ಒಟ್ಟು ಪುಟವೀಕ್ಷಣೆಗಳು

ಬುಧವಾರ, ಆಗಸ್ಟ್ 15, 2012

ಕಾಲ ಕಲಿಸಿದ ಪಾಠ

ಕಾಲ ಕಲಿಸಿದ ಪಾಠ ಹಣ್ಣೆಲೆಯೊಂದು ತೊಟ್ಟು ಕಳಚಿ ಸಂಬಂಧ ತೊರೆದುಕೊಳ್ಳುವಾಗ ಗಗನದಾಚೆಯ ಗಗನಕ್ಕೆ ಮುಖಮಾಡಿ ನಿಂತ ಸ್ಥಾವರದ ಮರ, ಆ ಮರದ ಮೇಲೇ ಸವಾರಿಯೇರಿ ಕೊಂಬೆ ತುದಿಯಲ್ಲಿ ಕೂತ ಜಂಗಮದ ಹಕ್ಕಿ ತಮ್ಮ ತಮ್ಮೊಳಗೇ ಕಳೆದು ಹೋಗಿದ್ದವು. ಗುರುತ್ವಾಕರ್ಷಣೆಗೆ ಸಿಲುಕಿದ ಎಲೆ ಗಾಳಿಯಲೆಗುಂಟ ಇಳಿದು, ಏರಿ ಮತ್ತೆ ಮರು ಕ್ಷಣವೇ ಹೌಹಾರಿ- ದ ಹೊಂಬಣ್ಣದ ಮುದಿಯೆಲೆ ನೇರ ಮರದ ಬುಡಕ್ಕೇ ಬಿತ್ತು. ಅದರ ನರ ಮಂಡಲದಲ್ಲಿ ಬಿಸಿಲ ಝಳದಷ್ಟೇ ಬಿಸಿ ತಾಸೆರಡು ತಾಸೊಳಗೇ ಬಾಡಿ ಮರದ ಬುಡಕ್ಕೆ ಪೊಡಮಟ್ಟಿತು. ದಪ್ಪ ಕಾಂಡ ಬರಸೆಳೆದು ಮಲ್ಲಿಗೆಯಂತೆ ಮೈಗಾನಿಸಿ ಹಿಡಿದು ಕ್ಷೇಮ ವಿಚಾರಿಸಿ ಕುಶಲ ಕೇಳಿತು- ‘ಮುಗಿಯಿತಾಯುಷ್ಯ, ಮುಂದಿಲ್ಲ ಭವಿಷ್ಯ’ ಬಿಕ್ಕಿದೆಲೆಗೆ ಕಾಂಡದ ಸಮಾಧಾನ ‘ಈಗಷ್ಟೇ ಮಾಗಿದ್ದೀ, ಮಣ್ಣೊಳಗೆ ಮಣ್ಣಾಗು ಸಾರ ಹೀರುವ ಬೇರಿಗೆ ಗೊಬ್ಬರವಾಗು ಮತ್ತೆ ಚಿಗುರು, ಎಲೆ, ಹೂ, ಬೀಜ ಸಲ್ಲದು ಕಾಲ ಚಕ್ರದವಜ್ಞೆ, ವ್ಯರ್ಥ ಜಗಳ’ ಆವತ್ತಿನಿಂದ ಹೀಗೆ; ಹಣ್ಣೆಲೆಯುದುರುತ್ತದೆ, ಚಿಗುರು ಮೊಗ್ಗೊಡೆಯುತ್ತದೆ ಹೂವು, ಕಾಯಿ, ಹಣ್ಣು, ಮತ್ತೆ ಹಣ್ಣೆಲೆ,,,, ಈಗ ಸ್ಥಾವರ ಮರದ ಧ್ಯಾನ ಹಾಗೇ ಜಂಗಮ ಹಕ್ಕಿಯ ಜ್ಞಾನ ಎರಡೂ ಹಣ್ಣಾದವರಿಗೆ ಅರ್ಥವಾಗುತ್ತದೆ.

ಕಾಮೆಂಟ್‌ಗಳಿಲ್ಲ: