://www.blogger.com/comment.g?blogID=5254102750204147054&amp;postID=5827573570627301168' title='0 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/5254102750204147054/posts/default/5827573570627301168'/><link rel='self' type='application/atom+xml' href='http://www.blogger.com/feeds/5254102750204147054/posts/default/5827573570627301168'/><link rel='alternate' type='text/html' href='http://bemkikaddi.blogspot.com/2009/09/blog-post.html' title='ಯುದ್ಧ ಭಯ'/><author><name>ಬೆಂಕಿಕಡ್ಡಿ</name><uri>http://www.blogger.com/profile/13181705369161334860</uri><email>noreply@blogger.com</email><gd:image rel='http://schemas.google.com/g/2005#thumbnail' width='21' height='32' src='http://4.bp.blogspot.com/_bUAIZF0Yo1g/TKdTK-6rv2I/AAAAAAAAAJY/QXUJAVKh9ps/S220/dsr4.jpg'/></author><thr:total>0</thr:total></entry><entry><id>tag:blogger.com,1999:blog-5254102750204147054.post-4291271644267652997</id><published>2009-06-10T20:27:00.001+05:30</published><updated>2009-06-10T20:32:47.649+05:30</updated><title type='text'>ದೆಸಿತನದ ಸೊಗಡಿಗೆ ಆಧುನಿಕತೆಯ ಬಡಿವಾರ</title><content type='html'>&lt;strong&gt;ದೇಸೀತನದ ಘಮಲಿಗೆ ಆಧುನಿಕತೆಯ ಬಡಿವಾರ&lt;/strong&gt;&lt;br /&gt;&lt;br /&gt;ಚ. ಹ. ರಘುನಾಥರ ಬಿಡಿ ಬರಹಗಳನ್ನು ಓದಿದಾಗೆಲ್ಲಾ ಅವರೊಬ್ಬ ಸಾಹಿತ್ಯದ ವಿನಮ್ರ ವಿದ್ಯಾರ್ಥಿಯೆಂದು ಮತ್ತೆ ಮತ್ತೆ ಮನದಟ್ಟಾಗುತ್ತದೆ. ಸೂಕ್ಷ್ಮ ಮನಸ್ಸಿನ ಅಂತರ್ಮುಖೀ ವ್ಯಕ್ತಿತ್ವವೊಂದು ಸುತ್ತಣ ವಿವರಗಳನ್ನು, ಘಟನೆಗಳನ್ನು ಗಮನಿಸಿದ, ಗ್ರಹಿಸಿದ ಮತ್ತವುಗಳನ್ನು ಅತಿ ವಿಶಿಷ್ಟತೆಯಿಂದ ಬರಹಗಳನ್ನಾಗಿಸುವ ಕಲೆ ಅವರಿಗೆ ಸಿದ್ಧಿಸಿದೆ. ಈಗಾಗಲೇ ಕವಿಯಾಗಿ, ಕಥೆಗಾರನಾಗಿ ಹೊಸ ಪೀಳಿಗೆಯ ಲೇಖಕರ ನಡುವೆ ತಮ್ಮದೇ ಛಾಪನ್ನಿರಿಸಿಕೊಂಡಿರುವ ರಘುನಾಥರ ಪ್ರಬಂಧ ಸಂಕಲನ “ ರಾಗಿಮುದ್ದೆ” ದೇಸೀತನದ ಘಮಲನ್ನು ನೆನಪಿಸುತ್ತಲೇ ಆಧುನಿಕ ಬಡಿವಾರಗಳನ್ನು ಅಣಕಿಸುತ್ತದೆ, ವಿಮರ್ಶಿಸುತ್ತದೆ.&lt;br /&gt;&lt;br /&gt;ಆತ್ಮೀಯತೆಯಿಂದ ನೇರವಾಗಿ ಸಹಜವಾಗಿ ಸಂಕೋಚಗಳಿಲ್ಲದೆ ತಮಗನಿಸಿದ್ದನ್ನು ದಿಟವಾಗಿ ಹೇಳುವುದು ಈ ಎಲ್ಲಾ ಪ್ರಬಂಧಗಳ ಮೂಲ ಗುಣ. ಗ್ರಾಮೀಣ ಬದುಕನ್ನು ಚಿತ್ರಿಸುತ್ತಲೇ ನಗರ ಜೀವನದ ತಲ್ಲಣಗಳನ್ನು ತೆರೆದಿಡುವ ರಘುನಾಥರ ಶೈಲಿ ಪ್ರಿಯವಾಗುತ್ತದೆ. ಸೂಕ್ಷ್ಮ ಮನಸ್ಸೊಂದು ಬದುಕನ್ನು ಅರಿಯುವ ಪ್ರಯತ್ನ ಇಲ್ಲಿನ ಪ್ರಬಂಧಗಳಲ್ಲಿ ಢಾಳಾಗಿದೆ. ಲೇಖಕನ ಸ್ವಂತ ಅನುಭವದ ಸ್ಪರ್ಶ ಈರೀತಿಯ ಬರಹಗಳಲ್ಲಿಲ್ಲದೇ ಹೋದಲ್ಲಿ ಅವು ಹೈಸ್ಕೂಲಿನ ಚರ್ಚಾಸ್ಪರ್ಧೆಯ ಭಾಷಣಗಳಾಗಿಬಿಡುತ್ತವೆ ಎನ್ನುವ ಅರಿವು ಅವರಿಗೆ ಗೊತ್ತಿದೆ. ಹಾಗಾಗಿಯೆ “ಅಧರಂ ಮಧುರಂ” ನಂತಹ ಕಾಮನ್ ಹ್ಯಾಂಗೋವರ್‌ನಲ್ಲಿ ಮಿಡಿಯುತ್ತಲೇ ಅಮೆಝಾನ್ ಕಾಡುಗಳಲ್ಲೂ ಹಲ್ಲು ತೊಳೆಸಿಕೊಳ್ಳಬಲ್ಲರು! ಮುಂಜಾನೆಯ “ಯಾತ್ರೆ” ಯ ಚಿತ್ರಗಳನ್ನು ಕಣ್ಮುಂದೆ ನಿಲ್ಲಿಸಬಲ್ಲಂತೆಯೇ ಚಂದಿರನನ್ನು ಕಂಬ ಕಂಬಗಳಿಗೆ ನೇಣು ಹಾಕಬಲ್ಲರು. ಜಾತ್ರೆಯ ಕಾಮನಬಿಲ್ಲು ಬಿಡಿಸಿಡುತ್ತಲೇ ಗುಬ್ಬಿಗಳಿಗೆ ಮನೆಯನ್ನೂ ಕಟ್ಟಿಕೊಡಬಲ್ಲವರು-ಚ.ಹ.ರಘುನಾಧ.&lt;br /&gt;&lt;br /&gt;ಹೊಸ ಪೀಳಿಗೆಯ ಲೇಖಕರಲ್ಲಿ ಕವಿಗಳ ಸಂಖ್ಯೆ ವಿಫುಲವಾಗಿದೆ. ಕಥೆಗಾರರಂತೆ ಕಾದಂಬರಿಕಾರರ ಲೆಕ್ಕವೂ ಸಿಗುತ್ತವೆ. ಆದರೆ ಪ್ರಬಂಧ ನೇಯುವುದು ಸುಲಭದ ಮಾತಲ್ಲ ಎಂದು ಗೊತ್ತಿರುವುದರಿಂದಲೋ ಏನೋ ಈ ಕೆಲಸಕ್ಕೆ ಕೈ ಹಾಕಿದವರ ಸಂಖ್ಯೆ ತೀರ ಕಡಿಮೆ.&lt;br /&gt;&lt;br /&gt;ಪ್ರಬಂಧವು ಸುಲಲಿತವಾಗುವುದು ಲಾಲಿತ್ಯದಿಂದ. ಕಾವ್ಯಗುಣದ ಜೊತೆಗೇ ಸ್ವಾರಸ್ಯಕರ ಅನುಭವಗಳನ್ನು ಮತ್ತು ಸೃಜನಶೀಲತೆಗಳನ್ನು ಅವು ಒಳಗೊಂಡಿರಬೇಕು. ಶಬ್ದಾರ್ಥಗಳ ಮೇಲಾಟದ ಜೊತೆಗೆ ಚಿಂತನಶೀಲತೆಯ ಸ್ಪರ್ಶವೂ ಪ್ರಬಂಧಕ್ಕಿರಬೇಕು. ಸೀಮಿತ ಚೌಕಟ್ಟಿನಲ್ಲೇ ವಸ್ತುವೊಂದನ್ನು ಆಕರ್ಷಕವಾಗಿ ಹೇಳುತ್ತಲೇ ಸಾಮಾಜಿಕ, ಸಾಂಸ್ಕೃತಿಕ ಪಲ್ಲಟಗಳನ್ನೂ ಅದು ಬಿಂಬಿಸಬೇಕು. ವಿಡಂಬನೆ ಮೂಲ ಉದ್ದೇಶವಲ್ಲದಿದ್ದರೂ ವಿಮರ್ಶಾತ್ಮಕ ನೆಲೆಯಲ್ಲಿ ವಸ್ತುವನ್ನ ಅನಾವರಣಗೊಳಿಸಿರಬೇಕು!......... ಪ್ರಬಂಧಗಳ ಮಾದರಿಗಳನ್ನು ಕುರಿತು ನೆನಪಿಸಿಕೊಂಡರೆ ಈ ಕಾಲದಲ್ಲಿ ನಮಗೆ ಅನುಭವಗಳ ಕೊರತೆಯಿದೆಯೇನೋ ಅನ್ನಿಸುತ್ತದೆ. ನಗರ ಜೀವನದ ಪಡಿಪಾಟಲುಗಳು ಸಂದರ್ಭವನ್ನ ಸಹಜವಾಗಿ ಗ್ರಹಿಸುವುದನ್ನ ನಿಯಂತ್ರಿಸುತ್ತಿದೆಯೇನೋ ಎಂಬ ಅನುಮಾನಗಳೂ ಕಾಡುತ್ತವೆ.&lt;br /&gt;&lt;br /&gt;ಮೂರ್ತಿರಾವ್, ಗೊರೂರು ಮುಂತಾದವರು ಸಹಜವಾಗಿ ಸಮೃದ್ಧವಾಗಿ ಬೆಳೆದ ಪ್ರಬಂಧ ಪ್ರಕಾರವನ್ನು ನೆನಪಿಸಿಕೊಂಡರೆ ಅದು ವಿನಮ್ರತೆಯಿಲ್ಲದವರಿಗೆ ಒಲಿಯದ ಕಬ್ಬಿಣದ ಕಡಲೆ ಎಂದೇ ಭಾಸವಾಗುತ್ತದೆ. ಆದರೆ ರಘುನಾಥ ಸಮರ್ಥವಾಗಿ ಅದನ್ನು ಎದುರಿಸಿ ಗೆದ್ದಿದ್ದಾರೆ. ಸಾಹಿತ್ಯ, ಚಲನಚಿತ್ರ, ಪ್ರಯಾಣ ಮುಂತಾದ ಆಸಕ್ತಿಗಳ ಮೂಲಕ ಮನುಷ್ಯ ಸಂಬಂಧಗಳ ರೀತಿಯನ್ನು ಅವುಗಳ ವಿಭಿನ್ನ ನೆಲೆಗಳನ್ನು ಅನ್ವೇಷಿಸುವ ಶೈಲಿ ಗುಣಗ್ರಾಹಿಯಾದುದೇ ಆಗಿದೆ. ತೀವ್ರತೆಯ ತುರೀಯಕ್ಕೇರದೇ ಅನುಭವದ ಪಾತಳಿಯಲ್ಲಿ ಸಣ್ಣ ಸಂಗತಿಗಳನ್ನು ವಿಶ್ಲೇಷಿಸುವ ರೀತಿ ಮೆಚ್ಚತಕ್ಕದ್ದೇ ಆಗಿದೆ. &lt;br /&gt;&lt;br /&gt;ಸಂಕಲನದಲ್ಲಿರುವ ಒಂದು ಡಜನ್ ಪ್ರಬಂಧಗಳನ್ನು ಒಂದೇ ಬೀಸಿನಲ್ಲಿ ಓದಿದರೆ ಅವುಗಳ ಸ್ವಾರಸ್ಯ ಮನಸ್ಸಿಗಿಳಿಯುವುದಿಲ್ಲ. ಕವಿತೆಗಳನ್ನೋ, ಕಥೆಗಳನ್ನೋ ಒಂದು ಸ್ಥಿರವಾದ ಮಾನಸಿಕ ಸ್ಥಿತಿಯಲ್ಲಿ ಮಾತ್ರ ಓದಲು ಸಾಧ್ಯ. ಪೂರ್ವ ತಯಾರಿಯಿರದಿದ್ದರೆ ಪದ್ಯಗಳ ಓದು ಒಂದು ರೀತಿಯಲ್ಲಿ ಶಿಕ್ಷೆಯೇ!. ಈ ಅಪಾಯಗಳನ್ನು ಪ್ರಬಂಧಗಳು ಮೀರಿರುವುದರಿಂದ ಪ್ರಯಾಣದ ನಡುವೆಯೋ, ಊಟದ ವಿರಾಮದಲ್ಲಿಯೋ ಇವನ್ನು ಅಸ್ವಾದಿಸಲು ಸಾಧ್ಯ. ಆದರೆ ಒಂದು ಸಿಟ್ಟಿಂಗ್‌ನಲ್ಲಿ ಒಂದಕ್ಕಿಂತ ಹೆಚ್ಚು ಪ್ರಬಂಧಗಳನ್ನು ಓದಿದರೆ ಅವುಗಳಲ್ಲಿ ಅಡಗಿರುವ ವಿಡಂಬನೆಯ ಶೃತಿ ನಮಗೆ ನಿಲುಕುವುದಿಲ್ಲ. ಹಾಗೆಯೇ ಆ ಪ್ರಬಂಧಗಳ ಒಳ ಹೂರಣದ ರುಚಿಯೂ ಸಿದ್ಧಿಸುವುದಿಲ್ಲ.&lt;br /&gt;&lt;br /&gt;ಫ಼ೀಚರು (ಸಾಂದರ್ಭಿಕ ಬರಹ), ಫ಼ಿಲ್ಲರು (ಲಹರಿ) ಮತ್ತು ಲಲಿತ ಪ್ರಬಂಧಗಳೆಂದು ಸಂಕಲನದಲ್ಲಿರುವ ಬರಹಗಳನ್ನು ವಿಭಾಗಿಸಬಹುದಾದರೂ, ಮೂಲತಃ ಈ ಮೂರು ಪ್ರಭೇದಗಳ ಗುಣ ಧರ್ಮ ಒಂದೇ ಆಗಿರುವುದರಿಂದ ಇವನ್ನೆಲ್ಲಾ ಪ್ರಬಂಧಗಳೆಂದು ಕರೆಯಲು ಅಡ್ಡಿಪಡಿಸುವುದಿಲ್ಲ. ರಾಗಿಮುದ್ದೆ, ಹಲ್ಲು ತೊಳಿಸಿಕೊಳ್ಳುತ್ತಾ ಅಮೆಝಾನ್ ಕಾಡುಗಳಲ್ಲಿ, ನಾಯಿ ನೆರಳು, ಗುಬ್ಬಿಗಳಿಗೊಂದು ಮನೆಯಕಟ್ಟಿಕೊಟ್ಟೆವು ಲಲಿತ ಪ್ರಬಂಧಗಳಾದರೆ, ಅಧರಂ ಮಧುರಂ, ಸಂಪೂರ್ಣ ರಾಮಾಯಣ, ಅವಳು ಅಹಲ್ಯೆ-ಇವನು ನಹುಷ ಫ಼ೀಚರುಗಳು. ಉಳಿದೆಲ್ಲಾ ಬರಹಗಳು ಕವಿತೆಗಳಂತೆ ನಿಧಾನಕ್ಕೆ ಆವರಿಸುವ ತಮ್ಮೊಳಗೇ ಬೆಳಕನ್ನಿಟ್ಟುಕೊಂಡಿರುವ ನುಡಿ ಚಿತ್ರಗಳು. ಸುಲಲಿತ ಪ್ರಬಂಧಗಳಲ್ಲಿ ಕನ್ನಡದ ಹಿರಿಯ ಪ್ರಬಂಧಕಾರರ ನೆರಳುಗಳಿದ್ದರೆ ಫ಼ೀಚರುಗಳಲ್ಲಿ ಲೇಖಕರೊಳಗಿನ ಪತ್ರಕರ್ತ ಪ್ರತ್ಯಕ್ಷನಾಗುತ್ತಾನೆ. ಉಳಿದಂತೆ ನುಡಿ ಚಿತ್ರಗಳಲ್ಲಿ ರಘುನಾಥ್ ಗಮನ ಸೆಳೆಯುತ್ತಾರೆ.&lt;br /&gt;&lt;br /&gt;“ರಾಗಿಮುದ್ದೆ” ದೇಸೀಧಾನ್ಯದ ಹಲವು ಮಗ್ಗಲುಗಳನ್ನು ಪರಿಚಯಿಸುತ್ತಲೇ ಹಳೆಯ ಮೈಸೂರುಪ್ರಾಂತದ ಆಹಾರ ಪದ್ಧತಿಯನ್ನು ವಿವರಿಸುವ ಸುಲಲಿತ ಪ್ರಬಂಧ. ಉಳ್ಳವರ ಮನೆಯ ಮಕ್ಕಳ ಜೇಬಲ್ಲಿ ವಿವಿಧ ತಿನಿಸಿದ್ದರೆ ಇಲ್ಲದವರ ಮನೆಯ ಮಕ್ಕಳಿಗೆ ಮುದ್ದೆಪಾತ್ರೆಯ ತಳದ “ಸೀಕು” ಚಾಕಲೇಟು! ಅನ್ನುತ್ತಲೇ “ರಾಗಿ ಲಕ್ಷ್ಮಣಯ್ಯ” ನವರನ್ನು ಪ್ರಾಸಂಗಿಕವಾಗಿ ನೆನೆಯುವುದು ಹಿತವೆನ್ನಿಸುತ್ತದೆ. &lt;br /&gt;&lt;br /&gt;“ನಾಯಿನೆರಳು” ಲಘುಬರಹದ ಹಾಗೆ ಕಂಡರೂ ಅನುಭವವೊಂದರ ಪರಿಪಾಕ. ವಿಷಾದದ ತೀವ್ರತೆಯಲ್ಲಿ ಮುಕ್ತಾಯವಾಗುವ ಪ್ರಬಂಧ ಓದುಗನನ್ನು ಒಂದು ವಿಷಣ್ಣತೆಗೆ ದೂಡಿಬಿಡುತ್ತದೆ.&lt;br /&gt;&lt;br /&gt;ರಾಮಾಯಣದ ಅಹಲ್ಯೆಯನ್ನು ಮಹಾಭಾರತ ನಹುಷನೊಂದಿಗೆ ಥಳಕುಹಾಕಿ ಹೊಸ ಪ್ರಮೇಯವೊಂದನ್ನು ಹಾಗೇ ಆ ಪಾತ್ರಗಳಿಗೆ ಇದುವರೆಗೂ ನಾವು ಒದಗಿಸಿದ “ಬೀಸ” ನ್ನು ಬೆಚ್ಚಿಬೀಳಿಸುವ ಹಾಗೆ ಬಿಕ್ಷೆಯ ಸ್ವರೂಪವನ್ನು ಹಿಡಿದಿಡುವ “ಅವಳು ಅಹಲ್ಯೆ-ಇವನು ನಹುಷ” ಪ್ರಬಂಧ ಸ್ವರೂಪ ಮೀರಿದ ಒಂದು ರೀತಿಯ ಗಪದ್ಯ.&lt;br /&gt;&lt;br /&gt;“ಅಧರಂ ಮಧುರಂ” ಚುಂಬನದ ಮಹತ್ತನ್ನು ಕಾಮನ್ ಹ್ಯಾಂಗೋವರಿನಲ್ಲಿ ತೇಲಾಡಿಸುತ್ತಲೇ ಸಾಹಿತ್ಯ ಪರಂಪರೆಯ ಮೂಲಕ ಚಮಕಾಯಿಸುವ ರೀತಿ “ಫ಼ೀಚರ್”ನ ಮಿತಿಗೆ ನಿಂತುಬಿಡುವುದರಿಂದ ಪ್ರಬಂಧದ ಹರಿವು ಕಳಕೊಂಡ ಬರಿಯ ಲಹರಿಯಾಗಿದೆ.&lt;br /&gt;&lt;br /&gt;“ಮನಸ್ಸಿನ ಸ್ಥಾವರ ಹಾಗೂ ಜಂಗಮ ಭಾವಗಳ ಬೆಸೆಯಲೊಂದು ಸೇತು ಬೇಕೆನಿಸುತ್ತದೆ” ಎಂದು ಕೊನೆಗೊಳ್ಳುವ “ಫ಼್ಲೈ ಓವರ್” ತನ್ನೊಡಲಲ್ಲಿ ಇಟ್ಟುಕೊಂಡಿರುವುದು ವಿಷಾದ ತೀವ್ರತೆಯನ್ನು. “ಬಡವರಿಗೆ ಎರಡು ನಿಮಿಷದ ಏರೋಪ್ಲೇನ್ ಪ್ರಯಾಣ” ಎನ್ನುವುದು “ಅತಿ” ಅನ್ನಿಸಿದರೂ ಆಧುನಿಕತೆಯ ಭೂತ-ಭವಿಷ್ಯಗಳನ್ನು ತನ್ನದೇ ರೀತಿಯಲ್ಲಿ ಓದುಗನಿಗೆ ದಾಟಿಸುವಲ್ಲಿ ಸಮರ್ಥವಾಗಿದೆ.&lt;br /&gt;&lt;br /&gt;“ಮಳೆಯ ಮೂರು ಹನಿ” ಓದುಗನಲ್ಲಿ ಹೊಮ್ಮಿಸುವ ಮಾರ್ದನಿ ಹಲವುದಿನಗಳವರೆಗೂ ಕಾಡುವ ಸಮರ್ಥ ರೂಪಕ. ಕಥೆಯೋ ಕವಿತೆಯೋ ಲಲಿತ ಪ್ರಬಂಧವೋ ಈ ಎಲ್ಲವನ್ನೂ ಮೀರಿ ಓದುಗನಿಗೆ ಬೆರಗನ್ನು, ಬೆಳಗನ್ನು ಮೂರು ಬೇರೆ ಬೇರೆ ಹನಿಗಳಲ್ಲಿ ಎಸ್ಕಲೇಟ್ ಮಾಡಿಸುವ ಎಸ್ಕಲೇಟರ್.&lt;br /&gt;&lt;br /&gt;ಸಂಕಲನದ ಸಹಜ ಪ್ರಬಂಧಗಳಲ್ಲೊಂದಾದ “ಹಲ್ಲು ತೊಳೆಸಿಕೊಳ್ಳುತ್ತಾ ಅಮೆಝಾನ್ ಕಾಡುಗಳಲ್ಲಿ” ಲೇಖಕರ ಸ್ವವಿವರಗಳನ್ನು ಹೆಕ್ಕಲು ಸಹಾಯ ಮಾಡುತ್ತದೆ. ಅನುಭವವನ್ನು ಬರಹವನ್ನಾಗಿಸಿದ ಅಭಿವ್ಯಕ್ತಿಯ ಶಕ್ತಿ ಇಲ್ಲಿ ಕೆಲಸ ಮಾಡಿದೆ.&lt;br /&gt;&lt;br /&gt;“ಕಂಬ ಕಂಬಗಳಿಗೆ ಚಂದಿರನ ನೇಣು” ಮಳೆಯ ಮೂರುಹನಿ ರೀತಿಯದ್ದು. ಶಾಂತ ಮನಸ್ಥಿತಿಯಲ್ಲಿ ಮಾತ್ರ ಇದರ ಓದಿನ ರುಚಿ ದಕ್ಕೀತು. ಮುಂಜಾನೆಯ “ಯಾತ್ರೆ” ಯ ಚಿತ್ರಗಳು ಪಾಯಖಾನೆಯ ಪ್ರಸಂಗಗಳನ್ನು ಸ್ವಾರಸ್ಯವಾಗಿ ನಿರೂಪಿಸುತ್ತಲೇ ಲೇಖಕರ “ಬಯಲ” ಬಯಕೆಯನ್ನು ಹೊರಹೊಮ್ಮಿಸುತ್ತದೆ.&lt;br /&gt;&lt;br /&gt;ಸಂಕಲನದ ಕಡೆಯ ಮೂರು ನಿಬಂಧಗಳು ಲೌಕಿಕ ಸತ್ಯವನ್ನು ಅನುಭವದ ಕಣ್ಣಲ್ಲಿ ಕಂಡ ದಾಖಲೆಗಳು. ಸ್ವಲ್ಪ ಅತಿಯೆನ್ನಿಸಿದರೂ ಉಳಿದವರಿಗಿಂತ “ನನ್ನ ಕಾಣ್ಕೆ” ಬೇರೆಯದು ಎಂದು ಈ ನಿಬಂಧಗಳು ಸೂಕ್ಷ್ಮ ವಾಗಿ ಮಿಡಿಯುತ್ತವೆ.&lt;br /&gt;&lt;br /&gt;ಹೀಗೆ ವೈಯುಕ್ತಿಕ ಅನುಭವಗಳ ವಿವರಗಳನ್ನು ಈ ಪ್ರಬಂಧಗಳಲ್ಲಿ ಹಿಡಿದಿಡಲು ರಘುನಾಥ ಪ್ರಯತ್ನಿಸಿದ್ದಾರೆ. ಅದರಲ್ಲಿ ಯಶಸ್ವಿಯೂ ಆಗಿದ್ದಾರೆ. ಅವರ ಅನುಭವಗಳು ಇಲ್ಲಿನ ಎಲ್ಲಾ ಪ್ರಬಂಧಗಳಿಗೆ ಖಚಿತತೆಯನ್ನು ಒದಗಿಸುವುದರ ಜೊತೆಗೆ ಸಾರ್ವತ್ರಿಕಗೊಳಿಸುವ ಗೆರೆಯಿಂದಲೂ ಬೇರ್ಪಡಿಸಿವೆ. ಇದು ಈ ಸಂಕಲನದ ಮಿತಿ ಮತ್ತು ಹೆಚ್ಚುಗಾರಿಗೆಯೂ ಆಗಿದೆ. ಭಾಷೆಯನ್ನು ಬಳಸಿರುವ ಕ್ರಮ, ವಾಕ್ಯ ರಚನಾ ವಿಧಾನ, ಅನೇಕ ಸಂಗತಿಗಳನ್ನು ಕುರಿತು ಹೇಳುತ್ತಲೇ ಅವೆಲ್ಲವನ್ನೂ ಏಕತ್ರಗೊಳಿಸಿ ಒಂದು ಕೇಂದ್ರಕ್ಕೆ ಒಗ್ಗಿಸುವ ರೀತಿ, ಮಧ್ಯೆ ಮಧ್ಯೆ ಆಧುನಿಕ ಕನ್ನಡ ಕಾವ್ಯದ ಅನಾಯಾಸ ಉದ್ಧರಣೆ ಪ್ರಬಂಧಗಳ ಅರ್ಥ ಸಾಧ್ಯತೆಯನು ವಿಸ್ತರಿಸಿದೆ.&lt;br /&gt;&lt;br /&gt;ಈ ಲೇಖನ ವಿಮರ್ಶೆಯಲ್ಲ. ವಿಮರ್ಶೆಯಗುರಿ ಮತ್ತು ಅದರ ಆಶಯಗಳು ಕೃತಿಯೊಂದರ ಸೌಷ್ಟವತೆಯನ್ನು ಕರಾರುವಾಕ್ಕಾಗಿ ಅಳೆದು “ಇದಮಿತ್ತಂ” ಎಂದು ಕೊಡುವ ಅರ್ಹತಾಪತ್ರ. ಅಂತಹ ಅರ್ಹತೆಯನ್ನು ಈ ಸಂಕಲನ ಇಟ್ಟುಕೊಂಡಿದೆಯೋ ಇಲ್ಲವೋ ಆದರೆ ನಿತ್ಯ ಜಂಜಡದ ಸದ್ಯೋವರ್ತಮಾನದಲ್ಲಿ ನಮ್ಮೊಳಗಿದ್ದೂ ನಮ್ಮದಲ್ಲವಾಗಿದ್ದ ಅದೆಷ್ಟೋ ಸಂಗತಿಗಳಿಗೆ ಮರು ಹುಟ್ಟು ನೀಡಿ ಕ್ಷಣ ಕಾಲವಾದರೂ ನಮ್ಮೊಳಗಿನೊಂದಿಗೆ ಸಂಭಾಷಿಸಲು ಅವಕಾಶ ಮಾಡಿಕೊಡುತ್ತದೆ. ಅಂಥ ಅವಕಾಶ ನೀಡಿದ ಲೇಖಕನಿಗೆ ಅಭಿನಂದಿಸುವುದಷ್ಟೇ ಈ ಲೇಖನದ ಉದ್ದೇಶ.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/5254102750204147054-4291271644267652997?l=bemkikaddi.blogspot.com' alt='' /&gt;&lt;/div&gt;</content><link rel='replies' type='application/atom+xml' href='http://bemkikaddi.blogspot.com/feeds/4291271644267652997/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://www.blogger.com/comment.g?blogID=5254102750204147054&amp;postID=4291271644267652997' title='0 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/5254102750204147054/posts/default/4291271644267652997'/><link rel='self' type='application/atom+xml' href='http://www.blogger.com/feeds/5254102750204147054/posts/default/4291271644267652997'/><link rel='alternate' type='text/html' href='http://bemkikaddi.blogspot.com/2009/06/blog-post.html' title='ದೆಸಿತನದ ಸೊಗಡಿಗೆ ಆಧುನಿಕತೆಯ ಬಡಿವಾರ'/><author><name>ಬೆಂಕಿಕಡ್ಡಿ</name><uri>http://www.blogger.com/profile/13181705369161334860</uri><email>noreply@blogger.com</email><gd:image rel='http://schemas.google.com/g/2005#thumbnail' width='21' height='32' src='http://4.bp.blogspot.com/_bUAIZF0Yo1g/TKdTK-6rv2I/AAAAAAAAAJY/QXUJAVKh9ps/S220/dsr4.jpg'/></author><thr:total>0</thr:total></entry><entry><id>tag:blogger.com,1999:blog-5254102750204147054.post-4193689801040566359</id><published>2009-03-15T07:55:00.000+05:30</published><updated>2009-03-15T07:56:43.314+05:30</updated><title type='text'>ವಿಷಾದ</title><content type='html'>ಅಕಾರಣ ಹುಟ್ಟಿ ಬಿಡುವ ಈ ವಿಷಾದ&lt;br /&gt;ಇರುವ  ಸುಖ ಸವಲತ್ತುಗಳ  ನಿರಾಕರಿಸಿ &lt;br /&gt;ಶಬ್ದಾರ್ಥಗಳ ಮಿತಿಯ ಮೀರುವುದು  &lt;br /&gt;&lt;br /&gt;ಎದೆಯೊಳಗೆ ನವನೀತ ಕಡೆಯುತ್ತಲೇ&lt;br /&gt;ಉತ್ತುಂಗಕ್ಕೇರಿದ ಕನಸನ್ನೊಡೆಯುವುದು &lt;br /&gt;ಯಾವುದೋ ಮುರಳಿಯ ಕರೆಗೆ ಕಿವಿಗೊಡುವುದು&lt;br /&gt;&lt;br /&gt;ಪೊಡಮಡುವೆ, ಹೇ, ವಿಷಾದವೆ&lt;br /&gt;ಸುಡುವಗ್ನಿಗೆ ಉದಕವಾಗುವ ನಿನ್ನ ನೆರಳಿಗೆ&lt;br /&gt;ಒಳಗಿನಿಂದ ನರಳುತ್ತಲೇ ಅರಳುವ ಹೂವಿಗೆ&lt;br /&gt;&lt;br /&gt;ಹೊರಗಣ್ಣುಗಳ ದಿಟ್ಟಿಗೆ ನೀನು ಬೀಳದ ಹಾಗೆ&lt;br /&gt;ನಿನ್ನಿರವ ಈ ಅರಿವೆಯೊಳಗೇ  ನಿಲಿಸು&lt;br /&gt;ಭಿನ್ನವೆನ್ನುವ ತೆರೆ-ತೆರಗಳನಳಿಸು&lt;br /&gt;&lt;br /&gt;ನಮ್ಮ ನಾವೆ ಅನ್ಯರಿಗೆ ತೆತ್ತು ಕೊಳ್ಳದ ರೀತಿ&lt;br /&gt;ಬಾಳಗಡಲಿನ ದಿಕ್ಸೂಚಿ ಕವಿತೆಯನುಳಿಸು.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/5254102750204147054-4193689801040566359?l=bemkikaddi.blogspot.com' alt='' /&gt;&lt;/div&gt;</content><link rel='replies' type='application/atom+xml' href='http://bemkikaddi.blogspot.com/feeds/4193689801040566359/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://www.blogger.com/comment.g?blogID=5254102750204147054&amp;postID=4193689801040566359' title='2 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/5254102750204147054/posts/default/4193689801040566359'/><link rel='self' type='application/atom+xml' href='http://www.blogger.com/feeds/5254102750204147054/posts/default/4193689801040566359'/><link rel='alternate' type='text/html' href='http://bemkikaddi.blogspot.com/2009/03/blog-post_15.html' title='ವಿಷಾದ'/><author><name>ಬೆಂಕಿಕಡ್ಡಿ</name><uri>http://www.blogger.com/profile/13181705369161334860</uri><email>noreply@blogger.com</email><gd:image rel='http://schemas.google.com/g/2005#thumbnail' width='21' height='32' src='http://4.bp.blogspot.com/_bUAIZF0Yo1g/TKdTK-6rv2I/AAAAAAAAAJY/QXUJAVKh9ps/S220/dsr4.jpg'/></author><thr:total>2</thr:total></entry><entry><id>tag:blogger.com,1999:blog-5254102750204147054.post-107308315685017916</id><published>2009-03-11T14:26:00.002+05:30</published><updated>2009-03-11T14:29:38.100+05:30</updated><title type='text'>ಚಂದಿರನೇತಕೆ ಓಡುವನಮ್ಮ?</title><content type='html'>“ಚಂದಿರನೇತಕೆ ಓಡುವನಮ್ಮ ಮೋಡಕೆ ಹೆದರಿಹನೆ?” ಶಿಶು ಗೀತೆಯ ಸಾಲುಗಳು ನೆನಪಾದಾಗಲೆಲ್ಲ ನಮ್ಮೊಂದಿಗೆ ಓಡುತ್ತೋಡುತ್ತಲೇ ತಾನು ಮಾತ್ರ ಇದ್ದಂತೆಯೇ ಇರುವ ಚಂದ್ರನ ಬಗ್ಗೆ ಮತ್ಸರ ಹುಟ್ಟುತ್ತದೆ. ಅಳುವ ಮಕ್ಕಳಿಗೆಲ್ಲ ಚಂದಮಾಮನಾಗಿ ಬಂದು ಸಮಾಧಾನ ಮಾಡುವ ಅವನು, ಹದಿಹರಯದವರಲ್ಲಿ ಕುತೂಹಲ ಹುಟ್ಟಿಸುತ್ತ, ಪ್ರೇಮಿಗಳಿಗೆ ಸಂತಸದ ಸಂಭ್ರಮವನ್ನೇ ಹರಿಸುವ ಚಂದ್ರಮ ಮುಪ್ಪಡರಿದವರ ಜೊತೆ ಜೊತೆಗೇ ಹೆಜ್ಜೆ ಹಾಕುತ್ತ ಅವರ ಒಂಟಿತನ ನೀಗಿಸುತ್ತಾನೆ.&lt;br /&gt;&lt;br /&gt;    ಚಂದ್ರಿಕೆಯ ಬೆಳಕನ್ನೇ ಉಂಡು ಸುಖಿಸುವ ಚಕೋರ ಪಕ್ಷಿಯ ವಿಚಾರವೂ ಎಲ್ಲರಿಗೆ ತಿಳಿದದ್ದೇ ಆಗಿದೆ.  ಗಣಪನಿಂದ ಶಪಿತನಾದ ಚಂದ್ರನ ಕತೆಯೂ ನಮಗೆ ಗೊತ್ತು. ಇನ್ನು ಈ ಚಂದ್ರನ ತಿಂಗಳ ಬೆಳಕಿನ ಬಗ್ಗೆ ಗೊತ್ತಿರದವರು ಯಾರಿದ್ದಾರೆ?&lt;br /&gt;&lt;br /&gt;    ಹಾಲು ಸುರಿದಂತೆ ಬೆಳದಿಂಗಳೆಂದು ಒಬ್ಬರು ಹೇಳಿದರೆ ಹಿಟ್ಟು ಚೆಲ್ಲಿದಂತೆ ಬೆಳದಿಂಗಳೆಂದು ಮತ್ತೊಬ್ಬರ ವಾದ. ಚೆಲ್ಲಲು ಹಾಲು ಸಿಕ್ಕಬಹುದಾದರೂ ಹಾಗೆ ಚೆಲ್ಲಿದ ಹಾಲು ನೆಲದಲ್ಲಿಂಗದೇ ಉಳಿಯಲು ಸಾಧ್ಯವೆ? ಹಿಟ್ಟನ್ನು ಚೆಲ್ಲಿದ್ದಾರೆನ್ನುವವರಿಗೂ ಅಷ್ಟೊಂದು ಹಿಟ್ಟು ಅದೆಲ್ಲಿ ಸಿಕ್ಕುತ್ತದೋ ಗೊತ್ತಿಲ್ಲ.&lt;br /&gt;&lt;br /&gt;    ಒಟ್ಟಿನಲ್ಲಿ ಉಪಮೆ ಇಲ್ಲದೆ ಗುಣ ವರ್ಣನೆ ಸಾಧ್ಯವಿಲ್ಲದ ಸಂಗತಿ.  ಇವನ್ನೆಲ್ಲ ಕವಿತ್ವವೆಂದು ಕರೆದು, ವಿಜ್ಞಾನದ ಮೂಲಕ ಚಂದ್ರನನ್ನು ಕಾಣಹೋದರೂ ಸುತ್ತಿಕೊಳ್ಳುವುದು ಮತ್ತದೇ ಬೆಳದಿಂಗಳು.  ಗುರುತ್ವಾಕರ್ಷಣೆಯ ತತ್ವದ ಮೇಲೆ ನಿಂತಿರುವ ನಮ್ಮ ಸೌರ ಮಂಡಲದ ಗ್ರಹಗಳಿಗೆ ಅವುಗಳ ತಾಕತ್ತಿಗೆ ತಕ್ಕಂತೆ ಚಂದ್ರರು ಅವರವರನ್ನು ಸುತ್ತುತ್ತಿದ್ದಾರೆ.  ನಮ್ಮ ಭೂಮಿಗೆ ಪಾಪ ಈ ಚಂದ್ರನೊಬ್ಬನೇ ದಿಕ್ಕು.  ಆಕಾಶದ ತುಂಬ ಹರಡಿರುವ ಅದೆಷ್ಟೋ ಅಸಂಖ್ಯ ನಕ್ಷತ್ರಗಳು, ತಿಂಗಳ ಬೆಳಕಲ್ಲಿ ಚಂದ್ರನ ಮನೆಯ ಮಿಣುಕು ದೀಪಗಳಂತೆ ಕಾಣುವುದೂ ಸತ್ಯದ ಮಾತೇ! &lt;br /&gt;&lt;br /&gt;    ಭೂಮಿಯ ಪ್ರದಕ್ಷಿಣೆಯಲ್ಲೇ ಆಯಸ್ಸು ಕಳೆಯುತ್ತಿರುವ ಚಂದ್ರ, ಸೂರ್ಯನ ಬೆಳಕನ್ನೇ ಎರವಲು ಪಡೆದ ಭೂಪ.  ನಾವಾಗಲೇ ಅವನ ಮೇಲೂ ಹತ್ತಿಳಿದು ಬಂದು ಕವಿಕಲ್ಪನೆಗಳನೆಲ್ಲ ಸುಳ್ಳು ಮಾಡಿದ್ದೇವೆ.  ಆದರೂ ತಿಂಗಳು, ತಿಂಗಳ ಚಂದ್ರನ ವೈಭವದ ಮುಂದೆ ಯಾವ ರಾಜ ಮಹಾರಾಜರ ದರ್ಬಾರು ಕಳೆಗಟ್ಟೀತು?&lt;br /&gt;&lt;br /&gt;    ಇನ್ನು ಚಂದ್ರನಿಗೂ, ಅಮೃತಕ್ಕೂ ಅವಿನಾವ ಸಂಬಂಧ.  ಅವನೊಳಗಿರುವ ಹದಿನಾರು ಕಲೆಗಳಿಂದೊಡಗೂಡಿದ ಅಮೃತವನ್ನು ದೇವ ದೇವತೆಗಳು ಬೇಡಿ ಪಡೆಯುತ್ತಾರಂತೆ.  ಹುಣ್ಣಿಮೆಯಂದು ನಳ ನಳಿಸುವ ಚಂದ್ರ ದಾನಾರ್ಥಿಗಳಿಗೆ ಸ್ವಲ್ಪ ಸ್ವಲ್ಪವೇ ಅಮೃತವನ್ನು ಹಂಚುತ್ತ ಕಡೆಗೆ ತಾನೇ ಇಲ್ಲವಾಗುತ್ತಾನೆ.  ಅಮಾವಾಸ್ಯೆಯ ಕಾಳಕತ್ತಲೆಯಲ್ಲಿ ಹೊಸ ಜ್ಞಾನ ಸಂಪಾದಿಸಿ, ದಿನದಿಂದ ದಿನಕ್ಕೆ ಮತ್ತೆ ಅಮೃತ ಸಂಚಯನಕ್ಕೆ  ತೊಡಗುವ ಚಂದ್ರ ನಮ್ಮ ಬದುಕಿಗೊಂದು ಅರಿವು ಹುಟ್ಟಿಸುತ್ತಾನೆ.  ಕಷ್ಟ ಪಟ್ಟು ಪಡೆಯಬೇಕಿರುವ ಜ್ಞ್ನಾನ ಸಂಚಯನ ಆಸಕ್ತರೆಲ್ಲರಿಗೆ ಹಂಚಬೇಕಿರುವ ಔದಾರ್ಯ ಕಲಿಸುತ್ತಿದ್ದಾನೆ. ಅಂದರೆ ಸಂಪೂರ್ಣ ವಿದ್ಯೆ ನಮಗೆ ದಕ್ಕಿತೆಂದ ಕೂಡಲೇ ಅದನ್ನು ಬೇಡುವವರಿಗೆ ಹಂಚುತ್ತ ಪುನಃ ನಾವು ಖಾಲಿಯಾಗಬೇಕು.  ಒಳಗೇ ತುಂಬಿಕೊಂಡಿದ್ದ ಅಹಂಕಾರ, ಮತ್ಸರ, ಕೊಬ್ಬುಗಳೆಲ್ಲ ಕರಗಿ ಉರಿವ ಕರ್ಪೂರದ ರೀತಿ ನಮಗೆ ಸಿದ್ಧಿಸಬೇಕು.  ಹಾಗೆ ಮೂಡಿದ ಸ್ಥಿತಿಯಿಂದ ಮತ್ತೆ ಜ್ಞಾನ ಸಂಚಯನದ ಹಾದಿ ತುಳಿಯಬೇಕು.  &lt;br /&gt;&lt;br /&gt;     ಇಂದಿನ ದಿನಗಳಲ್ಲಿ ಹೊಳೆಯುವ ನಿಯಾನ್ ಬೆಳಕಿನಲ್ಲಿ, ಝಗಮಗಿಸುವ ಸೋಡಿಯಂ ದೀಪಗಳಡಿಯಲ್ಲಿ ಚಂದ್ರನ ಚಂದ್ರಿಕೆಯ ತಂಪಿರಲಿ, ಅವನ ಇರುವಿಕೆಯೇ ಮರೆತು ಹೋಗುತ್ತಿದೆ.  ಅಮಾವಾಸ್ಯೆ, ಹುಣ್ಣಿಮೆಗಳ ವ್ಯತ್ಯಾಸ ತಿಳಿಯದ ಹಾಗೆ ಬೀದಿ ದೀಪಗಳು ಬೆಳಗುತ್ತಲೇ ಇವೆ.  ಹೊಳೆ ಹೊಳೆಯುವ ತಾರೆ, ಸುಡು ಸುಡುವ ಸೂರ್ಯನ ಪ್ರಖರತೆ, ಅಮಾವಾಸ್ಯೆಯ ದಟ್ಟ ತಿಮಿರ, ತಂಪೆರಚುವ ಹುಣ್ಣಿಮೆಯ ಹಾಲ್ಬೆಳಕು ಬರಿಯ ಪುಸ್ತಕಗಳಲ್ಲಿ, ಕವಿತೆಗಳ ಸಾಲುಗಳಲ್ಲಷ್ಟೇ ಕಾಣಬೇಕಾದ ಅನಿವಾರ್ಯತೆಯೊದಗಿದೆ.   ಇಂಥ ಭವದ ಬದುಕಿನ ನಡುವೆಯೂ ನೈಸರ್ಗಿಕ ಬೆಳಕು-ಕತ್ತಲೆಗಳ ಬಗ್ಗೆ, ಕವಿಕಲ್ಪನೆಯ ಕನಸು- ನಿಜ ವಾಸ್ತವದ ಬಗ್ಗೆ, ಸುಡು ಬಿಸಿಲು- ಜೀವನ ಕ್ರಮದ ಬಗ್ಗೆ, ಕೊಂಚ ಯೋಚಿಸಿದರೆ ಸಾಕು, ನಮ್ಮೊಳಗೂ ಒಬ್ಬ ಚಂದ್ರ ಹುಟ್ಟುತ್ತಾನೆ.  ಹೀಗೆ ಹುಟ್ಟುವ ಚಂದ್ರ  ತರುವ ಬೆಳ್ಳಂ ಬೆಳಕಿನ ಹುಣ್ಣಿಮೆಯನ್ನು ಅನ್ಯರಿಗೂ ಸ್ಪರ್ಶಿಸುತ್ತ, ಬದುಕುವ ಕನಸೇ ಅಧ್ಭುತ.  &lt;br /&gt;&lt;br /&gt;    ಈ ದಿಕ್ಕಿನಲ್ಲಿ ಆಲೋಚಿಸಲು, ಅಂದರೆ ನಮ್ಮೊಳಗೊಬ್ಬ ಚಂದ್ರನನ್ನು ಸೃಷ್ಟಿಸಿಕೊಳ್ಳಲು, ನಮ್ಮೊಳಗಿಗೆ ಎರವಲು ಬೆಳಕು ತರಲು ನಮಗೆ ನಾವೇ ಕೊಟ್ಟು ಕೊಂಡಿರುವ ಸವಲತ್ತುಗಳನ್ನು ಅಲಕ್ಷಿಸಬೇಕು.  ಲೌಕಿಕದ ಸುಖಕ್ಕಿಂತಲೂ ಮಾನಸಿಕ ಸುಖದ ಬಯಕೆ, ಹರಳು ಕಟ್ಟಬೇಕು.  ಆಗ ನಮ್ಮೊಳಗೆ ಹುಟ್ಟುವ ಚಂದ್ರ ತನಗೆ ತಾನೇ ಬೆಳದಿಂಗಳನ್ನು ಸೂಸುತ್ತ ಹೋಗುತ್ತಾನೆ. &lt;br /&gt;&lt;br /&gt;    ಇರಲಿ, ಒಂದು ಋತುವಿಗೆರಡು ಬಾರಿಯಂತೆ ಸಂಪೂರ್ಣ ಭೇಟಿ ಕೊಡುವ ಚಂದ್ರ ಋತು ವಿಲಾಸದ ಅಧ್ಯಯನಕ್ಕೆ ಸಹಕರಿಸುವ ರೀತಿಯೇ ಅನನ್ಯವಾದುದು.  ವರ್ಷಾರಂಭದ- ಇಂಗ್ಲಿಷ್ ವರ್ಷವಲ್ಲ, ಯುಗಾದಿಯಿಂದ ಪ್ರಾರಂಭವಾಗುವ ನಮ್ಮ ವರ್ಷ- ವಸಂತದ ನೆಲದಲ್ಲಿ ಚಿಗಿತೆದ್ದ ಹಸಿರು ರಾಶಿಯ ನಡುವೆ ಚಿಗುರು ತಿನ್ನುತ್ತಲೇ ಹಾಡುವ ಕೋಗಿಲೆಗಳ ಪುಳಕದ ಹಗಲಿಗೆ ಸರಿಸಮವಾಗಿ ಜುಗಲಬಂದಿ ನೀಡುವ ರಾತ್ರಿಯನ್ನು ತಯಾರು ಮಾಡುವವನೇ ನಮ್ಮ ಚಂದ್ರ.  ಶಾಂತಿರಸ್ತು, ಪುಷ್ಟಿರಸ್ತು, ತುಷ್ಠಿರಸ್ತು, ಎನ್ನುವ ಮೂರು ಮೂಲ ಉದ್ದೇಶದ ಚಂದ್ರ ಹರಿಸುವ ಶಾಂತಿ, ಸಮೃದ್ಧಿ, ಸಂತಸದ ಹೊನಲುಗಳು ಹಗಲ ಬೆಳಕಿನಲ್ಲೇ ಜೂಗರಿಸುತ್ತ ಕಾಲ ಕಳೆಯುವ ಅರಸಿಕರಿಗೆ ಸುಲಭವಾಗಿ ಅರ್ಥವಾಗುವಂಥದಲ್ಲ.&lt;br /&gt;&lt;br /&gt;    ಜಾತ್ರೆ, ಉತ್ಸವ, ತೇರುಗಳು ಚಂದ್ರನಿಲ್ಲದ ಹೊತ್ತಲ್ಲಿ ನಡೆಯುವದಪರೂಪ.  ಅಮಾವಾಸ್ಯೆಯ ಲಕ್ಷ್ಮಿ ಪೂಜೆ, ತೀರ್ಥಹಳ್ಳಿಯ ಎಳ್ಳಮಾವಾಸ್ಯೆ ಜಾತ್ರೆಯಲ್ಲಿ ಮಾತ್ರ ಚಂದ್ರ ಇರುವುದಿಲ್ಲ.  ಚಂದ್ರ ದರ್ಶನವೇ ಬೇಡದ ಭಾದ್ರಪದ ಶುಕ್ಲ ಚೌತಿಯ ಸಂಜೆ ಆಕಾಶದ ತುಂಬ ಸರ್ಚ್ ಲೈಟ್ ಹಚ್ಚಿಟ್ಟಂತೆ ಬೆಳಕ ಹರಡಿ ಕತ್ತೆತ್ತಿದವರೆಲ್ಲರ ಕಣ್ಣಿಗೂ ಬೀಳುವ ಚಂದ್ರ, ಯುಗಾದಿ ಚಂದ್ರ ದರ್ಶನದ ದಿನ ಮಾತ್ರ ಹುದುಕಿದರೂ ಸಿಗದೆ, ಕತ್ತು ಸೋತು ಕೆಳಗಿಳಿಸಿದ ಮೇಲೆ, ದೂರದಲ್ಲೆಲ್ಲೋ ಕಂಡು ಮಾಯವಾಗುತ್ತಾನೆ.  ಹಾಗೆ ಅವನು ಕೊಟ್ಟ ದರ್ಶನದಲ್ಲೇ ಅವನು ಎಡಕ್ಕಿದ್ದನೋ, ಬಲಕ್ಕಿದ್ದನೋ ಎಂಬುದರ ಮೇಲೆ ಆ ವರ್ಷದ ಮಳೆ ಬೆಳೆಯ ಲೆಕ್ಕಾಚಾರ ಮಾಡುತ್ತಿದ್ದ ನಮ್ಮ ಹಿರಿಯರ ನೆನಪಿಸಿಕೊಳ್ಳುವುದೇ ಮತ್ತೊಂದು ಹುಣ್ಣಿಮೆಯ ಹಾಗೆ.&lt;br /&gt;&lt;br /&gt;    ಶ್ರಾವಣದ ಹುಣ್ಣಿಮೆಯ ವಿಶೇಷವೆಂದರೆ, ಅದು ತೊಟ್ಟ ಜನಿವಾರವನ್ನು ರಿವೈವ್ ಮಾಡಿಸುವ ಹಬ್ಬ.  ಜನಿವಾರದ ಎಳೆಗಿಂತಲೂ ತೆಳ್ಳಗೆ, ಬೆಳ್ಳಗೆ, ಮೆತ್ತಗಿರುವ ಒತ್ತು ಶ್ಯಾವಿಗೆಯ ಹಬ್ಬ.  ಆ ಶ್ಯಾವಿಗೆಗೆ ಎಳ್ಳು ಕಾಯಿರಸ ಬೆರಸಿದರೆ ಸಿಹಿ ಶ್ಯಾವಿಗೆ.  ಕಡ್ಲೆ ಬೀಜದ ಒಗ್ಗರಣೆ ಕೊಟ್ಟು ಕೊತ್ತಂಬರಿಯಿಂದ ಅಲಂಕರಿಸಿದರೆ ಖಾರದ ಶ್ಯಾವಿಗೆ.  ಒತ್ತು ಶ್ಯಾವಿಗೆಯ ಜೊತೆಗೆ ಒಬ್ಬಟ್ಟಿನ ಬೋನಸ್ಸು!  ಶ್ರಾವಣದ ಜಡಿಮಳೆಯಲ್ಲಿ ಹೊರಗೆಲ್ಲೂ ಹೋಗಲಾಗದೇ ಕೂತು ಬೇಸರ ಬಂದವರಿಗೆ ಭೋಜನ ಪಂದ್ಯವೇರ್ಪಡಿಸಲು ಸಕಾಲ.&lt;br /&gt;&lt;br /&gt;    ಇನ್ನು ಪ್ರತಿ ಹುಣ್ಣಿಮೆಯ ಸಂಜೆ ಸತ್ಯನಾರಾಯಣ ಪೂಜೆ ನಡೆಸಿ, ಜನರ ಪಾಪ ಶೇಷಗಳೆಲ್ಲವನ್ನೂ ತೊಳೆಯುತ್ತಿರುವ ನಮ್ಮ ಅದೆಷ್ಟೋ ದೇವಸ್ಥಾನಗಳ ಸಮಿತಿಗಳಿಗಂತೂ, ಹುಣ್ಣಿಮೆಯೆಂದರೆ ಕಲೆಕ್ಷನ್.  ಹುಣ್ಣಿಮೆ, ಅಮಾವಾಸ್ಯೆಗಳಲ್ಲಷ್ಟೇ ಚಿತ್ತ ವಿಭ್ರಮೆಗೊಳಗಾಗುವ ಜನರನ್ನು ಆಧುನಿಕ ವಿಜ್ಞಾನ ಅನುಮಾನದಿಂದ ನೋಡಿ, ಮನಶಾಸ್ತ್ರ ತಜ್ನರನ್ನು ಕಾಣುವಂತೆ ಸೂಚಿಸಿದರೂ, ಅದೇಕೆ ಹುಣ್ಣಿಮೆಯ ರಾತ್ರಿಗಳಲ್ಲಷ್ಟೇ ಸಮುದ್ರ ಉಕ್ಕಿ ಸೊಕ್ಕುತ್ತದೆ ಎನ್ನುವುದೂ ಗಮನಿಸಬೇಕಾದ ಸತ್ಯ. ಏಕೆಂದರೆ ಭೂಮ್ಯಾಕಾಶ, ನಕ್ಷತ್ರ, ನೀಹಾರಿಕೆಗಳ ಚಲನೆಯನ್ನೇ ಅಧ್ಯಯನಿಸುವ ಕಸುಬಿನವರಿಗೆ ಅದು ವಿಜ್ಞಾನ.  ಅದನ್ನೇ ಅರೆ ಬರೆ ತಿಳಿದು, ಕುಂಡಲಿ ಹಾಕಿ ರವಿ, ಕುಜ, ಚಂದ್ರ ಎಂದು ಬರೆದು ಕವಡೆ ಹಾಕುವವನಿಗೆ ಶಾಸ್ತ್ರ.  ನಮ್ಮ ಜನ ವಿಜ್ಞಾನಕ್ಕಿಂತ ಅಜ್ಞಾನವನ್ನೇ ಮೆಚ್ಚುವವರಾದ್ದರಿಂದ, ಭವಿಷ್ಯ ಹೇಳುವವರ ಭವಿಷ್ಯವಂತೂ ಉಜ್ವಲವಾಗಿಯೇ ಇರುತ್ತದೆ.  ಅಮಾವಾಸ್ಯೆಯ ರಾತ್ರಿ ಭೂತ ಪ್ರೇತಗಳಿಗೆ ಇರುವಂತೆಯೇ ಹುಣ್ಣಿಮೆಯ ರಾತ್ರಿಗಳನ್ನು ಮೋಹಿನಿಯರಿಗೆ,ಬಾಣಂತಿ ದೆವ್ವಗಳಿಗೆ ಮೀಸಲಿಟ್ಟಿರುವ ನಮ್ಮ ಜನ ತಮಗೆಂದು ಮಾತ್ರ ಯಾವ ದಿನಗಳನ್ನೂ ನಿಗದಿಯಾಗಿಸಿಲ್ಲದಿರುವುದೇ ನಮ್ಮೆಲ್ಲ ಅಜ್ಞಾನದ ಮೂಲ ಸತ್ಯ.  &lt;br /&gt;&lt;br /&gt;    ಚಂದ್ರನ ಅತಿ ಹತ್ತಿರದ ಸ್ನೇಹಿತನೆಂದರೆ ಮನ್ಮಥ.  ಚಂದ್ರಿಕೆಯ ಸವಿಯಲ್ಲಿ ಪ್ರೇಮಿ ತೊಯ್ಯುತ್ತಿದ್ದರೆ, ಮನ್ಮಥನ ಬಾಣಗಳು ಇನ್ನೇನು ತಾಗುವವೆಂದೇ ಅರ್ಥ. ಇನ್ನು ಹೇಗೆ ತಾನೆ ಆ ಪ್ರ್ರೇಮಿ ರಾತ್ರಿಯ ಉದ್ದಗಲಗಳನ್ನಳೆಯದೇ ಬಿಡಲು ಸಾಧ್ಯ? ಶುಕ ಧ್ವಜ ಮನ್ಮಥ ತನ್ನ ಇಕ್ಷು ಚಾಪದಿಂದ ಸುಮ ಬಾಣಗಳನ್ನು ಬಿಡದಿರುತ್ತಿದ್ದರೆ, ಈ ಲೋಕದ ಜನರಿಗೆ ಅದು ಹೇಗೆ ತಾನೆ ಪ್ರೀತಿ- ವಿರಹಗಳ ಉತ್ಕಟತೆಯ ಅರಿವು ಬರುತ್ತಿತ್ತು?  ಕಾಮನ ಹುಣ್ಣಿಮೆಯ ನೆನಪೇ ಮತ್ತೊಂದು ಹುಣ್ಣಿಮೆಯ ಅನುಭವವನ್ನು ಕೊಡಬಲ್ಲುದೆಂದರೆ, ಕಾಮನ ಹುಣ್ಣಿಮೆಯ ನೆನೆಯದೇ ಮುಂದಡಿಯಿಡುವುದು ಅಪರಾಧವಾದೀತು! &lt;br /&gt;&lt;br /&gt;    ಕಾಮನ ಹುಣ್ಣಿಮೆಯ ಸಾಂಪ್ರದಾಯಿಕ ಆಚರಣೆಗಿಂತಲೂ, ಹೊಸ ತಲೆಮಾರು ಅದನ್ನಾಚರಿಸುವಾಗ ಬದಲಾಯಿಸುತ್ತ ಬಂದ ರಿವಾಜುಗಳನ್ನು ಅಧ್ಯಯನ ಮಾಡಿದರೆ ಅದೇ ಒಂದು ವಿದ್ವತ್ ಪ್ರಬಂಧವಾಗಿಯೇ ಆಗುತ್ತದೆ.  ಸ್ವಭಾವತಃ ಪುಕ್ಕಲು ಹುಡುಗರೂ, ಕಾಮೋತ್ಸವದ ದಿನ ತಮ್ಮ ಮಿತಿ ಮೀರಿ ವರ್ತಿಸುವ ರೀತಿಯೇ ಈ ಹಬ್ಬಕ್ಕಿರುವ ವಿಶೇಷತೆಯನ್ನು ಎತ್ತಿ ತೋರಿಸುತ್ತದೆ. ಒಂದೆರಡು ಸ್ವಾರಸ್ಯದ ಸಂಗತಿಗಳನ್ನಿಲ್ಲಿ ನೆನೆಯದೇ ಹೋದರೆ, ಈ ಬರಹ ಇಂಗಿನೊಗ್ಗರಣೆ ಇಲ್ಲದ ತಿಳಿಸಾರಿನಂತಾಗಿ ಬಿಡಬಹುದೆಂಬ ಭಯದಿಂದ ಆವನ್ನೀಗ ನೆನೆಯುತ್ತಿದ್ದೇನೆ.&lt;br /&gt;&lt;br /&gt;    ಕಾಮನ ಹುಣ್ಣಿಮೆಯ ಹಿಂದಿನ ರಾತ್ರಿ ಊರ ದೇವರ ಜಗಲಿಯಲ್ಲಿ ಆ ಒಂದು ರಾತ್ರಿಗೆಂದೇ ಪ್ರತಿಷ್ಠಾಪಿತನಾಗುವ ದೇವನೆಂದರೆ ಅದು ನಮ್ಮ ಮನ್ಮಥ ದೇವ. ಬತ್ತದ ಹುಲ್ಲಿನಲ್ಲಿ ತಯಾರಿಸಿದ ಮನುಷ್ಯ ಶರೀರ ಹೋಲುವ ಬೊಂಬೆಗೆ ಚಿಂದಿ ಪ್ಯಾಂಟು, ಶರಟುಗಳನ್ನು ತೊಡಿಸಿ, ಮನುಷ್ಯರಂತೇ ಕೂರಿಸುವ ಕೆಲಸ ಅನುಭವದ ಕೈಗಳಿಂದ ಮಾತ್ರ ಸಾಧ್ಯವಿರುವ ಸಂಗತಿ.  ಹಾಗೆ ತಯಾರಾದ ಬೊಂಬೆಗೆ ಆ ರಾತ್ರಿಯ ಮಟ್ಟಿಗೆ ಕಡ ತಂದ ಸೂಟು ತೊಡಿಸಿ, ಅಟ್ಟೆ ಕಿತ್ತ ಬೂಟು ತೊಡಿಸಿ, ಆ ವರ್ಷದ ಹಿಟ್ ಸಿನಿಮಾದ ಹೀರೊ ಧರಿಸಿದ್ದ ಟೋಪಿ ಅಥವ ಹ್ಯಾಟು ತೊಡಿಸಿ, ಎಂ.ಜಿ.ಆರ್ ಕನ್ನಡಕ ತೊಡಿಸುವುದು ಕಿರಿಯರ ಕೆಲಸ.  &lt;br /&gt;&lt;br /&gt;    ನಂತರ ದೇವಸ್ಥಾನದ ಅಟ್ಟದಲ್ಲಿ ಜೋಪಾನವಾಗಿ ತೆಗೆದಿರಿಸಿದ್ದ ಕಾಮ ದೇವನ ಹಸ್ತ, ಪಾದ, ಶಿರದ  ಆಕೃತಿಗಳಿಗೆ ತಿಂಗಳ ಮೊದಲೇ ಧೂಳು ಹೊಡೆಸಿ, ಹೊಸ ಬಣ್ಣ ಹೊಡೆಸಿ, ಸಿಂಗರಿಸಿದ್ದ ಭಟ್ಟರು ಈ ಮೊದಲು ಹೇಳಿದ ಹಾಗೆ ತಯಾರಾದ ಬೊಂಬೆಗೆ ತೊಡಿಸಿ,  ಪ್ರತಿಷ್ಠಾಪಿಸಿ, ಮಂಗಳಾರತಿ ಎತ್ತಿ ನಮಗವನನ್ನು ಹಸ್ತಾಂತರಿಸಿದರೆಂದರೆ ಮುಂದೆ ನಮ್ಮ ಹಿಗ್ಗು ಭುಗಿಲೆದ್ದು ಕುಣಿಯುತಿತ್ತು. ಅವನ ನಿವೇದನೆಗೆಂದೇ ಹೊಸ ಹೊಸ ಬಯ್ಗಳು ಹುಟ್ಟುತ್ತಿದ್ದವು.  ಊರಿನ ಹಾದರದ ಸುದ್ದಿಗಳು ಪ್ರಚುರ ಪಡೆಯುತ್ತಿದ್ದುದೇ ಈ ಶುಭ ಸಂದರ್ಭದಲ್ಲಿ.  ಕದ್ದು ಮುಚ್ಚಿ ನಡೆಯುತ್ತಿದ್ದ ಪ್ರಣಯ ಪ್ರಸಂಗಗಳು ಊರ ಹೆಬ್ಬಾಗಿಲಿನ ಮುಂದಿನ ಗೋಡೆಯಲ್ಲಿ ಇದ್ದಲಿನಲ್ಲಿ ರಾರಾಜಿಸಿ, ಬೆಳಗಾಗುವುದರಲ್ಲಿ ಎಲ್ಲರ ನಾಲಿಗೆಗಳಲ್ಲಿ ನಲಿದಾಡಲು ತೊಡಗುತ್ತಿದ್ದವು. ವೈದ್ಯರ ನಾಮಫಲಕ ನಾಪಿತನಂಗಡಿಗೆ ಹೋಗಿ, ನಾಪಿತನ ನಾಮ ಫಲಕ ನ್ಯಾಯವಾದಿಯ ಬಾಗಿಲಿನಲ್ಲಿ ತೂಗಾಡಿ, ಕತ್ತೆಯ ಬಾಲಕ್ಕೆ ಕಟ್ಟಿದ್ದ ಪಟಾಕಿ ಸಿಡಿದು ಉಬ್ಬಸದ ಸುಬ್ಬಣ್ಣಯ್ಯ ನಮಗೆಲ್ಲ ಸಹಸ್ರನಾಮ ಶುರುಮಾಡುತ್ತಿದ್ದರು.  &lt;br /&gt;    &lt;br /&gt;    ವರಾಡಕ್ಕೆಂದು ಮನೆಯಂಗಳ ತುಳಿಯುವ ಮೊದಲೇ ಅವರವರ ಯೋಗ್ಯತಾನುಸಾರ ಮನೆಯ ಚಿಕ್ಕ ಮಕ್ಕಳ ಮೂಲಕ ತಮ್ಮ ದೇಣಿಗೆ ಕಳಿಸಿದ ಹಿರಿಯರು ಹೆಣ್ಣು ಮಕ್ಕಳನ್ನು ಮನೆಯಿಂದ ಹೊರಗೆ ಕಾಲಿಡದಂತೆ ಕಾಯುತ್ತಿದ್ದರು.  &lt;br /&gt;&lt;br /&gt;    ಕೆಲವು ರಸಿಕ ಶಿಖಾಮಣಿ ಮುದಿಗೊಡ್ದುಗಳು ತಮಗೆ ಗೊತ್ತಿದ್ದ ಕಾಮನ ಪದಗಳನ್ನು ನಮಗೆ ಕದ್ದು ಬರೆದು ಕೊಟ್ಟು ನಾವದನ್ನು ಹಾಡುವಾಗ ಕೇಳಿ ಖುಶಿಪಡುತ್ತ, ದೇಣಿಗೆಯ ಮೊತ್ತಕ್ಕೆ ತಮ್ಮ ಪಾಲೂ ಸೇರಿಸಿ ಧನ್ಯವಾಗುತ್ತಿದ್ದವು. ನಾವು ವರ್ಷವಿಡೀ ಬಾಯಿ ಮುಚ್ಚಿಕೊಂಡು ಮನದಲ್ಲೇ ಧ್ಯಾನಿಸಿದ ಪ್ರಸಂಗಗಳಿಗೆಲ್ಲ ಜೀವ ಬಂದು, ನಮ್ಮೊಳಗಿದ್ದ ಕವಿ ಮಹಾಶಯ ಹೊರಗೆ ಬರುತ್ತಿದ್ದ.  ಅದರಲ್ಲೂ ಆಷು ಕವಿತ್ವವಿದ್ದವರಿಗಂತೂ ಮಿಂಚಲು ಒಳ್ಳೆಯ ಅವಕಾಶ ಅದಾಗಿತ್ತು.ಹೀಗೆ ಪ್ರಸಂಗಗಳೆಲ್ಲ ಜೋಗದ ಜಲಪಾತದಂತೆ ಸುರಿದು ಬೀಳುತ್ತಿರುವಾಗ ಸಂನ್ಯಾಸಿಗಳಿಗೂ ಕೋಗಿಲೆಯ ಸ್ವರ ಕೇಳುತ್ತಿತ್ತು.&lt;br /&gt;&lt;br /&gt;    ಖರ್ಚಿಗೆ ಕಾಸು ಗಿಟ್ಟಿಸಿದ ನಂತರ ಕಾಮದಹನಕ್ಕೆ ಸೌದೆಯ ಉಸ್ತುವಾರಿ.  ತೊಟ್ಟಿಲಿನಿಂದ ಆಕಾಶ ಬುmಯವರೆಗೂ ಮನೆಗಳಿಂದ ಸಂಗ್ರಹಿಸಿದ ಬಿದಿರು ಸಾಮಾನುಗಳ ಜೊತೆಗೆ ಮನೆಗಿಷ್ಟೆಂದು ಎತ್ತಿ ತಂದ ಸೌದೆ, ಮರ, ಮುಟ್ಟು.  ಮನೆ ಮುಂದಿನ ಗೇಟಿಗೆಂದು ನಿಲ್ಲಿಸಿದ್ದ ಉಣುಗೋಲಿನಿಂದ ಹಿಡಿದು ಏಣಿ ಕಾಲು, ಚಪ್ಪರದ ಗೂಟ, ಹೂವು ಕೀಳುವ ಕೋಲು ಎಲ್ಲವೂ ಕಾಮನ ಚಪ್ಪರಕ್ಕೆ ಬಂದು ಬೀಳುತ್ತಿದ್ದವು. ಹೀಗೆ ಕದ್ದು ತಂದ ಸಾಮಾನುಗಳನ್ನು ಮನೆಗೊಯ್ಯಲು ಬಂದವರಿಗೆ ಬಯ್ಗಳದ ಸ್ವಾಗತ ಕಾದಿರುತ್ತಿದ್ದುದರಿಂದ ಊರ ಮನೆಗಳ ಹಿರಿಯರು ತಮ್ಮ ತಮ್ಮ ಮನೆಯ ಹಿತ್ತಲಿನಲ್ಲಿ ಬಿಡಾರ ಹೂಡಿಕೊಂಡು ನಾವ್ಯಾರೂ ಅವರ ವಸ್ತುಗಳನ್ನು ಕದಿಯದಂತೆ ತಡೆ ಒಡ್ಡುತ್ತಿದ್ದರು. ಮಧ್ಯರಾತ್ರಿ ಕಳೆದ ನಂತರ ಕಾಮನ ರಥ ಊರ ಸಂಚಾರಕ್ಕೆ ಹೊರಡುತಿತ್ತು.&lt;br /&gt;&lt;br /&gt;    ಎತ್ತು ಕಟ್ಟಿದ ಕಾಮ ರಥದ ಚಾಲಕ ಅಂದರೆ ಕಾಮ ಸಾರಥಿ ಯಾರಾಗುತ್ತಾರೋ ಅವರಿಗೆ ಆ ವರ್ಷ ಮದುವೆ ಆಗೇ ಆಗುತ್ತದೆಂಬ ನಂಬಿಕೆ ಬಲವಾಗಿ ಇದ್ದುದ್ದರಿಂದ ಮದುವೆಯ ವಯಸ್ಸು ಬಂದು ಇನ್ನೂ ಮದುವೆಗೆ ಮನೆಯಲ್ಲಿ ಯಾವ ಸೂಚನೆಗಳೂ ದೊರೆಯದ ಹುಡುಗರು ನಾ ಮೊದಲು ತಾ ಮೊದಲೆಂದು ಕಾಮ ಸಾರಥಿಯಾಗಲು ಮುಂದೆ ಬರುತ್ತಿದ್ದರಿಂದ ಆಯಾ ಮನೆಯವರು ಆ ವರ್ಷ ಆ ಹುಡುಗನ ಮದುವೆಯ ವಿಷಯ ತೆಗೆಯಲೇ ಬೇಕಾಗುತಿತ್ತು. ಎತ್ತು ಕಟ್ಟಿದ ಬಂಡಿಯನ್ನು ಊರಿನ ಬೀದಿ ಬೀದಿಗಳಲ್ಲಿ ಓಡಿಸಿಕೊಂಡು ಹೋಗುವಾಗ ಆ ಕಾಮ ಸಾರಥಿಗಳ ಮುಖದಲ್ಲಿರುತ್ತಿದ್ದ ಕಾತರ, ಏನನ್ನೋ ಕುರಿತ ಅವರ ಕುತೂಹಲ, ಮುಖದ ಮೇಲೆ ಮೂಡಿದ್ದ ನಾಚಿಕೆ, ಉದ್ವೇಗಗಳನ್ನು ಮೀಟಿ, ಹರೆಯದ ಸಂಗೀತವನ್ನು ಅನ್ಯರೂ ಕೇಳುವಂತೆ ಆಗುತ್ತಿತ್ತು.&lt;br /&gt;&lt;br /&gt;    ಒಂದು ಗುಂಪು ಹೀಗೆ ಕಾಮನ ಮೆರವಣಿಗೆಯಲ್ಲಿ ಸಾಗಿದ್ದರೆ ಮತ್ತೊಂದು ಗುಂಪು, ಹುಡುಗರನ್ನು, ಅವರ ಚೇಷ್ಟೆಗಳನ್ನು ಸುಮ್ಮ ಸುಮ್ಮನೇ ಗದರಿಸುತ್ತ, ತಮ್ಮ ಹಿರಿತನವನ್ನು ತೋರ್ಪಡಿಸುತ್ತಿದ್ದವರ ವಿರುದ್ಧ ತನ್ನ ಕಾರ್ಯಾಚರಣೆಯ ತಯಾರಿಯಲ್ಲಿರುತ್ತಿತ್ತು. ಆ ಮನೆಯವರೂ ಎಂಥ ಕಿಲಾಡಿಗಳೆಂದರೆ, ಅವರೇ ಸ್ವತಃ ಎದ್ದು ಕೂತು ಅವರ ಹಿತ್ತಲದ ಸಾಮನುಗಳ ನಿಗ ನೋಡುತ್ತಿದ್ದರು. ಆದರೆ ಕಾರ್ಯಾಚರಣೆಯ ಪಟ್ಟಿಯಂತೆ ಅವರ ಮನೆಯ ತೆಂಗಿನ ಮರದ ಎಲ್ಲ ಎಳನೀರು ಕಾಮೋತ್ಸವದ ಹುಡುಗರ ಬಾಯಾರಿಕೆ ತಣಿಸಬೇಕು. ಸರಿ, ಮುಂದಿನ ಉಪಾಯವೆಂದರೆ, ಬಂದ ಗುಂಪು ಎರಡಾಗಿ, ಮೊದಲ ಗುಂಪು ಆ ವ್ಯಕ್ತಿಯ ಜೊತೆ ಕ್ಷೇಮ ಸಮಾಚಾರ, ಲೋಕಾರೂಢಿಯ ಮಾತಿಗೆ ಇಳಿಯಿತು. ಸ್ವಭಾವತಃ ಮನುಷ್ಯರಾದವರೆಲ್ಲರೂ ಖುಷಿ ಕೊಡುವ ಸಂಗತಿಗಳಿಗೆ ಸ್ಪಂದಿಸುವ ರೀತಿಯಲ್ಲಿ ಆ ಹಿರಿಯರೂ ತಮ್ಮ ಕಾಲದ ಶೌರ್ಯ &lt;br /&gt;&lt;br /&gt;    ಸಾಹಸಗಳ ವರ್ಣನೆಗೆ ತೊಡಗಿದರೆ, ಈ ಹೊತ್ತಿಗಾಗಲೇ ಅವರ ತೆಂಗಿನ ಮರಕ್ಕೆ ಸೇದುವ ಹಗ್ಗದ ಸಮೇತ ಮರ ಹತ್ತುವವರು ಹತ್ತಿಯಾಗಿತ್ತು. ಮರದ ಮೇಲಿದ್ದವರು ಇಡಿ ಎಳನೀರಿನ ಕೊಂಬೆಯನ್ನೇ ಕತ್ತರಿಸಿ ಜೊತೆಗೊಯ್ದಿದ್ದ ಹಗ್ಗದ ಮೂಲಕ   ಇಳಿಬಿಟ್ಟರೆ,   ಆ ಕೊಂಬೆ   ಹಗ್ಗದ   ಮೇಲೆ   ಜಾರುತ್ತ ಬರುತಿತ್ತು. ಕೆಳಗಿದ್ದವರು ಅದನ್ನು ಜೋಪಾನವಾಗಿ ಹೊತ್ತೊಯ್ಯುತ್ತಿದ್ದರು. ಇತ್ತ ತಮ್ಮ ಸಾಹಸ ವಿವರಣೆಯಲ್ಲಿದ್ದ ಹಿರಿಯರಿಗೂ ಕೆತ್ತಿ ತಂದ ಎಳನೀರಿನ ಉಪಚಾರ ನಡೆದು, ಅವರು ಅದನ್ನು ಕುಡಿದು ರುಚಿ ಕಂಡ ಮೇಲಷ್ಟೇ  ನಮ್ಮೊಂದಿಗೆ ಜಗಳಕ್ಕಿಳಿಯುತ್ತಿದ್ದರು. ಸಾಹಸವೊಂದರ ಯಶಸ್ಸಿನಲ್ಲಿ ಬೀಗುತ್ತಿದ್ದ ನಮಗೆ ಅವರ ಬಯ್ಗಳು ಹೂ ಹಾರದ ಹಾಗೆ ಕಾಣುತ್ತಿದ್ದವು.&lt;br /&gt;&lt;br /&gt;    ಹುಣ್ಣಿಮೆಯ ಬೆಳ್ಳಂಬೆಳಗು ಬಾಯಿ ಬಡಿದು ಕೊಳ್ಳುತ್ತ ಆಕಾಶದೆತ್ತರಕ್ಕೆ ಉರಿ ಚಾಚುವ ಚಿತೆಗೆ ಕಾಮನ ಗೊಂಬೆಯನ್ನೆಸೆದು ಚಳಿಯಿಂದ ನಡುಗುತ್ತಿದ್ದ ಮೈ, ಮುಖಗಳಿಗೆ ಬೆಚ್ಚನೆಯ ಶಾಖವನ್ನು ಕೊಟ್ಟು ಕೊಳ್ಳುತ್ತ  ಮುಂದಿನ ಕಾಮದಹನದವರೆಗೂ ವಟಗುಟ್ಟುವ ಬಾಯಿ, ಕದಿಯುವ ಕೈ, ಮತ್ತು ಬಂಡಾಯವೇಳುವ ಮನಸ್ಸಿನ ಹತೋಟಿ ಹೇಗೆ ಸಾಧ್ಯವೆಂದು ತಲೆತುರಿಸಿಕೊಳ್ಳುತ್ತ ಮನೆಗೆ ಹೋದರೆ ಅಮ್ಮ ತಲೆ ತುಂಬ ಹರಳೆಣ್ಣೆ ತಟ್ಟಿ ಅಭ್ಯಂಜನ ಮಾಡಿಸಿ, ಬೆಚ್ಚಗೆ ಹೊದಿಸಿ ಮಲಗಿಸುತ್ತಿದ್ದಳು. ನಿದ್ದೆಯಿಂದೆದ್ದು ಕಣ್ಣು ತೆರೆದರೆ ಹೊಯ್ಕೊಂಡ ಬಾಯಿಗೆ ಹೋಳಿಗೆ ತುಪ್ಪ ಬಡಿಸಿ ಆಗಷ್ಟೆ ಮೂಡುತ್ತಿದ್ದ ನಮ್ಮ ಮೀಸೆ ಮೊನೆಯನ್ನು ಅಪ್ಯಾಯವಾಗಿ ನೋಡುತ್ತ ಸಂಭ್ರಮಿಸುತ್ತಿದ್ದುದನ್ನು ಯಾವ ಶಾಲೆಯ ಯಾವ ಸಿಲೆಬಸ್ಸೂ  ಒಳಗೊಳ್ಳುವ ಸಾಧ್ಯತೆ ಇಲ್ಲದಿರುವುದರಿಂದಲೇ ಈ ಕಾಲದ ಹುಡುಗರು ಹುಣ್ಣಿಮೆಯ ಬೆಳಕಿಗಿರುವ ಏನೆಲ್ಲ ಅಂತರಾರ್ಥಗಳನ್ನು ಗ್ರಹಿಸಲು ಸೋಲುತ್ತಿದ್ದಾರೆಯೆ ಎನ್ನುವ ಪ್ರಶ್ನೆ ಮೂಡಿಸಿಕೊಳ್ಳುತ್ತ ಚಂದ್ರಮ ಹರಿಸುವ ಚಂದ್ರಿಕೆಯಲ್ಲಿ ಕರಗುವ ಚಂದ್ರಕಾಂತ ಶಿಲೆಗಳು ನಮ್ಮ ಹೊಸ ಪೀಳಿಗೆಯ ಹುಡುಗರೆದೆಗೂ ಒಂದಿಷ್ಟು ಕನಸುಗಳನ್ನು ಬಿತ್ತಲಿ ಎಂದು ಹಾರೈಸೋಣ, ಅಲ್ಲವೇ?&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/5254102750204147054-107308315685017916?l=bemkikaddi.blogspot.com' alt='' /&gt;&lt;/div&gt;</content><link rel='replies' type='application/atom+xml' href='http://bemkikaddi.blogspot.com/feeds/107308315685017916/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://www.blogger.com/comment.g?blogID=5254102750204147054&amp;postID=107308315685017916' title='0 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/5254102750204147054/posts/default/107308315685017916'/><link rel='self' type='application/atom+xml' href='http://www.blogger.com/feeds/5254102750204147054/posts/default/107308315685017916'/><link rel='alternate' type='text/html' href='http://bemkikaddi.blogspot.com/2009/03/blog-post_11.html' title='ಚಂದಿರನೇತಕೆ ಓಡುವನಮ್ಮ?'/><author><name>ಬೆಂಕಿಕಡ್ಡಿ</name><uri>http://www.blogger.com/profile/13181705369161334860</uri><email>noreply@blogger.com</email><gd:image rel='http://schemas.google.com/g/2005#thumbnail' width='21' height='32' src='http://4.bp.blogspot.com/_bUAIZF0Yo1g/TKdTK-6rv2I/AAAAAAAAAJY/QXUJAVKh9ps/S220/dsr4.jpg'/></author><thr:total>0</thr:total></entry><entry><id>tag:blogger.com,1999:blog-5254102750204147054.post-2469905451638190397</id><published>2009-03-09T23:07:00.004+05:30</published><updated>2009-03-09T23:16:44.328+05:30</updated><title type='text'>ಒಗೆತ</title><content type='html'>ನೀರೊಳಗೆ ಕೈ ಕಾಲು ಬಡಿಯುತ್ತ ಈಜುವ ಹಾಗಲ್ಲ-&lt;br /&gt;ಅಂಗಾಂಗ ಕದಲಿಸದೇ ಹಾಗೇ ತೇಲುವ ಸುಖ&lt;br /&gt;ಹರಿವ ನೀರಿನ ಶಬ್ದ, ಚರ್ಮಕ್ಕೆ ಕಚಗುಳಿಯಿಡುವ ಹರಿವು&lt;br /&gt;ಮೀಯುತ್ತಲೇ ಮಾಯೆಯರಿಯುವ ತಂತ್ರ;&lt;br /&gt;&lt;br /&gt;ಸಿದ್ಧಿಸದೇ ಒದ್ದೆ ಮೈಯಲ್ಲಿ ಬಟ್ಟೆ ತೊಳೆಯುವ ಹಾಗಲ್ಲ-&lt;br /&gt;ಪ್ರತಿ ಒಗೆತಕ್ಕೂ ಬಣ್ಣ ಮಾಸಲಾಗುವ ಅರಿವೆ&lt;br /&gt;ಕೊಳೆ ಕಲ್ಲಿಗೂ ಅಂಟಿ ನೀರು ಮಲಿನವಾಗುವ ಸತ್ಯ&lt;br /&gt;ಬಗೆ ಬಗೆಯ ಬಟ್ಟೆಗಳಿಗೂ ಮತ್ತದೇ ಸೋಪ ಬುರುಜು;&lt;br /&gt;&lt;br /&gt;ಜಾಲಿಸಿ, ಹಿಂಡಿ, ಬಂಡೆಯ ಮೇಲೆಲ್ಲ ಹರಡಿದಂತಲ್ಲ-&lt;br /&gt;ಸಣ್ಣ ಗಾಳಿಗೇ ಹಾರಿ ಮತ್ತೆ ಕೊಚ್ಚೆಗೆ ಬೀಳುವ ಆಟ&lt;br /&gt;ನೀಗುವುದಕ್ಕೆ ಬಟ್ಟೆಯ ಮೇಲೊಂದು ಪುಟ್ಟ ಕಲ್ಲಿನ ಭಾರ&lt;br /&gt;ಹಿಮ್ಮಡಿ ಉಜ್ಜಿ ತೊಳೆದೇಳುವಷ್ಟರಲ್ಲಿ ಒಣಗಿ ಗಾರಾದ ಬಟ್ಟೆ;&lt;br /&gt;&lt;br /&gt;ಕೊಳೆ ತೆಗೆದು ಮಡಿ ಮಾಡಿ ಮಾಟವಾಗಿ ಮಡಿಚಿಟ್ಟಂತಲ್ಲ-&lt;br /&gt;ನದಿಯ ದಡದುದ್ದಕ್ಕೂ ಏಗಿ ಆಟ ಕಟ್ಟುವ ಸದ್ದು&lt;br /&gt;ಹೊಳೆಗೇ ಹುಚ್ಚು ಹಿಡಿಸುವಂತೆ ಜಡಿದು ಸುರಿವ ಮಳೆಯೊಮ್ಮೆ&lt;br /&gt;ತೇವವಷ್ಟನ್ನೂ ತಾನೇ ಕುಡಿದು ಢರ್ರನೆ ತೇಗುವ ಕ್ಷಾಮ ಮತ್ತೊಮ್ಮೆ;&lt;br /&gt;&lt;br /&gt;ಮಿಂದು, ಮಡಿಯುಟ್ಟು, ಮಾದರಿಯಾಗುವುದುಂಟಲ್ಲ-&lt;br /&gt;ಅದೆಂದರೆ ಹೊಳೆ ಮಧ್ಯದ ಬಂಡೆ ಸವೆತದ ಹಾಗೆ&lt;br /&gt;ಬಟ್ಟೆ, ಬಟ್ಟೆ ತೊಳೆದವರು, ಈಜಿ ಸುಸ್ತಾಗಿ ವಿಶ್ರಮಿಸಿದವರು&lt;br /&gt;ಬಂಡೆಯ ನುಣುಪಿಗೆ ಕಾರಣ ಧ್ಯಾನಿಸಿದವರು ಯಾರು, ಯಾರು?&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/5254102750204147054-2469905451638190397?l=bemkikaddi.blogspot.com' alt='' /&gt;&lt;/div&gt;</content><link rel='replies' type='application/atom+xml' href='http://bemkikaddi.blogspot.com/feeds/2469905451638190397/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://www.blogger.com/comment.g?blogID=5254102750204147054&amp;postID=2469905451638190397' title='0 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/5254102750204147054/posts/default/2469905451638190397'/><link rel='self' type='application/atom+xml' href='http://www.blogger.com/feeds/5254102750204147054/posts/default/2469905451638190397'/><link rel='alternate' type='text/html' href='http://bemkikaddi.blogspot.com/2009/03/blog-post.html' title='ಒಗೆತ'/><author><name>ಬೆಂಕಿಕಡ್ಡಿ</name><uri>http://www.blogger.com/profile/13181705369161334860</uri><email>noreply@blogger.com</email><gd:image rel='http://schemas.google.com/g/2005#thumbnail' width='21' height='32' src='http://4.bp.blogspot.com/_bUAIZF0Yo1g/TKdTK-6rv2I/AAAAAAAAAJY/QXUJAVKh9ps/S220/dsr4.jpg'/></author><thr:total>0</thr:total></entry><entry><id>tag:blogger.com,1999:blog-5254102750204147054.post-6877579482337040749</id><published>2009-02-08T15:08:00.001+05:30</published><updated>2009-02-08T15:11:14.164+05:30</updated><title type='text'>ದುರ್ಗದ ಕವಿಗೋಷ್ಠಿ ಕೇಳಿ ಬಂದ ಮೇಲೆ.....</title><content type='html'>ಸಾಹಿತ್ಯದ ಹೆಸರಲ್ಲಿ ನಡೆಯುತ್ತಿರುವ ಜನಜಾತ್ರೆ ಚಿತ್ರದುರ್ಗದಲ್ಲಿ ಸಂಪನ್ನವಾಗಿದೆ. ಗೋಷ್ಠಿಗಳಲ್ಲಿ ಮಂಡಿಸಿದ ಪ್ರಬಂಧಗಳ ಮೇಲಣ ಚರ್ಚೆಗಳಿಗಿಂತಲೂ ಈ ಸಮ್ಮೇಳನ ವಿವಾದಗಳಿಂದ ಆರಂಭವಾಗಿ ವಿವಾದಗಳಲ್ಲೇ ಅಂತ್ಯ ಕಂಡಿದೆ. ಇಷ್ಟೂ ದಿನ ಮುದ್ರಿತ ವಿಚಾರಗಳನ್ನು ಹಲ್ಲುಬಿದ್ದ ಬಾಯಲ್ಲಿ ಅಸ್ಪಷ್ಟವಾಗಿ ಓದುತ್ತಿದ್ದ ಅಧ್ಯಕ್ಷೀಯ ಭಾಷಣದ ರೀತಿ ಬದಲಾಗಿ ಮಠ ಮಾನ್ಯಗಳನ್ನು., ವ್ಯವಸ್ಥೆಯನ್ನೂ ಛೀಕರಿಸುವ ಮೂಲಕ ಮಿಂಚಬಹುದೆನ್ನುವ ಮತ್ತು ಚಪ್ಪಾಳೆ ಗಿಟ್ಟಿಸಬಹುದೆನ್ನುವ ಅಪ್ಪಟ ಸತ್ಯ ಮತ್ತೆ ವಿಜೃಂಭಿಸಿದೆ. ಉಧ್ಘಾಟನೆಯ ನಂತರ ಮಾತ್ಯಾವುದೇ ಗೋಷ್ಠಿಗಳಲ್ಲೂ ಕಾಣಿಸಿಕೊಳ್ಳದ ಸಮ್ಮೇಳನಾಧ್ಯಕ್ಷರು ಮುಕ್ತ ಸಂವಾದದಲ್ಲಿ ಪಾಲ್ಗೊಂಡು ಮತ್ತೆ ವಿಜೃಂಭಿಸಿದ್ದಾರೆ. ಅಪರೂಪಕ್ಕೆಂಬಂತೆ ಮಾರುದ್ದದ ನಿರ್ಣಯಗಳ ಪಟ್ಟಿ ಬದಲಾಗಿ ಮೂರೇ ಮೂರು ನಿರ್ಣಯಗಳು ಸಮ್ಮೇಳನದ ಅಂಗಳದಿಂದ ಬಿಂಬಿಸಲ್ಪಟ್ಟಿವೆ. &lt;br /&gt;&lt;br /&gt;ಅವ್ಯವಸ್ಥೆಯ ಆಗರವೆಂದು ನಮ್ಮ ಮಾಧ್ಯಮಗಳು ಈ ಸಮ್ಮೇಳನಕ್ಕೆ ಹಣಿಪಟ್ಟಿ ಕಟ್ಟಿದ್ದರೂ, ಈ ಹಿಂದಿನ ಸಮ್ಮೇಳನಗಲ್ಲೂ ಒಂದೆರಡು ದಿನಗಳ ಮಟ್ಟಿಗಾದರೂ  ಭಾಗವಹಿಸುತ್ತಲೇ ಇರುವ ನನಗೆ ಅದೇನೂ ವಿಶೇಷ ಎನ್ನಿಸಲೇ ಇಲ್ಲ. ಈ ಹಿಂದೆ ತುಮಕೂರಿನ ಸಮ್ಮೇಳನದಲ್ಲಿ ಊಟ ತಿಂಡಿಗಳ ಸರತಿಯಲ್ಲೇ ನಿಂತು ನಿಂತು ಸಮ್ಮೇಳನ ಅವಧಿ ಪೂರೈಸಿದ ಸ್ನೇಹಿತರ ಅನುಭವ ನೆನಪಾಯಿತು. ಶಿವಮೊಗ್ಗದಲ್ಲೂ ಧೂಳಿನ ಜೊತೆಗೇ ವಿವಾದಗಳೂ ಕಣ್ಣಿಗೆ ಬಿದ್ದುದು ಮರೆತು ಹೋಗಿಲ್ಲ. ಕನಕಪುರದಲ್ಲಿ ಸಮ್ಮೇಳನದ ಅಂಗಳದ ತುಂಬ ಭೈರಪ್ಪ ಪರ-ವಿರೋಧದ ಮಾತುಗಳು ಕೈಕೈ ಮಿಲಾಯಿಸುವ ಮಟ್ಟಕ್ಕೆ ಮುಟ್ಟಿದ್ದೂ ನೆನಪ ನೆಲೆಯಿಂದ ದೂರವಾಗಿಲ್ಲ. ಹಾಗೇ ತಾವು ಭಾಗವಹಿಸ ಬೇಕಿರುವ ಗೋಷ್ಠಿಯ ಸಮಯಕ್ಕೆ ಆಗಮಿಸಿ ನಂತರ ಅಂತರ್ಧಾನವಾಗುವ ನಮ್ಮ ಹಿರಿಯ ಬರಹಗಾರ, ಲೇಖಕ, ಚಿಂತಕರ ಆಂತರ್ಯವೂ ಬದಲಾಗಿಲ್ಲ.  