ಒಟ್ಟು ಪುಟವೀಕ್ಷಣೆಗಳು

ಭಾನುವಾರ, ಮಾರ್ಚ್ 15, 2009

ವಿಷಾದ

ಅಕಾರಣ ಹುಟ್ಟಿ ಬಿಡುವ ಈ ವಿಷಾದ
ಇರುವ ಸುಖ ಸವಲತ್ತುಗಳ ನಿರಾಕರಿಸಿ
ಶಬ್ದಾರ್ಥಗಳ ಮಿತಿಯ ಮೀರುವುದು

ಎದೆಯೊಳಗೆ ನವನೀತ ಕಡೆಯುತ್ತಲೇ
ಉತ್ತುಂಗಕ್ಕೇರಿದ ಕನಸನ್ನೊಡೆಯುವುದು
ಯಾವುದೋ ಮುರಳಿಯ ಕರೆಗೆ ಕಿವಿಗೊಡುವುದು

ಪೊಡಮಡುವೆ, ಹೇ, ವಿಷಾದವೆ
ಸುಡುವಗ್ನಿಗೆ ಉದಕವಾಗುವ ನಿನ್ನ ನೆರಳಿಗೆ
ಒಳಗಿನಿಂದ ನರಳುತ್ತಲೇ ಅರಳುವ ಹೂವಿಗೆ

ಹೊರಗಣ್ಣುಗಳ ದಿಟ್ಟಿಗೆ ನೀನು ಬೀಳದ ಹಾಗೆ
ನಿನ್ನಿರವ ಈ ಅರಿವೆಯೊಳಗೇ ನಿಲಿಸು
ಭಿನ್ನವೆನ್ನುವ ತೆರೆ-ತೆರಗಳನಳಿಸು

ನಮ್ಮ ನಾವೆ ಅನ್ಯರಿಗೆ ತೆತ್ತು ಕೊಳ್ಳದ ರೀತಿ
ಬಾಳಗಡಲಿನ ದಿಕ್ಸೂಚಿ ಕವಿತೆಯನುಳಿಸು.

2 ಕಾಮೆಂಟ್‌ಗಳು:

ಜಿ.ಎಸ್.ಬಿ. ಅಗ್ನಿಹೋತ್ರಿ ಹೇಳಿದರು...

ಕವನಗಳು ಚೆನ್ನಾಗಿವೆ....

Arun ಹೇಳಿದರು...

Install Add-Kannada button with ur blog. Then u can easily submit ur page to all top Kannada social bookmarking sites & u will get more traffic and visitors.
Install widget from www.findindia.net