ಒಟ್ಟು ಪುಟವೀಕ್ಷಣೆಗಳು

ಬುಧವಾರ, ಆಗಸ್ಟ್ 29, 2012

http://epapervijayavani.in/epapermain.aspx?queryed=9&eddate=08%2F25%2F2012

ಮಂಗಳವಾರ, ಆಗಸ್ಟ್ 28, 2012

ಪ್ರಣಯೋನ್ಮಾದದಾಚೆಯ ಅರಿವಿಗೆ ಕಾತರಿಸುವ ‘ಅವನರಿವಲ್ಲಿ’



ಯುವ ಬರಹಗಾರರು ಆಧುನಿಕ ಕನ್ನಡ ಕಾವ್ಯದ ಹೊಸ ವಿಸ್ತರಣಕ್ಕೆ ಕೈ ಹಾಕುತ್ತಿರುವುದರ ಪುರಾವೆಗಳು ಆ ಬರಹಗಾರರ ಕೃತಿಗಳಿಂದ ಮನನ ಮಾಡಿಕೊಡುತ್ತಿರುವ ಸಮಯವಿದು. ಏಕಮುಖಿಯಾಗಿದ್ದ ಕನ್ನಡ ಕಾವ್ಯಕ್ಕೆ ಸಮಕಾಲೀನ ಬದುಕಿನ ಸವಾಲುಗಳನ್ನು ಸಂಕಟಗಳನ್ನು ಸಾಧ್ಯತೆಗಳನ್ನು ತಾವು ಕಂಡುಂಡ ಹಾದಿಯ ಪಲುಕುಗಳನ್ನು ಹೌದೆನ್ನಿಸುವಂತೆ ದಾಖಲಿಸುತ್ತಿರುವ ಈ ಹೊತ್ತಿನ ಬರಹಗಾರರ ಕಾವ್ಯದ ನಡಿಗೆ ಕನ್ನಡ ಕಾವ್ಯಕ್ಕೆ ಹೊಸ ಅನುಸಂಧಾನಗಳನ್ನು, ಸಾಧ್ಯತೆಗಳನ್ನು ಪೋಣಿಸುತ್ತಿದೆ.
ಈಗಾಗಲೇ ತಮ್ಮ ಕವನ ಸಂಕಲನಗಳಿಂದ, ಅನುವಾದಗಳಿಂದ ಖ್ಯಾತರಾಗಿರುವ ಜ.ನಾ.ತೇಜಶ್ರೀ ಅವನರಿವಲ್ಲಿ ಹೆಸರಿನ ಖಂಡ ಕಾವ್ಯ ಪ್ರಕಟಿಸಿದ್ದಾರೆ. ಇತ್ತ ನೀಳ್ಗವಿತೆಯೂ ಅಲ್ಲದ ಅತ್ತ ಮಹಾಕಾವ್ಯವೂ ಅಲ್ಲದ ಖಂಡ ಕಾವ್ಯ ಪರಂಪರೆಗೆ ಮತ್ತೊಂದು ಕೊಂಡಿ ಈ ಕೃತಿಯಿಂದ ಸಾಧ್ಯವಾಗಿದೆ. ಹೊಸಸಂವೇದನೆಗಳಿಗೆ, ತಾಜಾ ಅನುಭವಗಳಿಗೆ, ಸಾಕ್ಷಿಪ್ರಜ್ಞೆಯಾಗಿರುವ ಡಾ.ಯು.ಆರ್.ಅನಂತಮೂರ್ತಿ ಈ ಪುಸ್ತಕಕ್ಕೊಂದು ಸಾರ್ಥಕ ಪ್ರವೇಶವನ್ನು ತಮ್ಮ ಮುನ್ನುಡಿಯಿಂದ ಅಗು ಮಾಡಿದ್ದಾರೆ.

ಸುಮಾರು ಅರವತ್ತು ಪುಟಗಳಿಷ್ಟಿರುವ ಈ ದೀರ್ಘ ಕವಿತೆ ಮೂರು ಭಾಗಗಳಲ್ಲಿ ತೆರೆದುಕೊಂಡಿದೆಯಾದರೂ ಅವೆಲ್ಲವನ್ನೂ ಬೇರೆ ಬೇರೆ ಕವಿತೆಗಳನ್ನಾಗಿಯೂ ಆಸ್ವಾದಿಸಬಹುದು. ಅಂದರೆ ಹಿಂದು ಮುಂದಿನ ಅಡ್ಡಕಗಳಿಲ್ಲದೆಯೂ ಪರಸ್ಪರ ಬೇರೆಯಾಗಿಯೂ ಹಾಗೇ  ಒಂದಾಗಿಯೂ ಇಲ್ಲಿನ ಕವಿತೆಗಳು ಕವಿಯ ಸಂವೇದನೆಯನ್ನು ಓದುಗನಿಗೆ ವರ್ಗಾಯಿಸುವುದರಲ್ಲಿ ಯಶಸ್ವಿಯಾಗಿವೆ. ಹೆಣ್ಣನ್ನು ಭೋಗದ ವಸ್ತುವೆಂದೇ ಭಾವಿಸಿದ್ದ ಗಂಡಿಗೆ ಪ್ರೌಢ ಹೆಣ್ಣೊಬ್ಬಳು ಮುಟ್ಟಿಸಿದ ಸಂಕೇತವಿದು.
ಪ್ರಣಯವನ್ನು ಕುರಿತಂತೆ ಇರುವ ಪ್ರಚಲಿತ ಪ್ರತಿಮೆ, ರೂಪಕಗಳ ಹರಹಿನಿಂದ ಬೇರೆಯಾದ ಆದರೆ ಕಾಯದ ಕಣಕಣವನ್ನೇ ಕವಿತೆಯ ರೂಪಕವನ್ನಾಗಿಸಿರುವ ಕ್ರಮ ಕನ್ನಡಕ್ಕೆ ಅದರಲ್ಲೂ ಹೆಣ್ಣೊಬ್ಬಳ ಅಂತರಗಂಗೆ ಇಷ್ಟೊಂದು ರಭಸವಾಗಿ ಹರಿಯಬಲ್ಲದೆಂಬುದಕ್ಕೂ ಈ ಖಂಡಕಾವ್ಯ ಅಪರೂಪದ ಪುರಾವೆಯಾಗಿದೆ. ಸಾವು ಮತ್ತು ಬದುಕಿನ ನಡುವೆಯ ಲೋಕ ಲೋಲಕವಾದ ಜೀವವೊಂದರ ಯಾತನೆಯು ಈ ಪರಿಯಾಗಿ ಇಷ್ಟೊಂದು ಉನ್ಮಾದವನ್ನು ಉಂಟುಮಾಡಬಹುದೆನ್ನುವ ಪರಿಯೇ ಇಲ್ಲಿ ಕವಿತೆಯಾಗಿ ಅರಳಿದೆ.

ಅವನರಿವಲ್ಲಿ ಎನ್ನುವ ಶೀರ್ಷಿಕೆ ಇಹದ ಇವನಲ್ಲಿ ಅವನನ್ನು ಕಂಡದ್ದಕ್ಕೆ ಸಾಕ್ಷಿಯೊದಗಿಸುತ್ತದೆ. ಇಲ್ಲಿನ ಚಿನ್ನಕ್ಕಿಂತ ಅಲ್ಲಿನ ಚನ್ನನ ಮೋಹಕ್ಕೆ ಬಿದ್ದ ಪರಂಪರೆ ನಮ್ಮದು. ಹಾಗೆಯೇ ಇರುವುದರಲ್ಲಿಯೇ ಇರದುದನ್ನು ಕಲ್ಪಿಸಿಕೊಂಡು ಸಮಾಧಾನಿಯಾಗಿರುವುದೂ ಈ ನೆಲದ ಅನಿವಾರ್ಯ. ಈ ಎರಡರ ನಡುವಿನ ಗೆರೆಯನ್ನು ತೇಜಶ್ರೀ ಇಲ್ಲಿ ಮಾಸಲಾಗಿಸಿದ್ದಾರೆ. ಲೌಕಿಕದ ಅನುಭವದಲ್ಲೇ ಪಾರಮ್ಯವನ್ನು ಗಳಿಸುವುದೆಂದರೆ ಇದೇ ಇರಬೇಕೆಂದು ಕವಯತ್ರಿ ಭಾವಿಸಿದ್ದಾರೆ. ಹಾಗೂ ಅವರ ಭಾವನೆಯನ್ನು ಓದುಗನೂ ಅನುಭವಿಸುತ್ತಾನೆ.

ಯಮುನೆಯ ಅಲೆಯಾಗಿತ್ತು /ನನ್ನೆದೆ ನಿನ್ನೆ ರಾತ್ರಿ ಹಾಗೆ/ ಹಿಂದೆಂದೂ ಅದು /ಢವ ಢವ ಆಡಿರಲಿಲ್ಲ ಎಂದು ಮೊದಲಸಾಲಿನಲ್ಲೇ ಪ್ರಣಯಕ್ಕೆ ಕಾದ ರಾಧೆಯನ್ನು ನೆನಪಿಸುವ ಕವಿತೆ ನನ್ನಸ್ತಿತ್ವಕ್ಕೆ ಸ್ಥಿತಪ್ರಜ್ಞೆ ಒದಗುತ್ತದೆ/ನಾನುಇಲ್ಲವಾಗುತ್ತದೆ/ ನೀನೇ ಎಲ್ಲವಾಗುತ್ತದೆ ಎಂದು ಕೊನೆಗೊಳ್ಳುವಾಗ ಮುಟ್ಟಿಸುವ ಸಂದೇಶ ಪ್ರಣಯಾದಾಚೆಯ ಅದ್ವೈತವನ್ನು ಕುರಿತಲ್ಲದೇ ಬೇರಾನಾಗಿರಲು ಸಾಧ್ಯ? ಮೇಲ್ನೋಟಕ್ಕೆ ಇಡೀ ಕವಿತೆ ಎಲ್ಲ ಪ್ರೇಮ ಕವಿತೆಗಳ ಹಾಗೆ ಗಂಡುಹೆಣ್ಣುಗಳ ಪ್ರಣಯ, ಅಂಗಸುಖ, ಕಾಯುವಿಕೆಯ ವಿರಹವನ್ನು ಕುರಿತಂತೆ ಕಾಣುವುದಾದರೂ ಪುನರೋದಿಗೆ ದಕ್ಕುವುದೆಂದರೆ ಲೌಕಿಕದಾಚೆಯ ಪರಮಸುಖಕ್ಕೆ, ಅದ್ವೈತಕ್ಕೆ, ಅರ್ಧನಾರೀಶ್ವರ ಕಲ್ಪನೆಗೆ ಈ ಕವಿ ಧ್ಯಾನಿಸಿದ್ದಾರೆ ಮತ್ತು ಆ ಸ್ಥಿತಿಯೇ ಎಲ್ಲ ಪ್ರಣಯಿಗಳಿಗೂ ದಕ್ಕಲೆಂದೇ ಕಾತರಿಸಿದ್ದಾರೆ.

ಗಂಡು ಜೋಗಿಯಾಗಿ ಹೆಣ್ಣು ಅಕ್ಕನಾಗಿ ಒದಗಿದರೆ ಆಗಬಹುದಾದ ರೆ ಇಲ್ಲಿನ ಕವಿತೆಯ ಧ್ಯಾನ. ಸೋಲನ್ನೆಂದೂ ಒಪ್ಪಿಕೊಳ್ಳದ ಗಂಡು ಮತ್ತು ಸುಲಭಕ್ಕೆ ತೃಪ್ತಳಾಗದ ಹೆಣ್ಣಿನ ಆಂತರ್ಯ ಇಲ್ಲಿನ ಚಿತ್ರಕ ಶಕ್ತಿ. ಹೇಳುವುದನ್ನು ಗಟ್ಟಿಯಾಗಿ ಹೇಳದೇ ಆದರೆ ಗಂಡನ್ನು ಸೂಕ್ಷ್ಮವಾಗಿ ಛೇಡಿಸಿರುವ ಕವಯತ್ರಿ ಆ ಸೂಕ್ಷ್ಮ ತಕ್ಷಣಕ್ಕೆ ಮತ್ತು ಸುಲಭಕ್ಕೆ ತಾಗದಂತೆ ಎಚ್ಚರವನ್ನೂ ವಹಿಸಿದ್ದಾರೆ. ನನ್ನವಳು ನೀನು, ನನ್ನ ಹೆಣ್ಣು, ನನ್ನ ಪ್ರೇಯಸಿ,/ನನ್ನ ಮಡದಿ... ಬೆಳಕೇ... /-ನಿನ್ನ ಗಂಟಲಿಂದ ಒಸರಿದ ಜೀವರಸಕ್ಕೆ /ಬಾಯೊಡ್ಡಿದೆ ನಾನು, ಸುರಿಯಿತು/ ಧಾರಾಕಾರ ಮಳೆ, ಧನ್ಯಳಾದೆ ಎಂದು ಹೇಳಿದ್ದವಳೇ ನಾನು ಕಾದಿದ್ದು ನಿನ್ನೊಂದು ಮಾತಿಗೆ/ಉತ್ತರವಾಗಿ ಸಿಕ್ಕಿದ್ದು ಬರಿಯ ಮೌನ/ ಮುಖಕ್ಕೆ ಎರಚಿದ್ದು /ನನ್ನದೇ ನಿಟ್ಟುಸಿರಿನ ತುಣುಕುಗಳು/ ನಿನ್ನಾಳದ ವಿರಹ ಬೆಂಕಿ ನನ್ನೊಳಗೆ ಎಂದು ಕಾತರಿಸುತ್ತಾಳೆ. ಪಕ್ಕದಲ್ಲಿ ಇವನಿದ್ದರೂ ಮುಂದುವರಿದು ಗಳಿಗೆ ಗಳಿಗೆಯೂ ನನ್ನೊಳಗೆ /ಹುಚ್ಚುಹೊಳೆಯಂತೆ ಬೊಬ್ಬಿರಿಯುತ್ತಿರುವ /ನೀನೆಂಬ ವಿರಹ/ಲೋಕವನ್ನು ನುಂಗಿ ನೊಣೆದುಬಿಡುತ್ತದೆಯೆನ್ನಿಸುತ್ತಿದೆ ಎನ್ನುವಾಗ ಏನನ್ನು ಕುರಿತು ಕವಿಯ ಧ್ಯಾನವಿದೆ ಎಂದು ಅರಿಯಬಹುದು. ಬಿಡು ಬಿಡು. ಆದದ್ದಾಯಿತು/ಗುಲಗಂಜಿಗೂ ಕಪ್ಪಿನ ದೃಷ್ಟಿಬೊಟ್ಟು/ಸೋಲು-ಗೆಲುವಿನ ಹುಚ್ಚು ಜೂಜಾಟದಲ್ಲಿ /ನನಗೂ ನಿನಗೂ ಕೆಲಸವೇನು? ಎಂದು ಪ್ರಶ್ನಿಸುತ್ತಾರಲ್ಲ ಅದು ಇಹದ ಗಂಡಿಗೋ ಅಥವ ಪರದ ಮೋಹನನಿಗೋ ಓದುಗನೇ ಊಹಿಸಬೇಕು!
ಎಲ್ಲ ತಕರಾರುಗಳ ಬದಿಗೊತ್ತಿ /ಒಂದು ಗಳಿಗೆ ನನ್ನ ಮಗುವಾಗು/ಬಾರೋ, ನಿನ್ನ/ತುಂಟಾಟದಲ್ಲಿ ನೆನಪಿನ ಜೋಕಾಲಿಯನ್ನು / ಹಿಗ್ಗಿಸುತ್ತೇನೆ, ನಾನು ಎನ್ನುವಾಗ ತ್ರಿಮೂರ್ತಿಗಳನ್ನೇ ಮಗುವನ್ನಾಗಿಸಿದ ಅನಸೂಯೆ ಕೂಡ ನೆನಪಾಗುತ್ತಾಳೆ. ಈ ಸಾಲುಗಳ ನಡುವೆಯೇ ಕ್ವಚಿತ್ತಾಗಿ ಬರುವ ಸಾಲು ಇದು ಆಳಕ್ಕೆ ಎಟುಕದ್ದು ಕಡಲು; ಕಣ್ಣುಗಳೊಳಗಿಗೊಂದು ಪ್ರಜ್ಞೆ/ ಕಡಲಿನ ಮಾತೆಂಬುದು ಆಜ್ಞೆ. ಇಲ್ಲಿ ಕವಯತ್ರಿ ಬಳಸಿರುವ ಕಡಲಿನ ಪ್ರತಿಮೆ ಸುಲಭಕ್ಕೆ ಎಟುಕದ ಆಳದ್ದು ಹಾಗೇ ಒಳಗಣ್ಣಿಂದಷ್ಟೇ ಕಾಣಬಹುದಾದ ಪ್ರಜ್ಞೆ.

ಹರಿವಿಗೆ ಕೊನೆಯಿಲ್ಲ/ಅರಿವಿಗೆ ಹೊಸತೆಲ್ಲ;/ಕೃಷ್ಣಾ,/ ಎಂದು ಕರೆಯುತ್ತಾಳಲ್ಲ ಆ ಕರೆ ರಾಧೆ ಕೃಷ್ಣನಿಗೆ ಹೇಳಿದ್ದಲ್ಲ ಬದಲಿಗೆ ಅದು ಕಾಯದ ಮೋಹಕ್ಕೆ ಬಿದ್ದು ಕಾಯದೇ ಕಾಡುವ ಗಂಡಿಗೆ.
ಪ್ರಣಯೋನ್ಮಾದದಲ್ಲಿ ವಿರಹಿ ರಾಧೆಯ ಮನಃಪಟಲವನ್ನು ತೇಜಶ್ರೀ ಬಿಚ್ಚಿಡುತ್ತಾರಾದರೂ ಒಮೊಮ್ಮೆ ಆಕೆ ಬಳಸಿರುವ ಪದಗಳು ಕಾವ್ಯದ ಓಘಕ್ಕೆ ಪೆಟ್ಟುಕೊಡುತ್ತವೆ. ಆಕಳಿನ ಕೆಚ್ಚಲ ಗೆಜ್ಜೆಯ ಹಾಲಹೊಳೆ ಎನ್ನುವುದರ ಬದಲು ಆಕಳ ಕೆಚ್ಚಲಿನಿಂದ  ಹಾಲಹೊಳೆ ಸಾಕಿತ್ತು. ಅಸ್ತಿಪಂಜರವನ್ನು ಅಸ್ಥಿಪಂಜರ ಎಂದೂ ಬಳಸಿರುವ ತಪ್ಪು ನಡೆದಿದೆ. ಅಸ್ತಿ ಎಂದರೆ ಇದೆ ಎಂದರ್ಥ ಅಷ್ಟೆ. ಮೂಳೆಯ ಮಜ್ಜೆಯೊಳಗೆ  ಎನ್ನುವುದನ್ನು ಮೂಳೆಯೊಳಗಿನ ಮಜ್ಜೆಯಂತೆ ಎಂದು ತಿದ್ದಿಕೊಂಡು ಓದಿದರೆ ಸಿಗುವ ಅರ್ಥಾಂತರಗಳೇ ಬೇರೆ. ಉಳಿಯಿಡಿದು ಎಂದು ತಪ್ಪಾಗಿ ಬಳಸುವುದನ್ನು ಉಳಿ ಹಿಡಿದು ಎಂದು ಬಳಸುವುದು ಸೂಕ್ತ ತಾನೆ? 

ಆಧುನಿಕ ಕನ್ನಡ ಕಾವ್ಯದ ಅಸಂಖ್ಯಾತ ಪ್ರಯೋಗಗಳಲ್ಲಿ ತಕ್ಷಣಕ್ಕೆ ಥಟ್ಟಂತ ಕಣ್ಣಿಗೆ ಬೀಳುವ ಪ್ರಯೋಗ ತೇಜಶ್ರೀ ಮಾಡಿದ್ದಾರೆ. ಅವನರಿವಲಿ ಖಂಡಕಾವ್ಯ ಪ್ರಣಯವು ಮುಟ್ಟಿಸಬೇಕಾದ ಅಂತಿಮ ಸ್ಥಿತಿಯನ್ನು ಧ್ಯಾನಿಸುತ್ತಲೇ ಜಯದೇವನ ಗೀತ ಗೋವಿಂದದ ಪುನರೋದಿಗೆ ನಮ್ಮನ್ನು ಪ್ರೇರೇಪಿಸುತ್ತದೆಂಬುದು ಹೆಚ್ಚುಗಾರಿಕೆಯ ಮಾತಲ್ಲ. ಬದಲಿಗೆ ಅದು ಈ ಖಂಡಕಾವ್ಯವನ್ನು ಅಳೆಯಲು ಸದ್ಯಕ್ಕಿರುವ ಮತ್ತೊಂದು ತಕ್ಕಡಿ ಎಂದೇ ತೋರುತ್ತದೆ. 
ಶೀರ್ಷಿಕೆ ಅವನರಿವಲ್ಲಿ ಕವಿ ಜ.ನಾ.ತೇಜಶ್ರೀ ಪ್ರಕಟಣೆ ಕನ್ನಡ ಸಂಘ, ಸಂತ ಜೋಸೆಫರ ವಾಣಿಜ್ಯ ಕಾಲೇಜು, ಬೆಂಗಳೂರು     ಪುಟ ೮೮ ಮೌಲ್ಯ ರೂ ೮೦/- ಪ್ರಕಟಣ ವರ್ಷ-೨೦೧೧




    


ಭಾನುವಾರ, ಆಗಸ್ಟ್ 19, 2012

ನಮಸ್ಕಾರ


¢£ÀzÀ ªÉÆzÀ® ¨ÁjUÉ  UÀÄgÀÄUÀ¼ÉÆÃ, »jAiÀÄgÉÆÃ, ¥ÀjavÀgÉÆà CxÀªÀ ¸ÀºÉÆÃzÉÆåÃVUÀ¼ÉÆà J¢gÁzÀgÉ £ÀªÀĸÁÌgÀ D£ÀĪÀÅzÀÄ ¨sÁgÀwÃAiÀÄ ¸ÀA¸ÀÌöÈwAiÀÄ zÉÆåÃvÀPÀ. ºÁUÉ £ÀªÀĸÁÌgÀ C£ÀÄߪÁUÀ UÉÆwÛ®èzÉ PÉÊ ªÀÄÄV¢gÀÄvÀÛzÉ ªÀÄvÀÄÛ vÀ¯É ¨ÁV ªÀA¢¸ÀĪÀÅzÀÄ £ÀqÉ¢gÀÄvÀÛzÉ. £ÀA zsÁvÀÄ«¤AzÀ ¤µÀà£ÀߪÁzÀ £ÀªÀĸÁÌgÀ ¨ÁUÀÄ C£ÀÄߪÀ CxÀðªÀ£Éßà ºÉÆA¢zÉ. CAzÀgÉ £ÀªÀÄVAvÀ ªÀAiÀĹì£À°è, C£ÀĨsÀªÀzÀ°è, eÁÕ£ÀzÀ°è ªÀÄÄA¢gÀĪÀªÀgÀ ªÀÄÄAzÉ ¨ÁUÀ¯Éà ¨ÉÃPÉA§ÄzÀÄ CAvÀgÁxÀð. £À£ÀßzÉA§ÄzÀÄ AiÀiÁªÀÅzÀÆ E®è, J®èªÀÇ D ¸ÀªÀð±ÀPÀÛ£ÀzÀÄ C£ÀÄߪÀ ¤gÀºÀAPÀgÀt PÀÆqÀ £ÀªÀĸÀÌj¸ÀĪÀÅzÀgÀ°èzÉ. vÀ¯É JAzÀgÉ ²gÀ. CxÁðAvÀgÀzÀ°è ªÀÄ£ÀĵÀå zÉúÀzÀ PÀ¼À¸À. CAzÀgÉ CzÀÄ CºÀAPÁgÀzÀ PÉÃAzÀæ ¸ÀܼÀ. vÀ¯É vÀVι CAzÀgÉ CºÀAPÁgÀªÀ£ÀÄß CzÀÄ«Ä C£ÀåjUÉ UËgÀªÀ PÉÆqÀĪÀ QæAiÉÄ £ÀªÀĸÀÌj¸ÀĪÀÅzÀgÀ°èzÉ. DzÀÝjAzÀ¯Éà UËgÀªÀ¥ÀǪÀðPÀ £ÀªÀĸÁÌgÀªÉAzÀgÉ vÀ¯É ¨ÁV¹ PÉÊ ªÀÄÄVAiÀÄĪÀ C©üªÁzÀ£É. ºÉvÀÛªÀjUÉ, UÀÄgÀÄUÀ½UÉ, D±ÀæAiÀÄ zÁvÀjUÉ, C£ÀßzÁvÀjUÉ £ÀªÀĸÀÌj¸ÀĪÀÅzÀÄ £ÀªÀÄä ¸ÀA¥ÀæzÁAiÀÄ. £ÀA- CAzÀgÉ £À«Ä¸ÀÄ ¨ÁUÀÄ C£ÀÄߪÀÅzÀÄ ºÀ¼ÉAiÀÄ PÁ®zÀ zÉêÀ¸ÁÜ£ÀUÀ¼À UÀ¨sÀðUÀÄr ºÉÆPÁÌUÀ CjªÁUÀÄvÀÛzÉ. ªÀÄ£ÀĵÁåPÀÈwAiÀÄ JvÀÛgÀQÌAvÀ®Æ PÀrªÉÄ JvÀÛgÀzÀ F UÀ¨sÀðUÀÄrAiÉƼÀUÉ ¥ÀæªÉò¸À¨ÉÃPÉAzÀgÉ vÀ¯É vÀVιAiÉÄà £ÀqÉAiÀĨÉÃPÀÄ.   

vÀ¯É ¨ÁV¹, PÉÊ ªÀÄÄVzÀÄ, zsÁ夸ÀÄvÀÛ¯Éà ¥ÀæzÀQëuÉ ºÁQ ¢ÃWÀðzÀAqÀ £ÀªÀĸÁÌÌgÀ ºÁPÀĪÀÅzÀgÀ°è ±ÁjÃjPÀ QæAiÉÄUÀ¼ÀµÉÖà C®èzÉ CªÀÅ ªÀiÁ£À¹PÀ ¹zÀÞvÉAiÀÄ£ÀÆß ¨ÉÃqÀÄvÀÛªÉ. DvÀðvÉAiÀÄ ¨sÁªÀ«®è¢zÀÝ°è ªÀÄ£À¸ÀÄì ªÀÄtÂAiÀÄĪÀÅ¢®è. ªÀÄ£À¸ÀÄì ªÀÄtÂAiÀÄzÉà CºÀAPÁgÀ wÃgÀĪÀÅ¢®è. ºÁV®èzÀ £ÀªÀĸÁÌgÀ Mt ²µÁÖZÁgÀªÁUÀÄvÀÛzÉAiÉÄà «£Á ¸ÀzÀÄÎtªÁUÀĪÀÅzÉà E®è. zÉúÀ ªÀÄ£À¸ÀÄì ªÀÄvÀÄÛ D¯ÉÆÃZÀ£ÉUÀ¼ÀÄ MAzÀÄ ¸ÀºÀd ©AzÀÄ«£À°è ¸ÀA¢ü¹zÁUÀµÉÖà «£ÀAiÀÄ MqÀªÀÄÆqÀÄvÀÛzÉ.CºÀAPÁgÀ C½AiÀÄÄvÀÛzÉ. DzÀgÉ EA¢£À ªÀvÀðªÀiÁ£ÀzÀ°è ªÁåªÀºÁjPÀvÉAiÉÄà ªÀÄÄRåªÁzÀ ¯ËQPÀzÀ°è £ÀªÀĸÁÌgÀªÉ£ÀĪÀÅzÀÄ ±ÀĵÀÌ AiÀiÁAwæPÀ QæAiÉÄAiÀiÁUÀÄwÛzÉ. £ÀªÀĸÀÌj¸À®àqÀ¨ÉÃPÁzÀ eÁUÀzÀ°ègÀĪÀªÀgÀÄ eÁw DzsÁjvÀ, °AUÀ ¨ÉÃzsÀzÀ ¥ÀæwÃUÁ«Ä £ÀqÉAiÀÄļÀîªÀgÁVzÀÝgÉ £ÀªÀĸÀÌÌj¸ÀĪÀªÀ¤UÉ ¸ÀºÀd UËgÀªÀ, «£ÀAiÀÄ, «ªÉÃZÀ£ÉUÀ¼ÀÄ zÀÆgÀªÁV ²µÁÖZÁgÀzÀ QæAiÉÄAiÀiÁV G½AiÀÄÄvÀÛzÉ. 