ಕರೆಯದೇ ಬರಲು ಅವರೇನು ಗತಿಗೆಟ್ಟಿದ್ದಾರಾ ಅಂದರೆ ಪಾಪ ಪ್ರತಿ ಸಮ್ಮೇಳನದಲ್ಲೂ ಒ ಒ ಡಿ ಯ ಆಸೆಯಿಂದ ಬಂದು ಬೀದಿಗಳಲ್ಲೇ ಮಲಗಿ, ಹೊತ್ತು ಹೊತ್ತಿಗೆ ಊಟ ತಿಂಡಿಗಳಿಲ್ಲದೇ ಪರಿತಪಿಸಿಯೂ ಮತ್ತೆ ಮುಂದಿನ ಸಮ್ಮೇಳನ ಯಾವ ಊರಲ್ಲಿ ನಡೆಯುತ್ತೆ, ಅಲ್ಲಾದರೂ ಈ ನಾಯಿ ಪಾಡು ತಪ್ಪಲಿ ಎಂದು ಅಂದುಕೊಳ್ಳುತ್ತಲೇ ಬಸ್ಸು ಹತ್ತುವ ಲಕ್ಷಾಂತರ ಸಾಹಿತ್ಯಾಸಕ್ತ ಬಂಧುಗಳ ಅಲವತ್ತುಗಳನ್ನು ದಾಖಲಿಸಿದವರಾದರೂ ಯಾರು? ಚಿತ್ರದುರ್ಗದಿಂದ ವಾಪಸು ಬಂದು ಎರಡು ದಿನವಾದರೂ ಭವ್ಯ ವೇದಿಕೆ ಮತ್ತು ಪುಸ್ತಕದಂಗಡಿಗಳ ಸಾಲು ಮತ್ತೆ ಮತ್ತೆ ನೆನಪ ಜೇನನ್ನು ಮನಸ್ಸಿಗೆ ಉಣ್ಣಿಸುತ್ತಲೇ ಇವೆ. &lt;br /&gt;&lt;br /&gt;ಹಾಗೆ ನೋಡಿದರೆ ನಮ್ಮ ಮಾಧ್ಯಮಗಳು ಬಿಂಬಿಸದಷ್ಟೇನೂ ವ್ಯವಸ್ಥೆ ಕೆಟ್ಟಿರಲಿಲ್ಲ. ಎಲ್ಲ ಸಮ್ಮೇಳನಗಳಲ್ಲೂ ನಡೆಯುವ ಹಾಗೇ ಈ ಸಮ್ಮೇಳನದಲ್ಲೂ  ಯಾವ ಗೋಷ್ಠಿಗಳೂ ಸರಿಯಾದ ಸಮಯಕ್ಕೆ ಪ್ರಾರಂಭವಾಗಲಿಲ್ಲ. ಹಾಗಾಗಿ ಹೊತ್ತಿಗೆ ಸರಿಯಾಗಿ ಮುಗಿಯಲಿಲ್ಲ. ಅದರ ಕಾರಣದಿಂದ ಮುಂದಿನ ಗೋಷ್ಠಿಗಳೂ ಮುಂದು ಮುಂದಕ್ಕೆ ಹೋದವು, ಅಷ್ಟೆ! ಎಲ್ಲ ಕಡೆ ನಡೆಯುವ ಹಾಗೇ  ಇಲ್ಲೂ ಸಾಹಿತ್ಯಕ್ಕಿಂತಲೂ ಸಾಹಿತ್ಯೇತರ ಸಂಗತಿಗಳಾದ ಕೃಷಿ, ಕೈಗಾರಿಕೆ, ರಾಜಕೀಯ, ಇತ್ಯಾದಿ ವಿಷಯಗಳಲ್ಲಿ ಚರ್ಚೆ-ಗೋಷ್ಠಿಗಳು ಎಡವುತ್ತೆಡುವತ್ತಲೇ ನಡೆದುವು. ಎಲ್ಲೆಲ್ಲಿ ರಾಜಕೀಯದವರನ್ನೂ, ಖಾಕಿಕಾವಿಗಳನ್ನೂ ಮನಬಂದಂತೆ ಹಳಿಯಲಾಯಿತೋ ಅಲ್ಲೆಲ್ಲ ಚಪ್ಪಾಳೆಗಳು ಮುಗಿಲು ಮುಟ್ಟಿದವು. ಆದರೆ ಊಟದ ವ್ಯವಸ್ಥೆಯಲ್ಲಿ, ಅಸ್ತವ್ಯಸ್ಥತೆಯನ್ನು ತಡೆಯುವುದರಲ್ಲಿ,  ಇದೇ ಖಾಕಿ ಕಾವಿಗಳು ಹೆಣಗುತ್ತಿದ್ದುದನ್ನು ಅಪ್ಪಿತಪ್ಪಿ ಬಾಯಿ ಮಾತಿಗಾದರೂ ಹೇಳಲೇ ಇಲ್ಲ. ಇನ್ನು ಗೋಷ್ಠಿಗಳೋ ಅವುಗಳ ಸ್ವರೂಪಗಳೋ ಕಳೆದ ಎಪ್ಪತ್ತನಾಲ್ಕು ಸಮ್ಮೇಳನಗಳಲ್ಲಿ ನಡೆದುದರ  ಪುನರಾವರ್ತನೆಯೇ! ಗೋಷ್ಠಿಗಳಲ್ಲಿ ಭಾಗವಹಿಸದವರಲ್ಲಿ ಬಹುತೇಕರು ಆಯಾ ಕ್ಷೇತ್ರಗಳಲ್ಲಿ ಪರಿಣತಿ ಹೊಂದಿದವರಿದ್ದರೂ ಆಯ್ಕೆಯಲ್ಲಿ ಅನಿವಾರ್ಯ ಒತ್ತಡಗಳು ಇದ್ದೇ ಇರುತ್ತವೆ ಎನುವುದಕ್ಕೆ ಪುರಾವೆಯಾದುವು. ಸ್ವತಃ ಸಮ್ಮೇಳನಾಧ್ಯಕ್ಷರೇ ಅದರಿಂದ ಹೊರಗುಳಿದು ಹೊಸ ಭಾಷ್ಯ ಬರೆದ ವಿಶೇಷಕ್ಕೂ ಈ ಸಮ್ಮೇಳನವೇ ಮುನ್ನುಡಿ ಬರೆದುದೂ ಸ್ವಾರಸ್ಯ ದ ಸಂಗತಿ. &lt;br /&gt;&lt;br /&gt;ಹಲವರಂತೆ ನಾನೂ ಸಮ್ಮೇಳನಗಳಲ್ಲಿ ಭಾಗವಹಿಸುವುದು ರಾಜ್ಯಾದ್ಯಂತ ಇರುವ ನನ್ನ ಅನೇಕ ಸ್ನೇಹಿತರೂ ಹಿರಿಯ ಬರಹಗಾರರೂ ಅಲ್ಲಿನ ಪುಸ್ತಕದಂಗಡಿಗಳಲ್ಲಿ ಸಿಕ್ಕೇ ಸಿಕ್ಕುತ್ತಾರೆನ್ನುವ ವಿಶ್ವಾಸದಿಂದ. ಮತ್ತು ಹಾಗೆ ಸಿಕ್ಕವರೊಡನೆ ನನ್ನ ಅನ್ನಿಸಿಕೆಗಳನ್ನೂ ಹಾಗೇ ಅನುಮಾನಗಳನ್ನೂ ಹಂಚಿಕೊಳ್ಳುವ ಮುಕ್ತ ಅವಕಾಶದ ಆಸೆಯಿಂದ. ಜೊತೆಗೇ ನನ್ನ ಸಹಬರಹಗಾರರ ತವಕ ತಲ್ಲಣಗಳನ್ನು ಮತ್ತವರ ಕಷ್ಠ ಸುಖಗಳನ್ನು ಮುಖತಾ ಹಂಚಿಕೊಳ್ಳಬಹುದೆನ್ನುವ ದುರಾಸೆಯಿಂದ! &lt;br /&gt;&lt;br /&gt;ಆದರೆ ಈ ಸಮ್ಮೇಳನದಲ್ಲಿ ಹಿರಿಯ ಬರಹಗಾರರಿರಲಿ ಚಿತ್ರದುರ್ಗ ಸೀಮೆಯ ಅನೇಕ ಯುವ ಬರಹಗಾರರಾರೂ ಸಿಕ್ಕಲಿಲ್ಲ. ಸ್ವತಃ ಆ ಜಿಲ್ಲೆಯವರಾಗಿದ್ದೂ ಈಗಾಗಲೇ ತಮ್ಮ ಸಂಕಲನಗಳಿಂದ ಸಂಚಲನಗೊಳಿಸಿದ ಎಚ್.ಆರ್.ರಮೇಶ, ಆನಂದ ಋಗ್ವೇದಿ, ತಾರಿಣಿ, ಪಕ್ಕದ ಜಿಲ್ಲೆಯ ಅರುಣ ಜೋಳದಕೂಡ್ಲಿಗಿ, ಪೀರ ಭಾಷಾ, ಇವರಾರೂ ಕವಿಗೋಷ್ಠಿಯಲ್ಲಿ ಅಹ್ವಾನಿತರಾಗಿರಲೇ ಇಲ್ಲ. ಅಹ್ವಾನಿತ ಕವಿಗಳ ಪಟ್ಟಿ ಸಾಕಷ್ಟು ದೊಡ್ಡದಿದ್ದರೂ ಅಷ್ಟಿಷ್ಟು ಓದಿಕೊಂಡಿರುವ ಮತ್ತು ವರ್ತಮಾನದಲ್ಲಿ ಸಾಹಿತ್ಯ ಕೃಷಿ ಮಾಡುತ್ತಿರುವವರ ಹೆಸರುಗಳನ್ನು ಬಲ್ಲೆನೆಂಬ ನನ್ನ ವಿಶ್ವಾಸವನ್ನು ಆ ಪಟ್ಟಿ ಅಣಕಿಸಿತು. ನಾಲ್ಕೈದು ಹೆಸರುಗಳನ್ನು ಪತ್ರಿಕೆಗಳಲ್ಲಿ ಪ್ರಕಟವಾಗುವ ಕವಿತೆಗಳ ಮೂಲಕ ಗುರುತಿಸಿ ಹೊರತು ಪಡಿಸ ಬಹುದೇ ವಿನಾ ಉಳಿದವರೂ ಕವಿಗಳೆಂದು ಗೊತ್ತ್ತಾಗಿದ್ದೇ ನಿರೂಪಕರು ಅವರ ಕೃತಿಗಳನ್ನು ಹೆಸರಿಸಿದ ನಂತರ. &lt;br /&gt;&lt;br /&gt;ಮೊದಲ ಕವಿಗೋಷ್ಠಿಯ ಆಶಯ ಭಾಷಣಮಾಡಿದ  ಎಲ್.ಹನುಮಂತಯ್ಯನವರು ತಾವು ನೆಚ್ಚಿದ ಬಂಡಾಯದ ನೆಲೆಯನ್ನು ಮತ್ತೆ ಪ್ರಸ್ತಾಪಿಸುತ್ತಲೇ ಪದ್ಯವೊಂದನ್ನು ಓದಿದ ರೀತಿ ಪುಳಕಗೊಳಿಸಿತು. ಹನುಮಂತಯ್ಯ ಈಗಾಗಲೇ ಇಂಥ ಹತ್ತು ಹಲವು ಗೋಷ್ಠಿಗಳಲ್ಲಿ ಭಾಗವಹಿಸಿ ಇದೇ ಬಗೆಯ ಹತ್ತಿಪ್ಪತ್ತು ಭಾಷಣಗಳನ್ನು ನಮಗೆಲ್ಲ ಉಣಬಡಿಸಿದವರು. ಹಾಗೇ ಅಧ್ಯಕ್ಷತೆ ವಹಿಸಿದ್ದ ಸುಮತೀಂದ್ರ  ನಾಡಿಗರಂತೂ ಅವರ ಪದ್ಯಗಳಿಗಿಂತಲೂ ಮಾತಿಗೆ ನಿಂತರೆ ಮುಗಿಸದ ಖ್ಯಾತಿಯವರು. ತಮ್ಮ ಹಳೆಯ ಎರಡು ಪದ್ಯಗಳನ್ನು ಅವರು ಆಕರ್ಷಕವಾಗಿ ಮಂಡಿಸಿದರಾದರೂ ಅವರು ಅಧ್ಯಕ್ಷೀಯ ಭಾಷಣವನ್ನು ಮಾಡಲಿಲ್ಲವೆನ್ನುವುದು ನನ್ನ ತಕರಾರು. ಕವಿಗೋಷ್ಠಿಯ ಅಧ್ಯಕ್ಷರು ಆ ಗೋಷ್ಠಿಯಲ್ಲಿ ಮಂಡಿಸಿದ ಕವಿತೆಗಳನ್ನು ಅವುಗಳ ವಿಷೇಷತೆಯನ್ನೂ ಹಾಗೇ ಕಾವ್ಯ ಹೊರಳಿದ ಹೊಸದಿಕ್ಕನ್ನೂ ಗುರ್ತಿಸಿ ಹೇಳಬೇಕಾದ ಜವಾಬ್ದಾರಿ ಇರುವಂಥವರು. ಅದರೆ ನಮ್ಮ ಮಾಧ್ಯಮಗಳು ಕಾಯುತ್ತಿರುತ್ತವೆ ಮತ್ತು ಗೋಷ್ಠಿಯ ಕಡೆಯವರೆಗೂ ಕೂರುವ ತಾಳ್ಮೆ ಕೆಲವರಿಗಿರುವುದಿಲ್ಲವೆಂಬ ನೆಪಒಡ್ಡಿ ಆಹ್ವಾನಿತ ಕವಿಗಳು ತಮ್ಮ ಪದ್ಯಗಳನ್ನು ಪ್ರಸ್ತುತಿಗೊಳಿಸುವ ಮೊದಲೇ ಅಧ್ಯಕ್ಷೀಯ ಮಾತುಗಳನ್ನು ಮುಗಿಸಿಬಿಡುವುದು ವರ್ತಮಾನದ ಕಾವ್ಯಕೃಷಿಕರಿಗೆ ತೋರಿಸುತ್ತಿರುವ ಅನಾದರವೆಂದೇ ನಾನು ಭಾವಿಸಿದ್ದೇನೆ. ಹಾಗೆಯೇ ಕಾವ್ಯಾಸಕ್ತರಾರಿಗೂ ಗೊತ್ತಿರದ ಮತ್ತು ಕೇವಲ ಪ್ರಾತಿನಿಧ್ಯದ ದೃಷ್ಟಿಯಿಂದಲೇ ತಯಾರಿಸುವ ಈ ಕವಿಪಟ್ಟಿಗೂ ನನ್ನ ಪರಮ ವಿರೋಧವನ್ನು ದಾಖಲಿಸುತ್ತಲೇ ಬಂದಿದ್ದೇನೆ. ಈ ಸಮ್ಮೇಳನದಲ್ಲೂ ನಿಜವಾದ ಕವಿತೆಗಳನ್ನು ಓದಿದವರು ಲಕ್ಷೀಪತಿ ಕೋಲಾರ, ಕಂಜರ್ಪಣೆ, ಬ.ಹ.ರಮಾಕುಮಾರಿ, ಬಿಳಿಗೆರೆ ಮತ್ತು ಹೆಸರು  ನೆನಪಲ್ಲಿ ಉಳಿಯದ ಇನ್ನಿಬ್ಬರು ಮಾತ್ರ. ಗೆಳೆಯ ನಿಸಾರ್ ತನ್ನ ಕವಿತೆಯನ್ನು ಆಕರ್ಷಕವಾಗಿ ಮಂಡಿಸಿದನಾದರೂ ಆ ಬಗೆಯ ಕವಿತೆಗಳು ಕೇವಲ ಹೇಳಿಕೆಗಳಾಗುತ್ತವೆ ಮತ್ತು ಯಾರೂ ಬರೆಯಬಹುದಾದ ಸಾಲುಗಳಾಗುತ್ತವೆ ಎನ್ನುವುದನ್ನು ಮರೆಯಬಾರದು. ಕೆಲವು ಕವಿಗೋಷ್ಠಿಗಳಲ್ಲಿ ಖಾಲಿ ಕುರ್ಚಿಗಳಿಗೆ ಪದ್ಯ ಓದುವ ಅನಿವಾರ್ಯತೆಗಾಗಿ ಸಂಕಟ ಪಟ್ಟಿರುವ ನಾನು ದುರ್ಗದ ಕವಿಗೋಷ್ಠಿಯಲ್ಲಿ  ಇಡೀ ಸಭಾಂಗಣ ಕಿಕ್ಕಿರಿದು ತುಂಬಿದ್ದ ಅಪ್ರತಿಮ ಕ್ಷಣಗಳಿಗೆ ಸಂತಸ ಪಟ್ಟಿದ್ದೇನೆ. ಹಾಗೆಯೇ ತುಂಬಿದ ಸಭೆಗೆ ಕಿಂಚಿತ್ತೂ ಸಾಥ್ ಕೊಡದ ಕವಿಗಣದ ಉಢಾಫೆಗೆ ಮರುಕ ಪಟ್ಟಿದ್ದೇನೆ. &lt;br /&gt;&lt;br /&gt;ಕವಿಗೋಷ್ಠಿ ನಡೆಯುತ್ತಿರುವಾಗಲೇ ಅದಕ್ಕೆ ಜಯಂತ ಕಾಯ್ಕಿಣಿಯ ಸಾರಥ್ಯ ಸಿಕ್ಕು, ಸಂಧ್ಯಾದೇವಿ ಉದ್ಘಾಟಿಸಿ ಕವಿಪಟ್ಟಿಯಲ್ಲಿ ಎಸ್.ಮಂಜುನಾಥ್, ಪ್ರತಿಭಾ ಒಳಗೊಂಡಂತೆ ನಮ್ಮ ತಲೆಮಾರಿನ ಹತ್ತು ಹಲವು ಹೆಸರುಗಳನ್ನು ಕಲ್ಪಿಸಿಕೊಳ್ಳುತ್ತ ಹೋದೆ. ಆ ಕಲ್ಪನೆಯೇ ಒಂದು ಕವಿತೆಯಾಗಿ ಸಂತಸ ಮೈತುಂಬಿಕೊಳ್ಳುತ್ತಿರುವಾಗಲೇ ದುರ್ಗದ ರೈಲ್ವೇ ನಿಲ್ದಾಣವನ್ನು ಹೊತ್ತಿಗೆ ಸರಿಯಾಗಿ ಸೇರದಿದ್ದರೆ ಓಓಡಿ ಸೌಲಭ್ಯವಿಲ್ಲದ  ನಾನು ಮಾರನೇ ದಿನಕ್ಕೂ ರಜೆ ಕೊಡಬೇಕಾಗುತ್ತದೆನ್ನುವ  ನಿಜವಾಸ್ತವ ನೆನಪಾಗಿ ಸಮ್ಮೇಳನದ ಅಂಗಳದಿಂದ ನಿರ್ಗಮಿಸಿದೆ. &lt;br /&gt;&lt;br /&gt;ಊರು ತಲುಪವವರೆಗೂ ಕಂಜರ್ಪಣೆಯವರೊಂದಿಗೆ ಕೆ.ಪಿ.ಸುರೇಶರ ಹೊಸ ಸಂಕಲನದ ಪದ್ಯಗಳನ್ನು , ವಸುದೇಂಧ್ರ ತಮ್ಮ ಅಂಗಡಿಯಲ್ಲಿ ಪುಸ್ತಕ ಮಾರುತ್ತಿದ್ದ ರೀತಿಯನ್ನು ಹಾಗೇ ಸಂಚಯದ ಸ್ಟಾಲಿನಲ್ಲಿ ಕನಸು ಕಂಡಿದ್ದ ಕವಿಗೋಷ್ಠಿ ಖದರು ಕಳೆದುಕೊಂಡುದನ್ನೂ ಮೆಲ್ಲುತ್ತ ಪ್ರಯಾಣಿಸಿದೆ. ಈಗ ನನ್ನೆದುರು ನಮ್ಮ  ಪತ್ರಿಕೆಗಳು ಪ್ರಕಟಿಸಿದ ನಾಲ್ಕೂ ದಿನದ ಸಮ್ಮೇಳನದ ವಿವರಗಳನ್ನು ಹರಡಿಕೊಂಡಿದ್ದೇನೆ. ಉಡುಪಿಯಲ್ಲಿ ನಡೆದುದೇ ತುಮಕೂರಲ್ಲಿ ಘಟಿಸಿದುದೇ ಅಥವಾ ಕನಕಪುರದಲ್ಲಿ ಅಪ್ಪಳಿಸಿದ ಅಲೆಗಳೇ ಇಲ್ಲಿಯೂ ಮುಂದುವರೆದಿದೆ, ವರದಿಗಾರರ ಹೆಸರುಗಳೂ ವರದಿಗಾರಿಕೆಯ ರೀತಿಯೂ ಹೆಚ್ಚೇನೂ ಬದಲಾಗಿಲ್ಲ. ಇನ್ನು ಸಾಹಿತ್ಯ ಮಾತ್ರ ಸಮಾಜವನ್ನು ಬದಲಿಸಿಬಿಡುತ್ತದೆಂಬ ಹೇಳಿಕೆ ಎಷ್ಟು ಸರಿ ಎಷ್ಟು ತಪ್ಪು ಎಂಬ ಗೊಂದಲದಲ್ಲಿ ಉಳಿದಿದ್ದೇನೆ.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/5254102750204147054-6877579482337040749?l=bemkikaddi.blogspot.com' alt='' /&gt;&lt;/div&gt;</content><link rel='replies' type='application/atom+xml' href='http://bemkikaddi.blogspot.com/feeds/6877579482337040749/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://www.blogger.com/comment.g?blogID=5254102750204147054&amp;postID=6877579482337040749' title='1 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/5254102750204147054/posts/default/6877579482337040749'/><link rel='self' type='application/atom+xml' href='http://www.blogger.com/feeds/5254102750204147054/posts/default/6877579482337040749'/><link rel='alternate' type='text/html' href='http://bemkikaddi.blogspot.com/2009/02/blog-post.html' title='ದುರ್ಗದ ಕವಿಗೋಷ್ಠಿ ಕೇಳಿ ಬಂದ ಮೇಲೆ.....'/><author><name>ಬೆಂಕಿಕಡ್ಡಿ</name><uri>http://www.blogger.com/profile/13181705369161334860</uri><email>noreply@blogger.com</email><gd:image rel='http://schemas.google.com/g/2005#thumbnail' width='21' height='32' src='http://4.bp.blogspot.com/_bUAIZF0Yo1g/TKdTK-6rv2I/AAAAAAAAAJY/QXUJAVKh9ps/S220/dsr4.jpg'/></author><thr:total>1</thr:total></entry><entry><id>tag:blogger.com,1999:blog-5254102750204147054.post-5125163396591781444</id><published>2009-01-25T21:22:00.001+05:30</published><updated>2009-01-25T21:23:33.778+05:30</updated><title type='text'>ತಪಸ್ಸೆಂಬ ತಾಪ</title><content type='html'>‘ತಪಸ್ಸು’ ಎಂಬ ಪದವನ್ನು ನಿತ್ಯದ ಮಾತುಗಳಲ್ಲಿ ನಾವೆಲ್ಲ ಬಳಸುತ್ತಲೇ ಇರುತ್ತೇವೆ. ತಪಸ್ಸು ಎಂಬ ಪದ ‘ತಪ್’ ಧಾತುವಿನಿಂದ ನಿಷ್ಪನ್ನವಾದ ಪದ. ಅಂದರೆ ಕಷ್ಟ ಪಡು ಎಂದರ್ಥ. ಒಂದು ಉದ್ದೇಶ ಸಾಧನೆಗಾಗಿ ದೈಹಿಕ ಕಾಮನೆಗಳನ್ನು, ಲೌಕಿಕದ ಸುಖಸವಲತ್ತುಗಳನ್ನು ಸ್ವಯಂಪ್ರೇರಣೆಯಿಂದ ಬಿಟ್ಟುಕೊಟ್ಟು ಕಷ್ಟಕ್ಕೆ ಒಡ್ಡಿಕೊಳ್ಳುವುದು ತಪಸ್ಸು. ಹಿಮಾಲಯದ ತಪ್ಪಲಿಗೋ, ಗುಹೆಯ ಏಕಾಂತಕ್ಕೋ ತೆರಳಿದ ಮಾತ್ರಕ್ಕೇ ತಾಪಕ್ಕೆ ಸಿಲುಕಿದವರೆಲ್ಲ ತಪಸ್ವಿಗಳಾಗುವುದಿಲ್ಲ. ಸಂಕಲ್ಪವನ್ನು ಸ್ವಶಕ್ತಿಯ ಮೂಲಕ ಸಿದ್ಧಿಯ ನೆಲೆಗೆ ಒಯ್ಯುವುದು ತಪಸ್ಸಿನ ಉದ್ದೇಶ. ಅದರ ಪರಿಕಲ್ಪನೆ ವೇದೋಪನಿಷತ್ತುಗಳ ಕಾಲದಿಂದಲೂ ಪರಂಪರೆ ನಮಗೆ ಕಲಿಸುತ್ತ ಬಂದಿದೆ. ಮನಸ್ಸು ಮತ್ತು ಇಂದ್ರಿಯಗಳ ಮೇಲಿನ ಅಪಾರ ಹಿಡಿತವೇ ತಪಸ್ಸಿನ ಮೂಲ. ಪಂಚೇದ್ರಿಯಗಳಾದ ಕಣ್ಣು, ಕಿವಿ, ಮೂಗು, ನಾಲಿಗೆ, ಚರ್ಮಗಳು ಲೌಕಿಕದ ವಿವಿಧ ಸಂವೇದನೆಗಳನ್ನು ಮೊಗೆಮೊಗೆದು ಮನಸ್ಸಿನ ಕಣಜದೊಳಗೆ ತುಂಬುತ್ತಲೇ ಇರುತ್ತವೆ. ಹಾಗೆ ಸಿಕ್ಕ ಸಂವೇದನೆಗಳನ್ನು ಅನುಭವಿಸುವಂತೆ ಮನಸ್ಸು ದೇಹವನ್ನು ಪ್ರಚೋದಿಸುತ್ತದೆ. ಪ್ರಲೋಭನೆಗೆ ಒಳಗಾದಾಗ ಸಹಜವಾಗಿ ಚಂಚಲವಾಗುವ ಮನಸ್ಸು ದೇಹದ ಮೇಲಿನ ಹಿಡಿತವನ್ನು ಕಳೆದುಕೊಳ್ಳುತ್ತದೆ. ಆಕರ್ಷಣೆಯ ಸುಳಿಗೆ ಸಿಕ್ಕ ದೇಹ ಉತ್ಕಂಠಿತತೆಯ ಮೋಹದಲ್ಲಿ ಪರಿವೆಯ ಇರವನ್ನೇ ಮರೆಮಾಚುತ್ತದೆ.&lt;br /&gt;&lt;br /&gt;ಸಿದ್ಧಿ ಮತ್ತು ಸಾಧನೆಯ ಉದ್ದೇಶವಿದ್ದವರು ಸಹಜವಾಗಿ ಲೌಕಿಕ ಒಡ್ಡುವ ಆಮಿಷಗಳಿಂದ ಹೊರಗಿರಲು ಪ್ರಯತ್ನಿಸುತ್ತಲೇ ಇರುತ್ತಾರೆ. ಒಮ್ಮೆ ಸಿದ್ಧಿ ಕೈ ವಶವಾಯಿತೆಂದರೆ ನಂತರ ಲೌಕಿಕದ ಯಾವ ಆಮಿಷಗಳೂ ಸಿದ್ಧಿಸಿದ ಬಲದ ಮುಂದೆ ಅಗಣ್ಯವಾಗುತ್ತವೆ. ದುರಂತವೆಂದರೆ ಸಾಧನೆಯ ಹೊಸ್ತಿಲು ಮುಟ್ಟಿದೊಡನೆಯೇ ಅದು ತಮ್ಮ ಪಾಲಿಗೆ ಸಿದ್ಧಿಸಿತೆಂದು ಭಾವಿಸುವ ಅಲ್ಪಮತಿಗಳು ಲೌಕಿಕ ಒಡ್ಡುವ ಮಾನ, ಸನ್ಮಾನಗಳ, ಭರದಲ್ಲಿ ಸಿಲುಕಿ ಸ್ವಲ್ಪದರಲ್ಲೇ ಸಿಗಬಹುದಾಗಿದ್ದ ಸಿದ್ಧಿಯಿಂದ ಬಹು ಬೇಗ  ಬಲುದೂರಕ್ಕೆ ಕ್ರಮಿಸಿಬಿಡುತ್ತಾರೆ. ಸಿದ್ಧಿ ಎಂಬುದು ಆಗ ಅಂಥವರಿಗೆ ಎಟುಕದ ನಕ್ಷತ್ರವಾಗುತ್ತದೆ. ಸದಾ ಚಂಚಲತೆಗೆ ಸಿಕ್ಕು ಇಂದ್ರಿಯದ ಹತೋಟಿಯನ್ನು ಕಳೆದುಕೊಳ್ಳುವ ಮನಸ್ಸನ್ನು ನಿಗ್ರಹಿಸುವ ಕ್ರಿಯೆ ಅತಿ ಕಷ್ಟಕರವಾದುದು. ಅದು ತಾಪದಾಯ್ಕವಾದುದು. ಸದಾ ಸುಡುತ್ತಲೇ ಇರುವಂಥದು. ಆದುದರಿಂದಲೇ ಅದು ತಪಸ್ಸು. &lt;br /&gt;&lt;br /&gt;ನಮ್ಮ ಪ್ರಾಚೀನ ಪರಂಪರೆಯಲ್ಲಂತೂ ತಪಸ್ಸಿನ ಪ್ರಸ್ತಾಪ ಆಗಾಗ ಬರುತ್ತಲೇ ಇರುತ್ತದೆ. ದೇವಗಂಗೆಯನ್ನು ಪಿತೃಮೋಕ್ಷಕ್ಕಾಗಿ ಧರೆಗೆ ತಂದ ಭಗೀರಥನ ಹೆಸರಂತೂ ಸರ್ವದಾ ಪ್ರಸ್ತಾಪ ಯೋಗ್ಯವಾದುದೇ ಆಗಿದೆ. ವಿಶ್ವಾಮಿತ್ರನೆಂಬ ಸಾಮಾನ್ಯ ಬ್ರಹ್ಮರ್ಷಿ ಎಂಬ ಅಸಾಮಾನ್ಯ ಪದವಿ ಪಡೆದುದರ ಹಿಂದೆ ತಪಸ್ಸಿನ ಬಲವಿದೆ. ಗಾಂಧಿ ಬಸವರೂ ತಪಸ್ವಿಗಳಾಗಿದ್ದಕ್ಕೇ ಲೌಕಿಕದ ಆಮಿಷಗಳನ್ನು ಗೆದ್ದು ತಮ್ಮ ಸಾಧನೆಯ ದಾರಿಯನ್ನು ಲೋಕಕ್ಕೆ ತಿಳಿಸಲು ಸಾಧ್ಯವಾದದ್ದು. ಸಂಕಲ್ಪವೆಂಬುದು ಸಿದ್ಧಿಯಾಗಿ ಬದಲಾದಾಗ ತಪಸ್ಸಿನ ಉದ್ದೇಶ ಪರಿಪೂರ್ಣವಾಗುತ್ತದೆ. ‘ತಪೋ ಬ್ರಹ್ಮೇತಿ’ ಎನ್ನುತ್ತದೆ ಉಪನಿಷತ್ತು. ಭಗವದ್ಗೀತೆ ತಪಸ್ಸನ್ನು ಮೂರು ಬಗೆಯಲ್ಲಿ ವಿಭಾಗಿಸಿ ಕಾಯಿಕ, ವಾಚಿಕ ಮತ್ತು ಮಾನಸಿಕ ಎಂದು ಹೆಸರಿಸುತ್ತದೆ. ಶುಚಿತ್ವ, ಸರಳತೆ, ಬ್ರಹ್ಮಚರ್ಯ, ಅಹಿಂಸೆ ಇವ್ಯ್ ಕಾಯಿಕ ತಪಸ್ಸಿನ ಧಾತುಗಳು. ಉದ್ವೇಗಕ್ಕೆ ಅವಕಾಶ ಕೊಡದೇ ಹಿತವೂ, ಪ್ರಿಯವೂ, ಸತ್ಯವೂ ಆದ ಮಾತನಾಡುವುದು ವಾಚಿಕ ತಪಸ್ಸು. ಮನಸ್ಸನ್ನು ಹದಗೊಳಿಸಿಕೊಂಡು ಆಹ್ಲಾದತೆಯನ್ನು ಕಾಪಾಡಿಕೊಳ್ಳುವುದು, ಇಂದ್ರಿಯಗಳನ್ನು ನಿಗ್ರಹಿಸಿಕೊಳ್ಳುತ್ತಲೇ ಭಾವಶುದ್ಧಿಯನ್ನು ಕಾಪಾಡಿಕೊಳ್ಳುವುದು ಮಾನಸಿಕ ತಪಸ್ಸು. ಕಾಯಿಕ ಮತ್ತು ವಾಚಿಕ ತಪಸ್ಸುಗಳನ್ನು ನಮ್ಮದಾಗಿಸಿಕೊಳ್ಳಬಹುದಾದರೂ ಮಾನಸಿಕ ತಪಸ್ಸು ಸುಲಭಕ್ಕೆ ಒಗ್ಗಿ ಬಗ್ಗುವಂಥದಲ್ಲ. ಅದಕ್ಕೆ ಅಚಲ ಸಂಕಲ್ಪ ಮತ್ತು ಸತತ ಸಾಧನೆ ಬೇಕಾಗುತ್ತದೆ. ವಿದ್ಯಾರ್ಥಿಯೊಬ್ಬ ತನ್ನ ಓದಿನಲ್ಲಿ ಹಿರಿದನ್ನು ಸಾಧಿಸಬೇಕಾದರೆ ಅವನಿಗೆ ತಾನು ವಿದ್ಯಾರ್ಥಿ ಎಂಬ ಅರಿವಿನ ಜೊತೆಜೊತೆಗೇ ತಾನು ಸಾಗಬೇಕಾದ ದಾರಿಯ ಸ್ಪಷ್ಟ ಕಲ್ಪನೆ ಇರಬೇಕಾಗುತ್ತದೆ. ಗೊಂದಲಕ್ಕೆ  ಬಿದ್ದ ಹಾಗೆಲ್ಲ ಅವನ ಶೈಕ್ಷಣಿಕ ಶ್ರೇಯಾಂಕಗಳು ಕಡಿಮೆಯಾಗುತ್ತ ಹೋಗುತ್ತವೆ. ಈ ಮಾತು ಕಲೆ, ಸಾಹಿತ್ಯ, ವಿಜ್ಞಾನ, ಆಧ್ಯಾತ್ಮ, ಕೃಷಿ, ವಾಣಿಜ್ಯ- ಹೀಗೆ ಬದುಕಿನ ಎಲ್ಲ ಕ್ಷೇತ್ರಗಳಿಗೂ ಅನ್ವಯಿಸುತ್ತದೆ. &lt;br /&gt;&lt;br /&gt;ತಪಸ್ಸು ಎಂಬುದು ಜಟಾಜೂಟಗಳನ್ನು ಬಿಟ್ಟುಕೊಂಡು ಮರವೊಂದರ ಕೆಳಗೆ ಕೂತ ಮಾತ್ರಕ್ಕೆ ಎಟುಕುವಂಥದಲ್ಲ. ತೋರುಗಾಣಿಕೆಗೇ ತಪಸ್ಸಿಗೆ ಕೂತವರ ಮಾತು ಬೇರೆ!. ತಪಸ್ಸು ಎಂಬುದು ಸವೆದುಹೋದ ಅರ್ಥಕಳಕೊಂಡ ಪದವಲ್ಲ. ಅದು ಎತ್ತೆತ್ತರದ ಸುಮೇರುಗಳಿಗೆ ಮನುಷ್ಯನ ಮನಸ್ಸನ್ನು ಒಯ್ಯುವ ಮತ್ತು ಅಂಥ ಎತ್ತರದಲ್ಲೂ ವಿನಮ್ರತೆಯನ್ನು ಕಾಪಾಡಿಕೊಳ್ಳುವ ಕಲೆಯನ್ನು ಕಲಿಸುವ ವಿಷಿಷ್ಟ ಬೆರಗು. ನಮ್ಮ ಸಣ್ಣತನಗಳನ್ನು ಕಳೆದು ಹೊಸ ಎತ್ತರಗಳನ್ನು ಕೊಡುವ ಸಾಧನ.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/5254102750204147054-5125163396591781444?l=bemkikaddi.blogspot.com' alt='' /&gt;&lt;/div&gt;</content><link rel='replies' type='application/atom+xml' href='http://bemkikaddi.blogspot.com/feeds/5125163396591781444/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://www.blogger.com/comment.g?blogID=5254102750204147054&amp;postID=5125163396591781444' title='1 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/5254102750204147054/posts/default/5125163396591781444'/><link rel='self' type='application/atom+xml' href='http://www.blogger.com/feeds/5254102750204147054/posts/default/5125163396591781444'/><link rel='alternate' type='text/html' href='http://bemkikaddi.blogspot.com/2009/01/blog-post_25.html' title='ತಪಸ್ಸೆಂಬ ತಾಪ'/><author><name>ಬೆಂಕಿಕಡ್ಡಿ</name><uri>http://www.blogger.com/profile/13181705369161334860</uri><email>noreply@blogger.com</email><gd:image rel='http://schemas.google.com/g/2005#thumbnail' width='21' height='32' src='http://4.bp.blogspot.com/_bUAIZF0Yo1g/TKdTK-6rv2I/AAAAAAAAAJY/QXUJAVKh9ps/S220/dsr4.jpg'/></author><thr:total>1</thr:total></entry><entry><id>tag:blogger.com,1999:blog-5254102750204147054.post-1844870354572843193</id><published>2009-01-21T18:07:00.001+05:30</published><updated>2009-01-21T18:08:45.056+05:30</updated><title type='text'>ವ್ರುತ್ತದೊಳಗಿನ ಬದುಕು</title><content type='html'>ಬದುಕು ವಿಸ್ತಾರವಾದುದು. ಅದಕ್ಕೆ ಚೌಕಟ್ಟನ್ನು ಕಟ್ಟಿದಷ್ಟೂ ದೃಷ್ಟಿಗೆ ಮಿತಿ ಬರುತ್ತದೆ. ಮಿತಿಗಳಾಚೆಯೇ ಇರುವ ಬದುಕು ಸುಲಭಕ್ಕೆ ದಕ್ಕುವುದಿಲ್ಲ. ಮಿತಿಯೊಳಗೇ ನಾವು ಬದುಕಿದರೆ, ಚಿಂತಿಸಿದರೆ ನಮ್ಮಾಚೆಗೂ ಇರುವ ಬದುಕ ಮಜಲು ನಮಗೆ ಅರ್ಥವೇ ಆಗುವುದಿಲ್ಲ. ಹೀಗೆಲ್ಲ ಮಾತಿಗೆ ಹೇಳಬಹುದಾದರೂ ಮೂಲತಃ ನಾವೆಲ್ಲ ನಮ್ಮ ನಮ್ಮ ಮಿತಿಯೊಳಗೇ ಬದುಕ ಕಡಲನ್ನು ಈಜುವ ಅಭ್ಯಾಸ ಮಾಡಿಕೊಂಡಿರುತ್ತೇವೆ. ಹಳ್ಳ, ಕೆರೆ, ಬಾವಿಗಳಲ್ಲಿ ಸುಲಭವಾಗಿ ಈಜುವವರು ಸಮುದ್ರಕ್ಕೆ ಹೆದರಬಹುದು. ಆಳ ಅಗಲಗಳ ಪರಿವೆಯಿಲ್ಲದೇ ಸಿಕ್ಕ ಸಿಕ್ಕ ನೀರಿಗೆ ಧುಮುಕುವುದೂ ಅಪಾಯದ ಮಾತೇ. ಹಾಗಾಗಿಯೇ ನಾವೆಲ್ಲ ನಮಗೆ ಗೊತ್ತಿರುವ ದೇಶ ಮತ್ತು ಭಾಷೆಗಳಲ್ಲಿ ಬದುಕಲು ಇಚ್ಛಿಸುತ್ತೇವೆ. ಗೊತ್ತಿದ್ದೂ ನಾಲ್ಕು ಗೋಡೆಗಳ ಬಂಧನದಲ್ಲಿ, ಕಿಟಕಿ, ಬಾಗಿಲು, ಪರದೆಗಳ ಹಂಗಿನಲ್ಲೇ  ಇರಲು ಇಚ್ಛಿಸುತ್ತೇವೆ. ನಮಗೆಲ್ಲರಿಗೂ ಪ್ರಿಯವಾದ ಏಕಾಂತದಲ್ಲಿ ಇದ್ದುಬಿಡಲು ಪ್ರಯತ್ನಿಸುತ್ತೇವೆ. ಜೊತೆ ಜೊತೆಗೇ ನಾವೇ ಸೃಷ್ಟಿಸಿಕೊಂಡ ಈ ಮಿತಿಯನ್ನು ಮೀರುವ ಮತ್ತು ಹೊರಗಿರುವ ವಿಸ್ತಾರ ಬಯಲನ್ನು ಅದು ಕೊಡುವ ಸ್ವಾತಂತ್ರ್ಯದ ಬಗೆಯನ್ನೂ ಯೋಚಿಸುತ್ತಲೇ ಇರುತ್ತೇವೆ. ಬಯಲಲ್ಲಿ ಬೀಳಬಹುದಾದ ಮಂಜು ಮತ್ತು ಗಾಳಿಯ ಕಲ್ಪನೆ ತಿಳಿಯಿತೋ ಪುನಃ ನಮ್ಮ ನಾಲ್ಕು ಗೋಡೆಗಳ ಬೆಚ್ಚನೆಯ ಮನೆಯತ್ತ ನಡೆಯುತ್ತೇವೆ. &lt;br /&gt;&lt;br /&gt;ಬಯಲು ವಿಸ್ತಾರದೊಟ್ಟಿಗೇ ಸ್ವಾತಂತ್ರ್ಯವನ್ನು ಕೊಡಬಹುದಾದರೂ ಅದು ಭಯದ ಮೂಲ. ಅಭದ್ರತೆಯ ಸೇತು. ಏಕೆಂದರೆ ಬಯಲ ಅನಂತತೆಯನ್ನು ಗ್ರಹಿಸುವ ಚಿತ್ತಬಲ ಸುಲಭಕ್ಕೆ ಒಲಿಯುವಂಥದಲ್ಲ. ಸಾಮಾಜಿಕ ಜೀವಿಯಾಗಿ ಒಂದು ಮನೆ, ಮನೆತನ ಮತ್ತು ನಡವಳಿಕೆಗಳಿಗೆ ಮಿತಿಗೊಳಿಸಿಕೊಂಡ ನಮ್ಮ ಚಟುವಟಿಕೆಗಳು ಬಯಲ ಅನುಭವ ಜನ್ಯ ಸತ್ಯಗಳನ್ನು ಅರ್ಥಮಾಡಿಕೊಳ್ಳುವುದನ್ನು ನಿಷೇದಿಸುತ್ತವೆ. ಅಂಥ ಸ್ವಾತಂತ್ರ್ಯವನ್ನು ಇಟ್ಟುಕೊಂಡಿರುವ ಮರ, ಗಿಡ, ಬಳ್ಳಿಗಳು, ಕ್ರಿಮಿ, ಕೀಟ, ಪ್ರಾಣಿಗಳು ಕತ್ತಲೆ, ಬೆಳಕು, ಗಾಳಿ ಸದ್ದುಗಳು ನಮ್ಮನ್ನು ಅಧೀರರನಾಗಿಸುತ್ತವೆ. ಹಾಗಾಗಿಯೇ ಮಿತಿಯ ಅರಿವಿರುವ ಮನುಷ್ಯ ತನ್ನಾಚೆಯ ಜಗತ್ತನ್ನು ಅರಿಯುವುದನ್ನು ಬೇಕೆಂತಲೇ ಮರೆಯುತ್ತಾನೆ. ತನಗೆ ಸಿಕ್ಕಿರುವುದರಲ್ಲೇ ಮೈ ಮರೆಯುತ್ತಾನೆ. &lt;br /&gt;&lt;br /&gt;ನಾವೆಲ್ಲ ನಾವು ಬದುಕುತ್ತಿರುವ ಬಗೆಯನ್ನೆ ಅನನ್ಯವನ್ನು ಭಾವಿಸಿದ್ದೇವೆ. ನಾವು ಉಪಜೀವನಕ್ಕೆ ನೆಚ್ಚಿರುವ ಕಸುಬನ್ನೇ ಅಂತಿಮವೆಂದು ಭಾವಿಸಿದ್ದೇವೆ. ನಮ್ಮ ಅನುಭವವನ್ನೇ ಪರಮಸತ್ಯವೆಂದು ನಂಬಿಬಿಟ್ಟಿದ್ದೇವೆ. ನಮ್ಮಾಚೆಗೂ ಒಂದು ಜಗತ್ತಿದೆ. ಅಲ್ಲಿಯೂ ನಮ್ಮಂತೆಯೇ ಯೋಚಿಸುವ, ನಮ್ಮದೇ ತಹತಹಕಿಯ ಜೀವಿಗಳಿದ್ದಾರೆಂದು ಮರೆತುಬಿಟ್ಟಿದ್ದೇವೆ. ಸಮೂಹದ ಸಾಧ್ಯತೆಗಳನ್ನು ನಿರಾಕರಿಸಿದಷ್ಟೂ ನಮ್ಮ ಮಿತಿಯ ವ್ಯಾಸ ಕುಗ್ಗುತ್ತ ಬರುತ್ತದೆ. ದುರಂತವೆಂದರೆ ನಾವೆಲ್ಲ ನಮ್ಮ ಜೀವನವೆ ಭದ್ರವೆಂದು ಅನ್ಯರಿಗೂ ಇರುವ ಇದೇ ಬಗೆಯ ಕಾಳಜಿಯನ್ನು ಮೋಹವೆಮು ಬಗೆಯುತ್ತೇವೆ. ಹಾಗೆಯೇ ನಮ್ಮದು ಮಾತ್ರ ಸಮಸ್ಯೆ. ಉಳಿದವರೆಲ್ಲ ಪಾರಾಗಿದ್ದಾರೆಂದೂ ಭ್ರಮಿಸಿರುತ್ತೇವೆ. &lt;br /&gt;&lt;br /&gt;ನಮ್ಮ ಸಮಾಜವನ್ನು ಸಾವಧಾನವಾಗಿ, ಸೂಕ್ಷ್ಮವಾಗಿ ಗಮನಿಸಿದರೆ ಇಂತಹ ನೂರಾರು ವೃತ್ತಗಳು ನಮ್ಮೆಲ್ಲರನ್ನೂ ಸುತ್ತುವರಿದಿರುವ ಸತ್ಯ ಗೋಚರಿಸುತ್ತದೆ. ಒಂದೊಂದಕ್ಕೂ ತನ್ನದೇ ಆದ ವ್ಯಾಸ, ತ್ರಿಜ್ಯ ಮತ್ತು ಕ್ಷೇತ್ರಫಲಗಳಿದ್ದು ಅಂತಹ ಹಲವು ವೃತ್ತಗಳು ನಮ್ಮೆಲ್ಲರ ಬದುಕನ್ನೂ ಆವರಿಸಿರುತ್ತವೆ. ಒಂದೊಂದೂ ಮತ್ತೊಂದಕ್ಕೆ ಸೇರದ ಬೆರೆಯಲಿಚ್ಛಿಸದ ವೃತ್ತಗಳು. ತನ್ನನ್ನು ಸುತ್ತುವರೆದಿರುವ ವೃತ್ತದಾಚೆಗೆಂದೂ ನೋಡದ, ಮತ್ತೊಂದು ವೃತ್ತದಲ್ಲಿರುವವರ ಪರಿಸ್ಥಿತಿಯರಿಯದ ನಮ್ಮ ಈ ಮಿತಿಗಳೇ ಸಾಮಾಜಿಕ ವೈರುಧ್ಯಗಳನ್ನು ಬಿತ್ತುತ್ತಿರುವ ಮತ್ತು ಇರುವವರ ಹಾಗೂ ಇಲ್ಲದಿರುವವರ ನಡುವಣ ಅಂತರವನ್ನು ಹೆಚ್ಚಿಸುತ್ತಲೇ ಇರುವ ಕಾರಣಗಳೆಂದು ನಾವಾರೂ ಅರಿಯದಿರುವುದೇ ನಮ್ಮ ನಡುವಣ ಹಲವು ಸಮ್ಸ್ಯೆಗಳ ಮೂಲ ಕಾರಣವಾಗಿದೆ. ನೂರಾರು ವೃತ್ತಗಳು! ಆ ವೃತ್ತಗಳಳೊಗೆ ಮತ್ತೆ ನೂರು ಸೀಳುಗಳು. ಗುಂಪು, ಗುಂಪಾಗಿ, ಮತ್ತೆ ಮತ್ತೆ ವಿಭಜನೆಯಾಗುತ್ತಾ, ಸೀಳಿಕೊಳ್ಳುತ್ತಾ, ಒಂದಕ್ಕೊಂದು ದೂರವಾಗಿ ನಮ್ಮ ಚಿಪ್ಪಿನೊಳಗೆ ನಾವೇ ಬಂಧಿಯಾಗುತ್ತಾ ಅಪರಿಚಿತವಾಗುತ್ತಾ ಹೋಗುವ ಕವಲು ದಾರಿಗಳು.&lt;br /&gt;&lt;br /&gt;ಆದರೆ ಒಂದು ನಾಗರೀಕ ಸಮಾಜ ಸುಸಂಸ್ಕೃತವಾಗಬೇಕೆಂದರೆ, ಇಡಿಯಾಗಿ ತನ್ನ ಸ್ವರೂಪ ಪ್ರದರ್ಶಿಸಬೇಕೆಂದರೆ ಈ ವೃತ್ತಗಳನ್ನು ನಿವಾರಿಸಬೇಕು. ವೃತ್ತಗಳ ವ್ಯಾಸವನ್ನು ಹಿರಿದುಮಾಡುತ್ತ ಸಮಷ್ಟಿಯಲ್ಲಿ ಎಲ್ಲರನ್ನೂ, ಎಲ್ಲವನ್ನೂ ಒಳಗೊಳಿಸಬೇಕು. ಏಕನಾದದ ಸಮೂಹ ಗೀತೆಗೆ ಎಲ್ಲರನ್ನೂ ಅನುಗೊಳಿಸಬೇಕು. ದೂರದೃಷ್ಟಿಯುಳ್ಳ ಸಮೂಹ ನಾಯಕತ್ವ ಪ್ರಭುತ್ವವನ್ನು ಪ್ರಶ್ನಿಸುವ ಎದೆಗಾರಿಕೆ ತೋರಬೇಕು. ಆಗ ಅಂಥ ಸಂದರ್ಭ ಬಯಲ ಸ್ವಾತಂತ್ರವನ್ನು ಅನುಭವಿಸುವ ರೀತಿಗೆ ನಮ್ಮನ್ನು ಸಜ್ಜುಗೊಳಿಸುತ್ತದೆ.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/5254102750204147054-1844870354572843193?l=bemkikaddi.blogspot.com' alt='' /&gt;&lt;/div&gt;</content><link rel='replies' type='application/atom+xml' href='http://bemkikaddi.blogspot.com/feeds/1844870354572843193/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://www.blogger.com/comment.g?blogID=5254102750204147054&amp;postID=1844870354572843193' title='0 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/5254102750204147054/posts/default/1844870354572843193'/><link rel='self' type='application/atom+xml' href='http://www.blogger.com/feeds/5254102750204147054/posts/default/1844870354572843193'/><link rel='alternate' type='text/html' href='http://bemkikaddi.blogspot.com/2009/01/blog-post_1653.html' title='ವ್ರುತ್ತದೊಳಗಿನ ಬದುಕು'/><author><name>ಬೆಂಕಿಕಡ್ಡಿ</name><uri>http://www.blogger.com/profile/13181705369161334860</uri><email>noreply@blogger.com</email><gd:image rel='http://schemas.google.com/g/2005#thumbnail' width='21' height='32' src='http://4.bp.blogspot.com/_bUAIZF0Yo1g/TKdTK-6rv2I/AAAAAAAAAJY/QXUJAVKh9ps/S220/dsr4.jpg'/></author><thr:total>0</thr:total></entry><entry><id>tag:blogger.com,1999:blog-5254102750204147054.post-4460214482198395714</id><published>2009-01-08T19:07:00.003+05:30</published><updated>2009-01-08T19:12:57.787+05:30</updated><title type='text'>ಬೆಂಕಿ ಕಡ್ಡಿಗಳು</title><content type='html'>ಬೆಂಕಿ ಕಡ್ಡಿಗಳು,&lt;br /&gt;ನಾನು, ನೀನು, ಅವನು, ಅವಳು&lt;br /&gt;ಹೌದು, ನಾವೆಲ್ಲರೂ ಬೆಂಕಿಯ ತುಂಡುಗಳು:&lt;br /&gt;&lt;br /&gt;ನಮ್ಮ ತಲೆಯ ಮೇಲಷ್ಟು ಮದ್ದು ಮೆತ್ತಿ,&lt;br /&gt;ಒಬ್ಬರ ಮೇಲೊಬ್ಬರನ್ನು ತುರುಕಿ,&lt;br /&gt;ಪುಟ್ಟ ಪೆಟ್ಟಿಗೆಯೊಳಗಿಟ್ಟು ಭದ್ರ ಮಾಡಿದ್ದಾರೆ:&lt;br /&gt;&lt;br /&gt;ಬೇಕಿನಿಸಿದಾಗೆಲ್ಲ ನಮ್ಮಲ್ಲೊಬ್ಬರನ್ನೆಳೆದು&lt;br /&gt;ಚರಕ್ಕನೆ ಗೀರಿ ಬೆಂಕಿ ಹೊತ್ತಿಸುತ್ತಾರೆ,&lt;br /&gt;ಚಳಿಯ ಮೈಯನ್ನು ಕಾಯಿಸಿ ಕೊಳ್ಳುತ್ತಾರೆ.