EµÀÖPÀÆÌ £ÀªÀĸÁÌgÀ CAzÀªÀgÀ ªÀÄ£À¹ì£À°è EgÀĪÀ ¤d¨sÁªÀªÉãÀÄ C£ÀÄߪÀÅzÀÄ £ÀªÀĸÀÌj¸À®àlÖªÀjUÉ CjAiÀÄĪÀ jÃwAiÀiÁzÀgÀÆ E®èªÀ®è! zÉÆæúÀ aAvÀ£À, ¸ÁéxÀð, ¸ÉÃr£À ¨sÁªÀ EzÀÆÝ «£ÀAiÀÄzÀ £ÁlPÀ £ÀqÉ¢gÀ§ºÀÄzÀ®è?
ªÀÄt¢gÀ° ªÀÄÄr, ªÀÄvÉÛ ªÀÄÄV¢gÀ° PÀAiÀiï, ªÀÄvÉÛ ªÀÄrAiÀiÁVgÀ° ¨Á¼Éé C£ÀÄߪÀÅzÀÄ PÀĪÉA¥ÀÅ £ÀªÀÄUÉ PÉÆlÖ zÀȶÖ. PÉêÀ® DAVPÀ «£Áå¸ÀªÀ£Éßà C®èzÉ ªÀÄÄA¢£À §zÀÄPÀ®Æè PÀ¼ÀAPÀ vÀlÖzÀAvÉ ¨Á¼À¨ÉÃPÉ£ÀÄߪÀ ¥Àj CzɵÀÄÖ ¸ÉÆUÀ¸ÁzÀÄzÀÄ. PÀ¼ÀAPÀ §gÀzÀ ºÁUÉ CAzÀgÉ ±ÀÄavÀézÀ WÀ£À¹ÛPÉ. CzÀ£ÀÄß PÁ¦lÄÖPÉƼÀÄîªÀÅzÉAzÀgÉ CzÉÆAzÀÄ C¹zsÁgÀ ªÀævÀ. CAzÀgÉ PÀwÛAiÀÄ®ÄV£À ªÉÄît £ÀqÉ. PÉÆAZÀ JZÀÑgÀvÀ¦àzÀgÀÆ C¥ÁAiÀÄ PÀnÖlÖ §ÄwÛ. zsÀÈqsÀ EZÁÒ±ÀQÛ, PÀ¤µÀ× §zÀÞvÉ ªÀÄvÀÄÛ ¯ÉÆÃPÀ ¤AzÀ£ÉAiÀÄ ¨sÀAiÀÄ ±ÀÄavÀézÀ ¥ÀgÀªÀÄ ¸ÉÆÃ¥Á£ÀUÀ¼ÀÄ. F ¸ÉÆÃ¥Á£ÀUÀ¼À°è PÉÆ¼É PÀÆgÀzÀAvÉ PÁ¦qÀĪÀ QæAiÉÄ ®WÀĪÁzÀÄzÉãÀÆ C®è. CzÉÆAzÀÄ ¨sÁªÀ±ÀÄ¢ÞAiÀÄ ¤vÀå ¸ÀÆvÀæ.  ¤gÀAvÀgÀªÁV ªÀÄ£ÀªÀ£ÀÄß ±ÉÆâü¹PÉƼÀÄîvÀÛ¯Éà EgÀĪÀªÀgÀÄ ªÀiÁvÀæ EzÀ£ÀÄß ªÀiÁqÀ§®ègÀÄ. DzÀgÉ ªÀÄ£À¹ì£À ªÉÄÃ¯É ¯ËQPÀzÀ PÉÆ¼É PÀ®ä±ÀUÀ¼À£ÀÄß ºÁAiÀÄUÉÆqÀzÉ avÀÛZÁAZÀ®åPÉÆ̼ÀUÁUÀzÉà ¨sÁªÀ£ÉʪÀÄð®å PÁ¥ÁrPÉƼÀÄîªÀÅzÀÄ J®èjAzÀ ¸ÁzsÀå«®èzÀ ¸ÀAUÀw. ªÀÄ£ÀªÀ ±ÉÆâü¸À¨ÉÃPÀÄ ¤ZÀÑ, ¢£À ¢£À ªÀiÁqÀĪÀ ¥Á¥À ¥ÀÅtåzÀ ªÉZÀÑ C£ÀÄߪÀ zÁ¸ÀgÀ ªÀiÁvÀÄ PÀÆqÀ EzÀ£Éßà zsÀ餹zÉ. 

DzÀgÉ EwÛÃZÉUÉ £ÀªÀÄä £ÀªÀĸÁÌgÀUÀ¼É®è ¯ËQPÀzÀ jZÀÄåAiÉįïUÀ¼ÁV §zÀ¯ÁVªÉ. CAzÀgÉ UËgÀªÀ ¨sÁªÀ, ¥Àæ¥ÀwÛ ¨sÁªÀ, ¸ÉßúÀ ¨sÁªÀUÀ½®èzÀ vÉÆÃgÀÄUÁtÂPÉAiÀÄ £ÀªÀĸÁÌgÀ PÉÊPÀÄ®ÄPÀĪÀÅzÀgÉÆA¢UÉ ªÀÄÄVAiÀÄÄwÛzÉ. vÀ¯É ¨ÁV £ÀªÀĸÀÌj¸ÀĪÀÅzÀPÀÆÌ PÉÊPÉÆlÄÖ CAzÀgÉ ºÀ¸ÀÛ ¯ÁWÀªÀ ªÀiÁr AiÀÄÄzÀÞPÉÌ DºÁ餸ÀĪÀÅzÀPÀÆÌ ªÀåvÁå¸ÀUÀ½zÉÝà EªÉ. ¨sÁªÀ ±ÀÄ¢ÞAiÀÄÄ DvÀä UËgÀªÀUÀ½®è¢zÀÝ°è ºÀÄlÄÖªÀÅzÀÄ PÀµÀÖ ¸ÁzsÀåzÀ ªÀiÁvÀÄ. £ÀªÀĸÉÛ C£ÀÄߪÀÅzÀÄ EAxÀ°è §j ºÁdjAiÀÄ ¸ÀAPÉÃvÀ ªÀiÁvÀæªÉà «£Á ¨sÁUÀªÀ»¸ÀÄ«PÉAiÀÄ zÉÆåÃvÀPÀªÁUÀĪÀÅ¢®è.

  

ಬುಧವಾರ, ಆಗಸ್ಟ್ 15, 2012

ಜಲದ ಕಣ್ಣುಗಳನ್ನು ಅರಳಿಸಬೇಕಿದೆ .. . . . .

ಜಲದ ಕಣ್ಣುಗಳನ್ನು ಅರಳಿಸಬೇಕಿದೆ ದಿನ ಕಳೆದ ಹಾಗೆ ಯಾಂತ್ರಿಕವಾಗುತ್ತಿರುವ ಬದುಕ ಪಲುಕುಗಳನ್ನು, ಆಧುನಿಕತೆಯ ಮೂಲಕ ಕಂಡುಕೊಂಡಿರುವ ಸವಲತ್ತುಗಳ ಉರುಳುಗಳನ್ನು, ರೌರವ ನರಕವನ್ನು ನಮ್ಮೊಳಗೆ ಸೃಷ್ಟಿಸಿರುವ ಒತ್ತಡಗಳನ್ನೂ ನೀಗಿಕೊಳ್ಳಲು ಲಲಿತಕಲೆಯ ಒಂದಲ್ಲ ಒಂದು ವಿಭಾಗ ನಮ್ಮ ನೆರವಿಗೆ ಬಂದೊದಗುತ್ತಲೇ ಇವೆ. ಅದು ಸಾಹಿತ್ಯ ಓದುವುದು, ಚಿತ್ರಕಲೆಯನ್ನೋ, ಶಿಲ್ಪಕಲೆಯನ್ನೋ ನೋಡುವುದು, ಸಂಗೀತವನ್ನು ಕೇಳುವುದು ಹಾಗೇ ನೋಡನೋಡುತ್ತಲೇ ಕೇಳುವುದೂ ಆಗಿರುವ ಸಿನಿಮಾ ಅಥವ ನಾಟಕ ಯಾವುದೋ ಒಂದು ಆಗಿ ನಮ್ಮ ವಿಷಾದದ ಹೊತ್ತುಗಳಲ್ಲಿ ಚೈತ್ರದ ಚಿಗುರನ್ನು ಪಲ್ಲವಿಸಿವೆ, ಸಂತಸದ ಸಮಯವನ್ನು ದುಪ್ಪಟ್ಟುಗೊಳಿಸಿವೆ. ಲಲಿತ ಕಲೆ ಮನುಷ್ಯನಿಗೆ ಬೇಕೇ ಬೇಕು ಅಂತ ವಾದಿಸುವವರ ಸಮಸಮವಾಗಿ ಅದೆಲ್ಲವನ್ನೂ ನಿರಾಕರಿಸಿ ಕಲೆಯ ಗೊಡವೆಗೆ ಕೈಹಾಕದೆಯೇ ಭವ್ಯವಾಗಿ ಬದುಕು ನಡೆಸಿದವರ, ನಡೆಸುತ್ತಿರುವವರ ದೊಡ್ದ ಪಟ್ಟಿಯೇ ನಮ್ಮೆದುರು ತೆರೆದುಕೊಳ್ಳುತ್ತದೆ. ಆದರೂ ಕಲೆ ಮನುಷ್ಯನಲ್ಲಿ ಕಡಿಮೆಯಾಗುತ್ತಿರುವ ಮನುಷ್ಯತ್ವವನ್ನು ಪೂರೈಸಿಕೊಳ್ಳಲಾದರೂ ಬೇಕೇ ಬೇಕು. ಏಕೆಂದರೆ ಲಲಿತಕಲೆಯ ವಿವಿಧ ವಿಭಾಗಗಳಲ್ಲೂ ಒಂದು ಸಾಮಾನ್ಯವಾದ ಧರ್ಮವಿದೆ. ಅದೆಂದರೆ ಬದುಕನ್ನು ಪ್ರೀತಿಸುವಂತೆ ಉದ್ದೀಪಿಸಿ ಅದರ ಅರ್ಥವನ್ನು ಹಿಗ್ಗಲಿಸಿ ಸಾರ್ಥಕಪಡಿಸುವುದು. ಪ್ಲೇಟೋ ತನ್ನ ಆದರ್ಶ ರಾಜ್ಯದಲ್ಲಿ ಕವಿಗಳಿಗೆ ಜಾಗವಿರುವುದಿಲ್ಲ ಅಂತ ಹೇಳಿದ್ದು ನೆನಪಿರುವ ಹಾಗೇ ಕಾಳಿದಾಸನಿಲ್ಲದ ಭೋಜರಾಜನನ್ನು, ಪಂಪನಿಲ್ಲದ ಅರಿಕೇಸರಿಯನ್ನೂ ಊಹಿಸಿಕೊಳ್ಳುವುದು ಅಸಾಧ್ಯ. ವ್ಯಾಂಗೋ ಗೆರೆಗಳಿಗೆ ಜೀವ ಬರಿಸಿದ್ದನ್ನು, ತನ್ನ ಗಾಯನದಿಂದಲೇ ದೀಪ ಬೆಳಗಿಸಿದ ಸಂಗೀತಗಾರನ ಕತೆಯಂಥ ಹಲವು ಕಥಾನಕಗಳನ್ನು, ಚಾಪ್ಲಿನ್‌ನಿಂದ ಹಿಡಿದು ನಿನ್ನೆ ಮೊನ್ನೆ ಸಿನಿಮಾದ ವ್ಯಾಕರಣ ಕಲಿತು ಅದ್ಭುತ ಚಿತ್ರಗಳನ್ನು ಮಾಡುತ್ತಲೇ ಇರುವ ಅಸಂಖ್ಯರನ್ನು, ನೀನಾಸಂ, ರಂಗಾಯಣ, ಎನೆಸ್ಡಿ ಮುಂತಾದ ಸಂಸ್ಥೆಗಳ ಮೂಲಕ ತಯಾರಾಗಿ ಈಗ ಸದ್ಯದ ಸಿನಿಮಾ, ರಂಗಭೂಮಿ, ದೂರದರ್ಶನಗಳಲ್ಲಿ ಹೊಸತನವನ್ನು ತಂದು ತಂದು ಪೇರಿಸುತ್ತಿರುವ ಪ್ರತಿಭೆಗಳನ್ನೂ ಹಾಗೆಲ್ಲ ನೇಪಥ್ಯಕ್ಕೆ ಸರಿಸುವ ಹಾಗಿಲ್ಲ. ಆದರೂ ಒಟ್ಟೂ ಪ್ರಜಾ ಸಂಖ್ಯೆಗೆ ಲಲಿತಕಲೆಗಳ ಮೋಡಿಗೆ ಸಿಲುಕಿದವರ ಸಂಖ್ಯೆಯನ್ನು ಹೋಲಿಸಿದರೆ ಅದು ಕಡಿಮೆಯೆಂದೇ ನಮಗೆಲ್ಲರಿಗೂ ಗೊತ್ತು. ಹಾಗಿದ್ದೂ ಸಾಹಿತಿಗಳ ನಡುವೆ, ಸಿನಿಮಾ ಮಾಡುವವರ ನಡುವೆ, ಸಂಗೀತಗಾರರ ನಡುವೆ, ಕಲಾವಿದರ ನಡುವೆ ಒಂದು ಅಘೋಷಿತ ಯುದ್ಧ ನಡೆಯುತ್ತಲೇ ಇರುತ್ತದೆ. ತಾನು ನಂಬಿದ್ದು, ಸ್ರೃಷ್ಟಿಸಿದ್ದೇ ಮಹತ್ವದ್ದು ಅನ್ನುವ ಇರಾದೆಯೇ ಇದಕ್ಕೆಲ್ಲ ಮೂಲ. ಏಕಂ ಸತ್ ವಿಪ್ರಾ ಬಹುದಾ ವದಂತಿ ಅನ್ನುವುದು ಗೊತ್ತಿದ್ದೂ ಇರುವ ಒಂದೇ ಸತ್ಯವನ್ನು ಸಾಹಿತಿಗಳೂ ಕಲಾವಿದರೂ ಅವರವರಿಗೆ ತಿಳಿದ ಮಟ್ಟದಲ್ಲಿ ವ್ಯಾಖ್ಯಾನಿಸುತ್ತಿರುವುದೂ ಇದಕ್ಕೆ ಪ್ರಮುಖ ಕಾರಣ. ಲಲಿತ ಕಲೆಗಳ ಒಂದೊಂದು ವಿಭಾಗಕ್ಕೂ ಒಂದೊಂದು ವಿಶೇಷ ಲಕ್ಷಣಗಳಿವೆ. ಪ್ರತಿ ಕಲೆಗೂ ಸಾಧನಗಳು ಬೇರೆ,ಬೇರೆ. ಸಾಹಿತಿ ತಾನು ತನ್ನ ಕಾಲದಲ್ಲಿ ನೋಡಿದ್ದನ್ನು ಅನುಭವಿಸಿದ್ದನ್ನು ಆಗಿನ ಭಾಷೆ, ಶೈಲಿ, ಸಂಪ್ರದಾಯ, ಕಟ್ಟಳೆಗಳನ್ನು ಅನುಸರಿಸಿ ದಾಖಲು ಮಾಡುತ್ತಾನೆ. ತನ್ನ ಪ್ರತಿಭೆಗೆ ತಕ್ಕ ಶಬ್ದಾರ್ಥ,ಧ್ವನಿಗಳ ಮೂಲಕ ಆ ಸಮಯದಲ್ಲಿ ಹೊಳೆದ ಸೌಂದರ್ಯವನ್ನು ಬುದ್ಧಿಯಿಂದ ಸೆರೆಹಿಡಿದು, ಧಾರಣೆಯಿಂದ ನಿಲ್ಲಿಸಿ ತನ್ನ ಕೃತಿಯಲ್ಲೊಂದು ಜಾಗವನ್ನು ಕೊಟ್ಟು ಸಲಹಿರುತ್ತಾನೆ. ಸಾಹಿತ್ಯವೆಂಬುದು ಎಲ್ಲ ಕಾಲಕ್ಕೂ ಸಹಜವಾದ, ಮಾನವ ಪ್ರಪಂಚಕ್ಕೆಲ್ಲ ಸಾಮಾನ್ಯವಾಗಿ ಹೊಂದುವ, ರಸಸೃಷ್ಟಿಯಾಗಿರುವುದರಿಂದ ಸಾಹಿತಿಯೊಬ್ಬನ ಕೃತಿ ಮುಂದೆ ಎಲ್ಲ ಕಾಲದಲ್ಲೂ ಅದನ್ನು ಸವಿಯುವವರಿಗೆ ಅಕ್ಷಯಪಾತ್ರೆಯಾಗಿ ಒದಗುತ್ತಲೇ ಇರುತ್ತದೆ, ಅದಕ್ಕೆ ಅಂಥ ತಾಕತ್ತು ಇದ್ದರೆ. ಹಾಗೇ ದೂಷಿಸುವವರಿಗೂ ಅದು ಅಕ್ಷಯಪಾತ್ರೆಯೇ ಸರಿ! ಇನ್ನು ಚಿತ್ರಕಾರ-ಚಿತ್ರಕ್ಕೆ ಬೇಕಾಗುವ ಬಣ್ಣ, ರೂಪರೇಖೆ, ಕುಂಚ, ಹಲಗೆ, ಕಾಗದ,ಬಟ್ಟೆ ಇತ್ಯಾದಿ ಇತ್ಯಾದಿಗಳನ್ನು ಅನುಕೂಲಕ್ಕೆ ತಕ್ಕಂತೆ ಯೋಚಿಸಿ ಯೋಜಿಸುತ್ತಾನೆ. ಸಂಗೀತವಂತೂ ನಾದ, ಶಾರೀರ, ಪಕ್ಕ ವಾದ್ಯ, ಸಾಧನೆ ಇತ್ಯಾದಿಗಳಿಂದ ಹುಲುಸುಗೊಂಡರೆ, ಶಿಲ್ಪಿ ತನ್ನ ವ್ಯವಸಾಯಕ್ಕೆ ಮಣ್ಣು, ಕಲ್ಲು, ಗಾರೆ, ಮರ, ಲೋಹ, ಬಟ್ಟೆ, ಬೆಂಡು. ಉಳಿ, ಸುತ್ತಿಗೆ, ಚಾಣ ಇತ್ಯಾದಿಗಳನ್ನು ಬಳಸಿ ತನ್ನಿಷ್ಟದ ಕೃತಿಯನ್ನು ರಚಿಸುತ್ತಾನೆ. ರಸಾಸ್ವಾದನೆ ಅದನ್ನು ಸವಿಯುವವರ ಮಟ್ಟಕ್ಕೆ ತಕ್ಕ ಆಳ ಅಗಲಗಳ ವ್ಯಾಖ್ಯೆಯನ್ನು ತುಂಬಿಕೊಡುತ್ತದೆ. ಬದುಕಿನ ಅರ್ಥವನ್ನು ಬಗೆಬಗೆಯಾಗಿ ಬಗೆಯುತ್ತಲೇ ಇರುವ ಸಾಹಿತಿ-ಕಲಾವಿದರನ್ನು ಅನುಮಾನಿಸುವುದು, ಸನ್ಮಾನಿಸುವುದು, ಸಾಮಾಜಿಕ ಸಾಂಸ್ಕೃತಿಕ ಕಾರಣಗಳಿಂದ ಅವನನ್ನು ಎತ್ತಿ ಮೆರಸುವುದು ಹಾಗೇ ಎತ್ತಿ ಎಸೆಯುವುದನ್ನೂ ಲೌಕಿಕ ಮಾಡುತ್ತಲೇ ಬಂದಿದೆ. ಟಿ.