&lt;br /&gt;&lt;br /&gt;ಬೆಂಕಿ ಹೊತ್ತಿಸಿದ ಸಂಭ್ರಮದಲ್ಲಿ&lt;br /&gt;ಸುಟ್ಟು ಭಸ್ಮವಾಗುವ ನಮಗೇ&lt;br /&gt;ನಮ್ಮ ಶಕ್ತಿ ಗೊತ್ತಿಲ್ಲ; ಹಾಗಾಗಿ&lt;br /&gt;&lt;br /&gt;ಜೊತೆಜೊತೆಯಾಗಿದ್ದರೂ ಅತಂತ್ರ ಸ್ಥಿತಿ ಹೋಗಲ್ಲ&lt;br /&gt;ಈ ಪುಟ್ಟ ಪೆಟ್ಟಿಗೆಯ ವಾಸವೂ ತಪ್ಪೋಲ್ಲ!&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/5254102750204147054-4460214482198395714?l=bemkikaddi.blogspot.com' alt='' /&gt;&lt;/div&gt;</content><link rel='replies' type='application/atom+xml' href='http://bemkikaddi.blogspot.com/feeds/4460214482198395714/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://www.blogger.com/comment.g?blogID=5254102750204147054&amp;postID=4460214482198395714' title='2 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/5254102750204147054/posts/default/4460214482198395714'/><link rel='self' type='application/atom+xml' href='http://www.blogger.com/feeds/5254102750204147054/posts/default/4460214482198395714'/><link rel='alternate' type='text/html' href='http://bemkikaddi.blogspot.com/2009/01/blog-post_5739.html' title='ಬೆಂಕಿ ಕಡ್ಡಿಗಳು'/><author><name>ಬೆಂಕಿಕಡ್ಡಿ</name><uri>http://www.blogger.com/profile/13181705369161334860</uri><email>noreply@blogger.com</email><gd:image rel='http://schemas.google.com/g/2005#thumbnail' width='21' height='32' src='http://4.bp.blogspot.com/_bUAIZF0Yo1g/TKdTK-6rv2I/AAAAAAAAAJY/QXUJAVKh9ps/S220/dsr4.jpg'/></author><thr:total>2</thr:total></entry><entry><id>tag:blogger.com,1999:blog-5254102750204147054.post-5831415399536643374</id><published>2009-01-01T22:20:00.001+05:30</published><updated>2009-01-01T22:22:28.815+05:30</updated><title type='text'>ವಿಮಾ ರಂಗದ ಮೇಲೆ ಉದಾರೀಕರಣದ ಕರಿ ನೆರಳು</title><content type='html'>&lt;strong&gt;ವಿಮಾರಂಗದ ಮೇಲೆ ಉದಾರೀಕರಣದ ಕರಿನೆರಳು&lt;/strong&gt;&lt;br /&gt;ಸದ್ಯೋವರ್ತಮಾನದ ಜಾಗತಿಕ ಹಣಕಾಸು ಪರಿಸ್ಥಿತಿ ತಿಳಿದವರಿಗೆ ಈಗಿನ ಆರ್ಥಿಕ ಬಿಕ್ಕಟ್ಟಿನ ಬಗ್ಗೆ ವಿವರಿಸಬೇಕಿಲ್ಲ. ಈಗಾಗಲೇ ನಮ್ಮ ಮಾಧ್ಯಮಗಳಲ್ಲಿ ವರದಿಯಾಗಿರುವಂತೆ ಹಲವು ‘ದೈತ್ಯ’ ಕಂಪನಿಗಳು  ಮತ್ತವುಗಳ ಒಡೆತನದಲ್ಲಿದ್ದ ಬ್ಯಾಂಕು, ವಿಮೆ, ಇತರೆ ಹಣಕಾಸು ವ್ಯವಹಾರಗಳೆಲ್ಲ ಕುಸಿದುಬಿದ್ದು ಆ ಕಂಪನಿಗಳು ದಿವಾಳಿಯಾಗಿರುವ , ಆಗುತ್ತಿರುವ ಸಂದರ್ಭ ಇದು. ಅಮೇರಿಕಾದಲ್ಲಾದ ತಲ್ಲಣಗಳು ಹೀಗೆ ಇಡೀ ವಿಶ್ವವನ್ನೇ ಅಲ್ಲಾಡಿಸಬಹುದೆಂದು ಜಾಗತೀಕರಣ ಪ್ರಕ್ರಿಯೆ ಶುರುವಾಗುವ ಮುನ್ನ ಊಹಿಸಲು ಸಾಧ್ಯವೂ ಇರಲಿಲ್ಲ. ಆದರೆ ಈಗ ಜಾಗತೀಕರಣದ ಬಲೆ ಬೀಸಿ ಎಲ್ಲ ಸಾರ್ವಭೌಮ ದೇಶಗಳನ್ನೂ ತನ್ನ ಹಿಡಿತದಲ್ಲಿಟ್ಟುಕೊಂಡಿರುವ ಅಮೆರಿಕಕ್ಕೆ ನೆಗಡಿಯಾದರೆ ಈ ದೇಶಗಳ ಮೂಗಿನಲ್ಲಿ ನೀರು ಸೋರತೊಡಗುತ್ತದೆ. ಅದು ಕೆಮ್ಮಿದರೆ ಈ ದೇಶಗಳು ಆಸ್ಪತ್ರೆ ಸೇರುತ್ತವೆ. &lt;br /&gt;&lt;br /&gt;ಅಮೇರಿಕದ ಆರ್ಥಿಕತೆ ಅಪಾಯದ ಅಂಚು ತಲುಪಿದೆ ಎಂದು ಹೇಳಲು ನಾವೇನು ಆರ್ಥಿಕ ತಜ್ಞರಾಗಿರಬೇಕಿಲ್ಲ. ಜಾಗತೀಕರಣ ಮತ್ತು ಉದಾರೀಕರಣದ ಹುಚ್ಚು ಹತ್ತಿಸಿ ಎಲ್ಲ ಅರ್ಥವ್ಯವಸ್ಥೆಯನ್ನೂ ಖಾಸಗಿಯವರಿಗೆ ಒಪ್ಪಿಸಿದ ಪರಿಣಾಮ ಇದು. ಜಗತ್ತಿನ ಎಲ್ಲ ದೇಶಗಳೂ ಪರಸ್ಪರ ವ್ಯಾವಹಾರಿಕವಾಗಿ ಬೆಸೆದುಕೊಂಡಿರುವ ಕಾರಣ ಅಮೆರಿಕದ ಬಿಕ್ಕಟ್ಟು ಎಲ್ಲ ದೇಶಗಳ ಅರ್ಥ ವ್ಯವಸ್ಥೆಯ ಮೇಲೂ ತನ್ನ ಪರಿಣಾಮ ತೋರುತ್ತ ಸಾಗಿದೆ. ಬ್ರಜಿಲ್ ಮತ್ತು ಇಂಡೋನೇಷಿಯಾದ ಪರಿಸ್ಥಿತಿಯಂತೂ ಶೋಚನೀಯವಾಗಿದೆ. ನಮ್ಮ ದೇಶದ ಮೇಲೆ  ಈ ಕಂಪನದ ಪರಿಣಾಮ ತೀವ್ರವಾಗಿಲ್ಲವಾದರೂ ಅಲ್ಪ ಸ್ವಲ್ಪ ನಷ್ಟ ಉಂಟುಮಾಡಿದೆ. ಅಮೆರಿಕ ಮತ್ತು ಸಾಫ್ಟ್ವೇರನ್ನು ನಂಬಿದ್ದ ಬಹುತೇಕ ಖಾಸಗಿ ಸಂಸ್ಥೆಗಳು ತಮ್ಮ ನೌಕರರ ಸಂಖ್ಯೆ ತಗ್ಗಿಸುತ್ತಲೋ, ಅಥವಾ ಅವರ ಸಂಬಳ ಕಡಿತಗೊಳಿಸಿಯೋ ಸುದ್ದಿ ಮಾಡುತ್ತಲೇ ಇವೆ. ಮಾಧ್ಯಮ ಕ್ಷೇತ್ರದ ಮೇಲೂ ಇದರ ಕರಿನೆರಳು ಬಿದ್ದ ಕಾರಣ ನಿಯತಕಾಲಿಕೆಗಳ ಅವಧಿ ಬದಲಾಗತೊಡಗಿದೆ. ಕನ್ನಡದಲ್ಲೂ ಪ್ರಕಟವಾಗುವ ‘ದಿ ಸಂಡೆ ಇಂಡಿಯನ್’ ಪತ್ರಿಕೆಯ ಸ್ಥಳೀಯ ಸಾಪ್ತಾಹಿಕ ಆವೃತ್ತಿಗಳು ಪಾಕ್ಷಿಕ ಪತ್ರಿಕೆಗಳಾಗಿ ಬದಲಾಗಿವೆ. &lt;br /&gt;&lt;br /&gt;ಪುಣ್ಯದ ಮಾತೆಂದರೆ ನಮ್ಮ ದೇಶದ ಸಾರ್ವಜನಿಕ ವಲಯದ ಬ್ಯಾಂಕು ಮತ್ತು ವಿಮಾ ವಲಯ ‘ಜಾಗತಿಕ ಕುಸಿತ’ವೆಂದು ಬಿಂಬಿಸಲಾಗಿರುವ ಅಮೆರಿಕಾ ಪ್ರಣೀತ ಅರ್ಥ ವ್ಯವಸ್ಥೆಯ ನರಳಾಟವನ್ನು ಮೆಟ್ಟಿ ನಿಂತಿವೆ.  ಸ್ಟೇಟ್ ಬ್ಯಾಂಕ್ ಅಫ್ ಇಂಡಿಯಾ ದೊಡ್ಡ ಮಟ್ಟದಲ್ಲಿ ಹೊಸ  ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳುತ್ತಿರುವುದರ ಜೊತೆಜೊತೆಗೇ ಇನ್ನಿತರ ರಾಷ್ಠ್ರೀಕೃತ ಬ್ಯಾಂಕುಗಳೂ ವಿವಿಧ ಹುದ್ದೆಗಳಿಗೆ ನೇಮಕಾತಿಯ ವಿವರಗಳನ್ನು ಪ್ರಕಟಿಸುತ್ತಲೇ ಇವೆ. ಈ ದೇಶದ ಅತಿದೊಡ್ಡ ವಿಮಾ ಸಂಸ್ಥೆಯಾದ ಎಲ್ಲೈಸಿ ಬರುವ ವರ್ಷದಲ್ಲಿ ಹತ್ತು ಸಾವಿರ ಹೊಸ ಉದ್ಯೋಗಿಗಳನ್ನು ನೇಮಿಸಿಕೊಳ್ಳಲಿದೆಯೆಂದು ಅದರ ಅಧ್ಯಕ್ಷರು ಪ್ರಕಟಿಸಿದ್ದಾರೆ. ಈ ಸಂಸ್ಥೆಗಳು ಗಟ್ಟಿಯಾಗಿ ನಿಲ್ಲಲು ಅವೆಲ್ಲ ಸಾರ್ವಜನಿಕ ವಲಯದಲ್ಲಿರುವುದು ಮತ್ತು ಜನರಿಗೆ ಉತ್ತರ ದಾಯಿತ್ವವನ್ನು ಹೊಂದಿರುವುದೂ ಕಾರಣ. &lt;br /&gt;&lt;br /&gt;ಅಮೆರಿಕಕ್ಕೇನಾಗಿತ್ತು? ಹಣಕಾಸು ಬಂಡವಾಳದ ತೀರದ ದಾಹ ಹಾಗೂ ಅನಿರ್ಭಂಧಿತ ಮುಕ್ತ ಮಾರುಕಟ್ಟೆಯು ಅಲ್ಲಿನ ಪ್ರಭುತ್ವದ ನಿಯಂತ್ರಣ ಪರಿಧಿಯಿಂದ ದೂರ ಉಳಿದದ್ದೇ ಎಂದು ಈಗಾಗಲೇ ವಿಶ್ಲೇಷಿಸಲಾಗಿದೆ. ಅಲ್ಲಿ ಗೃಹಸಾಲ ನೀಡುತ್ತಿದ್ದ ಖಾಸಗೀ ಸಂಸ್ಥೆಗಳು ತಮಗೆ ಅಡವಿಡಲಾಗುವ ಸ್ಥಿರಾಸ್ತಿಯ ಮೌಲ್ಯವನ್ನು ಊಹಾತ್ಮಕವಾಗಿ ಹೆಚ್ಚಿಸಿ ಅರ್ಜಿದಾರನ ಸಾಲ ವಾಪಸಾತಿಯ ಅರ್ಹತೆಗಳನ್ನು ಲೆಕ್ಕಿಸದೇ ಸಾಲ ನೀಡಿದವು. ಸರ್ಕಾರದ ನಿಯಂತ್ರಣ ಪರಿಧಿಯನ್ನು- ಅವು ಬರಿಯ ಕಾಗದದ ಹುಲಿಗಳು-ಬೇಕೆಂತಲೇ ಕಣ್ತಪ್ಪಿಸಿ ಹೂಡಿಕೆದಾರರನ್ನು ಪುಸಲಾಯಿಸಿ ಸಾರ್ವಜನಿಕ ಬಂಡವಾಳ ಸಂಗ್ರಹಿಸಲಾಯಿತು. ಯಾವಾಗ ಸ್ತಿರಾಸ್ಥಿಯ ಮಾರುಕಟ್ಟೆ ಮೌಲ್ಯ ಸರಿಯಾಗಿ ಅಳೆಯಲಾಯಿತೋ ಆವಾಗ ಹೀಗೆ ಊಹಾತ್ಮಕವಾಗಿ ಆಕಾಶದೆತ್ತರಕ್ಕೆ ಜಿಗಿದಿದ್ದ ಈ ಖಾಸಗೀ ಹಣಕಾಸು ಸಂಸ್ಥೆಗಳ ಶೇರು ಬೆಲೆ ನೆಲ್ಲ ಕಚ್ಚ ತೊಡಗಿದವು. ಮೊದಲೇ ಹೀಗಾಗಬಹುದೆಂದು ಅರಿತಿದ್ದ ದೈತ್ಯರು ವಹಿವಾಟಿನಿಂದ ದೂರ ಉಳಿಯತೊಡಗಿದ ಕಾರಣ ಪರಿಸ್ಥಿತಿ ಮತ್ತಷ್ಟು ಹದ ಕೆಟ್ಟಿತು. ಪರಿಣಾಮ ಈ ಖಾಸಗಿಯವರ ಹುಚ್ಚಾಟಗಳ ಮೇಲೆ ಬಂಡವಾಳ ಹೂಡಿದ್ದವರೆಲ್ಲ ಪಾತಾಳಕ್ಕೆ ಬಿದ್ದರು. ಲಾಭಕ್ಕಿಂತಲೂ ಬರಿಯ ಕೈ ಬದಲಾವಣೆಯನ್ನೇ ನಂಬಿಕೊಂಡಿದ್ದ ಅದೆಷ್ಟೋ ಚಿಕ್ಕ ಪುಟ್ಟ ಕಂಪನಿಗಳು ಬಾಗಿಲು ಹಾಕಿಕೊಂಡವು. ಅವು ಜಾಗತಿಕ ಮಾರುಕಟ್ಟೆಯ ಹಲವು ಸ್ತರಗಳಲ್ಲಿ ಹೂಡಿದ್ದ ಅಥವ ಈಗಾಗಲೇ ಅಲ್ಪಸ್ವಲ್ಪ ಮುಂಗಡ ಕೊಟ್ಟು ಕಾದಿರಿಸಿದ್ದ ವ್ಯವಹಾರಗಳನ್ನೆಲ್ಲ ಅರ್ಧಕ್ಕೇ ಬಿಟ್ಟವು. ಪರಿಣಾಮ ಅಮೆರಿಕವನ್ನೇ ನಂಬಿಕೊಂಡಿರುವ ಸಾಫ್ಟ್ವೇರ್ ಪ್ರಪಂಚ ಅಲ್ಲಾಡತೊಡಗಿತು.&lt;br /&gt;&lt;br /&gt;ಒಂದು ಅಂದಾಜಿನಂತೆ  ಒಂದು ಟ್ರಿಲಿಯನ್ ಅಮೆರಿಕನ್ ಡಾಲರ್ ಹಣ ಈ ಜಾಗತಿಕ ಕುಸಿತದಿಂದಾಗಿ ಕೊಚ್ಚಿಹೋಗಿದೆ. ಬೇರ್ಸ್ಟರ್ನ್, ಎಐಜಿ, ಅವಿವಾ, ಫೋರ್ಟಿಸ್ ಇನ್ನೂ ಮುಂತಾದ ಹೂಡಿಕೆ, ಬ್ಯಾಂಕಿಂಗ್ ಮತ್ತು ವಿಮಾ ವ್ಯವಹಾರದ ಕಂಪೆನಿಗಳು ಮತ್ತೆ ತಲೆ ಎತ್ತಲಾರದ ದುರವಸ್ಥೆ ತಲುಪಿದವು. ಅಮೆರಿಕದ ಸರ್ಕಾರ ನಷ್ಟ ಪೀಡಿತ ಹಣಕಾಸು ಸಂಸ್ಥೆಗಳಿಗೆ, ಬ್ಯಾಂಕ್ ಮತ್ತು ವಿಮಾ ಕಂಪನಿಗಳಿಗೆ ೭೦೦ ಬಿಲಿಯನ್ ಡಾಲರ್ ನೆರವು ಘೋಷಿಸಿ ಅವುಗಳ ನೆರವಿಗೆ ನಿಂತಿದೆ. ಎಐಜಿ ಕಂಪನಿಯ ೭೯.೯% ಶೇರುಗಳನ್ನು ಸರ್ಕಾರವೇ ಖರೀದಿಸಿ ಅದಕ್ಕೆ ೮೫ ಬಿಲಿಯನ್ ಡಾಲರ್ ನೆರವು ಕೊಟ್ಟಿದೆ. ಬ್ಯಾಂಕ್ ಆಫ್ ಅಮೆರಿಕ ಮೆರಿಲ್ ಲಿಂಚ್ ಕಂಪನಿಯನ್ನು ವಶಪಡಿಸಿಕೊಂಡಿದೆ. ಬ್ರಿಟನ್ ಸರ್ಕಾರವಂತೂ ಖಾಸಗೀ ಬ್ಯಾಂಕುಗಳನ್ನೆಲ್ಲ ತನ್ನ ಸುಪರ್ದಿಗೆ ತೆಗೆದುಕೊಂಡು ಪುನಃ ರಾಷ್ಠ್ರೀಕರಣದ ಕೆಲಸಕ್ಕೆ ಕೈ ಹಾಕಿದೆ. &lt;br /&gt;&lt;br /&gt;ಪರಿಸ್ಥಿತಿ ಹೀಗಿರುವಾಗ ಲಜ್ಜರಹಿತವಾದ ಮತ್ತು ಅಮೆರಿಕದ ಅಣತಿಗೆ ತಕ್ಕಂತೆ ಕುಣಿಯುತ್ತಿರುವ  ಮನಮೋಹನ್ ಸಿಂಗ್ ಪ್ರಣೀತ ಉದಾರವಾದೀ ಸರ್ಕಾರ ಲೋಕಸಭೆ ಮತ್ತು ರಾಜ್ಯಸಭೆಗಳ ಕಲಾಪದಲ್ಲಿ ವಿಮಾ ಮಸೂದೆಗೆ ತಿದ್ದುಪಡಿ ತರುವ ಅಧಿಸೂಚನೆ ಮಂಡಿಸಿದೆ. ಹೊಸ ವಿಧೇಯಕದ ಪ್ರಕಾರ ವಿಮಾ ವಲಯದಲ್ಲಿ ಖಾಸಗೀ ಬಂಡವಾಳ ಹೂಡಿಕೆ ೪೯% ಕ್ಕೆ ಏರುತ್ತದೆ. ಮತ್ತು ಸಾರ್ವಜನಿಕ ರಂಗದ ವಿಮಾ ಸಂಸ್ಥೆ ಎಲ್ಲೈಸಿಯ ಬಂಡವಾಳವನ್ನು ಈಗಿರುವ ೫ ಕೋಟಿಗಳಿಂದ ೧೦೦ ಕೋಟಿಗಳಿಗೆ ಹೆಚ್ಚಿಸಿ ಸಾರ್ವಜನಿಕವಾಗಿ ಅದನ್ನು ಸಂಗ್ರಹಿಸಲಾಗುತ್ತದೆ. ಅಂದರೆ ಅದನ್ನು ಖಾಸಗಿಯವರಿಗೆ ಹಂತಹಂತವಾಗಿ ಬಿಟ್ಟುಕೊಡಲಾಗುತ್ತದೆ. ಮೇಲ್ನೋಟಕ್ಕೆ ಇದೊಂದು ಉದಾರವಾದೀ ಸರ್ಕಾರದ ಧೃಢ ಹೆಜ್ಜೆಯಂತೆ ಮತ್ತು ಬಂಡವಾಳವನ್ನು ಆಕರ್ಷಿಸುವ ಯೋಜನೆಯಂತೆ ಕಂಡರೂ ಇದೂ ಅಮೆರಿಕದ ಕನಸನ್ನು ನನಸಾಗಿಸುವ ದುರುದ್ದೇಶ ಹೊಂದಿರುವ ಮತ್ತು ಈ ದೇಶದ ಅಸಂಖ್ಯಾತ ಜನರು ಸಾರ್ವಜನಿಕ ಸಂಸ್ಥೆಗಳ ಮೇಲೆ ಇಟ್ಟಿರುವ ಅಚಲ ವಿಶ್ವಾಸವನ್ನೇ ಪ್ರಶ್ನಿಸುತ್ತಿರುವ ವಿಧೇಯಕವಾಗಿದೆ. ಸರ್ಕಾರದ ಪಂಚವಾರ್ಷಿಕ ಯೋಜನೆಗಳೂ ಸೇರಿದಂತೆ ದೇಶದ ಬಹುತೇಕ ನೀರಾವರಿ, ಸಾರಿಗೆ ಮತ್ತು ವಿದ್ಯುತ್ ಯೋಜನೆಗಳಿಗೆ ಹಣಕಾಸು ನೆರವು ನೀಡುತ್ತಿದ್ದ ಬೃಹತ್ ಉದ್ಯಮವೊಂದು ಖಾಸಗಿಯವರ ಪಾಲಾದರೆ ದೇಶದ ಆರ್ಥಿಕತೆಯ ಮೇಲಾಗುವ ಪರಿಣಾಮಗಳು ಒಂದೆರಡಲ್ಲ. ಮುಖ್ಯವಾಗಿ ಜಾಗತಿಕ ವಿಮಾವಲಯದಲ್ಲಿ ತಾವೇ ದೈತ್ಯರೆಂದು ಬಿಂಬಿಸಿಕೊಳ್ಳುವ ಎಐಜಿ, ಪ್ಯುಡೆನ್ಶಿಯಲ್, ಅವಿವಾ ಈಗಾಗಲೇ ನಷ್ಟದ ಭರದಿಂದ ಕುಸಿದು ಕೂತಿದ್ದರೂ ಈ ನೆಲದಲ್ಲಿ ಈಗಾಗಲೇ ಕಾಲಿಟ್ಟಿರುವುದರಿಂದ ಸಾರ್ವಜನಿಕ ಸಂಸ್ಥೆಯೊಂದು ಇಷ್ಟು ದಿನಗಳ ಕಾಲ ಸಂಗ್ರಹಿಸಿರುವ ದೊಡ್ಡ ಮೊತ್ತದ ‘ಲೈಫ್ ಫಂಡ್’ ಮತ್ತು ವಿಶ್ವಾಸದ ಜಾಲವನ್ನು ಬೇಧಿಸಿ ಲಾಭಬಡುಕತನದ ಪೈಪೋಟಿಯ ಮೂಲಕ ಹುಚ್ಚು ಹಿಡಿಸುತ್ತವೆ. ಲಾಭದ ಆಸೆಗೆ ಬಿದ್ದ ಗ್ರಾಹಕರು ಅರಿವು ಪಡೆಯುವುದರೊಳಗಾಗಿ ತಮ್ಮ ಕಷ್ಟಾರ್ಜಿತವನ್ನೆಲ್ಲ ಕಳೆದುಕೊಂಡಿರುತ್ತಾರೆ. ಶೇರು ಮಾರುಕಟ್ಟೆಯೆಂಬ ಮಾಯಾಮೋಹಿನಿಯ ಪಾಶದ ಜೂಜಿಗೆ ಬಿದ್ದ ಸಾಮಾನ್ಯ ಹೂಡಿಕೆದಾರ ತನ್ನದೆಲ್ಲವನ್ನೂ ಕಳೆದುಕೊಳ್ಳುತ್ತಾನೆ.  &lt;br /&gt;&lt;br /&gt;ಖಾಸಗೀ ಕಂಪನಿಗಳ ಕೆಲ ಸ್ವಾರಸ್ಯಗಳು: &lt;br /&gt;1.AIG (ಟಾಟಾ ಕಂಪನಿಯ ಸಹಯೋಗಿ) ದಿವಾಳಿ ಘೋಷಿಸಲು ಕೆಲವೇ ಗಂಟೆಗಳ ಮೊದಲು ಅಮೆರಿಕದ ಸರ್ಕಾರ ಕೊಡಮಾಡಿದ ೮೫ ಬಿಲಿಯನ್ ಡಾಲರ್ ಮೂಲಕ ಕೃತಕ ಉಸಿರಾಟ ಪಡೆಯಿತು.&lt;br /&gt;೨. ಪ್ಯುಡೆನ್ಶಿಯಲ್ ದಾವೆ ಕೊಡಲಾಗದೇ ತನ್ನನ್ನು ತಾನು ದಿವಾಳಿ ಎಂದು ಘೋಷಿಸಿಕೊಂಡಿದ್ದ ಇತಿಹಾಸ ಹೊಂದಿದೆ.&lt;br /&gt;೩. ಫೋರ್ಟಿಸ್ ತನ್ನೆಲ್ಲ ಹಕ್ಕುಗಳನ್ನು ಯೂರೋಪಿನ ಮೂರು ದೇಶಗಳಿಗೆ ಮಾರಿಕೊಂಡಿದೆ.&lt;br /&gt;೪.   ING ಮತ್ತು aegon ಕಂಪೆನಿಗಳಿಗೆ ಡಚ್ ಸರ್ಕಾರ ಹಣಕಾಸು ಸಹಾಯ ವಿಸ್ತರಿಸಿ ಬೆಂಬಲಿಸಿದೆ.&lt;br /&gt;೫. ಅಮೆರಿಕ, ಯೂರೋಪ್, ಜಪಾನ್ ದೇಶಗಳಲ್ಲಿ ವಿಮಾ ವಹಿವಾಟು ಋಣಾತ್ಮಕವಾಗುತ್ತಿದೆ.&lt;br /&gt;&lt;br /&gt;ಜಾಗತಿಕ ಸ್ಥಿತಿ ಹೀಗಿರುವಾಗ ಮುಕ್ತ ಮಾರುಕಟ್ಟೆಯ ಉದಾರೀಕರಣ ನೀತಿ ವಿಫಲವಾಗಿರುವ ಉದಾಹರಣೆ ಕಣ್ಣೆದುರೇ ಇರುವಾಗ ಅಲ್ಲದೇ ಅಮೆರಿಕಾ, ಯೂರೋಪ್, ಡಚ್ ಸರ್ಕಾರಗಳು ತಮ್ಮ ದೇಶದ ಕಂಪನಿಗಳು ದಿವಾಳಿಯಾಗುವುದನ್ನು ತಪ್ಪಿಸಲು ಅವನ್ನೆಲ್ಲ ಕೊಂಡು ಕೊಂಡು ರಾಷ್ಟ್ರೀಕರಣ ಮಾಡುತ್ತಿರುವ ವರ್ತಮಾನದಲ್ಲಿ ನಮ್ಮ ದೇಶದ ನೇತಾರರು ನಮ್ಮ ಸಾರ್ವಜನಿಕ ವಲಯವನ್ನು ಖಾಸಗಿಗೊಳಿಸುವ ವಿಧೇಯಕವನ್ನು ಮಡಿಸುತ್ತಿದ್ದಾರೆ. ಆ ಮೂಲಕ ಅಮೆರಿಕದ ದುರುದ್ದೇಶಗಳನ್ನು ಈ ದೇಶದ ಸಾಮಾನ್ಯ ಜನತೆಯ ಮೇಲೆ ಹೇರುತ್ತಿದ್ದಾರೆ.  ಸದ್ಯದ ಪರಿಸ್ಥಿತಿಯಲ್ಲಿ ಜಾಗತಿಕ ಬಿಕ್ಕಟ್ಟಿನ ಪರಿಣಾಮ ನಮ್ಮ ಅರ್ಥ ವ್ಯವಸ್ಥೆಯ ಮೇಲಾಗದಂತೆ ನಮ್ಮ ಸಾರ್ವಜನಿಕ ರಂಗವನ್ನು ಬಲಪಡಿಸಬೇಕಿತ್ತು. ಅದು ಬಿಟ್ಟು ನಷ್ಟದಲ್ಲಿರುವ ವಿದೇಶೀ ಕಂಪನಿಗಳಿಗೆ ನಡೆಮುಡಿ ಹಾಸುತ್ತಿರುವ ಕಾರಣವಾದರೂ ಏನು? ಜಾಗತಿಕ ಹಣಕಾಸು ಬಂಡವಾಳ ಅಂದರೆ ಅಮೆರಿಕದ ಪ್ರಾಬಲ್ಯ ಮತ್ತು ಇಷ್ಟಾರ್ಥವನ್ನು ಪೂರೈಸಲು ದೇಶದ ಆರ್ಥಿಕ ಹಿತಾಸಕ್ತಿಯನ್ನು ಬಲಿಕೊಡಲು ಈ ಸರ್ಕಾರ ಹೊರಟಿದೆ. &lt;br /&gt;&lt;br /&gt;ಇನ್ನು ಕೆಲವೇ ದಿನಗಳ ತನ್ನ ಆಯುಷ್ಯ ಹೊಂದಿರುವ ಈ ಸರ್ಕಾರ ಜನ ವಿರೋಧಿ ಮತ್ತು ದೇಶದ ಆರ್ಥಿಕ ಭದ್ರತೆಗೆ ವಿರುದ್ಧವಾದ ಈ ಸನ್ನದನ್ನು ಪ್ರಕಟಿಸುವ ಉದ್ದೇಶವಾದರೂ ಏನು? ನಮ್ಮ ಎಷ್ಟು ಜನ  ಲೋಕಸಭಾಸದಸ್ಯರಿಗೆ/ ರಾಜ್ಯ ಸಭಾ ಸದಸ್ಯರಿಗೆ ಭವಿಷ್ಯದ ಚಿಂತೆ ಇದೆ? ಎಷ್ಟು ಜನರಿಗೆ ಸಮಸ್ಯೆಯ ಅರಿವಿದೆ? ಅದನ್ನು ನಾವು ಅವರಿಗೆ ತಿಳಿಸಿ ಹೇಳಬೇಕಿದೆ. ಸಮೂಹ ಮಾಧ್ಯಮಗಳ ಮೂಲಕ ಜನಸಾಮಾನ್ಯರಿಗೆ ಪರಿಸ್ಥಿತಿಯನ್ನು ವಿವರಿಸುವ ಕೆಲಸ ಈಗ ಜರೂರಾಗಿ ಆಗಬೇಕಿದೆ.  ಮತ್ತು ನಮ್ಮ ಮುದ್ರಣ ಮಾಧ್ಯಮವೂ ಸಮಸ್ಯೆಯನ್ನು ಕೂಲಂಕುಷವಾಗಿ ಅವಲೋಕಿಸುವ ಮತ್ತು ವಿಶ್ಲೇಷಿಸುವುದೂ ಅತ್ಯಗತ್ಯ ಮಾಡಲೇ ಬೇಕಾದ ಕೆಲಸವಾಗಿದೆ.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/5254102750204147054-5831415399536643374?l=bemkikaddi.blogspot.com' alt='' /&gt;&lt;/div&gt;</content><link rel='replies' type='application/atom+xml' href='http://bemkikaddi.blogspot.com/feeds/5831415399536643374/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://www.blogger.com/comment.g?blogID=5254102750204147054&amp;postID=5831415399536643374' title='0 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/5254102750204147054/posts/default/5831415399536643374'/><link rel='self' type='application/atom+xml' href='http://www.blogger.com/feeds/5254102750204147054/posts/default/5831415399536643374'/><link rel='alternate' type='text/html' href='http://bemkikaddi.blogspot.com/2009/01/blog-post_01.html' title='ವಿಮಾ ರಂಗದ ಮೇಲೆ ಉದಾರೀಕರಣದ ಕರಿ ನೆರಳು'/><author><name>ಬೆಂಕಿಕಡ್ಡಿ</name><uri>http://www.blogger.com/profile/13181705369161334860</uri><email>noreply@blogger.com</email><gd:image rel='http://schemas.google.com/g/2005#thumbnail' width='21' height='32' src='http://4.bp.blogspot.com/_bUAIZF0Yo1g/TKdTK-6rv2I/AAAAAAAAAJY/QXUJAVKh9ps/S220/dsr4.jpg'/></author><thr:total>0</thr:total></entry><entry><id>tag:blogger.com,1999:blog-5254102750204147054.post-2269608176153361998</id><published>2008-12-27T21:37:00.000+05:30</published><updated>2008-12-27T21:39:31.186+05:30</updated><title type='text'>ನಾಯಿ ಸಾಕುವ ನಾಯಿ ಪಾಡು....</title><content type='html'>‘ನಾಯಿ ಮನೆಕಾಯುತ್ತದೆ. ತಂಗಳನ್ನೂ ಅಮೃತವೆನ್ನುವಂತೆ ಉಣ್ಣುತ್ತದೆ. ಎಂದೆಂದೂ ಮನೆಯ ಸುತ್ತಳತೆಯಲ್ಲೇ ಇದ್ದು ಹೋಗಿ ಬರುವವರ ನಿಗ ನೋಡುತ್ತದೆ. ಬೇಜಾರಿನ ಘಳಿಗೆಗಳಲ್ಲಿ, ಸಂತಸದ ಸಂದರ್ಭಗಳಲ್ಲೂ ಮನೆಯ ಯಜಮಾನನ ಕಾಲ ಬುಡದಲ್ಲೇ ಇದ್ದು ಆ ಕ್ಷಣಗಳ ಸಾಕ್ಷಿಯಾಗುತ್ತದೆ....’ &lt;br /&gt;&lt;br /&gt;ನಾಯಿಯ ಮೇಲೆ ಪ್ರಬಂಧ ಬರೆಯಲು ತಿಣುಕುತ್ತಿದ್ದ ನನ್ನ ಚಿಕ್ಕ ಮಗನಿಗೆ ಇಷ್ಟು ವಿವರ ಕೊಟ್ಟದ್ದೇ ತಪ್ಪಾಗಿಬಿಟ್ಟಿತು. ಪ್ರಬಂಧ ಬರೆಯುವುದನ್ನು ಅಷ್ಟಕ್ಕೇ ಬಿಟ್ಟವನೇ ತನಗೊಂದು ನಾಯಿಮರಿ ಬೇಕೇ ಬೇಕೆಂದು ಹಟ ಹಿಡಿದು ಕುಳಿತು ಬಿಟ್ಟ. ಸಾಮ, ಬೇಧ, ಮುಗಿದು ದಂಡನೆಯ ತುರೀಯಕ್ಕೆ ನಾನಿಳಿದರೂ ಅವನು ಜಪ್ಪಯ್ಯ ಅನ್ನದೇ ನಾಯಿಯ ಧ್ಯಾನದಲ್ಲೇ ಊಟ, ತಿಂಡಿಗಳನ್ನು ಬಿಟ್ಟು ಸತ್ಯಾಗ್ರಹದ ಹಾದಿ ತುಳಿದ. ಎಷ್ಟಾದರೂ ಹೆತ್ತ ಕರುಳು. ಇವಳೂ ಮಗನ ಪರವಾಗಿ ನಿಂತಳು. ಇಷ್ಟೂ ದಿನ ನನ್ನೆದುರು ನಿಲ್ಲಲೂ ಹೆದರುತ್ತಿದ್ದ ನನ್ನ ಮಗಳೂ ತಮ್ಮನ ಪರವಾಗಿ ವಾದಿಸತೊಡಗಿದಳು. &lt;br /&gt;&lt;br /&gt;ಹೀಗೆ ಮನೆಯವರೆಲ್ಲರೂ ನಾಯಿಯೊಂದನ್ನು ತಂದು ಸಾಕುವುದಕ್ಕೆ ತುದಿಗಾಲಲ್ಲಿರುವಾಗ ನನ್ನ ಎಲ್ಲ ಮಾತುಗಳೂ ಅವರನ್ನು ತಡೆಯಲು ವಿಫಲವಾದುವು. ನಾಯಿ ಸಾಕುವುದಕ್ಕೆ ನನ್ನ ವಿರೋಧ ಇರದಿದ್ದರೂ ಅದರಿಂದಾಗಬಹುದಾದ ಹೆಚ್ಚಿನ ಕೆಲಸ ಮಾಡುವವರು ಯಾರೆಂಬುದು ನನಗೆ ಮುಖ್ಯವಾಗಿತ್ತು. ನಾಯಿ ಸಾಕುವುದು ಅಂದರೆ ಬೀದಿಯ ದೊಡ್ಡ ನಾಯಿಯನ್ನು ಕುರು ಕುರು ಅಂದು ಕರೆದು ಮಿಕ್ಕಿದ ಅನ್ನ ಹಾಕುವ ಹಾಗಲ್ಲ. ಮರಿಯೊಂದನ್ನು ತಂದು ಅದು ದೊಡ್ಡದಾಗುವವರೆಗೂ ಕಾಪಾಡುವುದು ಎಷ್ಟು ಕಷ್ಟದ ಕೆಲಸ ಅಂತ ಅನುಭವಿಸೇ ತಿಳಿಯಬೇಕು. ಅದಕ್ಕೂ ಸ್ನಾನ ಮಾಡಿಸಬೇಕು. ಜಡ್ಡಾದಾಗ ಆಸ್ಪತ್ರೆಗೆ ಒಯ್ಯಬೇಕು. ಎಲ್ಲಕ್ಕಿಂತ ಹೆಚ್ಚಾಗಿ ಬೆಳಗ್ಗಿನ ಸಿಹಿ ನಿದ್ದೆಯನ್ನು ತ್ಯಜಿಸಿ, ನಾಯಿಯನ್ನು ತಪ್ಪದೇ ಬಯಲಿಗೆ ಕರೆದೊಯ್ಯಬೇಕು. ಗಲೀಜಾದರೆ ಕರ್ಮವೆಂದು ತಿಳಿದು ಬಾಚಿ ಒಗೆಯಬೇಕು. ಮನೆಗೆ ಬಂದ ನೆಂಟರನ್ನೋ, ಪೇಪರು-ಹಾಲಿನ ಹುಡುಗನನ್ನೋ ಅಪ್ಪಿ, ತಪ್ಪಿ ಕಚ್ಚಿದರೆ ದಂಡ ತುಂಬಿಕೊಡಲು ಸದಾ ಸಿದ್ಧವಾಗಿರಬೇಕು. &lt;br /&gt;&lt;br /&gt;ನನ್ನ ಮಾತುಗಳನ್ನು ಹೆಂಡತಿ ಮಕ್ಕಳು ಕೇಳಲೇ ಇಲ್ಲ. ಯಾರ ಮನೆಯಲ್ಲಿ ತಾನೇ ಕೇಳುತ್ತಾರೆ? ಜಾತಿ ನಾಯಿ ತಂದರೆ ಅದಕ್ಕೆ ಮಾಂಸ, ಮೊಟ್ಟೆ ಕೊಡಬೇಕಾಗುತ್ತದದೆಂಬ ಕಾರಣಕ್ಕೆ ಕಂತ್ರಿ ಜಾತಿಯ ಮರಿಯನ್ನೇ ಮನೆ ತುಂಬಿಸಿಕೊಳ್ಳಲು ನನ್ನ ಹೆಂಡತಿ ಮಕ್ಕಳಿಗೆ ಸೂಚಿದಳು. ಜಾತಿ ನಾಯಿಯ ಮರಿಗೆ ಸಾವಿರಗಟ್ಟಲೇ ಸುರಿಯುವ ಅಪಾಯ ಸ್ವಲ್ಪದರಲ್ಲಿ ಕಳೆಯಿತು. ಆದರೆ ಶಾಲೆಯಿಂದ ಬಂದ ಕೂಡಲೇ ನನ್ನ ಮಗ ನಾಯಿ ಮರಿ ಹುಡುಕಿಕೊಂಡು ಬೀದಿ, ಬೀದಿ ಸುತ್ತುತ್ತಿದ್ದಾನೆಂದು ಮಗಳು ವರದಿ ಮಾಡಿದಳು. ಹೋಂ ವರ್ಕನ್ನು ಮಾಡದೇ, ಯೂನಿಫಾರಂ ಬದಲಿಸದೇ, ಅನ್ನ ನೀರುಗಳ ಮೋಹ ಕಳೆದುಕೊಂಡು ತಿರುಗುತ್ತಿರುವ ಮಗನ ಬಗ್ಗೆ ಮರುಕ ಹುಟ್ಟಿತು. ಇದು ನಾಯಿ ಮರಿ ಸಿಕ್ಕುವ ಕಾಲ ಅಲ್ಲ, ಆ ಕಾಲ ಬಂದಾಗ ಬೀದಿ ಬೀದಿಗಳಲ್ಲಿ ಬಿಟ್ಟಿ ತಿರುಗುತ್ತಿರುತ್ತವೆ ಅಂತ ಅವನಿಗೆ ಹೇಳಿ, ಹೇಳಿ ಸಾಕಾಯಿತೇ ವಿನಾ ಅವನನ್ನು ನಾಯಿ ಧ್ಯಾನದಿಂದ ಬಿಡಿಸಲಾಗಲಿಲ್ಲ. ಆಸ್ಪತ್ರೆಗಳಲ್ಲಿ ಎಲ್ಲ ಕಾಲಗಳಲ್ಲೂ ಮಕ್ಕಳು ಹುಟ್ಟುತ್ತಲೇ ಇರುತ್ತವೆ. ನಾಯಿಯೂ ಸಿಕ್ಕಬಹುದು. ಆಸ್ಪತ್ರೆಯಿಂದಲೇ ತರೋಣ ಅನ್ನುವ ಅವನ ವಾದಕ್ಕೆ ಉತ್ತರ ಗೊತ್ತಾಗದೇ ಸುಮ್ಮನಾದೆ.  &lt;br /&gt;&lt;br /&gt;ಅಂತೂ ಇಂತೂ ನಾಯಿ ಮರಿ ಸಿಕ್ಕಿದ್ದೇ ಮತ್ತೊಂದು ಕಥೆ. ತಮ್ಮ ಮನೆಯ ನಾಯಿ ಆರು ಮರಿಗಳನ್ನು ಈದಿದೆ ಅಂತ ನಮ್ಮ ಆಫೀಸಿನ ಪ್ಯೂನ್ ಸಿದ್ದಯ್ಯ ಒಂದು ಗಂಟೆ ಮೊದಲೇ ಮನೆಗೆ ಹೋಗಲು ನನ್ನ ಪರ್ಮಿಷನ್ ಕೇಳಿದ. ಬಾಣಂತಿ ಮಕ್ಕಳನ್ನು ನೋಡಲು ಓಣಿಯ ಹುಡುಗರೆಲ್ಲ ಸೇರಿ ಗದ್ದಲ ಮಾಡುವುದನ್ನು ಕಣ್ಣಿಗೆ ಕಟ್ಟುವ ಹಾಗೆ ವಿವರಿಸಿದ. ಆರು ಮರಿಗಳಲ್ಲಿ ಈಗಾಗಲೇ ಮೂರು ಗಂಡುಮರಿಗಳನ್ನು ಅವರ ನೆಂಟರು ತಮಗೆ ಕೊಡಲೇ ಬೇಕೆಂದು ಕೇಳಿದ್ದಾರೆಂದೂ ಸೇರಿಸಿದ.  ಮರುಕ್ಷಣವೇ ನನ್ನ ಮಗನ ನಾಯಿ ಹಂಬಲ ನೆನಪಾಗಿ, ನಮಗೊಂದು ಮರಿಯನ್ನು ಕೊಡಬೇಕೆಂದು ಕೇಳಿದೆ. ಪ್ರಾಣಿ, ಪಕ್ಷಿಗಳ ಮೇಲೆ ಅಷ್ಟೇನೂ ಒಲವಿರದ ನನ್ನ ಬೇಡಿಕೆಗೆ ಸಿದ್ದಯ್ಯ ತಕ್ಷಣವೇ ಒಪ್ಪಿಗೆ ಕೊಟ್ಟುದುದಲ್ಲದೇ ಅದರ ನಿಗ ನೋಡುವುದರಲ್ಲಿ ತಾನೂ ಸಹಾಯ ಮಾಡುವುದಾಗಿ ಮಾತು ಕೊಟ್ಟ. ಮತ್ತು ನಾಯಿ ಸಾಕುವ ನನ್ನ ಮಗನ ನಿರ್ಧಾರವನ್ನು ಮನಸಾರೆ ಹೊಗಳಿದ.&lt;br /&gt;&lt;br /&gt;ನಾಯಿಮರಿಯ ಅಡ್ರೆಸೇನೋ ಸಿಕ್ಕಿತು. ಆದರೆ ಅದನ್ನು ಮನೆಗೆ ತರುವ ಬಗ್ಗೆ ಈಗ ಯೋಚನೆ ಸುರುವಾಯಿತು. ಜೊತೆಗೆ ನನಗೆ ಸಿದ್ದಯ್ಯನ ಮನೆಯೂ ಗೊತ್ತಿರದ ಕಾರಣ ಸಿದ್ದಯ್ಯನನ್ನೇ ಮತ್ತೆ ಪುಸಲಾಯಿಸಬೇಕಾಗಿ ಬಂತು. ನಾಯಿ ಮರಿಯನ್ನು ಮನೆಗೆ ತರುವ ಸಂತೋಷದಲ್ಲಿ ನನ್ನ ಮಗ ಈಗಾಗಲೇ ತಾನು ದುಡ್ಡು ಕೂಡಿಡುವ  ಹಂದಿ ಬೊಂಬೆಯ ಬಾಯಿಯಿಂದ ಹಲವು ರೂಪಾಯಿಗಳನ್ನು ಕಕ್ಕಿಸಿ ಕ್ಯಾಡ್ ಬರೀಸ್ ಚಾಕಲೇಟುಗಳನ್ನು ಕೊಂಡು ತಂದು ಬೀದಿಯ ಮಕ್ಕಳಿಗೆಲ್ಲ ಹಂಚಿಬಿಟ್ಟಿದ್ದ. ಇನ್ನು ತಡ ಮಾಡುವುದು ಬೇಡವೆಂದು ಮಾರನೇ ದಿನವೇ ಕಾರಿನಲ್ಲಿ ಮಗ ಮತ್ತು ಮಗಳನ್ನಲ್ಲದೇ ಈಗಾಗಲೇ ನಾಯಿ ಸಾಕಿದ ಅನುಭವವಿರುವ ಮಗಳ ಕ್ಲಾಸ್ ಮೇಟ್ ಅನಿತಾಳನ್ನೂ ಕರೆದುಕೊಂಡು ಹೊರಟೆ. &lt;br /&gt;&lt;br /&gt;ಆಗಲೇ ಹಗಲು ಕಳೆದು ರಾತ್ರಿ ಅಡಿ ಇಡುತ್ತಿದ್ದ ಹೊತ್ತು. ಸಿದ್ದಯ್ಯ ಕೊಟ್ಟಿದ್ದ ಅಡ್ರೆಸ್ಸಿಗೆ ಅಂತೂ ಇಂತೂ ತಲುಪಿದರೆ ಆಸಾಮಿ ಅವನೇ ಪತ್ತೆ ಇಲ್ಲ. ಇನ್ನೂ ಆಫೀಸಿಂದ ಬಂದೇ ಇಲ್ಲ ಅಂದ ಅವನ ಕುಲಪುತ್ರ. ಪುಣ್ಯಕ್ಕೆ  ಯಾವಾಗಲೋ ಅಪ್ಪನನ್ನು ಕಾಣಲು ಬಂದವನು ನನ್ನನ್ನು ನೋಡಿದ್ದ. ಅಪ್ಪನ ಆಫೀಸಿನವರು ಎಂಬ ಕಾರಣಕ್ಕೆ ಅವನೂ ನಾಯಿಮರಿಯೊಂದನ್ನು ನಮಗೆ ಕೊಡಲು ಒಪ್ಪಿದ. ಸರಿ. ತಾಯಿ ನಾಯಿಯ ಕಣ್ಣು ತಪ್ಪಿಸಿ ಒಂದು ಪುಟಾಣಿ ಸ್ಮಾರ್ಟ