ಆರ್.ಪಿಗಳ ಕಾಲದಲ್ಲಿ ಇದು ಸಹಜವೂ, ನ್ಯಾಯವೂ ಆದುದೇ ಆಗಿದೆ! ಸಮಾಜದ ಆಶಯಕ್ಕೆ ಅಂದರೆ ಪ್ರಭುತ್ವಕ್ಕೆ ಪೂರಕವಾಗಿ ಕೃತಿ ರಚಿಸುವವನಿಗೆ ಇರುವ ಮಾನ ಮರ್ಯಾದೆಗಳು ಅದಕ್ಕೆ ವಿರೋಧಿಯಾಗಿರುವವನಿಗೆ ಸಲ್ಲುವುದು ಯಾವತ್ತೂ ವಿಳಂಬವೇ. ಏಕೆಂದರೆ ಸತ್ಯದ ಹುಡುಕುವಿಕೆಯಲ್ಲಿ ಯಾವತ್ತೂ ಪರಿಣಾಮಗಳು ತಟ್ಟಂತ ಸಿಕ್ಕ ಉದಾಹರಣೆಗಳು ಇಲ್ಲವೇ ಇಲ್ಲ. ಸತ್ಯ ಎನ್ನುವುದು ಸಿಗುತ್ತದೋ ಇಲ್ಲವೋ ಅಂಥದೊಂದು ಸತ್ಯವನ್ನು ಬೆನ್ನು ಹಿಡಿದು ಹೊರಡುವುದೇ ನಿಜಕ್ಕೂ ಅಗ್ನಿದಿವ್ಯದ ಅಸಲಿಯತ್ತು. ಉಪನಿಷತ್ತಿನಿಂದ ಓಷೋವರೆಗೂ ಈ ಇದೇ ಸತ್ಯದ ಹುಡುಕುವಿಕೆಯೇ ನಮ್ಮೆಲ್ಲ ಸಾಹಿತಿ-ಕಲಾವಿದರನ್ನೂ ಪೋಷಿಸಿದೆ, ತನ್ನ ಉದರದಲ್ಲಿಟ್ಟುಕೊಂಡು ಕಾಪಾಡಿದೆ. ತಾನು ಬದುಕಿದ್ದ ಕಾಲದಲ್ಲಿ ಅಜ್ಞಾತನಾಗಿದ್ದ ಬೋದಿಲೇರ್, ಸತ್ತ ನಂತರವೇ ತೀವ್ರ ತರದ ಚರ್ಚೆಗಳನ್ನು ಹುಟ್ಟುಹಾಕಿದ ಬ್ರೆಕ್ಟ್, ಎಂಟುನೂರು ವರ್ಷಗಳ ಹಿಂದೆ ರಚಿತವಾದರೂ ಇವತ್ತಿಗೂ ಹೊಸ ಹೊಸ ಜಿಜ್ಞಾಸೆಗಳಿಗೆ ಒಡ್ಡುವ ವಚನಗಳು, ಲಿಯಾನಾರ್ಡೊ ಡಾವಿಂಚಿಯ ಚಿತ್ರಗಳು, ಯಾವುದೋ ಉತ್ಖನನದಲ್ಲಿ ಸಿಕ್ಕುವ ಪುರಾತನರ ಜೀವನಶೈಲಿಯ ಪುರಾವೆಗಳು ಯಾವತ್ತೂ ವರ್ತಮಾನದ ಜನಜೀವನ ಆಧುನಿಕತೆಯ ಬಾಗಿಲಿನಲ್ಲಿದ್ದೂ ಹೇಗೆ ಇನ್ನೂ ತನ್ನ ಹಳೆಯ ಹೊಸಿಲಲ್ಲೇ ಏದುಸಿರು ಬಿಡುತ್ತಿದೆ ಅಂತ ಪ್ರಮಾಣೀಕರಿಸುತ್ತಲೇ ಬಂದಿವೆ. ವರ್ತಮಾನದ ಸಾಹಿತ್ಯ ನಿರ್ಮಾಪಕರನ್ನು, ಅದರಲ್ಲೂ ಪರಂಪರೆಯ ಹಂಗಿಲ್ಲದೇ ತಾನು ತಿಳಿದ ಸಂಗತಿಯೇ ದೊಡ್ಡದೆಂದು ವಾದಕ್ಕೆ ನಿಲ್ಲುವವರನ್ನು ಪರಂಪರೆಯೆಂಬ- ಬಳಸದೇ ಅಂದಗೆಟ್ಟ ಸರೋವರಕ್ಕೆ ಒಮ್ಮೆ ಕರೆದೊಯ್ದು-ಈಗಿನ ಬಹುತೇಕರು ಹೇಳುವ ಹಾಗೇ ಆ ಸರೋವರದ ನೀರು ಬಳಸುವವರಿಲ್ಲದೇ ಕೊಳಚೆಯಾಗಿ ಕೆಸರು ತುಂಬಿದೆ. ಹಸಿರು ಪಾಚಿಗಟ್ಟಿ ಹೂಳು ತುಂಬಿಕೊಂಡಿದೆ-ಅದರ ಹೂಳನ್ನೆತ್ತಿ ತೆಗೆದು ಎಸೆದು, ಸ್ವಲ್ಪ ಆಳಕ್ಕೆ ಅದನ್ನು ತೋಡಿ ವಿಸ್ತರಿಸಿ, ಎಲ್ಲೋ ಮುಚ್ಚಿ ಹೋಗಿರುವ ಜಲದ ಕಣ್ಣುಗಳನ್ನು ತೆರೆದು ಹೆಚ್ಚು ನೀರು ಬಂದು ಸೇರುವಂತೆ ಮಾಡಿದರೆ ಜೊತೆಗೇ ಕುಸಿದಿರುವ ಸೋಪಾನದ ಪಾವಟಿಗೆಗಳನ್ನು ದುರಸ್ತಿ ಮಾಡಿಸಿದರೆ ಆ ಕೊಳದ ನೀರನ್ನೇ ಆಶ್ರಯಿಸಿ ಉದ್ಯಾನವನ್ನೇ ಬೆಳಸಬಹುದು. ಉದ್ಯಾನ ನಿರ್ಮಾಣವಾದರೆ ಅಳುವ ಮಕ್ಕಳು ಆಟವಾಡಲು ಬಂದಾವು. ಹಕ್ಕಿ ಪಕ್ಷಿಗಳ ಜೊತೆಜೊತೆಗೇ ದಣಿವಾರಿಸಿಕೊಳ್ಳಲು ನಮಗೂ ಒಂದಿಷ್ಟು ತಾವು ಸಿಕ್ಕುತ್ತದೆ. ಆಗ ಆರಾಮವಾಗಿ ಕೂತು ಮುರಿದು ಕಟ್ಟಿದ ಸರೋವರದ ದಡದಲ್ಲಿ ಭಾಷೆಯ ಸಂಗತಿಗಳನ್ನು ಅರ್ಥಮಾಡಿಕೊಳ್ಳಬಹುದು. ಅದು ಬಿಟ್ಟು ಯಾವ ಮೂಲದಿಂದ ಮನೆಯ ನಲ್ಲಿಯಲ್ಲಿ ನೀರು ಬರುತ್ತದೋ ಎಂಬ ಅರಿವಿಲ್ಲದೇ ಬರಿದೇ ತೋಡಿ ತೋಡಿ ಬಳಸಿದರೆ ನೀರಿನ ಮಹತ್ವ ಅರಿಯುವುದಾದರೂ ಹೇಗೆ? ಭಾಷೆಯ ಸಂಗತಿ ಸಿದ್ಧಿಸುವುದಾದರೂ ಹೇಗೆ?- ಅಂತ ಕೇಳೋಣವೆಂದರೆ ನಮ್ಮ ಲೋಕೋಪಯೋಗಿ ಇಲಾಖೆಯು ಹೆಜ್ಜೆ ಹೆಜ್ಜೆಗೆ ತೋಡಿಸಿರುವ ಕೊಳವೆ ಬಾವಿಗಳ ಅಟಾಟೋಪದಲ್ಲಿ ಜಲದ ಕಣ್ಣುಗಳೇ ಮಾಯವಾಗಿ ಆಳದಾಳಕ್ಕೆ ತೋಡಿದರೂ ಬರಿಯ ಧೂಳೇ ಎದ್ದೆದ್ದು ಮುಖಕ್ಕೆ ರಾಚುತ್ತಿರುವ ವರ್ತಮಾನದಲ್ಲಿ ಸರೋವರದ ಕಲ್ಪನೆಗಳೇ ಸುಳ್ಳಾಗುತ್ತಿರುವಾಗ ಸರಸವೆಂಬುದು ಸುಲಭಕ್ಕೆ ದಕ್ಕದ ಸಂಗತಿಯಾಗುತ್ತಿದೆ. ಕವಿ-ಕಲಾವಿದನ ಕೈಯಲ್ಲಿ ಅರಳುವ ಹೂವು ಸಹೃದಯರ ಹೃದಯವನ್ನು ಮುಟ್ಟಬೇಕು ಅನ್ನುವುದು ಎಲ್ಲ ಕೃತಿಕಾರರ ಗುರಿ. ಕೃತಿ ಎನ್ನುವುದು ಅಳತೆ,ಬಣ್ಣ,ತೂಕ,ಸಮಂಜಸ ಆಕಾರ ಇತ್ಯಾದಿಗಳ ಶಾಸ್ತ್ರಬದ್ಧ ನಿರೂಪಣೆ. ಕೊಂಚ ಏರುಪೇರಾದರೂ ಅದನ್ನು ಸಮಾಜ ಸ್ವೀಕರಿಸುವುದಿಲ್ಲ. ಸಹೃದಯ ಎನ್ನುವವನೂ ಈ ಸಮಾಜದಿಂದಲೇ ಬಂದವನಾದ್ದರಿಂದ ಅವನನ್ನು ಸುಲಭಕ್ಕೆ ಒಪ್ಪಿಸಲಾಗುವುದಿಲ್ಲ. ತನ್ನ ಕೃತಿಯೇ ಶ್ರೇಷ್ಠ ಅಂತ ನಂಬಿರುವ ಕೃತಿಕಾರ ಅದನ್ನು ಪ್ರಮಾಣಿಸಲು ತಕ್ಕ ಪರಿಸರವನ್ನು ನಿರ್ಮಾಣ ಮಾಡಬೇಕಾಗುತ್ತದೆ. ಕೃತಿಯನ್ನು ಕಡ್ಡಾಯವಾಗಿ ಒಪ್ಪಿಸಲಾಗುವುದಿಲ್ಲವಾದರೂ ಅತ್ಯುತ್ತಮವಾದ ಕೃತಿ ಕಂಡೊಡನೆಯೇ ಓದುಗನನ್ನು/ನೋಡುಗನನ್ನು ಅದು ಚಕಿತಗೊಳಿಸುತ್ತದೆ. ವಿಶೇಷವೊಂದನ್ನು ಕಂಡೊಡನೆಯೇ ಬಾಕಿಯೆಲ್ಲವನ್ನೂ ಮರೆತು, ಅದರ ಅರ್ಥ ಸಂಕೇತಗಳನ್ನು ಧ್ಯಾನಿಸುತ್ತ, ಅದು ಗ್ರಾಹ್ಯವಾದಂತೆಲ್ಲ ಕಣ್ಣರಳಿಸಿಕೊಂಡು, ಕಿವಿ ತೆರೆದುಕೊಂಡು, ನೆತ್ತರ ಕಾವು ಏರಿಸಿಕೊಂಡು ಮೆಚ್ಚುಗೆಯ ಮಾತನಾಡುವುದು ಸಹೃದಯನ ಲಕ್ಷಣ. ಹಾಗೇ ತನ್ನರಿವನ್ನು ಹಿರಿದುಗೊಳಿಸದ ಏನನ್ನೂ ಅದು ಎಷ್ಟೇ ಮೌಲ್ಯದ್ದಿದ್ದರೂ ಈ ಸಹೃದಯ ಅದನ್ನು ನಿರಾಕರಿಸಿ ಕೈಕೊಡವಿ ಬಿಡುತ್ತಾನೆ. ಉಳಿ ಹಿಡಿದವರನ್ನೆಲ್ಲ ಶಿಲ್ಪಿಯೆಂದು ಒಪ್ಪದ, ಪದ್ಯ ಕಟ್ಟುವವರನ್ನೆಲ್ಲ ಕವಿಗಳೆಂದು ಒಪ್ಪದ, ಎಗರೆಗರಿ ಬೀಳುವರನ್ನೆಲ್ಲ ನರ್ತಕರೆಂದು ಮಾನ್ಯ ಮಾಡದ, ಮನೆ ಕಟ್ಟುವ ಮೇಸ್ತ್ರಿಗಳನ್ನೆಂದೂ ವಾಸ್ತು ಶಿಲ್ಪಿ ಅಂತ ಕರೆಯದ ದಾಷ್ಟೀಕತನ ಈ ಸಹೃದಯನದ್ದು. ಆವೇಶ ಶುದ್ಧಿ ಮತ್ತು ರೂಪಣ ನಾವೀನ್ಯತೆ ಇದ್ದವರು ಪರಂಪರೆ ಮೀರಿಸುವ ತಾಕತ್ತು ತೋರಿಸುತ್ತಾರೆ. ಅಂಥ ಹೆಚ್ಚುಗಾರಿಕೆಗಳನ್ನು ಈ ಲೋಕ ಮಾನ್ಯ ಮಾಡುತ್ತಲೇ ಬಂದಿದೆ. ಆದರೆ ತಾನೇ ಘೋಷಿಸಿಕೊಂಡ ನಾವೀನ್ಯತೆ ಮೂಲೆ ಸೇರಿದೆ. ಕಲೆ ಕಲೆಯಾಗದೇ ಕಲೆಯಿಂದ ಅನ್ಯ ಕೆಲಸಗಳನ್ನು ಮಾಡಿಸಿದಾಗಲೆಲ್ಲ ವಿಪ್ಲವಗಳುಂಟಾಗಿವೆ. ಕಲೆ ಇರುವ ನೀತಿ ನಿಯಮಗಳನ್ನು ಗಾಳಿಗೆ ತೂರಿ ಜೀವನದರ್ಶನವನ್ನು ಬಿಂಬಿಸದೇ ಚಪಲತೆಗಳನ್ನೂ, ವಿಕ್ಷಿಪ್ತತೆಯನ್ನೂ ಸಲ್ಲದ ಮಾರ್ಗಗಳಲ್ಲಿ ಪ್ರದರ್ಶಿಸಹೋದಾಗಲೆಲ್ಲ ಅಭಿವ್ಯಕ್ತಿ ಸ್ವಾತಂತ್ರ್ಯದ ಮಾತು ಹೆಚ್ಚುಹೆಚ್ಚು ಚರ್ಚಿತವಾಗಿದೆ. ಇರುವುದನ್ನು ಕೆಡಹದೇ ಹೊಸತನ್ನು ಕಟ್ಟುವುದು ಹೇಗೆ ಸಾಧ್ಯ ಎಂಬ ಮೊಟ್ಟೆ-ಕೋಳಿಗಳ, ಬೀಜ-ವೃಕ್ಷಗಳ ಹಳೆಯ ಮಾತು ಮತ್ತೆ ಮತ್ತೆ ಮಥಿಸಿದೆ. ಹುಟ್ಟಿದ ನವನೀತವೂ ಇತಿಹಾಸಕ್ಕೆ ಸೇರಿದೆ. ರಾಜ್ಯ, ಸಾಮ್ರಾಜ್ಯಗಳು ಉರುಳಿ, ರಾಜ ಮಹಾರಾಜರು ಅಳಿದು, ಸರ್ವಾಧಿಕಾರಿಗಳೂ ಮಡಿದು ಇತಿಹಾಸ ಮತ್ತೆ ಮತ್ತೆ ಅನುರಣಿಸುವ ಸತ್ಯವೆಂದರೆ ಕಲೆಯೂ, ಕಲಾವಿದರೂ ನೂರ್ಕಾಲ ಸಾಯದೇ ಬದುಕಿದ್ದಾರೆ, ಬದುಕುಳಿದಿರುವವರಿಗೂ ಮಾರ್ಗದರ್ಶಕರಾಗಿ ದಿಕ್ಸೂಚಿಗಳಾಗಿ ನಿಲ್ಲದ ನಾವೆಗೆ ದಿಕ್ಕು ದೆಸೆ ಕಾಣಿಸಿದ್ದಾರೆ. ಕಲೆ ಇಂಥವರೇ ಬೇಕೆಂಬ ಬಲೆಯನ್ನೇನೂ ನೇಯ್ದಿಲ್ಲ. ಕಲೆಯೊಡನೆ ಸೆಣಸಾಡುವುದೆಂದರೆ ಅದನ್ನು ಅರೆದು ಕುಡಿಯುವುದು ಎಂದೇನೂ ಅಲ್ಲ. ಕಲೆಯನ್ನು ಆಸ್ವಾದಿಸುವ ಕಣ್ಣು,ಕಿವಿ,ಮೂಗುಗಳ ಸೂಕ್ಷ್ಮ ನಮಗೆ ಗೊತ್ತಿರಬೇಕಷ್ಟೆ. ನಮಗೇ ಅರಿವಿರದ ಸಹಸ್ರ ಭಾವಗಳು ಸದಾ ನಮ್ಮೊಡನೆ ಯುದ್ಧಕ್ಕೆ ನಿಂತೇ ಇರುತ್ತವೆ. ಶಾಂತಿಯ ಮಂತ್ರ ಜಪಿಸಿ ಅವನ್ನು ತಣಿಸುವ ಸೂಕ್ಷ್ಮತೆ ಬೇಕಷ್ಟೆ. ಬದುಕಿನ ವಿಕಟಾಟ್ಟಹಾಸಗಳ ನಡುವೆಯಿರುವ ನೆಮ್ಮದಿಯ ಸಣ್ಣದನಿಯೊಂದನ್ನು ಉದ್ದೀಪಿಸಿ, ಅದನ್ನೇ ಬೆಳಸಿ, ಅನ್ಯರ ದುಃಖ ದುಮ್ಮಾನಗಳನ್ನೂ ನಮ್ಮದೆನ್ನುವಂತೆ ಕಾಣುವ ವಿನಯ ಸಾಹಿತ್ಯದ ಓದು ಕಲಿಸಿದರೆ, ಸಂಗೀತದ ಭಾವತೀವ್ರತೆಗಳು ಸಂಕಟವನ್ನೂ, ಸಂತೋಷವನ್ನೂ ರಾಗ ಛಾಯೆಯ ಅನುಸರಣೆಯಿಂದಲೇ ಶ್ರೋತೃವಿನಲ್ಲಿ ಪಡಿಮೂಡಿಸುತ್ತದೆ. ಕಲಾಕೃತಿಯೊಂದು ಅದನ್ನು ಪರಿಶೀಲಿಸುವ ಹಂತದಲ್ಲೇ ನೋಡುಗನಲ್ಲಿ ಭಾವಸಾಗರವನ್ನು ಕಾಣಿಸಿರುತ್ತದೆ. ಎಂದಿಗೂ ನಿಲ್ಲದ ಕಾಲದ ಗಡಿಯಾರದಲ್ಲಿ ನಾವೆಲ್ಲರೂ ಚಲಿಸುವ ಮುಳ್ಳುಗಳೇ. ಕಾಲ ಸರಿದಂತೆ, ಅನುಭವ ಸಾಂಧ್ರವಾದಂತೆ ವ್ಯಾಖ್ಯೆಗಳು ಬದಲಾಗುವುದು ಸಹಜ. ಆಧುನಿಕತೆ ತನ್ನೊಡಲೊಳಗೇ ಪರಂಪರೆಯನ್ನು ಧರಿಸಿದೆ. ಕಾಲದ ಪ್ರವಾಹದಲ್ಲಿ ಸಮಾಜವಾದದ ಪಳಿಯುಳಿಕೆಗಳಷ್ಟೇ ಉಳಿದಿರುವ ಹೊತ್ತಲ್ಲಿ ಮುಂದೊಂದು ದಿನ ಜಾಗತೀಕರಣದ ದಿವ್ಯ ಅನುಸಂಧಾನಗಳೂ ಬಣ್ಣಕಳಕೊಂಡ ಬಟ್ಟೆಯಾಗುವುದೂ ಖಚಿತ ಮತ್ತು ಸರ್ವ ವಿದಿತ. ಇಂತೆಲ್ಲ ತಿಳುವಳಿಕೆಗಳಿದ್ದರೂ ಮತ್ತೆ ಮತ್ತೆ ಕೆಸರೆರಚಿ ಎದುರಿನವರ ಬಟ್ಟೆ ಗಲೀಜು ಮಾಡುವುದು, ನಿರ್ವಿವಾದವಾಗಬಾರದೆಂಬ ಏಕೈಕ ಕಾರಣಕ್ಕೆ ಪ್ರತಿವಾದವನ್ನು ಹುಟ್ಟುಹಾಕುವುದು, ಅಭಿವ್ಯಕ್ತಿ ಸ್ವಾತಂತ್ರ್ಯದ ಮಾತೆತ್ತಿ ವಿಕೃತದ ಹೇಳಿಕೆಗಳಲ್ಲೇ ಸ್ವಮಗ್ನವಾಗುವುದು ಇತಿಹಾಸದುದ್ದಕ್ಕೂ ನಡೆದಿರುವ ನಡೆಯುತ್ತಲೇ ಇರುವ ಮತ್ತು ಮುಂದೂ ನಡೆಯುವ ಮತ್ತು ಆ ಮೂಲಕವೇ ಕಲೆಯ ಅನುಸಂಧಾನಕ್ಕೆ ಸಾಮಾನ್ಯರನ್ನೂ ಎಳೆತರುವುದು ನಡೆದೇ ಇರುತ್ತದೆ, ಸೂರ್ಯಚಂದ್ರರಿರುವವರೆಗೂ! ( ಈ ಪ್ರಬಂಧಕ್ಕೆ ವಿ.ಸೀತಾರಾಮಯ್ಯನವರ ‘ಕವಿ ಕಾವ್ಯದೃಷ್ಟಿ’ ವಿವೇಚನೆಗಳ ಪುಸ್ತಕ ಸ್ಪೂರ್ತಿ ನೀಡಿದೆ)

ಕಾಲ ಕಲಿಸಿದ ಪಾಠ

ಕಾಲ ಕಲಿಸಿದ ಪಾಠ ಹಣ್ಣೆಲೆಯೊಂದು ತೊಟ್ಟು ಕಳಚಿ ಸಂಬಂಧ ತೊರೆದುಕೊಳ್ಳುವಾಗ ಗಗನದಾಚೆಯ ಗಗನಕ್ಕೆ ಮುಖಮಾಡಿ ನಿಂತ ಸ್ಥಾವರದ ಮರ, ಆ ಮರದ ಮೇಲೇ ಸವಾರಿಯೇರಿ ಕೊಂಬೆ ತುದಿಯಲ್ಲಿ ಕೂತ ಜಂಗಮದ ಹಕ್ಕಿ ತಮ್ಮ ತಮ್ಮೊಳಗೇ ಕಳೆದು ಹೋಗಿದ್ದವು. ಗುರುತ್ವಾಕರ್ಷಣೆಗೆ ಸಿಲುಕಿದ ಎಲೆ ಗಾಳಿಯಲೆಗುಂಟ ಇಳಿದು, ಏರಿ ಮತ್ತೆ ಮರು ಕ್ಷಣವೇ ಹೌಹಾರಿ- ದ ಹೊಂಬಣ್ಣದ ಮುದಿಯೆಲೆ ನೇರ ಮರದ ಬುಡಕ್ಕೇ ಬಿತ್ತು. ಅದರ ನರ ಮಂಡಲದಲ್ಲಿ ಬಿಸಿಲ ಝಳದಷ್ಟೇ ಬಿಸಿ ತಾಸೆರಡು ತಾಸೊಳಗೇ ಬಾಡಿ ಮರದ ಬುಡಕ್ಕೆ ಪೊಡಮಟ್ಟಿತು. ದಪ್ಪ ಕಾಂಡ ಬರಸೆಳೆದು ಮಲ್ಲಿಗೆಯಂತೆ ಮೈಗಾನಿಸಿ ಹಿಡಿದು ಕ್ಷೇಮ ವಿಚಾರಿಸಿ ಕುಶಲ ಕೇಳಿತು- ‘ಮುಗಿಯಿತಾಯುಷ್ಯ, ಮುಂದಿಲ್ಲ ಭವಿಷ್ಯ’ ಬಿಕ್ಕಿದೆಲೆಗೆ ಕಾಂಡದ ಸಮಾಧಾನ ‘ಈಗಷ್ಟೇ ಮಾಗಿದ್ದೀ, ಮಣ್ಣೊಳಗೆ ಮಣ್ಣಾಗು ಸಾರ ಹೀರುವ ಬೇರಿಗೆ ಗೊಬ್ಬರವಾಗು ಮತ್ತೆ ಚಿಗುರು, ಎಲೆ, ಹೂ, ಬೀಜ ಸಲ್ಲದು ಕಾಲ ಚಕ್ರದವಜ್ಞೆ, ವ್ಯರ್ಥ ಜಗಳ’ ಆವತ್ತಿನಿಂದ ಹೀಗೆ; ಹಣ್ಣೆಲೆಯುದುರುತ್ತದೆ, ಚಿಗುರು ಮೊಗ್ಗೊಡೆಯುತ್ತದೆ ಹೂವು, ಕಾಯಿ, ಹಣ್ಣು, ಮತ್ತೆ ಹಣ್ಣೆಲೆ,,,, ಈಗ ಸ್ಥಾವರ ಮರದ ಧ್ಯಾನ ಹಾಗೇ ಜಂಗಮ ಹಕ್ಕಿಯ ಜ್ಞಾನ ಎರಡೂ ಹಣ್ಣಾದವರಿಗೆ ಅರ್ಥವಾಗುತ್ತದೆ.